Homeಕರ್ನಾಟಕತುಮಕೂರಿನಲ್ಲಿ ಗಬ್ಬೆದ ರಸ್ತೆಗಳಿಗೆ ಟಾರು.. : ತಿಂಗಳಿಗೊಮ್ಮೆ ಬರ್ಲಿ ಮೋದಿ ಎನ್ನುತ್ತಿದ್ದಾರೆ ಜನ...

ತುಮಕೂರಿನಲ್ಲಿ ಗಬ್ಬೆದ ರಸ್ತೆಗಳಿಗೆ ಟಾರು.. : ತಿಂಗಳಿಗೊಮ್ಮೆ ಬರ್ಲಿ ಮೋದಿ ಎನ್ನುತ್ತಿದ್ದಾರೆ ಜನ…

- Advertisement -
- Advertisement -

ತುಮಕೂರೆಂಬೋ ದೂಳುನಗರವನ್ನು ಸ್ಮಾರ್ಟ್ ಸಿಟಿ ಎಂದು ಘೋಷಣೆ ಮಾಡಿ ಮೂರು ತಿಂಗಳು ಕಳೆದರೆ ನಾಲ್ಕು ವರ್ಷ ಪೂರ್ಣಗೊಳ್ಳಲಿದೆ. 2016 ಮಾರ್ಚ್ 11 ರಂದು ಸ್ಮಾರ್ಟ್ ಸಿಟಿಯಾಗಿ ಘೋಷಣೆ ಮಾಡಿದ್ದರೂ ನಗರ ಅಭಿವೃದ್ಧಿಯನ್ನೇ ಕಂಡಿಲ್ಲ. ಅಮಾನಿಕೆರೆಯಂಗಳವನ್ನು ಬಿಟ್ಟರೆ ಇನ್ನೆಲ್ಲಿ ನೋಡಿದರೂ ದೂಳು, ಗುಂಡಿಗಳು. ಜನರ ರಸ್ತೆಗಿಳಿದರೆ ಸಾಕು ನಗರಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧಿಕಾರಿಗಳಿಗೆ ಪಕ್ಷಾತೀತವಾಗಿ ಬೈಗುಳದ ಮಳೆಯನ್ನೇ ಸುರಿಸುತ್ತಾರೆ. ಆದರೆ ಕೆಲವೊಮ್ಮೆ ಭಕ್ತರು ಹೇಳಿಕೊಳ್ಳುವಂತಿಲ್ಲ. ಬಿಡುವಂತಿಲ್ಲ. ಆದರೂ ತುಮಕೂರಿನ ಜನ ಮಾತ್ರ ಸ್ಮಾರ್ಟ್ ಆಗದೇ ಇರುವ ಸಿಟಿಯ ಬಗ್ಗೆ ಆಕ್ರೋಶವನ್ನು ಹೊರಹಾಕುತ್ತಾರೆ. ಸ್ಮಾರ್ಟ್ ಸಿಟಿಯ ಕುರಿತು ಬರೆಯಲು ತುಮಕೂರು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುತ್ತಿರುವುದೇ ಕಾರಣ.

ಜನವರಿ 2ರಂದು ತುಮಕೂರು ನಗರದ ಬಿ.ಎಚ್.ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನಕ್ಕೆ ಮೋದಿ ಬರುತ್ತಿದ್ದಾರೆ. ಈಗ ಬಂದರೆ ಇದು ಮೂರನೇ ಭೇಟಿ. ಪ್ರಧಾನಿ ತುಮಕೂರು ಭೇಟಿಗೆ ಕಾರಣಗಳೇನು ಎಂಬ ಬಗ್ಗೆ ಮೇಲ್ನೋಟಕ್ಕೆ ಹೇಳುತ್ತಿರುವ ಅಂಶಗಳು ಪ್ರಮುಖ ಕಾರಣಗಳೇ ಅಲ್ಲ. ಮುಖ್ಯಮಂತ್ರಿಗಳಿಗೆ ಕೃಷಿ ಪ್ರಶಸ್ತಿ ಪ್ರದಾನ ಮಾಡುವುದು, ಕೃಷಿ ಸನ್ಮಾನ್ ನಿಧಿ ಯೋಜನೆಯ ನಾಲ್ಕನೇ ಕಂತು ಹಣವನ್ನು ಬಿಡುಗಡೆ ಮಾಡುವುದು, 42 ಕೃಷಿಕರಿಗೆ ಪ್ರಶಸ್ತಿ ನೀಡುವುದು ಪ್ರಮುಖ ಆದ್ಯತೆಗಳಲ್ಲ ಎಂಬುದು ಯಾರು ಬೇಕಾದರೂ ಊಹಿಸಬಹುದು. ಆದರೆ  ಪ್ರಧಾನಿ ಕಾರ್ಯಕ್ರಮಕ್ಕೆ ಬರುತ್ತಿರುವ ಹಿಂದಿನ ಉದ್ದೇಶದ ಬಗ್ಗೆ  ಆಯೋಜಕರಾಗಲೀ, ಬಿಜೆಪಿಯ ಮುಖಂಡರಾಗಲೀ ಸ್ಪಷ್ಟ ಕಾರಣ ನೀಡುತ್ತಿಲ್ಲ.

ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮಿಗಳು ಲಿಂಗೈಕ್ಯರಾದಾಗಲೂ ಬರಲಿಲ್ಲ. ಹೆಚ್ಚು ಜನರು ಸೇರುವ ಮತ್ತು ಭದ್ರತೆಯ ಹಿನ್ನೆಲೆಯಲ್ಲಿ ಪ್ರಧಾನಿ ಭೇಟಿ ಮಾಡಲಿಲ್ಲ ಎಂಬ ಸಬೂಬು ಬೇರೆ. ಈಗ ಆ ವಿಷಯ ಮುನ್ನೆಲೆಗೆ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಇದೀಗ ಸಿದ್ದಗಂಗಾ ಮಠದಲ್ಲಿ ಒಂದೂವರೆ ಗಂಟೆ ಕಾಲ ಕಳೆಯಲಿದ್ದಾರೆ. ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ಭೇಟಿ ನೀಡುವುದು, ಧ್ಯಾನದಲ್ಲಿ ತೊಡಗುವ ಕಾರ್ಯಕ್ರಮಗಳು ಪೂರ್ವನಿಗದಿಯಾಗಿವೆ. ಅಮರನಾಥ ಯಾತ್ರೆಯ ಸಂದರ್ಭದಲ್ಲಿ ಧ್ಯಾನ ಮಾಡಿ ದೇಶದ ಗಮನ ಸೆಳೆದ ಪ್ರಧಾನಿ ಇದೀಗ ಸಿದ್ದಗಂಗಾ ಮಠದ ಧ್ಯಾನಮಂದಿರದಲ್ಲೂ ಧ್ಯಾನ ಮಾಡಿ ದೇಶದಲ್ಲಿ ಸುದ್ದಿಯಾಗಲಿದ್ದಾರೆ. ಧ್ಯಾನದ ನಂತರವೂ ಕಾರ್ಯಕ್ರಮಕ್ಕೆ ಹಾಜರಾಗುವುದು. ಹೀಗಾಗಿ ಧ್ಯಾನಮುಖಿ ನರೇಂದ್ರ ಮೋದಿ ಮತ್ತೆ ರಾಷ್ಟ್ರೀಯ ವಾಹಿನಿಗಳಲ್ಲಿ ಸುದ್ದಿಯಾಗಲಿದ್ದಾರೆ.

ಮಠದಲ್ಲೇ ಹೆಚ್ಚು ಸಮಯ ಕಳೆಯುವ ಮೂಲಕ ರಾಜ್ಯದ ಬಹುದೊಡ್ಡ ಲಿಂಗಾಯತ ಸಮುದಾಯದ ಪ್ರೀತಿ ಗಿಟ್ಟಿಸಿಕೊಳ್ಳುವ ಉದ್ದೇಶವೂ ಇದರಿಂದೆ ಇರಬಹುದು. ಹಿರಿಯ ಶ್ರೀಗಳು ಲಿಂಗೈಕ್ಯರಾದ ಸಂದರ್ಭದಲ್ಲಿ ಮಠದ ಭಕ್ತರು ಪ್ರಧಾನಿ ಭೇಟಿ ನೀಡಲಿಲ್ಲವೆಂದು ಮುನಿಸಿಕೊಂಡಿದ್ದರು. ಆ ಮುನಿಸನ್ನು ಹೋಗಲಾಡಿಸುವುದು ಮಠದಲ್ಲಿ ಹೆಚ್ಚು ಕಾಲ ಕಳೆಯುವುದರ ಹಿಂದಿನ ಉದ್ದೇಶವೆಂದು ವಿಶ್ಲೇಷಿಸಲಾಗುತ್ತಿದೆ. ಸಿದ್ದಗಂಗಾ ಮಠದ ಮೂಲಕ ಪ್ರಧಾನಿ ಮೋದಿ ಏನು ಸಂದೇಶಗಳನ್ನು ರವಾನಿಸಬಹುದು ಎಂಬ ಕುತೂಹಲ ಜನರಲ್ಲಿದೆ. ಡಾ. ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ಕೊಡಬೇಕು ಎಂಬ ಒತ್ತಾಯ ಹಲವು ವರ್ಷಗಳದ್ದು. ಆದರೆ ಕೇಂದ್ರದ ಯಾವ ಸರ್ಕಾರವೂ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಉತ್ಸಾಹ ತೋರಿಸಲಿಲ್ಲ. ನರೇಂದ್ರ ಮೋದಿ ಎರಡು ಬಾರಿ ಪ್ರಧಾನಿಯಾದರೂ ಇದರ ಬಗ್ಗೆ ಕಿವಿಗೆ ಹಾಕಿಕೊಳ್ಳಲಿಲ್ಲ. ಸಿಟ್ಟಿಗೆದ್ದ ಜನರ ಮನಸ್ಸನ್ನು ಸೆಳೆಯುವುದು ಭೇಟಿಯ ಹಿಂದಿನ ಉದ್ದೇಶವೇ? ಇರಬಹುದು.

ಆದರೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮಿಸಿದರೆ ತುಮಕೂರು ಚಿತ್ರದುರ್ಗ ರಾಜಕೀಯವಾಗಿ (ಸಂಸತ್ ಚುನಾವಣೆಯಲ್ಲಿ) ಬಿಜೆಪಿ ತೆಕ್ಕೆಗೆ ಹೋಗಿರುವುದು ಪ್ರಮುಖ ಕಾರಣ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿದಿರುವುದು ಮಗದೊಂದು ಕಾರಣ. ಕೆಲವೇ ದಿನಗಳ ಹಿಂದೆ ಆರ್‌ಎಸ್ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ತುಮಕೂರು ಜಿಲ್ಲೆಯ ಪಾವಗಡಕ್ಕೆ ಭೇಟಿ ನೀಡಿರುವುದು ಕೂಡ ಗಮನಾರ್ಹ ಸಂಗತಿ. ಪ್ರಧಾನಿ ಸುಮ್ಮಸುಮ್ಮನೆ ತುಮಕೂರಿಗೆ ಭೇಟಿ ನೀಡುತ್ತಿಲ್ಲ. ರಾಜಕೀಯ ಲಾಭನಷ್ಟಗಳ ಲೆಕ್ಕಾಚಾರವನ್ನು ಹಾಕಿಯೇ ಭೇಟಿ ನೀಡುತ್ತಿರುವುದು ಎನ್ನಲಾಗುತ್ತಿದೆ.

ಮೇಲೆಯೇ ಹೇಳಿದಂತೆ ತುಮಕೂರು ಸ್ಮಾರ್ಟ್ ಸಿಟಿ ಆಗಿದ್ದರೂ ಇದುವರೆಗೂ ಸ್ಮಾರ್ಟ್ ಅಂತೂ ಆಗಿಲ್ಲ. ರಸ್ತೆಗಳು ಗುಂಡಿ ಗುದ್ರಗಳಿಂದ ಕೂಡಿವೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದಾರೆಂಬ ಕಾರಣಕ್ಕೆ ತೇಪೆ ಹಚ್ಚುವ ಕೆಲಸ ಬಿರುಸಿನಿಂದ ನಡೆಯುತ್ತಿದೆ. ಪ್ರಮುಖ ರಸ್ತೆಗಳಲ್ಲಿ ಸೇರಿಕೊಂಡಿದ್ದ ದೂಳನ್ನು ಹೊಡೆದು ಟಾರು ಹಾಕುವ ಕಾರ್ಯ ಭರದಿಂದ ನಡೆಯುತ್ತಿದೆ. ರಸ್ತೆಗಳಿಗೆ ನೀರು ಸಿಂಪಡಿಸಲಾಗುತ್ತಿದೆ. ನಗರದಲ್ಲಿ ಹಾದುಹೋಗಿರುವ ಬಿ.ಎಚ್.ರಸ್ತೆಯ ಡಾಂಬರೀಕಣ ಕಾರ್ಯ ಹಗಲಿರುಳು ನಡೆಯುತ್ತಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಪಕ್ಕದ ಸರ್ವೀಸ್ ರಸ್ತೆ ಹಲವು ದಿನಗಳಿಂದ ಕುಂಠಿತಗೊಂಡಿತ್ತು. ಈಗ ಆ ಸರ್ವೀಸ್ ರಸ್ತೆಯನ್ನು ಹೊಳೆಯುವಂತೆ ಮಾಡಲಾಗಿದೆ. ಆಟೋ ಚಾಲಕರು, ಬೈಕ್ ಸವಾರರು, ಸಾರ್ವಜನಿಕರು ನಗರದಲ್ಲಿ (ಪ್ರಮುಖ ರಸ್ತೆ) ನಡೆಯುತ್ತಿರುವ ಕೆಲಸ ನೋಡಿ, “ಮೋದಿ ತಿಂಗಳಿಗೊಮ್ಮೆಯಾದರೂ ಬರ್ಲಪ್ಪ” ಅಂತ ಮನವಿ ಮಾಡುತ್ತಿದ್ದಾರೆ.

ಜನರ ನೋವು ಮನವಿಯಾಗಿ ಪರಿವರ್ತನೆಯಾಗಿದೆ. ರಸ್ತೆಗಳಲ್ಲಿನ ಗುಂಡಿ ಗುದ್ರೆಗಳು ದೂಳು ಇರುವದನ್ನು ಯಾರಿಗೆ ಹೇಳಿದರೂ ಸ್ವಚ್ಚಗೊಳಿಸುವ ಗೋಜಿಗೆ ಹೋಗದೇ ಇರುವುದರಿಂದ ಮೋದಿ ಮತ್ತೆ ಮತ್ತೆ ಬರ್ಲಪ್ಪ ಎನ್ನುವ ಮನವಿ ಮಾಡುತ್ತಿದ್ದಾರೆ ಜನ. ಹಾಗಾಗಿವೆ ತುಮಕೂರು ನಗರದ ರಸ್ತೆಗಳು. ಸಿದ್ದಗಂಗಾ ಮಠ, ಕ್ಯಾತ್ಸಂದ್ರದಿಂದ ಹಿಡಿದು ಟೌನ್ ಹಾಲ್ ವರೆಗಿನ ಬಿ.ಎಚ್.ರಸ್ತೆಯನ್ನು ಶುಚಿಗೊಳಿಸಿ ಡಾಂಬರು ಹಾಕಲಾಗುತ್ತಿದೆ. ಆದರೆ ಒಳಗಿನ ರಸ್ತೆಗಳಲ್ಲಿ ಅದೇ ದೂಳು, ದಡಕ್ಕೆನ್ನುವ ಗುದ್ರಗಳು, ಅಗೆದ ರಸ್ತೆಗಳು, ಡಾಂಬರ್ ಕಾಣದ ರಸ್ತೆ ಬದಿಗಳು, ಜಿಯೋ, ನೀರು, ಗ್ಯಾಸ್ ಗಾಗಿ ಅಗೆದಿರುವ ಜಾಡುಗಳು ಎದ್ದು ಕಾಣುತ್ತಿವೆ. ಅವುಗಳು ಯಾವಾಗ ರಿಪೇರಿ ಕಾಣತ್ತವೋ ಎಂದು ಜನ ಕಾಯುತ್ತಿದ್ದಾರೆ.

ಸ್ಮಾರ್ಟ್ ಸಿಟಿಯ ಕೆಲಸಗಳು ಕುಂಟುತ್ತಾ ಸಾಗಿವೆ. ದೊಡ್ಡದೊಡ್ಡ ಗುಂಡಿಗಳು ಜನರ ಗಮನ ಸೆಳೆಯುತ್ತವೆ. ಕಾಮಗಾರಿ ಚಾಲ್ತಿಯಲ್ಲಿದೆ ಎಂಬ ಬೋರ್ಡುಗಳ ಕಾಣಸಿಗುತ್ತವೆ. ರೆಡ್ ಟೇಪ್ ಗಳು ರಸ್ತೆಗಳಲ್ಲಿ ಓಡಾಡುವ ವಾಹನ ಸವಾರರಿಗೆ ರಾಚುತ್ತಿವೆ. ಬೀದಿ ದೀಪಗಳಿಲ್ಲದ ವೇಳೆಯಲ್ಲಿ ರಸ್ತೆಯಲ್ಲಿ ಬೈಕ್ ಸವಾರರು ಪ್ರಯಾಣಿಸಿದರೆ ಬೀಳುವುದು ಗ್ಯಾರೆಂಟಿ. ಹೆಲ್ಮೆಟ್ಟಿದ್ದರೆ ತಲೆಗೆ ಪಟ್ಟಿಲ್ಲ. ಕೈಕಾಲು ಮರಿದರೆ ಕೇಳೋರಿಲ್ಲ ಅನ್ನುವಂತಹ ಪರಿಸ್ಥಿತಿ ಇದೆ. ತುಮಕೂರು ನಗರದ ಜನರ ಗೋಳು ಸಾಕಷ್ಟಿವೆ. ಸ್ಮಾರ್ಟ್ ಸಿಟಿಯ ಅವಾಂತರಗಳಿಗೆ ಜನ ರೋಸಿ ಹೋಗಿದ್ದಾರೆ. ಜನ ಕೇಳುವ ಪ್ರಶ್ನೆಗಳಿಗೆ ಮೋದಿ ಸಾಹೇಬರು ಉತ್ತರಿಸುತ್ತಾರೆಯೇ. ಸ್ಮಾರ್ಟ್ ಸಿಟಿಯಲ್ಲಿ ಆಗಿರುವ ಅವ್ಯವಹಾರದ ವಿರುದ್ದ ಕ್ರಮ ಕೈಗೊಳ್ಳುತ್ತಾರೆಯೇ? ಮೌನವಹಿಸುತ್ತಾರೆ? ನಾನು ತಿನ್ನುವುದಿಲ್ಲ. ತಿನ್ನಲೂ ಬಿಡುವುದಿಲ್ಲ ಎಂಬ ಮಾತನ್ನು ಉಳಿಸಿಕೊಳ್ಳುತ್ತಾರೆಯೇ ನೋಡಬೇಕು.

ಪುಸ್ತಕದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗೆ ಪ್ರಶಸ್ತಿಗಳು ಬರುತ್ತಲೇ ಇವೆ. ಪತ್ರಿಕೆಗಳು ಅದನ್ನು ಪ್ರಕಟಿಸುತ್ತಲೇ ಇವೆ. ಆದರೆ ಸ್ಮಾರ್ಟ್ ಸಿಟಿಯಿಂದ ಜನರಿಗೆ ಯಾವ ಪ್ರಯೋಜವಾಗಿದೆ ಎಂಬುದನ್ನು ಇದುವರೆಗೂ ಪ್ರಕಟಿಸಿಲ್ಲ. ಪಾರದರ್ಶಕತೆ, ಬದ್ದತೆ ಅಂದರೆ ಇದೇ ಇರಬೇಕು. ಪಾರದರ್ಶಕತೆ ಇಲ್ಲದ ಕಾಮಗಾರಿ ಬದ್ದತೆ ಇಲ್ಲದ ಕೆಲಸ ಎರಡೂ ವ್ಯರ್ಥ. ಹೀಗಾಗಿ ಪ್ರಧಾನಿಗಳಿಂದ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಗಳಿಗೆ ಮನ್ನಣೆ ಸಿಗಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...