Homeಅಂಕಣಗಳುಚೀನಾ ದೇಶದ ಎರಡು ಸಣ್‌ಸಣ್ ಕತೆ

ಚೀನಾ ದೇಶದ ಎರಡು ಸಣ್‌ಸಣ್ ಕತೆ

- Advertisement -
- Advertisement -

ಸ್ವಾತಂತ್ರ್ಯ

ಒಂದು ದಿನ ಚುವಾಂಗ್ ತ್ಸು ಮೀನು ಹಿಡಿಯುತ್ತಾ ಇರುವ ಸಮಯದಲ್ಲಿ, ಚು ರಾಜ್ಯದ ರಾಜ ಆತನಿಗೆ ತನ್ನ
ಅಧಿಕಾರಿಗಳ ಮೂಲಕ ಹೇಳಿಕಳಿಸಿದನು. ಆ ಪ್ರಕಾರ ಸರ್ಕಾರದ ಆಡಳಿತದಲ್ಲಿ ಚುವಾಂಗ್ ತ್ಸುವಿನ ಸಲಹೆ ಮತ್ತು ಸಹಾಯವನ್ನು ರಾಜ ನಿರೀಕ್ಷಿಸುತ್ತಿರುವುದಾಗಿ ತಿಳಿಸಲಾಯಿತು. ಇದರಿಂದ ರಾಜ ಸಂತುಷ್ಟನಾಗಲಿದ್ದಾನೆ ಎಂಬ ವಿಷಯವನ್ನೂ ಹೇಳಲಾಯಿತು.

ಆದರೆ ಹಿಂತಿರುಗಿ ನೋಡದೆ ಮೀನು ಹಿಡಿಯುವುದನ್ನು ಮುಂದುವರೆಸಿದ ತ್ಸು ಹೀಗೆ ಪ್ರತಿಕ್ರಿಯಿಸಿದನು: “ಚು ರಾಜ್ಯದಲ್ಲಿ ಒಂದು ಆಮೆಯಿದೆ ಎಂದು ಕೇಳಲ್ಪಟ್ಟಿದ್ದೇನೆ. ಅದು ಸತ್ತು ಮೂರು ಸಾವಿರ ವರ್ಷಗಳಾಗಿದ್ದರೂ ರಾಜ ತನ್ನ ಪೂರ್ವಿಕರ ಪವಿತ್ರ ದೇವಸ್ಥಾನದ ಗರ್ಭಗುಡಿಯಲ್ಲಿ ಅದರ ಕಳೇಬರವನ್ನು ಸಂರಕ್ಷಿಸಿ ಇಟ್ಟಿದ್ದಾನೆಂದು” ಕೂಡ. “ಈಗ ನೀವೇ ಹೇಳಿ, ಆ ಆಮೆ ಸತ್ತು ತನ್ನ ಕಳೇಬರವನ್ನು ಗೌರವಿಸಬೇಕು ಅಂತ ನಿರೀಕ್ಷಿಸುತ್ತದೆಯೇ ಅಥವಾ ಕೆಸರಿನಲ್ಲಿ ಬಾಲವಲ್ಲಾಡಿಸುತ್ತಾ ಬದುಕಿರಬೇಕೆಂದೆಣಿಸುತ್ತಾ?” ಆಗ ಆ ಆಧಿಕಾರಿಗಳು ಒಮ್ಮೆಗೇ “ಅದು ಬದುಕಿ ಕೆಸರಿನಲ್ಲಿ ಬಾಲವಲ್ಲಾಡಿಸುವುದನ್ನು ಇಷ್ಟ ಪಡುತ್ತದೆ” ಎಂದು ಉತ್ತರಿಸಿದರು.

ತತ್‌ಕ್ಷಣವೇ ಚುವಾಂಗ್ ತ್ಸು ಕೂಗಿ ಹೇಳಿದ “ಸರಿಯಾಗಿ ಹೇಳಿದಿರಿ! ನಾನು ಕೂಡ ಕೆಸರಿನಲ್ಲಿ ಬಾಲ ಅಲ್ಲಾಡಿಸಿಕೊಂಡಿರಲು ಇಷ್ಟ ಪಡುತ್ತೇನೆ”.

ಹುಲಿಯಿದ್ದರೂ ಕಾಡು ತೊರೆಯಲಾರೆ

ಥೈ ಶಿಖರದ ಬಳಿಯಲ್ಲಿ ಹಾದು ಹೋಗಬೇಕಾದರೆ, ಕಂಫ್ಯುಶಿಯಸ್, ಒಂದು ಸಮಾಧಿ ಬಳಿ ಜೋರಾಗಿ ಅಳುತ್ತಿದ್ದ ಹೆಂಗಸನ್ನು ಕಂಡು, ಅವಳ ಬಳಿಗೆ ನಡೆದು, ಜೊತೆಗಿದ್ದ ತನ್ನ ಶಿಷ್ಯನಿಗೆ ಕಾರಣ ವಿಚಾರಿಸುವಂತೆ ಹೇಳಿದ. “ಯಾಕವ್ವ ಅಳುತ್ತಿದ್ದೀಯ, ದುಃಖದ ಮೇಲೆ ದುಃಖ ಅನುಭವಿಸುತ್ತಿರುವ ತಾಯಿಯೇ” ಎಂದು ಶಿಷ್ಯ ತ್ಸೆ-ಲು ಕೇಳಿದ್ದಕ್ಕೆ, ಆ ಮಹಿಳೆ “ಹೌದಪ್ಪ, ಹಿಂದೊಮ್ಮೆ ನನ್ನ ಗಂಡನ ಅಪ್ಪನನ್ನು ಹುಲಿಯೊಂದು ಇಲ್ಲೇ ಕೊಂದು ಹಾಕಿತ್ತು, ನನ್ನ ಗಂಡನನ್ನೂ ಕೊಂದಿತು, ಈಗ ನನ್ನ ಮಗನನ್ನು ಕೊಂದು ಹಾಕಿದೆ” ಎಂದು ದುಃಖಿಸತೊಡಗಿದಳು. ಆಗ ಮಾಸ್ಟರ್ “ನೀನು ಈ ಜಾಗವನ್ನೇಕೆ ತೊರೆದು ಬೇರೆಡೆಗೆ ಹೋಗುತ್ತಿಲ್ಲ ತಾಯಿ” ಎಂದು ಕೇಳಿದ್ದಕ್ಕೆ, ಆಕೆ “ಇಲ್ಲಿ ನಮ್ಮ ಮೇಲೆ ದಬ್ಬಾಳಿಕೆ ನಡೆಸಿ ತುಳಿಯುವ ಸರ್ಕಾರ ಇಲ್ಲ ಎಂದು ಉತ್ತರಿಸಿದಳಂತೆ.

ಅದಕ್ಕೆ ಕಂಫ್ಯುಶಿಯಸ್ ಶಿಷ್ಯಂದಿರಿಗೆ “ನೋಡಿ ಮಕ್ಕಳೇ ಯಾವ ಸರ್ಕಾರವು ಹುಲಿಗಳಿಗಿಂತ ಕ್ರೂರವಾಗಬಾರದು” ಎಂದು ಹಿತವಚನ ನುಡಿದು ಮುಂದೆ ಸಾಗಿದರಂತೆ.


ಇದನ್ನೂ ಓದಿ: ಹೋರಾಟದ ಬದುಕಿನ ಎರಡು ಆತ್ಮಕಥೆಗಳು ಒಂದು ಆತ್ಮಕಥಾನಕ ಕಾದಂಬರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...