HomeUncategorized'ದಿ ಪ್ರಾಫೆಟ್' ಖಲೀಲ್ ಗಿಬ್ರಾನ್ : ಯೋಗೇಶ್ ಮಾಸ್ಟರ್

‘ದಿ ಪ್ರಾಫೆಟ್’ ಖಲೀಲ್ ಗಿಬ್ರಾನ್ : ಯೋಗೇಶ್ ಮಾಸ್ಟರ್

- Advertisement -
- Advertisement -

ಯೋಗೇಶ್ ಮಾಸ್ಟರ್ ಅಪಾರ ಓದು ಮತ್ತು ಜೀವನ ಪ್ರೀತಿಯಿರುವ ಸೃಜನಶೀಲ ವ್ಯಕ್ತಿ. ಡುಂಢಿ ಕಾದಂಬರಿ ವಿವಾದದಿಂದ ‘ಖ್ಯಾತ’ರಾದ ಅವರು ಬಹುಮುಖಿ ಪ್ರತಿಭೆಯುಳ್ಳ ಕಲಾವಿದ. ಈ ವಾರದಿಂದ ಅವರ ಪುಟಕ್ಕಿಟ್ಟ ಪುಟಗಳು ಇಲ್ಲಿ ಹೊಳೆಯಲಿವೆ. ಜೀವನದ ಬೇರೆ ಬೇರೆ ಸಂದರ್ಭದ ಜಟಿಲ ಕ್ಷಣಗಳಲ್ಲಿ ಎಂದೋ ಓದಿದ ಪುಸ್ತಕವೊಂದರಿಂದ ಒಳನೋಟವೊಂದು ಮನದಲ್ಲಿ ತೇಲಿ ಬರುತ್ತದೆ. ಆ ಪುಸ್ತಕವು ಜಗತ್ತಿನ ಯಾವುದೋ ಭಾಷೆಯ ಮಹತ್ವದ ಕೃತಿಯಾಗಿರಬಹುದು ಅಥವಾ ನಮ್ಮದೇ ಪರಿಸರದ ಭಾಷೆಯ ಪುಸ್ತಕವಾಗಿರಬಹುದು. ಅಂತಹ ಪುಸ್ತಕಗಳು ಕತ್ತಲೆಯಲ್ಲೂ ಹೊಳೆಯುತ್ತವೆ. ಆ ರೀತಿ ಹೊಳೆಯುವ ಮಹತ್ವದ ಸಾಲುಗಳನ್ನು ಮತ್ತು ಆ ಪುಸ್ತಕದ ಕುರಿತ ಸಾಂದರ್ಭಿಕ ಮಾಹಿತಿಯನ್ನು ಪ್ರತೀ ವಾರವೂ ನಮ್ಮ ಓದುಗರಿಗೆ ಯೋಗೇಶ್ ಮಾಸ್ಟರ್ ತಲುಪಿಸಲಿದ್ದಾರೆ.

ಆದಿಯಲ್ಲಿ ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸಿದ ದೇವರು ಮನುಷ್ಯನನ್ನೂ ಸೃಷ್ಟಿಸಿದ ತನ್ನದೇ ಪ್ರತಿರೂಪದಲ್ಲಿ. ಆದಾಮ ಮತ್ತು ಹವ್ವರೆಂಬ ಆ ಗಂಡು ಹೆಣ್ಣುಗಳನ್ನು ಸ್ವತಂತ್ರವಾಗಿ ಸ್ವರ್ಗೋದ್ಯಾನದಲ್ಲಿ ಬಿಟ್ಟು, ಅರಿವನ್ನು ನೀಡುವ ಮರದ ಫಲವನ್ನು ತಿನ್ನಬಾರದೆಂಬ ನಿಬಂಧನೆಯನ್ನಿಟ್ಟು ಅವರನ್ನು ಚೆನ್ನಾಗಿಟ್ಟುಕೊಂಡಿದ್ದ. ತಿನ್ನಬಾರದು ಎಂದು ಅವನು ಏಕೆ ಹೇಳಿದ್ದನೋ?! ಆದರೆ ಅವಳು ತಿಂದಳು, ಅವನೂ ತಿಂದ. ಇಬ್ಬರಿಗೂ ಅರಿವುಂಟಾಯಿತು. ತಮ್ಮ ಬೆತ್ತಲೆಯನ್ನು ಅರಿವೆಯ ಕತ್ತಲೆಯಲ್ಲಿ ಇಟ್ಟುಕೊಳ್ಳಬೇಕೆಂಬುದೇ ಮೊದಲ ಅರಿವು. ತಾನು ಲೋಕ ಸಂಚಾರಕ್ಕೆ ಹೋಗಿದ್ದು ಮರಳಿ ಬಂದಾಗ ದೇವರು ಕಂಡಿದ್ದು, ಸ್ತ್ರೀ ತನ್ನ ಸಂಕೋಚದ ಮರೆಯಿಂದ ಉತ್ತರಿಸಿದ್ದು. ಕೋಪಗೊಂಡ ಅವನು ಸ್ವರ್ಗೋದ್ಯಾನದಿಂದ ಹೊರಗಟ್ಟಿದ. ಮಣ್ಣಿಂದ ಬಂದ ಮನುಷ್ಯರು ಮಣ್ಣಿಗೇ ಹೋಗಲೆನ್ನುತ್ತಾ ಗಂಡು-ಹೆಣ್ಣಿಗೆರಡು ಶಾಪಗಳನ್ನು ಕೊಟ್ಟ. ಹೆಣ್ಣಿಗೆ ನೋವಿನಲ್ಲಿ ಹೆರುವ ಶಾಪವಾದರೆ, ಗಂಡಿಗೆ ದುಡಿವ ಶಾಪವ.

ದೇವರು ಶಾಪ ಎನ್ನುವ ದುಡಿದು ಬದುಕುವುದನ್ನು ಖಲೀಲ್ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬರ ಭಾಗ್ಯ ಎನ್ನುತ್ತಾನೆ. ದುಡಿಯುವುದೆಂದರೆ ವಿಶ್ವದ ಅನಂತತೆಯು ಹೆಮ್ಮೆಯಿಂದ ಹೋಗುವ ಘನವೆತ್ತ ಮೆರವಣಿಗೆಯ ಭಾಗವಾಗುವುದು ಎನ್ನುತ್ತಾನೆ. ನಿನ್ನ ಹಣೆಯಲ್ಲಿ ದುಡಿಮೆಯೆಂಬುವುದು ದೌರ್ಭಾಗ್ಯವಾಗಿ ಬರೆದಿದ್ದರೆ, ದುಡಿಯುವಾಗ ಸುರಿವ ನಿನ್ನ ಬೆವರು ಅದನ್ನು ತೊಡೆದು ಹಾಕಿ ಬಿಡುವುದು ಎಂದು ಬಿಡುತ್ತಾನೆ ಈ ಪಾಪಿ ಖಲೀಲ.! ದೇವರ ಶಾಪವನ್ನು ಹೆಮ್ಮೆಯ ಬದುಕಿನ ಭಾಗವಾಗಿಸಿಕೊಳ್ಳುತ್ತಾನೆ. ಸಾಲದ್ದಕ್ಕೆ ಪ್ರೇಮದ ಮೂರ್ತ ಸ್ವರೂಪವೇ ದುಡಿಮೆ ಎನ್ನುತ್ತಾನೆ. ನೀನು ಪ್ರೀತಿಸುವುದನ್ನು ನಿನ್ನ ಕೆಲಸದಲ್ಲಿ ತೋರಿಸೆನ್ನುತ್ತಾನೆ.

ದಿ ಪ್ರಾಫೆಟ್ ಎಂದು ಖಲೀಲ್ ಗಿಬ್ರಾನ್ ಬರೆದ ಅರಿವಿನ ಹೊತ್ತಿಗೆಯು ಬಹುಪಾಲು ವಿಶ್ವದ ಎಲ್ಲಾ ಭಾಷೆಗಳಲ್ಲಿಯೂ ಅನುವಾದಿತವಾಗಿವೆ. ಕನ್ನಡದಲ್ಲಿ ಜಿ.ಎನ್ ರಂಗನಾಥ್, ಬಂಜಗೆರೆ ಜಯಪ್ರಕಾಶ್, ದೇವದತ್ತ ಇಡೀ ಪುಸ್ತಕವನ್ನೇ ಅನುವಾದಿಸಿದ್ದರೆ, ತಮಗೆ ಬೇಕಾದಂತಹ ಭಾಗಗಳನ್ನು ಬಹಳಷ್ಟು ಲೇಖಕರು ಅನುವಾದಿಸಿ ಸಂದರ್ಭೋಚಿತವಾಗಿ ತಮ್ಮ ಬರಹಗಳಲ್ಲಿ ಉಲ್ಲೇಖಿಸಿರುತ್ತಾರೆ. ಖಲೀಲನ ಪ್ರಾಫೆಟನ್ನು ಪ್ರವಾದಿ ಎನ್ನುವುದಕ್ಕಿಂತ ದಾರ್ಶನಿಕ ಎಂದು ಕನ್ನಡದಲ್ಲಿ ಕರೆಯುವುದು ಸೂಕ್ತವೆಂದೆನಿಸುತ್ತದೆ.
ಅಲ್ ಮುಸ್ತಾಫ ತನ್ನ ಪಟ್ಟಣಕ್ಕೆ ಮರಳಲು ಬೆಟ್ಟವಿಳಿದು ಬಂದಾಗ ಊರವರು ಸೇರುತ್ತಾರೆ.

ಎದೆಗೆ ಮಗುವನ್ನು ಅವುಚಿಕೊಂಡಿರುವ ಮಹಿಳೆ ಮಗುವಿನ ಬಗ್ಗೆ ಹೇಳು ಎಂದರೆ, “ಮಗುವೆಂಬುದು ನಿಮ್ಮ ಮೂಲಕ ಬಂದಿರುವವರೇ ಹೊರತು ನಿಮ್ಮಿಂದ ಅಲ್ಲ” ಎನ್ನುತ್ತಾ ಮಕ್ಕಳ ಮೇಲೆ ಪೋಕರಿಗಿರುವ ಅಧಿಕಾರವನ್ನು ಕಿತ್ತು, “ನೀವು ಮಕ್ಕಳಂತಾಗಬೇಕೇ ಹೊರತು, ಮಕ್ಕಳನ್ನು ನಿಮ್ಮಂತೆ ಮಾಡಬೇಡಿ. ಏಕೆಂದರೆ ಅವರು ಹೊಂದಿರುವ ಕನಸನ್ನು ನೀವು ಎಂದಿಗೂ ಹೊಂದಲಾರಿರಿ” ಎಂದೆಚ್ಚರಿಸುತ್ತಾನೆ. ಹಿರಿಯರಿಗೆ ಬಾಗಬೇಕು ಎಂದು ಸಾಮಾನ್ಯ ಬೋಧನೆಯನ್ನು ಮಕ್ಕಳಿಗೆ ಮಾಡುವಾಗ ಖಲೀಲ್ ನೀವು ಬಿಲ್ಲಿನಂತೆ ಬಾಗಿ ಮಕ್ಕಳು ಬಾಣದಂತೆ ಚಿಮ್ಮಲಿ ಎನ್ನುತ್ತಾನೆ.

ಮನೆ ಕಟ್ಟುವವನು ಮನೆಯ ಬಗ್ಗೆ ಕೇಳಿದರೆ, “ನಿನ್ನ ದೇಹದ ವಿಸ್ತೃತ ರೂಪವೇ ನಿನ್ನ ಮನೆ” ಎನ್ನುತ್ತಾನೆ. ವ್ಯಾಪಾರಿ ವ್ಯಾಪಾರದ ಬಗ್ಗೆ, ಪ್ರೇಮಿಯು ಪ್ರೇಮದ ಬಗ್ಗೆ, ತಳವಾರನು ಕಾನೂನು ವ್ಯವಸ್ಥೆಯ ಬಗ್ಗೆ, ಬಟ್ಟೆಯ ಬಗ್ಗೆ; ಹೀಗೆ ನಾನಾ ವಿಷಯಗಳ ಬಗ್ಗೆ ಕೇಳಿದವರಿಗೆಲ್ಲಾ ಉತ್ತರಿಸುತ್ತಾ ಹೋಗುವ ಅಲ್ ಮುಸ್ತಾಫ ತನ್ನ ಹಡಗು ಬರಲು ಹೊರಟು ಹೋಗುತ್ತಾನೆ, ಪ್ರಶ್ನಿಸಿದವರಿಗೆಲ್ಲಾ ಅರಿವಿನ ಒಳ ನೋಟಗಳನ್ನು ಕೊಟ್ಟು.

ಪ್ರಾಫೆಟ್ಟಿನ ಪುಟವಿಟ್ಟ ಪುಟಗಳು ಕತ್ತಲಲ್ಲಿಯೂ ಹೊಳೆಯುತ್ತಿರುತ್ತವೆ. ಸಂಬಂಧಗಳ ಸಂಘರ್ಷಗಳಲ್ಲಿ, ಅಸೂಯೆ, ಮತ್ಸರ ಮೂಡಿದ ಕ್ಷಣಗಳಲ್ಲಿ, ಲೋಕದ ರೂಢಿಯ ಭಾವನೆಗಳ್ಯಾವವೇ ಆದರೂ ಕಣ್ಣುಗಳಲ್ಲಿ ಕತ್ತಲಾಗಿ ದಾರಿ ಮಸುಕಾದಾಗ ಖಲೀಲನ ಪ್ರಾಫೆಟ್ ತನ್ನರಿವ ನೋಟಗಳ ಬೆಳಕನ್ನು ನಮ್ಮರಿವ ಕಣ್ಣುಗಳಿಗೆ ಧಾರೆಯೆರೆಯುತ್ತಾನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...