Homeಕರೋನಾ ತಲ್ಲಣಕೊರೊನಾ ಲಾಕ್‌ಡೌನ್‌ಗೆ ನಲುಗಿದ ಕೋಲಾರ ಜಿಲ್ಲೆ: ಹುಲುಸಾದ ಬೆಳೆ ಹೊಲದಲ್ಲೇ ನೆಲಸಮ

ಕೊರೊನಾ ಲಾಕ್‌ಡೌನ್‌ಗೆ ನಲುಗಿದ ಕೋಲಾರ ಜಿಲ್ಲೆ: ಹುಲುಸಾದ ಬೆಳೆ ಹೊಲದಲ್ಲೇ ನೆಲಸಮ

ಕೋಲಾರ ಜಿಲ್ಲೆ ಹಾಲು, ರೇಷ್ಮೆ ಮತ್ತು ಮಾವಿನ ಮಡಿಲು ಎಂದೇ ಹೆಸರು ಪಡೆದಿರುವ ಜಿಲ್ಲೆ. ಇಲ್ಲಿ ಟಮೋಟ, ತರಕಾರಿಗಳು ದೆಹಲಿ, ಪುಣೆ, ಮುಂಬೈ, ಬಾಂಗ್ಲಾದೇಶ, ನೇಪಾಳ ಹಾಗೂ ಇತರೆ ರಾಜ್ಯ, ದೇಶಗಳಿಗೂ ರಫ್ತಾಗುತ್ತದೆ.

- Advertisement -
- Advertisement -

ಕೊರೊನಾದಿಂದ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಎಲ್ಲಾ ಕ್ಷೇತ್ರಗಳಿಗೂ ತೊಂದರೆಯಾಗಿದೆ. ಅದರಂತೆ ಕೃಷಿ ಕ್ಷೇತ್ರದ ಮೇಲೂ ತುಂಬಾ ದೊಡ್ಡ ಹೊಡೆತ ಬಿದ್ದಿದೆ. ಆದರೆ ಬೇರೆ ಕ್ಷೇತ್ರಗಳ ಬಗ್ಗೆ ಮಾಧ್ಯಮಗಳಾಗಲಿ, ವ್ಯವಸ್ಥೆ, ಪ್ರಭುತ್ವ ಕೊಟ್ಟ ಗಮನವನ್ನು ಕೃಷಿ ಕ್ಷೇತ್ರಕ್ಕೆ ನೀಡದಿರುವುದು ದುರಂತ. ಕೃಷಿ ಸಂಕಷ್ಟಗಳನ್ನು ಮುನ್ನಲೆಗೆ ತಂದಿದ್ದು ಬಹಳ ಕಡಿಮೆ.

ತೀರಾ ಅನೀರಿಕ್ಷಿತವಾಗಿ ಕೊರೊನಾ ಒಂದನೇ ಅಲೆ ಬಂತು. ನಮ್ಮ ರೈತರಿಗೆ ಇಂತಹ ಪರಿಸ್ಥಿತಿ ಬರುತ್ತೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಆಗಾಗಲೇ ಹೂ, ಹಣ್ಣು, ತರಕಾರಿಗಳನ್ನು, ಎಲ್ಲಾ ರೀತಿಯ ಬೆಳೆಗಳನ್ನು ನಾಟಿ ಮಾಡಲಾಗಿತ್ತು ಮತ್ತು ಒಂದಷ್ಟು ಬೆಳೆಗಳು ಕಟಾವಿಗೂ ಬಂದಿತು. ಬೆಳೆದ ಬೆಳೆಗಳು ಮಾರಾವಾಗದೆ ತೋಟದಲ್ಲಿ, ರಸ್ತೆಗಳಿಗೆ ಸುರಿಯುವ ಪರಿಸ್ಥಿತಿ ನಿರ್ಮಾಣವಾಯಿತು, ಈ ಎಲ್ಲದರ ಹೊಡೆತಗಳನ್ನು ರೈತರು ತಡೆದುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಬಂತು. ಈ ಸಮಯದಲ್ಲಿ ಸರ್ಕಾರ ರೈತರ ರಕ್ಷಣೆಗೆ ನಿಲ್ಲುತ್ತೇವೆ ಎಂಬ ಭರವಸೆ ಕೊಟ್ಟರೆ ಹೊರತು ವಾಸ್ತವದಲ್ಲಿ ರೈತರ ರಕ್ಷಣೆಗೆ ನಿಲ್ಲಲಿಲ್ಲ. ಇನ್ನು ಈ ಸಮಸ್ಯೆಗಳಿಂದ ರೈತರು ಚೇತರಿಸಿಕೊಳ್ಳುವ ಮೊದಲೇ ಕೊರೊನಾ ಎರಡನೇ ಅಲೆ ಬಂತು. ಈ ಅಲೆಗೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿರಲಿಲ್ಲ. ಆಸ್ಪತ್ರೆ, ಬೆಡ್, ಆಕ್ಸಿಜನ್ ಯಾವುದು ಸಿದ್ದತೆ ಮಾಡಿಕೊಂಡಿರಲಿಲ್ಲ. ಇಂತಹ ಸಮಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಘೋಷಣೆ ಮಾಡಿದರು.

ನಾವು ಈಗಾಗಲೇ ಹಸಿರುಕ್ರಾಂತಿ ಎಂಬ ಹೆಸರಿನಲ್ಲಿ ಬಿತ್ತನೆಬೀಜ, ರಸಗೊಬ್ಬರ, ಔಷಧಿಗಳು ಎಲ್ಲದಕ್ಕೂ ನಾವು ಸರ್ಕಾರ ಮತ್ತು ಕಾರ್ಪೊರೇಟ್ ಕಂಪನಿಗಳ ಮೇಲೆ ಅವಲಂಬಿತರಾಗಿದ್ದೇವೆ. ಉತ್ತಮ ಬೆಳೆ ಪಸಲು ಬರಬೇಕಾದರೆ ರಾಸಾಯನಿಕ ಗೊಬ್ಬರ, ಔಷಧಿಗಳನ್ನು ಸಿಂಪಣೆ ಮಾಡದೇ ಇದ್ದರೆ ಇಳುವರಿ ಮತ್ತು ಉತ್ತಮ ಬೆಳೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂದರೆ ಖರ್ಚು ದುಬಾರಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೈತರು ಬೆಳೆದ ತರಕಾರಿ, ಹಣ್ಣು, ಹೂ ಮತ್ತು ತೋಟಗಾರಿಕಾ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಸಂಕಷ್ಟಕ್ಕೆ ಗುರಿಯಾದರು. ಈ ಲಾಕ್‌ಡೌನ್‌ನಿಂದಾಗಿ ಬೆಳೆದಿರುವ ಬೆಳೆಗಳನ್ನು ರಸ್ತೆಗೆ ತಂದು ಸುರಿಯುವ ಘಟನೆಗಳನ್ನು ನೋಡಬೇಕಾಯಿತು. ಕೋಲಾರದಲ್ಲಿ ಇತ್ತೀಚೆಗೆ ನೂರಾರು ರೈತರು ಬಹುಕಷ್ಟಪಟ್ಟು ಬೆಳೆದ ಟಮೋಟವನ್ನು ರಸ್ತೆಗೆ ಸುರಿದಿದ್ದನ್ನು ನೋಡಬಹುದು.

ಕೋಲಾರ ಜಿಲ್ಲೆ ಹಾಲು, ರೇಷ್ಮೆ ಮತ್ತು ಮಾವಿನ ಮಡಿಲು ಎಂದೇ ಹೆಸರು ಪಡೆದಿರುವ ಜಿಲ್ಲೆ. ಇಲ್ಲಿ ಬೆಳೆದಂತಹ ಮಾವು, ಟಮೋಟ, ತರಕಾರಿಗಳು ದೆಹಲಿ, ಪುಣೆ, ಮುಂಬೈ, ಬಾಂಗ್ಲಾದೇಶ, ನೇಪಾಳ ಹಾಗೂ ಇತರೆ ರಾಜ್ಯ, ದೇಶಗಳಿಗೂ ರಫ್ತಾಗುತ್ತದೆ. ಸರ್ಕಾರದ ಅವೈಜ್ಞಾನಿಕ ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ರೂ ಬಂಡವಾಳ ಹಾಕಿ ಬೆಳೆದಿದ್ದ ತರಕಾರಿ, ದ್ರಾಕ್ಷಿ, ಟಮೋಟ, ಪಪ್ಪಾಯಗಳಿಗೆ ಬೆಲೆಯಿಲ್ಲದೆ, ಮತ್ತೊಂದು ಕಡೆ ಮಾರುಕಟ್ಟೆಗೆ ಸಾಗಿಸಲು ವಾಹನಗಳ ವ್ಯವಸ್ಥೆಯಿಲ್ಲದೆ ರೈತರು ರಸ್ತೆಗೆ ಸುರಿದರು.

ನಾವು ಕೋಲಾರ ತಾಲ್ಲೂಕು ಹೊಸಮಟ್ಟ ಹಳ್ಳಿ ಗ್ರಾಮದಲ್ಲಿ 10 ಎಕರೆಯಲ್ಲಿ ಟಮೋಟ, 7 ಎಕರೆಯಲ್ಲಿ ಎಲೆಕೋಸು ಬೆಳೆದಿದ್ದೆವು. 1 ಎಕರೆ ಟಮೋಟ ಬೆಳೆಯಲು ಕನಿಷ್ಠ 1.5 ರಿಂದ 2 ಲಕ್ಷದವರೆಗೆ ಬಂಡವಾಳ ಹಾಕಬೇಕು. ಇನ್ನೂ 10 ಎಕರೆಯಲ್ಲಿ ಟಮೋಟ ಬೆಳೆಯಲು ಬಂಡವಾಳ ಎಷ್ಟಾಗಬಹುದು? ಲಾಕ್‌ಡೌನ್ ಸಮಯದಲ್ಲಿ ಕಟಾವಿಗೆ ಬಂದಿದ್ದ ನಮ್ಮದೇ ತೋಟದ 5 ಎಕರೆ ಜಮೀನಿನಲ್ಲಿ ಬೆಳೆದಿದ್ದ ಟಮೋಟಾಗೆ ಮಾರುಕಟ್ಟೆಯಲ್ಲಿ ಬರುವ ಬೆಲೆ ಕನಿಷ್ಠ ಟಮೋಟ ಬಿಡಿಸಿದ ಕೃಷಿ ಕಾರ್ಮಿಕರಿಗೂ ಕೂಲಿ ಕೊಡಲು ಸಾಲದ ಪರಿಸ್ಥಿತಿ ಉಂಟಾಯಿತು. ಆದ ಕಾರಣ ತೋಟದಲ್ಲಿಯೇ ಅದನ್ನು ನೆಲಸಮ ಮಾಡಲಾಯಿತು. ನಮ್ಮಂತಹ ಆದೆಷ್ಟೊ ರೈತರು ಬೆಳೆಗಳನ್ನು ತೋಟಗಳಲ್ಲಿ, ರಸ್ತೆಗಳಲ್ಲಿ ಕೊಳೆಸಿದರು.

ಇನ್ನು 1 ಎಕರೆ ಕೋಸು ಬೆಳೆಯಲು ಕನಿಷ್ಠ 1 ಲಕ್ಷ ಬಂಡವಾಳ ಬೇಕು. ಆದರೆ ಕೊನೆಗೆ 1Kgಗೆ 2-3 ರೂ ಕೊಟ್ಟರೆ ಏನು ಮಾಡುವುದು?

ನಮ್ಮ ಊರು ಕೇವಲ 40-50 ಮನೆಗಳನ್ನು ಹೊಂದಿರುವ ಚಿಕ್ಕ ಗ್ರಾಮ. ಇಲ್ಲಿ ಕೊರೊನಾ ಬರುವ ಮುನ್ನ 5-6 ರೈತ ಕುಟುಂಬಗಳು ಮಾತ್ರ ಬೆಳೆ ಮಾಡುತ್ತಿದ್ದರು. ಕೆ.ಸಿ ವ್ಯಾಲಿ ನೀರು ಮತ್ತು ಕೊರೊನಾ ಬಂದ ಮೇಲೆ ನಗರಗಳಲ್ಲಿದ್ದ ಎಲ್ಲಾ ಯುವಕರು ಹಳ್ಳಿಗಳತ್ತ ಮುಖ ಮಾಡಿ ಮೂಲ ಕಸುಬಾದ ಕೃಷಿ ಮಾಡಲು ಶುರು ಮಾಡಿದರು. ಈಗ ನಮ್ಮೂರಲ್ಲಿ 30-35 ಕುಟುಂಬಗಳು ಕೃಷಿಯನ್ನೆ ನಂಬಿ ಜೀವನ ಮಾಡುತ್ತಿದ್ದಾರೆ. ಯುವ ಜನತೆ ವ್ಯವಸಾಯ ಮಾಡಿದರೆ ಏನೋ ಲಾಭ ಬರುತ್ತದೆಯೆಂದು ಸಾಲ ಮಾಡಿ ಬಂಡವಾಳ ಹಾಕಿದವರ ಗತಿಯೇನು? ಇವರ ನೆರವಿಗೆ ನಿಲ್ಲುವವರು ಯಾರು? ಇನ್ನೂ ಸರ್ಕಾರ ಸಂಕಷ್ಟದಲ್ಲಿರುವ ರೈತರಿಗೆ ಎಷ್ಟು ಪರಿಹಾರ ಕೊಟ್ಟಿದೆ? ರೈತರಿಗೆ ಸೇರಿದ್ದು ಕೇವಲ ಬಿಡಿಗಾಸು ಮಾತ್ರ. ಕೆಲವು ರೈತರಿಗೆ ಅದೂ ಇಲ್ಲ..

ಉದಾಹರಣೆಗೆ ನಾವು ಕೊರೊನಾದಿಂದ ಬೆಲೆಯಿಲ್ಲದೆ ಹೊಲದಲ್ಲಿಯೇ ಬೆಳೆ ನೆಲಸಮ ಮಾಡಿದಾಗ ಪರಿಹಾರದ ಹಣ ನಮಗೆ ಸಿಗಲಿಲ್ಲ. ಅಧಿಕಾರಿಗಳು ಮಾಡಿದ ಸಣ್ಣ ತಪ್ಪಿಗೆ ನಾವು ಪರಿಹಾರ ವಂಚಿತರಾದೆವು.
ಇನ್ನೂ ಮಾವು, ಹೂಗಳು, ರೇಷ್ಮೆ ಬೆಳೆಯುವ ರೈತರ ಪರಿಸ್ಥಿತಿ ಹೇಳತೀರದು. ಯಾವುದೇ ಶುಭ ಸಮಾರಂಭಗಳಿಲ್ಲದೆ ದೇವಸ್ಥಾನಗಳಿಲ್ಲದೆ ಹೂಗಳು ಮಾರಟವಾಗಲೇ ಇಲ್ಲ. ಮಾವು ಬೆಳೆದ ರೈತರು ಪ್ರತಿ ಕೆಜಿಗೆ 2-3ರೂಗಳಂತೆಯೂ ಬೆಲೆ ಸಿಗದೆ ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಮಾಧುಸ್ವಾಮಿಯವರನ್ನು ಪ್ರಶ್ನಿಸಿದ ನಳಿನಿ ಯಾರು? ಅವರು ಯಾವಾಗಲೂ ಹಾಗೇನಾ?

ರಾಜ್ಯದಲ್ಲಿ ಸುಮಾರು 1.20 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಾರೆ. ಇಷ್ಟು ಬೆಳೆದರು ಇದರಿಂದ ರೈತರಿಗೂ ಲಾಭ ಸಿಗಲಿಲ್ಲ. ಅತ್ತ ಕಡೆ ಗ್ರಾಹಕನಿಗೂ ಕಡಿಮೆ ಬೆಲೆಗೆ ಹಣ್ಣು-ತರಕಾರಿ ಸಿಗಲಿಲ್ಲ.

ಮತ್ತೊಂದು ಕಡೆ ಮುಂಗಾರು ಶುರುವಾಯಿತು ಬಿತ್ತನೆಗಳು ಪ್ರಾರಂಭವಾದವು ಉಳುಮೆ ಮಾಡಲು ನೇಗಿಲು ಕಟ್ಟಬೇಕು. ನೇಗಿಲಿಗೆ ಹುಳಿ ಕಟ್ಟಬೇಕು. ವೆಲ್ಡಿಂಗ್ ಅಂಗಡಿಗಳು ತೆರೆಯಲೇ ಇಲ್ಲ. ಉಳುಮೆ ಮಾಡಲು ಟ್ರಾಕ್ಟರ್ ತೆಗೆದುಕೊಂಡು ಹೋದರೆ ಒಂದು ನಟ್ಟು ಬೋಲ್ಟ್ ಇಲ್ಲದೇ ಇದ್ದರೂ ಟ್ರಾಕ್ಟರ್ ಮುಂದೆ ಹೋಗುವುದಿಲ್ಲ. ತೋಟಕ್ಕೆ ನೀರು ಹಾಯಿಸಲು ಹನಿ ನೀರಾವರಿ ಬಳಸುತ್ತೇವೆ. ಪೈಪ್ ಹೊಡೆದು ಹೋಗಿದ್ದು ಅದನ್ನು ಅಂಟಿಸಲು ಗಮ್ ಇಲ್ಲ. ನೀರು ಹೊರ ತೆಗೆಯಲು ಮೋಟರ್ Spare Parts ಇಲ್ಲದೇ ಇದ್ರೆ ಕೆಲಸ ಆಗಲ್ಲ. ಇವುಗಳು ಸದ್ಯಕ್ಕೆ ಲಾಕ್‌ಡೌನ್ ಇರುವುದರಿಂದ ಸಿಗುವುದಿಲ್ಲ. ಹೀಗೆ ಸಣ್ಣ ಸಣ್ಣ ವಸ್ತುಗಳಿಂದ ರೈತರಿಗೆ ಒಡೆತ ಬಿತ್ತು. ಆದರೆ ಆಡಳಿತ ನಡೆಸುವ ಸರ್ಕಾರ ಮತ್ತು IAS  ಅಧಿಕಾರಿಗಳು ಕೇವಲ ಗೊಬ್ಬರದ ಅಂಗಡಿ, ಔಷಧಿ ಅಂಗಡಿಗಳು ತೆರೆದರೆ ಕೃಷಿ ಮಾಡಿ ಬಿಡಬಹುದೆಂಬ ಭ್ರಮೆಯಲ್ಲಿದ್ದಾರೆ.

ಇದರ ನಡುವೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ರಸಗೊಬ್ಬರಗಳು, ಡ್ರಿಪ್ ಪೈಪ್‌ಗಳ ಬೆಲೆ ಏರಿಕೆ ಜೊತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರೈತರು ಜನ ಸಾಮಾನ್ಯರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದರು.

ಇದನ್ನೂ ಓದಿ: ನಳಿನಿ ವಿರುದ್ಧ ಬಿಜೆಪಿ ಐಟಿ ಸೆಲ್: ಒಂದು ಕ್ಲಾಸಿಕ್ ಕೇಸು

ಸರ್ಕಾರವಂತೂ ರೈತರ ನೆರವಿಗೆ ಬರುತ್ತಿಲ್ಲ. ಹಾಗಾಗಿ ರೈತರೇ ಪರ್ಯಾಯ ಆಲೋಚನೆಗಳತ್ತ ಮುಖ ಮಾಡಬೇಕಾಗಿದೆ. ಬೆಳೆದ ತರಕಾರಿಗಳನ್ನು ಮೌಲ್ಯವರ್ಧನೆ ಮಾಡಿ ಬೆಲೆ ಬಂದಾಗ ಮಾರಾಟ ಮಾಡಬೇಕು. ಜೊತೆಗೆ ಸಣ್ಣ ಕೆಲಸಗಳಾದ ಟಮೋಟ ಬೆಳೆಯುವ ರೈತರು ಸಾಸ್, ಉಪ್ಪಿನಕಾಯಿ ಇತರೆ ಉಪಉತ್ಪನ್ನಗಳನ್ನು ತಾವೇ ತಯಾರಿಸಿ ಮಾರಾಟ ಮಾಡುವ ಮೂಲಕ ಪರ್ಯಾಯಗಳತ್ತ ಯೋಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಕೋಲಾರ ಜಿಲ್ಲೆ ವಿಭಿನ್ನ ಎಂದು ಹೇಳಬಹುದು. ಏಕೆಂದರೆ ಇಲ್ಲಿ ಇತರೆ ಜಿಲ್ಲೆಗಳಂತೆ ಕೋಲಾರದಲ್ಲಿ ವಾರ್ಷಿಕ ಬೆಳೆಗಳನ್ನು ಬೆಳೆಯುವುದು ತುಂಬಾ ಕಡಿಮೆ. ಇಲ್ಲಿ ಟಮೋಟೊ ಹಣ್ಣುಗಳು, ಎಲ್ಲಾ ರೀತಿಯ ತರಕಾರಿಗಳು, ಮಾವು, ದ್ರಾಕ್ಷಿ ಇತರೆ ಎಲ್ಲಾ ಬೆಳೆಗಳನ್ನು ಬೆಳೆಯುವುದರಲ್ಲಿ ರೈತರು ಎತ್ತಿದ ಕೈ. ಹಾಗಾಗಿ 2 ತಿಂಗಳು ಲಾಕ್‌ಡೌನ್ ಆದ ಕಾರಣ ಈ ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲದೆ ಸುಮಾರು ಸಾವಿರಾರು ಹೆಕ್ಟೇರ್ ಪ್ರದೇಶದ ಹೊಲಗಳಲ್ಲಿ ಪಸಲನ್ನು ಕಟಾವು ಮಾಡದೆ ಹಾಗೆ ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರಗಳು ರೈತರ ಹಿತ ಕಾಯ್ದು, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಕೊಡುವ ಬದಲು ರೈತ ವಿರೋಧಿ, ಜನವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿ ಮಾಡುವಲ್ಲಿ ನಿರತರಾಗಿರುವುದು ದುರಂತ.

  • ನಳಿನಿ
ನಳಿನಿ
ನಳಿನಿ

(ಕರ್ನಾಟಕ ರಾಜ್ಯ ರೈತ ಸಂಘದ ಯುವ ವಿಭಾಗದ ಸಕ್ರಿಯ ಕಾರ್ಯಕರ್ತೆಯಾಗಿರುವ ನಳಿನಿ ಸ್ವತಃ ಕೃಷಿಯಲ್ಲಿ ತೊಡಗಿಸಿಕೊಂಡಿರುವವರು. ರೈತಪರವಾದ ಎಲ್ಲಾ ಹೋರಾಟದಲ್ಲಿ ಅವರು ಮುಂದಿರುತ್ತಾರೆ)


ಇದನ್ನೂ ಓದಿ: ಕನ್ನಡ ಶಾಲೆ ಕೆಡವಿ ಸ್ಮಾರಕ ನಿರ್ಮಾಣ: ತೀವ್ರಗೊಂಡ ಮೈಸೂರು NTM ಶಾಲೆ ಉಳಿಸಿ ಹೋರಾಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...