Homeಮುಖಪುಟಭಾರತೀಯನಾಗಿ ಹುಟ್ಟಿ NRC ಕಾರಣದಿಂದ‍ ವಿದೇಶಿಯನಾಗಿ ಸತ್ತ ನರೇಶ್: ಇನ್ನು 19 ಲಕ್ಷ ಜನರ ಪಾಡೇನು?

ಭಾರತೀಯನಾಗಿ ಹುಟ್ಟಿ NRC ಕಾರಣದಿಂದ‍ ವಿದೇಶಿಯನಾಗಿ ಸತ್ತ ನರೇಶ್: ಇನ್ನು 19 ಲಕ್ಷ ಜನರ ಪಾಡೇನು?

ಗಂಡನ ಅಗಲಿಕೆಯಿಂದ ಅಳಲೂ ಅವಳ ಬಳಿ ಪುರುಸೊತ್ತಿಲ್ಲ. ಯಾಕೆಂದರೆ ನರೇಶನ ಮೃತದೇಹವನ್ನು ಸುಡಲು ಬಳಸಿದ ಕಟ್ಟಿಗೆಗೆ ಮಾಡಿದ ಏಳುನೂರು ರುಪಾಯಿ ಸಾಲವನ್ನು ಈಕೆ ತೀರಿಸಬೇಕಿದೆ!

- Advertisement -
- Advertisement -

ಗಣರಾಜ್ಯ ಭಾರತ ಕಳೆದ 70 ವರ್ಷಗಳಲ್ಲಿ ಸಾಕಷ್ಟು ಕಾಯ್ದೆ, ಕಾನೂನುಗಳನ್ನು ಕಂಡಿದೆ. ದೇಶವನ್ನು ಆಳಿದ ಹಲವಾರು ಸರ್ಕಾರಗಳು ಆಡಳಿತವನ್ನು ಸುಗಮಗೊಳಿಸುವ ಹಾಗೂ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಹತ್ತಾರು ನೂತನ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ. ಅಲ್ಲದೆ, ಹಳೆಯ ಕಾನೂನುಗಳಿಗೆ ಮಹತ್ವದ ತಿದ್ದುಪಡಿಗಳನ್ನೂ ತರಲಾಗಿದೆ. ಆದರೆ, ಈವರೆಗೆ ಕೇಂದ್ರ ಸರ್ಕಾರದ ಕಾನೂನೊಂದಕ್ಕೆ ಈ ಪರಿ ರಾಷ್ಟ್ರವ್ಯಾಪಿ ವಿರೋಧ ವ್ಯಕ್ತವಾಗುತ್ತಿರುವುದು ಬಹುತೇಕ ಇದೇ ಮೊದಲು.

ಅವೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಪೌರತ್ವ ನೋಂದಣಿ ಕಾಯ್ದೆಗಳ(ಎನ್ಆರ್‌ಸಿ) ಯಾಗಿದ್ದು ಇವುಗಳ ವಿರುದ್ಧ ಕಳೆದ ಎರಡು ತಿಂಗಳಿನಿಂದ ರಾಷ್ಟ್ರವ್ಯಾಪಿ ದೊಡ್ಡ ಮಟ್ಟದಲ್ಲಿ ಚಳುವಳಿ, ಹೋರಾಟ ಹಾಗೂ ಮುಷ್ಕರಗಳು ಪ್ರತಿನಿತ್ಯ ನಡೆಯುತ್ತಲೇ ಇದೆ. ಆದರೆ, ಈ ಎರಡನ್ನು ಸಮರ್ಥಿಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಇದು ದೇಶದ ನಾಗರೀಕರ ಪೌರತ್ವವನ್ನು ಧೃಡಪಡಿಸುವ ಕಾಯ್ದೆಯೇ ಹೊರತು ಪೌರತ್ವವನ್ನು ಕಸಿದುಕೊಳ್ಳುವ ಕಾಯ್ದೆ ಅಲ್ಲ ಎಂದು ಬೊಬ್ಬೆ ಹೊಡೆಯುತ್ತಲೇ ಇವೆ.

ಈ ನಡುವೆ ಬೆಂಗಳೂರಿನಂತಹ ನಗರದಲ್ಲೇ ಪೌರತ್ವದ ಕುರಿತ ಸೂಕ್ತ ದಾಖಲೆಗಳು ಇಲ್ಲ ಎಂಬ ಕಾರಣಕ್ಕೆ ಬಾಂಗ್ಲಾ ನುಸುಳುಕೋರರು ಎಂಬ ಗುಮಾನಿಯಿಂದ ಉತ್ತರ ಕರ್ನಾಟಕದ ನೂರಾರು ಬಡ ಕೂಲಿ ಕಾರ್ಮಿಕರ ಗುಡಿಸಲುಗಳನ್ನು ಕಿತ್ತು ಹಾಕಲಾಗಿದೆ. ಈಗಾಗಲೇ ಸರಿಯಾದ ಮಳೆ-ಬೆಳೆ ಇಲ್ಲದೆ ಹಳ್ಳಿಯಿಂದ ನಗರ ಪ್ರದೇಶಗಳಿಗೆ ವಲಸೆ ಬಂದು ಕಡಿಮೆ ಕೂಲಿಗೆ ಕೆಲಸ ಮಾಡುತ್ತಿರುವ ರೈತರ ಬದುಕನ್ನೂ ಈ ಸರ್ಕಾರ ಕೇವಲ ಒಂದೇ ಕಾಯ್ದೆಯ ಮೂಲಕ ಅಕ್ಷರಶಃ ಬೀದಿಗೆ ತಂದು ನಿಲ್ಲಿಸಿದೆ.

ಅಸಲಿಗೆ ಬುಡಕಟ್ಟು ಸಮಾಜ ಭಾರತದ ಮೂಲ ನಿವಾಸಿಗಳು. ಅಸ್ಸಾಂನಿಂದ ಮೇಘಾಲಯ, ಜಾರ್ಖಂಡ್‌ವರೆಗೆ ಲಡಾಖ್‌ ಕಣಿವೆಗಳಿಂದ ದಕ್ಷಿಣ ಭಾರತದ ನೀಲಗಿರಿ ಬೆಟ್ಟದ ಸಾಲಿನವರೆಗೆ ಭಾರತದಲ್ಲಿ ಸರಿಸುಮಾರು ನೂರಾರು ಬುಡಕಟ್ಟು ಪಂಗಡಗಳಿವೆ. ಇವರು ಶತಮಾನಗಳಿಂದ ಇಲ್ಲೇ ಹುಟ್ಟಿ ಬೆಳೆದವರು.  ಆದರೆ, ಮೂಲತಃ ಅವಿದ್ಯಾವಂತರಾಗಿರುವ ಇವರ ಬಳಿ ಪೌರತ್ವದ ಕುರಿತ ಯಾವುದೇ ದಾಖಲೆಗಳಿಲ್ಲ. ಇರಲು ಸಾಧ್ಯವೂ ಇಲ್ಲ. ಹಾಗಾದರೆ ದಾಖಲೆಗಳಿಲ್ಲದ ಇವರ ಪಾಡೇನು? ಎಂಬ ಕುರಿತೂ ಸಹ ಸರ್ಕಾರ ಈ ವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಬುಡಕಟ್ಟು ಸಮಾಜದ ಪಾಲಿಗೆ ಮರಣಶಾಸನವೇ ಆಗಿರುವ ಎನ್ಆರ್‌ಸಿ ಎರಡು ವರ್ಷಗಳ ಹಿಂದೆಯೇ ಅಸ್ಸಾಂನಲ್ಲಿ ಚಾಲ್ತಿಯಲ್ಲಿದೆ. ಈ ಕಾಯ್ದೆಯಿಂದ ಹಲವು ಬುಡಕಟ್ಟು ಜನ ಪೌರತ್ವ ಕಳೆದುಕೊಂಡು ಪಶುಗಳಂತೆ ಡಿಟೆನ್ಷನ್ ಸೆಂಟರ್‌ಗಳಲ್ಲಿ ಪ್ರಾಣ ಬಿಟ್ಟಿದ್ದಾರೆ/ ಬಿಡುತ್ತಿದ್ದಾರೆ. ಅಂತ ಒಂದು ಬುಡಕಟ್ಟು ಮಹಿಳೆಯ ಕಥೆ ಇಲ್ಲಿದೆ.

ಮೇಘಾಲಯದ ಗಾರೋ ಬುಡಕಟ್ಟಿನ ಹೆಣ್ಣು ಮಗಳ ಕತೆ

ಈಕೆಯ ಹೆಸರು ಜಿನು. ಮೇಘಾಲಯದ ಗಾರೋ ಎಂಬ ಬುಡಕಟ್ಟು ಹೆಣ್ಣುಮಗಳು. ಜನವರಿ 5ರಂದು ಗೋಲ್ ಪಾರ ಡಿಟೆನ್ಷನ್ ಕೇಂದ್ರದಲ್ಲಿ ಬಂಧಿಯಾಗಿ ಮೃತಪಟ್ಟ ನರೇಶ್ ಕೋಚ್ ಎಂಬಾತನ ಪತ್ನಿ.
ಮೃತ ನರೇಶ್ ನನ್ನು NRC ಪಟ್ಟಿಯಲ್ಲಿ ಇಲ್ಲದ ಕಾರಣಕ್ಕೆ ಡಿಟೆನ್ಷನ್ ಸೆಂಟರ್‌ನಲ್ಲಿ ಕೂಡಿಹಾಕಲಾಗಿತ್ತು. ನರೇಶ್ ಬಂಗಾಲಿಯಲ್ಲ, ಮುಸ್ಲಿಮನೂ ಅಲ್ಲ, ಮುಸ್ಲಿಂ ಬಂಗಾಲಿಯೂ ಅಲ್ಲ. ಅಥವಾ ಬಾಂಗ್ಲಾದೇಶದಿಂದ ಬಂದಿರಬಹುದಾದ ಯಾವುದೇ ಬುಡಕಟ್ಟು ಸಮುದಾಯಕ್ಕೂ ಸೇರಿದವನಲ್ಲ. ಬದಲಾಗಿ ಅಸ್ಸಾಂನ ಮೂಲನಿವಾಸಿ ಕೋಚ್ ಬುಡಕಟ್ಟು ಸಮುದಾಯಕ್ಕೆ ಸೇರಿದವನು.

ಕಳೆದ ವರ್ಷ ಬಿಡುಗಡೆಯಾದ NRC ಪಟ್ಟಿಯಲ್ಲಿ ಈತನ ಪುತ್ರ ಮತ್ತು ಸಹೋದರ ಸೇರಿದ್ದರು. ಆದರೆ ನರೇಶ್ ಹೊರಗೆ ಉಳಿದುಕೊಂಡುಬಿಟ್ಟ!. ಕೇಂದ್ರದ ಕಾನೂನನ್ನು ಕಾಪಾಡಲೇಬೇಕು ಎಂಬ ಉದ್ದೇಶದಿಂದ ಭಾರತದ ಬುಡಕಟ್ಟು ಸಮಾಜದವನೇ ಆದರೂ ಕೂಡ ಆತನನ್ನು ಒತ್ತಾಯಪೂರ್ವಕವಾಗಿ ಡಿಟೆನ್ಷನ್ ಸೆಂಟರ್‌ಗೆ ತಳಲ್ಪಟ್ಟಿದ್ದ.

ನರೇಶ್‌ ಕೋಚ್

ಕಳೆದ ಎರಡು ವರ್ಷದಿಂದ ನರೇಶ್‌ಗೆ ಬಿಪಿ ಇತ್ತು. ಕೊನೆಗೆ ಈತ ಡಿಟೆನ್ಷನ್ ಸೆಂಟರ್ನಲ್ಲಿ ಸ್ಟ್ರೋಕ್ ಆಗಿ ಸತ್ತೇ ಹೋದ. ಆ ಮೂಲಕ ಬಂಧನ ಕೇಂದ್ರದಲ್ಲಿ ಮೃತಪಟ್ಟ 29ನೇ ವ್ಯಕ್ತಿ ಈತನಾಗಿದ್ದು, ಈತನ ಪತ್ನಿ ಇನ್ನೂ ಆ ಆಘಾತದಿಂದ ಹೊರಬಂದಿಲ್ಲ. ಗಂಡನ ಅಗಲಿಕೆಯಿಂದ ಅಳಲೂ ಅವಳ ಬಳಿ ಪುರುಸೊತ್ತಿಲ್ಲ. ಯಾಕೆಂದರೆ ನರೇಶನ ಮೃತದೇಹವನ್ನು ಸುಡಲು ಬಳಸಿದ ಕಟ್ಟಿಗೆಗೆ ಮಾಡಿದ ಏಳುನೂರು ರುಪಾಯಿ ಸಾಲವನ್ನು ಈಕೆ ತೀರಿಸಬೇಕಿದೆ! ಮೀನು ಸಾಕಣಿಕೆ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಜಿನುಗೆ ಏಳು ನೂರು ರುಪಾಯಿ ಹಣವನ್ನು ಹೊಂದಿಸುವುದು ದೊಡ್ಡ ಹೊರೆ.

ಎಂಥಾ ವಿಪರ್ಯಾಸ ನೋಡಿ ಕೇಂದ್ರದ ನೂತನ ಕಾನೂನಿನಿಂದ ಇವಳ ಗಂಡ ಭಾರತೀಯನಾಗಿ ಹುಟ್ಟಿದ ಆದರೆ, ದಾಖಲೆಯಿಲ್ಲದ ಕಾರಣಕ್ಕಾಗಿ ವಿದೇಶೀಯನಾಗಿ ಸತ್ತ. (ಸತ್ತ ಎನ್ನುವುದಕ್ಕಿಂತ ಕೊಲ್ಲಲ್ಪಟ್ಟ ಎಂಬುದು ಸೂಕ್ತ) ನರೇಶ್ ಸತ್ತಾಗ ಅವನದು ಯಾವ ದೇಶ? ಯಾರು ಉತ್ತರ ಕೊಡುತ್ತಾರೆ? ಇನ್ನೂ ಹೆಣ ಸುಟ್ಟ ಬಾಬ್ತು ಏಳು ನೂರು ರುಪಾಯಿ ತಾನೇ ಎನ್ನಬೇಡಿ, ಅಸ್ಸಾಮಿನಲ್ಲಿ ಸುಡಲು ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದ ಇನ್ನೂ ಹತ್ತೊಂಭತ್ತು ಲಕ್ಷ ಚಿಲ್ಲರೆ ಬುಡಕಟ್ಟು ಜನರ ಹೆಣಗಳು ಸರದಿಯಲ್ಲಿ ನಿಲ್ಲಲಿವೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಯಾರಿಗೂ ಸಹ ನರೇಶ್ ಕೋಚನ ಪರಿಸ್ಥಿತಿ ಬರುವುದು ಬೇಡ. ಅದಕ್ಕಾಗಿ ನಾವೆಲ್ಲರೂ ಸಿಎಎ, ಎನ್. ಆರ್.ಸಿ. ಮತ್ತು ಎನ್.ಪಿ.ಅರ್.ಗಳನ್ನು ವಿರೋಧಿಸೋಣ.

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...