Homeಮುಖಪುಟಕನ್ನಡ ಸತಿಗೆ, ಮರಾಠಾ ಪತಿ! - ಡಿ.ಎಸ್ ಚೌಗಲೆ

ಕನ್ನಡ ಸತಿಗೆ, ಮರಾಠಾ ಪತಿ! – ಡಿ.ಎಸ್ ಚೌಗಲೆ

ಕನ್ನಡ ಮತ್ತು ಮರಾಠಿಯ ಸಂಬಂಧಕ್ಕೆ ಶತಮಾನಗಳ ಇತಿಹಾಸವಿದೆ. ಕಲೆ, ಸಂಗೀತ, ವಿಚಾರಗಳನ್ನು ಹಂಚಿಕೊಂಡ ಎರಡು ಭಾಷಿಕ ಸಮುದಾಯಗಳು ಬಹುಕಾಲದವರೆಗೆ ಪರಸ್ಪರ ಪ್ರಭಾವಕ್ಕೆ ಒಳಗಾಗಿ ಬೆಳೆದಿರುವ ಬಗೆಯ ಒಂದು ಝಲಕ್‍ಅನ್ನು ಈ ಲೇಖನ ನೀಡುತ್ತದೆ

- Advertisement -
- Advertisement -

ಸುಮಾರು ಹನ್ನೊಂದು ಹನ್ನೆರಡನೆಯ ಶತಮಾನದಿಂದಲೇ ಕನ್ನಡ ಮತ್ತು ಮರಾಠಿ, ಅಷ್ಟೇ ಏಕೆ ಆಂಧ್ರದ ಜನರ ಸಮಾಜ, ಸಂಸ್ಕೃತಿಯೊಂದಿಗೆ ಕೊಡುಕೊಳ್ಳುವಿಕೆ ಇದೆ. ಭಾಷಾವಾರು ಪ್ರಾಂತ್ಯಗಳು ರಚನೆಯಾಗಿ 50 ವರ್ಷಗಳಾಗಿರಬಹುದು. ಆದರೆ ಈ ಸಂಬಂಧಗಳು- ಮಾನವೀಯವಾದ ಸಂಬಂಧಗಳು ಏನಿವೆ-ಕನ್ನಡಿಗರ ನಡುವೆ, ಮರಾಠಿಗರ ನಡುವೆ, ತೆಲುಗಿನವರ ನಡುವೆ- ಇವುಗಳಿಗೆ ಒಂದು ಏಳೆಂಟು ನೂರು ವರ್ಷಗಳ ಇತಿಹಾಸವಿದೆ. ಇದನ್ನು ಅಷ್ಟು ಸುಲಭವಾಗಿ ಒಡೆದುಹಾಕಲು ಆಗುವುದಿಲ್ಲ. ಯಾವುದೇ ರಾಜಕೀಯ ಶಕ್ತಿಗೂ ಇದು ಸಾಧ್ಯವಿಲ್ಲ.

ತುಕಾರಾಮ, ಮಹಾರಾಷ್ಟ್ರದ ಮರಾಠಿ ಜನರ ಮನೆಮಾತಾಗಿರುವ ಒಬ್ಬ ಬಂಡಾಯ ಕವಿ. ತುಕಾರಾಮನನ್ನು ವೈದಿಕರು ತಮ್ಮವನನ್ನಾಗಿ ಮಾಡಿಕೊಳ್ಳುವ ಹುನ್ನಾರ ಮಾಡುತ್ತಲೇ ಬಂದಿದ್ದಾರೆ. ಇಂಥ ಪ್ರಯತ್ನಗಳು ಎಲ್ಲ ಕಾಲಕ್ಕೂ ನಡೆದಿರುವಂತಹವೆ. ತುಕಾರಾಮ ಮೂಲತಃ ಜನಸಮುದಾಯವನ್ನು ಜಾಗರ ಮಾಡುವ ಕವಿ. ಅಭಂಗಕಾರ. ನಮಗೆ ಬಸವಣ್ಣ ಹೇಗೊ ಹಾಗೇಯೇ ಮರಾಠಿಗರ ತುಕಾರಾಮ, ಒಬ್ಬ ಸುಧಾರಕನಾಗಿ ಕೆಲಸ ಮಾಡಿದ್ದಾನೆ.

‘ಕನ್ನಡ ಸತಿಗೆ, ಮರಾಠಾ ಪತಿ’ (ಮರಾಠಾ ಎಂದರೆ ಮರಾಠಿ ಮಾತನಾಡುವ ಮರಾಠಾ ಸಮುದಾಯ), ಅವರಿಬ್ಬರ ಸಂಸಾರ ಹೇಗಿರುತ್ತದೆ ಎಂಬುದನ್ನು ಹೀಗೆ ಹೇಳುತ್ತಾನೆ;

ನೀಡೆನಗೆ ಸಜ್ಜನರ ಸಹವಾಸವನು
ಅವಳು ಕರೆದಳು `ಬಾ ಇಲ್ಲಿ’ ಎಂದು
ಅವನು ನೀಡಿದನು ಸವಟು ತಂದು
ತುಕಾರಾಮನೆಂಬ ಪರಸ್ಪರ ಭೇದವಿದ್ದಲ್ಲಿ
ಸುಖದ ಬದಲಿಗೆ ದುಃಖವೇ ಬೆಳೆಯುವುದಲ್ಲಿ.

ಗೋದಾವರಿ ನದಿ ತಟದವರೆಗಿತ್ತು ಕರುನಾಡು ವಿಸ್ತರಿಸಿಕೊಂಡಿತ್ತು. ಸಹಜವಾಗಿಯೇ ತುಕಾರಾಮ ಅವರಿಗೆ ಕನ್ನಡವೂ ಗೊತ್ತಿರಬಹುದು ಎಂಬುದಕ್ಕೆ ಇದೊಂದು ಉದಾಹರಣೆ.

ಬಸವಣ್ಣನ ಕಾರ್ಯಕ್ಷೇತ್ರ ಸಹ ಮಂಗಳವೇಢೆ ತನಕ ಇತ್ತು. ಅವರ ವಚನಗಳಲ್ಲಿ `ಬತ್ತೀಸರಾಗ’ ಮತ್ತು ವಿಶೇಷ
ರೂಪದಲ್ಲಿ `ಛಪ್ಪನ್ನಐವತ್ತಾರು’ ದ್ವಿರುಕ್ತಿಯ ಮರಾಠಿ ಸಂಖ್ಯಾವಾಚಿ ಪದಗಳು ಬಳಕೆಯಾಗಿವೆ. ಅವು ಭಾಷೆಯ ಭ್ರಾತೃತ್ವವನ್ನೇ ಸಾರುತ್ತವೆ. ಛಪ್ಪನ್ ಅಂದರೇನೆ ಐವತ್ತಾರು!

ಮರಾಠಿ ಜನರ ಸಾಕ್ಷಿ ಪ್ರಜ್ಞೆಯಾಗಿದ್ದ ಜ್ಞಾನೇಶ್ವರನಿಗೆ ಕನ್ನಡ ಗೊತ್ತಿತ್ತು. ಜ್ಞಾನೇಶ್ವರಿಯ ಕನ್ನಡ ಅನುವಾದಗಳು ಬಂದವು. ಅವು ಮತ್ತು ಪಂಢರಾಪುರದ ವಿಠಲನ ವಾರಕರಿ ಸಂಪ್ರದಾಯವು ಭಾಷಿಕ ಬಂಧುತ್ವದ ಬಹುದೊಡ್ಡ ಕೊಂಡಿ ಆಗಿವೆ.

ಉತ್ತರ ಕರ್ನಾಟಕದ ಬಹುತೇಕ ಬ್ರಾಹ್ಮಣರು ಕನ್ನಡ ಮಾತಾಡಿದರೂ ಅವರೊಳಗೆ ಪುಣೆಯ ಪೇಶ್ವಾಯಿ ಪ್ರಭಾವದಿಂದ ಮರಾಠಿ ಪ್ರೀತಿ ಒಳಗೊಳಗೆ ಇದೆ. ರೊಟ್ಟಿಗೆ ಅವರು ಭಕ್ರಿ ಅನ್ನುವುದು. ಮರಾಠಿಯ ಭಾಕರಿ ಪದದ ಅಪಭ್ರಂಶ ರೂಪ. ಚಿತ್ಪಾವನ ಬ್ರಾಹ್ಮಣರು ಮರಾಠಿ ಮಾತಾಡುವರು. ಕೊಂಕಣಿ, ಸಾರಸ್ವತ ಬ್ರಾಹ್ಮಣರಲ್ಲಿ ಹಲವರು ಮರಾಠಿ ಭಾಷಿಕರಾಗಿದ್ದಾರೆ.

ಉತ್ತರ ಕರ್ನಾಟಕದ ಜಿಲ್ಲೆಗಳು ಕರ್ನಾಟಕ ಏಕೀಕರಣಕ್ಕಿಂತ ಮುಂಚೆ ಮುಂಬಯಿ ಪ್ರಾಂತ್ಯದಲ್ಲಿ ಇದ್ದವು ಹೀಗಾಗಿ ಸಹಜವಾಗಿ ಮರಾಠಿ ಪ್ರಭಾವವಿದೆ. ಅದೇ ರೀತಿ ಕಲಬುರಗಿ, ರಾಯಚೂರುಗಳಲ್ಲಿ ಉರ್ದು ಹಿಂದಿ ಪ್ರಭಾವ ಇದೆ. ಹಳೆಯ ಮೈಸೂರು ಭಾಗದವರು ಮೈಸೂರು ರಾಜರ ಆಡಳಿತಕ್ಕೊಳಪಟ್ಟಿದ್ದರೂ ಅಲ್ಲೂ ಬೆಂಗಳೂರಿನಂಥ ನಗರಗಳಲ್ಲಿ ತಮಿಳು ಪ್ರಭಾವವಿದೆಯಲ್ಲ, ಹಾಗೆ.

ಕುರ್ತಕೋಟಿ ಅವರ ಲೇಖನವೊಂದರ ಪ್ರಕಾರ, ಅಚ್ಚಕನ್ನಡ ನೆಲವಾದ ಧಾರವಾಡದಲ್ಲಿ 19ನೆಯ ಶತಮಾನದ ಮಧ್ಯಭಾಗದಲ್ಲಿ ಕನ್ನಡ ಶಾಲೆಗಳಿರಲಿಲ್ಲ. ಮರಾಠಿ ಶಾಲೆಗಳೇ ಇದ್ದವು ಎಂಬ ಉಲ್ಲೇಖವಿದೆ. ಕಾಲಾಂತರದಲ್ಲಿ ಡೆಪ್ಯುಟಿ ಚನ್ನಬಸಪ್ಪರವರು ಕನ್ನಡ ಶಾಲೆ ತೆರೆದರು ಎಂಬ ಮಾಹಿತಿ ಇದೆ. ಇಂದಿಗೂ ಉತ್ತರ ಕರ್ನಾಟಕದ ಗಡಿ ಭಾಗದ ಮಹಿಳೆಯರ ಉಡುಗೆತೊಡುಗೆಯಲ್ಲಿ ಪೇಶ್ವೆಗಳ ಜೀವನಶೈಲಿಯ ಪ್ರಭಾವ ಕಾಣಿಸುತ್ತದೆ.

ಮರಾಠಿಯೊಂದಿಗೆ ಬಾಂಧವ್ಯ ರಂಗಭೂಮಿ ಮತ್ತು ಸಂಗೀತದಲ್ಲಿ ಢಾಳಾಗಿ ಕಾಣಿಸುತ್ತದೆ. ಇವುಗಳ ನಡುವೆ ಒಂದು ಅನೂಹ್ಯ, ಅನನ್ಯವಾದ ಬೆಸುಗೆ ಇದೆ. ಅಷ್ಟೇ ಯಾಕೆ, ಕಲೆಗಳ ಪಟ್ಟುಗಳ ಕೊಡುಕೊಳುವಿಕೆಯೂ ಮಹತ್ವದ್ದು. 1843ರ ನವೆಂಬರ್ 5ರಂದು ಮರಾಠಿಯ ಮೊದಲ ನಾಟಕವು ಪ್ರಯೋಗ ಕಂಡಿತು. ಸಾಂಗಲಿಯ ಸಾಮಂತರಸ ಪಟವರ್ಧನರ ಪ್ರೋತ್ಸಾಹದಿಂದ ವಿಷ್ಣುದಾಸ ಭಾವೆ ಅವರು `ಸೀತಾ ಸ್ವಯಂವರ’ ರಚಿಸಿ ಪ್ರಯೋಗಿಸಿದರು. ಈ ನಾಟಕಕ್ಕೆ ಪ್ರೇರಣೆಯು ಉತ್ತರ ಕನ್ನಡ ಜಿಲ್ಲೆಯ ಕರ್ಕಿ ಮೇಳದ ಯಕ್ಷಗಾನ. 1880ರ ಆಸುಪಾಸಿನಲ್ಲಿ `ಸಂಗೀತ ಸೌಭದ್ರ’, `ಸಂಗೀತ ಶಾಕುಂತಲ’ ನಾಟಕಗಳಿಗೆ ಬೆಳಗಾವಿ ಜಿಲ್ಲೆಯ `ಶ್ರೀಕೃಷ್ಣ ಪಾರಿಜಾತ’ದ ಸಂಗೀತದ ಅಳವಡಿಕೆಯಾಗಿತ್ತು. ಅದರ ಕರ್ತೃ ಅಣ್ಣಾಸಾಹೇಬ ಕಿರ್ಲೋಸ್ಕರರು. ಇವರು ಮರಾಠಿ ಸಂಗೀತ ನಾಟಕದ ಪಿತಾಮಹ. ಅವರು ಹುಟ್ಟಿದ್ದು ಕರ್ನಾಟಕದ ಗುರ್ಲಹೊಸೂರಲ್ಲಿ. ಹಿಂದೂಸ್ತಾನಿ ಸಂಗೀತದ ಮೇರು ಗಾಯಕರಾದ ಕುಮಾರ ಗಂಧರ್ವ, ಮಲ್ಲಿಕಾರ್ಜುನ ಮನ್ಸೂರ, ಭೀಮಸೇನ ಜೋಶಿ ಅವರನ್ನು ಮರಾಠಿ ಜನ ತಲೆ ಮೇಲೆ ಹೊತ್ತು ಮೆರೆಸಿದವರು. ಇಂಥ ಮಧುರ ಬಾಂಧವ್ಯ ನಮ್ಮಲ್ಲಿ ಹಾಸುಹೊಕ್ಕಾಗಿರುವಾಗ ಯಾವ ರಾಜಕೀಯ ಹುನ್ನಾರಗಳೂ ಕಳ್ಳುಬಳ್ಳಿಯ ಸಂಬಂಧವನ್ನು ಕೆಡಿಸಲಾರವು. ಈ ಚಿಂತನೆಯನ್ನು ಜನಮಾನಸದಲ್ಲಿ ಹೆಚ್ಚಾಗಿ ಬಿತ್ತಬೇಕಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಕಿಡಿ, ಬೆಳಕು ನೀಡಬೇಕೇ ಹೊರತು ಬೆಂಕಿಯನ್ನಲ್ಲ. ಈ ನೆಲದ ಮೂಲವಾದ ಬಹುತ್ವವು ಬದುಕಿದರೆ ಮಾತ್ರ ಸಕಲರಿಗೂ ಲೇಸುಂಟು ಎಂಬುದನ್ನು ಭಾಷಾ ರಾಜಕಾರಣ ಮಾಡುವವರು ಅರಿಯಬೇಕು.

ಡಿ ಎಸ್ ಚೌಗಲೆ

ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಿ. ಎಸ್. ಚೌಗಲೆ ಪ್ರಮುಖರು. ಸದ್ಯ ಬೆಳಗಾವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮಧ್ಯೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಇವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು.


ಇದನ್ನೂ ಓದಿ: ಯುದ್ಧವಿರೋಧಿ ಜನ ಪ್ರತಿರೋಧವನ್ನು ಸಂವೇದನೆಯಿಂದ ಅವಲೋಕಿಸುವ ಚಿತ್ರ – ‘ದ ಟ್ರಯಲ್ ಆಫ್ ದ ಶಿಕಾಗೊ 7’
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...