ದೇಶದ ವಿವಿಧ ಭಾಗಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ಮುಂದುವರೆಯುತ್ತಿದ್ದಂತೆ ಬಾಲಿವುಡ್ನ ಅನೇಕ ಪ್ರಸಿದ್ಧ ವ್ಯಕ್ತಿಗಳು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ನಡುವೆ ವಿವಾದಾತ್ಮಕ ಕಾನೂನಿನ ವಿರುದ್ಧ ಬೀದಿಗಿಳಿಯುವುದಾಗಿ ನಟ ಮತ್ತು ನಿರ್ದೇಶಕ ಫರ್ಹಾನ್ ಅಖ್ತರ್ ಹೇಳಿದ್ದಾರೆ.
“ಸೋಷಿಯಲ್ ಮೀಡಿಯಾದಲ್ಲಿ ಏಕಾಂಗಿಯಾಗಿ ಪ್ರತಿಭಟಿಸುವ ಸಮಯ ಮುಗಿದಿದೆ” ಎಂದಿರುವ ಅವರು ಪ್ರತಿಭಟನಾ ಮೆರವಣಿಗೆಗೆ ತಮ್ಮೊಂದಿಗೆ ಸೇರಲು ಜನರನ್ನು ಆಹ್ವಾನಿಸಿ ಟ್ವೀಟ್ ಮಾಡಿದ್ದಾರೆ.
Here’s what you need to know about why these protests are important. See you on the 19th at August Kranti Maidan, Mumbai. The time to protest on social media alone is over. pic.twitter.com/lwkyMCHk2v
— Farhan Akhtar (@FarOutAkhtar) December 18, 2019
“ಈ ಪ್ರತಿಭಟನೆಗಳು ಏಕೆ ಮಹತ್ವದ್ದಾಗಿದೆ ಎಂಬುದರ ಕುರಿತು ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ. ಆಗಸ್ಟ್ 19 ರಂದು ಮುಂಬೈನ ಕ್ರಾಂತಿ ಮೈದಾನದಲ್ಲಿ ನಿಮ್ಮನ್ನು ನೋಡಲು ಬಯಸುತ್ತೇನೆ. ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಪ್ರತಿಭಟಿಸುವ ಸಮಯ ಮುಗಿದಿದೆ” ಎಂದು ಅಖ್ತರ್ ಅವರ ಟ್ವೀಟ್ ಮಾಡಿದ್ದಾರೆ.

ಕೆಲವು ಗಂಟೆಗಳ ನಂತರ ಅಖ್ತರ್ ಅವರು ಈ ಮೊದಲು ಭಾರತದ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದರು – ಅವರ ಹಿಂದಿನ ಟ್ವೀಟ್ ಜೊತೆಗೆ – ಇದು ಭಾರತದ ತಪ್ಪಾದ ನಕ್ಷೆಯನ್ನು ಹೊಂದಿದೆ. “ಕಾಶ್ಮೀರದ ಪ್ರತಿ ಇಂಚು ಮತ್ತು ಭಾಗವು ಭಾರತದ ಒಂದು ಭಾಗವಾಗಿದೆ ಮತ್ತು ನಾನು ತಪ್ಪಾದ ನಕ್ಷೆಯನ್ನು ತಿರಸ್ಕರಿಸುತ್ತೇನೆ. ಇದನ್ನು ಮೊದಲೇ ಗಮನಿಸದಿದ್ದಕ್ಕೆ ವಿಷಾದಿಸುತ್ತೇನೆ” ಎಂದು ಅವರು ಬರೆದಿದ್ದಾರೆ..


