Homeಕರ್ನಾಟಕ’ದಿ ಪಾಲಿಟಿಕ್’ ಕನ್ನಡ ವೆಬ್ ಜರ್ನಲ್ ಸೆ. 28 ಕ್ಕೆ ಲೋಕಾರ್ಪಣೆ..

’ದಿ ಪಾಲಿಟಿಕ್’ ಕನ್ನಡ ವೆಬ್ ಜರ್ನಲ್ ಸೆ. 28 ಕ್ಕೆ ಲೋಕಾರ್ಪಣೆ..

21ನೇ ಶತಮಾನದ ಕಹಿ ವಾಸ್ತವದ ಮೂಲವನ್ನು ಗ್ರಹಿಸಲು ಹಾಗೂ ಹೊಸ ನಾಳೆಯ ಹಾದಿಯನ್ನು ಹೊಸೆಯಲು ಶ್ರಮಿಸುವುದು ಈ ‘ವಿಚಾರ ಮಂಟಪ’ದ ಉದ್ದೇಶವಾಗಿದ್ದು. ವಿವಿಧ ರಾಜಕೀಯ ಚಿಂತನಾ ಧಾರೆಗಳ ಮುಕ್ತ ಸಮಾಗಮ ‘ದಿ ಪಾಲಿಟಿಕ್’ನ ಆಶಯವಾಗಿದೆ" ಎಂದು ಸಿದ್ದಪ್ಪ ಮೂಲಗೆ ಹೇಳಿದ್ದಾರೆ.

- Advertisement -
- Advertisement -

’ರಾಜಕೀಯ ಅನಕ್ಷರತೆಯ ನಿವಾರಣೆಗಾಗಿ’ ಎಂಬ ಧ್ಯೇಯ ವಾಕ್ಯದೊಂದಿಗೆ ನೂತನವಾಗಿ ಆರಂಭವಾಗಲಿರುವ ’ದಿ ಪಾಲಿಟಿಕ್’ ಕನ್ನಡ ವೆಬ್ ಜರ್ನಲ್‌ ಹುತಾತ್ಮ ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮದಿನವಾದ ಸೆಪ್ಟೆಂಬರ್‌ 28 ರಂದು ಲೋಕಾರ್ಪಣೆಗೊಳ್ಳಲಿದೆ.

ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್‌ ಅವರು ’ದಿ ಪಾಲಿಟಿಕ್’ ಫೇಸ್‌ಬುಕ್ ಪೇಜ್ ಮೂಲಕ ಸೆಪ್ಟೆಂಬರ್‌ 28 ರಂದು ಸಂಜೆ 06:30 ಕ್ಕೆ ವೆಬ್‌ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಹಿತಿ ಬಾನು ಮುಷ್ತಾಕ್, ಡಾ. ಸಿದ್ದನಗೌಡ ಪಾಟಿಲ್, ಇಂದೂಧರ ಹೊನ್ನಾಪುರ, ಅನಂತ ನಾಯಕ್ ಎನ್ ಭಾಗವಹಿಸಲಿದ್ದು ಪತ್ರಿಕೋದ್ಯಮದ ಪ್ರಚಲಿತ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ.

’’ಇದು ಜನರಾಜಕಾರಣದ ಚಿಂತನಾ ಚಾವಡಿಯಾಗಿದೆ, ರಾಜಕೀಯ ಎಂದರೆ ಅನೇಕರಿಗೆ ಅಸಹ್ಯ ಅನಿಸಬಹುದು. ಆಳುವ ರಾಜಕಾರಣದ ದುರ್ವಾಸನೆ ಜನರನ್ನು ರಾಜಕೀಯವೆಂದರೇನೇ ದೂರ ನಿಲ್ಲುವಂತೆ ಮಾಡಿರುವುದರಿಂದ ಇದು ಸಹಜವೆ. ಆದರೆ ನಾವಿಲ್ಲಿ ಮಾತನಾಡುತ್ತಿರುವುದು ಆ ಹೊಲಸು ರಾಜಕಾರಣದ ಬಗ್ಗೆ ಅಲ್ಲ. ಬದಲಿಗೆ ಮೌಲ್ಯಗಳಲ್ಲಿ, ಮಾದರಿಯಲ್ಲಿ, ಮಾರ್ಗದಲ್ಲಿ ಅದಕ್ಕೆ ತದ್ವಿರುದ್ಧವಾಗಿರುವ ನಿಜ ರಾಜಕಾರಣದ ಬಗ್ಗೆ” ಎಂದು ದಿ ಪಾಲಿಟಿಕ್ ಸಂಪಾದಕರಾದ ಸಿದ್ದಪ್ಪ ಮೂಲಗೆಯವರು ತಿಳಿಸಿದ್ದಾರೆ.

ಇದನ್ನೂ ಓದಿ: ನಾನು ಪೌರವಾಣಿ ಪತ್ರಿಕೆಯ ಸಂಪಾದಕನಾಗಿದ್ದು ಹೇಗೆ? ದೊರೆಸ್ವಾಮಿಯವರ ನೆನಪುಗಳು

“ಈ ವೆಬ್‌ ಜರ್ನಲ್ ಬದಲಾವಣೆಯಲ್ಲಿ ವಿಶ್ವಾಸ ಹೊಂದಿರುವ, ಬದಲಾವಣೆಯ ಚಕ್ರಕ್ಕೆ ಹೆಗಲು ನೀಡಲು ಸಿದ್ಧವಿರುವ ಪ್ರಜ್ಞಾವಂತ, ರಾಜಕೀಯ ಕಾರ್ಯಕರ್ತರ ವೈಚಾರಿಕ ತಾಣವಾಗಿದೆ. ಇದು ಯಾವುದೋ ಒಬ್ಬ ವ್ಯಕ್ತಿಯ, ಅಥವ ಒಂದು ಸಂಘಟನೆಯ, ಅಥವ ಒಂದು ಚಿಂತನೆಯ ವೆಬ್‌ಸೈಟ್ ಅಲ್ಲ. ಸರಿ ಮಾರ್ಗ ಹುಡುಕಲು ಶ್ರಮಿಸುತ್ತಿರುವ ಸಮಾನ ಮನಸ್ಕರ ಮುಕ್ತ ವೈಚಾರಿಕ ವೇದಿಕೆಯಾಗಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“21ನೇ ಶತಮಾನದ ಕಹಿ ವಾಸ್ತವದ ಮೂಲವನ್ನು ಗ್ರಹಿಸಲು ಹಾಗೂ ಹೊಸ ನಾಳೆಯ ಹಾದಿಯನ್ನು ಹೊಸೆಯಲು ಶ್ರಮಿಸುವುದು ಈ ‘ವಿಚಾರ ಮಂಟಪ’ದ ಉದ್ದೇಶವಾಗಿದ್ದು. ವಿವಿಧ ರಾಜಕೀಯ ಚಿಂತನಾ ಧಾರೆಗಳ ಮುಕ್ತ ಸಮಾಗಮ ‘ದಿ ಪಾಲಿಟಿಕ್’ನ ಆಶಯವಾಗಿದೆ” ಎಂದು ಸಿದ್ದಪ್ಪ ಮೂಲಗೆ ಹೇಳಿದ್ದಾರೆ.

”ದಿ ಪಾಲಿಟಿಕ್’’ ಕನ್ನಡ ವೆಬ್ ಜರ್ನಲ್‌ಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ನಿರ್ದೇಶಕರಾದ ಸಿ. ಎಸ್. ದ್ವಾರಕನಾಥ್, ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಸಾಣೇಹಳ್ಳಿ, ರೈತಸಂಘದ ಮುಖಂಡ ನುಲೇನೂರು ಶಂಕರಪ್ಪ, ಸಾಹಿತಿ ಸಬಿತಾ ಬನ್ನಾಡಿ, ಪಿ. ಆರಡಿಮಲ್ಲಯ್ಯ ಕಟ್ಟೇರ, ಶಾರದ ಗೋಪಾಲ್, ಡಾ.ಶಿವಗಂಗಾ ರುಮ್ಮಾ, ಕನ್ನಡ ಚಿತ್ರನಟ ಚೇತನ್, ಡಾ.ಕೆ ಶರೀಫಾ, ಡಾ. ಪುರುಷೋತ್ತಮ ಬಿಳಿಮಲೆ, ಅರಳಿ ನಾಗರಾಜ್,  ಸೇರಿದಂತೆ ಹಲವಾರು ಗಣ್ಯರು ಶುಭಹಾರೈಸಿದ್ದಾರೆ.

’’ದಿ ಪಾಲಿಟಿಕ್’’ ಕನ್ನಡ ವೆಬ್ ಜರ್ನಲ್‌ನ ಫೇಸ್‌ಬುಕ್ ಪೇಜ್‌ಗೆ ಇಲ್ಲಿ ಕ್ಲಿಕ್ ಮಾಡಿ.


ಇದನ್ನೂ ಓದಿ: ‘ಮೂಕನಾಯಕ – 100’ : ತಮ್ಮ ಪತ್ರಿಕೆಗೆ ಬಾಬಾ ಸಾಹೇಬರು ಬರೆದ ಮೊದಲ ಸಂಪಾದಕೀಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...