Homeನ್ಯಾಯ ಪಥಮೂರು ಡೇಟಾ ಮತ್ತು ಒಂದು ಖರೇ ಜನ್ಮಸ್ಥಾನ : ಬೈ ಡೇಟಾಮ್ಯಾಟಿಕ್ಸ್

ಮೂರು ಡೇಟಾ ಮತ್ತು ಒಂದು ಖರೇ ಜನ್ಮಸ್ಥಾನ : ಬೈ ಡೇಟಾಮ್ಯಾಟಿಕ್ಸ್

- Advertisement -
- Advertisement -

‘ಒಂದು ಸಣ್ಣ ಪಕ್ಷಿಯ ಸಾವು ನಿನ್ನನ್ನು ಕವಿಯಾಗಿಸಿದೆ. ನಿನ್ನ ಕಾವ್ಯ ಕಾಲವನ್ನು ಸೋಲಿಸಲಿದೆ’ ಅಂತ ಬ್ರಹ್ಮ ವಾಲ್ಮೀಕಿಗೆ ಹೇಳಿದ. ಆ ಕಾವ್ಯವೇ ರಾಮಾಯಣ. ಅದರಲ್ಲಿ ರಾಜನ, ರಾಜಕುಮಾರನ, ಅವನ ಭಕ್ತನ, ರಾಜಕುಮಾರಿಯ, ಪ್ರತಿನಾಯಕನ, ಖಳನ, ಅವರೆಲ್ಲರ ಹಿಂಬಾಲಕರ ಕತಿ ಅದ.

ಆ ಕತಿ ಅತ್ಲಾ ಕಡೆ ಇರಲಿ. ಇತ್ತೀಚಿನ ಸರ್ವೋಚ್ಚ ನ್ಯಾಯಾಲಯದ ಒಂದು ತೀರ್ಪಿನೊಳಗ ಉಪಯೋಗಿಸಿದ ಕೆಲವು ಪದಗಳ ಈಗ ನೋಡೋಣ.

ಪೊಸೆಷನ್ – ಅನುಭೋಗ, ಸ್ವಾಧೀನ, ಹಿಡುವಳಿ
ಹಿಡುವಳಿ ಅಂದರ ಮಾಲಿಕತ್ವ ಅಲ್ಲ. ಅದು ಸದ್ಯದ ಮಟ್ಟಿಗೆ ಆಸ್ತಿ ಯಾರ ಕೈಯಾಗ ಅದ ಅನ್ನೋ ಪ್ರಶ್ನೆಗೆ ಉತ್ತರ. ಇದು ಸಂಪೂರ್ಣ ಮಾಲಿಕಿ ಹಕ್ಕು ಕೊಡೋದಿಲ್ಲ. ಇದರ ಹಕ್ಕುಗಳಿಗೆ ಮಿತಿ ಅದ. ನೀವು ಸ್ವಾಧೀನ ಪಡೆಯುವಾಗ ಇದ್ದಂಗ ಅದು ಇರಬೇಕು. ಅದನ್ನು ನೀವು ಮಾರಲಿಕ್ಕೆ ಬರೋದಿಲ್ಲ, ಲೀಸು, ಬಾಡಿಗಿ ಕೊಡಲಿಕ್ಕೆ ಬರೋದಿಲ್ಲ. ಅದರ ಮೂಲ ಸ್ವರೂಪ ಬದಲಾಯಿಸಲಿಕ್ಕೆ ಬರೋದಿಲ್ಲ, ಇತ್ಯಾದಿ. ಸ್ವಾಧೀನ ಇದ್ದವರು ಬಿಟ್ಟು ಬೇರೆಯವರು ಅದನ್ನು ಕೆಡವಲಿಕ್ಕೆ, ನಾಶ ಮಾಡಲಿಕ್ಕೆ ಬರೋದಿಲ್ಲ.

ಪೊಸೆಷನ್ ಈಸ್ ನೈನ್ ಪಾಯಿಂಟ್ಸ್ ಇನ್ ಲಾ’ ಅಂತ ಒಂದು ಮಾತು ಅದ. ಅಂದರ ಆಸ್ತಿ ಯಾರಿಗೆ ಹೋಗಬೇಕು ಅನ್ನೋ ಮಾತು ಬಂದಾಗ ಸ್ವಾಧೀನ ಇದ್ದವರ ಕಡೆ ಹತ್ತರಲ್ಲಿ ಒಂಬತ್ತು ಅಂಶ ಇದ್ದಂಗ ಅಂತ ಅದರ ಅರ್ಥ.

ಆದರ ನಮ್ಮ ಗೌರವಾನ್ವಿತ ನ್ಯಾಯಾಧೀಶರು ಈ ಸಮುದಾಯ ಈ ಕಟ್ಟಡವನ್ನು ಐನೂರು ವರ್ಷದಿಂದ ಸ್ವಾಧೀನ ಪಡೆದಿದೆ ಅಂತ ಹೇಳಿ, ಅದನ್ನು ಕೆಡವಿದ್ದು ತಪ್ಪು ಅಂತ ಒಂದು ಕಡೆ ಹೇಳತಾರ. ಇನ್ನೊಂದು ಕಡೆ ಕೆಡವಿದರಿಗೆ ಈ ಜಾಗದ ಮಾಲಿಕತ್ವ ಹೋಗಬೇಕು ಅಂತ ಹೇಳತಾರ. ಅದು ಅವರಿಗೆ ಆಭಾಸ ಅನ್ನಿಸಿಲ್ಲ.

ಓನರಷಿಪ್ – ಒಡೆತನ, ಅಥವಾ ಮಾಲೀಕತ್ವ
ಇದು ಮಾಲೀಕ ಹಾಗೂ ವಸ್ತು ವಿಷಯದ ನಡುವಿನ ಸಂಬಂಧ. ಇದರ ಪ್ರಕಾರ ಮಾಲೀಕನಿಗೆ ಅದರ ಮೇಲೆ ಸಂಪೂರ್ಣ ಹಕ್ಕು ಇರತಾವ. ಅವನು ಅದನ್ನ ಮಾರಬಹುದು, ಲೀಸಿಗೆ ಕೊಡಬಹುದು, ಅದನ್ನು ಸುಟ್ಟು ಹಾಕಿಯೋ, ನೀರಿನಲ್ಲಿ ಹಾಕಿಯೋ ನಾಶ ಮಾಡಬಹುದು. ಅದನ್ನ ಕೆಡವಿ ಕಟ್ಟಬಹುದು. ಕೆಡವಿ ಕಟ್ಟಲಾರದೇ ಇರಬಹುದು. ಅದರ ಸ್ವರೂಪ ಬದಲಿಸಬಹುದು. ಅದನ್ನು ಇಲ್ಲಾ ಅನ್ನಿಸಿ ಬಿಡಬಹುದು. ಅವನ ಹಕ್ಕುಗಳಿಗೆ ಮಿತಿ ಇಲ್ಲ. ಅಯೋಧ್ಯಾ ಕೇಸಿನಲ್ಲಿ ನ್ಯಾಯಾಲಯದ ಮುಂದೆ ಇದ್ದದ್ದು ಮಾಲೀಕತ್ವದ ಪ್ರಶ್ನೆ ಅಷ್ಟ. ಅದರ ಮಾಲೀಕರು ಯಾರು ಅನ್ನೋದು ಗೊತ್ತಾದರ ಹೇಳಬೇಕಿತ್ತು. ಇಲ್ಲಾಂದರ ಇಲ್ಲಾ ಅನ್ನಬೇಕಿತ್ತು. ಅದನ್ನು ಬಿಟ್ಟು

ಅಲ್ಲಿ ಗುಡಿ ಕಟ್ಟಬಹುದು, ಆ ಮಸೀದಿ ಕೆಡವಿದ್ದು ತಪ್ಪು. ಅದು ನಮ್ಮ ಜಾಗ ಅಂತ ಕೇಳತಾ ಇರೋ ನಮಾಜಿಗರಿಗೆ ಅದರ ಡಬಲ್ ಜಾಗ ಕೊಟ್ಟು ಬಿಡಿ ಅಂತ ಹೇಳುವ ಹರಕತ್ತು ಇದ್ದಿದ್ದಿಲ್ಲ. ಇದು ತನ್ನಳವಿಗೆ ಮೀರಿದ ತೀರ್ಪು ಅಂತ ಅದನ್ನು ಕೊಟ್ಟವರಿಗೆ ಅನ್ನಿಸಿಲ್ಲ.

ಬ್ಯಾಲೆನ್ಸ ಆಫ್ ಪ್ರಾಬೆಬಿಲಿಟಿಸ್ – ಸಾಧ್ಯಾಸಾಧ್ಯತೆಗಳ ಸಮತೋಲನ
ಇದು ಅತ್ಯಂತ ಮಜಾಶೀರ ಇರೋ ವಿಷಯ. ಅನೇಕ ವರ್ಷದ ಹಿಂದ ಆಸ್ಟೇಲಿಯಾದೊಳಗ ಬ್ರೂಕ್ಸ ಅನ್ನೋ ಹೆಣಮಗಳ ಗಂಡ ರಸ್ತೆ ಅಪಘಾತದೊಳಗ ತೀರಿಕೊಂಡ. ಅವನು ಆ ಗಾಡಿಯ ಚಾಲಕ. ಅವನಲ್ಲದೇ ಆ ಗಾಡಿಗೆ ಇನ್ನೊಬ್ಬ ಚಾಲಕ ಇದ್ದ. ಅವರಿಬ್ಬರೂ ಸತ್ತು ಹೋದರು. ಅಲ್ಲಿ ಸಾಕ್ಷಿ ಇರಲಿಲ್ಲ. ರಸ್ತೆ ಸೀದಾ ಇತ್ತು. ಅಲ್ಲಿ ಇನ್ನೊಂದು ಗಾಡಿ ಇರಲಿಲ್ಲ. ಹೀಗಿದ್ದಾಗ ತಪ್ಪು ಯಾವ ಚಾಲಕಂದು ಅಂತ ತಿಳಕೊಳ್ಳೋದು ಅಲ್ಲಿನ ನ್ಯಾಯಾಲಯಕ್ಕ ಕಷ್ಟ ಆತು. ಕೊನೆಗೆ ಜಜ್ಜುಗಳೆಲ್ಲಾ ಸೇರಿ ಒಬ್ಬ ಗಣಿತ ತಜ್ಞನ ಕಡೆ ಹೋದರು. ಅವನು ಸಾಧ್ಯಾಸಾಧ್ಯತೆಗಳ ಸಮತೋಲನ ಅನ್ನೋ ಸಂಕಲನ ಬಳಸಿ ಅವರಿಗೆ ವೆನ್ ಡಯಾಗ್ರಾಮು ಹಾಕಿ ತೋರಿಸಿದ.

ಅದರ ಪ್ರಕಾರ ಸಾಕ್ಷಿಗಳು ಕಮ್ಮಿ ಇದ್ದಾಗ, ಲಭ್ಯ ಸಾಕ್ಷಿಗಳಿಂದ ಯಾವುದೇ ವಿಷಯವನ್ನು ನಿಸ್ಸಂದೇಹವಾಗಿ ಪ್ರಮಾಣಿಸಿ ತೋರಿಸಿಲಿಕ್ಕೆ ಸಾಧ್ಯವಾಗದೇ ಇದ್ದಾಗ, ಇದು ಹೀಗಾಗುವ ಸಾಧ್ಯತೆ ಹೆಚ್ಚು, ಹಾಗಾಗುವ ಸಾಧ್ಯತೆ ಕಮ್ಮಿ ಅಂತ ನ್ಯಾಯಾಧೀಶರಿಗೆ ಅನ್ನಿಸಬಹುದು. ಹೀಗೆ ಅವರಿಗೆ ಅನ್ನಿಸುವುದ ಆಧಾರದ ಮೇಲೆ ಅವರು ತೀರ್ಪು ಕೊಡಬಹುದು. ಈಗಾಗಿರೋದು ಹಿಂಗನ. ಈ ತೀರ್ಪು ಸಮಾಜದಲ್ಲಿ ಸಮತೋಲನ ತಂದೀತು ಅಂತ ಭಾಳ ಮಂದಿಗೆ ಅನ್ನಿಸಿದ್ದಕ್ಕ ಎಲ್ಲಾರೂ ಸುಮ್ಮನಿದ್ದಾರ. ಆ ಸಮತೋಲನ ಶಾಂತಿ ಸುವ್ಯವಸ್ಥೆಯ ಸಮತೋಲನವೋ ಅಥವಾ ಸತ್ಯಾಸತ್ಯತೆಯ ಸಮತೋಲನವೋ ಅನ್ನೋ ಪ್ರಶ್ನೆಗೆ ಯಾರ ಹತ್ತರಾನೂ ಉತ್ತರ ಇದ್ದಂಗಿಲ್ಲ.

ಹಿಂದೊಮ್ಮೆ ಸಾಯಿಬಾಬಾ ಅವರ ಭೇಟಿಗೆ ಲಾಲಕೃಷ್ಣ ಅದವಾನಿ ಹಾಗೂ ಕೆಲವು ಇತರ ಮುಖಂಡರು ಪುಟಪರ್ತಿಗೆ ಹೋಗಿದ್ದರಂತ. ಆಗ ಅವರು ಇವರನ್ನ ಕೇಳಿದರಂತೆ. ರಾಮನ ಜನ್ಮಸ್ಥಾನ ಯಾವುದು? ಅಲ್ಲಿದ್ದ ದೊಡ್ಡ ದೊಡ್ಡ ನಾಯಕರೆಲ್ಲಾ ಅಯೋಧ್ಯೆ, ಕೌಸಲ, ರಾಮಜನ್ಮಭೂಮಿ ಅಂತೆಲ್ಲಾ ಹೇಳಿದರಂತ. ಯಾವಾಗಲೂ ಹಸನ್ಮುಖಿಯಾಗಿದ್ದ ಸಾಯಿಬಾಬಾ ಅವರು ಅದೆಲ್ಲಾ ಅಲ್ಲಾ. ಅವನು ಹುಟ್ಟಿದ್ದು ಅವನ ತಾಯಿಯ ಗರ್ಭದಿಂದ ಅಲ್ಲವೇ. ಹಂಗಾದರೆ ಅದೇ ಅವನ ಜನ್ಮಸ್ಥಳ ಅಂತ ಹೇಳಿ ನಕ್ಕರಂತೆ. ಹೌದು ಮಹಾಸ್ವಾಮಿ ಅಂತ ಹೇಳಿ ಇವರೆಲ್ಲಾ ನಕ್ಕು ಸುಮ್ಮನಾದರಂತೆ.

ದೊಡ್ಡವರ ಮಾತುಗಳನ್ನು ಕೇಳದೇ ಇದ್ದದ್ದಕ್ಕ ನಾವು ಇವತ್ತು ಈ ದಿನ ಕಾಣುತ್ತಿದ್ದೇವೆ ಅಂತ ಅನಸತದ.

ಹೆಚ್ಚಿನ ಮಾಹಿತಿಗೆ https://www.sci.gov.in/pdf/JUD_2.pdf

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...