HomeUncategorized'ದಿ ಪ್ರಾಫೆಟ್' ಖಲೀಲ್ ಗಿಬ್ರಾನ್ : ಯೋಗೇಶ್ ಮಾಸ್ಟರ್

‘ದಿ ಪ್ರಾಫೆಟ್’ ಖಲೀಲ್ ಗಿಬ್ರಾನ್ : ಯೋಗೇಶ್ ಮಾಸ್ಟರ್

- Advertisement -
- Advertisement -

ಯೋಗೇಶ್ ಮಾಸ್ಟರ್ ಅಪಾರ ಓದು ಮತ್ತು ಜೀವನ ಪ್ರೀತಿಯಿರುವ ಸೃಜನಶೀಲ ವ್ಯಕ್ತಿ. ಡುಂಢಿ ಕಾದಂಬರಿ ವಿವಾದದಿಂದ ‘ಖ್ಯಾತ’ರಾದ ಅವರು ಬಹುಮುಖಿ ಪ್ರತಿಭೆಯುಳ್ಳ ಕಲಾವಿದ. ಈ ವಾರದಿಂದ ಅವರ ಪುಟಕ್ಕಿಟ್ಟ ಪುಟಗಳು ಇಲ್ಲಿ ಹೊಳೆಯಲಿವೆ. ಜೀವನದ ಬೇರೆ ಬೇರೆ ಸಂದರ್ಭದ ಜಟಿಲ ಕ್ಷಣಗಳಲ್ಲಿ ಎಂದೋ ಓದಿದ ಪುಸ್ತಕವೊಂದರಿಂದ ಒಳನೋಟವೊಂದು ಮನದಲ್ಲಿ ತೇಲಿ ಬರುತ್ತದೆ. ಆ ಪುಸ್ತಕವು ಜಗತ್ತಿನ ಯಾವುದೋ ಭಾಷೆಯ ಮಹತ್ವದ ಕೃತಿಯಾಗಿರಬಹುದು ಅಥವಾ ನಮ್ಮದೇ ಪರಿಸರದ ಭಾಷೆಯ ಪುಸ್ತಕವಾಗಿರಬಹುದು. ಅಂತಹ ಪುಸ್ತಕಗಳು ಕತ್ತಲೆಯಲ್ಲೂ ಹೊಳೆಯುತ್ತವೆ. ಆ ರೀತಿ ಹೊಳೆಯುವ ಮಹತ್ವದ ಸಾಲುಗಳನ್ನು ಮತ್ತು ಆ ಪುಸ್ತಕದ ಕುರಿತ ಸಾಂದರ್ಭಿಕ ಮಾಹಿತಿಯನ್ನು ಪ್ರತೀ ವಾರವೂ ನಮ್ಮ ಓದುಗರಿಗೆ ಯೋಗೇಶ್ ಮಾಸ್ಟರ್ ತಲುಪಿಸಲಿದ್ದಾರೆ.

ಆದಿಯಲ್ಲಿ ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸಿದ ದೇವರು ಮನುಷ್ಯನನ್ನೂ ಸೃಷ್ಟಿಸಿದ ತನ್ನದೇ ಪ್ರತಿರೂಪದಲ್ಲಿ. ಆದಾಮ ಮತ್ತು ಹವ್ವರೆಂಬ ಆ ಗಂಡು ಹೆಣ್ಣುಗಳನ್ನು ಸ್ವತಂತ್ರವಾಗಿ ಸ್ವರ್ಗೋದ್ಯಾನದಲ್ಲಿ ಬಿಟ್ಟು, ಅರಿವನ್ನು ನೀಡುವ ಮರದ ಫಲವನ್ನು ತಿನ್ನಬಾರದೆಂಬ ನಿಬಂಧನೆಯನ್ನಿಟ್ಟು ಅವರನ್ನು ಚೆನ್ನಾಗಿಟ್ಟುಕೊಂಡಿದ್ದ. ತಿನ್ನಬಾರದು ಎಂದು ಅವನು ಏಕೆ ಹೇಳಿದ್ದನೋ?! ಆದರೆ ಅವಳು ತಿಂದಳು, ಅವನೂ ತಿಂದ. ಇಬ್ಬರಿಗೂ ಅರಿವುಂಟಾಯಿತು. ತಮ್ಮ ಬೆತ್ತಲೆಯನ್ನು ಅರಿವೆಯ ಕತ್ತಲೆಯಲ್ಲಿ ಇಟ್ಟುಕೊಳ್ಳಬೇಕೆಂಬುದೇ ಮೊದಲ ಅರಿವು. ತಾನು ಲೋಕ ಸಂಚಾರಕ್ಕೆ ಹೋಗಿದ್ದು ಮರಳಿ ಬಂದಾಗ ದೇವರು ಕಂಡಿದ್ದು, ಸ್ತ್ರೀ ತನ್ನ ಸಂಕೋಚದ ಮರೆಯಿಂದ ಉತ್ತರಿಸಿದ್ದು. ಕೋಪಗೊಂಡ ಅವನು ಸ್ವರ್ಗೋದ್ಯಾನದಿಂದ ಹೊರಗಟ್ಟಿದ. ಮಣ್ಣಿಂದ ಬಂದ ಮನುಷ್ಯರು ಮಣ್ಣಿಗೇ ಹೋಗಲೆನ್ನುತ್ತಾ ಗಂಡು-ಹೆಣ್ಣಿಗೆರಡು ಶಾಪಗಳನ್ನು ಕೊಟ್ಟ. ಹೆಣ್ಣಿಗೆ ನೋವಿನಲ್ಲಿ ಹೆರುವ ಶಾಪವಾದರೆ, ಗಂಡಿಗೆ ದುಡಿವ ಶಾಪವ.

ದೇವರು ಶಾಪ ಎನ್ನುವ ದುಡಿದು ಬದುಕುವುದನ್ನು ಖಲೀಲ್ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬರ ಭಾಗ್ಯ ಎನ್ನುತ್ತಾನೆ. ದುಡಿಯುವುದೆಂದರೆ ವಿಶ್ವದ ಅನಂತತೆಯು ಹೆಮ್ಮೆಯಿಂದ ಹೋಗುವ ಘನವೆತ್ತ ಮೆರವಣಿಗೆಯ ಭಾಗವಾಗುವುದು ಎನ್ನುತ್ತಾನೆ. ನಿನ್ನ ಹಣೆಯಲ್ಲಿ ದುಡಿಮೆಯೆಂಬುವುದು ದೌರ್ಭಾಗ್ಯವಾಗಿ ಬರೆದಿದ್ದರೆ, ದುಡಿಯುವಾಗ ಸುರಿವ ನಿನ್ನ ಬೆವರು ಅದನ್ನು ತೊಡೆದು ಹಾಕಿ ಬಿಡುವುದು ಎಂದು ಬಿಡುತ್ತಾನೆ ಈ ಪಾಪಿ ಖಲೀಲ.! ದೇವರ ಶಾಪವನ್ನು ಹೆಮ್ಮೆಯ ಬದುಕಿನ ಭಾಗವಾಗಿಸಿಕೊಳ್ಳುತ್ತಾನೆ. ಸಾಲದ್ದಕ್ಕೆ ಪ್ರೇಮದ ಮೂರ್ತ ಸ್ವರೂಪವೇ ದುಡಿಮೆ ಎನ್ನುತ್ತಾನೆ. ನೀನು ಪ್ರೀತಿಸುವುದನ್ನು ನಿನ್ನ ಕೆಲಸದಲ್ಲಿ ತೋರಿಸೆನ್ನುತ್ತಾನೆ.

ದಿ ಪ್ರಾಫೆಟ್ ಎಂದು ಖಲೀಲ್ ಗಿಬ್ರಾನ್ ಬರೆದ ಅರಿವಿನ ಹೊತ್ತಿಗೆಯು ಬಹುಪಾಲು ವಿಶ್ವದ ಎಲ್ಲಾ ಭಾಷೆಗಳಲ್ಲಿಯೂ ಅನುವಾದಿತವಾಗಿವೆ. ಕನ್ನಡದಲ್ಲಿ ಜಿ.ಎನ್ ರಂಗನಾಥ್, ಬಂಜಗೆರೆ ಜಯಪ್ರಕಾಶ್, ದೇವದತ್ತ ಇಡೀ ಪುಸ್ತಕವನ್ನೇ ಅನುವಾದಿಸಿದ್ದರೆ, ತಮಗೆ ಬೇಕಾದಂತಹ ಭಾಗಗಳನ್ನು ಬಹಳಷ್ಟು ಲೇಖಕರು ಅನುವಾದಿಸಿ ಸಂದರ್ಭೋಚಿತವಾಗಿ ತಮ್ಮ ಬರಹಗಳಲ್ಲಿ ಉಲ್ಲೇಖಿಸಿರುತ್ತಾರೆ. ಖಲೀಲನ ಪ್ರಾಫೆಟನ್ನು ಪ್ರವಾದಿ ಎನ್ನುವುದಕ್ಕಿಂತ ದಾರ್ಶನಿಕ ಎಂದು ಕನ್ನಡದಲ್ಲಿ ಕರೆಯುವುದು ಸೂಕ್ತವೆಂದೆನಿಸುತ್ತದೆ.
ಅಲ್ ಮುಸ್ತಾಫ ತನ್ನ ಪಟ್ಟಣಕ್ಕೆ ಮರಳಲು ಬೆಟ್ಟವಿಳಿದು ಬಂದಾಗ ಊರವರು ಸೇರುತ್ತಾರೆ.

ಎದೆಗೆ ಮಗುವನ್ನು ಅವುಚಿಕೊಂಡಿರುವ ಮಹಿಳೆ ಮಗುವಿನ ಬಗ್ಗೆ ಹೇಳು ಎಂದರೆ, “ಮಗುವೆಂಬುದು ನಿಮ್ಮ ಮೂಲಕ ಬಂದಿರುವವರೇ ಹೊರತು ನಿಮ್ಮಿಂದ ಅಲ್ಲ” ಎನ್ನುತ್ತಾ ಮಕ್ಕಳ ಮೇಲೆ ಪೋಕರಿಗಿರುವ ಅಧಿಕಾರವನ್ನು ಕಿತ್ತು, “ನೀವು ಮಕ್ಕಳಂತಾಗಬೇಕೇ ಹೊರತು, ಮಕ್ಕಳನ್ನು ನಿಮ್ಮಂತೆ ಮಾಡಬೇಡಿ. ಏಕೆಂದರೆ ಅವರು ಹೊಂದಿರುವ ಕನಸನ್ನು ನೀವು ಎಂದಿಗೂ ಹೊಂದಲಾರಿರಿ” ಎಂದೆಚ್ಚರಿಸುತ್ತಾನೆ. ಹಿರಿಯರಿಗೆ ಬಾಗಬೇಕು ಎಂದು ಸಾಮಾನ್ಯ ಬೋಧನೆಯನ್ನು ಮಕ್ಕಳಿಗೆ ಮಾಡುವಾಗ ಖಲೀಲ್ ನೀವು ಬಿಲ್ಲಿನಂತೆ ಬಾಗಿ ಮಕ್ಕಳು ಬಾಣದಂತೆ ಚಿಮ್ಮಲಿ ಎನ್ನುತ್ತಾನೆ.

ಮನೆ ಕಟ್ಟುವವನು ಮನೆಯ ಬಗ್ಗೆ ಕೇಳಿದರೆ, “ನಿನ್ನ ದೇಹದ ವಿಸ್ತೃತ ರೂಪವೇ ನಿನ್ನ ಮನೆ” ಎನ್ನುತ್ತಾನೆ. ವ್ಯಾಪಾರಿ ವ್ಯಾಪಾರದ ಬಗ್ಗೆ, ಪ್ರೇಮಿಯು ಪ್ರೇಮದ ಬಗ್ಗೆ, ತಳವಾರನು ಕಾನೂನು ವ್ಯವಸ್ಥೆಯ ಬಗ್ಗೆ, ಬಟ್ಟೆಯ ಬಗ್ಗೆ; ಹೀಗೆ ನಾನಾ ವಿಷಯಗಳ ಬಗ್ಗೆ ಕೇಳಿದವರಿಗೆಲ್ಲಾ ಉತ್ತರಿಸುತ್ತಾ ಹೋಗುವ ಅಲ್ ಮುಸ್ತಾಫ ತನ್ನ ಹಡಗು ಬರಲು ಹೊರಟು ಹೋಗುತ್ತಾನೆ, ಪ್ರಶ್ನಿಸಿದವರಿಗೆಲ್ಲಾ ಅರಿವಿನ ಒಳ ನೋಟಗಳನ್ನು ಕೊಟ್ಟು.

ಪ್ರಾಫೆಟ್ಟಿನ ಪುಟವಿಟ್ಟ ಪುಟಗಳು ಕತ್ತಲಲ್ಲಿಯೂ ಹೊಳೆಯುತ್ತಿರುತ್ತವೆ. ಸಂಬಂಧಗಳ ಸಂಘರ್ಷಗಳಲ್ಲಿ, ಅಸೂಯೆ, ಮತ್ಸರ ಮೂಡಿದ ಕ್ಷಣಗಳಲ್ಲಿ, ಲೋಕದ ರೂಢಿಯ ಭಾವನೆಗಳ್ಯಾವವೇ ಆದರೂ ಕಣ್ಣುಗಳಲ್ಲಿ ಕತ್ತಲಾಗಿ ದಾರಿ ಮಸುಕಾದಾಗ ಖಲೀಲನ ಪ್ರಾಫೆಟ್ ತನ್ನರಿವ ನೋಟಗಳ ಬೆಳಕನ್ನು ನಮ್ಮರಿವ ಕಣ್ಣುಗಳಿಗೆ ಧಾರೆಯೆರೆಯುತ್ತಾನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...