Homeಮುಖಪುಟಮೋದಿ ಸರ್ಕಾರಕ್ಕಾದ ಎರಡು ಭಾರಿ ಹಿನ್ನಡೆಗಳು: ಆದರವು ಹಿನ್ನಡೆ ಅನಿಸುತ್ತಿಲ್ಲ!

ಮೋದಿ ಸರ್ಕಾರಕ್ಕಾದ ಎರಡು ಭಾರಿ ಹಿನ್ನಡೆಗಳು: ಆದರವು ಹಿನ್ನಡೆ ಅನಿಸುತ್ತಿಲ್ಲ!

ಕೃಷಿ ಕಾಯ್ದೆಗಳನ್ನು ತಡೆಯುವ ಮತ್ತು ಸಿಎಎ ಪ್ರಕ್ರಿಯೆ ಆರಂಭಿಸದಿರುವ ಎರಡೂ ನಿದರ್ಶನಗಳು ಸರ್ಕಾರದ ಹಿನ್ನಡೆಗಳೇ ಆಗಿವೆ. ಆದರೆ ಅವು ಹಿನ್ನಡೆಗಳಂತೆ ಕಾಣುತ್ತಿಲ್ಲವೇಕೆ?

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಅವಧಿಯಲ್ಲಿ, ಅವರು ತಮ್ಮ ಮೊದಲ ಪ್ರಯತ್ನಗಳಲ್ಲಿ ಒಂದನ್ನು ಹಿಂದಕ್ಕೆ ಪಡೆದರು. ಕೈಗಾರಿಕೆಗಳಿಗೆ ಭೂಸ್ವಾಧೀನ ಕಾನೂನನ್ನು ತಿದ್ದುಪಡಿ ಮಾಡುವುದು ಆ ಮೊದಲ ಪ್ರಯತ್ನವಾಗಿತ್ತು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಿಜೆಪಿ ಸರ್ಕಾರವನ್ನು ಕಟ್ಟಿ ಹಾಕಲು ಯಶಸ್ವಿಯಾದ ಅಪರೂಪದ ಕ್ಷಣವೆಂದು ಇಂದಿಗೂ ಈ ಕ್ರಮವನ್ನು ಪರಿಗಣಿಸಲಾಗಿದೆ. ಮೋದಿಯವರನ್ನು “ಸೂಟ್-ಬೂಟ್ ಸರ್ಕಾರ್” ಎಂದು ಕರೆದಿದ್ದ ರಾಹುಲ್, ಇದು ಕಾರ್ಪೊರೇಟ್ ಭಾರತದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ ಮತ್ತು ಜನಸಾಮಾನ್ಯರ ಹಿತಾಸಕ್ತಿಗಲ್ಲ ಎಂದು ಪ್ರಬಲ ವಿರೋಧ ವ್ಯಕ್ತ ಮಾಡಿದ್ದರು.

ಎರಡನೆಯ ಅವಧಿಯಲ್ಲಿ, ಮೋದಿಯವರು ಈಗಾಗಲೇ ಅಂತಹ ಎರಡು ರೀತಿಯ ಹಿನ್ನಡೆಗಳನ್ನು ಕಂಡಿದ್ದಾರೆ, ಆದರೆ ಅವು ಹಿನ್ನಡೆಗಳಂತೆ ಕಾಣದ ರೀತಿಯಲ್ಲಿ ಮ್ಯಾನೇಜ್ ಮಾಡಿದ್ದಾರೆ.

ಕೃಷಿ ಕಾನೂನು ಪ್ರಕರಣದಲ್ಲಿ ಅರ್ಜಿದಾರರೊಬ್ಬರ ಪರವಾಗಿ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ, ಕೃಷಿ ಕಾನೂನುಗಳ ಅನುಷ್ಠಾನವನ್ನು ತಡೆಯುವ ಸುಪ್ರೀಂ ಕೋರ್ಟ್‌ನ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದರು. ಸ್ಥಗಿತವನ್ನು “ರಾಜಕೀಯ ವಿಜಯ” ಎಂದು ನೋಡಬಾರದು ಮತ್ತು ಪ್ರತಿಭಟನಾಕಾರರು ತಾವು “ಈ ಸುತ್ತನ್ನು ಗೆದ್ದಿದ್ದೇವೆ” ಎಂದು ಭಾವಿಸಬಾರದು ಎಂದು ಹೇಳಿದರು.

ಇದನ್ನೂ ಓದಿ: Breaking: ಕೃಷಿ ಕಾನೂನುಗಳನ್ನು ಒಂದೂವರೆ ವರ್ಷ ತಡೆಯಲ್ಲಿಡಲು ಮುಂದಾದ ಕೇಂದ್ರ!

ಕೃಷಿ ಕಾನೂನುಗಳನ್ನು ಅಮಾನತುಗೊಳಿಸುವುದರ ಬಗ್ಗೆ ಸಾಳ್ವೆಯವರಿಗೆ ಹೆಚ್ಚಿನ ಚಿಂತೆಯಿಲ್ಲ, ಆದರೆ ಹಾಗೆ ಮಾಡಿದರೆ ಭಾರತದ ರೈತರು ಅದನ್ನು ‘ಗೆಲುವು” ಎಂದು ನೋಡುತ್ತಾರೆ ಎಂಬುದು ಅವರ ಚಿಂತೆ. ಅಂದರೆ ಅದು ಸರ್ಕಾರಕ್ಕಾದ ಮುಖಭಂಗ ಎಂಬುದು ಅವರ ಚಿಂತೆಯ ಮೂಲ.

ಕೃಷಿ ಕಾನೂನುಗಳು ಶೀಘ್ರದಲ್ಲೇ ಜಾರಿಯಾಗುತ್ತಿಲ್ಲ. ಅನುಷ್ಠಾನವನ್ನು ಒಂದೂವರೆ ವರ್ಷಗಳವರೆಗೆ ಸ್ಥಗಿತಗೊಳಿಸಲು ಸರ್ಕಾರ ಸಿದ್ಧವಿದೆ ಎಂದು ಘೋಷಿಸಲಾಗಿದೆ. ಇದು ಸರ್ಕಾರಕ್ಕೆ ಹಿನ್ನಡೆಯಂತೆ ಕಾಣದಿರಲು ಕಾರಣ, ಕಾನೂನುಗಳನ್ನು ರದ್ದುಗೊಳಿಸಲಾಗಿಲ್ಲ. ಅವನ್ನು ಹಿಂದಕ್ಕೆ ಪಡೆಯುವ ಮಾತನ್ನು ಆಡಿಲ್ಲ. ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಪ್ರತಿಭಟಿಸುತ್ತಿರುವವರ ಬೇಡಿಕೆಯ ಮುಂದೆ ರಾಜಕೀಯವಾಗಿ ಶರಣಾಗಲಿಲ್ಲ ಎಂದು ಸರ್ಕಾರ ಹೇಳಬಹುದು. ಈ ಸಂದರ್ಭದಲ್ಲಿ ರೈತರು ಬಿಗಿ ನಿಲುವಿಗೆ ಅಂಟಿಕೊಂಡಿದ್ದರೂ ಕೂಡ ಎರಡೂ ಕಡೆಯವರು ಗೆದ್ದೆವು ಎಂದು ಅಂದುಕೊಳ್ಳಬಹುದು.
ಮುಖ ಉಳಿಸಿಕೊಳ್ಳುವ ಸರ್ಕಾರದ ಈ ನಿರ್ಗಮನವು ಒಂದು ಹಿನ್ನಡೆಯೇ ಆಗಿದೆ. ವಾಸ್ತವದ ಸಂಗತಿಯೆಂದರೆ, ಹೊಸ ಕೃಷಿ ಕಾನೂನುಗಳಿಂದ ತೊಂದರೆಗೊಳಗಾದ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಂಡಿಗಳನ್ನು ನಾವು ನೋಡಲು ಹೋಗುವುದಿಲ್ಲ. ಕೃಷಿ ಮಾರಾಟವನ್ನು ಖಾಸಗೀಕರಣಗೊಳಿಸುವುದು ಸರ್ಕಾರದ ಉದ್ದೇಶವಾಗಿದ್ದರೆ, ಅದು ಆಗುತ್ತಿಲ್ಲ. ಕನಿಷ್ಠ 2021 ರಲ್ಲಿ ಅಂತೂ ಸಾಧ್ಯವಿಲ್ಲ. ಕನಿಷ್ಠ ಫೆಬ್ರವರಿ-ಮಾರ್ಚ್ 2022 ರಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಯವರೆಗೂ ಅದು ಸಂಭವಿಸಲಾರದು. ತದನಂತರ ಲೋಕಸಭಾ ಚುನಾವಣೆಯು ತುಂಬಾ ಹತ್ತಿರದಲ್ಲಿರುತ್ತದೆ.

ಸಿಎಎ, ಕೊರೊನಾ: ಅಸ್ಸಾಂ-ಬಂಗಾಳ ಚುನಾವಣೆ

ಅಂತೆಯೇ, 2019 ರ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಈಗ ರಾಜಕೀಯ ಚರ್ಚೆಯಿಂದ ಹೊರಬಂದಿದೆ. ಇದು ಕೂಡ ಮಹತ್ವದ ಕಾನೂನೇ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಕೂಡ ಹಿನ್ನಡೆ ಅನುಭವಿಸಿದೆ. ಕೋವಿಡ್ ಕಾರಣಕ್ಕೆ ಕೇವಲ ಎನ್‌ಪಿಆರ್ ಮಾತ್ರವಲ್ಲ ಜನಗಣತಿಯನ್ನು ಕೂಡ ನಿಲ್ಲಿಸಿದ್ದಾರೆ.

ಎನ್‌ಆರ್‌ಸಿ-ಎನ್‌ಪಿಆರ್-ಸಿಎಎ ಕಾನೂನುಗಳ ವಿರುದ್ಧ 2019 ರಲ್ಲಿ ಪ್ರತಿಭಟನೆಗಳು ಪ್ರಾರಂಭವಾದಾಗ, ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ನಡೆಸುವ ಉದ್ದೇಶವನ್ನು ಎಂದಿಗೂ ಹೊಂದಿಲ್ಲ ಎಂದು ಸರ್ಕಾರ ನಟಿಸಿತು. ಆದರೆ ಈಗ ಅವರು ಸಿಎಎಗೆ ಹಿಂದಿರುಗಿದ್ದಾರೆಂದು ತೋರುತ್ತದೆಯಾದರೂ ಅದರ ಲಕ್ಷಣಗಳು ದಟ್ಟವಾಗಿಲ್ಲ. ಕೃಷಿ ಕಾನೂನುಗಳಂತೆ, ಸಿಎಎ ಕಾನೂನಾಗಿ ಉಳಿಯುತ್ತದೆ. ಕಾನೂನನ್ನು ಕಾರ್ಯಗತಗೊಳಿಸಲು ಸರ್ಕಾರವು ನಿಯಮಗಳನ್ನು ಬಿಡುಗಡೆ ಮಾಡದ ಕಾರಣ ಅದನ್ನೇನೂ ಕಾನೂನು ದಸ್ತಾವೇಜಿನಿಂದ ಪುಸ್ತಕಗಳಿಂದ ತೆಗೆದುಹಾಕಬೇಕಾಗಿಲ್ಲ.

ಇದನ್ನೂ ಓದಿ:  ಸಿಎಎ ಜಾರಿ ವಿಳಂಬ: ನಿಯಮ ರೂಪಿಸುವಲ್ಲಿ ವಿಫಲವಾದ ಕೇಂದ್ರ ಸರ್ಕಾರ

ಆದ್ದರಿಂದ, ಸೈದ್ಧಾಂತಿಕವಾಗಿ, ಸರ್ಕಾರವು ಯಾವುದೇ ಹೊತ್ತಿನಲ್ಲಿ ಸಿಎಎ ನಿಯಮಗಳನ್ನು ತರಬಹುದು. ಆದರೆ ಅದು ಅಸ್ಸಾಂ, ಪಶ್ಚಿಮ ಬಂಗಾಳ ಚುನಾವಣೆಗಳಲ್ಲಿ ತಿರುಗುಬಾಣ ಆಗಬಹುದು ಎಂಬ ಭಯದಲ್ಲಿ ಸರ್ಕಾರವಿದೆ.

ಗೃಹ ಸಚಿವ ಅಮಿತ್ ಶಾ ಡಿಸೆಂಬರ್‌ನಲ್ಲಿ, “ಸಿಎಎ ನಿಯಮಗಳನ್ನು ಇನ್ನೂ ರೂಪಿಸಿಲ್ಲ, ಏಕೆಂದರೆ ಕೊರೊನಾ ಕಾರಣದಿಂದಾಗಿ ಇಂತಹ ಬೃಹತ್ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದಿಲ್ಲ. ವ್ಯಾಕ್ಸಿನೇಷನ್ ಪ್ರಾರಂಭವಾದ ತಕ್ಷಣ ನಾವು ಅದನ್ನು ಪರಿಗಣಿಸುತ್ತೇವೆ” ಎಂದಿದ್ದನ್ನು ಗಮನಿಸಿ.

ಪ್ರತಿಭಟನೆಯ ಶಕ್ತಿ

ಕೃಷಿ ಕಾಯ್ದೆಗಳನ್ನು ತಡೆಯುವ ಮತ್ತು ಸಿಎಎ ಪ್ರಕ್ರಿಯೆ ಆರಂಭಿಸದಿರುವ ಎರಡೂ ನಿದರ್ಶನಗಳು ಸರ್ಕಾರದ ಹಿನ್ನಡೆಗಳೇ ಆಗಿವೆ. ಈ ಹಿನ್ನಡೆಗಳಿಗೆ ಕಾರಣ ಅಂತಾ ಒಂದಿದ್ದರೆ ಅದು ಸಾರ್ವಜನಿಕರ ಪ್ರತಿಭಟನೆಯಾಗಿದೆ. ಸಂಸತ್ತು, ಪ್ರತಿಪಕ್ಷಗಳು, ಮಾಧ್ಯಮಗಳು, ನ್ಯಾಯಾಂಗ – ಇಂದು ಯಾವುದೇ ಸಂಸ್ಥೆಗಳು ಸಮತೋಲನದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಇದಕ್ಕಾಗಿಯೇ ಪ್ರತಿಭಟನೆ – ಶಾಂತಿಯುತ ಪ್ರತಿಭಟನೆ – ಪ್ರಜಾಪ್ರಭುತ್ವದ ಕೇಂದ್ರಬಿಂದುವಾಗಿದೆ, ಮತ್ತು ಇದಕ್ಕಾಗಿಯೇ ಪ್ರತಿಭಟನಾಕಾರರನ್ನು ಅತ್ಯಂತ ಕಠಿಣ ಕಾನೂನುಗಳ ಅಡಿಯಲ್ಲಿ ಗುರುತಿಸಿ ಅನೇಕ ಪ್ರಕರಣಗಳೊಂದಿಗೆ ತಳುಕು ಹಾಕಿ ಬಂಧನ ಮಾಡಲಾಗುತ್ತಿದೆ.

ಕೃಪೆ: ಶಿವಂ ವಿಜ್ (ದಿ ಪ್ರಿಂಟ್)


ಇದನ್ನೂ ಓದಿ: ಜೋ ಬೈಡನ್ ಆಡಳಿತದಿಂದ RSS-BJP ಸಂಪರ್ಕ ಹೊಂದಿರುವ ಡೆಮಾಕ್ರಟ್‌ಗಳು ಹೊರಕ್ಕೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...