Homeನಿಜವೋ ಸುಳ್ಳೋಬಿರಿಯಾನಿಯ ಸುಳ್ಳು ಕಥೆಗಳು

ಬಿರಿಯಾನಿಯ ಸುಳ್ಳು ಕಥೆಗಳು

- Advertisement -
- Advertisement -

ಎರಡು ಬಿರಿಯಾನಿ ಕಥೆಗಳು ಸುದ್ದಿಯಲ್ಲಿವೆ. ಅದರಲ್ಲಿ ಒಂದು ಕಥೆಯು ಮತ್ತೆ ಮತ್ತೆ ಕೇಳಿ ಬರುತ್ತಿದ್ದು, ಎರಡು ದಿನಗಳ ಹಿಂದೆ ಸ್ವತಃ ಬಿಜೆಪಿ ಅಧ್ಯಕ್ಷ ಅಮಿತ್‍ಷಾ ಮತ್ತು ಉ.ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚುನಾವಣಾ ರ್ಯಾಲಿಗಳಲ್ಲಿ ಪ್ರಸ್ತಾಪಿಸಿದ್ದಾರೆ. ಅದರ ಕುರಿತು ‘ದಿ ಕ್ವಿಂಟ್’ ವೆಬ್ ಪತ್ರಿಕೆಯು ವಿವರವಾದ ‘ಫ್ಯಾಕ್ಟ್ ಚೆಕ್’ ಮಾಡಿ ಸತ್ಯ ಸಂಗತಿ ತಿಳಿಸಿದ್ದಾರೆ. ಅದನ್ನು ಕೆಳಗೆ ನೀಡಲಾಗಿದೆ.

ಇನ್ನೊಂದು ಬಿರಿಯಾನಿ ಕಥೆ, ನರೇಂದ್ರ ಮೋದಿಯವರು ಆಹ್ವಾನವೇ ಇಲ್ಲದೇ ನವಾಜ್ ಷರೀಫ್ ಮನೆ ಮದುವೆಗೆ ಹೋಗಿ ಬಿರಿಯಾನಿ ತಿಂದರೆಂಬುದು. ಅದರ ಫ್ಯಾಕ್ಟ್ ಚೆಕ್ ನಾವು ಮಾಡಿದ್ದೇವೆ. ಅದನ್ನು ನಂತರ ತಿಳಿಸುತ್ತೇವೆ.

ಕ್ವಿಂಟ್‍ನ ವೆಬ್‍ಕೂಫ್‍ನಲ್ಲಿ ಬಂದದ್ದು.

ಷಾ ಮತ್ತು ಯೋಗಿ ಹೇಳುತ್ತಿರುವ ‘ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸಲಾಯಿತು’ ಎಂಬುದು ಒಂದು ಸುಳ್ಳಿನ ಮೇಲೆ ಆಧರಿಸಿದ ಸುಳ್ಳು

ಮಾರ್ಚ್ 26ರಂದು ಉ.ಪ್ರದೇಶದ ಮೊರಾದಾಬಾದ್‍ನಲ್ಲಿ ಬಹಿರಂಗಸಭೆಯನ್ನುದ್ದೇಶಿಸಿ ಮಾತಾಡಿದ ಬಿಜೆಪಿಯ ಅಧ್ಯಕ್ಷ ಕಾಂಗ್ರೆಸ್ & ಇತರ ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ಮಾಡುತ್ತಾ ‘ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುವ ಕಾಲ ಹೋಯಿತು, ಈಗೇನಿದ್ದರೂ ಭಯೋತ್ಪಾದಕರ ಮೇಲೆ ದಾಳಿ ನಡೆಸುವ ಮೋದಿಯ ಕಾಲ’ ಎಂದು ಗುಡುಗಿದರು.

ಇದರ ಮೂಲ ಎಲ್ಲಿದೆ?

ವಾಸ್ತವದಲ್ಲಿ ‘ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುವ’ ಕಥೆ ಶುರುವಾಗುವುದು ಆಗಸ್ಟ್ 2009ರಲ್ಲಿ. 26/11 ಮುಂಬೈ ದಾಳಿಯ ಪ್ರಮುಖ ಆರೋಪಿ ಅಜ್ಮಲ್ ಕಸಬ್‍ನ ವಿಚಾರಣೆ ನಡೆಯುತ್ತಿದ್ದಾಗ, ಪಿಟಿಐ ನ್ಯೂಸ್ ಏಜೆನ್ಸಿಯಿಂದ ಒಂದು ವರದಿ ಬಂದಿತು. ಆ ವರದಿಯನ್ನು ಇಂಡಿಯಾ ಟುಡೇ ಸೇರಿದಂತೆ ಹಲವರು ತಮ್ಮಲ್ಲೂ ಹಾಕಿಕೊಂಡರು. ಅದರಲ್ಲಿ ಕಸಬ್ ತನಗೆ ಮಟನ್ ಬಿರಿಯಾನಿ, ಬಾಸ್ಮತಿ ಅನ್ನ ಬೇಕೆಂದು ಕೇಳಿದನೆಂತಲೂ, ಅದನ್ನು ಪೂರೈಸಲಾಯಿತೆಂತಲೂ ಹೇಳಲಾಗಿತ್ತು. ಈ ಮಾತನ್ನು ಹೇಳಿದವರು, ಆ ಕೇಸಿನ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂ. ಆ ವಿಚಾರಣೆಯ ನಂತರ ಆತ ತಪ್ಪಿತಸ್ಥೆನೆಂದು ಸಾಬೀತಾಯಿತು. ಮತ್ತು ಕೋರ್ಟ್ ಆದೇಶದಂತೆ ಗಲ್ಲಿಗೇರಿಸಲಾಯಿತು.

ಅಲ್ಲಿಂದ ಶುರುವಾಯಿತು ಬಿರಿಯಾನಿ ಕಥೆ

ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಬಿರಿಯಾನಿಯ ಕಥೆಯನ್ನು ಹಲವು ಸಾರಿ ಹೇಳಿದ್ದಾರೆ. ಮಾರ್ಚ್ 26ರಂದು ಗೋರಖ್‍ಪುರದಲ್ಲಿ ಇನ್ನು ಹೇಳಿದ್ದಾರೆ, ಸಹ್ರಾನ್‍ಪುರದಲ್ಲಿ ಮಾರ್ಚ್ 24ರಂದು ನಡೆದ ರ್ಯಾಲಿಯಲ್ಲೂ ಇದೇ ಮಾತನ್ನು ಹೇಳಿದ್ದಾರೆ. ‘ಕಾಂಗ್ರೆಸ್ ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುತ್ತಿತ್ತು, ಮೋದಿ ಸರ್ಕಾರ ಬುಲೆಟ್, ಬಾಂಬುಗಳನ್ನು ತಿನ್ನಿಸಿದೆ’.

ನವೆಂಬರ್ 2018ರಲ್ಲೂ ರಾಜಸ್ತಾನದ ಮಕ್ರಾನಾದಲ್ಲಿ ನಡೆದ ಸಭೆಯಲ್ಲೂ ಇದೇ ಮಾತನ್ನು ಹೇಳಿದ್ದಾರೆ. ಆಗಸ್ಟ್ 2012ರಲ್ಲಿ ಬಿಜೆಪಿ ನಾಯಕ ಮುಕ್ತಾರ್ ನಕ್ವಿ ಸಹಾ ಇದೇ ಮಾತನ್ನು ಹೇಳಿ, ‘ಬಿರಿಯಾನಿ ತಿನ್ನಿಸಿದ್ದು ಸಾಕು, ಬೇಗನೇ ಗಲ್ಲಿಗೇರಿಸಬೇಕು’ ಎಂದಿದ್ದರು.

ವಾಸ್ತವವೇನು?

ಮಾರ್ಚ್ 2015ರಲ್ಲಿ ಉಜ್ವಲ್ ನಿಕಮ್ ಅವರು ವರದಿಗಾರರಿಗೆ (ಟೈಮ್ಸ್ ಆಫ್ ಇಂಡಿಯಾದಲ್ಲಿ ವಿವರವಾಗಿ ಪ್ರಕಟಗೊಂಡಿದೆ) ಹೇಳಿದ ಮಾತು ಏನಿತ್ತು ನೋಡೋಣ. ‘ಕಸಬ್‍ನ ಪರವಾಗಿ ಒಂದು ಭಾವನಾತ್ಮಕ ಅಲೆ ಏಳುತ್ತಿದೆಯೆಂದು ನನಗೆ ಅನ್ನಿಸಿತು. ರಕ್ಷಾಬಂಧನದ ದಿನ ಆತನ ಕಣ್ಣುಗಳಲ್ಲಿ ನೀರಿತ್ತು ಎಂದೆಲ್ಲಾ ಪತ್ರಕರ್ತರು ಬರೆಯುತ್ತಿದ್ದರು. ಆಗ ನಾನು ಆತ ಬಿರಿಯಾನಿ ಕೇಳಿದನೆಂದೂ, ಅದನ್ನು ಒದಗಿಸಲಾಗಿದೆಯೆಂದೂ ಒಂದು ಸುಳ್ಳನ್ನು ಹರಿಯಬಿಟ್ಟೆ. ಅವತ್ತು ಅದರ ಅಗತ್ಯವಿತ್ತೆಂದು ನನಗನ್ನಿಸಿತು’

ಇಂಡಿಯನ್ ಎಕ್ಸ್‍ಪ್ರೆಸ್‍ನಲ್ಲಿ ‘ಅವರಿಗೆ ಬಿರಿಯಾನಿಯೇಕೆ ಉಣ್ಣಿಸಬೇಕು?’ ಎಂಬ ಟೈಟಲ್ ಜೊತೆಗೆ ಬಂದ ವರದಿಯು ಸಾರ್ವಜನಿಕ ವಲಯದಲ್ಲಿ ಸಿಟ್ಟೆಬ್ಬಿಸುತ್ತು. ಉಜ್ವಲ್ ನಿಕಂರ ಈ ಹೇಳಿಕೆಯ ಕುರಿತು ಮಹಾರಾಷ್ಟ್ರ ಸರ್ಕಾರವು ಸ್ಪಷ್ಟೀಕರಣ ಕೇಳಿತ್ತೆಂದು ಹೇಳಲಾಗುತ್ತಿದೆ. ಇದೊಂದು ಸುಳ್ಳು ಕಥೆಯಾಗಿತ್ತು.

ಇನ್ನು ಎರಡನೇ ಸುಳ್ಳು ಬಿರಿಯಾನಿ ಕಥೆ.

ಪ್ರಧಾನಿ ನರೇಂದ್ರ ಮೋದಿಯವರು ಇದ್ದಕ್ಕಿದ್ದಂತೆ ನವಾಜ್ ಷರೀಫ್‍ರ ಹುಟ್ಟು ಹಬ್ಬದ ದಿನ ಲಾಹೋರಿನ ಅವರ ಮನೆಗೆ ಭೇಟಿ ಕೊಟ್ಟಾಗ ಬಿರಿಯಾನಿ ತಿಂದುಬಂದರೆಂಬುದು. ಇದೂ ಸುಳ್ಳು. ನರೇಂದ್ರ ಮೋದಿಯವರು ಸಸ್ಯಾಹಾರಿಯಾಗಿದ್ದು, ಅವರು ಬಿರಿಯಾನಿ ತಿಂದಿಲ್ಲ. ಅಂದು ನವಾಜ್ ಷರೀಫ್‍ರ ಮನೆಯಲ್ಲಿ ಮೋದಿಯವರಿಗೆ ಅವರ ಇಷ್ಟದ ಸಾಗ್, ದಾಲ್ ಅನ್ನು ಬಡಿಸಲಾಗಿತ್ತು. ಷರೀಫ್‍ರ ಮನೆಗೆ ಅಂದು ಮೋದಿಯವರ ಜೊತೆಗೆ ಬಂದಿದ್ದ 11 ಜನರಿಗೆ ಅಲ್ಲಿ ಈ ತಿನಿಸನ್ನು ಶುದ್ಧ ತುಪ್ಪದಿಂದ ಮಾಡಿ ಬಡಿಸಲಾಯಿತೆಂದು ಅವರ ಮನೆ ಜಾತಿ-ಉಮ್ರ್‍ನ ಮೂಲಗಳು ಹೇಳಿದ್ದನ್ನು ಪಿಟಿಐ ವರದಿ ಮಾಡಿತ್ತು.

https://food.ndtv.com/food-drinks/pm-modis-favourite-dish-served-at-pakistani-pm-nawaz-sharifs-home-1259189http://

ಮೋದಿಯವರು ನವಾಜ್ ಷರೀಫ್‍ರ ಮನೆಗೆ ಹೋಗಿದ್ದು ನಿಜ, ಅಲ್ಲಿ ಅವರಿಗಿಷ್ಟವಾದ ತಿಂಡಿಯನ್ನು ಮಾಡುವಷ್ಟು ಪೂರ್ವನಿರ್ಧಾರಿತವಾಗಿ ಆ ಭೇಟಿ ಇದ್ದಿತ್ತು. ಆದರೆ ಬಿರಿಯಾನಿ ತಿನ್ನಲಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...