Homeಅಂಕಣಗಳುಜನತೆ ಮೋದಿಯವರ ಸ್ವದೇಶಿ ಘೋಷಣೆಗೆ ಮರುಳಾಗಬಾರದು : ಎಚ್‌.ಎಸ್‌ ದೊರೆಸ್ವಾಮಿ

ಜನತೆ ಮೋದಿಯವರ ಸ್ವದೇಶಿ ಘೋಷಣೆಗೆ ಮರುಳಾಗಬಾರದು : ಎಚ್‌.ಎಸ್‌ ದೊರೆಸ್ವಾಮಿ

- Advertisement -
- Advertisement -

ಮೋದಿಯವರು ಆತ್ಮ ನಿರ್ಭರತೆ, ಸ್ವದೇಶಿ ಸ್ವಾವಲಂಬನೆ, ಸ್ವಾಭಿಮಾನದ ಮಾತನ್ನು ಆಡಿ ಭಾರತೀಯರನ್ನು ದಿಗ್ಬ್ರಮೆಗೊಳಿಸಿದ್ದಾರೆ. ಎಲ್ಲದಕ್ಕೂ ಪರ ರಾಷ್ಟ್ರಗಳನ್ನು ಅವಲಂಬನೆ ಮಾಡುವುದು ದೇಶದೃಷ್ಟಿಯಿಂದ ಸರಿಯಲ್ಲ, ಆತ್ಮ ನಿರ್ಭರತೆಗೆ ಒತ್ತು ಕೊಡಬೇಕು ಎಂಬುದು ಒಪ್ಪತಕ್ಕ ಮಾತು. ಆದರೆ ಈ ಮಾತನ್ನು ಮೋದಿಯವರು ಹರಿಬಿಟ್ಟಿರುವುದು ಅಭಾವ ವೈರಾಗ್ಯ ಕಾರಣದಿಂದ. ಬಹುರಾಷ್ಟ್ರೀಯ ಕಂಪನಿಗಳು ಆರ್ಥಿಕ ದುರ್ಭರತೆಯ ಕಾರಣದಿಂದ ಈ ಸಂದರ್ಭದಲ್ಲಿ ಬಂಡವಾಳ ತಂದು ಭಾರತದಲ್ಲಿ ಸುರಿಯುವುದಿಲ್ಲ ಎಂಬುದನ್ನು ಅರಿತು ಮೋದಿಯವರು ಆತ್ಮ ನಿರ್ಭರತೆಯ ಮಾತನ್ನು ಆಡಿದ್ದಾರೆ.

ಮೋದಿಯವರ ಆತ್ಮ ನಿರ್ಭರತೆಯ ಮಾತು ಗಾಂಧಿಜಿಯವರ ಸ್ವದೇಶಿ ಸಿದ್ಧಾಂತಕ್ಕೆ ಅಪಮಾನ ಮಾಡಿದಂತೆ ತೋರುತ್ತದೆ. ಅಂಕಣಕಾರ ಹರೀಶ್ ಬಿಜೂರ್ ಅವರು ಹೇಳುವಂತೆ ಆತ್ಮ ನಿರ್ಭರತೆ ಮಾತಿಗೆ ಎರಡು ಆಯಾಮಗಳಿವೆ. ಅವೆಂದರೆ ರಾಷ್ಟ್ರೀಯತೆ ಮತ್ತು ಆರ್ಥಿಕ ಸ್ವಾವಲಂಬನೆ. ಮೋದಿಯವರ ಪ್ರಕಾರ ಆತ್ಮ ನಿರ್ಭರತೆ ಬಹುರಾಷ್ಟ್ರೀಯ ಬ್ರಾಂಡಿನಿಂದ ಕೂಡಿದ ಸ್ವದೇಶಿ. ಇದು ಮೋದಿಯವರಿಗೆ ತಿಳಿಯದೆ ಇರುವ ಸಂಗತಿಯಲ್ಲ. ಈಗಾಗಲೇ ಭಾರತದಲ್ಲಿ ಸ್ಥಾಪನೆಯಾಗಿರುವ ಬಹುರಾಷ್ಟ್ರೀಯ ಉದ್ಯಮಗಳನ್ನು ಗಮನದಲ್ಲಿಟ್ಟುಕೊಂಡೇ ಮೋದಿ ಅವರು ಆತ್ಮನಿರ್ಭರತೆ ಮಾತನ್ನು ಹರಿಯಬಿಟ್ಟಿದ್ದಾರೆ. ಈ ಬ್ರಾಂಡಿನ ಉದ್ಯಮಗಳು ಹತ್ತಾರು ವರ್ಷಗಳಿಂದ ಭಾರತದಲ್ಲಿ ನಡೆಯುತ್ತಿವೆ. ಅವೆಲ್ಲ Made In India ಆದ್ದರಿಂದ ಅವು ಸ್ವದೇಶಿ ಎಂಬುದು ಮೋದಿ ಅವರ ವ್ಯಾಖ್ಯಾನ. ಈ ಯೋಜನೆಯನ್ನು ಪ್ರಕಟಿಸಿದ ಮೋದಿಯವರಿಗೆ ನಮ್ಮ ದೇಶದಲ್ಲಿ ಸ್ಥಾಪಿತವಾಗಿರುವ ಎಲ್ಲ ಬಹುರಾಷ್ಟ್ರೀಯ ಕಂಪನಿಗಳೂ ಸ್ಥಳೀಯವೇ.

ಜನರಿಗಂತೂ ಸ್ವದೇಶಿ-ವಿದೇಶಿ ಪದಾರ್ಥಗಳ ಕಲ್ಪನೆಯೇ ಇಲ್ಲ. ಸ್ವದೇಶಿ ಬಳಸಬೇಕೆಂಬ ಆತ್ಮಾಭಿಮಾನವೂ ಇಲ್ಲ. ಉದಾಹರಣೆಗೆ ನೆಸ್‍ಕೆಫೆ, ಕೋಕಾಕೋಲಾ, ಮ್ಯಾಗಿಶಾವಿಗೆಗಳಾಗಲಿ, ಅಡಿದಾಸ್ ಸಿದ್ದಪಡಿಸಿದ ಬಟ್ಟೆಗಳು, ಲಕ್ಸ್, 501 ಸೋಪುಗಳು ಬಾಟಾ ಷೂ ಮತ್ತು ಚಪ್ಪಲಿ ಮುಂತಾದ ದಿನಬಳಕೆಯ ವಸ್ತುಗಳಾಗಲಿ ವಿದೇಶಿಯೇ ಹೊರತು ಸ್ವದೇಶಿ ಅಲ್ಲ ಎಂಬ ಸಾಮಾನ್ಯ ತಿಳುವಳಿಕೆಯೂ ಜನಸಾಮಾನ್ಯರಲ್ಲಿ ಮಾತ್ರವಲ್ಲ ವಿದ್ಯಾವಂತರಲ್ಲಿ ಕೂಡ ಇದ್ದಂತೆ ತೋರುವುದಿಲ್ಲ.

ಜನರ ಈ ಅಜ್ಞಾನವನ್ನು ಮೋದಿಯವರು ಚೆನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಇವಲ್ಲದೆ ನಾವು ಬೆಳಗಿನಿಂದ ರಾತ್ರಿಯವರೆಗೆ ಬಳಸುವ ಟೂತ್‍ಪೇಸ್ಟ್, ಟೂತ್‍ಬ್ರಷ್, ಬಟ್ಟೆಸೋಪು, ಸ್ನಾನದ ಸೋಪು, ಕುಂಕುಮ, ಕಾಡಿಗೆ, ಸ್ನೋ ಪೌಡರ್, ಲಿಪ್‍ಸ್ಟಿಕ್ ಎಲ್ಲ ಪರದೇಶದ ಕಂಪೆನಿಗಳು ತಯಾರಿಸುವವೇ. ನಮ್ಮ ದೇಶದಲ್ಲಿ ತಯಾರಾಗುವ ಬಹುರಾಷ್ಟ್ರೀಯ ಬ್ರಾಂಡ್‍ಗಳ ಪದಾರ್ಥಗಳು ಪರದೇಶದಿಂದ ಆಮದಾಗುವ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ವಸ್ತುಗಳು ಈಗ ಎಲ್ಲೆಲ್ಲೂ ದೊರೆಯುತ್ತವೆ. ಇವೆಲ್ಲ ಸ್ವದೇಶಿ ಅಲ್ಲ ಪರದೇಶಿ ಎಂಬುದನ್ನು ಜನ ತಿಳಿದುಕೊಂಡಿಲ್ಲ.

ಈಗ ಪರದೇಶದ ಕಂಪನಿಗಳು ಭಾರತಕ್ಕೆ ಬಂದು ತಮ್ಮ ಉದ್ಯಮಗಳನ್ನು ಆರಂಭ ಮಾಡಿರುವುದರಿಂದ ಮೋದಿಯವರಿಗೂ ಅವೆಲ್ಲ ಸ್ವದೇಶಿಯಂದೇ ಗೋಚರವಾಗುತ್ತಿದೆ. ಈಗ ಈ ಪರದೇಶಿ ಕಂಪನಿಗಳೂ ಲೋಕಲ್ಲು ದುಡಿಯುವ ಜನವೂ ಲೋಕಲ್. ಈ ಪದಾರ್ಥ ಬಳಸುವವರೂ ಲೋಕಲ್. ಈ ಬಹುರಾಷ್ಟ್ರೀಯ ಕಂಪನಿಗಳು ಬರುವ ಅಪಾರ ಲಾಭವನ್ನು ಡಿವಿಡೆಂಡ್ ರೂಪದಲ್ಲಿ ತಮ್ಮ ಷೇರುದಾರರಿಗೆ ಉದಾರವಾಗಿ ನೀಡಿ ಉಳಿದ ಪುಡಿಗಾಸು ಲಾಭವನ್ನು ಭಾರತದಲ್ಲೇ ಉಳಿಸಿಕೊಳ್ಳುತ್ತವೆ. ನಗನಾಣ್ಯದ ಇತರ ಉದ್ಯಮಗಳು ಅಂದರೆ ಅವು ದೇಶಿಯರು ಸ್ಥಾಪಿಸಿರುವ ಉದ್ಯಮಗಳು. ಇವು ಇಲ್ಲಿ ಉತ್ಪನ್ನವಾಗುವ ಎಲ್ಲ ಪದಾರ್ಥಗಳು ಭಾರತದಲ್ಲೇ ಮಾರಾಟವಾಗುವುದು.

ದಿನಕಳೆದಂತೆ ಈ ಮೂರು ಬಗೆಯ ಸಂಸ್ಥೆಗಳು ತಮ್ಮ ಕಾರ್ಯ ಚಟುವಟಿಕೆಯನ್ನೂ ವಿಸ್ತರಿಸುತ್ತ ಹೋಗುತ್ತವೆ. ವಿದೇಶಗಳಲ್ಲಿಯೇ ಇದ್ದುಕೊಂಡು ಭಾರತಕ್ಕೆ ಕಳಿಸುವ ವಸ್ತುಗಳನ್ನ ತಯಾರಿಸುವ ಕಂಪನಿಗಳು ಸ್ವದೇಶಿ ಬಗೆಗೆ ಒತ್ತುಕೊಟ್ಟು ಕಣ್ಕುಕ್ಕುವ ಜಾಹಿರಾತುಗಳನ್ನೂ ನೀಡಿ ತಮ್ಮ ಸರಕಿಗೆ ಮಾರುಕಟ್ಟೆ ವಿಸ್ತರಿಸುತ್ತದೆ. ದೇಶಿ ಕಂಪನಿಗಳು ದೇಶಿ ಪದಾರ್ಥಗಳನ್ನೇ ಬಳಸಿ ಎಂದು vocal to local ಘೋಷಣೆಯನ್ನು ಮೊಳಗಿಸುತ್ತದೆ. ಮೋದಿಯವರು ಎಂದಿನಂತೆ ಹೊಸ ಘೋಷಣೆಯೊಂದನ್ನು ಹರಿಯ ಬಿಟ್ಟಿದ್ದಾರೆ. ಇದು ಬರಿಯ ಘೋಷಣೆಯೇ ಹೊರತು ನಿಜವಾದ ಸ್ವದೇಶಿ ಚಳುವಳಿ ಕಟ್ಟುವ ಘೋಷಣೆಯಲ್ಲ.

ಚಳುವಳಿಯನ್ನು ಜನತೆ ಮಾತ್ರ ನಡೆಸಬಲ್ಲರು ಎಂಬುದು ಮೋದಿಯವರಿಗೆ ಗೊತ್ತು. ಜನತೆಯನ್ನು ಬೆಸ್ತು ಬೀಳಿಸಲು ಹೂಡಿರುವ ತಂತ್ರ ಇದು. ಖಂಡಿತವಾಗಿ ಇದು ಮೋದಿಯವರ ಫೋಕಸ್ ಚಳುವಳಿಯಲ್ಲ.

ಜನತೆ ಮೋದಿಯವರ ಘೋಷಣೆಗೆ ಮರುಳಾಗಬಾರದು. ಸ್ವದೇಶಿ ಬಗೆಗೆ ಗಾಂಧಿಜಿಗಿದ್ದ ಆಸೆ ಮೋದಿಯವರಿಗೆ ಖಂಡಿತ ಇಲ್ಲ. ಭಾರತದ ಆರ್ಥಿಕತೆ ಕುಸಿಯುತ್ತಿರುವಾಗ ಜನರ ಮನಸ್ಸನ್ನು ಬೇರೆ ಕಡೆಗೆ ಸೆಳೆಯುವ ಮತ್ತೊಂದು ತಂತ್ರ ಇದು.


ಇದನ್ನು ಓದಿ: ಮೋದಿ 2.1: ಹಿಂದೂ ರಾಷ್ಟ್ರೀಯವಾದದ ವಿಜೃಂಭಣೆಯೇ ಮೋದಿ ಸರ್ಕಾರದ ಸಾಧನೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...