Homeಕರ್ನಾಟಕತುಮಕೂರಿನಲ್ಲಿ ಗಬ್ಬೆದ ರಸ್ತೆಗಳಿಗೆ ಟಾರು.. : ತಿಂಗಳಿಗೊಮ್ಮೆ ಬರ್ಲಿ ಮೋದಿ ಎನ್ನುತ್ತಿದ್ದಾರೆ ಜನ...

ತುಮಕೂರಿನಲ್ಲಿ ಗಬ್ಬೆದ ರಸ್ತೆಗಳಿಗೆ ಟಾರು.. : ತಿಂಗಳಿಗೊಮ್ಮೆ ಬರ್ಲಿ ಮೋದಿ ಎನ್ನುತ್ತಿದ್ದಾರೆ ಜನ…

- Advertisement -
- Advertisement -

ತುಮಕೂರೆಂಬೋ ದೂಳುನಗರವನ್ನು ಸ್ಮಾರ್ಟ್ ಸಿಟಿ ಎಂದು ಘೋಷಣೆ ಮಾಡಿ ಮೂರು ತಿಂಗಳು ಕಳೆದರೆ ನಾಲ್ಕು ವರ್ಷ ಪೂರ್ಣಗೊಳ್ಳಲಿದೆ. 2016 ಮಾರ್ಚ್ 11 ರಂದು ಸ್ಮಾರ್ಟ್ ಸಿಟಿಯಾಗಿ ಘೋಷಣೆ ಮಾಡಿದ್ದರೂ ನಗರ ಅಭಿವೃದ್ಧಿಯನ್ನೇ ಕಂಡಿಲ್ಲ. ಅಮಾನಿಕೆರೆಯಂಗಳವನ್ನು ಬಿಟ್ಟರೆ ಇನ್ನೆಲ್ಲಿ ನೋಡಿದರೂ ದೂಳು, ಗುಂಡಿಗಳು. ಜನರ ರಸ್ತೆಗಿಳಿದರೆ ಸಾಕು ನಗರಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧಿಕಾರಿಗಳಿಗೆ ಪಕ್ಷಾತೀತವಾಗಿ ಬೈಗುಳದ ಮಳೆಯನ್ನೇ ಸುರಿಸುತ್ತಾರೆ. ಆದರೆ ಕೆಲವೊಮ್ಮೆ ಭಕ್ತರು ಹೇಳಿಕೊಳ್ಳುವಂತಿಲ್ಲ. ಬಿಡುವಂತಿಲ್ಲ. ಆದರೂ ತುಮಕೂರಿನ ಜನ ಮಾತ್ರ ಸ್ಮಾರ್ಟ್ ಆಗದೇ ಇರುವ ಸಿಟಿಯ ಬಗ್ಗೆ ಆಕ್ರೋಶವನ್ನು ಹೊರಹಾಕುತ್ತಾರೆ. ಸ್ಮಾರ್ಟ್ ಸಿಟಿಯ ಕುರಿತು ಬರೆಯಲು ತುಮಕೂರು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುತ್ತಿರುವುದೇ ಕಾರಣ.

ಜನವರಿ 2ರಂದು ತುಮಕೂರು ನಗರದ ಬಿ.ಎಚ್.ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನಕ್ಕೆ ಮೋದಿ ಬರುತ್ತಿದ್ದಾರೆ. ಈಗ ಬಂದರೆ ಇದು ಮೂರನೇ ಭೇಟಿ. ಪ್ರಧಾನಿ ತುಮಕೂರು ಭೇಟಿಗೆ ಕಾರಣಗಳೇನು ಎಂಬ ಬಗ್ಗೆ ಮೇಲ್ನೋಟಕ್ಕೆ ಹೇಳುತ್ತಿರುವ ಅಂಶಗಳು ಪ್ರಮುಖ ಕಾರಣಗಳೇ ಅಲ್ಲ. ಮುಖ್ಯಮಂತ್ರಿಗಳಿಗೆ ಕೃಷಿ ಪ್ರಶಸ್ತಿ ಪ್ರದಾನ ಮಾಡುವುದು, ಕೃಷಿ ಸನ್ಮಾನ್ ನಿಧಿ ಯೋಜನೆಯ ನಾಲ್ಕನೇ ಕಂತು ಹಣವನ್ನು ಬಿಡುಗಡೆ ಮಾಡುವುದು, 42 ಕೃಷಿಕರಿಗೆ ಪ್ರಶಸ್ತಿ ನೀಡುವುದು ಪ್ರಮುಖ ಆದ್ಯತೆಗಳಲ್ಲ ಎಂಬುದು ಯಾರು ಬೇಕಾದರೂ ಊಹಿಸಬಹುದು. ಆದರೆ  ಪ್ರಧಾನಿ ಕಾರ್ಯಕ್ರಮಕ್ಕೆ ಬರುತ್ತಿರುವ ಹಿಂದಿನ ಉದ್ದೇಶದ ಬಗ್ಗೆ  ಆಯೋಜಕರಾಗಲೀ, ಬಿಜೆಪಿಯ ಮುಖಂಡರಾಗಲೀ ಸ್ಪಷ್ಟ ಕಾರಣ ನೀಡುತ್ತಿಲ್ಲ.

ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮಿಗಳು ಲಿಂಗೈಕ್ಯರಾದಾಗಲೂ ಬರಲಿಲ್ಲ. ಹೆಚ್ಚು ಜನರು ಸೇರುವ ಮತ್ತು ಭದ್ರತೆಯ ಹಿನ್ನೆಲೆಯಲ್ಲಿ ಪ್ರಧಾನಿ ಭೇಟಿ ಮಾಡಲಿಲ್ಲ ಎಂಬ ಸಬೂಬು ಬೇರೆ. ಈಗ ಆ ವಿಷಯ ಮುನ್ನೆಲೆಗೆ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಇದೀಗ ಸಿದ್ದಗಂಗಾ ಮಠದಲ್ಲಿ ಒಂದೂವರೆ ಗಂಟೆ ಕಾಲ ಕಳೆಯಲಿದ್ದಾರೆ. ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ಭೇಟಿ ನೀಡುವುದು, ಧ್ಯಾನದಲ್ಲಿ ತೊಡಗುವ ಕಾರ್ಯಕ್ರಮಗಳು ಪೂರ್ವನಿಗದಿಯಾಗಿವೆ. ಅಮರನಾಥ ಯಾತ್ರೆಯ ಸಂದರ್ಭದಲ್ಲಿ ಧ್ಯಾನ ಮಾಡಿ ದೇಶದ ಗಮನ ಸೆಳೆದ ಪ್ರಧಾನಿ ಇದೀಗ ಸಿದ್ದಗಂಗಾ ಮಠದ ಧ್ಯಾನಮಂದಿರದಲ್ಲೂ ಧ್ಯಾನ ಮಾಡಿ ದೇಶದಲ್ಲಿ ಸುದ್ದಿಯಾಗಲಿದ್ದಾರೆ. ಧ್ಯಾನದ ನಂತರವೂ ಕಾರ್ಯಕ್ರಮಕ್ಕೆ ಹಾಜರಾಗುವುದು. ಹೀಗಾಗಿ ಧ್ಯಾನಮುಖಿ ನರೇಂದ್ರ ಮೋದಿ ಮತ್ತೆ ರಾಷ್ಟ್ರೀಯ ವಾಹಿನಿಗಳಲ್ಲಿ ಸುದ್ದಿಯಾಗಲಿದ್ದಾರೆ.

ಮಠದಲ್ಲೇ ಹೆಚ್ಚು ಸಮಯ ಕಳೆಯುವ ಮೂಲಕ ರಾಜ್ಯದ ಬಹುದೊಡ್ಡ ಲಿಂಗಾಯತ ಸಮುದಾಯದ ಪ್ರೀತಿ ಗಿಟ್ಟಿಸಿಕೊಳ್ಳುವ ಉದ್ದೇಶವೂ ಇದರಿಂದೆ ಇರಬಹುದು. ಹಿರಿಯ ಶ್ರೀಗಳು ಲಿಂಗೈಕ್ಯರಾದ ಸಂದರ್ಭದಲ್ಲಿ ಮಠದ ಭಕ್ತರು ಪ್ರಧಾನಿ ಭೇಟಿ ನೀಡಲಿಲ್ಲವೆಂದು ಮುನಿಸಿಕೊಂಡಿದ್ದರು. ಆ ಮುನಿಸನ್ನು ಹೋಗಲಾಡಿಸುವುದು ಮಠದಲ್ಲಿ ಹೆಚ್ಚು ಕಾಲ ಕಳೆಯುವುದರ ಹಿಂದಿನ ಉದ್ದೇಶವೆಂದು ವಿಶ್ಲೇಷಿಸಲಾಗುತ್ತಿದೆ. ಸಿದ್ದಗಂಗಾ ಮಠದ ಮೂಲಕ ಪ್ರಧಾನಿ ಮೋದಿ ಏನು ಸಂದೇಶಗಳನ್ನು ರವಾನಿಸಬಹುದು ಎಂಬ ಕುತೂಹಲ ಜನರಲ್ಲಿದೆ. ಡಾ. ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ಕೊಡಬೇಕು ಎಂಬ ಒತ್ತಾಯ ಹಲವು ವರ್ಷಗಳದ್ದು. ಆದರೆ ಕೇಂದ್ರದ ಯಾವ ಸರ್ಕಾರವೂ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಉತ್ಸಾಹ ತೋರಿಸಲಿಲ್ಲ. ನರೇಂದ್ರ ಮೋದಿ ಎರಡು ಬಾರಿ ಪ್ರಧಾನಿಯಾದರೂ ಇದರ ಬಗ್ಗೆ ಕಿವಿಗೆ ಹಾಕಿಕೊಳ್ಳಲಿಲ್ಲ. ಸಿಟ್ಟಿಗೆದ್ದ ಜನರ ಮನಸ್ಸನ್ನು ಸೆಳೆಯುವುದು ಭೇಟಿಯ ಹಿಂದಿನ ಉದ್ದೇಶವೇ? ಇರಬಹುದು.

ಆದರೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮಿಸಿದರೆ ತುಮಕೂರು ಚಿತ್ರದುರ್ಗ ರಾಜಕೀಯವಾಗಿ (ಸಂಸತ್ ಚುನಾವಣೆಯಲ್ಲಿ) ಬಿಜೆಪಿ ತೆಕ್ಕೆಗೆ ಹೋಗಿರುವುದು ಪ್ರಮುಖ ಕಾರಣ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿದಿರುವುದು ಮಗದೊಂದು ಕಾರಣ. ಕೆಲವೇ ದಿನಗಳ ಹಿಂದೆ ಆರ್‌ಎಸ್ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ತುಮಕೂರು ಜಿಲ್ಲೆಯ ಪಾವಗಡಕ್ಕೆ ಭೇಟಿ ನೀಡಿರುವುದು ಕೂಡ ಗಮನಾರ್ಹ ಸಂಗತಿ. ಪ್ರಧಾನಿ ಸುಮ್ಮಸುಮ್ಮನೆ ತುಮಕೂರಿಗೆ ಭೇಟಿ ನೀಡುತ್ತಿಲ್ಲ. ರಾಜಕೀಯ ಲಾಭನಷ್ಟಗಳ ಲೆಕ್ಕಾಚಾರವನ್ನು ಹಾಕಿಯೇ ಭೇಟಿ ನೀಡುತ್ತಿರುವುದು ಎನ್ನಲಾಗುತ್ತಿದೆ.

ಮೇಲೆಯೇ ಹೇಳಿದಂತೆ ತುಮಕೂರು ಸ್ಮಾರ್ಟ್ ಸಿಟಿ ಆಗಿದ್ದರೂ ಇದುವರೆಗೂ ಸ್ಮಾರ್ಟ್ ಅಂತೂ ಆಗಿಲ್ಲ. ರಸ್ತೆಗಳು ಗುಂಡಿ ಗುದ್ರಗಳಿಂದ ಕೂಡಿವೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದಾರೆಂಬ ಕಾರಣಕ್ಕೆ ತೇಪೆ ಹಚ್ಚುವ ಕೆಲಸ ಬಿರುಸಿನಿಂದ ನಡೆಯುತ್ತಿದೆ. ಪ್ರಮುಖ ರಸ್ತೆಗಳಲ್ಲಿ ಸೇರಿಕೊಂಡಿದ್ದ ದೂಳನ್ನು ಹೊಡೆದು ಟಾರು ಹಾಕುವ ಕಾರ್ಯ ಭರದಿಂದ ನಡೆಯುತ್ತಿದೆ. ರಸ್ತೆಗಳಿಗೆ ನೀರು ಸಿಂಪಡಿಸಲಾಗುತ್ತಿದೆ. ನಗರದಲ್ಲಿ ಹಾದುಹೋಗಿರುವ ಬಿ.ಎಚ್.ರಸ್ತೆಯ ಡಾಂಬರೀಕಣ ಕಾರ್ಯ ಹಗಲಿರುಳು ನಡೆಯುತ್ತಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಪಕ್ಕದ ಸರ್ವೀಸ್ ರಸ್ತೆ ಹಲವು ದಿನಗಳಿಂದ ಕುಂಠಿತಗೊಂಡಿತ್ತು. ಈಗ ಆ ಸರ್ವೀಸ್ ರಸ್ತೆಯನ್ನು ಹೊಳೆಯುವಂತೆ ಮಾಡಲಾಗಿದೆ. ಆಟೋ ಚಾಲಕರು, ಬೈಕ್ ಸವಾರರು, ಸಾರ್ವಜನಿಕರು ನಗರದಲ್ಲಿ (ಪ್ರಮುಖ ರಸ್ತೆ) ನಡೆಯುತ್ತಿರುವ ಕೆಲಸ ನೋಡಿ, “ಮೋದಿ ತಿಂಗಳಿಗೊಮ್ಮೆಯಾದರೂ ಬರ್ಲಪ್ಪ” ಅಂತ ಮನವಿ ಮಾಡುತ್ತಿದ್ದಾರೆ.

ಜನರ ನೋವು ಮನವಿಯಾಗಿ ಪರಿವರ್ತನೆಯಾಗಿದೆ. ರಸ್ತೆಗಳಲ್ಲಿನ ಗುಂಡಿ ಗುದ್ರೆಗಳು ದೂಳು ಇರುವದನ್ನು ಯಾರಿಗೆ ಹೇಳಿದರೂ ಸ್ವಚ್ಚಗೊಳಿಸುವ ಗೋಜಿಗೆ ಹೋಗದೇ ಇರುವುದರಿಂದ ಮೋದಿ ಮತ್ತೆ ಮತ್ತೆ ಬರ್ಲಪ್ಪ ಎನ್ನುವ ಮನವಿ ಮಾಡುತ್ತಿದ್ದಾರೆ ಜನ. ಹಾಗಾಗಿವೆ ತುಮಕೂರು ನಗರದ ರಸ್ತೆಗಳು. ಸಿದ್ದಗಂಗಾ ಮಠ, ಕ್ಯಾತ್ಸಂದ್ರದಿಂದ ಹಿಡಿದು ಟೌನ್ ಹಾಲ್ ವರೆಗಿನ ಬಿ.ಎಚ್.ರಸ್ತೆಯನ್ನು ಶುಚಿಗೊಳಿಸಿ ಡಾಂಬರು ಹಾಕಲಾಗುತ್ತಿದೆ. ಆದರೆ ಒಳಗಿನ ರಸ್ತೆಗಳಲ್ಲಿ ಅದೇ ದೂಳು, ದಡಕ್ಕೆನ್ನುವ ಗುದ್ರಗಳು, ಅಗೆದ ರಸ್ತೆಗಳು, ಡಾಂಬರ್ ಕಾಣದ ರಸ್ತೆ ಬದಿಗಳು, ಜಿಯೋ, ನೀರು, ಗ್ಯಾಸ್ ಗಾಗಿ ಅಗೆದಿರುವ ಜಾಡುಗಳು ಎದ್ದು ಕಾಣುತ್ತಿವೆ. ಅವುಗಳು ಯಾವಾಗ ರಿಪೇರಿ ಕಾಣತ್ತವೋ ಎಂದು ಜನ ಕಾಯುತ್ತಿದ್ದಾರೆ.

ಸ್ಮಾರ್ಟ್ ಸಿಟಿಯ ಕೆಲಸಗಳು ಕುಂಟುತ್ತಾ ಸಾಗಿವೆ. ದೊಡ್ಡದೊಡ್ಡ ಗುಂಡಿಗಳು ಜನರ ಗಮನ ಸೆಳೆಯುತ್ತವೆ. ಕಾಮಗಾರಿ ಚಾಲ್ತಿಯಲ್ಲಿದೆ ಎಂಬ ಬೋರ್ಡುಗಳ ಕಾಣಸಿಗುತ್ತವೆ. ರೆಡ್ ಟೇಪ್ ಗಳು ರಸ್ತೆಗಳಲ್ಲಿ ಓಡಾಡುವ ವಾಹನ ಸವಾರರಿಗೆ ರಾಚುತ್ತಿವೆ. ಬೀದಿ ದೀಪಗಳಿಲ್ಲದ ವೇಳೆಯಲ್ಲಿ ರಸ್ತೆಯಲ್ಲಿ ಬೈಕ್ ಸವಾರರು ಪ್ರಯಾಣಿಸಿದರೆ ಬೀಳುವುದು ಗ್ಯಾರೆಂಟಿ. ಹೆಲ್ಮೆಟ್ಟಿದ್ದರೆ ತಲೆಗೆ ಪಟ್ಟಿಲ್ಲ. ಕೈಕಾಲು ಮರಿದರೆ ಕೇಳೋರಿಲ್ಲ ಅನ್ನುವಂತಹ ಪರಿಸ್ಥಿತಿ ಇದೆ. ತುಮಕೂರು ನಗರದ ಜನರ ಗೋಳು ಸಾಕಷ್ಟಿವೆ. ಸ್ಮಾರ್ಟ್ ಸಿಟಿಯ ಅವಾಂತರಗಳಿಗೆ ಜನ ರೋಸಿ ಹೋಗಿದ್ದಾರೆ. ಜನ ಕೇಳುವ ಪ್ರಶ್ನೆಗಳಿಗೆ ಮೋದಿ ಸಾಹೇಬರು ಉತ್ತರಿಸುತ್ತಾರೆಯೇ. ಸ್ಮಾರ್ಟ್ ಸಿಟಿಯಲ್ಲಿ ಆಗಿರುವ ಅವ್ಯವಹಾರದ ವಿರುದ್ದ ಕ್ರಮ ಕೈಗೊಳ್ಳುತ್ತಾರೆಯೇ? ಮೌನವಹಿಸುತ್ತಾರೆ? ನಾನು ತಿನ್ನುವುದಿಲ್ಲ. ತಿನ್ನಲೂ ಬಿಡುವುದಿಲ್ಲ ಎಂಬ ಮಾತನ್ನು ಉಳಿಸಿಕೊಳ್ಳುತ್ತಾರೆಯೇ ನೋಡಬೇಕು.

ಪುಸ್ತಕದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗೆ ಪ್ರಶಸ್ತಿಗಳು ಬರುತ್ತಲೇ ಇವೆ. ಪತ್ರಿಕೆಗಳು ಅದನ್ನು ಪ್ರಕಟಿಸುತ್ತಲೇ ಇವೆ. ಆದರೆ ಸ್ಮಾರ್ಟ್ ಸಿಟಿಯಿಂದ ಜನರಿಗೆ ಯಾವ ಪ್ರಯೋಜವಾಗಿದೆ ಎಂಬುದನ್ನು ಇದುವರೆಗೂ ಪ್ರಕಟಿಸಿಲ್ಲ. ಪಾರದರ್ಶಕತೆ, ಬದ್ದತೆ ಅಂದರೆ ಇದೇ ಇರಬೇಕು. ಪಾರದರ್ಶಕತೆ ಇಲ್ಲದ ಕಾಮಗಾರಿ ಬದ್ದತೆ ಇಲ್ಲದ ಕೆಲಸ ಎರಡೂ ವ್ಯರ್ಥ. ಹೀಗಾಗಿ ಪ್ರಧಾನಿಗಳಿಂದ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಗಳಿಗೆ ಮನ್ನಣೆ ಸಿಗಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...