HomeUncategorized'ದಿ ಪ್ರಾಫೆಟ್' ಖಲೀಲ್ ಗಿಬ್ರಾನ್ : ಯೋಗೇಶ್ ಮಾಸ್ಟರ್

‘ದಿ ಪ್ರಾಫೆಟ್’ ಖಲೀಲ್ ಗಿಬ್ರಾನ್ : ಯೋಗೇಶ್ ಮಾಸ್ಟರ್

- Advertisement -
- Advertisement -

ಯೋಗೇಶ್ ಮಾಸ್ಟರ್ ಅಪಾರ ಓದು ಮತ್ತು ಜೀವನ ಪ್ರೀತಿಯಿರುವ ಸೃಜನಶೀಲ ವ್ಯಕ್ತಿ. ಡುಂಢಿ ಕಾದಂಬರಿ ವಿವಾದದಿಂದ ‘ಖ್ಯಾತ’ರಾದ ಅವರು ಬಹುಮುಖಿ ಪ್ರತಿಭೆಯುಳ್ಳ ಕಲಾವಿದ. ಈ ವಾರದಿಂದ ಅವರ ಪುಟಕ್ಕಿಟ್ಟ ಪುಟಗಳು ಇಲ್ಲಿ ಹೊಳೆಯಲಿವೆ. ಜೀವನದ ಬೇರೆ ಬೇರೆ ಸಂದರ್ಭದ ಜಟಿಲ ಕ್ಷಣಗಳಲ್ಲಿ ಎಂದೋ ಓದಿದ ಪುಸ್ತಕವೊಂದರಿಂದ ಒಳನೋಟವೊಂದು ಮನದಲ್ಲಿ ತೇಲಿ ಬರುತ್ತದೆ. ಆ ಪುಸ್ತಕವು ಜಗತ್ತಿನ ಯಾವುದೋ ಭಾಷೆಯ ಮಹತ್ವದ ಕೃತಿಯಾಗಿರಬಹುದು ಅಥವಾ ನಮ್ಮದೇ ಪರಿಸರದ ಭಾಷೆಯ ಪುಸ್ತಕವಾಗಿರಬಹುದು. ಅಂತಹ ಪುಸ್ತಕಗಳು ಕತ್ತಲೆಯಲ್ಲೂ ಹೊಳೆಯುತ್ತವೆ. ಆ ರೀತಿ ಹೊಳೆಯುವ ಮಹತ್ವದ ಸಾಲುಗಳನ್ನು ಮತ್ತು ಆ ಪುಸ್ತಕದ ಕುರಿತ ಸಾಂದರ್ಭಿಕ ಮಾಹಿತಿಯನ್ನು ಪ್ರತೀ ವಾರವೂ ನಮ್ಮ ಓದುಗರಿಗೆ ಯೋಗೇಶ್ ಮಾಸ್ಟರ್ ತಲುಪಿಸಲಿದ್ದಾರೆ.

ಆದಿಯಲ್ಲಿ ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸಿದ ದೇವರು ಮನುಷ್ಯನನ್ನೂ ಸೃಷ್ಟಿಸಿದ ತನ್ನದೇ ಪ್ರತಿರೂಪದಲ್ಲಿ. ಆದಾಮ ಮತ್ತು ಹವ್ವರೆಂಬ ಆ ಗಂಡು ಹೆಣ್ಣುಗಳನ್ನು ಸ್ವತಂತ್ರವಾಗಿ ಸ್ವರ್ಗೋದ್ಯಾನದಲ್ಲಿ ಬಿಟ್ಟು, ಅರಿವನ್ನು ನೀಡುವ ಮರದ ಫಲವನ್ನು ತಿನ್ನಬಾರದೆಂಬ ನಿಬಂಧನೆಯನ್ನಿಟ್ಟು ಅವರನ್ನು ಚೆನ್ನಾಗಿಟ್ಟುಕೊಂಡಿದ್ದ. ತಿನ್ನಬಾರದು ಎಂದು ಅವನು ಏಕೆ ಹೇಳಿದ್ದನೋ?! ಆದರೆ ಅವಳು ತಿಂದಳು, ಅವನೂ ತಿಂದ. ಇಬ್ಬರಿಗೂ ಅರಿವುಂಟಾಯಿತು. ತಮ್ಮ ಬೆತ್ತಲೆಯನ್ನು ಅರಿವೆಯ ಕತ್ತಲೆಯಲ್ಲಿ ಇಟ್ಟುಕೊಳ್ಳಬೇಕೆಂಬುದೇ ಮೊದಲ ಅರಿವು. ತಾನು ಲೋಕ ಸಂಚಾರಕ್ಕೆ ಹೋಗಿದ್ದು ಮರಳಿ ಬಂದಾಗ ದೇವರು ಕಂಡಿದ್ದು, ಸ್ತ್ರೀ ತನ್ನ ಸಂಕೋಚದ ಮರೆಯಿಂದ ಉತ್ತರಿಸಿದ್ದು. ಕೋಪಗೊಂಡ ಅವನು ಸ್ವರ್ಗೋದ್ಯಾನದಿಂದ ಹೊರಗಟ್ಟಿದ. ಮಣ್ಣಿಂದ ಬಂದ ಮನುಷ್ಯರು ಮಣ್ಣಿಗೇ ಹೋಗಲೆನ್ನುತ್ತಾ ಗಂಡು-ಹೆಣ್ಣಿಗೆರಡು ಶಾಪಗಳನ್ನು ಕೊಟ್ಟ. ಹೆಣ್ಣಿಗೆ ನೋವಿನಲ್ಲಿ ಹೆರುವ ಶಾಪವಾದರೆ, ಗಂಡಿಗೆ ದುಡಿವ ಶಾಪವ.

ದೇವರು ಶಾಪ ಎನ್ನುವ ದುಡಿದು ಬದುಕುವುದನ್ನು ಖಲೀಲ್ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬರ ಭಾಗ್ಯ ಎನ್ನುತ್ತಾನೆ. ದುಡಿಯುವುದೆಂದರೆ ವಿಶ್ವದ ಅನಂತತೆಯು ಹೆಮ್ಮೆಯಿಂದ ಹೋಗುವ ಘನವೆತ್ತ ಮೆರವಣಿಗೆಯ ಭಾಗವಾಗುವುದು ಎನ್ನುತ್ತಾನೆ. ನಿನ್ನ ಹಣೆಯಲ್ಲಿ ದುಡಿಮೆಯೆಂಬುವುದು ದೌರ್ಭಾಗ್ಯವಾಗಿ ಬರೆದಿದ್ದರೆ, ದುಡಿಯುವಾಗ ಸುರಿವ ನಿನ್ನ ಬೆವರು ಅದನ್ನು ತೊಡೆದು ಹಾಕಿ ಬಿಡುವುದು ಎಂದು ಬಿಡುತ್ತಾನೆ ಈ ಪಾಪಿ ಖಲೀಲ.! ದೇವರ ಶಾಪವನ್ನು ಹೆಮ್ಮೆಯ ಬದುಕಿನ ಭಾಗವಾಗಿಸಿಕೊಳ್ಳುತ್ತಾನೆ. ಸಾಲದ್ದಕ್ಕೆ ಪ್ರೇಮದ ಮೂರ್ತ ಸ್ವರೂಪವೇ ದುಡಿಮೆ ಎನ್ನುತ್ತಾನೆ. ನೀನು ಪ್ರೀತಿಸುವುದನ್ನು ನಿನ್ನ ಕೆಲಸದಲ್ಲಿ ತೋರಿಸೆನ್ನುತ್ತಾನೆ.

ದಿ ಪ್ರಾಫೆಟ್ ಎಂದು ಖಲೀಲ್ ಗಿಬ್ರಾನ್ ಬರೆದ ಅರಿವಿನ ಹೊತ್ತಿಗೆಯು ಬಹುಪಾಲು ವಿಶ್ವದ ಎಲ್ಲಾ ಭಾಷೆಗಳಲ್ಲಿಯೂ ಅನುವಾದಿತವಾಗಿವೆ. ಕನ್ನಡದಲ್ಲಿ ಜಿ.ಎನ್ ರಂಗನಾಥ್, ಬಂಜಗೆರೆ ಜಯಪ್ರಕಾಶ್, ದೇವದತ್ತ ಇಡೀ ಪುಸ್ತಕವನ್ನೇ ಅನುವಾದಿಸಿದ್ದರೆ, ತಮಗೆ ಬೇಕಾದಂತಹ ಭಾಗಗಳನ್ನು ಬಹಳಷ್ಟು ಲೇಖಕರು ಅನುವಾದಿಸಿ ಸಂದರ್ಭೋಚಿತವಾಗಿ ತಮ್ಮ ಬರಹಗಳಲ್ಲಿ ಉಲ್ಲೇಖಿಸಿರುತ್ತಾರೆ. ಖಲೀಲನ ಪ್ರಾಫೆಟನ್ನು ಪ್ರವಾದಿ ಎನ್ನುವುದಕ್ಕಿಂತ ದಾರ್ಶನಿಕ ಎಂದು ಕನ್ನಡದಲ್ಲಿ ಕರೆಯುವುದು ಸೂಕ್ತವೆಂದೆನಿಸುತ್ತದೆ.
ಅಲ್ ಮುಸ್ತಾಫ ತನ್ನ ಪಟ್ಟಣಕ್ಕೆ ಮರಳಲು ಬೆಟ್ಟವಿಳಿದು ಬಂದಾಗ ಊರವರು ಸೇರುತ್ತಾರೆ.

ಎದೆಗೆ ಮಗುವನ್ನು ಅವುಚಿಕೊಂಡಿರುವ ಮಹಿಳೆ ಮಗುವಿನ ಬಗ್ಗೆ ಹೇಳು ಎಂದರೆ, “ಮಗುವೆಂಬುದು ನಿಮ್ಮ ಮೂಲಕ ಬಂದಿರುವವರೇ ಹೊರತು ನಿಮ್ಮಿಂದ ಅಲ್ಲ” ಎನ್ನುತ್ತಾ ಮಕ್ಕಳ ಮೇಲೆ ಪೋಕರಿಗಿರುವ ಅಧಿಕಾರವನ್ನು ಕಿತ್ತು, “ನೀವು ಮಕ್ಕಳಂತಾಗಬೇಕೇ ಹೊರತು, ಮಕ್ಕಳನ್ನು ನಿಮ್ಮಂತೆ ಮಾಡಬೇಡಿ. ಏಕೆಂದರೆ ಅವರು ಹೊಂದಿರುವ ಕನಸನ್ನು ನೀವು ಎಂದಿಗೂ ಹೊಂದಲಾರಿರಿ” ಎಂದೆಚ್ಚರಿಸುತ್ತಾನೆ. ಹಿರಿಯರಿಗೆ ಬಾಗಬೇಕು ಎಂದು ಸಾಮಾನ್ಯ ಬೋಧನೆಯನ್ನು ಮಕ್ಕಳಿಗೆ ಮಾಡುವಾಗ ಖಲೀಲ್ ನೀವು ಬಿಲ್ಲಿನಂತೆ ಬಾಗಿ ಮಕ್ಕಳು ಬಾಣದಂತೆ ಚಿಮ್ಮಲಿ ಎನ್ನುತ್ತಾನೆ.

ಮನೆ ಕಟ್ಟುವವನು ಮನೆಯ ಬಗ್ಗೆ ಕೇಳಿದರೆ, “ನಿನ್ನ ದೇಹದ ವಿಸ್ತೃತ ರೂಪವೇ ನಿನ್ನ ಮನೆ” ಎನ್ನುತ್ತಾನೆ. ವ್ಯಾಪಾರಿ ವ್ಯಾಪಾರದ ಬಗ್ಗೆ, ಪ್ರೇಮಿಯು ಪ್ರೇಮದ ಬಗ್ಗೆ, ತಳವಾರನು ಕಾನೂನು ವ್ಯವಸ್ಥೆಯ ಬಗ್ಗೆ, ಬಟ್ಟೆಯ ಬಗ್ಗೆ; ಹೀಗೆ ನಾನಾ ವಿಷಯಗಳ ಬಗ್ಗೆ ಕೇಳಿದವರಿಗೆಲ್ಲಾ ಉತ್ತರಿಸುತ್ತಾ ಹೋಗುವ ಅಲ್ ಮುಸ್ತಾಫ ತನ್ನ ಹಡಗು ಬರಲು ಹೊರಟು ಹೋಗುತ್ತಾನೆ, ಪ್ರಶ್ನಿಸಿದವರಿಗೆಲ್ಲಾ ಅರಿವಿನ ಒಳ ನೋಟಗಳನ್ನು ಕೊಟ್ಟು.

ಪ್ರಾಫೆಟ್ಟಿನ ಪುಟವಿಟ್ಟ ಪುಟಗಳು ಕತ್ತಲಲ್ಲಿಯೂ ಹೊಳೆಯುತ್ತಿರುತ್ತವೆ. ಸಂಬಂಧಗಳ ಸಂಘರ್ಷಗಳಲ್ಲಿ, ಅಸೂಯೆ, ಮತ್ಸರ ಮೂಡಿದ ಕ್ಷಣಗಳಲ್ಲಿ, ಲೋಕದ ರೂಢಿಯ ಭಾವನೆಗಳ್ಯಾವವೇ ಆದರೂ ಕಣ್ಣುಗಳಲ್ಲಿ ಕತ್ತಲಾಗಿ ದಾರಿ ಮಸುಕಾದಾಗ ಖಲೀಲನ ಪ್ರಾಫೆಟ್ ತನ್ನರಿವ ನೋಟಗಳ ಬೆಳಕನ್ನು ನಮ್ಮರಿವ ಕಣ್ಣುಗಳಿಗೆ ಧಾರೆಯೆರೆಯುತ್ತಾನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ. ಬಂಗಾಳ ಎಸ್‌ಐಆರ್ | ಮೇಲ್ಮನವಿ ನ್ಯಾಯಮಂಡಳಿಗಳಿಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿರುವ ಮೇಲ್ಮನವಿ ನ್ಯಾಯಾಧಿಕರಣಗಳ ನಿರ್ಧಾರಗಳಿಗೆ ಯಾವುದೇ ನಿರ್ದಿಷ್ಟ ಸಮಯದ ಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್...

‘ಎಸ್‌ಐಆರ್‌’ನಿಂದ ಹೆಸರು ಡಿಲೀಟ್‌ ಆದವರಿಗೆ ‘ಹೊಸ ಮತದಾರರ ನೋಂದಣಿ’ ಯಾಕೆ?

ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾಗಿದ್ದರೆ ನಮೂನೆ ಸಂಖ್ಯೆ 6 ಅನ್ನು (Form No. 6) ಸಲ್ಲಿಸಿ ಎಂದು ಜುಲೈ 22 ರಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ...

ನೀಟ್ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ : ಸಭಾತ್ಯಾಗ ಮಾಡಿದ ಬಿಜೆಪಿಯ ಏಕೈಕ ಶಾಸಕ

ತಮಿಳುನಾಡು ವಿಧಾನಸಭೆಯು ಮಂಗಳವಾರ (ಆ.11) ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಪರೀಕ್ಷೆಗಳನ್ನು ನಡೆಸುವಲ್ಲಿ ಪದೇ ಪದೇ...

‘ಬಹುಸಂಖ್ಯಾತ ಭಾವನೆಯು ಸಾಂವಿಧಾನಿಕ ಹಕ್ಕುಗಳನ್ನು ಮರೆಮಾಡಲು ಸಾಧ್ಯವಿಲ್ಲ’: ಇಸ್ಲಾಂ ಧರ್ಮ ಸ್ವೀಕರಿಸಿದ್ದ ಸಹೋದರಿಯರ ಅಕ್ರಮ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತೀವ್ರ ತರಾಟೆ

ಹಿಂದೂ ಧರ್ಮದಿಂದ ಸ್ವಯಂಪ್ರೇರಿತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ, ಸ್ವಂತ ತಂದೆ ಹಾಗೂ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಅಕ್ರಮ ಹಸ್ತಕ್ಷೇಪದಿಂದಾಗಿ ವರ್ಷಗಳ ಕಾಲ ತಮ್ಮ ಮೂಲಭೂತ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದ ಇಬ್ಬರು ವಯಸ್ಕ...

ಸಂವಿಧಾನಬದ್ಧ ದಾಖಲೆಗಳಿದ್ದರೂ ಪಶ್ಚಿಮ ಬಂಗಾಳದ ಮುಸ್ಲಿಂ ಮಹಿಳೆ ‘ಒಳನುಸುಳುಕೋರ’ರೆಂದು ಬಾಂಗ್ಲಾಕ್ಕೆ ಗಡೀಪಾರು: ಭಾರತದಲ್ಲೇ ಉಳಿದ ಪತಿ, ಇಬ್ಬರು ಮಕ್ಕಳು

ಭಾರತೀಯ ಪೌರತ್ವವನ್ನು ಸ್ಪಷ್ಟವಾಗಿ ಸಾಬೀತುಪಡಿಸುವ ಜನನ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಮತ್ತು ಸ್ವಂತ ಭೂಮಿಯ ದಾಖಲೆಗಳು ಕೈಯಲ್ಲಿದ್ದರೂ, ಪಶ್ಚಿಮ ಬಂಗಾಳದ 40 ವರ್ಷದ ಮುಸ್ಲಿಂ ಮಹಿಳೆಯೊಬ್ಬರನ್ನು 'ಒಳನುಸುಳುಕೋರ' ಎಂಬ...

SIR ನಂತರ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ : ನಟ ಪ್ರಕಾಶ್ ರಾಜ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಂತರ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ ಎಂದು ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ...

ಸರ್ಕಾರಿ ಶಾಲೆಗಳ ಸುಧಾರಣೆಗೆ ದೇಶಾದ್ಯಂತ ಅಭಿಯಾನ ಘೋಷಿಸಿದ ಅಭಿಜೀತ್ ದೀಪ್ಕೆ

ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳನ್ನು ಸುಧಾರಿಸಲು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ರಾಷ್ಟ್ರವ್ಯಾಪಿ ಅಭಿಯಾನ ಘೋಷಿಸಿದ್ದಾರೆ. "ಪೋಷಕರು ಶಾಲೆಗಳ ಮೂಲಭೂತ ಸೌಲಭ್ಯಗಳ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು, ಶಾಲೆಗಳನ್ನು ಸುಧಾರಿಸುವ...

ಕರ್ನಾಟಕದ ASDDO ಸಂಖ್ಯೆ 3 ಲಕ್ಷದಷ್ಟು ಇಳಿಕೆ : SIR ಪ್ರಕ್ರಿಯೆ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದ ವರದಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಲ್ಲಿ ಇದುವರೆಗಿನ ಅತಿ ದೊಡ್ಡ ತಿದ್ದುಪಡಿ ಕರ್ನಾಟಕದಲ್ಲಿ ಆಗಿದ್ದು, ಮತದಾನದ ಹಕ್ಕನ್ನು ಕಳೆದುಕೊಳ್ಳುವ ಹಂತದಲ್ಲಿದ್ದ ಸುಮಾರು 3 ಲಕ್ಷ ಜನರನ್ನು ಮತ್ತೆ ಮತದಾರರ ಪಟ್ಟಿಗೆ...

ವಸತಿಗೃಹದಲ್ಲಿ ಹೋಮ-ಪೂಜೆ ಆಯೋಜನೆ; ಬಾಗಲಕೋಟೆ ತೋಟಗಾರಿಕೆ ವಿವಿ ಕುಲಪತಿಗಳಿಂದ ಅಧಿಕಾರ ದುರುಪಯೋಗ

ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಸತಿಗೃಹದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಅಧಿಕೃತ‌ ಲೆಟರ್‌ಹೆಡ್‌ ಮೂಲಕ ಆಹ್ವಾನವನ್ನೂ ಹೊರಡಿಸುವ ಮೂಲಕ ಕುಲಪತಿ ಡಾ. ವಿಷ್ಣುವರ್ಧನ ಅವರು ಅಧಿಕಾರ ದುರುಪಯೋಗ...

ಕಪ್ಪು ಕುರ್ತಾ-ಪೈಜಾಮ ಧರಿಸಿದ್ದ ಕಲಾವಿದನಿಗೆ ಥಳಿಸಿದ ಹಿಂದುತ್ವ ಗುಂಪು: ಮುಸ್ಲಿಂ ಎಂದು ಶಂಕಿಸಿ ಅಮಾನವೀಯ ಹಲ್ಲೆ

ರಂಗಭೂಮಿ ಕಲಾವಿದರೊಬ್ಬರು ಕಪ್ಪು ಕುರ್ತಾ-ಪೈಜಾಮ ಧರಿಸಿದ್ದಕ್ಕಾಗಿ ಮುಸ್ಲಿಂ ಎಂದು ಶಂಕಿಸಿ ಹಿಂದುತ್ವ ಯುವಕರ ಗುಂಪೊಂದು ಅವರನ್ನು ಕ್ರೂರವಾಗಿ ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಶುಭಂಕರ್ ದಾಸ್ ಶರ್ಮಾ...