Homeನಿಜವೋ ಸುಳ್ಳೋಬಿರಿಯಾನಿಯ ಸುಳ್ಳು ಕಥೆಗಳು

ಬಿರಿಯಾನಿಯ ಸುಳ್ಳು ಕಥೆಗಳು

- Advertisement -
- Advertisement -

ಎರಡು ಬಿರಿಯಾನಿ ಕಥೆಗಳು ಸುದ್ದಿಯಲ್ಲಿವೆ. ಅದರಲ್ಲಿ ಒಂದು ಕಥೆಯು ಮತ್ತೆ ಮತ್ತೆ ಕೇಳಿ ಬರುತ್ತಿದ್ದು, ಎರಡು ದಿನಗಳ ಹಿಂದೆ ಸ್ವತಃ ಬಿಜೆಪಿ ಅಧ್ಯಕ್ಷ ಅಮಿತ್‍ಷಾ ಮತ್ತು ಉ.ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚುನಾವಣಾ ರ್ಯಾಲಿಗಳಲ್ಲಿ ಪ್ರಸ್ತಾಪಿಸಿದ್ದಾರೆ. ಅದರ ಕುರಿತು ‘ದಿ ಕ್ವಿಂಟ್’ ವೆಬ್ ಪತ್ರಿಕೆಯು ವಿವರವಾದ ‘ಫ್ಯಾಕ್ಟ್ ಚೆಕ್’ ಮಾಡಿ ಸತ್ಯ ಸಂಗತಿ ತಿಳಿಸಿದ್ದಾರೆ. ಅದನ್ನು ಕೆಳಗೆ ನೀಡಲಾಗಿದೆ.

ಇನ್ನೊಂದು ಬಿರಿಯಾನಿ ಕಥೆ, ನರೇಂದ್ರ ಮೋದಿಯವರು ಆಹ್ವಾನವೇ ಇಲ್ಲದೇ ನವಾಜ್ ಷರೀಫ್ ಮನೆ ಮದುವೆಗೆ ಹೋಗಿ ಬಿರಿಯಾನಿ ತಿಂದರೆಂಬುದು. ಅದರ ಫ್ಯಾಕ್ಟ್ ಚೆಕ್ ನಾವು ಮಾಡಿದ್ದೇವೆ. ಅದನ್ನು ನಂತರ ತಿಳಿಸುತ್ತೇವೆ.

ಕ್ವಿಂಟ್‍ನ ವೆಬ್‍ಕೂಫ್‍ನಲ್ಲಿ ಬಂದದ್ದು.

ಷಾ ಮತ್ತು ಯೋಗಿ ಹೇಳುತ್ತಿರುವ ‘ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸಲಾಯಿತು’ ಎಂಬುದು ಒಂದು ಸುಳ್ಳಿನ ಮೇಲೆ ಆಧರಿಸಿದ ಸುಳ್ಳು

ಮಾರ್ಚ್ 26ರಂದು ಉ.ಪ್ರದೇಶದ ಮೊರಾದಾಬಾದ್‍ನಲ್ಲಿ ಬಹಿರಂಗಸಭೆಯನ್ನುದ್ದೇಶಿಸಿ ಮಾತಾಡಿದ ಬಿಜೆಪಿಯ ಅಧ್ಯಕ್ಷ ಕಾಂಗ್ರೆಸ್ & ಇತರ ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ಮಾಡುತ್ತಾ ‘ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುವ ಕಾಲ ಹೋಯಿತು, ಈಗೇನಿದ್ದರೂ ಭಯೋತ್ಪಾದಕರ ಮೇಲೆ ದಾಳಿ ನಡೆಸುವ ಮೋದಿಯ ಕಾಲ’ ಎಂದು ಗುಡುಗಿದರು.

ಇದರ ಮೂಲ ಎಲ್ಲಿದೆ?

ವಾಸ್ತವದಲ್ಲಿ ‘ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುವ’ ಕಥೆ ಶುರುವಾಗುವುದು ಆಗಸ್ಟ್ 2009ರಲ್ಲಿ. 26/11 ಮುಂಬೈ ದಾಳಿಯ ಪ್ರಮುಖ ಆರೋಪಿ ಅಜ್ಮಲ್ ಕಸಬ್‍ನ ವಿಚಾರಣೆ ನಡೆಯುತ್ತಿದ್ದಾಗ, ಪಿಟಿಐ ನ್ಯೂಸ್ ಏಜೆನ್ಸಿಯಿಂದ ಒಂದು ವರದಿ ಬಂದಿತು. ಆ ವರದಿಯನ್ನು ಇಂಡಿಯಾ ಟುಡೇ ಸೇರಿದಂತೆ ಹಲವರು ತಮ್ಮಲ್ಲೂ ಹಾಕಿಕೊಂಡರು. ಅದರಲ್ಲಿ ಕಸಬ್ ತನಗೆ ಮಟನ್ ಬಿರಿಯಾನಿ, ಬಾಸ್ಮತಿ ಅನ್ನ ಬೇಕೆಂದು ಕೇಳಿದನೆಂತಲೂ, ಅದನ್ನು ಪೂರೈಸಲಾಯಿತೆಂತಲೂ ಹೇಳಲಾಗಿತ್ತು. ಈ ಮಾತನ್ನು ಹೇಳಿದವರು, ಆ ಕೇಸಿನ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂ. ಆ ವಿಚಾರಣೆಯ ನಂತರ ಆತ ತಪ್ಪಿತಸ್ಥೆನೆಂದು ಸಾಬೀತಾಯಿತು. ಮತ್ತು ಕೋರ್ಟ್ ಆದೇಶದಂತೆ ಗಲ್ಲಿಗೇರಿಸಲಾಯಿತು.

ಅಲ್ಲಿಂದ ಶುರುವಾಯಿತು ಬಿರಿಯಾನಿ ಕಥೆ

ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಬಿರಿಯಾನಿಯ ಕಥೆಯನ್ನು ಹಲವು ಸಾರಿ ಹೇಳಿದ್ದಾರೆ. ಮಾರ್ಚ್ 26ರಂದು ಗೋರಖ್‍ಪುರದಲ್ಲಿ ಇನ್ನು ಹೇಳಿದ್ದಾರೆ, ಸಹ್ರಾನ್‍ಪುರದಲ್ಲಿ ಮಾರ್ಚ್ 24ರಂದು ನಡೆದ ರ್ಯಾಲಿಯಲ್ಲೂ ಇದೇ ಮಾತನ್ನು ಹೇಳಿದ್ದಾರೆ. ‘ಕಾಂಗ್ರೆಸ್ ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುತ್ತಿತ್ತು, ಮೋದಿ ಸರ್ಕಾರ ಬುಲೆಟ್, ಬಾಂಬುಗಳನ್ನು ತಿನ್ನಿಸಿದೆ’.

ನವೆಂಬರ್ 2018ರಲ್ಲೂ ರಾಜಸ್ತಾನದ ಮಕ್ರಾನಾದಲ್ಲಿ ನಡೆದ ಸಭೆಯಲ್ಲೂ ಇದೇ ಮಾತನ್ನು ಹೇಳಿದ್ದಾರೆ. ಆಗಸ್ಟ್ 2012ರಲ್ಲಿ ಬಿಜೆಪಿ ನಾಯಕ ಮುಕ್ತಾರ್ ನಕ್ವಿ ಸಹಾ ಇದೇ ಮಾತನ್ನು ಹೇಳಿ, ‘ಬಿರಿಯಾನಿ ತಿನ್ನಿಸಿದ್ದು ಸಾಕು, ಬೇಗನೇ ಗಲ್ಲಿಗೇರಿಸಬೇಕು’ ಎಂದಿದ್ದರು.

ವಾಸ್ತವವೇನು?

ಮಾರ್ಚ್ 2015ರಲ್ಲಿ ಉಜ್ವಲ್ ನಿಕಮ್ ಅವರು ವರದಿಗಾರರಿಗೆ (ಟೈಮ್ಸ್ ಆಫ್ ಇಂಡಿಯಾದಲ್ಲಿ ವಿವರವಾಗಿ ಪ್ರಕಟಗೊಂಡಿದೆ) ಹೇಳಿದ ಮಾತು ಏನಿತ್ತು ನೋಡೋಣ. ‘ಕಸಬ್‍ನ ಪರವಾಗಿ ಒಂದು ಭಾವನಾತ್ಮಕ ಅಲೆ ಏಳುತ್ತಿದೆಯೆಂದು ನನಗೆ ಅನ್ನಿಸಿತು. ರಕ್ಷಾಬಂಧನದ ದಿನ ಆತನ ಕಣ್ಣುಗಳಲ್ಲಿ ನೀರಿತ್ತು ಎಂದೆಲ್ಲಾ ಪತ್ರಕರ್ತರು ಬರೆಯುತ್ತಿದ್ದರು. ಆಗ ನಾನು ಆತ ಬಿರಿಯಾನಿ ಕೇಳಿದನೆಂದೂ, ಅದನ್ನು ಒದಗಿಸಲಾಗಿದೆಯೆಂದೂ ಒಂದು ಸುಳ್ಳನ್ನು ಹರಿಯಬಿಟ್ಟೆ. ಅವತ್ತು ಅದರ ಅಗತ್ಯವಿತ್ತೆಂದು ನನಗನ್ನಿಸಿತು’

ಇಂಡಿಯನ್ ಎಕ್ಸ್‍ಪ್ರೆಸ್‍ನಲ್ಲಿ ‘ಅವರಿಗೆ ಬಿರಿಯಾನಿಯೇಕೆ ಉಣ್ಣಿಸಬೇಕು?’ ಎಂಬ ಟೈಟಲ್ ಜೊತೆಗೆ ಬಂದ ವರದಿಯು ಸಾರ್ವಜನಿಕ ವಲಯದಲ್ಲಿ ಸಿಟ್ಟೆಬ್ಬಿಸುತ್ತು. ಉಜ್ವಲ್ ನಿಕಂರ ಈ ಹೇಳಿಕೆಯ ಕುರಿತು ಮಹಾರಾಷ್ಟ್ರ ಸರ್ಕಾರವು ಸ್ಪಷ್ಟೀಕರಣ ಕೇಳಿತ್ತೆಂದು ಹೇಳಲಾಗುತ್ತಿದೆ. ಇದೊಂದು ಸುಳ್ಳು ಕಥೆಯಾಗಿತ್ತು.

ಇನ್ನು ಎರಡನೇ ಸುಳ್ಳು ಬಿರಿಯಾನಿ ಕಥೆ.

ಪ್ರಧಾನಿ ನರೇಂದ್ರ ಮೋದಿಯವರು ಇದ್ದಕ್ಕಿದ್ದಂತೆ ನವಾಜ್ ಷರೀಫ್‍ರ ಹುಟ್ಟು ಹಬ್ಬದ ದಿನ ಲಾಹೋರಿನ ಅವರ ಮನೆಗೆ ಭೇಟಿ ಕೊಟ್ಟಾಗ ಬಿರಿಯಾನಿ ತಿಂದುಬಂದರೆಂಬುದು. ಇದೂ ಸುಳ್ಳು. ನರೇಂದ್ರ ಮೋದಿಯವರು ಸಸ್ಯಾಹಾರಿಯಾಗಿದ್ದು, ಅವರು ಬಿರಿಯಾನಿ ತಿಂದಿಲ್ಲ. ಅಂದು ನವಾಜ್ ಷರೀಫ್‍ರ ಮನೆಯಲ್ಲಿ ಮೋದಿಯವರಿಗೆ ಅವರ ಇಷ್ಟದ ಸಾಗ್, ದಾಲ್ ಅನ್ನು ಬಡಿಸಲಾಗಿತ್ತು. ಷರೀಫ್‍ರ ಮನೆಗೆ ಅಂದು ಮೋದಿಯವರ ಜೊತೆಗೆ ಬಂದಿದ್ದ 11 ಜನರಿಗೆ ಅಲ್ಲಿ ಈ ತಿನಿಸನ್ನು ಶುದ್ಧ ತುಪ್ಪದಿಂದ ಮಾಡಿ ಬಡಿಸಲಾಯಿತೆಂದು ಅವರ ಮನೆ ಜಾತಿ-ಉಮ್ರ್‍ನ ಮೂಲಗಳು ಹೇಳಿದ್ದನ್ನು ಪಿಟಿಐ ವರದಿ ಮಾಡಿತ್ತು.

https://food.ndtv.com/food-drinks/pm-modis-favourite-dish-served-at-pakistani-pm-nawaz-sharifs-home-1259189http://

ಮೋದಿಯವರು ನವಾಜ್ ಷರೀಫ್‍ರ ಮನೆಗೆ ಹೋಗಿದ್ದು ನಿಜ, ಅಲ್ಲಿ ಅವರಿಗಿಷ್ಟವಾದ ತಿಂಡಿಯನ್ನು ಮಾಡುವಷ್ಟು ಪೂರ್ವನಿರ್ಧಾರಿತವಾಗಿ ಆ ಭೇಟಿ ಇದ್ದಿತ್ತು. ಆದರೆ ಬಿರಿಯಾನಿ ತಿನ್ನಲಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...