Homeಮುಖಪುಟಈ ಸಾಮಾಜಿಕ ನಿಯಮಗಳು ನಿಮಗೆ ಸಹಕಾರಿಯಾಗಬಲ್ಲವು, ಪಾಲಿಸಲು ಪ್ರಯತ್ನಿಸಿ

ಈ ಸಾಮಾಜಿಕ ನಿಯಮಗಳು ನಿಮಗೆ ಸಹಕಾರಿಯಾಗಬಲ್ಲವು, ಪಾಲಿಸಲು ಪ್ರಯತ್ನಿಸಿ

ನಾವು ಸಾರ್ವಜನಿಕವಾಗಿ ಏನನ್ನು ಮಾಡಬಾರದು, ಏನನ್ನು ಮಾಡಬೇಕು ಎಂದು ಸರಳವಾಗಿ ಹೇಳುವ ನಿಯಮಗಳಿವು...

- Advertisement -
- Advertisement -

ಮೂಲ- ರಂಜನ್ ಮಿಶ್ರಾರವರ ಫೇಸ್‌ಬುಕ್ ವಾಲ್ ನಿಂದ

ಕನ್ನಡಕ್ಕೆ : ಮುತ್ತುರಾಜು

1.    ಯಾರಿಗೆ ಆಗಲಿ ಒಂದಕ್ಕಿಂತ ಹೆಚ್ಚು ಬಾರಿ ಪದೇ ಪದೇ ಫೋನ್ ಮಾಡಬೇಡಿ. ಅವರು ನಿಮ್ಮ ಫೋನ್ ರಿಸೀವ್ ಮಾಡಿಲ್ಲ ಎಂದರೆ ಅದಕ್ಕಿಂತಲೂ ಬಹುಮುಖ್ಯ ಕೆಲಸದಲ್ಲಿದ್ದಾರೆ ಎಂದು ಭಾವಿಸಿ.

2.    ಸಾಲ ಪಡೆದ ಹಣವನ್ನು ಅವರು ನೆನಪಿಸುವ ಮುನ್ನ ಅಥವಾ ಅವರು ಕೇಳುವ ಮುನ್ನವೇ ಹಿಂದಿರುಗಿಸಿಬಿಡಿ. ಇದು ನಿಮ್ಮ ಬದ್ಧತೆ ಮತ್ತು ವ್ಯಕ್ತಿತ್ವವನ್ನು ನಿರೂಪಿಸುತ್ತದೆ. ಇದು ಪೆನ್, ಕೊಡೆ, ಊಟದ ಡಬ್ಬಿ ಇತ್ಯಾದಿಗಳಿಗೂ ಅನ್ವಯಿಸುತ್ತದೆ.

3.    ಇತರರು ನಿಮಗೆ ಊಟ ಕೊಡಿಸುವ ಸಂದರ್ಭದಲ್ಲಿ ದುಬಾರಿ ತಿನಿಸುಗಳನ್ನು ಆರ್ಡರ್ ಮಾಡಬೇಡಿ.

4.    ಮುಜುಗರದ ಪ್ರಶ್ನೆಗಳನ್ನು ಎಂದಿಗೂ ಕೇಳಲೇಬೇಡಿ, ಉದಾಹರಣೆಗೆ: ನಿಮ್ಮಗಿನ್ನು ಮದುವೆಯಾಗಿಲ್ಲವೇ? ನಿಮಗೆ ಮಕ್ಕಳಾಗಿಲ್ಲವೇ? ನೀವು ಏಕೆ ಮನೆ ಖರೀದಿಸಿಲ್ಲ? ನೀವೇ ಏಕೆ ಕಾರು ತೆಗೆದುಕೊಂಡಿಲ್ಲ? ಇವು ಯಾವುವು ನಿಮ್ಮ ಸಮಸ್ಯೆಯಲ್ಲ ಎಂಬುದನ್ನು ಮರೆಯಬೇಡಿ.

5.    ನಿಮ್ಮ ಹಿಂದೆ ಬರುವವರಿಗೆ ಯಾವಗಲೂ ಬಾಗಿಲು ತೆರೆದಿಡಿ. ಅವರು ಹುಡುಗ ಅಥವಾ ಹುಡುಗಿಯಾಗಿರಲಿ, ಜೂನಿಯರ್ ಅಥವಾ ಸೀನಿಯರ್ ಆಗಿರಲಿ. ಸಾರ್ವಜನಿಕವಾಗಿ ಮತ್ತೊಬ್ಬರನ್ನು ಸಮಾನವಾಗಿ ಗೌರವದಿಂದ ನಡೆಸಿಕೊಳ್ಳುವುದರಿಂದ ನೀವು ಚಿಕ್ಕವರೆನಿಸಿಕೊಳ್ಳುವುದಿಲ್ಲ.

6.    ನಿಮ್ಮ ಸ್ನೇಹಿತರೊಂದಿಗೆ ಕ್ಯಾಬ್/ಆಟೋದಲ್ಲಿ ಹೋದಾಗ ಅವರು ಬಿಲ್ ಪೆ ಮಾಡಿದರೆ ಮುಂದಿನ ಬಾರಿ ನೀವು ಬಿಲ್ ಪೆ ಮಾಡಲು ಯತ್ನಿಸಿ

7.    ಭಿನ್ನ ರೀತಿಯ ಅಭಿಪ್ರಾಯಗಳನ್ನು ಗೌರವಿಸಿ. ನೆನಪಿಡಿ ನಿಮಗೆ 6 ಎಂದು ಕಾಣುವುದು ನಿಮ್ಮ ಎದುರಿದ್ದವರಿಗೆ 9 ಎಂದು ಕಾಣಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಎರಡನೇ ಅಭಿಪ್ರಾಯ ಪಡೆಯುವುದು ಸೂಕ್ತ.

8.    ಮತ್ತೊಬ್ಬರು ಮಾತನಾಡುವಾಗ ಮಧ್ಯದಲ್ಲಿ ಬಾಯಿ ಹಾಕಬೇಡಿ. ಅವರು ಪೂರ್ತಿ ಹೇಳಲು ಅವಕಾಶ ಮಾಡಿಕೊಡಿ. ಎಲ್ಲವನ್ನು ಕೇಳಿಸಿಕೊಳ್ಳಿ ಮತ್ತು ನಿಮಗೆ ಬೇಕಾದುದ್ದನ್ನು ಮಾತ್ರ ತೆಗೆದುಕೊಳ್ಳಿ

9.    ನೀವು ಯಾರನ್ನಾದರೂ ರೇಗಿಸಿದಾಗ ಅವರು ಆಗ ಖುಷಿಪಡದಿದ್ದರೆ, ಅದನ್ನು ಅಲ್ಲಿಗೆ ನಿಲ್ಲಿಸಿ ಮತ್ತು ಮತ್ತೆ ಪುನಾರಾವರ್ತಿಸಬೇಡಿ. ಇದು ಮತ್ತೊಬ್ಬರು ಹಾಗೆ ಮಾಡದಂತೆ ತಡೆಯುತ್ತದೆ.

10. ಯಾರಾದರೂ ನಿಮಗೆ ಸಹಾಯ ಮಾಡಿದಾಗ ಥ್ಯಾಂಕ್ಯೂ ಎಂದು ಹೇಳಿ.

11. ಯಾರನ್ನಾದರೂ ಸಾರ್ವಜನಿಕವಾಗಿ ಹೊಗಳಿ ಆದರೆ ಟೀಕೆಗಳಿದ್ದರೆ ಅದನ್ನು ಅವರಿಗೆ ವಯಕ್ತಿಕವಾಗಿ ಹೇಳಿ

12. ಮತ್ತೊಬ್ಬರ ದೇಹ ತೂಕದ ಬಗ್ಗೆ ಮಾತನಾಡಲು ನಿಮಗೆ ಹಕ್ಕು ಇಲ್ಲ. ನೀವು ಚೆನ್ನಾಗಿ ಕಾಣುವಿರಿ ಎಂದಷ್ಟೆ ಹೇಳಿ. ಅವರು ತೂಕ ಇಳಿಸಲು ಬಯಸಿದರೆ ಅವರಾಗಿಯೇ ನಿಮ್ಮೊಡನೆ ಮಾತನಾಡುತ್ತಾರೆ. ನೀವಾಗಿಯೇ ಸಲಹೆ ಕೊಡಲು ಹೋಗಬೇಡಿ

13. ಯಾರಾದರೂ ತಮ್ಮ ಮೊಬೈಲ್‌ನಲ್ಲಿ ನಿಮ್ಮ ಫೋಟೊ ತೋರಿಸಿದರೆ ನೋಡಿ. ಆದರೆ ಆ ಕಡೆ, ಈ ಕಡೆ ಸ್ವೈಪ್ ಮಾಡಬೇಡಿ. ಅಲ್ಲಿ ಏನಿದೆ ಎಂಬುದು ನಿಮಗೆ ಗೊತ್ತಿರುವುದಿಲ್ಲ ಮತ್ತು ಗೊತ್ತು ಮಾಡಿಕೊಳ್ಳುವ ಅವಶ್ಯಕತೆ ಸಹ ನಿಮಗಿರುವುದಿಲ್ಲ.

14. ನನಗೆ ಡಾಕ್ಟರ್ ಅಪಾಯಿಂಟ್‌ಮೆಂಟ್ ಇದೆ ಎಂದು ನಿಮ್ಮ ಸಹೋದ್ಯೊಗಿ ಹೇಳಿದಾಗ ಏತಕ್ಕೆ ಎಂದು ಕೇಳಲೇಬೇಡಿ. ನೀವು ಚೆನ್ನಾಗಿ ಆಗುತ್ತಿರಿ ಎಂಬ ನಂಬಿಕೆಯಿದೆ ಎಂದು ಮಾತ್ರ ಹೇಳಿ. ಅವರ ಖಾಸಗಿ ಆನಾರೋಗ್ಯದ ಬಗ್ಗೆ ನೀವಾಗಿ ಕೇಳಬೇಡಿ. ಹೇಳಬೇಕು ಅನಿಸಿದರೆ ಅವರೆ ಹೇಳುತ್ತಾರೆ.

15. ನೀವು ಸಿಇಓಗೆ ಯಾವ ಗೌರವ ನೀಡುತ್ತಿರೋ ಅದೇ ಗೌರವ ಕಚೇರಿ ಸ್ವಚ್ಚಗೊಳಿಸುವವರಿಗೂ ನೀಡಿ. ನೀವು ನಿಮಗಿಂತ ಕೆಳಗಿನವರ ಜೊತೆ ಗೌರವದಿಂದ ನಡೆದುಕೊಂಡರೆ ಅದು ಇತರರಿಗೂ ಮಾದರಿಯಾಗುತ್ತದೆ.

16. ಯಾರಾದರೂ ನಿಮ್ಮನ್ನು ಉದ್ದೇಶಿಸಿ ಮಾತನಾಡುವಾಗ ನೀವು ಮೊಬೈಲ್ ನಲ್ಲಿ ನೋಡುತ್ತಿದ್ದರೆ ಅದು ಅನುಚಿತ ಎನಿಸಿಕೊಳ್ಳುತ್ತದೆ. ಹಾಗೆಯೇ ನೀವು ಮಾತನಾಡುವಾಗ ಸನ್ ಗ್ಲಾಸ್ ಧರಿಸಬೇಡಿ. ಕಣ್ಣು ಸಹ ಸಂವಹನದ ಪ್ರಮುಖ ಸಾಧನ ಎಂಬುದನ್ನು ಮರೆಯಬೇಡಿ.

17. ಯಾರಾದರೂ ಅವರಾಗಿಯೇ ಕೇಳುವ ಮುನ್ನ ಯಾವುದೇ ಸಲಹೆ ನೀಡಲು ಹೋಗಬೇಡಿ

18. ಬಹಳ ದಿನಗಳ ನಂತರ ನಿಮ್ಮ ಸ್ನೇಹಿತರು ಅಥವಾ ಯಾರನ್ನಾದರೂ ಭೇಟಿಯಾದಾಗ ಅವರ ವಯಸ್ಸು ಮತ್ತು ಸಂಬಳದ ಬಗ್ಗೆ ಕೇಳಬೇಡಿ. ಬೇಕಾದರೆ ಅವರಾಗಿಯೇ ಹೇಳುತ್ತಾರೆ.

19. ನಿಮಗೆ ಸಂಬಂಧವಿಲ್ಲದ ಕೆಲಸಗಳಲ್ಲಿ ತಲೆ ಹಾಕಬೇಡಿ. ನಿಮ್ಮನ್ನು ಅದು ಎಳೆದುಕೊಂಡಾಗ ಮಾತ್ರ ವ್ಯವಹರಿಸಿ.

20. ನಿಮ್ಮ ಶ್ರೀಮಂತಿಗೆ ಕುರಿತು ಮಾತನಾಡಬೇಡಿ, ವಿಶೇಷವಾಗಿ ಬಡವರ ನಡುವೆ. ಅದೇ ರೀತಿ ನಿಮ್ಮ ಮಕ್ಕಳ ಬಗ್ಗೆ ಮಾತನಾಡಬೇಡಿ, ವಿಶೇಷವಾಗಿ ಮಕ್ಕಳಿಲ್ಲದವರ ನಡುವೆ.

21. ನೀವು ಸ್ನೇಹಿತರೊಟ್ಟಿಗೆ ಇರುವಾಗ ಮನೆ ಕೆಲಸಗಳನ್ನು ಹಂಚಿಕೊಳ್ಳಿ, ಹಾಗೆಯೇ ಖರ್ಚುಗಳನ್ನು ಸಹ.

22. ಉತ್ತಮ ಸಂದೇಶ ಓದಿದ ಬಳಿಕೆ ಧನ್ಯವಾದ ಹೇಳಲು ಪ್ರಯತ್ನಿಸಿ.


ಇದನ್ನೂ ಓದಿ: ಅಂಬೇಡ್ಕರ್‌‌ ವಿಚಾರಧಾರೆಯೇ ಪ್ರೇರಣೆ: ಮೈಸೂರು ವಿವಿಯಲ್ಲಿ ಪಿಎಚ್‌.ಡಿ ಮಾಡುತ್ತಿರುವ ಟ್ರಾನ್ಸ್‌ಜೆಂಡರ್‌ ಮಹಿಳೆಯ ಮನದಾಳ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...