Homeಮುಖಪುಟಜನರ ಸಂಕಷ್ಟ ಮರೆತು ಬಿಜೆಪಿಯ ಪಿಆರ್ ಕೆಲಸ ಮಾಡುತ್ತಿರುವ ಟೈಮ್ಸ್ ನೌ: ಸಂಪಾದಕರಿಗೆ ಚಾನೆಲ್ ವರದಿಗಾರರ...

ಜನರ ಸಂಕಷ್ಟ ಮರೆತು ಬಿಜೆಪಿಯ ಪಿಆರ್ ಕೆಲಸ ಮಾಡುತ್ತಿರುವ ಟೈಮ್ಸ್ ನೌ: ಸಂಪಾದಕರಿಗೆ ಚಾನೆಲ್ ವರದಿಗಾರರ ‘ದಿಟ್ಟ ಪತ್ರ’

ದೇಶಾದ್ಯಂತ ಸಾವಿರಾರು ಭಾರತೀಯರು ಸಾಯುತ್ತಿರುವಾಗ, ಸರ್ಕಾರವನ್ನು ಪ್ರಶ್ನಿಸುವ ಬದಲಾಗಿ ನಾವು ಬಿಜೆಪಿಯೇತರ ಸರ್ಕಾರಗಳು, ನಾಯಕರನ್ನು ಟಾರ್ಗೆಟ್ ಮಾಡುತ್ತ, ಬಿಜೆಪಿ ಐಟಿ ಸೆಲ್ ಕಾರ್ಯಸೂಚಿಯನ್ನು ಅನುಸರಿಸುತ್ತಿದ್ದೇವೆ.

- Advertisement -
- Advertisement -

ಕೋವಿಡ್ ಎರಡನೇ ಅಲೆಯಿಂದ ದೇಶ ತತ್ತರಿಸುತ್ತಿದ್ದರೂ ಟೈಮ್ಸ್ ನೌ ಮಾತ್ರ ಬಿಜೆಪಿಯ ಪಿಆರ್ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ಟೈಮ್ಸ್ ನೌ ಇಂಗ್ಲಿಷ್ ಚಾನೆಲ್‌ನ ಮಾಜಿ ಮತ್ತು ಹಾಲಿ ವರದಿಗಾರರು, ಉದ್ಯೋಗಿಗಳು ಸಂಪಾದಕ ಮಂಡಳಿಗೆ ಖಾರವಾದ ಪತ್ರವೊಂದನ್ನು ಬರೆದಿದ್ದಾರೆ. ನಮ್ಮ ಮುಖ್ಯವಾಹಿನಿ ಮಾಧ್ಯಮಗಳು ಆಳುವ ಪಕ್ಷ ಮತ್ತು ಮೋದಿಯವರ ಹಿತ ಕಾಪಾಡಲು ಜನರ ಸಮಸ್ಯೆಗಳನ್ನು ಹೇಗೇ ಮರೆಯುತ್ತಿವೆ ಎಂಬುದಕ್ಕೆ ಈ ಪತ್ರ ಸಾಕ್ಷಿಯಾಗಿದೆ. ಅದರ ಕನ್ನಡ ಅನುವಾದ ಇಲ್ಲಿದೆ.

ರಾಹುಲ್ ಶಿವಶಂಕರ್, ನವಿಕಾ ಕುಮಾರ್, ಪದ್ಮಜಾ ಜೋಶಿ ಇವರಿಗೆ,

ಗೌರವಾನ್ವಿತ ಸರ್ / ಮೇಡಂ

ಟೈಮ್ಸ್ ನೌನ ತೊಂದರೆಗೀಡಾದ ಮತ್ತು ಭ್ರಮನಿರಸನಗೊಂಡ ನೌಕರರು ಈ ಪತ್ರ ಬರೆಯುತ್ತಿದ್ದೇವೆ.

ಟೈಮ್ಸ್ ನೌ ನ ಹಿಂದಿನ ಮತ್ತು ಪ್ರಸ್ತುತ ಉದ್ಯೋಗಿಗಳಾದ ನಾವು ಪತ್ರಿಕೋದ್ಯಮದ ಮೂಲ ನೀತಿ ಮತ್ತು ಮೌಲ್ಯಗಳ ಬಗ್ಗೆ ಚಾನೆಲ್‌ನ ಸಂಪಾದಕರಿಗೆ ನೆನಪಿಸಲು ಮುಕ್ತ ಪತ್ರ ಬರೆಯಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಊಹಿಸಿರಲಿಲ್ಲ. ನಮ್ಮ ಸುತ್ತಲೂ ತೆರೆದುಕೊಳ್ಳುತ್ತಿರುವ ಎಲ್ಲವನ್ನೂ ನೋಡುತ್ತಾ ನಾವು ದಣಿದಿದ್ದೇವೆ, ಬೇಸರಗೊಂಡಿದ್ದೇವೆ, ಕೋಪಗೊಂಡಿದ್ದೇವೆ ಮತ್ತು ಭ್ರಮನಿರಸನಗೊಂಡಿದ್ದೇವೆ. ಈ ಹಿಂದೆ ನಾವೆಂದೂ ಈ ಪರಿ ಅಸಹಾಯಕರಾಗಿರಲಿಲ್ಲ. ಪತ್ರಕರ್ತರಾದ ನಮಗೆ ಒಂದು ವಿಷಯ ಕಲಿಸಲಾಯಿತು: ಯಾವಾಗಲೂ ಜನರ ಪರವಾಗಿರಿ. ಯಾವಾಗಲೂ ಮಾನವೀಯತೆಯ ಬದಿಯಲ್ಲಿರಿ. ತಪ್ಪುಗಳು ನಡೆದಾಗ ಅಧಿಕಾರದಲ್ಲಿರುವವರನ್ನು ಜವಾಬ್ದಾರರನ್ನಾಗಿ ಮಾಡಿ…
ಆದರೆ ಈ ದಿನಗಳಲ್ಲಿ “ಪತ್ರಿಕೋದ್ಯಮ”ದ ಹೆಸರಿನಲ್ಲಿ ಟೈಮ್ಸ್ ನೌ ಏನು ಮಾಡುತ್ತಿದೆ ಎಂದರೆ, ಪ್ರತಿ ಹಂತದಲ್ಲೂ ವಿಫಲವಾದ ಮತ್ತು ಈ ದೇಶದ ಜನರನ್ನು ನಿರಾಸೆಗೊಳಿಸಿದ ಸರ್ಕಾರಕ್ಕೆ ಪಿಆರ್ ಕೆಲಸ ಮಾಡುತ್ತಿದೆಯಷ್ಟೇ.

ಕೋವಿಡ್ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರದ ಅಸಮರ್ಥತೆಯಿಂದಾಗಿ ನಮ್ಮ ಕೆಲವು ಸಹೋದ್ಯೋಗಿಗಳು ಮತ್ತು ಅವರ ಕುಟುಂಬಗಳು ಬೆಲೆ ಪಾವತಿಸುತ್ತಿದ್ದಾರೆ.

ಪತ್ರಕರ್ತರಾಗಿ, ನಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಎಲ್ಲಾ ಮಾಹಿತಿಗಳಿವೆ. ಆಸ್ಪತ್ರೆಯಲ್ಲಿ ಹಾಸಿಗೆ ಪಡೆಯಲು ಜನರು ಆಂಬುಲೆನ್ಸ್‌ಗಳಲ್ಲಿ ಅಥವಾ ಬೀದಿಗಳಲ್ಲಿ ಕಾಯುತ್ತಿದ್ದಾರೆ. ಗಂಭಿರ ರೋಗಿಗಳು ಆಕ್ಸಿಜನ್‌ಗಾಗಿ ಪರದಾಡುತ್ತ ಉಸಿರಾಡಲೂ ಆಗದೇ ಒದ್ದಾಡುತ್ತಿದ್ದಾರೆ. ಸಾವಿರಾರು ಜನರು ಈ ಕಾರಣಕ್ಕೇ ಸಾಯುತ್ತಿದ್ದಾರೆ. ಜೀವ ಉಳಿಸುವ ಔಷಧಗಳು ಲಭ್ಯವಿಲ್ಲ ಮತ್ತು ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಕೆಲವು ಉದಾರವಾದಿ ಜನರು ಈ ಸೌಲಭ್ಯಗಳನ್ನು ಒದಗಿಸಲು ಸರ್ಕಾರಕ್ಕಿಂತ ಹೆಚ್ಚಿನದನ್ನು ಮಾಡುತ್ತಿದ್ದಾರೆಂದು ತೋರುತ್ತದೆ. ರಾಷ್ಟ್ರ ರಾಜಧಾನಿಯ ಪ್ರಮುಖ ಆಸ್ಪತ್ರೆಯೊಂದು ತನ್ನ ರೋಗಿಗಳನ್ನು ಜೀವಂತವಾಗಿಡಲು ಸರ್ಕಾರದಿಂದ ಆಮ್ಲಜನಕ ಸಿಲಿಂಡರ್‌ಗಳನ್ನು ಪಡೆಯಲು ಹೈಕೋರ್ಟ್‌ ಅನ್ನು ಸಂಪರ್ಕಿಸಬೇಕಾಯಿತು. ಆಸ್ಪತ್ರೆಗಳು ಆಮ್ಲಜನಕದ ಕೊರತೆಯನ್ನು ಕುರಿತು ಹೈಲೈಟ್ ಮಾಡಲು ಅಧಿಕಾರಿಗಳನ್ನು ಟ್ಯಾಗ್ ಮಾಡಬೇಕಾಗಿದೆ. ಆಮ್ಲಜನಕವನ್ನು “ಇದು ತಮ್ಮದು” ಎಂದು ಹೇಳಿಕೊಂಡು ರಾಜ್ಯಗಳು ಪರಸ್ಪರ ಜಗಳವಾಡುತ್ತಿವೆ. ಇದು ನಾವು ಇಂದು ಕಾಣುತ್ತಿರುವ ವಾಸ್ತವ.

ಮೋದಿಯವರ ಸಂದರ್ಶನ

ಇಡೀ ವ್ಯವಸ್ಥೆ ಕುಸಿದಿದೆ. ಅದರ ಬಗ್ಗೆ ಯಾವುದೇ ಅನುಮಾನ ಬೇಡ. ಇದು ವೈದ್ಯಕೀಯ ತುರ್ತುಸ್ಥಿತಿಗಿಂತ ಹೆಚ್ಚಾಗಿ, ಇದು ನಮ್ಮ ಕಣ್ಣಮುಂದಿನ ಮಾನವೀಯ ಬಿಕ್ಕಟ್ಟು. ಟೈಮ್ಸ್ ನೌ ನಂತಹ ಪ್ರಬಲ ಬ್ರಾಂಡ್‌ನ ಪತ್ರಕರ್ತರಾಗಿ ನಾವು ಈ ದೇಶದ ಜನರಿಗೆ ಏನು ಮಾಡುತ್ತಿದ್ದೇವೆ?
ನಾವು ಇನ್ನೂ ಪ್ರತಿಪಕ್ಷಗಳನ್ನು ದೂಷಿಸುತ್ತೇವೆ. ನಾವು ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯುತ್ತೇವೆ. ನಾವು ಬಹಿರಂಗವಾಗಿ ಹಿಂದೂ-ಮುಸ್ಲಿಂ ಕೋಮು ಕಥೆಗಳನ್ನು ಚರ್ಚಿಸುತ್ತೇವೆ. ಸರ್ಕಾರದ ಪರವಾಗಿರದ ಪ್ರತಿಯೊಂದು ಕಥೆಯನ್ನು ನಾವು ಪ್ರಸಾರ ಮಾಡುವುದಿಲ್ಲ ಅಥವಾ ತಿರುಚುತ್ತೇವೆ. ಅಸಮರ್ಥ ಕೇಂದ್ರ ಸರ್ಕಾರವನ್ನು ಪ್ರಶ್ನಿಸಬೇಕಾದಾಗ ನಾವು ಸಂಪೂರ್ಣ ಮೌನವನ್ನು ಕಾಪಾಡಿಕೊಳ್ಳುತ್ತೇವೆ. ನರೇಂದ್ರ ಮೋದಿಯವರ ಹೆಸರನ್ನು ತೆಗೆದುಕೊಳ್ಳಲು ಮತ್ತು ನಾವು ಈಗಿರುವ ಅವ್ಯವಸ್ಥೆಗಾಗಿ ಅವರನ್ನು ಟೀಕಿಸಲು ನಮಗೆ ಧೈರ್ಯವಿಲ್ಲ. ಚುನಾವಣೆಯಲ್ಲಿ ದೊಡ್ಡ ರ‍್ಯಾಲಿಗಳನ್ನು ಆಯೋಜಿಸುವ ಮೂಲಕ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವ ಇತರ ವಿರೋಧ ಪಕ್ಷಗಳ ದೃಶ್ಯಗಳನ್ನು ತೋರಿಸುವ ನಾವು ಅಮಿತ್ ಷಾ ಅವರ ಚಿತ್ರವನ್ನು ಕೂಡ ಸೇರಿಸಲು ಸಾಧ್ಯವಿಲ್ಲ. ನಾವು ಬೆನ್ನುಮೂಳೆ ಇಲ್ಲದವರಾಗಿ ಬಿಟ್ಟಿದ್ದೇವೆಯೇ?

ಯುಪಿಎ ಆಡಳಿತದ ಅವಧಿಯಲ್ಲಿ ನೀವೆಲ್ಲರೂ “ನೀತಿ ಅಸ್ವಸ್ಥತೆ” ಎಂದು ಹೇಗೆ ಅರಚುತ್ತಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ. ಈಗ ಇಡೀ ವ್ಯವಸ್ಥೆಯು ಅಸ್ತವ್ಯಸ್ತವಾಗಿದ್ದರೂ, ಕೇಂದ್ರ ಸರ್ಕಾರವನ್ನು ಅದರ ಅಸಮರ್ಥತೆಗಾಗಿ ನಾವು ಒಮ್ಮೆಯಾದರೂ ಟೀಕಿಸಲಿಲ್ಲ!

ಕೋವಿಡ್ ಸಾಂಕ್ರಾಮಿಕ ರೋಗದ ದುರುಪಯೋಗಕ್ಕೆ ಟೈಮ್ಸ್ ನೌ ಸಂಪಾದಕರು ಬಿಜೆಪಿ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಸಿದ್ಧರಿಲ್ಲ ಎಂಬುದು ಬಹಳ ಸ್ಪಷ್ಟವಾಗಿದೆ. ದೇಶಾದ್ಯಂತ ಸಾವಿರಾರು ಭಾರತೀಯರು ಸಾಯುತ್ತಿರುವಾಗ, ಸರ್ಕಾರಕ್ಕೆ ಕಠಿಣ ಪ್ರಶ್ನೆಗಳನ್ನು ಕೇಳುವುದು ಮತ್ತು ಬೀದಿಯಲ್ಲಿನ ವಾಸ್ತವತೆಯನ್ನು ತೋರಿಸುವುದು ನಮ್ಮಿಂದ ಕನಿಷ್ಠ ನಿರೀಕ್ಷೆಯಾಗಿದೆ. ಬದಲಾಗಿ ನಾವು ಬಿಜೆಪಿಯೇತರ ಸರ್ಕಾರಗಳು ಮತ್ತು ನಾಯಕರನ್ನು ಟಾರ್ಗೆಟ್ ಮಾಡುತ್ತ ಬಿಜೆಪಿ ಐಟಿ ಸೆಲ್ ಕಾರ್ಯಸೂಚಿಯನ್ನು ಅನುಸರಿಸುತ್ತಿದ್ದೇವೆ.

ಪ್ರಧಾನಿ ಮೋದಿಯೊಂದಿಗೆ ನವಿಕಾ ಕುಮಾರ್

ಜನರ ಕಷ್ಟಗಳನ್ನು ಸರ್ಕಾರದ ಗಮನಕ್ಕೆ ತರಬಹುದಾದ ಅಮೂಲ್ಯವಾದ ಸಮಯವನ್ನು ಹೋರಾಟನಿರತ ರೈತರನ್ನು ದೂಷಿಸಲು ಬಳಸಲಾಗುತ್ತಿದೆ, ಇದು ಬಿಜೆಪಿ ಕಾರ್ಯಸೂಚಿಗೆ ಸ್ಪಷ್ಟವಾಗಿ ಹೊಂದಿಕೆಯಾಗಿದೆ. ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುವುದಕ್ಕೆ ಇದು ಒಂದು ಉದಾಹರಣೆಯಷ್ಟೇ.

ಪ್ರಧಾನಿ ಮೋದಿಯವರ ಕಠೋರ ವರ್ತನೆ ಮತ್ತು ಅಧಿಕಾರ ದುರ್ಬಳಕೆಗಾಗಿ ಪ್ರಶ್ನೆಗಳನ್ನು ಕೇಳುವ ಬದಲು, ಸಂಪಾದಕರು ಅವರ ಇಮೇಜ್ ಅನ್ನು ಉಳಿಸಲು ಮತ್ತು ಅವರಿಗೆ ಕೆಟ್ಟ ಹೆಸರು ತಗುಲದಂತೆ ರಕ್ಷಣೆ ಮಾಡುತ್ತಾರೆ.

ಬಿಜೆಪಿ ಐಟಿ ಸೆಲ್‌ನ ಸದಸ್ಯರು ಕಳುಹಿಸಿದ ಸಂದೇಶಗಳನ್ನು ಚಾನೆಲ್ ಕಟ್ & ಪೇಸ್ಟ್ ಮಾಡಿ ಅದನ್ನೇ ಸುದ್ದಿ ಮಾಡುವುದು ಮತ್ತು ಅದು ಪ್ರೈಮ್ ಟೈಮ್ ಚರ್ಚೆ ಕೂಡ ಆಗುತ್ತದೆ.
ಟರ್ನ್ ಕೋಟ್, ಟ್ರೊಲ್ ಮತ್ತು ಸರ್ಕಾರಿ ಲಾಬಿವಾದಿ ಶೆಹಜಾದ್ ಪೂನವಾಲಾ ಅವರು ಪೋಸ್ಟ್ ಮಾಡಿದ ಸಂದೇಶಗಳು ಉನ್ನತ ಸ್ಟೋರಿಯಾಗುತ್ತವೆ ಮತ್ತು ಅವರು ಚಾನೆಲ್‌ನ ಸ್ವಂತ ವರದಿಗಾರರು ಮತ್ತು ಸಂಪಾದಕರಿಗಿಂತ ಹೆಚ್ಚಿನ ಸಮಯವನ್ನು ಪಡೆಯುತ್ತಾರೆ.
ನಾವು ನಮ್ಮನ್ನು ಯಾವ ಮಟ್ಟಕ್ಕೆ ಇಳಿಸಿಕೊಂಡಿದ್ದೇವೆ? ಧ್ವನಿರಹಿತ ಜನತೆಗಾಗಿ ಸತತವಾಗಿ ಮಾತನಾಡಿದ ಚಾನೆಲ್, ಈಗ ಸರ್ಕಾರದ ಪೂರ್ಣ ಪ್ರಚಾರ ಯಂತ್ರವಾಗಿ ಮಾರ್ಪಟ್ಟಿದೆ. ರಾಷ್ಟ್ರದಲ್ಲಿ ನಂಬರ್ 1 ಚಾನೆಲ್ ಎಂದು ಹೇಳಿಕೊಳ್ಳುವ ಟೈಮ್ಸ್ ನೌ ತನ್ನದೇ ಆದ ನಾಗರಿಕರ ಸಂಕಟಗಳನ್ನು ಮರೆತುಬಿಡುತ್ತದೆ.

ನೀವು ಯಾವಾಗ ಜನರಿಗಾಗಿ ಮಾತನಾಡುತ್ತೀರಿ? ನಿಮ್ಮ ಸಂಪೂರ್ಣ ಸಂಪಾದಕೀಯ ತಂಡವನ್ನು ಬಿಜೆಪಿಯ ಕಾರ್ಯಸೂಚಿಯಲ್ಲಿ ಕೆಲಸ ಮಾಡಲು ಒತ್ತಾಯಿಸುವುದನ್ನು ನೀವು ಯಾವಾಗ ನಿಲ್ಲಿಸುತ್ತೀರಿ? ಅದಕ್ಷತೆಗೆ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವ ಮೊದಲು ನೀವು ಎಷ್ಟು ಮೃತ ದೇಹಗಳನ್ನು ನೋಡಲು ಬಯಸುತ್ತೀರಿ? ಅಸಹಾಯಕ ಜನರು ಹೇಗೆ ಬಳಲುತ್ತಿದ್ದಾರೆ ಎಂಬುದಕ್ಕೆ ನೀವು ಕುರುಡರಾಗಿದ್ದೀರಿ. ಹಾಗೆ ಮಾಡಿದರೆ ನಿಮ್ಮ ಸವಲತ್ತುಗಳಿಗೆ ಧಕ್ಕೆ ಬರುತ್ತದೆಯೇ? ನಿಮ್ಮ ಕೈಗಳಿಗೆ ಇನ್ನೂ ಎಷ್ಟು ರಕ್ತ ಅಂಟಬೇಕು?

ಗೌರವಾನ್ವಿತ ಸಂಪಾದಕರೇ, ನಿಮ್ಮ ಆಯ್ಕೆ ಸರಳವಾಗಿದೆ: ಮಾನವೀಯತೆಯ ಬದಿಯಲ್ಲಿರಿ ಅಥವಾ ಬಿಜೆಪಿಯ ಪರವಾಗಿರಿ. ನೀವು ಎರಡನೆಯದನ್ನು ಆರಿಸಿದರೆ, ನೀವು ಈ ವೃತ್ತಿಯನ್ನು ವಿಫಲಗೊಳಿಸುತ್ತಿದ್ದೀರಿ ಮಾತ್ರವಲ್ಲ, ಈ ದೇಶ ಮತ್ತು ಅದರ ಜನರನ್ನೂ ಸಹ.

ಇತರ ರಾಷ್ಟ್ರೀಯ ಚಾನೆಲ್‌ಗಳಲ್ಲಿನ ಸಹೋದ್ಯೋಗಿಗಳೇ ಎದ್ದುನಿಂತು ಮಾತನಾಡಿ. ನಾವು ಈಗ ಅದನ್ನು ಮಾಡದಿದ್ದರೆ, ಇತಿಹಾಸವು ಎಂದಿಗೂ ನಮ್ಮನ್ನು ಕ್ಷಮಿಸುವುದಿಲ್ಲ.

ಧನ್ಯವಾದಗಳು

– ಟೈಮ್ಸ್ ನೌನ ಮಾಜಿ ಮತ್ತು ಪ್ರಸ್ತುತ ಉದ್ಯೋಗಿಗಳು


ಇದನ್ನೂ ಓದಿ: ಸಾಂಕ್ರಾಮಿಕ ದುರಂತದ ಸಮಯದಲ್ಲಿ ಐಪಿಎಲ್ ಕವರೇಜ್ ಮಾಡುವುದಿಲ್ಲವೆಂದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...