Homeಮುಖಪುಟಈ ಸಾಮಾಜಿಕ ನಿಯಮಗಳು ನಿಮಗೆ ಸಹಕಾರಿಯಾಗಬಲ್ಲವು, ಪಾಲಿಸಲು ಪ್ರಯತ್ನಿಸಿ

ಈ ಸಾಮಾಜಿಕ ನಿಯಮಗಳು ನಿಮಗೆ ಸಹಕಾರಿಯಾಗಬಲ್ಲವು, ಪಾಲಿಸಲು ಪ್ರಯತ್ನಿಸಿ

ನಾವು ಸಾರ್ವಜನಿಕವಾಗಿ ಏನನ್ನು ಮಾಡಬಾರದು, ಏನನ್ನು ಮಾಡಬೇಕು ಎಂದು ಸರಳವಾಗಿ ಹೇಳುವ ನಿಯಮಗಳಿವು...

- Advertisement -
- Advertisement -

ಮೂಲ- ರಂಜನ್ ಮಿಶ್ರಾರವರ ಫೇಸ್‌ಬುಕ್ ವಾಲ್ ನಿಂದ

ಕನ್ನಡಕ್ಕೆ : ಮುತ್ತುರಾಜು

1.    ಯಾರಿಗೆ ಆಗಲಿ ಒಂದಕ್ಕಿಂತ ಹೆಚ್ಚು ಬಾರಿ ಪದೇ ಪದೇ ಫೋನ್ ಮಾಡಬೇಡಿ. ಅವರು ನಿಮ್ಮ ಫೋನ್ ರಿಸೀವ್ ಮಾಡಿಲ್ಲ ಎಂದರೆ ಅದಕ್ಕಿಂತಲೂ ಬಹುಮುಖ್ಯ ಕೆಲಸದಲ್ಲಿದ್ದಾರೆ ಎಂದು ಭಾವಿಸಿ.

2.    ಸಾಲ ಪಡೆದ ಹಣವನ್ನು ಅವರು ನೆನಪಿಸುವ ಮುನ್ನ ಅಥವಾ ಅವರು ಕೇಳುವ ಮುನ್ನವೇ ಹಿಂದಿರುಗಿಸಿಬಿಡಿ. ಇದು ನಿಮ್ಮ ಬದ್ಧತೆ ಮತ್ತು ವ್ಯಕ್ತಿತ್ವವನ್ನು ನಿರೂಪಿಸುತ್ತದೆ. ಇದು ಪೆನ್, ಕೊಡೆ, ಊಟದ ಡಬ್ಬಿ ಇತ್ಯಾದಿಗಳಿಗೂ ಅನ್ವಯಿಸುತ್ತದೆ.

3.    ಇತರರು ನಿಮಗೆ ಊಟ ಕೊಡಿಸುವ ಸಂದರ್ಭದಲ್ಲಿ ದುಬಾರಿ ತಿನಿಸುಗಳನ್ನು ಆರ್ಡರ್ ಮಾಡಬೇಡಿ.

4.    ಮುಜುಗರದ ಪ್ರಶ್ನೆಗಳನ್ನು ಎಂದಿಗೂ ಕೇಳಲೇಬೇಡಿ, ಉದಾಹರಣೆಗೆ: ನಿಮ್ಮಗಿನ್ನು ಮದುವೆಯಾಗಿಲ್ಲವೇ? ನಿಮಗೆ ಮಕ್ಕಳಾಗಿಲ್ಲವೇ? ನೀವು ಏಕೆ ಮನೆ ಖರೀದಿಸಿಲ್ಲ? ನೀವೇ ಏಕೆ ಕಾರು ತೆಗೆದುಕೊಂಡಿಲ್ಲ? ಇವು ಯಾವುವು ನಿಮ್ಮ ಸಮಸ್ಯೆಯಲ್ಲ ಎಂಬುದನ್ನು ಮರೆಯಬೇಡಿ.

5.    ನಿಮ್ಮ ಹಿಂದೆ ಬರುವವರಿಗೆ ಯಾವಗಲೂ ಬಾಗಿಲು ತೆರೆದಿಡಿ. ಅವರು ಹುಡುಗ ಅಥವಾ ಹುಡುಗಿಯಾಗಿರಲಿ, ಜೂನಿಯರ್ ಅಥವಾ ಸೀನಿಯರ್ ಆಗಿರಲಿ. ಸಾರ್ವಜನಿಕವಾಗಿ ಮತ್ತೊಬ್ಬರನ್ನು ಸಮಾನವಾಗಿ ಗೌರವದಿಂದ ನಡೆಸಿಕೊಳ್ಳುವುದರಿಂದ ನೀವು ಚಿಕ್ಕವರೆನಿಸಿಕೊಳ್ಳುವುದಿಲ್ಲ.

6.    ನಿಮ್ಮ ಸ್ನೇಹಿತರೊಂದಿಗೆ ಕ್ಯಾಬ್/ಆಟೋದಲ್ಲಿ ಹೋದಾಗ ಅವರು ಬಿಲ್ ಪೆ ಮಾಡಿದರೆ ಮುಂದಿನ ಬಾರಿ ನೀವು ಬಿಲ್ ಪೆ ಮಾಡಲು ಯತ್ನಿಸಿ

7.    ಭಿನ್ನ ರೀತಿಯ ಅಭಿಪ್ರಾಯಗಳನ್ನು ಗೌರವಿಸಿ. ನೆನಪಿಡಿ ನಿಮಗೆ 6 ಎಂದು ಕಾಣುವುದು ನಿಮ್ಮ ಎದುರಿದ್ದವರಿಗೆ 9 ಎಂದು ಕಾಣಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಎರಡನೇ ಅಭಿಪ್ರಾಯ ಪಡೆಯುವುದು ಸೂಕ್ತ.

8.    ಮತ್ತೊಬ್ಬರು ಮಾತನಾಡುವಾಗ ಮಧ್ಯದಲ್ಲಿ ಬಾಯಿ ಹಾಕಬೇಡಿ. ಅವರು ಪೂರ್ತಿ ಹೇಳಲು ಅವಕಾಶ ಮಾಡಿಕೊಡಿ. ಎಲ್ಲವನ್ನು ಕೇಳಿಸಿಕೊಳ್ಳಿ ಮತ್ತು ನಿಮಗೆ ಬೇಕಾದುದ್ದನ್ನು ಮಾತ್ರ ತೆಗೆದುಕೊಳ್ಳಿ

9.    ನೀವು ಯಾರನ್ನಾದರೂ ರೇಗಿಸಿದಾಗ ಅವರು ಆಗ ಖುಷಿಪಡದಿದ್ದರೆ, ಅದನ್ನು ಅಲ್ಲಿಗೆ ನಿಲ್ಲಿಸಿ ಮತ್ತು ಮತ್ತೆ ಪುನಾರಾವರ್ತಿಸಬೇಡಿ. ಇದು ಮತ್ತೊಬ್ಬರು ಹಾಗೆ ಮಾಡದಂತೆ ತಡೆಯುತ್ತದೆ.

10. ಯಾರಾದರೂ ನಿಮಗೆ ಸಹಾಯ ಮಾಡಿದಾಗ ಥ್ಯಾಂಕ್ಯೂ ಎಂದು ಹೇಳಿ.

11. ಯಾರನ್ನಾದರೂ ಸಾರ್ವಜನಿಕವಾಗಿ ಹೊಗಳಿ ಆದರೆ ಟೀಕೆಗಳಿದ್ದರೆ ಅದನ್ನು ಅವರಿಗೆ ವಯಕ್ತಿಕವಾಗಿ ಹೇಳಿ

12. ಮತ್ತೊಬ್ಬರ ದೇಹ ತೂಕದ ಬಗ್ಗೆ ಮಾತನಾಡಲು ನಿಮಗೆ ಹಕ್ಕು ಇಲ್ಲ. ನೀವು ಚೆನ್ನಾಗಿ ಕಾಣುವಿರಿ ಎಂದಷ್ಟೆ ಹೇಳಿ. ಅವರು ತೂಕ ಇಳಿಸಲು ಬಯಸಿದರೆ ಅವರಾಗಿಯೇ ನಿಮ್ಮೊಡನೆ ಮಾತನಾಡುತ್ತಾರೆ. ನೀವಾಗಿಯೇ ಸಲಹೆ ಕೊಡಲು ಹೋಗಬೇಡಿ

13. ಯಾರಾದರೂ ತಮ್ಮ ಮೊಬೈಲ್‌ನಲ್ಲಿ ನಿಮ್ಮ ಫೋಟೊ ತೋರಿಸಿದರೆ ನೋಡಿ. ಆದರೆ ಆ ಕಡೆ, ಈ ಕಡೆ ಸ್ವೈಪ್ ಮಾಡಬೇಡಿ. ಅಲ್ಲಿ ಏನಿದೆ ಎಂಬುದು ನಿಮಗೆ ಗೊತ್ತಿರುವುದಿಲ್ಲ ಮತ್ತು ಗೊತ್ತು ಮಾಡಿಕೊಳ್ಳುವ ಅವಶ್ಯಕತೆ ಸಹ ನಿಮಗಿರುವುದಿಲ್ಲ.

14. ನನಗೆ ಡಾಕ್ಟರ್ ಅಪಾಯಿಂಟ್‌ಮೆಂಟ್ ಇದೆ ಎಂದು ನಿಮ್ಮ ಸಹೋದ್ಯೊಗಿ ಹೇಳಿದಾಗ ಏತಕ್ಕೆ ಎಂದು ಕೇಳಲೇಬೇಡಿ. ನೀವು ಚೆನ್ನಾಗಿ ಆಗುತ್ತಿರಿ ಎಂಬ ನಂಬಿಕೆಯಿದೆ ಎಂದು ಮಾತ್ರ ಹೇಳಿ. ಅವರ ಖಾಸಗಿ ಆನಾರೋಗ್ಯದ ಬಗ್ಗೆ ನೀವಾಗಿ ಕೇಳಬೇಡಿ. ಹೇಳಬೇಕು ಅನಿಸಿದರೆ ಅವರೆ ಹೇಳುತ್ತಾರೆ.

15. ನೀವು ಸಿಇಓಗೆ ಯಾವ ಗೌರವ ನೀಡುತ್ತಿರೋ ಅದೇ ಗೌರವ ಕಚೇರಿ ಸ್ವಚ್ಚಗೊಳಿಸುವವರಿಗೂ ನೀಡಿ. ನೀವು ನಿಮಗಿಂತ ಕೆಳಗಿನವರ ಜೊತೆ ಗೌರವದಿಂದ ನಡೆದುಕೊಂಡರೆ ಅದು ಇತರರಿಗೂ ಮಾದರಿಯಾಗುತ್ತದೆ.

16. ಯಾರಾದರೂ ನಿಮ್ಮನ್ನು ಉದ್ದೇಶಿಸಿ ಮಾತನಾಡುವಾಗ ನೀವು ಮೊಬೈಲ್ ನಲ್ಲಿ ನೋಡುತ್ತಿದ್ದರೆ ಅದು ಅನುಚಿತ ಎನಿಸಿಕೊಳ್ಳುತ್ತದೆ. ಹಾಗೆಯೇ ನೀವು ಮಾತನಾಡುವಾಗ ಸನ್ ಗ್ಲಾಸ್ ಧರಿಸಬೇಡಿ. ಕಣ್ಣು ಸಹ ಸಂವಹನದ ಪ್ರಮುಖ ಸಾಧನ ಎಂಬುದನ್ನು ಮರೆಯಬೇಡಿ.

17. ಯಾರಾದರೂ ಅವರಾಗಿಯೇ ಕೇಳುವ ಮುನ್ನ ಯಾವುದೇ ಸಲಹೆ ನೀಡಲು ಹೋಗಬೇಡಿ

18. ಬಹಳ ದಿನಗಳ ನಂತರ ನಿಮ್ಮ ಸ್ನೇಹಿತರು ಅಥವಾ ಯಾರನ್ನಾದರೂ ಭೇಟಿಯಾದಾಗ ಅವರ ವಯಸ್ಸು ಮತ್ತು ಸಂಬಳದ ಬಗ್ಗೆ ಕೇಳಬೇಡಿ. ಬೇಕಾದರೆ ಅವರಾಗಿಯೇ ಹೇಳುತ್ತಾರೆ.

19. ನಿಮಗೆ ಸಂಬಂಧವಿಲ್ಲದ ಕೆಲಸಗಳಲ್ಲಿ ತಲೆ ಹಾಕಬೇಡಿ. ನಿಮ್ಮನ್ನು ಅದು ಎಳೆದುಕೊಂಡಾಗ ಮಾತ್ರ ವ್ಯವಹರಿಸಿ.

20. ನಿಮ್ಮ ಶ್ರೀಮಂತಿಗೆ ಕುರಿತು ಮಾತನಾಡಬೇಡಿ, ವಿಶೇಷವಾಗಿ ಬಡವರ ನಡುವೆ. ಅದೇ ರೀತಿ ನಿಮ್ಮ ಮಕ್ಕಳ ಬಗ್ಗೆ ಮಾತನಾಡಬೇಡಿ, ವಿಶೇಷವಾಗಿ ಮಕ್ಕಳಿಲ್ಲದವರ ನಡುವೆ.

21. ನೀವು ಸ್ನೇಹಿತರೊಟ್ಟಿಗೆ ಇರುವಾಗ ಮನೆ ಕೆಲಸಗಳನ್ನು ಹಂಚಿಕೊಳ್ಳಿ, ಹಾಗೆಯೇ ಖರ್ಚುಗಳನ್ನು ಸಹ.

22. ಉತ್ತಮ ಸಂದೇಶ ಓದಿದ ಬಳಿಕೆ ಧನ್ಯವಾದ ಹೇಳಲು ಪ್ರಯತ್ನಿಸಿ.


ಇದನ್ನೂ ಓದಿ: ಅಂಬೇಡ್ಕರ್‌‌ ವಿಚಾರಧಾರೆಯೇ ಪ್ರೇರಣೆ: ಮೈಸೂರು ವಿವಿಯಲ್ಲಿ ಪಿಎಚ್‌.ಡಿ ಮಾಡುತ್ತಿರುವ ಟ್ರಾನ್ಸ್‌ಜೆಂಡರ್‌ ಮಹಿಳೆಯ ಮನದಾಳ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...