Homeಮುಖಪುಟಭಾರತೀಯನಾಗಿ ಹುಟ್ಟಿ NRC ಕಾರಣದಿಂದ‍ ವಿದೇಶಿಯನಾಗಿ ಸತ್ತ ನರೇಶ್: ಇನ್ನು 19 ಲಕ್ಷ ಜನರ ಪಾಡೇನು?

ಭಾರತೀಯನಾಗಿ ಹುಟ್ಟಿ NRC ಕಾರಣದಿಂದ‍ ವಿದೇಶಿಯನಾಗಿ ಸತ್ತ ನರೇಶ್: ಇನ್ನು 19 ಲಕ್ಷ ಜನರ ಪಾಡೇನು?

ಗಂಡನ ಅಗಲಿಕೆಯಿಂದ ಅಳಲೂ ಅವಳ ಬಳಿ ಪುರುಸೊತ್ತಿಲ್ಲ. ಯಾಕೆಂದರೆ ನರೇಶನ ಮೃತದೇಹವನ್ನು ಸುಡಲು ಬಳಸಿದ ಕಟ್ಟಿಗೆಗೆ ಮಾಡಿದ ಏಳುನೂರು ರುಪಾಯಿ ಸಾಲವನ್ನು ಈಕೆ ತೀರಿಸಬೇಕಿದೆ!

- Advertisement -
- Advertisement -

ಗಣರಾಜ್ಯ ಭಾರತ ಕಳೆದ 70 ವರ್ಷಗಳಲ್ಲಿ ಸಾಕಷ್ಟು ಕಾಯ್ದೆ, ಕಾನೂನುಗಳನ್ನು ಕಂಡಿದೆ. ದೇಶವನ್ನು ಆಳಿದ ಹಲವಾರು ಸರ್ಕಾರಗಳು ಆಡಳಿತವನ್ನು ಸುಗಮಗೊಳಿಸುವ ಹಾಗೂ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಹತ್ತಾರು ನೂತನ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ. ಅಲ್ಲದೆ, ಹಳೆಯ ಕಾನೂನುಗಳಿಗೆ ಮಹತ್ವದ ತಿದ್ದುಪಡಿಗಳನ್ನೂ ತರಲಾಗಿದೆ. ಆದರೆ, ಈವರೆಗೆ ಕೇಂದ್ರ ಸರ್ಕಾರದ ಕಾನೂನೊಂದಕ್ಕೆ ಈ ಪರಿ ರಾಷ್ಟ್ರವ್ಯಾಪಿ ವಿರೋಧ ವ್ಯಕ್ತವಾಗುತ್ತಿರುವುದು ಬಹುತೇಕ ಇದೇ ಮೊದಲು.

ಅವೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಪೌರತ್ವ ನೋಂದಣಿ ಕಾಯ್ದೆಗಳ(ಎನ್ಆರ್‌ಸಿ) ಯಾಗಿದ್ದು ಇವುಗಳ ವಿರುದ್ಧ ಕಳೆದ ಎರಡು ತಿಂಗಳಿನಿಂದ ರಾಷ್ಟ್ರವ್ಯಾಪಿ ದೊಡ್ಡ ಮಟ್ಟದಲ್ಲಿ ಚಳುವಳಿ, ಹೋರಾಟ ಹಾಗೂ ಮುಷ್ಕರಗಳು ಪ್ರತಿನಿತ್ಯ ನಡೆಯುತ್ತಲೇ ಇದೆ. ಆದರೆ, ಈ ಎರಡನ್ನು ಸಮರ್ಥಿಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಇದು ದೇಶದ ನಾಗರೀಕರ ಪೌರತ್ವವನ್ನು ಧೃಡಪಡಿಸುವ ಕಾಯ್ದೆಯೇ ಹೊರತು ಪೌರತ್ವವನ್ನು ಕಸಿದುಕೊಳ್ಳುವ ಕಾಯ್ದೆ ಅಲ್ಲ ಎಂದು ಬೊಬ್ಬೆ ಹೊಡೆಯುತ್ತಲೇ ಇವೆ.

ಈ ನಡುವೆ ಬೆಂಗಳೂರಿನಂತಹ ನಗರದಲ್ಲೇ ಪೌರತ್ವದ ಕುರಿತ ಸೂಕ್ತ ದಾಖಲೆಗಳು ಇಲ್ಲ ಎಂಬ ಕಾರಣಕ್ಕೆ ಬಾಂಗ್ಲಾ ನುಸುಳುಕೋರರು ಎಂಬ ಗುಮಾನಿಯಿಂದ ಉತ್ತರ ಕರ್ನಾಟಕದ ನೂರಾರು ಬಡ ಕೂಲಿ ಕಾರ್ಮಿಕರ ಗುಡಿಸಲುಗಳನ್ನು ಕಿತ್ತು ಹಾಕಲಾಗಿದೆ. ಈಗಾಗಲೇ ಸರಿಯಾದ ಮಳೆ-ಬೆಳೆ ಇಲ್ಲದೆ ಹಳ್ಳಿಯಿಂದ ನಗರ ಪ್ರದೇಶಗಳಿಗೆ ವಲಸೆ ಬಂದು ಕಡಿಮೆ ಕೂಲಿಗೆ ಕೆಲಸ ಮಾಡುತ್ತಿರುವ ರೈತರ ಬದುಕನ್ನೂ ಈ ಸರ್ಕಾರ ಕೇವಲ ಒಂದೇ ಕಾಯ್ದೆಯ ಮೂಲಕ ಅಕ್ಷರಶಃ ಬೀದಿಗೆ ತಂದು ನಿಲ್ಲಿಸಿದೆ.

ಅಸಲಿಗೆ ಬುಡಕಟ್ಟು ಸಮಾಜ ಭಾರತದ ಮೂಲ ನಿವಾಸಿಗಳು. ಅಸ್ಸಾಂನಿಂದ ಮೇಘಾಲಯ, ಜಾರ್ಖಂಡ್‌ವರೆಗೆ ಲಡಾಖ್‌ ಕಣಿವೆಗಳಿಂದ ದಕ್ಷಿಣ ಭಾರತದ ನೀಲಗಿರಿ ಬೆಟ್ಟದ ಸಾಲಿನವರೆಗೆ ಭಾರತದಲ್ಲಿ ಸರಿಸುಮಾರು ನೂರಾರು ಬುಡಕಟ್ಟು ಪಂಗಡಗಳಿವೆ. ಇವರು ಶತಮಾನಗಳಿಂದ ಇಲ್ಲೇ ಹುಟ್ಟಿ ಬೆಳೆದವರು.  ಆದರೆ, ಮೂಲತಃ ಅವಿದ್ಯಾವಂತರಾಗಿರುವ ಇವರ ಬಳಿ ಪೌರತ್ವದ ಕುರಿತ ಯಾವುದೇ ದಾಖಲೆಗಳಿಲ್ಲ. ಇರಲು ಸಾಧ್ಯವೂ ಇಲ್ಲ. ಹಾಗಾದರೆ ದಾಖಲೆಗಳಿಲ್ಲದ ಇವರ ಪಾಡೇನು? ಎಂಬ ಕುರಿತೂ ಸಹ ಸರ್ಕಾರ ಈ ವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಬುಡಕಟ್ಟು ಸಮಾಜದ ಪಾಲಿಗೆ ಮರಣಶಾಸನವೇ ಆಗಿರುವ ಎನ್ಆರ್‌ಸಿ ಎರಡು ವರ್ಷಗಳ ಹಿಂದೆಯೇ ಅಸ್ಸಾಂನಲ್ಲಿ ಚಾಲ್ತಿಯಲ್ಲಿದೆ. ಈ ಕಾಯ್ದೆಯಿಂದ ಹಲವು ಬುಡಕಟ್ಟು ಜನ ಪೌರತ್ವ ಕಳೆದುಕೊಂಡು ಪಶುಗಳಂತೆ ಡಿಟೆನ್ಷನ್ ಸೆಂಟರ್‌ಗಳಲ್ಲಿ ಪ್ರಾಣ ಬಿಟ್ಟಿದ್ದಾರೆ/ ಬಿಡುತ್ತಿದ್ದಾರೆ. ಅಂತ ಒಂದು ಬುಡಕಟ್ಟು ಮಹಿಳೆಯ ಕಥೆ ಇಲ್ಲಿದೆ.

ಮೇಘಾಲಯದ ಗಾರೋ ಬುಡಕಟ್ಟಿನ ಹೆಣ್ಣು ಮಗಳ ಕತೆ

ಈಕೆಯ ಹೆಸರು ಜಿನು. ಮೇಘಾಲಯದ ಗಾರೋ ಎಂಬ ಬುಡಕಟ್ಟು ಹೆಣ್ಣುಮಗಳು. ಜನವರಿ 5ರಂದು ಗೋಲ್ ಪಾರ ಡಿಟೆನ್ಷನ್ ಕೇಂದ್ರದಲ್ಲಿ ಬಂಧಿಯಾಗಿ ಮೃತಪಟ್ಟ ನರೇಶ್ ಕೋಚ್ ಎಂಬಾತನ ಪತ್ನಿ.
ಮೃತ ನರೇಶ್ ನನ್ನು NRC ಪಟ್ಟಿಯಲ್ಲಿ ಇಲ್ಲದ ಕಾರಣಕ್ಕೆ ಡಿಟೆನ್ಷನ್ ಸೆಂಟರ್‌ನಲ್ಲಿ ಕೂಡಿಹಾಕಲಾಗಿತ್ತು. ನರೇಶ್ ಬಂಗಾಲಿಯಲ್ಲ, ಮುಸ್ಲಿಮನೂ ಅಲ್ಲ, ಮುಸ್ಲಿಂ ಬಂಗಾಲಿಯೂ ಅಲ್ಲ. ಅಥವಾ ಬಾಂಗ್ಲಾದೇಶದಿಂದ ಬಂದಿರಬಹುದಾದ ಯಾವುದೇ ಬುಡಕಟ್ಟು ಸಮುದಾಯಕ್ಕೂ ಸೇರಿದವನಲ್ಲ. ಬದಲಾಗಿ ಅಸ್ಸಾಂನ ಮೂಲನಿವಾಸಿ ಕೋಚ್ ಬುಡಕಟ್ಟು ಸಮುದಾಯಕ್ಕೆ ಸೇರಿದವನು.

ಕಳೆದ ವರ್ಷ ಬಿಡುಗಡೆಯಾದ NRC ಪಟ್ಟಿಯಲ್ಲಿ ಈತನ ಪುತ್ರ ಮತ್ತು ಸಹೋದರ ಸೇರಿದ್ದರು. ಆದರೆ ನರೇಶ್ ಹೊರಗೆ ಉಳಿದುಕೊಂಡುಬಿಟ್ಟ!. ಕೇಂದ್ರದ ಕಾನೂನನ್ನು ಕಾಪಾಡಲೇಬೇಕು ಎಂಬ ಉದ್ದೇಶದಿಂದ ಭಾರತದ ಬುಡಕಟ್ಟು ಸಮಾಜದವನೇ ಆದರೂ ಕೂಡ ಆತನನ್ನು ಒತ್ತಾಯಪೂರ್ವಕವಾಗಿ ಡಿಟೆನ್ಷನ್ ಸೆಂಟರ್‌ಗೆ ತಳಲ್ಪಟ್ಟಿದ್ದ.

ನರೇಶ್‌ ಕೋಚ್

ಕಳೆದ ಎರಡು ವರ್ಷದಿಂದ ನರೇಶ್‌ಗೆ ಬಿಪಿ ಇತ್ತು. ಕೊನೆಗೆ ಈತ ಡಿಟೆನ್ಷನ್ ಸೆಂಟರ್ನಲ್ಲಿ ಸ್ಟ್ರೋಕ್ ಆಗಿ ಸತ್ತೇ ಹೋದ. ಆ ಮೂಲಕ ಬಂಧನ ಕೇಂದ್ರದಲ್ಲಿ ಮೃತಪಟ್ಟ 29ನೇ ವ್ಯಕ್ತಿ ಈತನಾಗಿದ್ದು, ಈತನ ಪತ್ನಿ ಇನ್ನೂ ಆ ಆಘಾತದಿಂದ ಹೊರಬಂದಿಲ್ಲ. ಗಂಡನ ಅಗಲಿಕೆಯಿಂದ ಅಳಲೂ ಅವಳ ಬಳಿ ಪುರುಸೊತ್ತಿಲ್ಲ. ಯಾಕೆಂದರೆ ನರೇಶನ ಮೃತದೇಹವನ್ನು ಸುಡಲು ಬಳಸಿದ ಕಟ್ಟಿಗೆಗೆ ಮಾಡಿದ ಏಳುನೂರು ರುಪಾಯಿ ಸಾಲವನ್ನು ಈಕೆ ತೀರಿಸಬೇಕಿದೆ! ಮೀನು ಸಾಕಣಿಕೆ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಜಿನುಗೆ ಏಳು ನೂರು ರುಪಾಯಿ ಹಣವನ್ನು ಹೊಂದಿಸುವುದು ದೊಡ್ಡ ಹೊರೆ.

ಎಂಥಾ ವಿಪರ್ಯಾಸ ನೋಡಿ ಕೇಂದ್ರದ ನೂತನ ಕಾನೂನಿನಿಂದ ಇವಳ ಗಂಡ ಭಾರತೀಯನಾಗಿ ಹುಟ್ಟಿದ ಆದರೆ, ದಾಖಲೆಯಿಲ್ಲದ ಕಾರಣಕ್ಕಾಗಿ ವಿದೇಶೀಯನಾಗಿ ಸತ್ತ. (ಸತ್ತ ಎನ್ನುವುದಕ್ಕಿಂತ ಕೊಲ್ಲಲ್ಪಟ್ಟ ಎಂಬುದು ಸೂಕ್ತ) ನರೇಶ್ ಸತ್ತಾಗ ಅವನದು ಯಾವ ದೇಶ? ಯಾರು ಉತ್ತರ ಕೊಡುತ್ತಾರೆ? ಇನ್ನೂ ಹೆಣ ಸುಟ್ಟ ಬಾಬ್ತು ಏಳು ನೂರು ರುಪಾಯಿ ತಾನೇ ಎನ್ನಬೇಡಿ, ಅಸ್ಸಾಮಿನಲ್ಲಿ ಸುಡಲು ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದ ಇನ್ನೂ ಹತ್ತೊಂಭತ್ತು ಲಕ್ಷ ಚಿಲ್ಲರೆ ಬುಡಕಟ್ಟು ಜನರ ಹೆಣಗಳು ಸರದಿಯಲ್ಲಿ ನಿಲ್ಲಲಿವೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಯಾರಿಗೂ ಸಹ ನರೇಶ್ ಕೋಚನ ಪರಿಸ್ಥಿತಿ ಬರುವುದು ಬೇಡ. ಅದಕ್ಕಾಗಿ ನಾವೆಲ್ಲರೂ ಸಿಎಎ, ಎನ್. ಆರ್.ಸಿ. ಮತ್ತು ಎನ್.ಪಿ.ಅರ್.ಗಳನ್ನು ವಿರೋಧಿಸೋಣ.

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...