Homeಮುಖಪುಟಈ ಸಾಮಾಜಿಕ ನಿಯಮಗಳು ನಿಮಗೆ ಸಹಕಾರಿಯಾಗಬಲ್ಲವು, ಪಾಲಿಸಲು ಪ್ರಯತ್ನಿಸಿ

ಈ ಸಾಮಾಜಿಕ ನಿಯಮಗಳು ನಿಮಗೆ ಸಹಕಾರಿಯಾಗಬಲ್ಲವು, ಪಾಲಿಸಲು ಪ್ರಯತ್ನಿಸಿ

ನಾವು ಸಾರ್ವಜನಿಕವಾಗಿ ಏನನ್ನು ಮಾಡಬಾರದು, ಏನನ್ನು ಮಾಡಬೇಕು ಎಂದು ಸರಳವಾಗಿ ಹೇಳುವ ನಿಯಮಗಳಿವು...

- Advertisement -
- Advertisement -

ಮೂಲ- ರಂಜನ್ ಮಿಶ್ರಾರವರ ಫೇಸ್‌ಬುಕ್ ವಾಲ್ ನಿಂದ

ಕನ್ನಡಕ್ಕೆ : ಮುತ್ತುರಾಜು

1.    ಯಾರಿಗೆ ಆಗಲಿ ಒಂದಕ್ಕಿಂತ ಹೆಚ್ಚು ಬಾರಿ ಪದೇ ಪದೇ ಫೋನ್ ಮಾಡಬೇಡಿ. ಅವರು ನಿಮ್ಮ ಫೋನ್ ರಿಸೀವ್ ಮಾಡಿಲ್ಲ ಎಂದರೆ ಅದಕ್ಕಿಂತಲೂ ಬಹುಮುಖ್ಯ ಕೆಲಸದಲ್ಲಿದ್ದಾರೆ ಎಂದು ಭಾವಿಸಿ.

2.    ಸಾಲ ಪಡೆದ ಹಣವನ್ನು ಅವರು ನೆನಪಿಸುವ ಮುನ್ನ ಅಥವಾ ಅವರು ಕೇಳುವ ಮುನ್ನವೇ ಹಿಂದಿರುಗಿಸಿಬಿಡಿ. ಇದು ನಿಮ್ಮ ಬದ್ಧತೆ ಮತ್ತು ವ್ಯಕ್ತಿತ್ವವನ್ನು ನಿರೂಪಿಸುತ್ತದೆ. ಇದು ಪೆನ್, ಕೊಡೆ, ಊಟದ ಡಬ್ಬಿ ಇತ್ಯಾದಿಗಳಿಗೂ ಅನ್ವಯಿಸುತ್ತದೆ.

3.    ಇತರರು ನಿಮಗೆ ಊಟ ಕೊಡಿಸುವ ಸಂದರ್ಭದಲ್ಲಿ ದುಬಾರಿ ತಿನಿಸುಗಳನ್ನು ಆರ್ಡರ್ ಮಾಡಬೇಡಿ.

4.    ಮುಜುಗರದ ಪ್ರಶ್ನೆಗಳನ್ನು ಎಂದಿಗೂ ಕೇಳಲೇಬೇಡಿ, ಉದಾಹರಣೆಗೆ: ನಿಮ್ಮಗಿನ್ನು ಮದುವೆಯಾಗಿಲ್ಲವೇ? ನಿಮಗೆ ಮಕ್ಕಳಾಗಿಲ್ಲವೇ? ನೀವು ಏಕೆ ಮನೆ ಖರೀದಿಸಿಲ್ಲ? ನೀವೇ ಏಕೆ ಕಾರು ತೆಗೆದುಕೊಂಡಿಲ್ಲ? ಇವು ಯಾವುವು ನಿಮ್ಮ ಸಮಸ್ಯೆಯಲ್ಲ ಎಂಬುದನ್ನು ಮರೆಯಬೇಡಿ.

5.    ನಿಮ್ಮ ಹಿಂದೆ ಬರುವವರಿಗೆ ಯಾವಗಲೂ ಬಾಗಿಲು ತೆರೆದಿಡಿ. ಅವರು ಹುಡುಗ ಅಥವಾ ಹುಡುಗಿಯಾಗಿರಲಿ, ಜೂನಿಯರ್ ಅಥವಾ ಸೀನಿಯರ್ ಆಗಿರಲಿ. ಸಾರ್ವಜನಿಕವಾಗಿ ಮತ್ತೊಬ್ಬರನ್ನು ಸಮಾನವಾಗಿ ಗೌರವದಿಂದ ನಡೆಸಿಕೊಳ್ಳುವುದರಿಂದ ನೀವು ಚಿಕ್ಕವರೆನಿಸಿಕೊಳ್ಳುವುದಿಲ್ಲ.

6.    ನಿಮ್ಮ ಸ್ನೇಹಿತರೊಂದಿಗೆ ಕ್ಯಾಬ್/ಆಟೋದಲ್ಲಿ ಹೋದಾಗ ಅವರು ಬಿಲ್ ಪೆ ಮಾಡಿದರೆ ಮುಂದಿನ ಬಾರಿ ನೀವು ಬಿಲ್ ಪೆ ಮಾಡಲು ಯತ್ನಿಸಿ

7.    ಭಿನ್ನ ರೀತಿಯ ಅಭಿಪ್ರಾಯಗಳನ್ನು ಗೌರವಿಸಿ. ನೆನಪಿಡಿ ನಿಮಗೆ 6 ಎಂದು ಕಾಣುವುದು ನಿಮ್ಮ ಎದುರಿದ್ದವರಿಗೆ 9 ಎಂದು ಕಾಣಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಎರಡನೇ ಅಭಿಪ್ರಾಯ ಪಡೆಯುವುದು ಸೂಕ್ತ.

8.    ಮತ್ತೊಬ್ಬರು ಮಾತನಾಡುವಾಗ ಮಧ್ಯದಲ್ಲಿ ಬಾಯಿ ಹಾಕಬೇಡಿ. ಅವರು ಪೂರ್ತಿ ಹೇಳಲು ಅವಕಾಶ ಮಾಡಿಕೊಡಿ. ಎಲ್ಲವನ್ನು ಕೇಳಿಸಿಕೊಳ್ಳಿ ಮತ್ತು ನಿಮಗೆ ಬೇಕಾದುದ್ದನ್ನು ಮಾತ್ರ ತೆಗೆದುಕೊಳ್ಳಿ

9.    ನೀವು ಯಾರನ್ನಾದರೂ ರೇಗಿಸಿದಾಗ ಅವರು ಆಗ ಖುಷಿಪಡದಿದ್ದರೆ, ಅದನ್ನು ಅಲ್ಲಿಗೆ ನಿಲ್ಲಿಸಿ ಮತ್ತು ಮತ್ತೆ ಪುನಾರಾವರ್ತಿಸಬೇಡಿ. ಇದು ಮತ್ತೊಬ್ಬರು ಹಾಗೆ ಮಾಡದಂತೆ ತಡೆಯುತ್ತದೆ.

10. ಯಾರಾದರೂ ನಿಮಗೆ ಸಹಾಯ ಮಾಡಿದಾಗ ಥ್ಯಾಂಕ್ಯೂ ಎಂದು ಹೇಳಿ.

11. ಯಾರನ್ನಾದರೂ ಸಾರ್ವಜನಿಕವಾಗಿ ಹೊಗಳಿ ಆದರೆ ಟೀಕೆಗಳಿದ್ದರೆ ಅದನ್ನು ಅವರಿಗೆ ವಯಕ್ತಿಕವಾಗಿ ಹೇಳಿ

12. ಮತ್ತೊಬ್ಬರ ದೇಹ ತೂಕದ ಬಗ್ಗೆ ಮಾತನಾಡಲು ನಿಮಗೆ ಹಕ್ಕು ಇಲ್ಲ. ನೀವು ಚೆನ್ನಾಗಿ ಕಾಣುವಿರಿ ಎಂದಷ್ಟೆ ಹೇಳಿ. ಅವರು ತೂಕ ಇಳಿಸಲು ಬಯಸಿದರೆ ಅವರಾಗಿಯೇ ನಿಮ್ಮೊಡನೆ ಮಾತನಾಡುತ್ತಾರೆ. ನೀವಾಗಿಯೇ ಸಲಹೆ ಕೊಡಲು ಹೋಗಬೇಡಿ

13. ಯಾರಾದರೂ ತಮ್ಮ ಮೊಬೈಲ್‌ನಲ್ಲಿ ನಿಮ್ಮ ಫೋಟೊ ತೋರಿಸಿದರೆ ನೋಡಿ. ಆದರೆ ಆ ಕಡೆ, ಈ ಕಡೆ ಸ್ವೈಪ್ ಮಾಡಬೇಡಿ. ಅಲ್ಲಿ ಏನಿದೆ ಎಂಬುದು ನಿಮಗೆ ಗೊತ್ತಿರುವುದಿಲ್ಲ ಮತ್ತು ಗೊತ್ತು ಮಾಡಿಕೊಳ್ಳುವ ಅವಶ್ಯಕತೆ ಸಹ ನಿಮಗಿರುವುದಿಲ್ಲ.

14. ನನಗೆ ಡಾಕ್ಟರ್ ಅಪಾಯಿಂಟ್‌ಮೆಂಟ್ ಇದೆ ಎಂದು ನಿಮ್ಮ ಸಹೋದ್ಯೊಗಿ ಹೇಳಿದಾಗ ಏತಕ್ಕೆ ಎಂದು ಕೇಳಲೇಬೇಡಿ. ನೀವು ಚೆನ್ನಾಗಿ ಆಗುತ್ತಿರಿ ಎಂಬ ನಂಬಿಕೆಯಿದೆ ಎಂದು ಮಾತ್ರ ಹೇಳಿ. ಅವರ ಖಾಸಗಿ ಆನಾರೋಗ್ಯದ ಬಗ್ಗೆ ನೀವಾಗಿ ಕೇಳಬೇಡಿ. ಹೇಳಬೇಕು ಅನಿಸಿದರೆ ಅವರೆ ಹೇಳುತ್ತಾರೆ.

15. ನೀವು ಸಿಇಓಗೆ ಯಾವ ಗೌರವ ನೀಡುತ್ತಿರೋ ಅದೇ ಗೌರವ ಕಚೇರಿ ಸ್ವಚ್ಚಗೊಳಿಸುವವರಿಗೂ ನೀಡಿ. ನೀವು ನಿಮಗಿಂತ ಕೆಳಗಿನವರ ಜೊತೆ ಗೌರವದಿಂದ ನಡೆದುಕೊಂಡರೆ ಅದು ಇತರರಿಗೂ ಮಾದರಿಯಾಗುತ್ತದೆ.

16. ಯಾರಾದರೂ ನಿಮ್ಮನ್ನು ಉದ್ದೇಶಿಸಿ ಮಾತನಾಡುವಾಗ ನೀವು ಮೊಬೈಲ್ ನಲ್ಲಿ ನೋಡುತ್ತಿದ್ದರೆ ಅದು ಅನುಚಿತ ಎನಿಸಿಕೊಳ್ಳುತ್ತದೆ. ಹಾಗೆಯೇ ನೀವು ಮಾತನಾಡುವಾಗ ಸನ್ ಗ್ಲಾಸ್ ಧರಿಸಬೇಡಿ. ಕಣ್ಣು ಸಹ ಸಂವಹನದ ಪ್ರಮುಖ ಸಾಧನ ಎಂಬುದನ್ನು ಮರೆಯಬೇಡಿ.

17. ಯಾರಾದರೂ ಅವರಾಗಿಯೇ ಕೇಳುವ ಮುನ್ನ ಯಾವುದೇ ಸಲಹೆ ನೀಡಲು ಹೋಗಬೇಡಿ

18. ಬಹಳ ದಿನಗಳ ನಂತರ ನಿಮ್ಮ ಸ್ನೇಹಿತರು ಅಥವಾ ಯಾರನ್ನಾದರೂ ಭೇಟಿಯಾದಾಗ ಅವರ ವಯಸ್ಸು ಮತ್ತು ಸಂಬಳದ ಬಗ್ಗೆ ಕೇಳಬೇಡಿ. ಬೇಕಾದರೆ ಅವರಾಗಿಯೇ ಹೇಳುತ್ತಾರೆ.

19. ನಿಮಗೆ ಸಂಬಂಧವಿಲ್ಲದ ಕೆಲಸಗಳಲ್ಲಿ ತಲೆ ಹಾಕಬೇಡಿ. ನಿಮ್ಮನ್ನು ಅದು ಎಳೆದುಕೊಂಡಾಗ ಮಾತ್ರ ವ್ಯವಹರಿಸಿ.

20. ನಿಮ್ಮ ಶ್ರೀಮಂತಿಗೆ ಕುರಿತು ಮಾತನಾಡಬೇಡಿ, ವಿಶೇಷವಾಗಿ ಬಡವರ ನಡುವೆ. ಅದೇ ರೀತಿ ನಿಮ್ಮ ಮಕ್ಕಳ ಬಗ್ಗೆ ಮಾತನಾಡಬೇಡಿ, ವಿಶೇಷವಾಗಿ ಮಕ್ಕಳಿಲ್ಲದವರ ನಡುವೆ.

21. ನೀವು ಸ್ನೇಹಿತರೊಟ್ಟಿಗೆ ಇರುವಾಗ ಮನೆ ಕೆಲಸಗಳನ್ನು ಹಂಚಿಕೊಳ್ಳಿ, ಹಾಗೆಯೇ ಖರ್ಚುಗಳನ್ನು ಸಹ.

22. ಉತ್ತಮ ಸಂದೇಶ ಓದಿದ ಬಳಿಕೆ ಧನ್ಯವಾದ ಹೇಳಲು ಪ್ರಯತ್ನಿಸಿ.


ಇದನ್ನೂ ಓದಿ: ಅಂಬೇಡ್ಕರ್‌‌ ವಿಚಾರಧಾರೆಯೇ ಪ್ರೇರಣೆ: ಮೈಸೂರು ವಿವಿಯಲ್ಲಿ ಪಿಎಚ್‌.ಡಿ ಮಾಡುತ್ತಿರುವ ಟ್ರಾನ್ಸ್‌ಜೆಂಡರ್‌ ಮಹಿಳೆಯ ಮನದಾಳ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...