Homeಅಂಕಣಗಳುಜನತೆ ಮೋದಿಯವರ ಸ್ವದೇಶಿ ಘೋಷಣೆಗೆ ಮರುಳಾಗಬಾರದು : ಎಚ್‌.ಎಸ್‌ ದೊರೆಸ್ವಾಮಿ

ಜನತೆ ಮೋದಿಯವರ ಸ್ವದೇಶಿ ಘೋಷಣೆಗೆ ಮರುಳಾಗಬಾರದು : ಎಚ್‌.ಎಸ್‌ ದೊರೆಸ್ವಾಮಿ

- Advertisement -
- Advertisement -

ಮೋದಿಯವರು ಆತ್ಮ ನಿರ್ಭರತೆ, ಸ್ವದೇಶಿ ಸ್ವಾವಲಂಬನೆ, ಸ್ವಾಭಿಮಾನದ ಮಾತನ್ನು ಆಡಿ ಭಾರತೀಯರನ್ನು ದಿಗ್ಬ್ರಮೆಗೊಳಿಸಿದ್ದಾರೆ. ಎಲ್ಲದಕ್ಕೂ ಪರ ರಾಷ್ಟ್ರಗಳನ್ನು ಅವಲಂಬನೆ ಮಾಡುವುದು ದೇಶದೃಷ್ಟಿಯಿಂದ ಸರಿಯಲ್ಲ, ಆತ್ಮ ನಿರ್ಭರತೆಗೆ ಒತ್ತು ಕೊಡಬೇಕು ಎಂಬುದು ಒಪ್ಪತಕ್ಕ ಮಾತು. ಆದರೆ ಈ ಮಾತನ್ನು ಮೋದಿಯವರು ಹರಿಬಿಟ್ಟಿರುವುದು ಅಭಾವ ವೈರಾಗ್ಯ ಕಾರಣದಿಂದ. ಬಹುರಾಷ್ಟ್ರೀಯ ಕಂಪನಿಗಳು ಆರ್ಥಿಕ ದುರ್ಭರತೆಯ ಕಾರಣದಿಂದ ಈ ಸಂದರ್ಭದಲ್ಲಿ ಬಂಡವಾಳ ತಂದು ಭಾರತದಲ್ಲಿ ಸುರಿಯುವುದಿಲ್ಲ ಎಂಬುದನ್ನು ಅರಿತು ಮೋದಿಯವರು ಆತ್ಮ ನಿರ್ಭರತೆಯ ಮಾತನ್ನು ಆಡಿದ್ದಾರೆ.

ಮೋದಿಯವರ ಆತ್ಮ ನಿರ್ಭರತೆಯ ಮಾತು ಗಾಂಧಿಜಿಯವರ ಸ್ವದೇಶಿ ಸಿದ್ಧಾಂತಕ್ಕೆ ಅಪಮಾನ ಮಾಡಿದಂತೆ ತೋರುತ್ತದೆ. ಅಂಕಣಕಾರ ಹರೀಶ್ ಬಿಜೂರ್ ಅವರು ಹೇಳುವಂತೆ ಆತ್ಮ ನಿರ್ಭರತೆ ಮಾತಿಗೆ ಎರಡು ಆಯಾಮಗಳಿವೆ. ಅವೆಂದರೆ ರಾಷ್ಟ್ರೀಯತೆ ಮತ್ತು ಆರ್ಥಿಕ ಸ್ವಾವಲಂಬನೆ. ಮೋದಿಯವರ ಪ್ರಕಾರ ಆತ್ಮ ನಿರ್ಭರತೆ ಬಹುರಾಷ್ಟ್ರೀಯ ಬ್ರಾಂಡಿನಿಂದ ಕೂಡಿದ ಸ್ವದೇಶಿ. ಇದು ಮೋದಿಯವರಿಗೆ ತಿಳಿಯದೆ ಇರುವ ಸಂಗತಿಯಲ್ಲ. ಈಗಾಗಲೇ ಭಾರತದಲ್ಲಿ ಸ್ಥಾಪನೆಯಾಗಿರುವ ಬಹುರಾಷ್ಟ್ರೀಯ ಉದ್ಯಮಗಳನ್ನು ಗಮನದಲ್ಲಿಟ್ಟುಕೊಂಡೇ ಮೋದಿ ಅವರು ಆತ್ಮನಿರ್ಭರತೆ ಮಾತನ್ನು ಹರಿಯಬಿಟ್ಟಿದ್ದಾರೆ. ಈ ಬ್ರಾಂಡಿನ ಉದ್ಯಮಗಳು ಹತ್ತಾರು ವರ್ಷಗಳಿಂದ ಭಾರತದಲ್ಲಿ ನಡೆಯುತ್ತಿವೆ. ಅವೆಲ್ಲ Made In India ಆದ್ದರಿಂದ ಅವು ಸ್ವದೇಶಿ ಎಂಬುದು ಮೋದಿ ಅವರ ವ್ಯಾಖ್ಯಾನ. ಈ ಯೋಜನೆಯನ್ನು ಪ್ರಕಟಿಸಿದ ಮೋದಿಯವರಿಗೆ ನಮ್ಮ ದೇಶದಲ್ಲಿ ಸ್ಥಾಪಿತವಾಗಿರುವ ಎಲ್ಲ ಬಹುರಾಷ್ಟ್ರೀಯ ಕಂಪನಿಗಳೂ ಸ್ಥಳೀಯವೇ.

ಜನರಿಗಂತೂ ಸ್ವದೇಶಿ-ವಿದೇಶಿ ಪದಾರ್ಥಗಳ ಕಲ್ಪನೆಯೇ ಇಲ್ಲ. ಸ್ವದೇಶಿ ಬಳಸಬೇಕೆಂಬ ಆತ್ಮಾಭಿಮಾನವೂ ಇಲ್ಲ. ಉದಾಹರಣೆಗೆ ನೆಸ್‍ಕೆಫೆ, ಕೋಕಾಕೋಲಾ, ಮ್ಯಾಗಿಶಾವಿಗೆಗಳಾಗಲಿ, ಅಡಿದಾಸ್ ಸಿದ್ದಪಡಿಸಿದ ಬಟ್ಟೆಗಳು, ಲಕ್ಸ್, 501 ಸೋಪುಗಳು ಬಾಟಾ ಷೂ ಮತ್ತು ಚಪ್ಪಲಿ ಮುಂತಾದ ದಿನಬಳಕೆಯ ವಸ್ತುಗಳಾಗಲಿ ವಿದೇಶಿಯೇ ಹೊರತು ಸ್ವದೇಶಿ ಅಲ್ಲ ಎಂಬ ಸಾಮಾನ್ಯ ತಿಳುವಳಿಕೆಯೂ ಜನಸಾಮಾನ್ಯರಲ್ಲಿ ಮಾತ್ರವಲ್ಲ ವಿದ್ಯಾವಂತರಲ್ಲಿ ಕೂಡ ಇದ್ದಂತೆ ತೋರುವುದಿಲ್ಲ.

ಜನರ ಈ ಅಜ್ಞಾನವನ್ನು ಮೋದಿಯವರು ಚೆನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಇವಲ್ಲದೆ ನಾವು ಬೆಳಗಿನಿಂದ ರಾತ್ರಿಯವರೆಗೆ ಬಳಸುವ ಟೂತ್‍ಪೇಸ್ಟ್, ಟೂತ್‍ಬ್ರಷ್, ಬಟ್ಟೆಸೋಪು, ಸ್ನಾನದ ಸೋಪು, ಕುಂಕುಮ, ಕಾಡಿಗೆ, ಸ್ನೋ ಪೌಡರ್, ಲಿಪ್‍ಸ್ಟಿಕ್ ಎಲ್ಲ ಪರದೇಶದ ಕಂಪೆನಿಗಳು ತಯಾರಿಸುವವೇ. ನಮ್ಮ ದೇಶದಲ್ಲಿ ತಯಾರಾಗುವ ಬಹುರಾಷ್ಟ್ರೀಯ ಬ್ರಾಂಡ್‍ಗಳ ಪದಾರ್ಥಗಳು ಪರದೇಶದಿಂದ ಆಮದಾಗುವ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ವಸ್ತುಗಳು ಈಗ ಎಲ್ಲೆಲ್ಲೂ ದೊರೆಯುತ್ತವೆ. ಇವೆಲ್ಲ ಸ್ವದೇಶಿ ಅಲ್ಲ ಪರದೇಶಿ ಎಂಬುದನ್ನು ಜನ ತಿಳಿದುಕೊಂಡಿಲ್ಲ.

ಈಗ ಪರದೇಶದ ಕಂಪನಿಗಳು ಭಾರತಕ್ಕೆ ಬಂದು ತಮ್ಮ ಉದ್ಯಮಗಳನ್ನು ಆರಂಭ ಮಾಡಿರುವುದರಿಂದ ಮೋದಿಯವರಿಗೂ ಅವೆಲ್ಲ ಸ್ವದೇಶಿಯಂದೇ ಗೋಚರವಾಗುತ್ತಿದೆ. ಈಗ ಈ ಪರದೇಶಿ ಕಂಪನಿಗಳೂ ಲೋಕಲ್ಲು ದುಡಿಯುವ ಜನವೂ ಲೋಕಲ್. ಈ ಪದಾರ್ಥ ಬಳಸುವವರೂ ಲೋಕಲ್. ಈ ಬಹುರಾಷ್ಟ್ರೀಯ ಕಂಪನಿಗಳು ಬರುವ ಅಪಾರ ಲಾಭವನ್ನು ಡಿವಿಡೆಂಡ್ ರೂಪದಲ್ಲಿ ತಮ್ಮ ಷೇರುದಾರರಿಗೆ ಉದಾರವಾಗಿ ನೀಡಿ ಉಳಿದ ಪುಡಿಗಾಸು ಲಾಭವನ್ನು ಭಾರತದಲ್ಲೇ ಉಳಿಸಿಕೊಳ್ಳುತ್ತವೆ. ನಗನಾಣ್ಯದ ಇತರ ಉದ್ಯಮಗಳು ಅಂದರೆ ಅವು ದೇಶಿಯರು ಸ್ಥಾಪಿಸಿರುವ ಉದ್ಯಮಗಳು. ಇವು ಇಲ್ಲಿ ಉತ್ಪನ್ನವಾಗುವ ಎಲ್ಲ ಪದಾರ್ಥಗಳು ಭಾರತದಲ್ಲೇ ಮಾರಾಟವಾಗುವುದು.

ದಿನಕಳೆದಂತೆ ಈ ಮೂರು ಬಗೆಯ ಸಂಸ್ಥೆಗಳು ತಮ್ಮ ಕಾರ್ಯ ಚಟುವಟಿಕೆಯನ್ನೂ ವಿಸ್ತರಿಸುತ್ತ ಹೋಗುತ್ತವೆ. ವಿದೇಶಗಳಲ್ಲಿಯೇ ಇದ್ದುಕೊಂಡು ಭಾರತಕ್ಕೆ ಕಳಿಸುವ ವಸ್ತುಗಳನ್ನ ತಯಾರಿಸುವ ಕಂಪನಿಗಳು ಸ್ವದೇಶಿ ಬಗೆಗೆ ಒತ್ತುಕೊಟ್ಟು ಕಣ್ಕುಕ್ಕುವ ಜಾಹಿರಾತುಗಳನ್ನೂ ನೀಡಿ ತಮ್ಮ ಸರಕಿಗೆ ಮಾರುಕಟ್ಟೆ ವಿಸ್ತರಿಸುತ್ತದೆ. ದೇಶಿ ಕಂಪನಿಗಳು ದೇಶಿ ಪದಾರ್ಥಗಳನ್ನೇ ಬಳಸಿ ಎಂದು vocal to local ಘೋಷಣೆಯನ್ನು ಮೊಳಗಿಸುತ್ತದೆ. ಮೋದಿಯವರು ಎಂದಿನಂತೆ ಹೊಸ ಘೋಷಣೆಯೊಂದನ್ನು ಹರಿಯ ಬಿಟ್ಟಿದ್ದಾರೆ. ಇದು ಬರಿಯ ಘೋಷಣೆಯೇ ಹೊರತು ನಿಜವಾದ ಸ್ವದೇಶಿ ಚಳುವಳಿ ಕಟ್ಟುವ ಘೋಷಣೆಯಲ್ಲ.

ಚಳುವಳಿಯನ್ನು ಜನತೆ ಮಾತ್ರ ನಡೆಸಬಲ್ಲರು ಎಂಬುದು ಮೋದಿಯವರಿಗೆ ಗೊತ್ತು. ಜನತೆಯನ್ನು ಬೆಸ್ತು ಬೀಳಿಸಲು ಹೂಡಿರುವ ತಂತ್ರ ಇದು. ಖಂಡಿತವಾಗಿ ಇದು ಮೋದಿಯವರ ಫೋಕಸ್ ಚಳುವಳಿಯಲ್ಲ.

ಜನತೆ ಮೋದಿಯವರ ಘೋಷಣೆಗೆ ಮರುಳಾಗಬಾರದು. ಸ್ವದೇಶಿ ಬಗೆಗೆ ಗಾಂಧಿಜಿಗಿದ್ದ ಆಸೆ ಮೋದಿಯವರಿಗೆ ಖಂಡಿತ ಇಲ್ಲ. ಭಾರತದ ಆರ್ಥಿಕತೆ ಕುಸಿಯುತ್ತಿರುವಾಗ ಜನರ ಮನಸ್ಸನ್ನು ಬೇರೆ ಕಡೆಗೆ ಸೆಳೆಯುವ ಮತ್ತೊಂದು ತಂತ್ರ ಇದು.


ಇದನ್ನು ಓದಿ: ಮೋದಿ 2.1: ಹಿಂದೂ ರಾಷ್ಟ್ರೀಯವಾದದ ವಿಜೃಂಭಣೆಯೇ ಮೋದಿ ಸರ್ಕಾರದ ಸಾಧನೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯ: ಯೋಗಿ ಆದಿತ್ಯನಾಥ್ ಸೇರಿ 8 ಅಧಿಕಾರಿಗಳ ನಿರ್ಬಂಧಕ್ಕೆ ಕೆನಡಾ ಮಾನವ ಹಕ್ಕುಗಳ ಸಂಸ್ಥೆ ಆಗ್ರಹ

ಉತ್ತರ ಪ್ರದೇಶದಲ್ಲಿ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ನಡೆಸಲಾಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ರಾಜ್ಯ ಬೆಂಬಲಿತ ದೌರ್ಜನ್ಯಗಳನ್ನು ಖಂಡಿಸಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಎಂಟು ಪ್ರಮುಖ...

SIR: ಬೆಂಗಳೂರಿನ ಸರ್ವಜ್ಞನಗರದ ಒಂದೇ ಬೂತ್‌ನಲ್ಲಿ ಶೇ.93.71ರಷ್ಟು ಮತದಾರರ ಹೆಸರು ನಾಪತ್ತೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಹೆಸರಿನಲ್ಲಿ ರಾಜಧಾನಿ ಬೆಂಗಳೂರಿನ ಸರ್ವಜ್ಞನಗರ ಕ್ಷೇತ್ರದ ಒಂದೇ ಮತಗಟ್ಟೆಯಲ್ಲಿ ಬರೋಬ್ಬರಿ ಶೇ. 93.71ರಷ್ಟು ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆಯಲಾಗಿದೆ ಎಂಬ ಆಘಾತಕಾರಿ ಸಂಗತಿಯೊಂದು...

ASDDO ಪಟ್ಟಿ ಸಾರ್ವಜನಿಕ ಪ್ರಕಟಣೆ ಬಗ್ಗೆ ಚುನಾವಣಾ ಆಯೋಗ ನಿರ್ಲಕ್ಷ್ಯ! ಆರೋಪ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬರೋಬ್ಬರಿ 1.08 ಕೋಟಿ ಮತದಾರರ ಹೆಸರನ್ನು ಎಎಸ್‌ಡಿಡಿಒ (ASDDO) ಪಟ್ಟಿಗೆ ಸೇರಿಸಿ ಆತಂಕ ಸೃಷ್ಟಿಸಿದ್ದ ಚುನಾವಣಾ ಆಯೋಗ, ಈಗ ಆ ಪಟ್ಟಿಯ ಸಾರ್ವಜನಿಕ ಪ್ರಕಟಣೆಯ...

SIR: 62 ವರ್ಷದ ಜೀವಂತ ವ್ಯಕ್ತಿಯನ್ನು ‘ಮೃತ’ ಎಂದು ಪಟ್ಟಿ ಮಾಡಿದ ಆಯೋಗದ ಕುತಂತ್ರ ಬಯಲು

ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಜಾಪ್ರಭುತ್ವದ ಮೂಲ ಆಶಯಕ್ಕೇ ಮಾರಕವಾಗಿ ಪರಿಣಮಿಸುತ್ತಿದೆ. ದೋಷಮುಕ್ತ ಪಟ್ಟಿ ಸಿದ್ಧಪಡಿಸುವ ನೆಪದಲ್ಲಿ ಚುನಾವಣಾ ಆಯೋಗವು ಬರೋಬ್ಬರಿ 1.08 ಕೋಟಿ ಮತದಾರರನ್ನು...

‘ಸಿದ್ದಾರ್ಥ ವಿಹಾರ ಟ್ರಸ್ಟ್’ ನ ದಾಖಲೆ ನೀಡುತ್ತೇನೆ: ಆರ್‌ಎಸ್‌ಎಸ್, ರಾಮಮಂದಿರದ ಲೆಕ್ಕ ನೀಡಲು ಸಿದ್ಧವಿದ್ದೀರಾ?: ಬಿಜೆಪಿ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ಸವಾಲು

ಬೆಂಗಳೂರು: ‘ಸಿದ್ದಾರ್ಥ ವಿಹಾರ ಟ್ರಸ್ಟ್‌’ ವಿರುದ್ಧ ಭೂ ಅಕ್ರಮದ ಆರೋಪ ಮಾಡಿ ತಮ್ಮ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೇರ...

ಕ್ಯೂಬಾ ಎಂದರೆ ಫಿಡೆಲ್, ಅಮೆರಿಕದ ಕುತಂತ್ರದ ವಿರುದ್ಧ ಪುಟ್ಟ ರಾಷ್ಟ್ರ ಕ್ಯೂಬಾದ ಸುದೀರ್ಘ ಕ್ರಾಂತಿ

ಆಗಸ್ಟ್ 13, 2026 ರಂದು ಕ್ಯೂಬಾ ತನ್ನ ಕ್ರಾಂತಿಕಾರಿ ನಾಯಕ, ಕಮಾಂಡರ್-ಇನ್-ಚೀಫ್ ಫಿಡೆಲ್ ಕ್ಯಾಸ್ಟ್ರೋ ರೂಜ್ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿದೆ. ಐದು ದಶಕಗಳ ಕಾಲ ದೇಶವನ್ನು ಮುನ್ನಡೆಸಿದ ನಾಯಕನ ಶಾಶ್ವತ ಸಿದ್ಧಾಂತಗಳು...

‘ರೋಹಿತ್ ಕಾಯ್ದೆ’ ಜಾರಿಗೆ ಆಗ್ರಹ: ಚಾಲ್ತಿಯಲ್ಲಿರುವ ಅಧಿವೇಶನದಲ್ಲೇ ವಿಧೇಯಕ ಮಂಡಿಸಲು ಸರ್ಕಾರಕ್ಕೆ ‘ರೋಹಿತ್ ಕಾಯ್ದೆಗಾಗಿ ಜನಾಂದೋಲನ’ ಸಂಘಟನೆ ಒತ್ತಾಯ

ಬೆಂಗಳೂರು: ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಾಂಸ್ಥಿಕ ಜಾತಿ ತಾರತಮ್ಯ, ಕಿರುಕುಳ ಹಾಗೂ ವಂಚನೆಯನ್ನು ತಡೆಗಟ್ಟಲು ಅತ್ಯಂತ ನಿರ್ಣಾಯಕವಾಗಿರುವ 'ಕರ್ನಾಟಕ ರೋಹಿತ್ ವೇಮುಲಾ...

SIR: ತೆಲಂಗಾಣ ಸರ್ಕಾರ ಮತದಾರರಿಗೆ ನೀಡಿದ್ದ FRC ಯನ್ನು , ನಿರಾಕರಿಸಿದ ಕೇಂದ್ರ ಚುನಾವಣಾ ಆಯೋಗ

ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ತೆಲಂಗಾಣ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿದ್ದ ‘ಫ್ಯಾಮಿಲಿ ರಿಜಿಸ್ಟರ್ ಸರ್ಟಿಫಿಕೇಟ್’ (FRC) ಅನ್ನು ಮತದಾರರ ದಾಖಲೆಯನ್ನಾಗಿ ಸ್ವೀಕರಿಸಲು ಕೇಂದ್ರ ಚುನಾವಣಾ ಆಯೋಗ ನಿರಾಕರಿಸಿದೆ. FRC...

ಬಿಹಾರ| ಗ್ರಾಮ ತೊರೆಯಿರಿ ಅಥವಾ ‘ಘರ್ ವಾಪ್ಸಿ’ಯಾಗಿ; ಹಿಂದುತ್ವ ಗುಂಪಿನಿಂದ ಕ್ರೈಸ್ತ ಕಟುಂಬಗಳಿಗೆ ಬೆದರಿಕೆ

ಬಿಹಾರದ ಭಾಗಲ್ಪುರ ಜಿಲ್ಲೆಯ ಗೋಪಾಲಪುರ ಗ್ರಾಮದ 42 ಕ್ರಿಶ್ಚಿಯನ್ ಕುಟುಂಬಗಳಿಗೆ ಹಿಂದುತ್ವ ಗುಂಪಿನ ಸದಸ್ಯರು ಬೆದರಿಕೆ ಹಾಕಿದ್ದಾರೆ ಎಂದು 'ಕ್ಲಾರಿಯನ್ ಇಂಡಿಯಾ' ನ್ಯೂಸ್‌ ಪೋರ್ಟ್ಲ್ ವರದಿ ಮಾಡಿದೆ. 'ಘರ್ ವಾಪ್ಸಿ'ಯಾಗಿ ಅಥವಾ ಗ್ರಾಮ...

ಭೂಮಾನಂದ ಹತ್ಯೆ: ಕೊಲೆಗಾರರ ಪರ ನಿಂತ ‘ವಾಲ್ಮೀಕಿ ನಾಯಕ ಸಂಘ’ದ ವಿರುದ್ಧ ಆಕ್ರೋಶ: ಆಗಸ್ಟ್ 15ಕ್ಕೆ ಕಪ್ಪುಪಟ್ಟಿ ಪ್ರದರ್ಶನ, ಬೈಕ್ ರ್ಯಾಲಿಗೆ ಕರೆ

ರಾಯಚೂರು: ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಬಹುಜನ ಮುಖಂಡ ಭೂಮಾನಂದ ಅವರ ಬರ್ಬರ ಕಗ್ಗೋಲೆಯನ್ನು ಖಂಡಿಸಿ, ಕೊಲೆಗಡುಕರ ಪರವಾಗಿ ನಿಂತಿರುವ ಸಂಘಟನೆಗಳು ಹಾಗೂ ಮೌನ ವಹಿಸಿರುವ ಜನಪ್ರತಿನಿಧಿಗಳ ವಿರುದ್ಧ 'ಬಹುಜನ ಮುಖಂಡ ಭೂಮಾನಂದನ...