Homeಕರೋನಾ ತಲ್ಲಣಕೊರೊನಾ ಲಾಕ್‌ಡೌನ್‌ಗೆ ನಲುಗಿದ ಕೋಲಾರ ಜಿಲ್ಲೆ: ಹುಲುಸಾದ ಬೆಳೆ ಹೊಲದಲ್ಲೇ ನೆಲಸಮ

ಕೊರೊನಾ ಲಾಕ್‌ಡೌನ್‌ಗೆ ನಲುಗಿದ ಕೋಲಾರ ಜಿಲ್ಲೆ: ಹುಲುಸಾದ ಬೆಳೆ ಹೊಲದಲ್ಲೇ ನೆಲಸಮ

ಕೋಲಾರ ಜಿಲ್ಲೆ ಹಾಲು, ರೇಷ್ಮೆ ಮತ್ತು ಮಾವಿನ ಮಡಿಲು ಎಂದೇ ಹೆಸರು ಪಡೆದಿರುವ ಜಿಲ್ಲೆ. ಇಲ್ಲಿ ಟಮೋಟ, ತರಕಾರಿಗಳು ದೆಹಲಿ, ಪುಣೆ, ಮುಂಬೈ, ಬಾಂಗ್ಲಾದೇಶ, ನೇಪಾಳ ಹಾಗೂ ಇತರೆ ರಾಜ್ಯ, ದೇಶಗಳಿಗೂ ರಫ್ತಾಗುತ್ತದೆ.

- Advertisement -
- Advertisement -

ಕೊರೊನಾದಿಂದ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಎಲ್ಲಾ ಕ್ಷೇತ್ರಗಳಿಗೂ ತೊಂದರೆಯಾಗಿದೆ. ಅದರಂತೆ ಕೃಷಿ ಕ್ಷೇತ್ರದ ಮೇಲೂ ತುಂಬಾ ದೊಡ್ಡ ಹೊಡೆತ ಬಿದ್ದಿದೆ. ಆದರೆ ಬೇರೆ ಕ್ಷೇತ್ರಗಳ ಬಗ್ಗೆ ಮಾಧ್ಯಮಗಳಾಗಲಿ, ವ್ಯವಸ್ಥೆ, ಪ್ರಭುತ್ವ ಕೊಟ್ಟ ಗಮನವನ್ನು ಕೃಷಿ ಕ್ಷೇತ್ರಕ್ಕೆ ನೀಡದಿರುವುದು ದುರಂತ. ಕೃಷಿ ಸಂಕಷ್ಟಗಳನ್ನು ಮುನ್ನಲೆಗೆ ತಂದಿದ್ದು ಬಹಳ ಕಡಿಮೆ.

ತೀರಾ ಅನೀರಿಕ್ಷಿತವಾಗಿ ಕೊರೊನಾ ಒಂದನೇ ಅಲೆ ಬಂತು. ನಮ್ಮ ರೈತರಿಗೆ ಇಂತಹ ಪರಿಸ್ಥಿತಿ ಬರುತ್ತೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಆಗಾಗಲೇ ಹೂ, ಹಣ್ಣು, ತರಕಾರಿಗಳನ್ನು, ಎಲ್ಲಾ ರೀತಿಯ ಬೆಳೆಗಳನ್ನು ನಾಟಿ ಮಾಡಲಾಗಿತ್ತು ಮತ್ತು ಒಂದಷ್ಟು ಬೆಳೆಗಳು ಕಟಾವಿಗೂ ಬಂದಿತು. ಬೆಳೆದ ಬೆಳೆಗಳು ಮಾರಾವಾಗದೆ ತೋಟದಲ್ಲಿ, ರಸ್ತೆಗಳಿಗೆ ಸುರಿಯುವ ಪರಿಸ್ಥಿತಿ ನಿರ್ಮಾಣವಾಯಿತು, ಈ ಎಲ್ಲದರ ಹೊಡೆತಗಳನ್ನು ರೈತರು ತಡೆದುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಬಂತು. ಈ ಸಮಯದಲ್ಲಿ ಸರ್ಕಾರ ರೈತರ ರಕ್ಷಣೆಗೆ ನಿಲ್ಲುತ್ತೇವೆ ಎಂಬ ಭರವಸೆ ಕೊಟ್ಟರೆ ಹೊರತು ವಾಸ್ತವದಲ್ಲಿ ರೈತರ ರಕ್ಷಣೆಗೆ ನಿಲ್ಲಲಿಲ್ಲ. ಇನ್ನು ಈ ಸಮಸ್ಯೆಗಳಿಂದ ರೈತರು ಚೇತರಿಸಿಕೊಳ್ಳುವ ಮೊದಲೇ ಕೊರೊನಾ ಎರಡನೇ ಅಲೆ ಬಂತು. ಈ ಅಲೆಗೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿರಲಿಲ್ಲ. ಆಸ್ಪತ್ರೆ, ಬೆಡ್, ಆಕ್ಸಿಜನ್ ಯಾವುದು ಸಿದ್ದತೆ ಮಾಡಿಕೊಂಡಿರಲಿಲ್ಲ. ಇಂತಹ ಸಮಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಘೋಷಣೆ ಮಾಡಿದರು.

ನಾವು ಈಗಾಗಲೇ ಹಸಿರುಕ್ರಾಂತಿ ಎಂಬ ಹೆಸರಿನಲ್ಲಿ ಬಿತ್ತನೆಬೀಜ, ರಸಗೊಬ್ಬರ, ಔಷಧಿಗಳು ಎಲ್ಲದಕ್ಕೂ ನಾವು ಸರ್ಕಾರ ಮತ್ತು ಕಾರ್ಪೊರೇಟ್ ಕಂಪನಿಗಳ ಮೇಲೆ ಅವಲಂಬಿತರಾಗಿದ್ದೇವೆ. ಉತ್ತಮ ಬೆಳೆ ಪಸಲು ಬರಬೇಕಾದರೆ ರಾಸಾಯನಿಕ ಗೊಬ್ಬರ, ಔಷಧಿಗಳನ್ನು ಸಿಂಪಣೆ ಮಾಡದೇ ಇದ್ದರೆ ಇಳುವರಿ ಮತ್ತು ಉತ್ತಮ ಬೆಳೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂದರೆ ಖರ್ಚು ದುಬಾರಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೈತರು ಬೆಳೆದ ತರಕಾರಿ, ಹಣ್ಣು, ಹೂ ಮತ್ತು ತೋಟಗಾರಿಕಾ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಸಂಕಷ್ಟಕ್ಕೆ ಗುರಿಯಾದರು. ಈ ಲಾಕ್‌ಡೌನ್‌ನಿಂದಾಗಿ ಬೆಳೆದಿರುವ ಬೆಳೆಗಳನ್ನು ರಸ್ತೆಗೆ ತಂದು ಸುರಿಯುವ ಘಟನೆಗಳನ್ನು ನೋಡಬೇಕಾಯಿತು. ಕೋಲಾರದಲ್ಲಿ ಇತ್ತೀಚೆಗೆ ನೂರಾರು ರೈತರು ಬಹುಕಷ್ಟಪಟ್ಟು ಬೆಳೆದ ಟಮೋಟವನ್ನು ರಸ್ತೆಗೆ ಸುರಿದಿದ್ದನ್ನು ನೋಡಬಹುದು.

ಕೋಲಾರ ಜಿಲ್ಲೆ ಹಾಲು, ರೇಷ್ಮೆ ಮತ್ತು ಮಾವಿನ ಮಡಿಲು ಎಂದೇ ಹೆಸರು ಪಡೆದಿರುವ ಜಿಲ್ಲೆ. ಇಲ್ಲಿ ಬೆಳೆದಂತಹ ಮಾವು, ಟಮೋಟ, ತರಕಾರಿಗಳು ದೆಹಲಿ, ಪುಣೆ, ಮುಂಬೈ, ಬಾಂಗ್ಲಾದೇಶ, ನೇಪಾಳ ಹಾಗೂ ಇತರೆ ರಾಜ್ಯ, ದೇಶಗಳಿಗೂ ರಫ್ತಾಗುತ್ತದೆ. ಸರ್ಕಾರದ ಅವೈಜ್ಞಾನಿಕ ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ರೂ ಬಂಡವಾಳ ಹಾಕಿ ಬೆಳೆದಿದ್ದ ತರಕಾರಿ, ದ್ರಾಕ್ಷಿ, ಟಮೋಟ, ಪಪ್ಪಾಯಗಳಿಗೆ ಬೆಲೆಯಿಲ್ಲದೆ, ಮತ್ತೊಂದು ಕಡೆ ಮಾರುಕಟ್ಟೆಗೆ ಸಾಗಿಸಲು ವಾಹನಗಳ ವ್ಯವಸ್ಥೆಯಿಲ್ಲದೆ ರೈತರು ರಸ್ತೆಗೆ ಸುರಿದರು.

ನಾವು ಕೋಲಾರ ತಾಲ್ಲೂಕು ಹೊಸಮಟ್ಟ ಹಳ್ಳಿ ಗ್ರಾಮದಲ್ಲಿ 10 ಎಕರೆಯಲ್ಲಿ ಟಮೋಟ, 7 ಎಕರೆಯಲ್ಲಿ ಎಲೆಕೋಸು ಬೆಳೆದಿದ್ದೆವು. 1 ಎಕರೆ ಟಮೋಟ ಬೆಳೆಯಲು ಕನಿಷ್ಠ 1.5 ರಿಂದ 2 ಲಕ್ಷದವರೆಗೆ ಬಂಡವಾಳ ಹಾಕಬೇಕು. ಇನ್ನೂ 10 ಎಕರೆಯಲ್ಲಿ ಟಮೋಟ ಬೆಳೆಯಲು ಬಂಡವಾಳ ಎಷ್ಟಾಗಬಹುದು? ಲಾಕ್‌ಡೌನ್ ಸಮಯದಲ್ಲಿ ಕಟಾವಿಗೆ ಬಂದಿದ್ದ ನಮ್ಮದೇ ತೋಟದ 5 ಎಕರೆ ಜಮೀನಿನಲ್ಲಿ ಬೆಳೆದಿದ್ದ ಟಮೋಟಾಗೆ ಮಾರುಕಟ್ಟೆಯಲ್ಲಿ ಬರುವ ಬೆಲೆ ಕನಿಷ್ಠ ಟಮೋಟ ಬಿಡಿಸಿದ ಕೃಷಿ ಕಾರ್ಮಿಕರಿಗೂ ಕೂಲಿ ಕೊಡಲು ಸಾಲದ ಪರಿಸ್ಥಿತಿ ಉಂಟಾಯಿತು. ಆದ ಕಾರಣ ತೋಟದಲ್ಲಿಯೇ ಅದನ್ನು ನೆಲಸಮ ಮಾಡಲಾಯಿತು. ನಮ್ಮಂತಹ ಆದೆಷ್ಟೊ ರೈತರು ಬೆಳೆಗಳನ್ನು ತೋಟಗಳಲ್ಲಿ, ರಸ್ತೆಗಳಲ್ಲಿ ಕೊಳೆಸಿದರು.

ಇನ್ನು 1 ಎಕರೆ ಕೋಸು ಬೆಳೆಯಲು ಕನಿಷ್ಠ 1 ಲಕ್ಷ ಬಂಡವಾಳ ಬೇಕು. ಆದರೆ ಕೊನೆಗೆ 1Kgಗೆ 2-3 ರೂ ಕೊಟ್ಟರೆ ಏನು ಮಾಡುವುದು?

ನಮ್ಮ ಊರು ಕೇವಲ 40-50 ಮನೆಗಳನ್ನು ಹೊಂದಿರುವ ಚಿಕ್ಕ ಗ್ರಾಮ. ಇಲ್ಲಿ ಕೊರೊನಾ ಬರುವ ಮುನ್ನ 5-6 ರೈತ ಕುಟುಂಬಗಳು ಮಾತ್ರ ಬೆಳೆ ಮಾಡುತ್ತಿದ್ದರು. ಕೆ.ಸಿ ವ್ಯಾಲಿ ನೀರು ಮತ್ತು ಕೊರೊನಾ ಬಂದ ಮೇಲೆ ನಗರಗಳಲ್ಲಿದ್ದ ಎಲ್ಲಾ ಯುವಕರು ಹಳ್ಳಿಗಳತ್ತ ಮುಖ ಮಾಡಿ ಮೂಲ ಕಸುಬಾದ ಕೃಷಿ ಮಾಡಲು ಶುರು ಮಾಡಿದರು. ಈಗ ನಮ್ಮೂರಲ್ಲಿ 30-35 ಕುಟುಂಬಗಳು ಕೃಷಿಯನ್ನೆ ನಂಬಿ ಜೀವನ ಮಾಡುತ್ತಿದ್ದಾರೆ. ಯುವ ಜನತೆ ವ್ಯವಸಾಯ ಮಾಡಿದರೆ ಏನೋ ಲಾಭ ಬರುತ್ತದೆಯೆಂದು ಸಾಲ ಮಾಡಿ ಬಂಡವಾಳ ಹಾಕಿದವರ ಗತಿಯೇನು? ಇವರ ನೆರವಿಗೆ ನಿಲ್ಲುವವರು ಯಾರು? ಇನ್ನೂ ಸರ್ಕಾರ ಸಂಕಷ್ಟದಲ್ಲಿರುವ ರೈತರಿಗೆ ಎಷ್ಟು ಪರಿಹಾರ ಕೊಟ್ಟಿದೆ? ರೈತರಿಗೆ ಸೇರಿದ್ದು ಕೇವಲ ಬಿಡಿಗಾಸು ಮಾತ್ರ. ಕೆಲವು ರೈತರಿಗೆ ಅದೂ ಇಲ್ಲ..

ಉದಾಹರಣೆಗೆ ನಾವು ಕೊರೊನಾದಿಂದ ಬೆಲೆಯಿಲ್ಲದೆ ಹೊಲದಲ್ಲಿಯೇ ಬೆಳೆ ನೆಲಸಮ ಮಾಡಿದಾಗ ಪರಿಹಾರದ ಹಣ ನಮಗೆ ಸಿಗಲಿಲ್ಲ. ಅಧಿಕಾರಿಗಳು ಮಾಡಿದ ಸಣ್ಣ ತಪ್ಪಿಗೆ ನಾವು ಪರಿಹಾರ ವಂಚಿತರಾದೆವು.
ಇನ್ನೂ ಮಾವು, ಹೂಗಳು, ರೇಷ್ಮೆ ಬೆಳೆಯುವ ರೈತರ ಪರಿಸ್ಥಿತಿ ಹೇಳತೀರದು. ಯಾವುದೇ ಶುಭ ಸಮಾರಂಭಗಳಿಲ್ಲದೆ ದೇವಸ್ಥಾನಗಳಿಲ್ಲದೆ ಹೂಗಳು ಮಾರಟವಾಗಲೇ ಇಲ್ಲ. ಮಾವು ಬೆಳೆದ ರೈತರು ಪ್ರತಿ ಕೆಜಿಗೆ 2-3ರೂಗಳಂತೆಯೂ ಬೆಲೆ ಸಿಗದೆ ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಮಾಧುಸ್ವಾಮಿಯವರನ್ನು ಪ್ರಶ್ನಿಸಿದ ನಳಿನಿ ಯಾರು? ಅವರು ಯಾವಾಗಲೂ ಹಾಗೇನಾ?

ರಾಜ್ಯದಲ್ಲಿ ಸುಮಾರು 1.20 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಾರೆ. ಇಷ್ಟು ಬೆಳೆದರು ಇದರಿಂದ ರೈತರಿಗೂ ಲಾಭ ಸಿಗಲಿಲ್ಲ. ಅತ್ತ ಕಡೆ ಗ್ರಾಹಕನಿಗೂ ಕಡಿಮೆ ಬೆಲೆಗೆ ಹಣ್ಣು-ತರಕಾರಿ ಸಿಗಲಿಲ್ಲ.

ಮತ್ತೊಂದು ಕಡೆ ಮುಂಗಾರು ಶುರುವಾಯಿತು ಬಿತ್ತನೆಗಳು ಪ್ರಾರಂಭವಾದವು ಉಳುಮೆ ಮಾಡಲು ನೇಗಿಲು ಕಟ್ಟಬೇಕು. ನೇಗಿಲಿಗೆ ಹುಳಿ ಕಟ್ಟಬೇಕು. ವೆಲ್ಡಿಂಗ್ ಅಂಗಡಿಗಳು ತೆರೆಯಲೇ ಇಲ್ಲ. ಉಳುಮೆ ಮಾಡಲು ಟ್ರಾಕ್ಟರ್ ತೆಗೆದುಕೊಂಡು ಹೋದರೆ ಒಂದು ನಟ್ಟು ಬೋಲ್ಟ್ ಇಲ್ಲದೇ ಇದ್ದರೂ ಟ್ರಾಕ್ಟರ್ ಮುಂದೆ ಹೋಗುವುದಿಲ್ಲ. ತೋಟಕ್ಕೆ ನೀರು ಹಾಯಿಸಲು ಹನಿ ನೀರಾವರಿ ಬಳಸುತ್ತೇವೆ. ಪೈಪ್ ಹೊಡೆದು ಹೋಗಿದ್ದು ಅದನ್ನು ಅಂಟಿಸಲು ಗಮ್ ಇಲ್ಲ. ನೀರು ಹೊರ ತೆಗೆಯಲು ಮೋಟರ್ Spare Parts ಇಲ್ಲದೇ ಇದ್ರೆ ಕೆಲಸ ಆಗಲ್ಲ. ಇವುಗಳು ಸದ್ಯಕ್ಕೆ ಲಾಕ್‌ಡೌನ್ ಇರುವುದರಿಂದ ಸಿಗುವುದಿಲ್ಲ. ಹೀಗೆ ಸಣ್ಣ ಸಣ್ಣ ವಸ್ತುಗಳಿಂದ ರೈತರಿಗೆ ಒಡೆತ ಬಿತ್ತು. ಆದರೆ ಆಡಳಿತ ನಡೆಸುವ ಸರ್ಕಾರ ಮತ್ತು IAS  ಅಧಿಕಾರಿಗಳು ಕೇವಲ ಗೊಬ್ಬರದ ಅಂಗಡಿ, ಔಷಧಿ ಅಂಗಡಿಗಳು ತೆರೆದರೆ ಕೃಷಿ ಮಾಡಿ ಬಿಡಬಹುದೆಂಬ ಭ್ರಮೆಯಲ್ಲಿದ್ದಾರೆ.

ಇದರ ನಡುವೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ರಸಗೊಬ್ಬರಗಳು, ಡ್ರಿಪ್ ಪೈಪ್‌ಗಳ ಬೆಲೆ ಏರಿಕೆ ಜೊತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರೈತರು ಜನ ಸಾಮಾನ್ಯರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದರು.

ಇದನ್ನೂ ಓದಿ: ನಳಿನಿ ವಿರುದ್ಧ ಬಿಜೆಪಿ ಐಟಿ ಸೆಲ್: ಒಂದು ಕ್ಲಾಸಿಕ್ ಕೇಸು

ಸರ್ಕಾರವಂತೂ ರೈತರ ನೆರವಿಗೆ ಬರುತ್ತಿಲ್ಲ. ಹಾಗಾಗಿ ರೈತರೇ ಪರ್ಯಾಯ ಆಲೋಚನೆಗಳತ್ತ ಮುಖ ಮಾಡಬೇಕಾಗಿದೆ. ಬೆಳೆದ ತರಕಾರಿಗಳನ್ನು ಮೌಲ್ಯವರ್ಧನೆ ಮಾಡಿ ಬೆಲೆ ಬಂದಾಗ ಮಾರಾಟ ಮಾಡಬೇಕು. ಜೊತೆಗೆ ಸಣ್ಣ ಕೆಲಸಗಳಾದ ಟಮೋಟ ಬೆಳೆಯುವ ರೈತರು ಸಾಸ್, ಉಪ್ಪಿನಕಾಯಿ ಇತರೆ ಉಪಉತ್ಪನ್ನಗಳನ್ನು ತಾವೇ ತಯಾರಿಸಿ ಮಾರಾಟ ಮಾಡುವ ಮೂಲಕ ಪರ್ಯಾಯಗಳತ್ತ ಯೋಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಕೋಲಾರ ಜಿಲ್ಲೆ ವಿಭಿನ್ನ ಎಂದು ಹೇಳಬಹುದು. ಏಕೆಂದರೆ ಇಲ್ಲಿ ಇತರೆ ಜಿಲ್ಲೆಗಳಂತೆ ಕೋಲಾರದಲ್ಲಿ ವಾರ್ಷಿಕ ಬೆಳೆಗಳನ್ನು ಬೆಳೆಯುವುದು ತುಂಬಾ ಕಡಿಮೆ. ಇಲ್ಲಿ ಟಮೋಟೊ ಹಣ್ಣುಗಳು, ಎಲ್ಲಾ ರೀತಿಯ ತರಕಾರಿಗಳು, ಮಾವು, ದ್ರಾಕ್ಷಿ ಇತರೆ ಎಲ್ಲಾ ಬೆಳೆಗಳನ್ನು ಬೆಳೆಯುವುದರಲ್ಲಿ ರೈತರು ಎತ್ತಿದ ಕೈ. ಹಾಗಾಗಿ 2 ತಿಂಗಳು ಲಾಕ್‌ಡೌನ್ ಆದ ಕಾರಣ ಈ ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲದೆ ಸುಮಾರು ಸಾವಿರಾರು ಹೆಕ್ಟೇರ್ ಪ್ರದೇಶದ ಹೊಲಗಳಲ್ಲಿ ಪಸಲನ್ನು ಕಟಾವು ಮಾಡದೆ ಹಾಗೆ ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರಗಳು ರೈತರ ಹಿತ ಕಾಯ್ದು, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಕೊಡುವ ಬದಲು ರೈತ ವಿರೋಧಿ, ಜನವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿ ಮಾಡುವಲ್ಲಿ ನಿರತರಾಗಿರುವುದು ದುರಂತ.

  • ನಳಿನಿ
ನಳಿನಿ
ನಳಿನಿ

(ಕರ್ನಾಟಕ ರಾಜ್ಯ ರೈತ ಸಂಘದ ಯುವ ವಿಭಾಗದ ಸಕ್ರಿಯ ಕಾರ್ಯಕರ್ತೆಯಾಗಿರುವ ನಳಿನಿ ಸ್ವತಃ ಕೃಷಿಯಲ್ಲಿ ತೊಡಗಿಸಿಕೊಂಡಿರುವವರು. ರೈತಪರವಾದ ಎಲ್ಲಾ ಹೋರಾಟದಲ್ಲಿ ಅವರು ಮುಂದಿರುತ್ತಾರೆ)


ಇದನ್ನೂ ಓದಿ: ಕನ್ನಡ ಶಾಲೆ ಕೆಡವಿ ಸ್ಮಾರಕ ನಿರ್ಮಾಣ: ತೀವ್ರಗೊಂಡ ಮೈಸೂರು NTM ಶಾಲೆ ಉಳಿಸಿ ಹೋರಾಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....