Homeಮುಖಪುಟಸಿನಿಮಾ ವಿಮರ್ಶೆ: ಅತಿ ಭಾವುಕತೆ ಮತ್ತು ಲಾಜಿಕ್ ಕೊರತೆಯ ಅದ್ದೂರಿತನದಲ್ಲಿ ‘RRR...’

ಸಿನಿಮಾ ವಿಮರ್ಶೆ: ಅತಿ ಭಾವುಕತೆ ಮತ್ತು ಲಾಜಿಕ್ ಕೊರತೆಯ ಅದ್ದೂರಿತನದಲ್ಲಿ ‘RRR…’

RRR ಮನರಂಜನೆಯ ಗಡಿಯನ್ನೂ ಬಿಟ್ಟು ಪ್ರೇಕ್ಷಕರಿಗೆ ಬೇರೆಯದೇ ಆದ ರೀತಿಯಲ್ಲಿ ಅಪೀಲ್ ಆಗುವ ಅಪಾಯವನ್ನು ಹೊಂದಿದೆ...

- Advertisement -
- Advertisement -

ವೈವಿಧ್ಯಮಯ ಪ್ರೇಕ್ಷಕರನ್ನು ವ್ಯಾಪಕವಾಗಿ ತಲುಪುವ ಸಲುವಾಗಿ ಮತ್ತು ಆ ಮೂಲಕ ಸಾಮೂಹಿಕ ಭಾಗವಹಿಸುವಿಕೆಯಂದ ಯಶಸ್ಸು ಕಾಣಲು ‘ಕಮರ್ಶಿಯಲ್’, ‘ಜನಪ್ರಿಯ’ ಎಂಬಿತ್ಯಾದಿ ಹೆಸರುಗಳಲ್ಲಿ ಕರೆಸಿಕೊಳ್ಳುವ ಚಲನಚಿತ್ರಗಳನ್ನು ತೆಗೆಯಲು ಹೆಚ್ಚು ನಿರ್ದೇಶಕರು ಮುಂದಾಗುವುದು ಸಾಮಾನ್ಯವಾದದ್ದೆ. ಇಂಥ ಚಲನಚಿತ್ರಗಳು ವಿವಿಧ ಅಭಿರುಚಿಯ ಪ್ರೇಕ್ಷಕರನ್ನು ಸೆಳೆಯಲು ಹಾಸ್ಯ, ನೃತ್ಯ, ಹಾಡುಗಳು ಮತ್ತು ಭವ್ಯವಾದ ಸೆಟ್ಟಿಂಗ್‌ಗಳನ್ನು ಒಳಗೊಂಡಿರುತ್ತವೆ ಮತ್ತು ಅವುಗಳನ್ನು ವಿವಿಧ ರೀತಿಯ ಲೊಕೇಶನ್‌ಗಳಲ್ಲಿ ಚಿತ್ರೀಕರಿಸಲಾಗಿರುತ್ತದೆ. ಈ ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ಜನಪ್ರಿಯ ನಟರು ಮತ್ತು ನಟಿಯರು ಮುಖ್ಯ ಪಾತ್ರಗಳನ್ನು ನಿರ್ವಹಿಸಿರುತ್ತಾರೆ. ಕಥೆಯ ಹರವನ್ನು ಅವಲಂಬಿಸಿ ಚಿತ್ರದಲ್ಲಿ ಅನೇಕ ಪ್ರಮುಖ ಕಲಾವಿದರನ್ನೊಳಗೊಂಡಂತೆ ಜನಪ್ರಿಯ ತಾರಾಗಣ ಕೂಡ ಇರುತ್ತದೆ. ನಿರ್ಮಾಣ ತಂಡವು ಗಾಯಕರು, ನೃತ್ಯ ಸಂಯೋಜಕರು, ಸಂಗೀತಗಾರರು ಇತ್ಯಾದಿಯಾಗಿ ಒಳಗೊಂಡು, ಸಿನಿಮಾವನ್ನು ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತದೆ. ಅಷ್ಟೇ ಅಲ್ಲದೆ, ಬೃಹತ್ ಪ್ರಚಾರಗಳು, ಜಾಹೀರಾತುಗಳು ಮತ್ತು ಸ್ಟಾರ್ ಶಿಫಾರಸ್ಸುಗಳು ಬಿಡುಗಡೆಗಾಗಿ ಮುಂಚೆ ಸಾಮಾನ್ಯ. ಅತ್ಯಂತ ಸಂಕೀರ್ಣವಾದ ಮಾಹಿತಿಗಳನ್ನು ಸಹ ಆಕರ್ಷಕವಾಗಿ ಮತ್ತು ಸರಳವಾಗಿ ಗ್ರಹಿಸಲು ಸಾಧ್ಯವಾಗುವ ರೀತಿಯಲ್ಲಿ ಜನರಿಗೆ ತಲುಪಿಸಬಹುದಾದ ಮಾರ್ಗ ಇದಾಗಿರುವುದರಿಂದ ಎಲ್ಲ ಭಾಷೆಯ ಚಿತ್ರರಂಗದಲ್ಲಿ ಜನಪ್ರಿಯ ಮಾದರಿಯ ಸಿನಿಮಾಗಳು ಸರ್ವೇಸಾಮಾನ್ಯ.

ರಾಜಮೌಳಿಯಂತ ನಿರ್ದೇಶಕರು ಸಿನಿ ಜಗತ್ತಿಗೆ ಕಾಲಿಟ್ಟಿರುವುದೇ ಇಂತಹ ಸಿನಿಮಾಗಳ ಮೂಲಕ. ಇವರ ಹಳೆಯ ಸಿನಿಮಾಗಳನ್ನು ಗಮನಿಸಿದಾಗ ಈ ಮೇಲಿನ ಎಲ್ಲಾ ಅಂಶಗಳೂ ದಟ್ಟವಾಗಿ ಗೋಚರಿಸುತ್ತವೆ.

‘ಈಗ ‘ ಚಿತ್ರದ ನಂತರ ಮಾರುಕಟ್ಟೆಯ ಆಳಗಲವನ್ನು ಹಿಗ್ಗಿಸಿಕೊಂಡ ಈ ನಿರ್ದೇಶಕ ತನ್ನ ಸಿನಿಮಾಗಳನ್ನು ಭಾರತದ ಉದ್ದಗಲಕ್ಕೆ ಮಾರ್ಕೆಟ್ ಮಾಡುವ ಮೂಲಕ ಇತರ ಭಾಷೆಗಳಿಗೂ ಹತ್ತಿರವಾಗಿದ್ದಾರೆ; ಅರ್ಥಾತ್ ಬಹುತೇಕ ಭಾರತೀಯ ಸಿನಿಪ್ರೇಮಿಗಳಿಗೆ ಈ ನಿರ್ದೇಶಕನ ಹೆಸರು ಪರಿಚಯವಾಗಿದೆ.

ಇಂತಹ ನಿರ್ದೇಶಕರ ಹೊಸ ಸಿನಿಮಾ ಬಂದಾಗ, ಆ ಸಿನಿಮಾದಲ್ಲಿ ಸಾರ್ವಜನಿಕರಿಗೆ ಅಪೀಲ್ ಆಗುವಂತಹುದ್ದು ಏನಿರಬಹುದು ಎಂಬ ಕುತೂಹಲ ಹೆಚ್ಚಿನ ಜನಕ್ಕೆ ಮೂಡುವುದು ಸಹಜ. ಇಂತಹ ಕುತೂಹಲವನ್ನೇ ಬಂಡವಾಳ ಮಾಡಿಕೊಂಡಿರುವ ರಾಜಮೌಳಿ ಈಗ ‘RRR…’ ಎನ್ನುವ ಗಾಳಿಗೋಪುರವನ್ನು ಸಿನಿಮಾದ ಹೆಸರಿನಲ್ಲಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ.

ಕಮರ್ಶಿಯಲ್ ಕಾರ್ಡ್‌ಅನ್ನು ಸಹಿಸಿಕೊಂಡು ಸಿನಿಮಾ ವೀಕ್ಷಣೆಗೆ ಕುಳಿತರೂ ಸಹ ಮೊದಲಾರ್ಧ ಮುಗಿಯುವವರೆಗೂ ಕಥೆ ಶುರುವಾಗುವ ಯಾವ ಲಕ್ಷಣಗಳೂ ಕಾಣಿಸುವುದಿಲ್ಲ. ಟೊಳ್ಳು ಚಿತ್ರಕತೆಯಿಂದ ಮಂದಗತಿಯಲ್ಲಿ ಸಾಗುವ ಸಿನಿಮಾ, ಇಡೀ ಅವಧಿಯಲ್ಲಿ ರಾಮ್ ಚರಣ್ ಮತ್ತು ಎನ್.ಟಿ.ಆರ್ ರ ಅಭಿಮಾನಿಗಳಿಗೆ ಅವರನ್ನು ಎಸ್ಟಾಬ್ಲಿಷ್ ಮಾಡುವುದರಲ್ಲಿಯೇ ಕಾಲಹರಣ ಮಾಡುತ್ತದೆ.

ನಿರ್ಮಾಪಕರು ಧಾರಾಳವಾಗಿ ಸುರಿದಿರುವ ದುಡ್ಡು, ದೊಡ್ಡ ಪರದೆಯ ತುಂಬ ಜನಗಳನ್ನು ಸೇರಿಸುವುದರಲ್ಲಿ ಮಾತ್ರ ಯಶಸ್ವಿಯಾಗಿದೆ. ಅವಶ್ಯಕತೆಯಿಲ್ಲದ ದೃಶ್ಯ ಸಂಯೋಜನೆ, ಅತಿಯಾದ ಭಾವನೆಗಳ (ಇವ್ಯಾವುದೂ ನೈಜವಾಗಿ ಪ್ರೇಕ್ಷಕನನ್ನು ಕಾಡುವುದಿಲ್ಲ) ಜತೆಗಿನ ಗುದ್ದಾಟ, ಕೊಂಚವೂ ಲಾಜಿಕ್ ಇಲ್ಲದಂತೆ ಜರುಗುವ ಸನ್ನಿವೇಶಗಳನ್ನೇ ಹೊತ್ತು ಮೆರೆದಿರುವ RRR… ಮನರಂಜನೆಯ ಗಡಿಯನ್ನೂ ಬಿಟ್ಟು ಪ್ರೇಕ್ಷಕರಿಗೆ ಬೇರೆಯದೇ ಆದ ರೀತಿಯಲ್ಲಿ ಅಪೀಲ್ ಆಗುವ ಅಪಾಯವನ್ನು ಹೊಂದಿದೆ…

ಜಾತಿ, ಧರ್ಮ ಮತ್ತು ಅಧಿಕಾರದಿಂದ ಮನುಷ್ಯ ಘನತೆಯನ್ನು ಅಳೆಯುವ/ನಿರಾಕಸಿರುವ ಸದ್ಯದ ವಾತಾವರಣದಲ್ಲಿ, ಮಿತಿಮೀರಿದ ಅಸಹನೆ ನಮ್ಮುಗಳ ಮಧ್ಯೆ ಬೆಳೆದು ಉಸಿರುಗಟ್ಟಿಸುತ್ತಿವೆ. ಸುತ್ತಮುತ್ತಲ ಘಟನೆಗಳನ್ನು ಸಮಾಜವು ನೋಡುವ ಮತ್ತು ಸ್ವೀಕರಿಸುವ ಶೈಲಿ ವಿಷಮಗೊಳ್ಳುತ್ತಿರುವ ಸಂದರ್ಭದಲ್ಲಿ, ಕಲೆ ಅಂತಹ ಸೂಕ್ಷ್ಮಗಳನ್ನು ಅರಿತು ಹೊಸ ದಿಕ್ಕಿನ ಆಲೋಚನೆಗಳ ಕಡೆಗೆ ನಮ್ಮನ್ನು ಕರೆದೊಯ್ಯುವುದು ಅತ್ಯವಶ್ಯಕ. ಇದು ಸಿನಿಮಾ ನಿರ್ದೇಶಕನಿಗೆ ಇರಬೇಕಾದ ಬಹುಮುಖ್ಯ ಅರ್ಹತೆ ಎಂದರೆ ತಪ್ಪಾಗಲಾರದು. ಆದರೆ ಈ ನಡುವೆ ಬರುತ್ತಿರುವ ಕಮರ್ಷಿಯಲ್ ಸಿನಿಮಾಗಳು ಅಂತಹ ಅಪೇಕ್ಷೆಗೆ ವಿರುದ್ಧವಾಗಿ ನಡೆಯುತ್ತಿರುವುದು ದುರಂತ. ಅಂತಹ ಸಿನಿಮಾಗಳು ಸಮಾಜದಲ್ಲಿ ಪ್ರಭಾವಿಸಬಹುದಾದ ಆತಂಕಕಾರಿ ಬದಲಾವಣೆಗಳನ್ನು ಗಮನಿಸಿದರೆ, ಊಹಿಸಿಕೊಂಡರೆ ಕಲೆಯ ಮೂಲ ಉದ್ದೇಶ ಎಲ್ಲಿಗೆ ಬಂದು ನಿಂತಿದೆ ಎಂಬುದು ಆತಂಕದ ವಿಷಯ. ಅದಕ್ಕೆ ಹೊಸ ಸೇರ್ಪಡೆ ರಾಜಮೌಳಿ ಯ RRR…

ಸಿನಿಮಾದ ಕಥಾನಾಯಕರಿಬ್ಬರಿಗೂ ಇರುವ ಹಿನ್ನೆಲೆಯನ್ನು ಗಮನಿಸಿದರೆ ಒಬ್ಬ ಕಾಡಿನ ಮಧ್ಯೆ ವಾಸಿಸುವ ಬುಡಕಟ್ಟು ಜನಾಂಗದವನು, ವಿದ್ಯಾರ್ಹತೆ ಇಲ್ಲದವನು, ನಗರದ ರೀತಿ ರಿವಾಜುಗಳನ್ನು ತಿಳಿಯದವನು, ಇಂತವನಿಗೆ ಬ್ರಿಟಿಷ್ ಆಡಳಿತದ ಮುಖ್ಯಸ್ಥನ ಮನೆಯ ಹುಡುಗಿಯೊಬ್ಬಳೊಂದಿಗೆ ಸ್ನೇಹವಾಗಿ ಪ್ರೇಮವೂ ಆಗುತ್ತದೆ. ಅದಕ್ಕೆ ಸಂಪರ್ಕ ಕೊಂಡಿಯಾಗಿ ಮೊದಲು ಬರುವ ಕಥೆಯ ಎಳೆಯಲ್ಲಿ ಮಾರುವೇಶದಲ್ಲಿ ಬರುವ ಈ ಕಥಾನಾಯಕ ಮುಸ್ಲಿಂ ಆಗಿ ಪ್ರೇಕ್ಷಕರೆದುರಿಗೆ ಕಾಣಿಸುತ್ತಾನೆ.

ಮತ್ತೊಬ್ಬ, ಜನಿವಾರಧಾರಿ, ಇಂಗ್ಲೀಷ್ ಭಾಷೆಯಲ್ಲಿ ಸುಲಲಿತವಾಗಿ ಮಾತನಾಡುವವನು, ಬ್ರಿಟೀಷರ ಸರ್ಕಾರದಲ್ಲಿ ಉನ್ನತ ಹುದ್ದೆ ಪಡೆಯುವುದಕ್ಕಾಗಿ ಅವರಿಗೆ ಬಹಳ ನಿಷ್ಠವಂತವನಾಗಿ ಇರುವಂತೆ ನಟಿಸಿ ಗುರುತಿಸಿಕೊಳ್ಳುವವನು. ತನ್ನ ಕಾರ್ಯದಲ್ಲಿ ಯಶಸ್ವಿಯಾದಮೇಲೆ ತನ್ನ ಜನರಿಗಾಗಿ ಕೆಲಸ ಮಾಡುವ ಯೋಜನೆ ಹಾಕಿರುವವನು. ಆ ಪಾತ್ರದ ಹೆಸರು ರಾಮನಾಗಿದ್ದು, ಆತನ ಪ್ರೇಯಸಿಯನ್ನು ಸೀತೆಯಾಗಿ ನಿರ್ದೇಶಕರು ನಮ್ಮ ಮುಂದೆ ನಿಲ್ಲಿಸುತ್ತಾರೆ.
ರಾಮನ ಈ ಅಜ್ಞಾತವಾಸಕ್ಕೆ, ನಿಷ್ಠಾವಂತತೆಗೆ ಬಲವಾದ ಕಾರಣ ಕೊಡುವ ನಿರ್ದೇಶಕರು, ಬುಡಕಟ್ಟು ಜನಾಂಗದ ಮತ್ತು ಹಿಂದುಳಿದ ಜನರ ನಾಯಕನ ಪಾತ್ರ ಕಟ್ಟುವಾಗ, ಆತನ ಮೇಲೆ ತಪ್ಪು ತಿಳುವಳಿಕೆ ಮೂಡುವಂತೆ ಮಾಡಿ ಯಾವ ಸೀಮೆ ಕಥೆ ಹೇಳಲು ಹೊರಟಿದ್ದಾರೋ ತಿಳಿಯದು. ಇಲ್ಲಿ ಜನಿವಾರಧಾರಿ ಪಾತ್ರದ ಬಗ್ಗೆ ಇರುವ ತಪ್ಪು ತಿಳಿವಳಿಕೆಯನ್ನು ಬಿಟ್ಟುಬಿಡಿ ಎಂದು ಕೂಗಿಕೂಗಿ ಹೇಳುತ್ತಿರುವಂತೆ ಭಾಸವಾಗುತ್ತದೆ, ಸಾಲದ್ದಕ್ಕೆ ಸಿನಿಮಾ ಶುರುವಿನಲ್ಲಿ ಯಾವುದೋ ಕಾರಣಕ್ಕೆ ಹೋರಾಟನಿರತ ಜನರಿಂದ ಅವನಿಗೆ ಜನವಿರೋಧಿ ಎನ್ನುವಂತೆ ಬೈಯಿಸಿ ನಂತರದಲ್ಲಿ ಆ ಪಾತ್ರವನ್ನ ಬಹಳ ನಾಜೂಕಿನಿಂದ ಭಾವತೀವ್ರತೆಗೆ ತಳ್ಳುತ್ತಾರೆ.
ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ನಾವು ವಿನಾಯಕ ದಾಮೋದರ್ ಸಾವರ್ಕರ್ (ವೀರ ಸಾವರ್ಕರ್ ರಸ್ತೆ ಎಂಬುದಾಗಿ ಬೆಂಗಳೂರಿನ ಮೇಲುಸೇತುವೆಗೆ ಆತನ ಹೆಸರಿದೆ) ಕುರಿತಾಗಿ ಒಂದು ಉತ್ಪ್ರೇಕ್ಷಿತ ಕತೆಯನ್ನು ಓದಿರುತ್ತಿರುತ್ತೇವೆ, ಇತಿಹಾಸದಲ್ಲಿ ತಪ್ಪಾಗಿ ಬಿತ್ತರಿಸಿರುವ ಸಾವರ್ಕರ್ ನಿಜವಾಗಿ ಒಬ್ಬ ಹೋರಾಟಗಾರ, ಆತ ಬ್ರಿಟಿಷರ ಎದುರು ಕ್ಷಮೆ ಕೇಳಿದ್ದು, ಅಲ್ಲಿಂದ ಪಾರಾಗಿ ಬಂದು ಪುನಃ ದೇಶ ಸೇವೆ ಮಾಡಲು ಮಾತ್ರ, ಬ್ರಿಟಿಷರೊಂದಿಗೆ ರಾಜಿಯಾಗಲು ಅಲ್ಲ, ಇತ್ಯಾದಿ ಇತ್ಯಾದಿ… ಎಂದು.

RRR ಸಿನಿಮಾದ ರಾಮ್ ಪಾತ್ರವೂ ಬಹಳವಾಗಿ ಇಂಥದ್ದೆ ಕಥೆಗೆ ಪರ್ಯಾಯವಾಗಿ ನಿಲ್ಲುತ್ತದೆ.
ಬುಡಕಟ್ಟು ಜನಾಂಗದ ಹಿನ್ನೆಲೆಯಿಂದ ಬಂದ ಅಕ್ತರ್/ಭೀಮ್ ಪಾತ್ರವನ್ನು ರಾಮ್ ಪಾತ್ರದ ಎದುರುಗಡೆ ನಿಲ್ಲಿಸಿ, ಅವನಿಗಿಂತ ಕೆಳಸ್ಥರಕ್ಕೆ ತಳ್ಳಿ, ನನಗೆ ವಿದ್ಯೆ ಇಲ್ಲ, ರಾಮ ಮತ್ತು ಸೀತೆಯನ್ನು ಒಂದು ಮಾಡುವುದೇ ನನ್ನ ಧ್ಯೇಯ ಎಂದು ಒತ್ತಿ ಹೇಳುವಂತೆ ಮಾಡುವುದನ್ನು ನಿರ್ದೇಶಕ ನಾಜೂಕಾಗಿ ಚಿತ್ರಿಸಲು ಪ್ರಯತ್ನಿಸಿದ್ದಾರೆ.

ಆ ಕೆಲಸ ಮಾಡಿಸಿದ ಮೇಲೆ ನನಗೆ ಶಿಕ್ಷಣವನ್ನು ಕೊಡು ಎಂದು ರಾಮನ ಬಳಿ ವರ ಕೇಳುವಂತೆ ಮಾಡುವುದು, ಸದ್ಯದ ರಾಜಕೀಯ ವಾತಾವರಣಕ್ಕೆ ಸಂಕೇತವಾಗಿಲ್ಲ ಎಂಬುದನ್ನು ಖಂಡಿತವಾಗಿ ನಿರ್ದೇಶಕ ಸಾಬೀತು ಮಾಡಲಾರ. ಅಥವಾ ಈ ಸನ್ನಿವೇಶಗಳನ್ನ ಬರಿಯ ಮನರಂಜನೆಯೆಂದೇ ತೆಗೆದುಕೊಂಡರೂ ರಾಮ್ ಚರಣ್ ಪಾತ್ರವನ್ನ ಸಿನಿಮಾದ ಕೊನೆಯಲ್ಲಿ ರಾಮಾಯಣ ಕಥೆಯ ರಾಮನ ಅವತಾರದಲ್ಲೇ ನಿಲ್ಲಿಸಿ ಅನವಶ್ಯಕ ಹೊಳಹುಗಳನ್ನು ನೀಡುವ ಮರ್ಮವನ್ನಾದರೂ ಆತ ತಿಳಿಸಿಕೊಡಬೇಕಾಗುತ್ತದೆ.

ಇನ್ನು ಈ ಪುರುಷ ಪ್ರಧಾನ ಸಿನೆಮಾದಲ್ಲಿ ಮಹಿಳಾ ಪಾತ್ರಗಳ ಬಗ್ಗೆ ಹೇಳುವುದಕ್ಕೆ ಏನೂ ಉಳಿಸಿಲ್ಲ, ಮೇಕಪ್ ಹಾಕಿ ಮುಖ ತೋರಿಸಿ ಹೋಗಿ ಎನ್ನುವಂತಿದೆ ಅವರಿಗೆ ಕೊಟ್ಟಿರುವ ಅವಕಾಶ. ಕನಿಷ್ಠ ಚಿತ್ರಕತೆಯ ವೇಗಕ್ಕಾದರೂ ಅವರನ್ನು ಹೆಸರಿಸಿದ್ದರೆ ಸಮಾಧಾನವಾಗಿರುತ್ತಿತ್ತು.

ರಾಜಮೌಳಿಯ ಈ ಹಿಂದಿನ ಸಿನಿಮಾಗಳಲ್ಲಿ ಇದ್ದ ಅಲ್ಪಸ್ವಲ್ಪ ಕಥೆ ಹೆಣೆಯುವ ಕೆಲಸವೂ ಇಲ್ಲಿ ಕಾಣೆಯಾಗಿದೆ. ಈ ಸಿನಿಮಾದಲ್ಲಿ ಸಂಗೀತ, ಅಂತಹ ಕಿಕ್ ಕೊಡುವುದಿಲ್ಲ. ಪಾತ್ರಗಳ ನಟನೆ, ಸಂಕಲನದ ಕೆಲಸವಂತೂ ಅವರಿಗೇ ಪ್ರೀತಿ. ಅದ್ದೂರಿತನವೇ, ಮಾರ್ಕೆಟಿಂಗ್ ಗಿಮಿಕ್ಕೇ ಒಂದು ಸಿನಿಮಾವನ್ನು ಗೆಲ್ಲಿಸಬಹುದು ಎಂಬ ಹಂತಕ್ಕೆ ಇಂದು ಚಿತ್ರೋದ್ಯಮ ಬಂದು ನಿಂತಿರುವುದು ವಿಷಾದನೀಯ ಬೆಳವಣಿಗೆ.

ನಾನ್ನೂರೋ ಆರುನೂರೋ ಕೋಟಿ ವೆಚ್ಚದ ಸಿನಿಮಾ ಸಹಜವಾಗಿ ಎಲ್ಲಾ ಬಾಷೆಯ ಚಿತ್ರ ಮಾರುಕಟ್ಟೆಗೂ ಲಗ್ಗೆಯಿಟ್ಟಿರುವುದರಲ್ಲಿ ಅನುಮಾನವಿಲ್ಲ, ಭಾರತೀಯ ಸಿನಿ ಇತಿಹಾಸದಲ್ಲಿ, ಪುರಾಣ ಇತಿಹಾಸಗಳನ್ನು ಕಲಸುಮೇಲೋಗರ ಮಾಡೊ ಕಟ್ಟಿರುವ ಕಪೋಲಕಲ್ಪಿತ ಹಲವು ಸಿನಿಮಾಗಳು ಬಂದಿರಬಹುದು ಮತ್ತು ಮುಂದೆ ಬರಲೂಬಹುದು. ಮನರಂಜನೆ ಜತೆಗೆ ಒಂದು ಮೆಸೇಜ್ ಎಂದು ಹೇಳಿಕೊಂಡು ಬರುವ ಇಂತಹ ಜಡ್ಡು ಸಿನಿಮಾಗಳನ್ನು ಪ್ರೇಕ್ಷಕರು ಯಾವ ಕಾರಣಕ್ಕಾಗಿಯಾದರೂ ನೋಡಬೇಕು ಎಂಬುದೇ ಸದ್ಯದ ಪ್ರಶ್ನೆ.

ಎನ್. ಧನಂಜಯ್ 

ಸೇಲ್ಸ್ ವಲಯದ ಕೆಲಸದಲ್ಲಿ ತೊಡಗಿಸಿಕೊಂಡಿರುವ ಧನಂಜಯ್ ಅವರಿಗೆ ನಟನೆ, ಸಿನಿಮಾ, ರಂಗಭೂಮಿ ಮತ್ತು ಸಾಹಿತ್ಯ ಆಸಕ್ತಿಯ ಕ್ಷೇತ್ರಗಳು.


ಇದನ್ನೂ ಓದಿ: ಹುಸಿ ಕಾಳಜಿಯ, ಪಕ್ಷಪಾತ ಧೋರಣೆಯ, ದ್ವೇಷದ ಅಜೆಂಡಾವುಳ್ಳ ’ದ ಕಾಶ್ಮೀರ್ ಫೈಲ್ಸ್’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...