Homeಮುಖಪುಟದಿಲ್ಲಿ ಗಲಭೆಗಳ ಕುರಿತು ಗೃಹ ಸಚಿವ ಅಮಿತ್ ಶಾಗೆ ಮೂರು ಪ್ರಶ್ನೆಗಳು..

ದಿಲ್ಲಿ ಗಲಭೆಗಳ ಕುರಿತು ಗೃಹ ಸಚಿವ ಅಮಿತ್ ಶಾಗೆ ಮೂರು ಪ್ರಶ್ನೆಗಳು..

ಒಂದು ಘಟನೆಯಲ್ಲಂತೂ ದಿಲ್ಲಿ ಪೊಲೀಸರೇ ಮುಸ್ಲಿಮ್ ಯುವಕನೊಬ್ಬನ ಸಾವಿಗೆ ಕಾರಣವಾಗಿರುವುದಕ್ಕೆ ಸ್ಪಷ್ಟ ದಾಖಲೆಗಳಿವೆ. ಆತನಿಗೆ ಮತ್ತು ಇನ್ನೊಬ್ಬ ಯುವಕನಿಗೆ ಪೊಲೀಸರೇ ಹೊಡೆದು ರಾಷ್ಟ್ರಗೀತೆ ಹಾಡುವಂತೆ ಒತ್ತಾಯಿಸುವ ಘಟನೆ ಹಲವಾರು ವಿಡಿಯೋಗಳಲ್ಲಿ ದಾಖಲಾಗಿದೆ.

- Advertisement -
- Advertisement -

ಕೃಪೆ: ಸ್ಕ್ರೋಲ್‌ -ರೋಹನ್ ವೆಂಕಟರಾಮಕೃಷ್ಣನ್

ಅನುವಾದ: ನಿಖಿಲ್ ಕೋಲ್ಪೆ

ದಿಲ್ಲಿ ಪೊಲೀಸರು ಕೇಂದ್ರ ಗೃಹಸಚಿವ ಅಮಿತ್ ಶಾ ಅಡಿಯಲ್ಲಿ ಕೆಲಸ ಮಾಡುತ್ತಾರೆ. ಹೀಗಿರುವಾಗ ಅವರ ಕ್ರೌರ್ಯ ಹಿಂಸೆಗಳ ಬಗ್ಗೆ ವಿಡಿಯೋ ಸಾಕ್ಷ್ಯಗಳು ಇರುವಾಗ ಈ ಅಮಿತ್ ಶಾ ಅವರನ್ನು ಸಮರ್ಥಿಸಿ ಭಾಷಣ ಮಾಡುವುದು ಹೇಗೆ ಸಾಧ್ಯ?

ದಶಕಗಳ ನಂತರ ಅತ್ಯಂತ ಕ್ರೂರ ಕೋಮುಗಲಭೆಗೆ ಒಳಗಾಗಿ 50ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡ ದಿಲ್ಲಿಯ ಘಟನೆಗಳ ಕುರಿತು ಕೇಂದ್ರ ಗೃಹಸಚಿವ ಅಮಿತ್ ಶಾ ಕೊನೆಗೂ ಸಂಸತ್ತಿನಲ್ಲಿ ಬಾಯಿ ಬಿಟ್ಟಿದ್ದಾರೆ. ದಿಲ್ಲಿಯಲ್ಲಿ ನಡೆದ ಗಲಭೆಗಳ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಗಳ ಕೊನೆಯಲ್ಲಿ, “ಇದೊಂದು ಅತ್ಯಂತ ಯೋಜಿತ ಸಂಚಿನ ಹೊರತು” ಸಾಧ್ಯವಿರಲಿಲ್ಲ ಎಂದು ಹೇಳಿದ್ದಾರೆ. ಗಲಭೆಗಳ ನಿಯಂತ್ರಣಕ್ಕೆ 36 ಗಂಟೆಗಳನ್ನು ತೆಗೆದುಕೊಂಡ ದಿಲ್ಲಿ ಪೊಲೀಸರನ್ನು ಅವರು ಶ್ಲಾಘಿಸಿದ್ದಾರೆ. ಅದೂ ಕೂಡಾ ಪೊಲೀಸರು ತಮ್ಮ ನಾಲಾಯಕ್‌ತನ ಮತ್ತು ನೇರ ಶಾಮೀಲಾತಿಯ ಆರೋಪಗಳಿಗೆ ಗುರಿಯಾಗಿರುವಾಗ…!!

ಈಶಾನ್ಯ ದಿಲ್ಲಿಯ ಮುಖ್ಯ ರಸ್ತೆಯೊಂದರಲ್ಲಿ ಪೌರತ್ವ ಕಾಯಿದೆಗೆ ನಡೆದ ತಿದ್ದುಪಡಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ದಾಳಿಗಳು ನಡೆದ ಬಳಿಕ ಫೆಬ್ರವರಿ 23ರಂದು ಗಲಭೆಗಳು ಆರಂಭಗೊಂಡಿದ್ದವು. ಭಾರತೀಯ ಜನತಾ ಪಕ್ಷದ ನಾಯಕ ಕಪಿಲ್ ಮಿಶ್ರಾ ಜನರನ್ನು ಬೀದಿಗಿಳಿಯುವಂತೆ ಪ್ರಚೋದನೆ ನೀಡಿದ್ದರು. ಫೆಬ್ರವರಿ 26ರಂದು ಕೊನೆಗೂ ಶಾಂತಿ ಸ್ಥಾಪನೆಯಾಗುವ ಹೊತ್ತಿಗೆ ಮುಖ್ಯವಾಗಿ ಮುಸ್ಲಿಮರನ್ನೇ ಗುರಿಯಾಗಿಸಿದ ದೊಡ್ಡ ಪ್ರಮಾಣದ ಹಿಂಸಾಚಾರ, ಲೂಟಿ, ಬೆಂಕಿಹಚ್ಚುವಿಕೆ ನಡೆದವು. 53 ಜನರು ಪ್ರಾಣ ಕಳೆದುಕೊಂಡರು ಮತ್ತು ಬಹಳಷ್ಟು ಜನರ ಜೀವನವೇ ನಷ್ಟವಾಯಿತು.

ಮೂರು ದಿನಗಳ ಹಿಂಸಾಚಾರದ ಬಳಿಕ ಎದ್ದಿರುವ ಹಲವಾರು ಪ್ರಶ್ನೆಗಳಿಗೆ ಉತ್ತರಿಸುವ ಬದಲು ಅಮಿತ್ ಶಾ ಭಾಷಣವು ಕೇವಲ ರಾಜಧಾನಿ ಮತ್ತು ದೇಶದ ಜನರ ರಕ್ಷಣೆ ಹೊತ್ತಿರುವ, ಕಾನೂನು ಮತ್ತು ಶಿಸ್ತು ಕಾಪಾಡುವ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳಿಂದ ಇನ್ನಷ್ಟು ವಿವರಣೆಗಳನ್ನು ಮಾತ್ರ ಕೇಳುತ್ತಿದೆ.

ಗುಪ್ತಚರ ವೈಫಲ್ಯವೇ?

ದಿಲ್ಲಿ ಗಲಭೆಗಳು “ಅತ್ಯಂತ ಯೋಜಿತ ಸಂಚಿನ” ಪರಿಣಾಮ ಎಂದು ಅಮಿತ್ ಶಾ ಹೇಳಿಕೊಂಡಿದ್ದಾರೆ. ಉತ್ತರಪ್ರದೇಶದಿಂದ ಬಂದ ನೂರಾರು ಜನರು ಇದರಲ್ಲಿ ಶಾಮೀಲಾಗಿದ್ದಾರೆಂದು ತನಿಖೆಗಳು ತಿಳಿಸಿವೆ ಎಂದೂ ಹೇಳಿದ್ದಾರೆ. ಮೊದಲೇ ಹೇಳಿರುವಂತೆ ಹಿಂಸಾಚಾರಗಳು ಕಪಿಲ್ ಮಿಶ್ರಾ ಭಾಷಣದ ಬಳಿಕ ಆರಂಭವಾಗಿದ್ದವು. ಮಿಶ್ರಾ ಭಾಷಣ ಈಶಾನ್ಯ ದಿಲ್ಲಿಯ ಅತ್ಯುನ್ನತ ಪೊಲೀಸ್ ಅಧಿಕಾರಿಯ ಕಣ್ಣುಗಳ ಮುಂದೆಯೇ ನಡೆದಿತ್ತು ಎಂದು ವರದಿಗಳು ಹೇಳುತ್ತವೆ. ಪ್ರತಿಭಟನಕಾರರನ್ನು ತೆರವು ಮಾಡಲು ಪೊಲೀಸರಿಗೆ ಗಡು ನೀಡಿದ್ದ ಮಿಶ್ರಾ, ಇಲ್ಲದಿದ್ದರೆ ತಾನು ಮತ್ತು ತನ್ನ ಬೆಂಬಲಿಗರೇ ಅವರನ್ನು ತೆರವು ಮಾಡುವುದಾಗಿ ಬೆದರಿಕೆ ಹಾಕಿದ್ದ.

ಫೆಬ್ರವರಿ 24ರ ಭಾನುವಾರವೇ ಸಂಭಾವ್ಯ ಹಿಂಸಾಚಾರಗಳ ಕುರಿತು ಕನಿಷ್ಟ ಆರು ಗುಪ್ತಚರ ವರದಿಗಳನ್ನು ಸಲ್ಲಿಸಲಾಗಿತ್ತು. ಮೇಲಾಗಿ ಗಲಭೆ ಎಬ್ಬಿಸುವುದಕ್ಕೆ ಜನರು ಬಂದಿದ್ದ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಆಡಳಿತವಿದೆ ಮತ್ತು ಗಲಭೆ ನಿಯಂತ್ರಿಸಬೇಕಾದ ದಿಲ್ಲಿ ಪೊಲೀಸರು ಅಮಿತ್ ಶಾ ನಿಯಂತ್ರಣದಲ್ಲಿಯೇ ಇದ್ದಾರೆ. ಹೀಗಿರುವಾಗ ಇದೊಂದು ಅತ್ಯಂತ ಯೋಜಿತ ಸಂಚಿನ ಪರಿಣಾಮವೇ ಆಗಿದ್ದರೆ, ಹಿಂಸಾಚಾರ ನಡೆಯಲಿದೆ ಎಂದು ಮೊದಲೇ ಗುಪ್ತಚರ ವರದಿಗಳು ಬಂದಿದ್ದರೆ, ಮೂರು ದಿನಗಳ ಕಾಲ ಹಿಂಸಾಚಾರ ಯಾಕೆ ಮುಂದುವರಿಯಿತು?

ಮುಖ ಚಹರೆ ಗುರುತು ತಂತ್ರಜ್ಞಾನ?

ಮುಖ ಚಹರೆ ಗುರುತು ಪತ್ತೆ ತಂತ್ರಜ್ಞಾನ ಬಳಸಿ ಹಿಂಸಾಚಾರದಲ್ಲಿ ಪಾಲುಗೊಂಡ 1,100ರಷ್ಟು ಜನರನ್ನು ಗುರುತಿಸಲಾಗಿದೆ ಎಂದು ಗೃಹಸಚಿವ ತನ್ನ ಭಾಷಣದಲ್ಲಿ ಹೇಳಿದ್ದಾರೆ. ಜನರ ಮತದಾರರ ಗುರುತುಚೀಟಿ, ಡ್ರೈವಿಂಗ್ ಲೈಸನ್ಸ್ ಮುಂತಾದ ಮಾಹಿತಿ ಸಂಗ್ರಹದಿಂದ ಸಿ.ಸಿ. ಕ್ಯಾಮರಾದ ಫೊಟೊಗಳನ್ನು ಹೋಲಿಸಿ ಈ ತಂತ್ರಜ್ಞಾನವು ಜನರನ್ನು ಗುರುತಿಸುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನು ಹೇಗೆ ಬಳಸಲಾಗುತ್ತದೆ ಎಂಬ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಪೊಲೀಸರು ಬಳಸಿದಾಗ ಈ ಮುಖ ಚಹರೆ ಪತ್ತೆ ತಂತ್ರಜ್ಞಾನ ತೀರಾ ದೋಷಯುಕ್ತವಾಗಿದೆ ಎಂಬುದು ನಮಗೆ ಗೊತ್ತಿದೆ. ಇಂಗ್ಲೆಂಡ್‌ನಲ್ಲಿ ನಡೆದ ಒಂದು ಸಂಶೋಧನೆಯು ಅಲ್ಲಿನ ನಗರ ಪೊಲೀಸರು ಬಳಸುವ ಮುಖ ಚಹರೆ ಪತ್ತೆ ತಂತ್ರಜ್ಞಾನದಲ್ಲಿ ಐದರಲ್ಲಿ ನಾಲ್ಕು ಸಲ ಅಮಾಯಕ ಜನರನ್ನು ಗುರುತಿಸಲಾಗಿದೆ ಎಂದು ತಿಳಿಸುತ್ತದೆ.

ಇಂತಹಾ ತಂತ್ರಜ್ಞಾನಗಳು ಜನರು ಮತ್ತು ಮಾಹಿತಿಯನ್ನು ಕಂಪ್ಯೂಟರಿಗೆ ತುಂಬುವವರ ಪೂರ್ವಗ್ರಹಗಳನ್ನು ಪ್ರತಿಫಲಿಸುತ್ತವೆ ಎಂದೂ ಸಂಶೋಧಕರು ತೋರಿಸಿಕೊಟ್ಟಿದ್ದಾರೆ. ಯಾವುದೇ ಖಾಸಗಿತನ ರಕ್ಷಣಾ ಕಾಯಿದೆಯಾಗಲೀ, ಸ್ಪಷ್ಟ ನಿರ್ದೇಶನಗಳಾಗಲೀ ಇಲ್ಲದೇ ಇರುವಾಗ ಈ ತಂತ್ರಜ್ಞಾನ ತೀರಾ ಅಪಾಯಕಾರಿಯಗಬಲ್ಲದು.

ಪೊಲೀಸರ ಮೇಲೇ ಪೊಲೀಸ್?

ಒಂದು ಬೀಸು ಹೇಳಿಕೆಯಲ್ಲಿ ಅಮಿತ್ ಶಾ ದಿಲ್ಲಿ ಪೊಲೀಸರ ಮೇಲಿರುವ ಎಲ್ಲಾ ಆರೋಪಗಳನ್ನು ಬದಿಗೆ ಗುಡಿಸಿ, ಇಂತಹಾ ಆರೋಪಗಳು ಅವರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡುತ್ತವೆ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ, 36 ಗಂಟೆಗಳ ದೀರ್ಘಕಾಲದಲ್ಲಿ ಗಲಭೆಯನ್ನು ನಿಯಂತ್ರಿಸಿದಕ್ಕಾಗಿ ದಿಲ್ಲಿ ಪೊಲೀಸರನ್ನು ಅಭಿನಂದಿಸಿದ್ದಾರೆ. ಆ ಸಮಯದಲ್ಲಿ ಯಾಕೆ ಅವರು ಹೆಚ್ಚು ಸಕ್ರಿಯವಾಗಿ ಕೆಲಸಮಾಡಲಿಲ್ಲ ಎಂಬುದಕ್ಕೆ ತೀರಾ ದುರ್ಬಲ ಸಮರ್ಥನೆಯನ್ನೂ ನೀಡಿದ್ದಾರೆ. ಅದೆಂದರೆ, ತಾನು ತನ್ನ ಸಂಸದೀಯ ಕ್ಷೇತ್ರವಾದ ಅಹಮದಾಬಾದ್‌ಗೆ ಯುಎಸ್‌ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂದಿದ್ದುದರಿಂದ ತಾನು ಅಲ್ಲಿ ವ್ಯಸ್ತವಾಗಿದ್ದೆ; ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ಗೆ ಜವಾಬ್ದಾರಿ ತೆಗೆದುಕೊಳ್ಳುವಂತೆ ಹೇಳಿದ್ದೆ ಎಂದು ನುಣುಚಿಕೊಂಡಿರುವುದು.

ಆದರೆ, ವಿಡಿಯೋ ದಾಖಲೆಗಳೂ, ವರದಿಗಳೂ ಪೊಲೀಸರು ಮುಸ್ಲಿಮ್ ವಿರೋಧಿ ಗುಂಪುಗಳ ಪರ ಪಕ್ಷಪಾತದಿಂದ ವರ್ತಿಸಿರುವುದು ಮತ್ತು ನೇರವಾಗಿ ಕಲ್ಲೆಸತದಲ್ಲಿ ಭಾಗವಹಿಸಿರುವುದು ಸ್ಪಷ್ಟವಾಗಿದೆ.

ಒಂದು ಘಟನೆಯಲ್ಲಂತೂ ದಿಲ್ಲಿ ಪೊಲೀಸರೇ ಮುಸ್ಲಿಮ್ ಯುವಕನೊಬ್ಬನ ಸಾವಿಗೆ ಕಾರಣವಾಗಿರುವುದಕ್ಕೆ ಸ್ಪಷ್ಟ ದಾಖಲೆಗಳಿವೆ. ಆತನಿಗೆ ಮತ್ತು ಇನ್ನೊಬ್ಬ ಯುವಕನಿಗೆ ಪೊಲೀಸರೇ ಹೊಡೆದು ರಾಷ್ಟ್ರಗೀತೆ ಹಾಡುವಂತೆ ಒತ್ತಾಯಿಸುವ ಘಟನೆ ಹಲವಾರು ವಿಡಿಯೋಗಳಲ್ಲಿ ದಾಖಲಾಗಿದೆ.

ದಿಲ್ಲಿ ಪೊಲೀಸರು ಹೇಗೆ ಗಲಭೆಗಳ ನಂತರದಲ್ಲಿ ಹಲವಾರು ದೂರುಗಳನ್ನು ದಾಖಲಿಸಲು ನಿರಾಕರಿಸಿ ತನಿಖೆಯನ್ನೂ ನಡೆಸಲಿಲ್ಲ ಎಂಬ ಬಗ್ಗೆ ‘ಸ್ಕ್ರೋಲ್ ಡಾಟ್ ಇನ್’ ವರದಿ ಮಾಡಿದೆ. ದಿಲ್ಲಿ ಪೊಲೀಸರು ಪ್ರಶ್ನಾರ್ಹವಾಗಿ ವರ್ತಿಸುತ್ತಿರುವಾಗ, ಅದು ಹೇಗೆ ಈ ಅಮಿತ್ ಶಾ ಅವರಿಗೆ ಕ್ಲೀನ್ ಚಿಟ್ ಕೊಡಬಲ್ಲರು? ಗೃಹ ಸಚಿವ ಮತ್ತು ಸರಕಾರವೇ ದಿಲ್ಲಿ ಪೊಲೀಸರ ಧಣಿಗಳಾಗಿರುವಾಗ ಹೇಗೆ ಇದನ್ನು ಮಾಡಬಲ್ಲರು? ಆದುದರಿಂದ ಸರಕಾರವನ್ನು ಹೊರತುಪಡಿಸಿದ ಬೇರೊಂದು ಸ್ವತಂತ್ರ ಸಂಸ್ಥೆ ಇದರ ತನಿಖೆ ನಡೆಸುವುದು ನ್ಯಾಯವಲ್ಲವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಾಜಿ ರಾಷ್ಟ್ರಪತಿ ಜಗದೀಪ್ ಧನ್ಕರ್ ರಾಜೀನಾಮೆ ಹಿಂದೆ ಇಡಿ ಒತ್ತಡ : ತನ್ನ ಹೊಸ ಪುಸ್ತಕದಲ್ಲಿ ಸಂಜಯ್ ರಾವುತ್ ಆರೋಪ

ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಮೋದಿ ಸರ್ಕಾರದ ವಿರುದ್ಧ ಕೈಗೊಂಡ ಸ್ವತಂತ್ರ ರಾಜಕೀಯ ನಡೆಗಳಿಗೆ ಪ್ರತಿಯಾಗಿ, ಜಾರಿ ನಿರ್ದೇಶನಾಲಯದ (ಇಡಿ) ಒತ್ತಡಕ್ಕೆ ಮಣಿದು 2025ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು...

ಯುಎನ್‌ಐ ಮಾಧ್ಯಮ ಕಚೇರಿಗೆ ಬೀಗ : ಪೊಲೀಸರ ವರ್ತನೆಗೆ ಪತ್ರಿಕಾ ಸಂಘಗಳು, ವಿಪಕ್ಷ ನಾಯಕರಿಂದ ತೀವ್ರ ಖಂಡನೆ

ಶುಕ್ರವಾರ (ಮಾ.20) ರಾತ್ರಿ ದೆಹಲಿ ಪೊಲೀಸರು ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ (ಯುಎನ್‌ಐ) ಸುದ್ದಿ ಸಂಸ್ಥೆಯ ಕಚೇರಿಗೆ ಬೀಗ ಜಡಿದ ರೀತಿಗೆ ಪತ್ರಕರ್ತರ ಸಂಘಗಳು ಮತ್ತು ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ದೆಹಲಿಯ...

ಉಪಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್: ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬಕ್ಕೆ ಟಿಕೆಟ್

ಏಪ್ರಿಲ್ 9ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಮರ ತೀವ್ರ ವಿರೋಧದ ನಡುವೆಯೂ ಕೃಷಿ ಸಚಿವ ಎಸ್‌.ಎಸ್‌ ಮಲ್ಲಿಕಾರ್ಜುನ್ ಅವರ...

ಕೇರಳ ವಿಧಾನಸಭೆ ಚುನಾವಣೆ : ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಮೇಲಿದೆ 242 ಕ್ರಿಮಿನಲ್ ಕೇಸ್!

ಏಪ್ರಿಲ್ 9ರಂದು ನಡೆಯಲಿರುವ ಕೇರಳ ವಿಧಾನಸಭೆ ಚುನಾವಣೆಗೆ ಕಾಸರಗೋಡಿನ ಮಂಜೇಶ್ವರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆ. ಸುರೇಂದ್ರನ್ ಮೇಲೆ ಬರೋಬ್ಬರಿ 242 ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಈ ಮಾಹಿತಿ ಶನಿವಾರ...

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ : ಆರು ಮಂದಿ ಶಾಸಕರನ್ನು ಅಮಾನತುಗೊಳಿಸಿದ ಬಿಜೆಡಿ

ಮಾರ್ಚ್ 16ರಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರು ಮಂದಿ ಶಾಸಕರನ್ನು ಒಡಿಶಾದ ಬಿಜು ಜನತಾದಳ (ಬಿಜೆಡಿ) ಅಮಾನತುಗೊಳಿಸಿದೆ ಎಂದು ವರದಿಯಾಗಿದೆ. ಒಟ್ಟು 8 ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ....

ಆಸ್ಕರ್ ನಾಮನಿರ್ದೇಶಿತ ‘ದಿ ವಾಯ್ಸ್ ಆಫ್ ಹಿಂದ್ ರಜಬ್’ ಚಿತ್ರ ಪ್ರದರ್ಶನಕ್ಕೆ ಭಾರತದಲ್ಲಿ ನಿರ್ಬಂಧ!

ಗಾಝಾದ ಆರು ವರ್ಷದ ಬಾಲಕಿ ಹಿಂದ್ ರಜಬ್‌ಳನ್ನು ಇಸ್ರೇಲಿ ಸೈನಿಕರು ಸುಮಾರು 300 ಸುತ್ತು ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಿರುವ ಕಥೆಯನ್ನು ಹೇಳುವ, 'ದಿ ವಾಯ್ಸ್ ಆಫ್ ಹಿಂದ್ ರಜಬ್' ಚಲನಚಿತ್ರದ ಪ್ರದರ್ಶನಕ್ಕೆ...

ವೈದ್ಯೆ ವಂದನಾ ದಾಸ್ ಹತ್ಯೆ ಪ್ರಕರಣ; ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೇರಳ ನ್ಯಾಯಾಲಯ

ಕೊಲ್ಲಂ: ಆಸ್ಪತ್ರೆಯಲ್ಲಿ ನಡೆದ ಡಾ. ವಂದನಾ ದಾಸ್ ಅವರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪರಾಧಿ ಜಿ. ಸಂದೀಪ್ ಗೆ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಆರೋಪಿಗೆ ಮರಣದಂಡನೆ ವಿಧಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸುವುದಾಗಿ...

ಕಾಂಗ್ರೆಸ್, ರಾಹುಲ್ ಗಾಂಧಿ ಬಿಜೆಪಿಯ ಬಿ-ಟೀಮ್: ಕೇರಳ ಸಿಎಂ ಪಿಣರಾಯಿ ವಿಜಯನ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶನಿವಾರ ಕಾಂಗ್ರೆಸ್ ಮತ್ತು ಅದರ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಬಿಜೆಪಿಯ ಬಿ-ಟೀಮ್ ಎಂದು ಆರೋಪಿಸಿದ್ದಾರೆ.   ಕೇಂದ್ರೀಯ ಸಂಸ್ಥೆಗಳು ಕೇರಳ...

‘ಬಿಜೆಪಿ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಬಿಡುವುದಿಲ್ಲ, ಕೊನೆಯವರೆಗೂ ಹೋರಾಡುತ್ತೇವೆ’; ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮತದಾರರ ಪಟ್ಟಿಯ ಪರಿಷ್ಕರಣೆಯ ಮೂಲಕ ಜನರ "ಮತದಾನದ ಹಕ್ಕನ್ನು ಕಸಿದುಕೊಳ್ಳಲು" ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.  "ಮೋದಿ ಜಿ...

ಏಳು ವರ್ಷಗಳ ನಂತರ ಯುಎಪಿಎ ಪ್ರಕರಣದಲ್ಲಿ ಇಬ್ಬರು ಕಾಶ್ಮೀರಿ ಯುವಕರನ್ನು ಖುಲಾಸೆಗೊಳಿಸಿದ ದೆಹಲಿ ನ್ಯಾಯಾಲಯ

ಏಳು ವರ್ಷಗಳಿಗೂ ಹೆಚ್ಚು ಕಾಲದ ನಂತರ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಬಂಧಿಸಲ್ಪಟ್ಟ ಇಬ್ಬರು ಕಾಶ್ಮೀರಿ ಯುವಕರನ್ನು ಗುರುವಾರ ದೆಹಲಿ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಪ್ರಾಸಿಕ್ಯೂಷನ್ ತನ್ನ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾಗಿದೆ ಮತ್ತು ದೆಹಲಿ ಪೊಲೀಸರು...