Homeಕರ್ನಾಟಕಪ್ರತಿ ಭಾರತೀಯನೂ ನೋಡಬೇಕಾದ ಸಿನಿಮಾವಿದು: ನಟ ಕಿರಣ್‌ ವಿಡಿಯೊಕ್ಕೆ ಜನರು ಫಿದಾ

ಪ್ರತಿ ಭಾರತೀಯನೂ ನೋಡಬೇಕಾದ ಸಿನಿಮಾವಿದು: ನಟ ಕಿರಣ್‌ ವಿಡಿಯೊಕ್ಕೆ ಜನರು ಫಿದಾ

ವಿಶೇಷ ಸೂಚನೆ: ಈ ವರದಿಯನ್ನು ಪೂರ್ಣ ಓದದೆ ಕಿರಣ್ ಅವರ ಮಾತಿನ ಆಶಯಗಳು ಅರ್ಥವಾಗುವುದಿಲ್ಲ.

- Advertisement -
- Advertisement -

“ಇತ್ತೀಚೆಗೆ ಒಂದು ಸಿನಿಮಾ ಬಹಳ ಚರ್ಚೆಯಲ್ಲಿದೆ. ಆ ಸಿನಿಮಾವನ್ನು ನಾನು ನೋಡಿದೆ. ನನಗೆ ಆ ಸಿನಿಮಾ ಬಹಳ ಇಷ್ಟವಾಯಿತು. ಪ್ರತಿಯೊಬ್ಬ ಭಾರತೀಯನೂ ನೋಡಬೇಕಾದ ಸಿನಿಮಾವಿದು” ಎಂದು ನಟ, ಕ್ರಿಕೆಟ್‌ ವೀಕ್ಷಕ ವಿವರಣೆಗಾರ ಕಿರಣ್ ಶ್ರೀನಿವಾಸ್‌ ಆಡಿರುವ ಮಾತುಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ.

ಇತ್ತೀಚಿನ ವಿದ್ಯಮಾನಗಳಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸಿರುವ ಕಿರಣ್ ಅವರು, ವಿಡಿಯೊ ಮೂಲಕ ಹಲವು ವಿಚಾರಗಳನ್ನು ಹಂಚಿಕೊಂಡು, ಕಡೆಯಲ್ಲೊಂದು ಟ್ವಿಸ್ಟ್‌ ನೀಡಿ ಸಮಾನತೆಯ ಹಕ್ಕನ್ನು ಪ್ರತಿಪಾದಿಸಿದ್ದಾರೆ.

“ಕೆಲವರು ಈ ಸಿನಿಮಾವನ್ನು ಪ್ರೊಪಗಾಂಡ ಸಿನಿಮಾ ಎನ್ನುತ್ತಿದ್ದಾರೆ. ರಾಜಕೀಯ ಒಳಸಂಚಿನಲ್ಲಿ ಮಾಡಿರುವಂತಹ  ಸಿನಿಮಾ ಎನ್ನುತ್ತಿದ್ದಾರೆ. ಆದರೆ ಆ ಸಿನಿಮಾವನ್ನು ನೋಡಿರುವ ಹಲವಾರು ಜನರು ಇದನ್ನು ಇಷ್ಟಪಟ್ಟಿದ್ದಾರೆ. ಆ ಸಿನಿಮಾದಲ್ಲಿ ಘಟನೆಯನ್ನು ತೋರಿಸಿರುವ ರೀತಿ ಜನರ ಮನಸ್ಸನ್ನು ಮುಟ್ಟಿದೆ. ಹೀಗಾಗಿ ಈ ಸಿನಿಮಾ ಕುರಿತು ಅಷ್ಟೊಂದು ಚರ್ಚಿಸುತ್ತಾ ಇದ್ದಾರೆ, ಮಾತನಾಡುತ್ತಾ ಇದ್ದಾರೆ ಎಂಬುದು ನನ್ನ ಅಭಿಪ್ರಾಯ” ಎಂದು ಹೇಳಿದ್ದಾರೆ.

“ಒಂದು ಸಮುದಾಯ, ಒಂದು ವರ್ಗದ ಜನರ ಜೊತೆ ಯಾವ ರೀತಿ ನಾವು ನಮ್ಮ ಸ್ವಾತಂತ್ರ್ಯ ಭಾರತದಲ್ಲಿ ವರ್ತನೆ ಮಾಡಿದ್ದೇವೆ, ಮಾಡುತ್ತಿದ್ದೇವೆ ಅನ್ನೋದನ್ನು ಈ ಸಿನಿಮಾ ಮೂಲಕ ಅರ್ಥಮಾಡಿಸಲಾಗಿದೆ. ನಮ್ಮ ಕಣ್ಣ ಮುಂದೆ ಇಡಲಾಗಿದೆ. ಯಾವುದೇ ಒಬ್ಬ ಭಾರತೀಯನಲ್ಲಾದರೂ ಪ್ರಶ್ನೆ ಉಂಟು ಮಾಡುವ ವಿಷಯವಿದು” ಎಂದಿದ್ದಾರೆ.

ಇದನ್ನೂ ಓದಿರಿ: ಹುಸಿ ಕಾಳಜಿಯ, ಪಕ್ಷಪಾತ ಧೋರಣೆಯ, ದ್ವೇಷದ ಅಜೆಂಡಾವುಳ್ಳ ’ದ ಕಾಶ್ಮೀರ್ ಫೈಲ್ಸ್’

“ಬೇರೆ ವರ್ಗದ ಜನರಾಗಬಹುದು, ಬೇರೆ ಸಮುದಾಯದ ಜನರಾಗಿರಬಹುದು ಈ ರೀತಿಯ ಶೋಷಣೆ ಆಗಲಿಕ್ಕೆ ನಾವು ಹೇಗೆ ಬಿಟ್ಟೆವು? ಶೋಷಣೆ ಆಗುತ್ತಿದ್ದರೂ ಇದರ ಬಗ್ಗೆ ಅರಿವು ನಮಗೆ ಹೇಗೆ ಬರಲಿಲ್ಲ? ಆದರೆ ನಂತರವಾದರೂ ಕೂಡ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಲೀ, ತೊಂದರೆ ಅನುಭವಿಸಿದ ಜನರಿಗೆ ನ್ಯಾಯ ಒದಗಿಸಲಿಕ್ಕಾಗಲೀ ಯಾಕೆ ನಾವು ಮುಂದೆ ಬಂದಿಲ್ಲ ಎಂಬ ಪ್ರಶ್ನೆಗಳನ್ನು ಈ ಸಿನಿಮಾ ಹುಟ್ಟುಹಾಕುತ್ತದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ನಾನು ಹೇಳೋದಿಷ್ಟೇ. ರಾಜಕೀಯ ಏನೇ ಇರಲೀ, ನಿಮ್ಮ ಪಕ್ಷ ಯಾವುದೇ ಇರಲಿ, ಅದನ್ನೆಲ್ಲ ಬದಿಗಿಟ್ಟು ಈ ಸಿನಿಮಾವನ್ನು ನೋಡಿ. ಈ ಸಿನಿಮಾದಲ್ಲಿ ತೋರಿಸಿರುವ ಜನರ ಕಷ್ಟವನ್ನು ನಾವು ಕೇಳಲೇಬೇಕು. ಕಣ್ಣು ಮುಚ್ಚಿಕೊಂಡು ನಮಗೆ ಗೊತ್ತಿಲ್ಲ ಅನ್ನೋಕೆ, ಕಿವಿಯನ್ನು ಮುಚ್ಚಿಕೊಂಡು ಕೇಳಿಲ್ಲ ಅನ್ನೋಕೆ ಆಗುವುದಿಲ್ಲ. ಸಮಯ ಬಂದಿದೆ. ನಾವೆಲ್ಲರೂ ಭಾರತೀಯರು. ಈ ಸಿನಿಮಾವನ್ನು ಒಂದು ಪಾಯಿಂಟ್‌ ಆಫ್ ವೀವ್‌ ರೀತಿ ನೋಡಬೇಕು. ಈ ರೀತಿಯ ಶೋಷಣೆ ಆಗುವುದಕ್ಕೆ ಆಸ್ಪದ ನೀಡಕೂಡದು” ಎಂದು ಆಗ್ರಹಿಸಿದ್ದಾರೆ.

ಯಾರ್‍ಯಾರಿಗೆ ಶೋಷಣೆ, ಅನ್ಯಾಯವಾಗಿದೆ ಅವರಿಗೆ ನ್ಯಾಯ ದೊರಕಿಸಲೇಬೇಕು ಅನ್ನೋದನ್ನು ನಾವೆಲ್ಲರೂ ಒಪ್ಪಿಕೊಂಡು ಮುಂದೆ ಹೋಗೋಣ ಎಂದಿದ್ದಾರೆ.

“ನಾನು ಯಾವ ಸಿನಿಮಾದ ಬಗ್ಗೆ ಮಾತನಾಡುತ್ತಿರುವುದು ಎಂದು ನಿಮಗೆ ಈಗಾಗಲೇ ಗೊತ್ತಾಗಿರಬಹುದು. ಕನ್‌ಫ್ಯೂಷನ್‌ ಇರದೇ ಇರಲಿ ಅಂತ ಮತ್ತೊಂದು ಆ ಸಿನಿಮಾದ ಹೆಸರನ್ನು ಹೇಳುತ್ತಿದ್ದೇನೆ. ನಾನು ಮಾತನಾಡುತ್ತಿವುದು- ‘ಜೈ ಭೀಮ್’ ಬಗ್ಗೆ. ಅಮೆಜಾನ್ ಫ್ರೈಮ್‌ನಲ್ಲಿದೆ. ಕನ್ನಡ, ತಮಿಳು, ಹಿಂದಿ ಸೇರಿದಂತೆ ಹಲವಾರು ಭಾಷೆಯಲ್ಲಿದೆ. ಪ್ರತಿಯೊಬ್ಬ ಭಾರತೀಯರು ಇದನ್ನು ನೋಡಲೇಬೇಕು” ಎಂದು ಕಿರಣ್ ಒತ್ತಾಯಿಸಿದ್ದಾರೆ.

ನಾವು ಭಾರತೀಯರಾಗಿ ಹೇಗೆ ನಮ್ಮ ದೇಶದವರಿಗೆ ದೌರ್ಜನ್ಯವನ್ನು ಮಾಡಿಕೊಂಡು ಬಂದಿದ್ದೇವೆ, ಮಾಡ್ತಾ ಇದ್ದೀವಿ, ಮುಂದೆ ನಡೆಯುವುದಕ್ಕೆ ಆಸ್ಪದ ನೀಡುತ್ತಿದ್ದೇವೆ ಅನ್ನೋದನ್ನು ಈ ಸಿನಿಮಾ ತಿಳಿಸುತ್ತದೆ. ಪ್ರತಿಯೊಬ್ಬ ಭಾರತೀಯನೂ ಸಮಾಜದಲ್ಲಿ ಸಮಾನತೆಯಿಂದ ಇರುವ ಕನಸನ್ನು ನೆರವೇರಿಸಲಿಕ್ಕೆ ಮುಂದಾಗಬೇಕು. ಈ ವಿಡಿಯೊ ನೋಡಿದಕ್ಕೆ ಧನ್ಯವಾದ- ಜೈ ಕರ್ನಾಟಕ, ಜೈ ಭೀಮ್‌ ಎಂದು ಘೋಷಣೆ ಕೂಗಿ ಮಾತು ಮುಗಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಈ ವಿಡಿಯೊವನ್ನು ಪೂರ್ಣ ವೀಕ್ಷಿಸಿರುವ ಅನೇಕರು ಕಿರಣ್‌ ಶ್ರೀನಿವಾಸ್ ಅವರಿಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ವಾಸ್ತವ ವಿಚಾರಗಳ ಕುರಿತು ಮಾತನಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ವೆಂಕಟೇಶ್ ಕೆ.ವಿ. ಎಂಬವರು ಕಮೆಂಟ್ ಮಾಡಿದ್ದು, “ಕಾಶ್ಮೀರಿ ಫೈಲ್‌ ಅಂದ್ಕೊಂಡು ನನ್ನೊಳಗಿನ ಭಕ್ತ ಖುಷಿಯಾದ. ಆದರೆ ಪ್ರತಿಯೊಬ್ಬ ಭಾರತೀಯ ನೋಡಲೇಬೇಕಾದ ಚಿತ್ರ ಜೈಭೀಮ್ ಅಂದಮೇಲೆ, ನನ್ನೊಳಗಿನ ಭಾರತೀಯ ಜಾಗೃತನಾದ, ಪ್ರಬುದ್ಧನಾದ” ಎಂದಿದ್ದಾರೆ.

“ನಿಮ್ಮ ಮಾತು ಅಂದರೆ ಅದಕ್ಕೆ ಒಂದು ಘನತೆ, ಗೌರವ ಇದೆ. ಹಾಗಾಗಿ ಪೂರ್ತಿ ಕೇಳಿಯೇ ಬಿಡೋಣ ಅನ್ಕೋಂಡೆ! ಕೇಳಿ ನಿಮ್ಮ ಬಗ್ಗೆ ಗೌರವ ಮತ್ತಷ್ಟು ಹೆಚ್ಚಾಯಿತು” ಎಂದು ಹನೀಫ್‌‌ ಇರ್‍ದೆ ಅಭಿಪ್ರಾಯಪಟ್ಟಿದ್ದಾರೆ.

ಕಮೆಂಟ್ ಮಾಡಿರುವ ಹತ್ತಾರು ಜನರು ಕಿರಣ್ ಅವರಿಗೆ ಜನ್ಮದಿನದ ಶುಭ ಕೋರುವ ಜೊತೆಗೆ ‘ಜೈ ಭೀಮ್‌’ ಹೇಳಿದ್ದಾರೆ. (ಕಿರಣ್‌ ಶ್ರೀನಿವಾಸ್‌ ಅವರ ಫೋಸ್ಟ್‌ ಇಲ್ಲಿ ನೋಡಬಹುದು.)


ಇದನ್ನೂ ಓದಿರಿ: ಸಿನಿಮಾ ವಿಮರ್ಶೆ: ಅತಿ ಭಾವುಕತೆ ಮತ್ತು ಲಾಜಿಕ್ ಕೊರತೆಯ ಅದ್ದೂರಿತನದಲ್ಲಿ ‘RRR…’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...