Homeಕರೋನಾ ತಲ್ಲಣಕೊರೊನಾ ಲಾಕ್‌ಡೌನ್‌ಗೆ ನಲುಗಿದ ಕೋಲಾರ ಜಿಲ್ಲೆ: ಹುಲುಸಾದ ಬೆಳೆ ಹೊಲದಲ್ಲೇ ನೆಲಸಮ

ಕೊರೊನಾ ಲಾಕ್‌ಡೌನ್‌ಗೆ ನಲುಗಿದ ಕೋಲಾರ ಜಿಲ್ಲೆ: ಹುಲುಸಾದ ಬೆಳೆ ಹೊಲದಲ್ಲೇ ನೆಲಸಮ

ಕೋಲಾರ ಜಿಲ್ಲೆ ಹಾಲು, ರೇಷ್ಮೆ ಮತ್ತು ಮಾವಿನ ಮಡಿಲು ಎಂದೇ ಹೆಸರು ಪಡೆದಿರುವ ಜಿಲ್ಲೆ. ಇಲ್ಲಿ ಟಮೋಟ, ತರಕಾರಿಗಳು ದೆಹಲಿ, ಪುಣೆ, ಮುಂಬೈ, ಬಾಂಗ್ಲಾದೇಶ, ನೇಪಾಳ ಹಾಗೂ ಇತರೆ ರಾಜ್ಯ, ದೇಶಗಳಿಗೂ ರಫ್ತಾಗುತ್ತದೆ.

- Advertisement -
- Advertisement -

ಕೊರೊನಾದಿಂದ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಎಲ್ಲಾ ಕ್ಷೇತ್ರಗಳಿಗೂ ತೊಂದರೆಯಾಗಿದೆ. ಅದರಂತೆ ಕೃಷಿ ಕ್ಷೇತ್ರದ ಮೇಲೂ ತುಂಬಾ ದೊಡ್ಡ ಹೊಡೆತ ಬಿದ್ದಿದೆ. ಆದರೆ ಬೇರೆ ಕ್ಷೇತ್ರಗಳ ಬಗ್ಗೆ ಮಾಧ್ಯಮಗಳಾಗಲಿ, ವ್ಯವಸ್ಥೆ, ಪ್ರಭುತ್ವ ಕೊಟ್ಟ ಗಮನವನ್ನು ಕೃಷಿ ಕ್ಷೇತ್ರಕ್ಕೆ ನೀಡದಿರುವುದು ದುರಂತ. ಕೃಷಿ ಸಂಕಷ್ಟಗಳನ್ನು ಮುನ್ನಲೆಗೆ ತಂದಿದ್ದು ಬಹಳ ಕಡಿಮೆ.

ತೀರಾ ಅನೀರಿಕ್ಷಿತವಾಗಿ ಕೊರೊನಾ ಒಂದನೇ ಅಲೆ ಬಂತು. ನಮ್ಮ ರೈತರಿಗೆ ಇಂತಹ ಪರಿಸ್ಥಿತಿ ಬರುತ್ತೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಆಗಾಗಲೇ ಹೂ, ಹಣ್ಣು, ತರಕಾರಿಗಳನ್ನು, ಎಲ್ಲಾ ರೀತಿಯ ಬೆಳೆಗಳನ್ನು ನಾಟಿ ಮಾಡಲಾಗಿತ್ತು ಮತ್ತು ಒಂದಷ್ಟು ಬೆಳೆಗಳು ಕಟಾವಿಗೂ ಬಂದಿತು. ಬೆಳೆದ ಬೆಳೆಗಳು ಮಾರಾವಾಗದೆ ತೋಟದಲ್ಲಿ, ರಸ್ತೆಗಳಿಗೆ ಸುರಿಯುವ ಪರಿಸ್ಥಿತಿ ನಿರ್ಮಾಣವಾಯಿತು, ಈ ಎಲ್ಲದರ ಹೊಡೆತಗಳನ್ನು ರೈತರು ತಡೆದುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಬಂತು. ಈ ಸಮಯದಲ್ಲಿ ಸರ್ಕಾರ ರೈತರ ರಕ್ಷಣೆಗೆ ನಿಲ್ಲುತ್ತೇವೆ ಎಂಬ ಭರವಸೆ ಕೊಟ್ಟರೆ ಹೊರತು ವಾಸ್ತವದಲ್ಲಿ ರೈತರ ರಕ್ಷಣೆಗೆ ನಿಲ್ಲಲಿಲ್ಲ. ಇನ್ನು ಈ ಸಮಸ್ಯೆಗಳಿಂದ ರೈತರು ಚೇತರಿಸಿಕೊಳ್ಳುವ ಮೊದಲೇ ಕೊರೊನಾ ಎರಡನೇ ಅಲೆ ಬಂತು. ಈ ಅಲೆಗೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿರಲಿಲ್ಲ. ಆಸ್ಪತ್ರೆ, ಬೆಡ್, ಆಕ್ಸಿಜನ್ ಯಾವುದು ಸಿದ್ದತೆ ಮಾಡಿಕೊಂಡಿರಲಿಲ್ಲ. ಇಂತಹ ಸಮಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಘೋಷಣೆ ಮಾಡಿದರು.

ನಾವು ಈಗಾಗಲೇ ಹಸಿರುಕ್ರಾಂತಿ ಎಂಬ ಹೆಸರಿನಲ್ಲಿ ಬಿತ್ತನೆಬೀಜ, ರಸಗೊಬ್ಬರ, ಔಷಧಿಗಳು ಎಲ್ಲದಕ್ಕೂ ನಾವು ಸರ್ಕಾರ ಮತ್ತು ಕಾರ್ಪೊರೇಟ್ ಕಂಪನಿಗಳ ಮೇಲೆ ಅವಲಂಬಿತರಾಗಿದ್ದೇವೆ. ಉತ್ತಮ ಬೆಳೆ ಪಸಲು ಬರಬೇಕಾದರೆ ರಾಸಾಯನಿಕ ಗೊಬ್ಬರ, ಔಷಧಿಗಳನ್ನು ಸಿಂಪಣೆ ಮಾಡದೇ ಇದ್ದರೆ ಇಳುವರಿ ಮತ್ತು ಉತ್ತಮ ಬೆಳೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂದರೆ ಖರ್ಚು ದುಬಾರಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೈತರು ಬೆಳೆದ ತರಕಾರಿ, ಹಣ್ಣು, ಹೂ ಮತ್ತು ತೋಟಗಾರಿಕಾ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಸಂಕಷ್ಟಕ್ಕೆ ಗುರಿಯಾದರು. ಈ ಲಾಕ್‌ಡೌನ್‌ನಿಂದಾಗಿ ಬೆಳೆದಿರುವ ಬೆಳೆಗಳನ್ನು ರಸ್ತೆಗೆ ತಂದು ಸುರಿಯುವ ಘಟನೆಗಳನ್ನು ನೋಡಬೇಕಾಯಿತು. ಕೋಲಾರದಲ್ಲಿ ಇತ್ತೀಚೆಗೆ ನೂರಾರು ರೈತರು ಬಹುಕಷ್ಟಪಟ್ಟು ಬೆಳೆದ ಟಮೋಟವನ್ನು ರಸ್ತೆಗೆ ಸುರಿದಿದ್ದನ್ನು ನೋಡಬಹುದು.

ಕೋಲಾರ ಜಿಲ್ಲೆ ಹಾಲು, ರೇಷ್ಮೆ ಮತ್ತು ಮಾವಿನ ಮಡಿಲು ಎಂದೇ ಹೆಸರು ಪಡೆದಿರುವ ಜಿಲ್ಲೆ. ಇಲ್ಲಿ ಬೆಳೆದಂತಹ ಮಾವು, ಟಮೋಟ, ತರಕಾರಿಗಳು ದೆಹಲಿ, ಪುಣೆ, ಮುಂಬೈ, ಬಾಂಗ್ಲಾದೇಶ, ನೇಪಾಳ ಹಾಗೂ ಇತರೆ ರಾಜ್ಯ, ದೇಶಗಳಿಗೂ ರಫ್ತಾಗುತ್ತದೆ. ಸರ್ಕಾರದ ಅವೈಜ್ಞಾನಿಕ ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ರೂ ಬಂಡವಾಳ ಹಾಕಿ ಬೆಳೆದಿದ್ದ ತರಕಾರಿ, ದ್ರಾಕ್ಷಿ, ಟಮೋಟ, ಪಪ್ಪಾಯಗಳಿಗೆ ಬೆಲೆಯಿಲ್ಲದೆ, ಮತ್ತೊಂದು ಕಡೆ ಮಾರುಕಟ್ಟೆಗೆ ಸಾಗಿಸಲು ವಾಹನಗಳ ವ್ಯವಸ್ಥೆಯಿಲ್ಲದೆ ರೈತರು ರಸ್ತೆಗೆ ಸುರಿದರು.

ನಾವು ಕೋಲಾರ ತಾಲ್ಲೂಕು ಹೊಸಮಟ್ಟ ಹಳ್ಳಿ ಗ್ರಾಮದಲ್ಲಿ 10 ಎಕರೆಯಲ್ಲಿ ಟಮೋಟ, 7 ಎಕರೆಯಲ್ಲಿ ಎಲೆಕೋಸು ಬೆಳೆದಿದ್ದೆವು. 1 ಎಕರೆ ಟಮೋಟ ಬೆಳೆಯಲು ಕನಿಷ್ಠ 1.5 ರಿಂದ 2 ಲಕ್ಷದವರೆಗೆ ಬಂಡವಾಳ ಹಾಕಬೇಕು. ಇನ್ನೂ 10 ಎಕರೆಯಲ್ಲಿ ಟಮೋಟ ಬೆಳೆಯಲು ಬಂಡವಾಳ ಎಷ್ಟಾಗಬಹುದು? ಲಾಕ್‌ಡೌನ್ ಸಮಯದಲ್ಲಿ ಕಟಾವಿಗೆ ಬಂದಿದ್ದ ನಮ್ಮದೇ ತೋಟದ 5 ಎಕರೆ ಜಮೀನಿನಲ್ಲಿ ಬೆಳೆದಿದ್ದ ಟಮೋಟಾಗೆ ಮಾರುಕಟ್ಟೆಯಲ್ಲಿ ಬರುವ ಬೆಲೆ ಕನಿಷ್ಠ ಟಮೋಟ ಬಿಡಿಸಿದ ಕೃಷಿ ಕಾರ್ಮಿಕರಿಗೂ ಕೂಲಿ ಕೊಡಲು ಸಾಲದ ಪರಿಸ್ಥಿತಿ ಉಂಟಾಯಿತು. ಆದ ಕಾರಣ ತೋಟದಲ್ಲಿಯೇ ಅದನ್ನು ನೆಲಸಮ ಮಾಡಲಾಯಿತು. ನಮ್ಮಂತಹ ಆದೆಷ್ಟೊ ರೈತರು ಬೆಳೆಗಳನ್ನು ತೋಟಗಳಲ್ಲಿ, ರಸ್ತೆಗಳಲ್ಲಿ ಕೊಳೆಸಿದರು.

ಇನ್ನು 1 ಎಕರೆ ಕೋಸು ಬೆಳೆಯಲು ಕನಿಷ್ಠ 1 ಲಕ್ಷ ಬಂಡವಾಳ ಬೇಕು. ಆದರೆ ಕೊನೆಗೆ 1Kgಗೆ 2-3 ರೂ ಕೊಟ್ಟರೆ ಏನು ಮಾಡುವುದು?

ನಮ್ಮ ಊರು ಕೇವಲ 40-50 ಮನೆಗಳನ್ನು ಹೊಂದಿರುವ ಚಿಕ್ಕ ಗ್ರಾಮ. ಇಲ್ಲಿ ಕೊರೊನಾ ಬರುವ ಮುನ್ನ 5-6 ರೈತ ಕುಟುಂಬಗಳು ಮಾತ್ರ ಬೆಳೆ ಮಾಡುತ್ತಿದ್ದರು. ಕೆ.ಸಿ ವ್ಯಾಲಿ ನೀರು ಮತ್ತು ಕೊರೊನಾ ಬಂದ ಮೇಲೆ ನಗರಗಳಲ್ಲಿದ್ದ ಎಲ್ಲಾ ಯುವಕರು ಹಳ್ಳಿಗಳತ್ತ ಮುಖ ಮಾಡಿ ಮೂಲ ಕಸುಬಾದ ಕೃಷಿ ಮಾಡಲು ಶುರು ಮಾಡಿದರು. ಈಗ ನಮ್ಮೂರಲ್ಲಿ 30-35 ಕುಟುಂಬಗಳು ಕೃಷಿಯನ್ನೆ ನಂಬಿ ಜೀವನ ಮಾಡುತ್ತಿದ್ದಾರೆ. ಯುವ ಜನತೆ ವ್ಯವಸಾಯ ಮಾಡಿದರೆ ಏನೋ ಲಾಭ ಬರುತ್ತದೆಯೆಂದು ಸಾಲ ಮಾಡಿ ಬಂಡವಾಳ ಹಾಕಿದವರ ಗತಿಯೇನು? ಇವರ ನೆರವಿಗೆ ನಿಲ್ಲುವವರು ಯಾರು? ಇನ್ನೂ ಸರ್ಕಾರ ಸಂಕಷ್ಟದಲ್ಲಿರುವ ರೈತರಿಗೆ ಎಷ್ಟು ಪರಿಹಾರ ಕೊಟ್ಟಿದೆ? ರೈತರಿಗೆ ಸೇರಿದ್ದು ಕೇವಲ ಬಿಡಿಗಾಸು ಮಾತ್ರ. ಕೆಲವು ರೈತರಿಗೆ ಅದೂ ಇಲ್ಲ..

ಉದಾಹರಣೆಗೆ ನಾವು ಕೊರೊನಾದಿಂದ ಬೆಲೆಯಿಲ್ಲದೆ ಹೊಲದಲ್ಲಿಯೇ ಬೆಳೆ ನೆಲಸಮ ಮಾಡಿದಾಗ ಪರಿಹಾರದ ಹಣ ನಮಗೆ ಸಿಗಲಿಲ್ಲ. ಅಧಿಕಾರಿಗಳು ಮಾಡಿದ ಸಣ್ಣ ತಪ್ಪಿಗೆ ನಾವು ಪರಿಹಾರ ವಂಚಿತರಾದೆವು.
ಇನ್ನೂ ಮಾವು, ಹೂಗಳು, ರೇಷ್ಮೆ ಬೆಳೆಯುವ ರೈತರ ಪರಿಸ್ಥಿತಿ ಹೇಳತೀರದು. ಯಾವುದೇ ಶುಭ ಸಮಾರಂಭಗಳಿಲ್ಲದೆ ದೇವಸ್ಥಾನಗಳಿಲ್ಲದೆ ಹೂಗಳು ಮಾರಟವಾಗಲೇ ಇಲ್ಲ. ಮಾವು ಬೆಳೆದ ರೈತರು ಪ್ರತಿ ಕೆಜಿಗೆ 2-3ರೂಗಳಂತೆಯೂ ಬೆಲೆ ಸಿಗದೆ ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಮಾಧುಸ್ವಾಮಿಯವರನ್ನು ಪ್ರಶ್ನಿಸಿದ ನಳಿನಿ ಯಾರು? ಅವರು ಯಾವಾಗಲೂ ಹಾಗೇನಾ?

ರಾಜ್ಯದಲ್ಲಿ ಸುಮಾರು 1.20 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಾರೆ. ಇಷ್ಟು ಬೆಳೆದರು ಇದರಿಂದ ರೈತರಿಗೂ ಲಾಭ ಸಿಗಲಿಲ್ಲ. ಅತ್ತ ಕಡೆ ಗ್ರಾಹಕನಿಗೂ ಕಡಿಮೆ ಬೆಲೆಗೆ ಹಣ್ಣು-ತರಕಾರಿ ಸಿಗಲಿಲ್ಲ.

ಮತ್ತೊಂದು ಕಡೆ ಮುಂಗಾರು ಶುರುವಾಯಿತು ಬಿತ್ತನೆಗಳು ಪ್ರಾರಂಭವಾದವು ಉಳುಮೆ ಮಾಡಲು ನೇಗಿಲು ಕಟ್ಟಬೇಕು. ನೇಗಿಲಿಗೆ ಹುಳಿ ಕಟ್ಟಬೇಕು. ವೆಲ್ಡಿಂಗ್ ಅಂಗಡಿಗಳು ತೆರೆಯಲೇ ಇಲ್ಲ. ಉಳುಮೆ ಮಾಡಲು ಟ್ರಾಕ್ಟರ್ ತೆಗೆದುಕೊಂಡು ಹೋದರೆ ಒಂದು ನಟ್ಟು ಬೋಲ್ಟ್ ಇಲ್ಲದೇ ಇದ್ದರೂ ಟ್ರಾಕ್ಟರ್ ಮುಂದೆ ಹೋಗುವುದಿಲ್ಲ. ತೋಟಕ್ಕೆ ನೀರು ಹಾಯಿಸಲು ಹನಿ ನೀರಾವರಿ ಬಳಸುತ್ತೇವೆ. ಪೈಪ್ ಹೊಡೆದು ಹೋಗಿದ್ದು ಅದನ್ನು ಅಂಟಿಸಲು ಗಮ್ ಇಲ್ಲ. ನೀರು ಹೊರ ತೆಗೆಯಲು ಮೋಟರ್ Spare Parts ಇಲ್ಲದೇ ಇದ್ರೆ ಕೆಲಸ ಆಗಲ್ಲ. ಇವುಗಳು ಸದ್ಯಕ್ಕೆ ಲಾಕ್‌ಡೌನ್ ಇರುವುದರಿಂದ ಸಿಗುವುದಿಲ್ಲ. ಹೀಗೆ ಸಣ್ಣ ಸಣ್ಣ ವಸ್ತುಗಳಿಂದ ರೈತರಿಗೆ ಒಡೆತ ಬಿತ್ತು. ಆದರೆ ಆಡಳಿತ ನಡೆಸುವ ಸರ್ಕಾರ ಮತ್ತು IAS  ಅಧಿಕಾರಿಗಳು ಕೇವಲ ಗೊಬ್ಬರದ ಅಂಗಡಿ, ಔಷಧಿ ಅಂಗಡಿಗಳು ತೆರೆದರೆ ಕೃಷಿ ಮಾಡಿ ಬಿಡಬಹುದೆಂಬ ಭ್ರಮೆಯಲ್ಲಿದ್ದಾರೆ.

ಇದರ ನಡುವೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ರಸಗೊಬ್ಬರಗಳು, ಡ್ರಿಪ್ ಪೈಪ್‌ಗಳ ಬೆಲೆ ಏರಿಕೆ ಜೊತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರೈತರು ಜನ ಸಾಮಾನ್ಯರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದರು.

ಇದನ್ನೂ ಓದಿ: ನಳಿನಿ ವಿರುದ್ಧ ಬಿಜೆಪಿ ಐಟಿ ಸೆಲ್: ಒಂದು ಕ್ಲಾಸಿಕ್ ಕೇಸು

ಸರ್ಕಾರವಂತೂ ರೈತರ ನೆರವಿಗೆ ಬರುತ್ತಿಲ್ಲ. ಹಾಗಾಗಿ ರೈತರೇ ಪರ್ಯಾಯ ಆಲೋಚನೆಗಳತ್ತ ಮುಖ ಮಾಡಬೇಕಾಗಿದೆ. ಬೆಳೆದ ತರಕಾರಿಗಳನ್ನು ಮೌಲ್ಯವರ್ಧನೆ ಮಾಡಿ ಬೆಲೆ ಬಂದಾಗ ಮಾರಾಟ ಮಾಡಬೇಕು. ಜೊತೆಗೆ ಸಣ್ಣ ಕೆಲಸಗಳಾದ ಟಮೋಟ ಬೆಳೆಯುವ ರೈತರು ಸಾಸ್, ಉಪ್ಪಿನಕಾಯಿ ಇತರೆ ಉಪಉತ್ಪನ್ನಗಳನ್ನು ತಾವೇ ತಯಾರಿಸಿ ಮಾರಾಟ ಮಾಡುವ ಮೂಲಕ ಪರ್ಯಾಯಗಳತ್ತ ಯೋಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಕೋಲಾರ ಜಿಲ್ಲೆ ವಿಭಿನ್ನ ಎಂದು ಹೇಳಬಹುದು. ಏಕೆಂದರೆ ಇಲ್ಲಿ ಇತರೆ ಜಿಲ್ಲೆಗಳಂತೆ ಕೋಲಾರದಲ್ಲಿ ವಾರ್ಷಿಕ ಬೆಳೆಗಳನ್ನು ಬೆಳೆಯುವುದು ತುಂಬಾ ಕಡಿಮೆ. ಇಲ್ಲಿ ಟಮೋಟೊ ಹಣ್ಣುಗಳು, ಎಲ್ಲಾ ರೀತಿಯ ತರಕಾರಿಗಳು, ಮಾವು, ದ್ರಾಕ್ಷಿ ಇತರೆ ಎಲ್ಲಾ ಬೆಳೆಗಳನ್ನು ಬೆಳೆಯುವುದರಲ್ಲಿ ರೈತರು ಎತ್ತಿದ ಕೈ. ಹಾಗಾಗಿ 2 ತಿಂಗಳು ಲಾಕ್‌ಡೌನ್ ಆದ ಕಾರಣ ಈ ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲದೆ ಸುಮಾರು ಸಾವಿರಾರು ಹೆಕ್ಟೇರ್ ಪ್ರದೇಶದ ಹೊಲಗಳಲ್ಲಿ ಪಸಲನ್ನು ಕಟಾವು ಮಾಡದೆ ಹಾಗೆ ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರಗಳು ರೈತರ ಹಿತ ಕಾಯ್ದು, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಕೊಡುವ ಬದಲು ರೈತ ವಿರೋಧಿ, ಜನವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿ ಮಾಡುವಲ್ಲಿ ನಿರತರಾಗಿರುವುದು ದುರಂತ.

  • ನಳಿನಿ
ನಳಿನಿ
ನಳಿನಿ

(ಕರ್ನಾಟಕ ರಾಜ್ಯ ರೈತ ಸಂಘದ ಯುವ ವಿಭಾಗದ ಸಕ್ರಿಯ ಕಾರ್ಯಕರ್ತೆಯಾಗಿರುವ ನಳಿನಿ ಸ್ವತಃ ಕೃಷಿಯಲ್ಲಿ ತೊಡಗಿಸಿಕೊಂಡಿರುವವರು. ರೈತಪರವಾದ ಎಲ್ಲಾ ಹೋರಾಟದಲ್ಲಿ ಅವರು ಮುಂದಿರುತ್ತಾರೆ)


ಇದನ್ನೂ ಓದಿ: ಕನ್ನಡ ಶಾಲೆ ಕೆಡವಿ ಸ್ಮಾರಕ ನಿರ್ಮಾಣ: ತೀವ್ರಗೊಂಡ ಮೈಸೂರು NTM ಶಾಲೆ ಉಳಿಸಿ ಹೋರಾಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...