Homeಅಂಕಣಗಳುಜನತೆ ಮೋದಿಯವರ ಸ್ವದೇಶಿ ಘೋಷಣೆಗೆ ಮರುಳಾಗಬಾರದು : ಎಚ್‌.ಎಸ್‌ ದೊರೆಸ್ವಾಮಿ

ಜನತೆ ಮೋದಿಯವರ ಸ್ವದೇಶಿ ಘೋಷಣೆಗೆ ಮರುಳಾಗಬಾರದು : ಎಚ್‌.ಎಸ್‌ ದೊರೆಸ್ವಾಮಿ

- Advertisement -
- Advertisement -

ಮೋದಿಯವರು ಆತ್ಮ ನಿರ್ಭರತೆ, ಸ್ವದೇಶಿ ಸ್ವಾವಲಂಬನೆ, ಸ್ವಾಭಿಮಾನದ ಮಾತನ್ನು ಆಡಿ ಭಾರತೀಯರನ್ನು ದಿಗ್ಬ್ರಮೆಗೊಳಿಸಿದ್ದಾರೆ. ಎಲ್ಲದಕ್ಕೂ ಪರ ರಾಷ್ಟ್ರಗಳನ್ನು ಅವಲಂಬನೆ ಮಾಡುವುದು ದೇಶದೃಷ್ಟಿಯಿಂದ ಸರಿಯಲ್ಲ, ಆತ್ಮ ನಿರ್ಭರತೆಗೆ ಒತ್ತು ಕೊಡಬೇಕು ಎಂಬುದು ಒಪ್ಪತಕ್ಕ ಮಾತು. ಆದರೆ ಈ ಮಾತನ್ನು ಮೋದಿಯವರು ಹರಿಬಿಟ್ಟಿರುವುದು ಅಭಾವ ವೈರಾಗ್ಯ ಕಾರಣದಿಂದ. ಬಹುರಾಷ್ಟ್ರೀಯ ಕಂಪನಿಗಳು ಆರ್ಥಿಕ ದುರ್ಭರತೆಯ ಕಾರಣದಿಂದ ಈ ಸಂದರ್ಭದಲ್ಲಿ ಬಂಡವಾಳ ತಂದು ಭಾರತದಲ್ಲಿ ಸುರಿಯುವುದಿಲ್ಲ ಎಂಬುದನ್ನು ಅರಿತು ಮೋದಿಯವರು ಆತ್ಮ ನಿರ್ಭರತೆಯ ಮಾತನ್ನು ಆಡಿದ್ದಾರೆ.

ಮೋದಿಯವರ ಆತ್ಮ ನಿರ್ಭರತೆಯ ಮಾತು ಗಾಂಧಿಜಿಯವರ ಸ್ವದೇಶಿ ಸಿದ್ಧಾಂತಕ್ಕೆ ಅಪಮಾನ ಮಾಡಿದಂತೆ ತೋರುತ್ತದೆ. ಅಂಕಣಕಾರ ಹರೀಶ್ ಬಿಜೂರ್ ಅವರು ಹೇಳುವಂತೆ ಆತ್ಮ ನಿರ್ಭರತೆ ಮಾತಿಗೆ ಎರಡು ಆಯಾಮಗಳಿವೆ. ಅವೆಂದರೆ ರಾಷ್ಟ್ರೀಯತೆ ಮತ್ತು ಆರ್ಥಿಕ ಸ್ವಾವಲಂಬನೆ. ಮೋದಿಯವರ ಪ್ರಕಾರ ಆತ್ಮ ನಿರ್ಭರತೆ ಬಹುರಾಷ್ಟ್ರೀಯ ಬ್ರಾಂಡಿನಿಂದ ಕೂಡಿದ ಸ್ವದೇಶಿ. ಇದು ಮೋದಿಯವರಿಗೆ ತಿಳಿಯದೆ ಇರುವ ಸಂಗತಿಯಲ್ಲ. ಈಗಾಗಲೇ ಭಾರತದಲ್ಲಿ ಸ್ಥಾಪನೆಯಾಗಿರುವ ಬಹುರಾಷ್ಟ್ರೀಯ ಉದ್ಯಮಗಳನ್ನು ಗಮನದಲ್ಲಿಟ್ಟುಕೊಂಡೇ ಮೋದಿ ಅವರು ಆತ್ಮನಿರ್ಭರತೆ ಮಾತನ್ನು ಹರಿಯಬಿಟ್ಟಿದ್ದಾರೆ. ಈ ಬ್ರಾಂಡಿನ ಉದ್ಯಮಗಳು ಹತ್ತಾರು ವರ್ಷಗಳಿಂದ ಭಾರತದಲ್ಲಿ ನಡೆಯುತ್ತಿವೆ. ಅವೆಲ್ಲ Made In India ಆದ್ದರಿಂದ ಅವು ಸ್ವದೇಶಿ ಎಂಬುದು ಮೋದಿ ಅವರ ವ್ಯಾಖ್ಯಾನ. ಈ ಯೋಜನೆಯನ್ನು ಪ್ರಕಟಿಸಿದ ಮೋದಿಯವರಿಗೆ ನಮ್ಮ ದೇಶದಲ್ಲಿ ಸ್ಥಾಪಿತವಾಗಿರುವ ಎಲ್ಲ ಬಹುರಾಷ್ಟ್ರೀಯ ಕಂಪನಿಗಳೂ ಸ್ಥಳೀಯವೇ.

ಜನರಿಗಂತೂ ಸ್ವದೇಶಿ-ವಿದೇಶಿ ಪದಾರ್ಥಗಳ ಕಲ್ಪನೆಯೇ ಇಲ್ಲ. ಸ್ವದೇಶಿ ಬಳಸಬೇಕೆಂಬ ಆತ್ಮಾಭಿಮಾನವೂ ಇಲ್ಲ. ಉದಾಹರಣೆಗೆ ನೆಸ್‍ಕೆಫೆ, ಕೋಕಾಕೋಲಾ, ಮ್ಯಾಗಿಶಾವಿಗೆಗಳಾಗಲಿ, ಅಡಿದಾಸ್ ಸಿದ್ದಪಡಿಸಿದ ಬಟ್ಟೆಗಳು, ಲಕ್ಸ್, 501 ಸೋಪುಗಳು ಬಾಟಾ ಷೂ ಮತ್ತು ಚಪ್ಪಲಿ ಮುಂತಾದ ದಿನಬಳಕೆಯ ವಸ್ತುಗಳಾಗಲಿ ವಿದೇಶಿಯೇ ಹೊರತು ಸ್ವದೇಶಿ ಅಲ್ಲ ಎಂಬ ಸಾಮಾನ್ಯ ತಿಳುವಳಿಕೆಯೂ ಜನಸಾಮಾನ್ಯರಲ್ಲಿ ಮಾತ್ರವಲ್ಲ ವಿದ್ಯಾವಂತರಲ್ಲಿ ಕೂಡ ಇದ್ದಂತೆ ತೋರುವುದಿಲ್ಲ.

ಜನರ ಈ ಅಜ್ಞಾನವನ್ನು ಮೋದಿಯವರು ಚೆನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಇವಲ್ಲದೆ ನಾವು ಬೆಳಗಿನಿಂದ ರಾತ್ರಿಯವರೆಗೆ ಬಳಸುವ ಟೂತ್‍ಪೇಸ್ಟ್, ಟೂತ್‍ಬ್ರಷ್, ಬಟ್ಟೆಸೋಪು, ಸ್ನಾನದ ಸೋಪು, ಕುಂಕುಮ, ಕಾಡಿಗೆ, ಸ್ನೋ ಪೌಡರ್, ಲಿಪ್‍ಸ್ಟಿಕ್ ಎಲ್ಲ ಪರದೇಶದ ಕಂಪೆನಿಗಳು ತಯಾರಿಸುವವೇ. ನಮ್ಮ ದೇಶದಲ್ಲಿ ತಯಾರಾಗುವ ಬಹುರಾಷ್ಟ್ರೀಯ ಬ್ರಾಂಡ್‍ಗಳ ಪದಾರ್ಥಗಳು ಪರದೇಶದಿಂದ ಆಮದಾಗುವ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ವಸ್ತುಗಳು ಈಗ ಎಲ್ಲೆಲ್ಲೂ ದೊರೆಯುತ್ತವೆ. ಇವೆಲ್ಲ ಸ್ವದೇಶಿ ಅಲ್ಲ ಪರದೇಶಿ ಎಂಬುದನ್ನು ಜನ ತಿಳಿದುಕೊಂಡಿಲ್ಲ.

ಈಗ ಪರದೇಶದ ಕಂಪನಿಗಳು ಭಾರತಕ್ಕೆ ಬಂದು ತಮ್ಮ ಉದ್ಯಮಗಳನ್ನು ಆರಂಭ ಮಾಡಿರುವುದರಿಂದ ಮೋದಿಯವರಿಗೂ ಅವೆಲ್ಲ ಸ್ವದೇಶಿಯಂದೇ ಗೋಚರವಾಗುತ್ತಿದೆ. ಈಗ ಈ ಪರದೇಶಿ ಕಂಪನಿಗಳೂ ಲೋಕಲ್ಲು ದುಡಿಯುವ ಜನವೂ ಲೋಕಲ್. ಈ ಪದಾರ್ಥ ಬಳಸುವವರೂ ಲೋಕಲ್. ಈ ಬಹುರಾಷ್ಟ್ರೀಯ ಕಂಪನಿಗಳು ಬರುವ ಅಪಾರ ಲಾಭವನ್ನು ಡಿವಿಡೆಂಡ್ ರೂಪದಲ್ಲಿ ತಮ್ಮ ಷೇರುದಾರರಿಗೆ ಉದಾರವಾಗಿ ನೀಡಿ ಉಳಿದ ಪುಡಿಗಾಸು ಲಾಭವನ್ನು ಭಾರತದಲ್ಲೇ ಉಳಿಸಿಕೊಳ್ಳುತ್ತವೆ. ನಗನಾಣ್ಯದ ಇತರ ಉದ್ಯಮಗಳು ಅಂದರೆ ಅವು ದೇಶಿಯರು ಸ್ಥಾಪಿಸಿರುವ ಉದ್ಯಮಗಳು. ಇವು ಇಲ್ಲಿ ಉತ್ಪನ್ನವಾಗುವ ಎಲ್ಲ ಪದಾರ್ಥಗಳು ಭಾರತದಲ್ಲೇ ಮಾರಾಟವಾಗುವುದು.

ದಿನಕಳೆದಂತೆ ಈ ಮೂರು ಬಗೆಯ ಸಂಸ್ಥೆಗಳು ತಮ್ಮ ಕಾರ್ಯ ಚಟುವಟಿಕೆಯನ್ನೂ ವಿಸ್ತರಿಸುತ್ತ ಹೋಗುತ್ತವೆ. ವಿದೇಶಗಳಲ್ಲಿಯೇ ಇದ್ದುಕೊಂಡು ಭಾರತಕ್ಕೆ ಕಳಿಸುವ ವಸ್ತುಗಳನ್ನ ತಯಾರಿಸುವ ಕಂಪನಿಗಳು ಸ್ವದೇಶಿ ಬಗೆಗೆ ಒತ್ತುಕೊಟ್ಟು ಕಣ್ಕುಕ್ಕುವ ಜಾಹಿರಾತುಗಳನ್ನೂ ನೀಡಿ ತಮ್ಮ ಸರಕಿಗೆ ಮಾರುಕಟ್ಟೆ ವಿಸ್ತರಿಸುತ್ತದೆ. ದೇಶಿ ಕಂಪನಿಗಳು ದೇಶಿ ಪದಾರ್ಥಗಳನ್ನೇ ಬಳಸಿ ಎಂದು vocal to local ಘೋಷಣೆಯನ್ನು ಮೊಳಗಿಸುತ್ತದೆ. ಮೋದಿಯವರು ಎಂದಿನಂತೆ ಹೊಸ ಘೋಷಣೆಯೊಂದನ್ನು ಹರಿಯ ಬಿಟ್ಟಿದ್ದಾರೆ. ಇದು ಬರಿಯ ಘೋಷಣೆಯೇ ಹೊರತು ನಿಜವಾದ ಸ್ವದೇಶಿ ಚಳುವಳಿ ಕಟ್ಟುವ ಘೋಷಣೆಯಲ್ಲ.

ಚಳುವಳಿಯನ್ನು ಜನತೆ ಮಾತ್ರ ನಡೆಸಬಲ್ಲರು ಎಂಬುದು ಮೋದಿಯವರಿಗೆ ಗೊತ್ತು. ಜನತೆಯನ್ನು ಬೆಸ್ತು ಬೀಳಿಸಲು ಹೂಡಿರುವ ತಂತ್ರ ಇದು. ಖಂಡಿತವಾಗಿ ಇದು ಮೋದಿಯವರ ಫೋಕಸ್ ಚಳುವಳಿಯಲ್ಲ.

ಜನತೆ ಮೋದಿಯವರ ಘೋಷಣೆಗೆ ಮರುಳಾಗಬಾರದು. ಸ್ವದೇಶಿ ಬಗೆಗೆ ಗಾಂಧಿಜಿಗಿದ್ದ ಆಸೆ ಮೋದಿಯವರಿಗೆ ಖಂಡಿತ ಇಲ್ಲ. ಭಾರತದ ಆರ್ಥಿಕತೆ ಕುಸಿಯುತ್ತಿರುವಾಗ ಜನರ ಮನಸ್ಸನ್ನು ಬೇರೆ ಕಡೆಗೆ ಸೆಳೆಯುವ ಮತ್ತೊಂದು ತಂತ್ರ ಇದು.


ಇದನ್ನು ಓದಿ: ಮೋದಿ 2.1: ಹಿಂದೂ ರಾಷ್ಟ್ರೀಯವಾದದ ವಿಜೃಂಭಣೆಯೇ ಮೋದಿ ಸರ್ಕಾರದ ಸಾಧನೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...