Homeಮುಖಪುಟಕಾಯಕ ತತ್ವವೇ ಸಮಾನತೆಯ ತತ್ವ ಅದನ್ನು ಆಚರಿಸೋಣ

ಕಾಯಕ ತತ್ವವೇ ಸಮಾನತೆಯ ತತ್ವ ಅದನ್ನು ಆಚರಿಸೋಣ

- Advertisement -
- Advertisement -

ರೈತಾಪಿ ಜನರು, ಕಾಯಕ ಜೀವಿಗಳು, ಮಹಿಳೆಯರು ಮತ್ತು ಕೆಳವರ್ಗದ ಜನರು ಈ ದೇಶದಲ್ಲಿ ಸಹಸ್ರಾರು ವರ್ಷಗಳಿಂದ ಮನುಧರ್ಮದ ಪ್ರಧಾನವಾದ ವರ್ಣ ವ್ಯವಸ್ಥೆಯಿಂದಾಗಿ ಪಡಬಾರದ ಕಷ್ಟಪಟ್ಟಿದ್ದಾರೆ. ಮೇಲ್ವರ್ವಗದ ಜನರಿಗಾಗಿ ತಮ್ಮ ಬದುಕಿನ ಎಲ್ಲ ಸುಖಭೋಗಗಳು ಅವರಿಗೆ ಧಾರೆಯರೆದು ಕೃತಜ್ಞರಾಗಿರುವ ಭಾವನೆ ಇತಿಹಾಸದ ಪುಟಗಳಲ್ಲಿ ನಾವು ನೋಡಬಹುದಾಗಿದೆ. ಕಾಯಕ ಯೋಗಿಯಾಗಿ ಕಾಯಕವಂತು ಮಾಡಲ್ಲಿಲ್ಲಾ ಆದರೆ ಎಲ್ಲಾ ಸೌಲಭ್ಯಗಳು ಮೆಲ್ಜಾತಿಯ ಜನರಿಗೆ ಮೀಸಲಾಗಿದ್ದವು.

ಎಂಟು ಶತಮಾನಗಳ ಹಿಂದೆ ಭಾರತದಲ್ಲಿ ವೈದಿಕಶಾಹಿ ಅತ್ಯಂತ ಪ್ರಬಲ ಶಾಲಿಯಾಗಿದ್ದ ಕಾಲವದು. ಚತುರ್ವಣಗಳನ್ನು ಮಾಡಿಕೊಂಡು, ಈ ನಾಲ್ಕೂ ವರ್ಣದಿಂದ ಹೊರಗಿರುವವರನ್ನು ಅಸ್ಪೃಶ್ಯರೆಂದು ಕರೆದು, ಅವರನ್ನು ಅತ್ಯಂತ ನಿಕೃಷ್ಟವಾಗಿ ಕಾಣುತ್ತಿದ್ದ ಕಾಲವದು. ಅಂದು ಇಲ್ಲಿ ಅನೇಕ ಮೂಢನಂಬಿಕೆಗಳು, ಗೊಡ್ಡು ಸಂಪ್ರದಾಯಗಳು, ಬಹುದೇವತೋಪಾಸನೆ, ಸ್ತ್ರೀಶೋಷಣೆ ಅನ್ಯಾಯಗಳಂತಹ ಅನೇಕ ಸಂಪ್ರದಾಯಗಳು ರುದ್ರ ತಾಂಡವಾಡುತ್ತಿದ್ದ ಕಾಲವದು – ಕಾಲವಾಗಿತ್ತು. ದೀನ, ದಲಿತರ ಶೋಷಣೆಯಂತೂ ಹೇಳತೀರದು, ಅತಿರೇಕದ ವರ್ತನೆಯಾಗಿತ್ತು. ಸ್ತ್ರೀಯನ್ನು ಕೇವಲ ಭೋಗದ ಗೊಂಬೆಯನ್ನಾಗಿ ಮಾಡಿಕೊಂಡು, ಅವಳಿಗೆ ಯಾವುದೇ ಧರ್ಮ ಸಂಸ್ಕಾರವಿಲ್ಲದೆ ನೋಡಿಕೊಳ್ಳುತ್ತಿದ್ದರು. ವಿಧವೆಯಾದವರನ್ನು ಅಮಾನುಷವಾಗಿ ಹಿಂಸಿಸುತ್ತಿದ್ದ ಕಾಲವದು.

ಬಡವರು, ಶೋಷಿತರು, ನೊಂದವರು, ಸ್ತ್ರೀಯರು ಒಕ್ಕೂರಲಿನಿಂದ ತಮ್ಮನ್ನುದ್ಧರಿಸುವ ಮಹಾಪುರುಷನ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದ ಕಾಲದಲ್ಲಿ, ನೊಂದವರ ನಂದಾ ದೀಪವಾಗಿ,ಬಡವರ ಭಾಗ್ಯದ ಸಂಜೀವಿನಿಯಾಗಿ, ನಿರ್ಗತಿಕರ ಬಂಧುವಾಗಿ, ಶೋಷಿತರ ದ್ವನಿಯಾಗಿ, ಸ್ತ್ರೀಕುಲೋದ್ಧಾರಕರಾಗಿ, ಮಾನವತೆಯ ಸಾಕಾರ ಮೂರ್ತಿಯಾಗಿ, ದಿವ್ಯ ಜ್ಯೋತಿಯಾಗಿ,ಕಾಯಕ ತತ್ತ್ವದ ಕ್ರಾಂತಿ ಪುರುಷ ರಾಗಿ ಈ ನಾಡಿನಲ್ಲಿ ಜನ್ಮತಾಳಿದವರು ಬಸವಣ್ಣನವರು. ಪ್ರಯುಕ್ತ ಕಾಯಕ ವರ್ಗದ ಜನರಿಗೆ ಸರಿಯಾದ ಗೌರವ ನೀಡದೇ ಇರುವ ಕಾಲದಲ್ಲಿ ಕಾಯಕದ ಸಮಾನತೆಯ ಬಗೆ ಅಂದಿನ ಜನರಿಗೆ ಸಂಪೂರ್ಣ ಸರಿಯಾದ ತಿಳುವಳಿಕೆ ಕೊಡುವ – ನೀಡುವ ಮೂಲಕ ಕಾಯಕದ ಶ್ರೇಷ್ಠತೆಯ ಪ್ರಜ್ಞೆಯನ್ನು ಪ್ರತಿಯೊಬ್ಬ ಶರಣರ ಹೃನ್ಮಮಂದಿರದಲ್ಲಿ ತುಂಬಿದರು. ತರುವಾಯ ಕಾಯಕದ ಗೌರವ ಮತ್ತು ಮೌಲ್ಯಗಳನ್ನು ಸಮಸ್ತ ಶರಣ ಸಂಕುಲಕ್ಕೆ ತಿಳಿ ಹೇಳುವ ಕಾರ್ಯ ನಿರ್ವಹಿಸಿದರು, ಈ ಮೂಲಕ ಕಾಯಕ ವರ್ಗದ ಶರಣರನ್ನು ಒಟ್ಟು ಗೊಡಿಸುವ ಕಾರ್ಯದೊಂದಿಗೆ ಕಲ್ಯಾಣ ಕಾಯಕ ಕ್ರಾಂತಿಗೆ ಕಾರಣಿಭೊತರಾದರು ನಮ್ಮ ಅಣ್ಣ ಬಸವಣ್ಣನವರು.

ಕಾಯಕ ತತ್ವ:

ಕಾಯಕ ಮಾನವನ ಬದುಕಿನ ಬಹು ದೊಡ್ಡ ಅಂಗ,ಈ ಅಂಗದಿಂದಲೇ ನಮ್ಮ ಬದುಕು, ಬದುಕಿಗಾಗಿ ಕಾಯಕ ಮಾಡಲೇಬೇಕು,ಅಂದಾಗಲೇ ಮನುಷ್ಯನ ಬಾಳಿಗೊಂದು ಸುಂದರ ಅರ್ಥ ಬರುತ್ತದೆ. ಆದ್ದರಿಂದ ಮನುಷ್ಯ ತನ್ನ ಜೀವನ ನಿರ್ವಹಣೆಗಾಗಿ ಅವಲಂಬಿಸಿರುವ ವೃತ್ತಿಯೇ ಕಾಯಕ,ಅದರಲ್ಲಿ ಮೇಲುಕೀಳೆಂಬುದಿಲ್ಲ. ಕಾಯಕ ಮಾಡದವರು ಊಟ ಮಾಡಲು ಯೋಗ್ಯರಲ್ಲ. ವೈಚಾರಿಕತೆಯ ಧರ್ಮದೃಷ್ಟಿಯಿಂದ ನ್ಯಾಯವಾದ ರೀತಿಯಲ್ಲಿ ತಮ್ಮ ಕಾಯಕವನ್ನು ಮಾಡಬೇಕಾದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಹಾಗಾಗಿ ಪ್ರತಿಯೊಬ್ಬ ಮಾನವರೂ ಉದ್ಯೋಗಶೀಲನಾಗಬೇಕು. ತನಗೆ ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಆವಶ್ಯಕವಾದ ಪ್ರತಿಯೊಂದು ಕೆಲಸವನ್ನೂ ಪ್ರತಿಯೊಬ್ಬರೂ ನಿಸ್ವಾರ್ಥ ಸೇವಾ ಮನೋಭಾವದಿಂದ ಹಂಚಿಕೊಂಡು ಭಕ್ತಿ, ಭಾವ, ಶ್ರದ್ಧೆಯಿಂದ ಮಾಡಬೇಕು. ಮಾಡಿದಾಗಲೇ ಮನಸ್ಸಿಗೊಂದು ನೆಮ್ಮದಿಯ ನಿಟ್ಟುಸಿರು.

ಈ ಹಿನ್ನೆಲೆಯಲ್ಲಿ 12ನೇ ಶತಮಾನದ ಬಸವಾದಿ ಪ್ರಮಥರು ಅಂದು ಕೈಗೊಂಡ ಹಲವಾರು ಸಮಾಜ ಮುಖಿ ಸೇವೆಗಳ ಕಾರ್ಯಗಳು, ಕಾಯಕ ತತ್ವದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಅವರ ಕೊಡುಗೆ ಅಪಾರವಾದುದು. ಇವರಲ್ಲಿ ಅಗ್ರಗಣ್ಯ ನಾಯಕನೆಂದರೆ ಬಸವಣ್ಣನವರು. ಹಾಗಾಗಿ ಕಾಯಕ ತತ್ವದ ಪ್ರಮುಖ ರೂವಾರಿ, ಸಮಾನತೆಯ ಯುಗ ಪುರುಷ, ಭಕ್ತಿ ಬಂಢಾರಿ ಬಸವಣ್ಣನವರು ಕೈಗೊಂಡ ಕಾಯಕ ಧ್ಯೇಯದ ಕ್ರಾಂತಿಕಾರಿ ವಿಚಾರಗಳ ಹೆಜ್ಜೆಗಳು ಇಂದಿನ ಕಾರ್ಮಿಕ ಸಮಾಜಕ್ಕೆ ಅತ್ಯಗತ್ಯವಾಗಿವೆ.ಆದಕಾರಣ ಅವರ ಕಾಯಕ ತತ್ವವನ್ನು ನಾವೆಲ್ಲರೂ ಇಂದು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕಾಗಿದೆ.ಕೇವಲ ತೋರಿಕೆಗಾಗಿ ಮಾಡದೇ, ಆತ್ಮತೃಪ್ತಿಗಾಗಿ ಮಾಡುವುದು ಲೇಸು ಹಾಗೂ ಕುಟುಂಬ ವರ್ಗಕ್ಕೂ, ನಾಡಿಗೂ, ದೇಶಕ್ಕೂ ಒಳ್ಳೆಯದು ಇದರಿಂದ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ, ನಮ್ಮೆಲ್ಲರ ಭವಿಷ್ಯ ಉಜ್ವಲವಾಗುತ್ತದೆ.

ಕಾಯಕ ನಿಷ್ಠೆ:

ದುಡಿದುಣ್ಣುವುದು ಮನುಷ್ಯ ಸಹಜ ಧರ್ಮ. ಆಹಾರ ದಕ್ಕಿಸಿಕೊಂಡ ಮಾತ್ರಕ್ಕೆ ಮನುಷ್ಯನ ಜವಾಬ್ದಾರಿ ಮುಗಿಯುವುದಿಲ್ಲ. ದುಡಿಮೆ ಮನುಷ್ಯನಿಗೆ ಸ್ವಾಭಿಮಾನವನ್ನೂ ಆತ್ಮವಿಶ್ವಾಸವನ್ನೂ ಜವಾಬ್ದಾರಿಯನ್ನೂ ಗಳಿಕೆ ಹಂಚಿಕೊಳ್ಳುವ ದಾಸೋಹ (ಸೇವಾ ಕಾರ್ಯಗಳು)ನಡೆಸುವ ಅವಕಾಶವನ್ನೂ ನೀಡುತ್ತದೆ. ಕಾಯಕನಿಷ್ಠೆ ಬದುಕನ್ನು ಸಮತೋಲನದಲ್ಲಿ ಇರಿಸುತ್ತದೆ. ಕಾಯಕದಲ್ಲಿ ತೊಡಗಿದವರು ತಪ್ಪು ಕಾರ್ಯಗಳನ್ನು ಮಾಡುವ ಪ್ರಮೇಯವೇ ಬರುವುದಿಲ್ಲ! ಹಾಗೆಂದೇ ಬಸವಣ್ಣನವರು ಕಾಯಕ ಪರಂಪರಕ್ಕೆ ಇನ್ನಿಲ್ಲದ ಮಹತ್ವ ನೀಡಿದರು. ಕಾಯಕ ಒಂದು ಅದ್ಭುತ ಪ್ರಕ್ರಿಯೆ. ನಮ್ಮ ನಮ್ಮ ಕೆಲಸವನ್ನು ನಾವು ಕಾಯಾ ವಾಚಾ ಭಕ್ತಿ, ಭಾವ,
ನಿಸ್ವಾರ್ಥ ಮನಸ್ಸಿನಿಂದ ಮಾಡಬೇಕು. ನಮ್ಮ ದೇಹದ ಪ್ರತಿ ಕಣವನ್ನೂ ನಾವು ಮಾಡುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು. ಒಂದೊಳ್ಳೆ ಸಿಹಿ ತಿನಿಸನ್ನು ನಾವು ತಿನ್ನುವಾಗ ನಮ್ಮ ಇಡೀ ದೇಹದ ಅಸ್ತಿತ್ವವೇ ಅದರ ಆಸ್ವಾದನೆಯಲ್ಲಿ ತೊಡಗಿಸಿಕೊಳ್ಳುತ್ತೇವೇ ಹಾಗೆ ನಮ್ಮ ಕೆಲಸದಲ್ಲೂ ತೊಡಗಿಸಿಕೊಳ್ಳಬೇಕು. ಆಗ ಸಹಜವಾಗಿ ನಮ್ಮ ಕೆಲಸದ ಮೇಲೆ ನಮಗೆ ಅಭಿಮಾನ, ಪ್ರೀತಿ ಮೂಡುವುದು. ಸತ್ಯ, ಶುದ್ಧ ಕಾಯಕದ ಮೂಲಕ ಜೀವನ ನಡೆಸುವ ಕುರಿತಂತೆ ಬಸವಣ್ಣನವರು ಸೇರಿದಂತೆ ಅನೇಕ ಶಿವಶರಣರು ಜನಸಾಮಾನ್ಯರಿಗೆ ಕರೆ ಕೊಟ್ಟಿದ್ದಾರೆ.

ಇದಲ್ಲದೆ ವಚನಗಳು ಬರೆಯುವ ಮೂಲಕ ಪರಿಣಾಮಕಾರಿಯಾಗಿ ಸಮಾಜವನ್ನು ತಿದ್ದುವ ಕಾರ್ಯ ಸಹ ಮಾಡಿದ್ದಾರೆ. ಅವರ ಕಾಯಕ ನಿಷ್ಠೆಯ ವಚನಗಳು ಇಂದಿನ ಸಮಾಜಕ್ಕೆ ಅತಿ ಹೆಚ್ಚು ಪ್ರಸ್ತುತವಾಗಿವೆ. ಅವರು ನೀಡಿರುವ ಸಂದೇಶಗಳನ್ನು ನಾವೆಲ್ಲರೂ ಪಾಲಿಸಿದ್ದಲ್ಲಿ ಅತ್ಯುತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಆದಕಾರಣ ನಮ್ಮ ಅಹಂಕಾರ ತೇಜಿಸಿ, ಮುಕ್ತ ನಿರ್ಮಲವಾದ ಮನಸ್ಸಿನಿಂದ ಕಾಯಕ ಮಾಡಲು ಆತ್ಮಸಾಕ್ಷಿಯಾಗಿ ಮುಂದಾಗೋಣ,ಮುಂದಾಗುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವ ಸಿಗುವಂತೆ ನೋಡಿಕೋಳ್ಳೋಣ. ಗೌರವ ಸೀಗಬೇಕು, ಸಮೃದ್ಧಿ ಜೀವನವನ್ನು ಅವರು ಈ ಸಮಾಜದಲ್ಲಿ ಎಲ್ಲರೊಂದಿಗೆ ಅನ್ಯೋನ್ಯತೆಯಿಂದ ಬಾಳಬೇಕು. ಅಂದಾಗಲೇ ಬಸವಣ್ಣನವರ ಕಾಯಕ ನಿಷ್ಯಯ ವೈಚಾರಿಕ ವಿಚಾರಗಳಿಗೆ ನಾವೆಲ್ಲರೂ ಬೆಲೆ ನೀಡಿದಂತಾಗುತ್ತದೆ.

ಆಶಯ ಮಾತು:

ಸ್ವಾರ್ಥ ಹೀನ ಮನುಷ್ಯರ ಕಪಿಮುಷ್ಟಿಯಿಂದ ಬಿಡುಗಡೆ ಹೊಂದುವ ಮೂಲಕ ಹೊರಗಡೆ ಬನ್ನಿ, ಬರಬೇಕು. ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಕಾಯಕ ಮಾಡಿ, ಮಾಡಬೇಕು. ಮಾಡುವ ಮೂಲಕ ಸರ್ವರಲ್ಲಿಯೊ ಕಾಯಕ ಪ್ರಜ್ಞೆಯ ಸ್ವೊರ್ತಿ ಮೂಡಿಸುವ ಕೆಲಸ ಆಗಬೇಕು.ನಾವೆಲ್ಲರೂ ಸೇರಿ ಮಾಡಬೇಕಾಗಿದೆ. ಪ್ರತಿಯೊಬ್ಬರು ಸ್ವಾಭಿಮಾನ – ಅಭಿಮಾನದಿಂದ, ಸ್ವಚ್ಚಂದವಾಗಿ, ನೆಮ್ಮದಿಯಿಂದ ಈ ದೇಶ ಹಾಗೂ ಈ ಸಮಾಜದಲ್ಲಿ ಬದುಕುವಂತಾಗಬೇಕೆಂಬುವುದೇ 12ನೇ ಶತಮಾನದ ಎಲ್ಲಾ ಶಿವಶರಣರ ಮಾಹಾದಾಶಯವಾಗಿದೆ. ಆದ್ದರಿಂದ ಕಾಯಕ ಸಮಾನತೆ ತತ್ವವನ್ನು ನಮ್ಮೆಲ್ಲರ ಅಃತಕರಣದ ಆತ್ಮಕ್ಕೆ ಜಾಗೃತಿ ಮೂಡಿಸಿರುವ ಬಸವಾದಿ ಪ್ರಮಥರನ್ನು ಈ ದಿನ ಸ್ಮರಿಸಬೇಕಾದ ಅಗತ್ಯವಿದೆ ಜೊತೆಗೆ ಕಾಲಘಟ್ಟದಲ್ಲಿ ಅನೇಕ ಶರಣರು ಕಾಯಕ ಲೋಕಕ್ಕೆ ಅನೇಕ ವಚನಗಳನ್ನು ನೀಡಿದ್ದಾರೆ,ಇಂದು ನಾವೆಲ್ಲರೂ ಅವರನ್ನು ನನೆಯುವ ಕೆಲಸ ಮಾಡಬೇಕಾಗಿದೆ.

ಇತಿಹಾಸದ ಪುಟಗಳಲ್ಲಿ ಅನೇಕ ಶರಣರು ಕಾಯಕ ಸಮಾನತೆಗಾಗಿ ತಮ್ಮ ಬದುಕಿನ ಜೀವನವನ್ನು ನಮ್ಮಗಾಗಿ ಧಾರೆಯೆರೆದಿದ್ದಾರೆ ಜೊತೆಗೆ ಬದಲಾವಣೆಗಾಗಿ ಶ್ರಮಿಸಿದ್ದಾರೆ ಎನ್ನುವುದು ನಾವ್ಯಾರು ಮರೆಯಬಾರದು. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಬೇಕಾಗಿದೆ. ನಡೆಯುವ ಮೂಲಕ ಸರ್ವರಿಗೂ ಕಾಯಕ ಸ್ನೇಹಿತರಾಗೋಣ, ಲೋಕಕ್ಕೆ ಮಾದರಿಯಾಗೋಣ.


ಇದನ್ನೂ ಓದಿ: 12 ಗಂಟೆಗಳ ಕೆಲಸ ಕಾನೂನುಬದ್ಧ: ಕೊರೋನ ಹೆಸರಲ್ಲಿ ಕಾರ್ಮಿಕರಿಗೆ ಮೋದಿ ಸರಕಾರದ ಮೋಸ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...