Homeಕರ್ನಾಟಕಮಹಿಳೆ ತನ್ನ ತಲೆ ಮುಚ್ಚುವುದು, ಮುಚ್ಚದೇ ಇರುವುದು ಅವರ ಆಯ್ಕೆ; ಅದನ್ನು ಪ್ರಶ್ನಿಸದಿರಿ: ಕವಿತಾ ಕೃಷ್ಣನ್‌

ಮಹಿಳೆ ತನ್ನ ತಲೆ ಮುಚ್ಚುವುದು, ಮುಚ್ಚದೇ ಇರುವುದು ಅವರ ಆಯ್ಕೆ; ಅದನ್ನು ಪ್ರಶ್ನಿಸದಿರಿ: ಕವಿತಾ ಕೃಷ್ಣನ್‌

- Advertisement -
- Advertisement -

ಮಹಿಳೆ ತನ್ನ ತಲೆ ಮುಚ್ಚುವುದು, ಮುಚ್ಚದೇ ಇರುವುದು ಅವರ ಆಯ್ಕೆ; ಅದನ್ನು ಪ್ರಶ್ನಿಸದಿರಿ ಎಂದು ಸಿಪಿಐ(ಎಂಎಲ್‌) ಪಾಲಿಟ್‌ಬ್ಯೂರೋ ಸದಸ್ಯೆ ಕವಿತಾ ಕೃಷ್ಣನ್‌‌ ಶುಕ್ರವಾರ ಹೇಳಿದರು. ಸರ್ಕಾರದ ಯಾವುದೆ ಕಾಯ್ದೆ ಕಾನೂನಿನ ಅಗತ್ಯವೇ ಇಲ್ಲದೆ ಮಹಿಳೆಯರ ಸರಾಸರಿ ಮದುವೆಯ ವಯಸ್ಸು 19ಕ್ಕೆ ಏರಿದೆ. ಆದರೆ ಸರ್ಕಾರವು ಮಹಿಳೆಯರೇ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವುದನ್ನು ತಪ್ಪಿಸಲು ಬೇಕಾಗಿ, ಹುಡುಗಿಯರ ಮದುವೆಯ ವಯಸ್ಸನ್ನು 18 ರಿಂದ 21 ಕ್ಕೆ ಏರಿಸಿದೆ ಎಂದು ಅವರು ಆರೋಪಿಸಿದರು.

ಅವರು ದಾವಣಗೆರೆಯ ತಾಜ್ ಪ್ಯಾಲೆಸ್‌ನಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರು 8ನೇ ಮೇ ಸಾಹಿತ್ಯ ಮೇಳದಲ್ಲಿ ಮಾತನಾಡುತ್ತಿದ್ದರು. “ರಾಜ್ಯದಲ್ಲಿ ಅಂತರ್ಜಾತೀಯ ಮತ್ತು ಅಂತಧರ್ಮೀಯ ಮದುವೆಗಳನ್ನು ತಡೆಯಬೇಕಾಗಿ ಮತಾಂತರ ವಿರೋಧಿ ಕಾನೂನನ್ನು ತರಲಾಯಿತು” ಎಂದು ಅವರು ಆರೋಪಿಸಿದ್ದು, ಮಕ್ಕಳು ಬೇಗ ಮದುವೆ ಆಗರದೆಂದಾದರೆ ಶಿಕ್ಷಣ ಸಂಸ್ಥೆಗಳನ್ನು ಸರಿಯಾಗಿ ಒದಗಿಸಿ. ಅದನ್ನು ಬಿಟ್ಟು ಕಾಯ್ದೆ ರಚಿಸುವುದು ಯಾಕೆ? ಎಂದು ಅವರು ಪ್ರಶ್ನಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸಾಹಿತ್ಯ ಹಬ್ಬದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಕವಿತಾ ಕೃಷ್ಣನ್ ಅವರು, “ಇಂದು ಸಾಹಿತ್ಯ ಹಬ್ಬಕ್ಕೆ ಒಂದು ಶುಭ ಸುದ್ದಿ ಇದೆ. ಮಹಿಳೆಯೊಬ್ಬರು ಹಿಂದಿಯಲ್ಲಿ ಬರೆದ ‘ರೇತ್ ಸಮಾಧಿ’ ಎಂಬ ಕಾದಂಬರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಯಾದ ಬೂಕರ್‌‌ ಪ್ರಶಸ್ತಿ ಘೋಷಣೆಯಾಗಿದೆ. ಈ ಕಾದಂಬರಿಯ ಬಗ್ಗೆ ನಿಮಗೆ ತಿಳಿಸಿದರೆ ನೀವು ಇನ್ನೂ ಖುಷಿ ಪಡುತ್ತೀರಿ” ಎಂದು ಹೇಳಿದರು.

ಇದನ್ನೂ ಓದಿ: ಭಾರತದಲ್ಲಿ ಮಾತಿನ ಸ್ವಾತಂತ್ಯ್ರ ಇದೆ; ಮಾತಿನ ನಂತರ ಸ್ವಾತಂತ್ಯ್ರ ಇಲ್ಲ: ಮೇ ಸಾಹಿತ್ಯ ಮೇಳದಲ್ಲಿ ಹಿರಿಯ ಪತ್ರಕರ್ತ ಪಿ.ಸಾಯಿನಾಥ್‌ ಕಳವಳ

“ನೀವು ಮಾತ್ರ ಅಲ್ಲ, ಸಂಘಪರಿವಾರ ಮತ್ತು ಬಿಜೆಪಿಯವರೂ ಕೂಡಾ ಖುಷಿಯಾಗುತ್ತಾರೆ. ಯಾಕೆಂದರೆ, ಈ ಕಾದಂಬರಿಯ ಕತೆ ಬಹಳ ಸುಂದರವಾದ ಕತೆಯಾಗಿದ್ದು, ಅದರಲ್ಲಿ 80 ವರ್ಷ ವೃದ್ಧ ಮಹಿಳೆಯ ಬಗ್ಗೆ ಬರೆದಿದ್ದಾರೆ. ಅವರ ಪತಿ ಸತ್ತು ಹೋಗಿದ್ದು, ಅದರಿಂದಾಗಿ ಅವರು ತುಂಬಾ ದುಃಖದಲ್ಲಿ ಇರುತ್ತಾರೆ. ಅವರು ತಮ್ಮ ಬಾಲ್ಯವನ್ನು ನೆನಪು ಮಾಡಿಕೊಳ್ಳುತ್ತಾರೆ. ಅವರು ತನ್ನ ಬಾಲ್ಯವನ್ನು ಪಾಕಿಸ್ತಾನದಲ್ಲಿ ಕಳೆದಿದ್ದರು. ಆವೇಳೆ ಭಾರತ-ಪಾಕಿಸ್ತಾನ ವಿಭಜನೆಗೊಂಡಿರಲಿಲ್ಲ”

“ಈ ಮಹಿಳೆ ಶೀಘ್ರವಾಗಿ ತಮ್ಮ ಖಿನ್ನತೆಯಿಂದ ಹೊರಬರುತ್ತಾರೆ. ಅವರ ಮಕ್ಕಳ ಜೊತೆಗೆ ಮತ್ತೆ ಹೊಸದಾಗಿ ಸಂಬಂಧ ಕಟ್ಟಿಕೊಳ್ಳುತ್ತಾರೆ. ಅವರು ಹೇಗೆ ಮತ್ತೇ ತನ್ನ ಮಗಳೊಂದಿಗೆ ಪಾಕಿಸ್ತಾನಕ್ಕೆ ಹೋಗುತ್ತಾರೆ. ಅಲ್ಲಿ ಹೋಗಿ ಅವರು ಹೇಗೆ ತಮ್ಮ ಬದುಕನ್ನು ಹೊಸದಾಗಿ ಕಟ್ಟಿಕೊಳ್ಳುತ್ತಾರೆ ಎಂಬುವುದು ಕತೆ”

“ನಾವು ಭಾರತಕ್ಕಾಗಿ ಕೆಲಸ ಮಾಡುತ್ತೇವೆ. ಇಲ್ಲಿನ ಜನರು ಖುಷಿಯ ಜೀವನ ನಡೆಸುಲು ಬೇಕಾಗಿ ಕೆಲಸ ಮಾಡುತ್ತೇವೆ. ಆದರೆ ಸಂಘಪರಿವಾರದವರು ನಮ್ಮನ್ನು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುತ್ತಾರೆ. ಆದರೆ ಬೂಕರ್‌ ಪ್ರಶಸ್ತಿ ಸಿಕ್ಕಿದ ಈ ಕಾದಂಬರಿ ಪಾಕಿಸ್ತಾನಕ್ಕೆ ತೆರಳಿದ ಮಹಿಳೆಯ ಬಗ್ಗೆ ಕತೆ ಹೇಳುತ್ತದೆ. ಇದು ಸಂಘಪರಿವಾರಕ್ಕೆ ಖುಷಿಯ ಮಾತಲ್ಲವೆ? ಇಷ್ಟು ಸುಂದರವಾದ ಕತೆಗೆ ಬೂಕರ್‌ ಪ್ರಶಸ್ತಿ ಸಿಕ್ಕಿದೆ. ಪಾಕಿಸ್ತಾನಕ್ಕೆ ಹೋಗುವುದು ಕೆಟ್ಟ ಕೆಲಸವೇ? ಒಬ್ಬ ಮಹಿಳೆ ಅಲ್ಲಿ ಹೋಗಿ ಖುಷಿಯನ್ನು ಗಳಿಸುತ್ತಾರೆಂದರೆ ಒಳ್ಳೆಯ ವಿಷಯವೆ ಅಲ್ಲವೆ?”

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌: ತಾಲಿಬಾನ್‌ಗೆ ಥ್ಯಾಂಕ್ಸ್‌ ಹೇಳಿದ ಈ ಟ್ವಿಟರ್‌ ಅಕೌಂಟ್‌ ದಿಟ್ಟ ವಿದ್ಯಾರ್ಥಿನಿ ಮುಸ್ಕಾನ್‌ ಅವರದ್ದಲ್ಲ, ಅದು ನಕಲಿ

ಮುಸ್ಲಿಂ ಸಮುದಾಯದ ಆತಂಕ ಅಭದ್ರತೆಯಲ್ಲಿದೆ

“ಈ ಸಮಯ ನಮ್ಮ ದೇಶದ ಎಲ್ಲಾ ಜಾಗದಲ್ಲಿ ಮುಸ್ಲಿಂ ಸಮುದಾಯದ ಜನರ ಮೇಲೆ ದಾಳಿಗಳಾಗುತ್ತಿವೆ. ಸಮುದಾಯ ಆತಂಕ, ಅಭದ್ರತೆಯಲ್ಲಿದೆ. ಮುಸ್ಲಿಂ ಸಮುದಾಯದ ಮಕ್ಕಳಿಗೆ ಅವರ ಹೆತ್ತವರು, ‘ಯಾರಾದರೂ ಏನಾದರೂ ಅಂದರೆ ಅವರಿಗೆ ಪ್ರತಿಕ್ರಿಯೆ ನೀಡದಿರಿ, ಕೋಪ ಮಾಡಿಕೊಳ್ಳಬೇಡಿ. ಯಾಕೆಂದರೆ ಇದರಿಂದ ನಿಮಗೆ ಅಪಾಯ’ ಎಂದು ಹೇಳುತ್ತಿದ್ದಾರೆ. ಇದು ಎಷ್ಟೊಂದು ಕೆಟ್ಟ ವಿಷಯ”

“ಇಂತಹ ವಿಷಮ ಪರಿಸ್ಥಿತಿಯಲ್ಲಿ ಕತೆ-ಕವಿತೆಗಳು ಏನು ಕೆಲಸ ಮಾಡುತ್ತದೆ ಎಂದು ಕೆಲವರು ಕೇಳುತ್ತಾರೆ. ಆದರೆ ನನಗೆ ಅನಿಸುತ್ತದೆ ಕತೆ-ಕವಿತೆಗಳಿಗೆ ಭಾರಿ ದೊಡ್ಡ ಕೆಲಸವಿದ್ದು, ಯಾಕೆಂದರೆ ಈ ಕತೆ-ಕವಿತೆಗಳು ಮುಲಾಮು ಹಚ್ಚಬಹುದೆಂದು ನಾನು ಭಾವಿಸಿದ್ದೇನೆ. ಅದಕ್ಕಿಂತಲೂ ದೊಡ್ಡ ಕೆಲಸವಿದ್ದು, ಅದರ ಬಗ್ಗೆ ನಾನು ಯೋಚಿಸುತ್ತಿದ್ದೇನೆ”

“ಈಗಿನ ದಿನಗಳಲ್ಲಿ ಕೇವಲ ಭಾರತವಲ್ಲದೆ, ಇಡೀ ವಿಶ್ವದಲ್ಲಿ ಸರ್ವಾಧಿಕಾರಿ ಆಡಳಿತವಿದೆ. ರಷ್ಯಾ ಉಕ್ರೇನ್‌ ಮೇಲೆ ದಾಳಿ ಮಾಡುತ್ತಿದೆ. ರಷ್ಯಾ ಬೇರೆ ದೇಶಗಳ ಮೇಲೆ ದಾಳಿ ಮಾಡುತ್ತಿರುವುದು ಇದು ಮೊದಲನೇ ಬಾರಿ ಅಲ್ಲ. ಈ ಹಿಂದೆ ಕೂಡಾ ಕ್ರಿಮಿಯಾ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡಿತ್ತು. ಅದಕ್ಕಿಂತಲೂ ಮುಂಚೆ ರಷ್ಯಾ ಚೆಚೆನ್ಯಾದ ಮೇಲೆ ದಾಳಿ ಮಾಡಿತ್ತು. ಸಿರಿಯಾದಲ್ಲೂ ದಾಳಿ ಮಾಡಿದ್ದು ರಷ್ಯಾದ ಬಾಂಬ್‌ಗಳೇ ಆಗಿದ್ದವು. ಈಗ ಉಕ್ರೇನ್ ಮೇಲೆ ದಾಳಿ ಮಾಡಿ ಅದನ್ನು ದೇಶವೇ ಅಲ್ಲ, ಇದು ಅಖಂಡ ರಷ್ಯಾದ ಭಾಗ ಎನ್ನುತ್ತಿವೆ”

“ಇದಲ್ಲವನ್ನೂ ನೋಡಿಕೊಂಡು ನಮ್ಮ ದೇಶದ ಸಂಘಪರಿವಾರದ ಜನರಿಗೆ ಸಂತೋಷವಾಗಿದೆ. ವ್ಹಾ, ನಾವು ನಿಮ್ಮಂತೆ ಅಖಂಡಾ ಭಾರತದ ರಚನೆ ಮಾಡುತ್ತೇವೆ ಅನ್ನುತ್ತಿದ್ದಾರೆ. ಪರಸ್ಪರರ ಬಗ್ಗೆ ಪ್ರೀತಿ, ವಿಶ್ವಾಸ, ಒಬ್ಬೊಬ್ಬರ ಭಾಷೆ, ಸಂಸ್ಕೃತಿಯ ಕುರಿತ ಒಳ್ಳೆಯದನ್ನು ಯೋಚಿಸುವುದು ಇದೆಲ್ಲವನ್ನೂ ಮುಗಿಸಲು ನೋಡುತ್ತಿದ್ದಾರೆ. ನಿಮಗೆ ಏನಾದರೂ ನೋವಾಗುತ್ತಿದ್ದರೆ ಅದನ್ನು ನಾನು ಅನುಭವಿಸಲು ಸಾಧ್ಯವಾಗುವುದು, ಇದೆಲ್ಲ ಇಂದು ಕಾಣೆಯಾಗುತ್ತಿದೆ”

“ಹಿಂದೆಯೂ ಸತ್ಯ ಮತ್ತು ಮಿಥ್ಯೆಗಳಿದ್ದವು, ಆದರೂ ಮೊದಲು ಎಲ್ಲರಿಗೂ ಒಂದಷ್ಟಾದರೂ ಸತ್ಯದ ಅರಿವಾಗುತ್ತಿತ್ತು. ಈಗ ಎಲ್ಲರೂ ಅವರ ಇಚ್ಛೆಯನ್ನೇ ಸತ್ಯವೆಂದು ನಂಬಬೇಕಾಗುತ್ತಿದೆ”

ಇದನ್ನೂ ಓದಿ: ಫೀಚರ್‌ ಫೋಟೊಗ್ರಫಿಗಾಗಿ ಪ್ರತಿಷ್ಠಿತ ‘ಪುಲಿಟ್ಜರ್‌‌-2022’ ಪ್ರಶಸ್ತಿ ಗೆದ್ದ ಭಾರತೀಯ ಪತ್ರಕರ್ತರ ಪರಿಚಯ ಮತ್ತು ಫೊಟೊಗಳು ಹೀಗಿವೆ

ತಮ್ಮ ಕುಟುಂಬದವರೇ ಸತ್ತು ಗಂಗಾದಲ್ಲಿ ತೇಲಿ ಹೋದರೂ ಎಲ್ಲವೂ ಚೆನ್ನಾಗಿದೆ ಎನ್ನುತ್ತಿದ್ದಾರೆ

“ಕೋವಿಡ್ ಸಂದರ್ಭದಲ್ಲಿ ಭಾರತದಲ್ಲಿ 50 ಲಕ್ಷಕ್ಕಿಂತ ಹೆಚ್ಚು ಸಾವು ನೋವು ಸಂಭವಿಸಿದೆ. ಆದರೆ ಸರ್ಕಾರವು ಅದನ್ನು 4 ಲಕ್ಷ ಎಂದು ಹೇಳಲು ಬಯಸುತ್ತಿದೆ. ಸರ್ಕಾರದ ಸಮರ್ಥನೆ ಮಾಡುವ ಜನರ ಕುಟುಂಬದ ಜನರೂ ಸಾವಿಗೀಡಾಗಿದ್ದು, ಅವರ ಜನರಿಗೂ ಆಮ್ಲಜನಕ ಸಿಗಲಿಲ್ಲ, ಅವರೂ ಗಂಗಾನದಿಯಲ್ಲಿ ಹರಿದು ಹೋದರು. ಆದರೂ ಅವರು ಹೇಳುವುದು ಎಲ್ಲವೂ ಚೆನ್ನಾಗಿದೆ, ಎಲ್ಲರಿಗೂ ಆಮ್ಲಜನಕ ಸಿಗುತ್ತಿದೆ ಎಂದಾಗಿದೆ’’

“ಯಾಕೆ ಹೀಗಾಗುತ್ತಿದೆ? ನೀವು ಕಣ್ಣೆದುರಿಗೆ ಇರುವುದನ್ನು ಬಿಟ್ಟು, ಸರ್ವಾಧಿಕಾರಿ ಏನು ಹೇಳುತ್ತಿರುತ್ತಾನೋ ಅದನ್ನೆ ನಂಬುತ್ತಿದ್ದೀರಿ. ಅದನ್ನು ನೇರವಾಗಿ ಹೇಳಬಹುದು ಅಥವಾ ವಾಟ್ಸಾಪ್ ಮೆಸೇಜ್‌ ಮೂಲಕ ಹೇಳಬಹುದು ಅಥವಾ ತನ್ನದೇ ಆಗಿರುವ ಮಾಧ್ಯಮಗಳ ಮೂಲಕ ಹೇಳಬಹುದು. ಈ ಸರ್ವಾಧಿಕಾರಿ ನೀವು ಏನು ಯೋಚನೆ ಮಾಡಬೇಕು, ಹೇಗೆ ಯೋಚನೆ ಮಾಡಬೇಕು ಎಂದು ಹೇಳುತ್ತಿದ್ದಾನೆ”

“ಆದರೆ ನಿಮಗೆ ಗೊತ್ತು ಇದು ಸುಳ್ಳು ಎಂದು, ಆದರೂ ನೀವು ಸರ್ವಾಧಿಕಾರಿಯ ಮಾತನ್ನು ಕೇಳುತ್ತಿದ್ದೀರಿ. ಈ ಸುಳ್ಳನ್ನೇ ಹೇಳುವುದೇ ನಿಮ್ಮ ಸತ್ಯ ಎಂದು ಭಾವಿಸಿದ್ದೀರಿ. ಇದು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿ ನಡೆಯುತ್ತಿದೆ”

“ನಾಝೀಗಳನ್ನು ಮುಗಿಸಲು ಬೇಕಾಗಿ ಉಕ್ರೇನ್ ಮೇಲೆ ದಾಳಿ ಮಾಡುತ್ತಿದ್ದೇನೆ ಎಂದು ಪುಟಿನ್ ಹೇಳುತ್ತಿದ್ದಾರೆ. ಆದರೆ ಉಕ್ರೇನ್‌ ರಷ್ಯಾದ ಭಾಗವಾಗಿದ್ದಾಗ ರಷ್ಯಾಕ್ಕಾಗಿ ಹುತಾತ್ಮರಾದವರು ಹೆಚ್ಚಾಗಿ ಉಕ್ರೇನ್‌ನವರಾಗಿದ್ದರು. ಅವರಿಗೇ ಪುಟಿನ್ ಈಗ ಹಿಟ್ಲರ್‌ವಾದಿಗಳು ಎನ್ನುತ್ತಿದ್ದಾರೆ. ಅದು ಹೇಗೆ ಸಾಧ್ಯ, ವಾಸ್ತವದಲ್ಲಿ ಪುಟಿನ್ ಅವರೇ ಹಿಟ್ಲರ್‌ವಾದಿ ಆಗಿದ್ದಾರೆ. ಹಿಟ್ಲರ್‌ ಕೂಡಾ ಇದನ್ನೇ ಮಾಡಿದ್ದು. ಅದನ್ನೇ ಪುಟಿನ್ ಮಾಡುತ್ತಿದ್ದಾರೆ”

ಇದನ್ನೂ ಓದಿ: ಗೌರಿ ಲಂಕೇಶ್‌ ಹತ್ಯೆ ಪ್ರಕರಣ: ಪ್ರತಿ ತಿಂಗಳೂ ಒಂದು ವಾರ ಪೂರ್ತಿ ವಿಚಾರಣೆ ನಿಗದಿ, ಜುಲೈ 4ರಿಂದ ಆರಂಭ

ಅತ್ಯಾಚಾರಿಗಳ ಪರ ಮೆರವಣಿಗೆ ಮಾಡಿದ ಪಕ್ಷವಿದ್ದರೆ ಅದು ಬಿಜೆಪಿ

“ಮಹಿಳೆಯರ ವಿಚಾರದಲ್ಲೂ ಇದೇ ಆಗುತ್ತಿದೆ. ಮೋದಿ ಸರ್ಕಾರ ಪ್ರತಿ ಬಾರಿ ಅತ್ಯಾಚಾರಿಗಳ ಪರವಾಗಿ ನಿಂತಿದೆ. ಅತ್ಯಾಚಾರಿಗಳ ಪರವಾಗಿ ನಗರದಲ್ಲಿ ಮೆರವಣಿಗೆ ಮಾಡಿದ ಪಕ್ಷವಿದ್ದರೆ ಅದು ಬಿಜೆಪಿ ಮಾತ್ರ. ಕಾಶ್ಮೀರದಲ್ಲಿ ಮತ್ತು ಯುಪಿಯಲ್ಲಿ ಬಿಜೆಪಿ ಅದನ್ನೇ ಮಾಡಿದ್ದು. ಆದರೂ ಅವರು ನಾವು ಮಹಿಳೆಯರ ಪರ ಅನ್ನುತ್ತಾರೆ. ಏನು ಕೆಲಸ ಮಾಡಿದ್ದಾರೆ ಅವರು? ”

ಕೋರ್ಟ್‌ ತ್ರಿಪಲ್‌ ತಲಾಖ್‌ ವಿರುದ್ದ ಕಾನೂನು ಮಾಡಿಲ್ಲ ಎಂದಿಲ್ಲ

“ನಾವು ತ್ರಿಪಲ್ ತಲಾಖ್ ವಿರುದ್ಧ ಕಾನೂನು ಮಾಡಿದ್ದೇವೆ ಎಂದು ಅವರು ಹೇಳುತ್ತಾರೆ. ಇದರ ಬಗ್ಗೆ ಮುಸ್ಲಿಂ ಮಹಿಳೆಯರು ಕೋರ್ಟಿಗೆ ಹೋದಾಗ, ಕೋರ್ಟು ಕೂಡಾ ಹೌದು ಮೂರು ಬಾರಿ ತಲಾಖ್ ಹೇಳಿಬಿಟ್ಟರೆ ವಿಚ್ಛೇದನ ಆಗುವುದಿಲ್ಲ, ಇದರಲ್ಲಿ ಸ್ಪಷ್ಟತೆ ಇರಬೇಕು ಎಂದಿತು”

“ಆದರೆ ಕೋರ್ಟು ಕಾನೂನು ಮಾಡಿ ಎನ್ನಲಿಲ್ಲ, ಇವರೇ ಕಾನೂನು ಮಾಡಿದರು. ಈ ವೇಳೆ ಮಹಿಳೆಯರು ಹೇಳಿದರು, ಈಗಾಗಲೇ ಮುಸ್ಲಿಂ ಪರ್ಸನಲ್ ಕಾಯ್ದೆಯಲ್ಲಿ ಸರಿಯಾದ ವಿಧಾನ ಇದೆ ಎಂದು. ಆದರೂ ಕಾನೂನು ಮಾಡಿದರು”

ಪ್ರಧಾನ ಮಂತ್ರಿಗಳೇ ಪತ್ನಿಯನ್ನು ಬಿಟ್ಟಿದ್ದಾರೆ, ಅವರಿಗೆ ಇಲ್ಲದ ಶಿಕ್ಷೆ ಮುಸ್ಲಿಂ ಗಂಡಸರಿಗೆ ಮಾತ್ರ ಏಕೆ?

“ಈ ಕಾನೂನಿನ ಪ್ರಕಾರ ಪ್ರಕಾರ ಯಾರೇ ಮೂರನೇ ವ್ಯಕ್ತಿ ಆಪಾದನೆ ಮಾಡಿದರೂ ತಲಾಖ್ ನೀಡಿದ್ದಕ್ಕೆ ಮುಸ್ಲಿಂ ಗಂಡಸು ಜೈಲಿಗೆ ಹೋಗುತ್ತಾರೆ. ಅನೇಕ ಗಂಡಸರು ಮಹಿಳೆಯರನ್ನು ಹಾಗೇ ತಿರಸ್ಕರಿಸಿ ಹೋಗಿ ಬಿಡುವುದುಂಟು, ಆದರೆ ಅವರು ಯಾರೂ ಜೈಲಿಗೆ ಹೋಗುತ್ತಿಲ್ಲ. ಸ್ವತಃ ಪ್ರಧಾನ ಮಂತ್ರಿಗಳೇ ಪತ್ನಿಯನ್ನು ಬಿಟ್ಟಿದ್ದಾರೆ, ಅವರಿಗೆ ಇಲ್ಲದ ಶಿಕ್ಷೆ ಒಂದು ಸಮುದಾಯದ ಗಂಡಸರಿಗೆ ಮಾತ್ರ ಏಕೆ?”

ಇದನ್ನೂ ಓದಿ: ಈ ದೇಶದ ಬಹುಜನರಿಗೆ ನ್ಯಾಯ ದೊರಕುತ್ತಿಲ್ಲ: ಮೇ ಸಾಹಿತ್ಯ ಮೇಳದಲ್ಲಿ ಜಸ್ಟೀಸ್ ಕೆ.ಚಂದ್ರು ಅಭಿಮತ

“ಹೀಗೆಯೇ ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 21ಕ್ಕೆ ಏರಿಸಿ ಹುಡುಗರಿಗೆ ಸಮಾನ ಮಾಡಿದ್ದು. ನಮ್ಮ ಅನೇಕ ಸ್ನೇಹಿತರೂ ಇದರಲ್ಲಿ ಗೊಂದಲಕ್ಕೊಳಗಾದರು. ಹೆಣ್ಣು ಮಕ್ಕಳು ಬೇಗ ಮದುವೆಯಾಗಲಿ ಎಂದು ನಾವೂ ಬಯಸುವುದಿಲ್ಲ”

“18 ವರ್ಷಕ್ಕೆ ಮತ ಹಾಕುವ ಹಕ್ಕು ಸಿಗುತ್ತದೆ, ಅವರು ವಯಸ್ಕರೆನಿಸುತ್ತಾರೆ. ಅವರು ಎಂಪಿ, ಎಂಎಲ್‌ಎ ಆರಿಸಬಹದು, ತಮ್ಮ ಬಾಳಸಂಗಾತಿಯ ಆಯ್ಕೆ ಮಾತ್ರ ಏಕೆ ಮಾಡಬಾರದು? ಈಗಾಗಲೇ ಸರ್ಕಾರದ ಯಾವುದೇ ಕಾನೂನು ಕಾಯ್ದೆಯ ಅಗತ್ಯವಿಲ್ಲದೆ ಮಹಿಳೆಯರ ಸರಾಸರಿ ಮದುವೆಯ ವಯಸ್ಸು 19ಕ್ಕೆ ಏರಿದೆ”

“ಮಕ್ಕಳು ಬೇಗ ಮದುವೆ ಆಗಬಾರದೆಂದಾದರೆ ಶಿಕ್ಷಣ ಸಂಸ್ಥೆಗಳನ್ನು ಸರಿಯಾಗಿ ಒದಗಿಸಿ. ಅದನ್ನು ಬಿಟ್ಟು ಕಾಯ್ದೆ ರಚಿಸುವುದು ಯಾಕೆ? ರಾಜ್ಯದಲ್ಲಿ ಅಂತರ್ಜಾತೀಯ ಮತ್ತು ಅಂತಧರ್ಮೀಯ ಮದುವೆಗಳನ್ನು ತಡೆಯಬೇಕಾಗಿ ಮತಾಂತರ ವಿರೋಧಿ ಕಾನೂನನ್ನು ತರಲಾಯಿತು”

ಅಂತಧರ್ಮೀಯ ಮದುವೆ ಮಾಡಿಕೊಂಡರೆ ಅವರನ್ನು ಜೈಲಿಗೆ ಹಾಕಿ ಗರ್ಭಪಾತ ಮಾಡಿಸುತ್ತಾರೆ

“ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ತಂದಾಗ ನಡೆದ ಒಂದು ಘಟನೆ ನಡೆದಿತ್ತು. ಉತ್ತರಾಖಂಡದ ಮುಸ್ಲಿಂ ಯುವಕನೊಂದಿಗೆ 19 ವರ್ಷದ ಯುಪಿಯ ಯುವತಿ ಮದುವೆ ಮಾಡಿಕೊಂಡಳು. ಅವಳು ತಾನು ವಯಸ್ಕಳು ಎಂದು ಹೇಳಿದರೂ ಬಿಡದೆ ಆಕೆಯ ಗಂಡ ಮತ್ತು ಕುಟುಂಬವನ್ನು ಜೈಲಿಗೆ ಹಾಕಿ ಈಕೆಗೆ ಒತ್ತಾಯದಿಂದ ಗರ್ಭಪಾತ ಮಾಡಿಸಿದರು. ಆಕೆಗೆ ಚಿಕಿತ್ಸೆ ನಾವು ಕೊಡಿಸಬೇಕಾಯಿತು”

“ಅಂತಧರ್ಮೀಯ ಮದುವೆ ಮಾಡಿಕೊಂಡರೆ ಅವರನ್ನು ಜೈಲಿಗೆ ಹಾಕಿ ಗರ್ಭಪಾತ ಮಾಡಿಸುತ್ತಾರೆ. ಅದಕ್ಕಾಗಿ ಈ ಮತಾಂತರ ವಿರೂಧಿ ಕಾನೂನು. ನೀವು ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಹಾಸ್ಟೆಲ್, ಉದ್ಯೋಗ ಇತ್ಯಾದಿ ಕೊಡಿ. ಮಕ್ಕಳು ನಿಧಾನವಾಗಿ ಮದುವೆಯಾಗುತ್ತಾರೆ. ಆದರೆ ಅದೇನ್ನು ಏನೂ ಕೊಡದೆ ಈಗ ಅವರ ಒಂದು ಅವಕಾಶವನ್ನೂ ಕಿತ್ತುಕೊಳ್ಳಲಾಗುತ್ತಿದೆ”

ಇದನ್ನೂ ಓದಿ: ಫ್ಯಾಸಿಸಂ ವಿರುದ್ಧದ ಹೋರಾಟದಲ್ಲಿ ಎದುರಿಸಬೇಕಾದ ವಿಫಲತೆಗಳು – ಕವಿತಾ ಕೃಷ್ಣನ್

“ಇವರು ಮಾಡುತ್ತಿರುವುದೆಲ್ಲ ಮಹಿಳಾ ವಿರೋಧಿ ಕೆಲಸ. ಆದರೆ ಜನರ ನಡುವೆ ಸಂದೇಶ ಹೋಗುತ್ತಿರುವುದು ಮಹಿಳಾ ಪರ ಸರ್ಕಾರ ಎಂದು. ಹಿಜಾಬ್ ವಿಚಾರದಲ್ಲಿ ಸರ್ಕಾರ ಹೆಣ್ಣುಮಕ್ಕಳಿಗೆ ಮುಕ್ತಿ ಕೊಡಿಸಿದೆ ಎಂದು ಸಾಮಾನ್ಯ ಜನರೂ ಕೂಡಾ ಭಾವಿಸಿದ್ದಾರೆ. ನಾನು ಅವರನ್ನು ಕೇಳಿದೆ ಪ್ರತಿಭಾ ಪಾಟೀಲ್, ಇಂದಿರಾ ಗಾಂಧಿ ಅವರುಗಳು ತಲೆ ಮುಚ್ಚಿಕೊಳ್ಳದೆ ಭಾಷಣ ಮಾಡುತ್ತಿರುವ ಒಂದೇ ಫೋಟೋ ತೊರಿಸಿ ಎಂದು. ಅವರು ಯಾಕೆ ಸೆರಗು ತಲೆಮೇಲೆ ಧರಿಸುತ್ತಿದ್ದರು ಎಂದು ನಾವು ಅವರನ್ನು ಕೇಳುವುದಿಲ್ಲ, ಅವರಿಗೆ ಕಾರಣಗಳಿರಬಹುದು”

“ದಯವಿಟ್ಟು ಮಹಿಳೆಯರನ್ನು ಯಾಕೆ ಅವರು ಇದೇ ಬಟ್ಟೆ ಧರಿಸಿದ್ದಾರೆ ಎಂದು ದಯಮಾಡಿ ಕೇಳಲೇಬೇಡಿ. ಅವರು ಶಿಕ್ಷಣ ಪಡೆಯಲು ಹಿಜಾಬ್ ಧರಿಸುವುದು ಅಥವಾ ಧರಿಸದಿರುವುದು ಯಾಕೆ ಕಾರಣವಾಗಬೇಕು?
ಆಫ್ಘಾನಿಸ್ಥಾನದಲ್ಲಿ ಮಹಿಳಾ ಟಿವಿ ಆಂಕರ್‌ಗಳು ಪೂರ್ತಿ ಮುಖ ಮುಚ್ಚಿ ಕಾಣಿಸಿ ಕೊಳ್ಳಬೇಕೆಂದು ತಾಲಿಬಾನ್ ಸರ್ಕಾರ ಆದೇಶಿಸಿದಾಗ, ಇಡೀ ಪುರುಷ ಆಂಕರ್‌ಗಳ ಬಳಗ ಕಾನೂನು ಬದಲಾಗುವವರೆಗೂ ತಾವೂ ಮುಖ ಮುಚ್ಚಿ ಮಹಿಳೆಯರ ಪರವಾಗಿ ನಿಂತರು. ಹಾಗೆಯೆ ಮಹಿಳೆಯರ ಆಯ್ಕೆಯನ್ನು ಗೌರವಿಸಿ, ಅವರನ್ನು ಬೆಂಬಲಿಸಿ”

“ಇಂದು ನಾವೆಲ್ಲ ಇಲ್ಲಿ ಸ್ವಲ್ಪ ಸಮಯದ ಮೊದಲು ಇಂಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆ ಕೂಗಿದೆವು. ನಮ್ಮ ಸ್ನೇಹಿತರಾದ ಉಮರ್ ಖಾಲಿದ್ ಇಂದು ಜೈಲಿನಲ್ಲಿದ್ದಾರೆ. ಆದರೆ ಕೋರ್ಟಿನಲ್ಲಿ ನ್ಯಾಯಾಧೀಶರು ಕೇಳುತ್ತಾರೆ, ಯಾಕೆ ಈ ಇಂಕ್ವಿಲಾಬ್ ಘೋಷಣೆ ಘೋಷಣೆ ಎಂದು. ಅದು ಸ್ವಾತಂತ್ಯ್ರ ಸಂಗ್ರಾಮದ ಸಮಯದ ಘೋಷಣೆ. ಮೋದಿಯವರ ಭಾಷಣವನ್ನು ಜುಮ್ಲಾ ಎಂದದ್ದು ಅಮಿತ್ ಶಾ. ಅದನ್ನು ನೆನಪಿಸಿದ್ದು ಉಮರ್‌ ಖಾಲಿದ್‌ ಅವರ ತಪ್ಪಾಯಿತು”

ಇದನ್ನೂ ಓದಿ: ಸಿಂಧೂರ ಧರಿಸುವುದು ನನ್ನ ಆಯ್ಕೆ, ಹಿಜಾಬ್ ಧರಿಸುವುದು ಮುಸ್ಕಾನ್ ಆಯ್ಕೆ: ’ಹಮ್ ಸಬ್ ಹಿಂದೂಸ್ತಾನಿ’ ಎಂದ ತೆಲಂಗಾಣ ಸಿಎಂ ಪುತ್ತಿ ಕವಿತಾ

“ನ್ಯಾಯಾಧೀಶರು ಗಾಂಧಿಯವರಂತೆ ಶಾಂತಿಯುತರಾಗಿ ಬನ್ನಿ ಎನ್ನುತ್ತಾರೆ. ಆದರೆ ನಾವು ಹೇಗೇ ಬಂದರೂ ಅವರಿಗೆ ಅದು ಬಂದೂಕು ಹಿಡಿದು ಬಂದಂತೇ ಕಾಣುತ್ತದೆ. ಸಂಘಪರಿವಾರ ಹತ್ಯೆಗೆ ಕರೆ ಕೊಡುವ ಘೋಷಣೆಗಳು ಮುಗುಳ್ನಗುವಿನ ಮಾತಿನಂತೆ ಕಾಣಬಹದು. ಹೀಗೆ, ಪದಗಳ ಅರ್ಥಗಳು ಬದಲಾಗುತ್ತಿವೆ. ಈ ಅರ್ಥಗಳು ಬದಲಾಗುತ್ತಿರುವ ಕಾಲದಲ್ಲಿ, ನೀವು ಜನರನ್ನು ಅವರ ಬುದ್ಧಿಯಿಂದಲ್ಲ ಬದಲಿಗೆ ಹೃದಯದ ಮೂಲಕ ತಲುಪಬಲ್ಲಿರಿ ಎಂದು ನನಗೆ ವಿಶ್ವಾಸವಿದೆ. ನೀವು ಪ್ರಾಣವೇ ಪಣಕ್ಕಿದ್ದರೂ ಕೂಡಾ ಈ ಪ್ರತಿರೋಧದಲ್ಲಿ ಸಂಘರ್ಷ ಮುಂದುವರೆಸಿ ಗೆಲ್ಲಬಲ್ಲಿರಿ ಎಂದು ನಂಬಿದ್ದೇನೆ. ಹೋರಾಟಕ್ಕೆ ಜಯವಾಗಲಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...