Homeಮುಖಪುಟಭಾರತದ ನೈಜ ಪತ್ರಿಕೋದ್ಯಮದ ಆತ್ಮಸಾಕ್ಷಿಯ ಮೂವರು ಕೀಪರ್‍ಗಳು

ಭಾರತದ ನೈಜ ಪತ್ರಿಕೋದ್ಯಮದ ಆತ್ಮಸಾಕ್ಷಿಯ ಮೂವರು ಕೀಪರ್‍ಗಳು

ಪ್ರಧಾನಿ ಕಛೇರಿಯಿಂದ ಹಬ್ಬಿಸಲಾಗುವ ಸುಳ್ಳುಗಳನ್ನು ಬಹಿರಂಗಪಡಿಸುವ ಮೂಲಕ ಪುಣ್ಯ ಪ್ರಸೂನ್ ಬಾಜ್‍ಪಾಯಿ ಎಬಿಪಿ ನ್ಯೂಸ್‍ನಲ್ಲಿ ಅವರ ಮಾಸ್ಟರ್‍ಸ್ಟ್ರೋಕ್ ಕಾರ್ಯಕ್ರಮದಲ್ಲಿ ಪ್ರಖ್ಯಾತರಾದವರು.

- Advertisement -
- Advertisement -

ಮೂಲ: ದಿ ವಲ್ಡ್ ಸಿಖ್ ನ್ಯೂಸ್ 

ಕನ್ನಡಕ್ಕೆ: ಸೋಮಶೇಖರ್ ಚಲ್ಯ

ತಮ್ಮ ಜೀವ ಮತ್ತು ತಮ್ಮ ಕುಟುಂಬಗಳಿಗೆ ಬೆದರಿಕೆಗಳಿದ್ದರೂ ಎನ್‍ಡಿಟಿವಿಯ ರವೀಶ್ ಕುಮಾರ್, ಎಬಿಪಿಯ ಪುಣ್ಯ ಪ್ರಸುನ್ ಬಾಜ್ಪೈ ಮತ್ತು ಅಭಿಶಾರ್ ಶರ್ಮಾರವರು ದೇಶದ ಚುನಾವಣೆಯ ಸಂದರ್ಭದಲ್ಲಿ ದೇಶದ ಆತ್ಮಸಾಕ್ಷಿಯ ಕೀಪರ್‍ಗಳಾಗಿ ನಿಂತಿದ್ದರು. ಭಾರತದ ಪ್ರಧಾನಿ ಮೋದಿರವರ ಅಭಿಪ್ರಾಯ ಉತ್ಪಾದನಾ ಯಂತ್ರದ ಮುಖವಾಡ ಕಳಚುವ ಅವರ ಪ್ರಾಮಾಣಿಕ ಮತ್ತು ನಿರ್ಣಾಯಕ ಕೆಲಸಕ್ಕಾಗಿ ದಿ ವಲ್ಡ್ ಸಿಖ್ ನ್ಯೂಸ್ (ಡಬ್ಲ್ಯೂಎಸ್‍ಎನ್) ಅವರನ್ನು ಗೌರವಿಸಿದೆ.

ರವೀಶ್ ಕುಮಾರ್‍ರವರು ಯಾವುದೇ ಮಿಂಚಿನ ಪದಗಳನ್ನು ಬಳಸದೇ ರಾಜಕೀಯ ನಾಯಕರನ್ನು ನೇರವಾಗಿ ಟೀಕೆ ಮಾಡುವ ಮತ್ತು ಜನರ ನೈಜ ಅಜೆಂಡಾಗಳನ್ನು ಮುಂದೆತರುವಲ್ಲಿ ಯಶಸ್ವಿಯಾದ ಪತ್ರಕರ್ತರಾಗಿದ್ದಾರೆ. ಆದ ಕಾರಣ ಭಾರತೀಯ ಜನತಾ ಪಾರ್ಟಿ ಬಹಿಷ್ಕರಿಸಿದ ಮೊದಲ ಪತ್ರಕರ್ತರಾಗಿದ್ದಾರೆ. ಇವರ ಹೆಸರಿಗೆ ಕಳಂಕ ತರಲು ಯತ್ನಿಸುತ್ತಿರುವ ಬಲಪಂಥೀಯ ನೂರು ಕಾರ್ಯಕರ್ತರು ಓದುವುದಕ್ಕಿಂತ ಹೆಚ್ಚು ಓದಿರುವ ವಿಚಾರವಂತರಾಗಿದ್ದಾರೆ. ಹಿಂದಿ ಮಾತನಾಡುತ್ತಾ, ಅವರ ಆಲೋಚನೆಗಳನ್ನು ಗ್ರಹಿಸುವ ಯುವಜನರ ಆದರ್ಶವಾಗಿದ್ದಾರೆ. ಇವರ ಆದರ್ಶಗಳು ಮೋಡಿ ಮಾಡುವಂತವಲ್ಲದೆ ನೈಜತೆಯಿಂದ ಕೂಡಿವೆ. ಅವರ ಪ್ರಕಾರ ನೈಜ ಪತ್ರಿಕೋದ್ಯಮವನ್ನು ಅನುಸರಿಸಲು ಪ್ರಯತ್ನಸುವ ಕೆಲವು ಯೂಟ್ಯೂಬ್ ಚಾನಲ್‍ಗಳು, ಹವ್ಯಾಸಿ ಮತ್ತು ವೃತ್ತಿಪರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಪೂರ್ತಿಗೊಳಿಸುವುದರಿಂದ ಅವರನ್ನು ಪತ್ರಿಕೋದ್ಯಮದ ಭಾಗವಾಗಿಸಬಹುದು.

ಪ್ರಧಾನಿ ಮತ್ತು ಪ್ರಧಾನಿ ಕಛೇರಿಯಿಂದ ಹಬ್ಬಿಸಲಾಗುವ ಸುಳ್ಳುಗಳನ್ನು ಬಹಿರಂಗಪಡಿಸುವ ಮೂಲಕ ಪುಣ್ಯ ಪ್ರಸೂನ್ ಬಾಜ್‍ಪಾಯಿ ಎಬಿಪಿ ನ್ಯೂಸ್‍ನಲ್ಲಿ ಅವರ ಮಾಸ್ಟರ್‍ಸ್ಟ್ರೋಕ್ ಕಾರ್ಯಕ್ರಮದಲ್ಲಿ ಪ್ರಖ್ಯಾತರಾದವರು. ಇತ್ತೀಚೆಗೆ ಈ ಚಾನೆಲ್ ಒಂದು ಪಕ್ಷದ ಪರವಾಗಿ ಕೆಲಸ ಮಾಡಿದ ಕಾರಣ ಎಬಿಪಿ ನ್ಯೂಸ್ ಪ್ರಾಮಾಣೀಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಪುಣ್ಯ ಪ್ರಸಾನ್ ಎಬಿಪಿಗೆ ರಾಜಿನಾಮೆ ನೀಡಿದರು. ಸುದ್ದಿವಾಹಿನಿಗಳು ಮತ್ತು ಪತ್ರಿಕೆಗಳ ಮೇಲ್ವಿಚಾರಣೆ ಮಾಡಿರುವ ಅವರು ಮೋದಿ ಸರ್ಕಾರ ಸಂಪೂರ್ಣ ಗೊಬೆಲಿಯನ್ ತಂತ್ರಗಳ ಸುತ್ತ ಕೆಲಸ ಮಾಡುತ್ತಿದೆ ಎಂದು ಅವರು ನಿರೂಪಿಸಿದ್ದರು. ಅವರ ಯೂಟ್ಯೂಬ್ ನ್ಯೂಸ್ ಚಾನೆಲ್ ಪ್ರಖ್ಯಾತವಾಗಿದ್ದು ಪರ್ಯಾಯ ಮಾಧ್ಯಮವಾಗಿ ಕೆಲಸ ಮಾಡುತ್ತಿದೆ.

ಎಬಿಪಿಗೆ ರಾಜಿನಾಮೆ ನೀಡಿ ಹೊರಬಂದ ಇನ್ನೊರ್ವ ಪತ್ರಕರ್ತ ಅಭಿಶಾರ್ ಶರ್ಮಾ ಸಹ ಯೂಟ್ಯೂಬ್ ಚಾಲನ್‍ ಶುರುಮಾಡಿದ್ದಾರೆ. ಚುನಾವಣಾ ಆಯೋಗದ ಎಲ್ಲಾ ರೀತಿಯ ಗಿಮಿಕ್ ಮತ್ತು ಲೋಪಗಳನ್ನು ಪದೇ ಪದೇ ಪಟ್ಟು ಬಿಡದೆ ಎತ್ತಿಹಿಡಿದ ಕಾರ್ಯವೈಖರಿ ಅವರ ಪತ್ರಿಕೊದ್ಯಮದ ಬದ್ದತೆಯನ್ನು ತೋರಿಸಿದೆ. ಅವರ ಹಸನ್ಮುಖ ಮಾತುಗಳು ಮತ್ತು ಕಟು ಸತ್ಯಗಳು ವೀಕ್ಷಕರಿಗೆ ಸುಲಭ ರೀತಿಯಲ್ಲಿ ತಲುಪುತ್ತಿವೆ.

ಈ ಮೂವರು ಆತ್ಮಸಾಕ್ಷಿಯುಳ ಪತ್ರಕರ್ತರು ಚುನಾವಣೆಯ ಮುಂಚೆ ಮತ್ತು ನಂತರದಲ್ಲಿ ನಿಸಂದೇಹವಾಗಿ ಹೀರೋಗಳಾಗಿದ್ದಾರೆ. ಆದರೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಮಾಧ್ಯಮ ಸಂಸ್ಥೆಗಳ ಕಪಟ ಮೌನದಿಂದ ಹಲವು ಸಂಸ್ಥೆಗಳಿಗೆ ಇವರು ಖಳನಾಯಕರಾಗಿ ಕಾಣಿಸುತ್ತಾರೆ.

ಚುನಾವಣೆಯ ನಂತರ ಭಾರತ ಯಾವ ಹಾದಿಯಲ್ಲಿ ಹೋಗುತ್ತದೆಯೋ ತಿಳಿದಿಲ್ಲ. ಆದರೆ ದಿ ವಲ್ಡ್ ಸಿಖ್ ನ್ಯೂಸ್ ಫ್ಯಾಸಿಸಂ ವಿರುದ್ದದ ಹೋರಾಟದಲ್ಲಿ ಮತ್ತು ಪತ್ರಿಕೋದ್ಯಮದ ನೈತಿಕತೆಯನ್ನು ಉಳಿಸಲು ಬದ್ದವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಡಬ್ಲ್ಯೂಎಸ್‍ಎನ್ ಪ್ರಕಟಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...