Homeಕರೋನಾ ತಲ್ಲಣಕೊರೊನಾ ಲಾಕ್‌ಡೌನ್‌ಗೆ ನಲುಗಿದ ಕೋಲಾರ ಜಿಲ್ಲೆ: ಹುಲುಸಾದ ಬೆಳೆ ಹೊಲದಲ್ಲೇ ನೆಲಸಮ

ಕೊರೊನಾ ಲಾಕ್‌ಡೌನ್‌ಗೆ ನಲುಗಿದ ಕೋಲಾರ ಜಿಲ್ಲೆ: ಹುಲುಸಾದ ಬೆಳೆ ಹೊಲದಲ್ಲೇ ನೆಲಸಮ

ಕೋಲಾರ ಜಿಲ್ಲೆ ಹಾಲು, ರೇಷ್ಮೆ ಮತ್ತು ಮಾವಿನ ಮಡಿಲು ಎಂದೇ ಹೆಸರು ಪಡೆದಿರುವ ಜಿಲ್ಲೆ. ಇಲ್ಲಿ ಟಮೋಟ, ತರಕಾರಿಗಳು ದೆಹಲಿ, ಪುಣೆ, ಮುಂಬೈ, ಬಾಂಗ್ಲಾದೇಶ, ನೇಪಾಳ ಹಾಗೂ ಇತರೆ ರಾಜ್ಯ, ದೇಶಗಳಿಗೂ ರಫ್ತಾಗುತ್ತದೆ.

- Advertisement -
- Advertisement -

ಕೊರೊನಾದಿಂದ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಎಲ್ಲಾ ಕ್ಷೇತ್ರಗಳಿಗೂ ತೊಂದರೆಯಾಗಿದೆ. ಅದರಂತೆ ಕೃಷಿ ಕ್ಷೇತ್ರದ ಮೇಲೂ ತುಂಬಾ ದೊಡ್ಡ ಹೊಡೆತ ಬಿದ್ದಿದೆ. ಆದರೆ ಬೇರೆ ಕ್ಷೇತ್ರಗಳ ಬಗ್ಗೆ ಮಾಧ್ಯಮಗಳಾಗಲಿ, ವ್ಯವಸ್ಥೆ, ಪ್ರಭುತ್ವ ಕೊಟ್ಟ ಗಮನವನ್ನು ಕೃಷಿ ಕ್ಷೇತ್ರಕ್ಕೆ ನೀಡದಿರುವುದು ದುರಂತ. ಕೃಷಿ ಸಂಕಷ್ಟಗಳನ್ನು ಮುನ್ನಲೆಗೆ ತಂದಿದ್ದು ಬಹಳ ಕಡಿಮೆ.

ತೀರಾ ಅನೀರಿಕ್ಷಿತವಾಗಿ ಕೊರೊನಾ ಒಂದನೇ ಅಲೆ ಬಂತು. ನಮ್ಮ ರೈತರಿಗೆ ಇಂತಹ ಪರಿಸ್ಥಿತಿ ಬರುತ್ತೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಆಗಾಗಲೇ ಹೂ, ಹಣ್ಣು, ತರಕಾರಿಗಳನ್ನು, ಎಲ್ಲಾ ರೀತಿಯ ಬೆಳೆಗಳನ್ನು ನಾಟಿ ಮಾಡಲಾಗಿತ್ತು ಮತ್ತು ಒಂದಷ್ಟು ಬೆಳೆಗಳು ಕಟಾವಿಗೂ ಬಂದಿತು. ಬೆಳೆದ ಬೆಳೆಗಳು ಮಾರಾವಾಗದೆ ತೋಟದಲ್ಲಿ, ರಸ್ತೆಗಳಿಗೆ ಸುರಿಯುವ ಪರಿಸ್ಥಿತಿ ನಿರ್ಮಾಣವಾಯಿತು, ಈ ಎಲ್ಲದರ ಹೊಡೆತಗಳನ್ನು ರೈತರು ತಡೆದುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಬಂತು. ಈ ಸಮಯದಲ್ಲಿ ಸರ್ಕಾರ ರೈತರ ರಕ್ಷಣೆಗೆ ನಿಲ್ಲುತ್ತೇವೆ ಎಂಬ ಭರವಸೆ ಕೊಟ್ಟರೆ ಹೊರತು ವಾಸ್ತವದಲ್ಲಿ ರೈತರ ರಕ್ಷಣೆಗೆ ನಿಲ್ಲಲಿಲ್ಲ. ಇನ್ನು ಈ ಸಮಸ್ಯೆಗಳಿಂದ ರೈತರು ಚೇತರಿಸಿಕೊಳ್ಳುವ ಮೊದಲೇ ಕೊರೊನಾ ಎರಡನೇ ಅಲೆ ಬಂತು. ಈ ಅಲೆಗೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿರಲಿಲ್ಲ. ಆಸ್ಪತ್ರೆ, ಬೆಡ್, ಆಕ್ಸಿಜನ್ ಯಾವುದು ಸಿದ್ದತೆ ಮಾಡಿಕೊಂಡಿರಲಿಲ್ಲ. ಇಂತಹ ಸಮಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಘೋಷಣೆ ಮಾಡಿದರು.

ನಾವು ಈಗಾಗಲೇ ಹಸಿರುಕ್ರಾಂತಿ ಎಂಬ ಹೆಸರಿನಲ್ಲಿ ಬಿತ್ತನೆಬೀಜ, ರಸಗೊಬ್ಬರ, ಔಷಧಿಗಳು ಎಲ್ಲದಕ್ಕೂ ನಾವು ಸರ್ಕಾರ ಮತ್ತು ಕಾರ್ಪೊರೇಟ್ ಕಂಪನಿಗಳ ಮೇಲೆ ಅವಲಂಬಿತರಾಗಿದ್ದೇವೆ. ಉತ್ತಮ ಬೆಳೆ ಪಸಲು ಬರಬೇಕಾದರೆ ರಾಸಾಯನಿಕ ಗೊಬ್ಬರ, ಔಷಧಿಗಳನ್ನು ಸಿಂಪಣೆ ಮಾಡದೇ ಇದ್ದರೆ ಇಳುವರಿ ಮತ್ತು ಉತ್ತಮ ಬೆಳೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂದರೆ ಖರ್ಚು ದುಬಾರಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೈತರು ಬೆಳೆದ ತರಕಾರಿ, ಹಣ್ಣು, ಹೂ ಮತ್ತು ತೋಟಗಾರಿಕಾ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಸಂಕಷ್ಟಕ್ಕೆ ಗುರಿಯಾದರು. ಈ ಲಾಕ್‌ಡೌನ್‌ನಿಂದಾಗಿ ಬೆಳೆದಿರುವ ಬೆಳೆಗಳನ್ನು ರಸ್ತೆಗೆ ತಂದು ಸುರಿಯುವ ಘಟನೆಗಳನ್ನು ನೋಡಬೇಕಾಯಿತು. ಕೋಲಾರದಲ್ಲಿ ಇತ್ತೀಚೆಗೆ ನೂರಾರು ರೈತರು ಬಹುಕಷ್ಟಪಟ್ಟು ಬೆಳೆದ ಟಮೋಟವನ್ನು ರಸ್ತೆಗೆ ಸುರಿದಿದ್ದನ್ನು ನೋಡಬಹುದು.

ಕೋಲಾರ ಜಿಲ್ಲೆ ಹಾಲು, ರೇಷ್ಮೆ ಮತ್ತು ಮಾವಿನ ಮಡಿಲು ಎಂದೇ ಹೆಸರು ಪಡೆದಿರುವ ಜಿಲ್ಲೆ. ಇಲ್ಲಿ ಬೆಳೆದಂತಹ ಮಾವು, ಟಮೋಟ, ತರಕಾರಿಗಳು ದೆಹಲಿ, ಪುಣೆ, ಮುಂಬೈ, ಬಾಂಗ್ಲಾದೇಶ, ನೇಪಾಳ ಹಾಗೂ ಇತರೆ ರಾಜ್ಯ, ದೇಶಗಳಿಗೂ ರಫ್ತಾಗುತ್ತದೆ. ಸರ್ಕಾರದ ಅವೈಜ್ಞಾನಿಕ ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ರೂ ಬಂಡವಾಳ ಹಾಕಿ ಬೆಳೆದಿದ್ದ ತರಕಾರಿ, ದ್ರಾಕ್ಷಿ, ಟಮೋಟ, ಪಪ್ಪಾಯಗಳಿಗೆ ಬೆಲೆಯಿಲ್ಲದೆ, ಮತ್ತೊಂದು ಕಡೆ ಮಾರುಕಟ್ಟೆಗೆ ಸಾಗಿಸಲು ವಾಹನಗಳ ವ್ಯವಸ್ಥೆಯಿಲ್ಲದೆ ರೈತರು ರಸ್ತೆಗೆ ಸುರಿದರು.

ನಾವು ಕೋಲಾರ ತಾಲ್ಲೂಕು ಹೊಸಮಟ್ಟ ಹಳ್ಳಿ ಗ್ರಾಮದಲ್ಲಿ 10 ಎಕರೆಯಲ್ಲಿ ಟಮೋಟ, 7 ಎಕರೆಯಲ್ಲಿ ಎಲೆಕೋಸು ಬೆಳೆದಿದ್ದೆವು. 1 ಎಕರೆ ಟಮೋಟ ಬೆಳೆಯಲು ಕನಿಷ್ಠ 1.5 ರಿಂದ 2 ಲಕ್ಷದವರೆಗೆ ಬಂಡವಾಳ ಹಾಕಬೇಕು. ಇನ್ನೂ 10 ಎಕರೆಯಲ್ಲಿ ಟಮೋಟ ಬೆಳೆಯಲು ಬಂಡವಾಳ ಎಷ್ಟಾಗಬಹುದು? ಲಾಕ್‌ಡೌನ್ ಸಮಯದಲ್ಲಿ ಕಟಾವಿಗೆ ಬಂದಿದ್ದ ನಮ್ಮದೇ ತೋಟದ 5 ಎಕರೆ ಜಮೀನಿನಲ್ಲಿ ಬೆಳೆದಿದ್ದ ಟಮೋಟಾಗೆ ಮಾರುಕಟ್ಟೆಯಲ್ಲಿ ಬರುವ ಬೆಲೆ ಕನಿಷ್ಠ ಟಮೋಟ ಬಿಡಿಸಿದ ಕೃಷಿ ಕಾರ್ಮಿಕರಿಗೂ ಕೂಲಿ ಕೊಡಲು ಸಾಲದ ಪರಿಸ್ಥಿತಿ ಉಂಟಾಯಿತು. ಆದ ಕಾರಣ ತೋಟದಲ್ಲಿಯೇ ಅದನ್ನು ನೆಲಸಮ ಮಾಡಲಾಯಿತು. ನಮ್ಮಂತಹ ಆದೆಷ್ಟೊ ರೈತರು ಬೆಳೆಗಳನ್ನು ತೋಟಗಳಲ್ಲಿ, ರಸ್ತೆಗಳಲ್ಲಿ ಕೊಳೆಸಿದರು.

ಇನ್ನು 1 ಎಕರೆ ಕೋಸು ಬೆಳೆಯಲು ಕನಿಷ್ಠ 1 ಲಕ್ಷ ಬಂಡವಾಳ ಬೇಕು. ಆದರೆ ಕೊನೆಗೆ 1Kgಗೆ 2-3 ರೂ ಕೊಟ್ಟರೆ ಏನು ಮಾಡುವುದು?

ನಮ್ಮ ಊರು ಕೇವಲ 40-50 ಮನೆಗಳನ್ನು ಹೊಂದಿರುವ ಚಿಕ್ಕ ಗ್ರಾಮ. ಇಲ್ಲಿ ಕೊರೊನಾ ಬರುವ ಮುನ್ನ 5-6 ರೈತ ಕುಟುಂಬಗಳು ಮಾತ್ರ ಬೆಳೆ ಮಾಡುತ್ತಿದ್ದರು. ಕೆ.ಸಿ ವ್ಯಾಲಿ ನೀರು ಮತ್ತು ಕೊರೊನಾ ಬಂದ ಮೇಲೆ ನಗರಗಳಲ್ಲಿದ್ದ ಎಲ್ಲಾ ಯುವಕರು ಹಳ್ಳಿಗಳತ್ತ ಮುಖ ಮಾಡಿ ಮೂಲ ಕಸುಬಾದ ಕೃಷಿ ಮಾಡಲು ಶುರು ಮಾಡಿದರು. ಈಗ ನಮ್ಮೂರಲ್ಲಿ 30-35 ಕುಟುಂಬಗಳು ಕೃಷಿಯನ್ನೆ ನಂಬಿ ಜೀವನ ಮಾಡುತ್ತಿದ್ದಾರೆ. ಯುವ ಜನತೆ ವ್ಯವಸಾಯ ಮಾಡಿದರೆ ಏನೋ ಲಾಭ ಬರುತ್ತದೆಯೆಂದು ಸಾಲ ಮಾಡಿ ಬಂಡವಾಳ ಹಾಕಿದವರ ಗತಿಯೇನು? ಇವರ ನೆರವಿಗೆ ನಿಲ್ಲುವವರು ಯಾರು? ಇನ್ನೂ ಸರ್ಕಾರ ಸಂಕಷ್ಟದಲ್ಲಿರುವ ರೈತರಿಗೆ ಎಷ್ಟು ಪರಿಹಾರ ಕೊಟ್ಟಿದೆ? ರೈತರಿಗೆ ಸೇರಿದ್ದು ಕೇವಲ ಬಿಡಿಗಾಸು ಮಾತ್ರ. ಕೆಲವು ರೈತರಿಗೆ ಅದೂ ಇಲ್ಲ..

ಉದಾಹರಣೆಗೆ ನಾವು ಕೊರೊನಾದಿಂದ ಬೆಲೆಯಿಲ್ಲದೆ ಹೊಲದಲ್ಲಿಯೇ ಬೆಳೆ ನೆಲಸಮ ಮಾಡಿದಾಗ ಪರಿಹಾರದ ಹಣ ನಮಗೆ ಸಿಗಲಿಲ್ಲ. ಅಧಿಕಾರಿಗಳು ಮಾಡಿದ ಸಣ್ಣ ತಪ್ಪಿಗೆ ನಾವು ಪರಿಹಾರ ವಂಚಿತರಾದೆವು.
ಇನ್ನೂ ಮಾವು, ಹೂಗಳು, ರೇಷ್ಮೆ ಬೆಳೆಯುವ ರೈತರ ಪರಿಸ್ಥಿತಿ ಹೇಳತೀರದು. ಯಾವುದೇ ಶುಭ ಸಮಾರಂಭಗಳಿಲ್ಲದೆ ದೇವಸ್ಥಾನಗಳಿಲ್ಲದೆ ಹೂಗಳು ಮಾರಟವಾಗಲೇ ಇಲ್ಲ. ಮಾವು ಬೆಳೆದ ರೈತರು ಪ್ರತಿ ಕೆಜಿಗೆ 2-3ರೂಗಳಂತೆಯೂ ಬೆಲೆ ಸಿಗದೆ ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಮಾಧುಸ್ವಾಮಿಯವರನ್ನು ಪ್ರಶ್ನಿಸಿದ ನಳಿನಿ ಯಾರು? ಅವರು ಯಾವಾಗಲೂ ಹಾಗೇನಾ?

ರಾಜ್ಯದಲ್ಲಿ ಸುಮಾರು 1.20 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಾರೆ. ಇಷ್ಟು ಬೆಳೆದರು ಇದರಿಂದ ರೈತರಿಗೂ ಲಾಭ ಸಿಗಲಿಲ್ಲ. ಅತ್ತ ಕಡೆ ಗ್ರಾಹಕನಿಗೂ ಕಡಿಮೆ ಬೆಲೆಗೆ ಹಣ್ಣು-ತರಕಾರಿ ಸಿಗಲಿಲ್ಲ.

ಮತ್ತೊಂದು ಕಡೆ ಮುಂಗಾರು ಶುರುವಾಯಿತು ಬಿತ್ತನೆಗಳು ಪ್ರಾರಂಭವಾದವು ಉಳುಮೆ ಮಾಡಲು ನೇಗಿಲು ಕಟ್ಟಬೇಕು. ನೇಗಿಲಿಗೆ ಹುಳಿ ಕಟ್ಟಬೇಕು. ವೆಲ್ಡಿಂಗ್ ಅಂಗಡಿಗಳು ತೆರೆಯಲೇ ಇಲ್ಲ. ಉಳುಮೆ ಮಾಡಲು ಟ್ರಾಕ್ಟರ್ ತೆಗೆದುಕೊಂಡು ಹೋದರೆ ಒಂದು ನಟ್ಟು ಬೋಲ್ಟ್ ಇಲ್ಲದೇ ಇದ್ದರೂ ಟ್ರಾಕ್ಟರ್ ಮುಂದೆ ಹೋಗುವುದಿಲ್ಲ. ತೋಟಕ್ಕೆ ನೀರು ಹಾಯಿಸಲು ಹನಿ ನೀರಾವರಿ ಬಳಸುತ್ತೇವೆ. ಪೈಪ್ ಹೊಡೆದು ಹೋಗಿದ್ದು ಅದನ್ನು ಅಂಟಿಸಲು ಗಮ್ ಇಲ್ಲ. ನೀರು ಹೊರ ತೆಗೆಯಲು ಮೋಟರ್ Spare Parts ಇಲ್ಲದೇ ಇದ್ರೆ ಕೆಲಸ ಆಗಲ್ಲ. ಇವುಗಳು ಸದ್ಯಕ್ಕೆ ಲಾಕ್‌ಡೌನ್ ಇರುವುದರಿಂದ ಸಿಗುವುದಿಲ್ಲ. ಹೀಗೆ ಸಣ್ಣ ಸಣ್ಣ ವಸ್ತುಗಳಿಂದ ರೈತರಿಗೆ ಒಡೆತ ಬಿತ್ತು. ಆದರೆ ಆಡಳಿತ ನಡೆಸುವ ಸರ್ಕಾರ ಮತ್ತು IAS  ಅಧಿಕಾರಿಗಳು ಕೇವಲ ಗೊಬ್ಬರದ ಅಂಗಡಿ, ಔಷಧಿ ಅಂಗಡಿಗಳು ತೆರೆದರೆ ಕೃಷಿ ಮಾಡಿ ಬಿಡಬಹುದೆಂಬ ಭ್ರಮೆಯಲ್ಲಿದ್ದಾರೆ.

ಇದರ ನಡುವೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ರಸಗೊಬ್ಬರಗಳು, ಡ್ರಿಪ್ ಪೈಪ್‌ಗಳ ಬೆಲೆ ಏರಿಕೆ ಜೊತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರೈತರು ಜನ ಸಾಮಾನ್ಯರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದರು.

ಇದನ್ನೂ ಓದಿ: ನಳಿನಿ ವಿರುದ್ಧ ಬಿಜೆಪಿ ಐಟಿ ಸೆಲ್: ಒಂದು ಕ್ಲಾಸಿಕ್ ಕೇಸು

ಸರ್ಕಾರವಂತೂ ರೈತರ ನೆರವಿಗೆ ಬರುತ್ತಿಲ್ಲ. ಹಾಗಾಗಿ ರೈತರೇ ಪರ್ಯಾಯ ಆಲೋಚನೆಗಳತ್ತ ಮುಖ ಮಾಡಬೇಕಾಗಿದೆ. ಬೆಳೆದ ತರಕಾರಿಗಳನ್ನು ಮೌಲ್ಯವರ್ಧನೆ ಮಾಡಿ ಬೆಲೆ ಬಂದಾಗ ಮಾರಾಟ ಮಾಡಬೇಕು. ಜೊತೆಗೆ ಸಣ್ಣ ಕೆಲಸಗಳಾದ ಟಮೋಟ ಬೆಳೆಯುವ ರೈತರು ಸಾಸ್, ಉಪ್ಪಿನಕಾಯಿ ಇತರೆ ಉಪಉತ್ಪನ್ನಗಳನ್ನು ತಾವೇ ತಯಾರಿಸಿ ಮಾರಾಟ ಮಾಡುವ ಮೂಲಕ ಪರ್ಯಾಯಗಳತ್ತ ಯೋಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಕೋಲಾರ ಜಿಲ್ಲೆ ವಿಭಿನ್ನ ಎಂದು ಹೇಳಬಹುದು. ಏಕೆಂದರೆ ಇಲ್ಲಿ ಇತರೆ ಜಿಲ್ಲೆಗಳಂತೆ ಕೋಲಾರದಲ್ಲಿ ವಾರ್ಷಿಕ ಬೆಳೆಗಳನ್ನು ಬೆಳೆಯುವುದು ತುಂಬಾ ಕಡಿಮೆ. ಇಲ್ಲಿ ಟಮೋಟೊ ಹಣ್ಣುಗಳು, ಎಲ್ಲಾ ರೀತಿಯ ತರಕಾರಿಗಳು, ಮಾವು, ದ್ರಾಕ್ಷಿ ಇತರೆ ಎಲ್ಲಾ ಬೆಳೆಗಳನ್ನು ಬೆಳೆಯುವುದರಲ್ಲಿ ರೈತರು ಎತ್ತಿದ ಕೈ. ಹಾಗಾಗಿ 2 ತಿಂಗಳು ಲಾಕ್‌ಡೌನ್ ಆದ ಕಾರಣ ಈ ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲದೆ ಸುಮಾರು ಸಾವಿರಾರು ಹೆಕ್ಟೇರ್ ಪ್ರದೇಶದ ಹೊಲಗಳಲ್ಲಿ ಪಸಲನ್ನು ಕಟಾವು ಮಾಡದೆ ಹಾಗೆ ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರಗಳು ರೈತರ ಹಿತ ಕಾಯ್ದು, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಕೊಡುವ ಬದಲು ರೈತ ವಿರೋಧಿ, ಜನವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿ ಮಾಡುವಲ್ಲಿ ನಿರತರಾಗಿರುವುದು ದುರಂತ.

  • ನಳಿನಿ
ನಳಿನಿ
ನಳಿನಿ

(ಕರ್ನಾಟಕ ರಾಜ್ಯ ರೈತ ಸಂಘದ ಯುವ ವಿಭಾಗದ ಸಕ್ರಿಯ ಕಾರ್ಯಕರ್ತೆಯಾಗಿರುವ ನಳಿನಿ ಸ್ವತಃ ಕೃಷಿಯಲ್ಲಿ ತೊಡಗಿಸಿಕೊಂಡಿರುವವರು. ರೈತಪರವಾದ ಎಲ್ಲಾ ಹೋರಾಟದಲ್ಲಿ ಅವರು ಮುಂದಿರುತ್ತಾರೆ)


ಇದನ್ನೂ ಓದಿ: ಕನ್ನಡ ಶಾಲೆ ಕೆಡವಿ ಸ್ಮಾರಕ ನಿರ್ಮಾಣ: ತೀವ್ರಗೊಂಡ ಮೈಸೂರು NTM ಶಾಲೆ ಉಳಿಸಿ ಹೋರಾಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...