Homeಮುಖಪುಟಮೋದಿ ಸರ್ಕಾರಕ್ಕಾದ ಎರಡು ಭಾರಿ ಹಿನ್ನಡೆಗಳು: ಆದರವು ಹಿನ್ನಡೆ ಅನಿಸುತ್ತಿಲ್ಲ!

ಮೋದಿ ಸರ್ಕಾರಕ್ಕಾದ ಎರಡು ಭಾರಿ ಹಿನ್ನಡೆಗಳು: ಆದರವು ಹಿನ್ನಡೆ ಅನಿಸುತ್ತಿಲ್ಲ!

ಕೃಷಿ ಕಾಯ್ದೆಗಳನ್ನು ತಡೆಯುವ ಮತ್ತು ಸಿಎಎ ಪ್ರಕ್ರಿಯೆ ಆರಂಭಿಸದಿರುವ ಎರಡೂ ನಿದರ್ಶನಗಳು ಸರ್ಕಾರದ ಹಿನ್ನಡೆಗಳೇ ಆಗಿವೆ. ಆದರೆ ಅವು ಹಿನ್ನಡೆಗಳಂತೆ ಕಾಣುತ್ತಿಲ್ಲವೇಕೆ?

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಅವಧಿಯಲ್ಲಿ, ಅವರು ತಮ್ಮ ಮೊದಲ ಪ್ರಯತ್ನಗಳಲ್ಲಿ ಒಂದನ್ನು ಹಿಂದಕ್ಕೆ ಪಡೆದರು. ಕೈಗಾರಿಕೆಗಳಿಗೆ ಭೂಸ್ವಾಧೀನ ಕಾನೂನನ್ನು ತಿದ್ದುಪಡಿ ಮಾಡುವುದು ಆ ಮೊದಲ ಪ್ರಯತ್ನವಾಗಿತ್ತು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಿಜೆಪಿ ಸರ್ಕಾರವನ್ನು ಕಟ್ಟಿ ಹಾಕಲು ಯಶಸ್ವಿಯಾದ ಅಪರೂಪದ ಕ್ಷಣವೆಂದು ಇಂದಿಗೂ ಈ ಕ್ರಮವನ್ನು ಪರಿಗಣಿಸಲಾಗಿದೆ. ಮೋದಿಯವರನ್ನು “ಸೂಟ್-ಬೂಟ್ ಸರ್ಕಾರ್” ಎಂದು ಕರೆದಿದ್ದ ರಾಹುಲ್, ಇದು ಕಾರ್ಪೊರೇಟ್ ಭಾರತದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ ಮತ್ತು ಜನಸಾಮಾನ್ಯರ ಹಿತಾಸಕ್ತಿಗಲ್ಲ ಎಂದು ಪ್ರಬಲ ವಿರೋಧ ವ್ಯಕ್ತ ಮಾಡಿದ್ದರು.

ಎರಡನೆಯ ಅವಧಿಯಲ್ಲಿ, ಮೋದಿಯವರು ಈಗಾಗಲೇ ಅಂತಹ ಎರಡು ರೀತಿಯ ಹಿನ್ನಡೆಗಳನ್ನು ಕಂಡಿದ್ದಾರೆ, ಆದರೆ ಅವು ಹಿನ್ನಡೆಗಳಂತೆ ಕಾಣದ ರೀತಿಯಲ್ಲಿ ಮ್ಯಾನೇಜ್ ಮಾಡಿದ್ದಾರೆ.

ಕೃಷಿ ಕಾನೂನು ಪ್ರಕರಣದಲ್ಲಿ ಅರ್ಜಿದಾರರೊಬ್ಬರ ಪರವಾಗಿ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ, ಕೃಷಿ ಕಾನೂನುಗಳ ಅನುಷ್ಠಾನವನ್ನು ತಡೆಯುವ ಸುಪ್ರೀಂ ಕೋರ್ಟ್‌ನ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದರು. ಸ್ಥಗಿತವನ್ನು “ರಾಜಕೀಯ ವಿಜಯ” ಎಂದು ನೋಡಬಾರದು ಮತ್ತು ಪ್ರತಿಭಟನಾಕಾರರು ತಾವು “ಈ ಸುತ್ತನ್ನು ಗೆದ್ದಿದ್ದೇವೆ” ಎಂದು ಭಾವಿಸಬಾರದು ಎಂದು ಹೇಳಿದರು.

ಇದನ್ನೂ ಓದಿ: Breaking: ಕೃಷಿ ಕಾನೂನುಗಳನ್ನು ಒಂದೂವರೆ ವರ್ಷ ತಡೆಯಲ್ಲಿಡಲು ಮುಂದಾದ ಕೇಂದ್ರ!

ಕೃಷಿ ಕಾನೂನುಗಳನ್ನು ಅಮಾನತುಗೊಳಿಸುವುದರ ಬಗ್ಗೆ ಸಾಳ್ವೆಯವರಿಗೆ ಹೆಚ್ಚಿನ ಚಿಂತೆಯಿಲ್ಲ, ಆದರೆ ಹಾಗೆ ಮಾಡಿದರೆ ಭಾರತದ ರೈತರು ಅದನ್ನು ‘ಗೆಲುವು” ಎಂದು ನೋಡುತ್ತಾರೆ ಎಂಬುದು ಅವರ ಚಿಂತೆ. ಅಂದರೆ ಅದು ಸರ್ಕಾರಕ್ಕಾದ ಮುಖಭಂಗ ಎಂಬುದು ಅವರ ಚಿಂತೆಯ ಮೂಲ.

ಕೃಷಿ ಕಾನೂನುಗಳು ಶೀಘ್ರದಲ್ಲೇ ಜಾರಿಯಾಗುತ್ತಿಲ್ಲ. ಅನುಷ್ಠಾನವನ್ನು ಒಂದೂವರೆ ವರ್ಷಗಳವರೆಗೆ ಸ್ಥಗಿತಗೊಳಿಸಲು ಸರ್ಕಾರ ಸಿದ್ಧವಿದೆ ಎಂದು ಘೋಷಿಸಲಾಗಿದೆ. ಇದು ಸರ್ಕಾರಕ್ಕೆ ಹಿನ್ನಡೆಯಂತೆ ಕಾಣದಿರಲು ಕಾರಣ, ಕಾನೂನುಗಳನ್ನು ರದ್ದುಗೊಳಿಸಲಾಗಿಲ್ಲ. ಅವನ್ನು ಹಿಂದಕ್ಕೆ ಪಡೆಯುವ ಮಾತನ್ನು ಆಡಿಲ್ಲ. ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಪ್ರತಿಭಟಿಸುತ್ತಿರುವವರ ಬೇಡಿಕೆಯ ಮುಂದೆ ರಾಜಕೀಯವಾಗಿ ಶರಣಾಗಲಿಲ್ಲ ಎಂದು ಸರ್ಕಾರ ಹೇಳಬಹುದು. ಈ ಸಂದರ್ಭದಲ್ಲಿ ರೈತರು ಬಿಗಿ ನಿಲುವಿಗೆ ಅಂಟಿಕೊಂಡಿದ್ದರೂ ಕೂಡ ಎರಡೂ ಕಡೆಯವರು ಗೆದ್ದೆವು ಎಂದು ಅಂದುಕೊಳ್ಳಬಹುದು.
ಮುಖ ಉಳಿಸಿಕೊಳ್ಳುವ ಸರ್ಕಾರದ ಈ ನಿರ್ಗಮನವು ಒಂದು ಹಿನ್ನಡೆಯೇ ಆಗಿದೆ. ವಾಸ್ತವದ ಸಂಗತಿಯೆಂದರೆ, ಹೊಸ ಕೃಷಿ ಕಾನೂನುಗಳಿಂದ ತೊಂದರೆಗೊಳಗಾದ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಂಡಿಗಳನ್ನು ನಾವು ನೋಡಲು ಹೋಗುವುದಿಲ್ಲ. ಕೃಷಿ ಮಾರಾಟವನ್ನು ಖಾಸಗೀಕರಣಗೊಳಿಸುವುದು ಸರ್ಕಾರದ ಉದ್ದೇಶವಾಗಿದ್ದರೆ, ಅದು ಆಗುತ್ತಿಲ್ಲ. ಕನಿಷ್ಠ 2021 ರಲ್ಲಿ ಅಂತೂ ಸಾಧ್ಯವಿಲ್ಲ. ಕನಿಷ್ಠ ಫೆಬ್ರವರಿ-ಮಾರ್ಚ್ 2022 ರಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಯವರೆಗೂ ಅದು ಸಂಭವಿಸಲಾರದು. ತದನಂತರ ಲೋಕಸಭಾ ಚುನಾವಣೆಯು ತುಂಬಾ ಹತ್ತಿರದಲ್ಲಿರುತ್ತದೆ.

ಸಿಎಎ, ಕೊರೊನಾ: ಅಸ್ಸಾಂ-ಬಂಗಾಳ ಚುನಾವಣೆ

ಅಂತೆಯೇ, 2019 ರ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಈಗ ರಾಜಕೀಯ ಚರ್ಚೆಯಿಂದ ಹೊರಬಂದಿದೆ. ಇದು ಕೂಡ ಮಹತ್ವದ ಕಾನೂನೇ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಕೂಡ ಹಿನ್ನಡೆ ಅನುಭವಿಸಿದೆ. ಕೋವಿಡ್ ಕಾರಣಕ್ಕೆ ಕೇವಲ ಎನ್‌ಪಿಆರ್ ಮಾತ್ರವಲ್ಲ ಜನಗಣತಿಯನ್ನು ಕೂಡ ನಿಲ್ಲಿಸಿದ್ದಾರೆ.

ಎನ್‌ಆರ್‌ಸಿ-ಎನ್‌ಪಿಆರ್-ಸಿಎಎ ಕಾನೂನುಗಳ ವಿರುದ್ಧ 2019 ರಲ್ಲಿ ಪ್ರತಿಭಟನೆಗಳು ಪ್ರಾರಂಭವಾದಾಗ, ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ನಡೆಸುವ ಉದ್ದೇಶವನ್ನು ಎಂದಿಗೂ ಹೊಂದಿಲ್ಲ ಎಂದು ಸರ್ಕಾರ ನಟಿಸಿತು. ಆದರೆ ಈಗ ಅವರು ಸಿಎಎಗೆ ಹಿಂದಿರುಗಿದ್ದಾರೆಂದು ತೋರುತ್ತದೆಯಾದರೂ ಅದರ ಲಕ್ಷಣಗಳು ದಟ್ಟವಾಗಿಲ್ಲ. ಕೃಷಿ ಕಾನೂನುಗಳಂತೆ, ಸಿಎಎ ಕಾನೂನಾಗಿ ಉಳಿಯುತ್ತದೆ. ಕಾನೂನನ್ನು ಕಾರ್ಯಗತಗೊಳಿಸಲು ಸರ್ಕಾರವು ನಿಯಮಗಳನ್ನು ಬಿಡುಗಡೆ ಮಾಡದ ಕಾರಣ ಅದನ್ನೇನೂ ಕಾನೂನು ದಸ್ತಾವೇಜಿನಿಂದ ಪುಸ್ತಕಗಳಿಂದ ತೆಗೆದುಹಾಕಬೇಕಾಗಿಲ್ಲ.

ಇದನ್ನೂ ಓದಿ:  ಸಿಎಎ ಜಾರಿ ವಿಳಂಬ: ನಿಯಮ ರೂಪಿಸುವಲ್ಲಿ ವಿಫಲವಾದ ಕೇಂದ್ರ ಸರ್ಕಾರ

ಆದ್ದರಿಂದ, ಸೈದ್ಧಾಂತಿಕವಾಗಿ, ಸರ್ಕಾರವು ಯಾವುದೇ ಹೊತ್ತಿನಲ್ಲಿ ಸಿಎಎ ನಿಯಮಗಳನ್ನು ತರಬಹುದು. ಆದರೆ ಅದು ಅಸ್ಸಾಂ, ಪಶ್ಚಿಮ ಬಂಗಾಳ ಚುನಾವಣೆಗಳಲ್ಲಿ ತಿರುಗುಬಾಣ ಆಗಬಹುದು ಎಂಬ ಭಯದಲ್ಲಿ ಸರ್ಕಾರವಿದೆ.

ಗೃಹ ಸಚಿವ ಅಮಿತ್ ಶಾ ಡಿಸೆಂಬರ್‌ನಲ್ಲಿ, “ಸಿಎಎ ನಿಯಮಗಳನ್ನು ಇನ್ನೂ ರೂಪಿಸಿಲ್ಲ, ಏಕೆಂದರೆ ಕೊರೊನಾ ಕಾರಣದಿಂದಾಗಿ ಇಂತಹ ಬೃಹತ್ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದಿಲ್ಲ. ವ್ಯಾಕ್ಸಿನೇಷನ್ ಪ್ರಾರಂಭವಾದ ತಕ್ಷಣ ನಾವು ಅದನ್ನು ಪರಿಗಣಿಸುತ್ತೇವೆ” ಎಂದಿದ್ದನ್ನು ಗಮನಿಸಿ.

ಪ್ರತಿಭಟನೆಯ ಶಕ್ತಿ

ಕೃಷಿ ಕಾಯ್ದೆಗಳನ್ನು ತಡೆಯುವ ಮತ್ತು ಸಿಎಎ ಪ್ರಕ್ರಿಯೆ ಆರಂಭಿಸದಿರುವ ಎರಡೂ ನಿದರ್ಶನಗಳು ಸರ್ಕಾರದ ಹಿನ್ನಡೆಗಳೇ ಆಗಿವೆ. ಈ ಹಿನ್ನಡೆಗಳಿಗೆ ಕಾರಣ ಅಂತಾ ಒಂದಿದ್ದರೆ ಅದು ಸಾರ್ವಜನಿಕರ ಪ್ರತಿಭಟನೆಯಾಗಿದೆ. ಸಂಸತ್ತು, ಪ್ರತಿಪಕ್ಷಗಳು, ಮಾಧ್ಯಮಗಳು, ನ್ಯಾಯಾಂಗ – ಇಂದು ಯಾವುದೇ ಸಂಸ್ಥೆಗಳು ಸಮತೋಲನದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಇದಕ್ಕಾಗಿಯೇ ಪ್ರತಿಭಟನೆ – ಶಾಂತಿಯುತ ಪ್ರತಿಭಟನೆ – ಪ್ರಜಾಪ್ರಭುತ್ವದ ಕೇಂದ್ರಬಿಂದುವಾಗಿದೆ, ಮತ್ತು ಇದಕ್ಕಾಗಿಯೇ ಪ್ರತಿಭಟನಾಕಾರರನ್ನು ಅತ್ಯಂತ ಕಠಿಣ ಕಾನೂನುಗಳ ಅಡಿಯಲ್ಲಿ ಗುರುತಿಸಿ ಅನೇಕ ಪ್ರಕರಣಗಳೊಂದಿಗೆ ತಳುಕು ಹಾಕಿ ಬಂಧನ ಮಾಡಲಾಗುತ್ತಿದೆ.

ಕೃಪೆ: ಶಿವಂ ವಿಜ್ (ದಿ ಪ್ರಿಂಟ್)


ಇದನ್ನೂ ಓದಿ: ಜೋ ಬೈಡನ್ ಆಡಳಿತದಿಂದ RSS-BJP ಸಂಪರ್ಕ ಹೊಂದಿರುವ ಡೆಮಾಕ್ರಟ್‌ಗಳು ಹೊರಕ್ಕೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಿಲಯನ್ಸ್ ಇಂಡಸ್ಟ್ರೀಸ್‌ಗೆ ರೂ. 56.44 ಕೋಟಿ ಸಿಜಿಎಸ್‌ಟಿ ದಂಡ

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಅಹಮದಾಬಾದ್‌ನ ಸಿಜಿಎಸ್‌ಟಿ ಜಂಟಿ ಆಯುಕ್ತರಿಂದ 56.44 ಕೋಟಿ ರೂ. ದಂಡದ ಆದೇಶವನ್ನು ಸ್ವೀಕರಿಸಿದೆ ಎಂದು ಶುಕ್ರವಾರ ತಿಳಿಸಿದೆ. ನವೆಂಬರ್ 25 ರಂದು ಹೊರಡಿಸಲಾದ ಆದೇಶದಲ್ಲಿ, ಕಂಪನಿಯ ಇನ್‌ಪುಟ್...

ತಮಿಳುನಾಡು| ರಸ್ತೆ ಅಪಘಾತದಲ್ಲಿ ಇಬ್ಬರು ದಲಿತ ಯುವಕರು ಸಾವು; ಜಾತಿ ವೈಷಮ್ಯ ಆರೋಪ

ತಮಿಳುನಾಡಿನ ಧರ್ಮಪುರಿಯಲ್ಲಿ ಬುಧವಾರ ರಾತ್ರಿ ಚಿನ್ನಾರ್ಥಳ್ಳಿ ಕೂಟ್ ರಸ್ತೆಯ ಬಳಿ ಅಪರಿಚಿತ ವಾಹನವೊಂದು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸೊನ್ನಂಪಟ್ಟಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಎಂದು...

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...