Homeಕರ್ನಾಟಕಉಳವಿಯಲ್ಲಿ ಚನ್ನಬಸವಣ್ಣನ ದಿಟ್ಟ ಹೋರಾಟ : ಶರಣ ಚಳುವಳಿಯ ಮಹತ್ವದ ಮೈಲಿಗಲ್ಲು!

ಉಳವಿಯಲ್ಲಿ ಚನ್ನಬಸವಣ್ಣನ ದಿಟ್ಟ ಹೋರಾಟ : ಶರಣ ಚಳುವಳಿಯ ಮಹತ್ವದ ಮೈಲಿಗಲ್ಲು!

ಕಲ್ಯಾಣ ಕ್ರಾಂತಿಯ ನಂತರ ನೆಲೆ ತಪ್ಪಿದ ಶರಣರು ಗುಂಪು ಗುಂಪಾಗಿ ಎಲ್ಲೆಲ್ಲೊ ಚದುರಿ ಹೋಗುತ್ತಾರೆ. ಬಸವಣ್ಣನ ಸೋದರಳಿಯ ಚನ್ನಬಸವಣ್ಣ ತನ್ನ ತಾಯಿ ನಾಗಲಾಂಬಿಕೆ ಮತ್ತು ಶರಣ ತಂಡವೊಂದರೊಂದಿಗೆ ಜೋಯಿಡಾದ ದಟ್ಟ ಅರಣ್ಯದ ಮಧ್ಯದ ಉಳವಿಗೆ ಬರುತ್ತಾರೆ.

- Advertisement -
- Advertisement -

ಹಚ್ಚ ಹಸಿರು ಕಾನನ-ಗಿರಿ-ತೊರೆಗಳ ಅನನ್ಯ ಪ್ರಕೃತಿ ಸೌಂದರ್ಯದ ಮಡಿಲಲ್ಲಿರುವ ಉತ್ತರಕನ್ನಡದ ಜೋಯಿಡಾ ತಾಲ್ಲೂಕಿನ ‘ಉಳವಿ’ 12ನೇ ಶತಮಾನದಲ್ಲಾದ ಶರಣ ಚಳುವಳಿಯ ಅಚ್ಚಳಿಯದ ಗುರುತುಗಳಲ್ಲೊಂದು. ಕಾರವಾರದಿಂದ 75 ಕಿ.ಮೀ ದೂರದಲ್ಲಿರುವ ಉಳವಿಯನ್ನು ಕಾಳಿ ನದಿ ದಾಟಿ ತಲುಪಬಹುದು; ರಸ್ತೆ ಮೂಲಕವಾದರೆ ದಾಂಡೇಲಿಯಿಂದ 11 ಕಿ.ಮೀ ಅಂತರದಲ್ಲಿರುವ ಪಾಟೋಲಿ ಕ್ರಾಸ್‍ಗೆ ಬಂದರೆ, ಎರಡು ಮಾರ್ಗಗಳಿವೆ. ‘ಉಳವಿ’ ಎಂದರೆ ‘ನಾನು ಇಲ್ಲಿ ಉಳಿಯುವೆ’ ಎಂದರ್ಥ ಎಂಬ ಅಭಿಪ್ರಾಯವಿದೆ.

PC : ಪ್ರಜಾವಾಣಿ, (ಬಸವಣ್ಣ)

ಶೋಷಣೆರಹಿತ ಸಮಸಮಾಜದ ಕನಸು ಕಂಡ ಸಾಮಾಜಿಕ ಹೋರಾಟದ ಹರಿಕಾರ ಬಸವಣ್ಣನವರ ಅಕ್ಕ ನಾಗಲಾಂಬಿಕೆಯ ಮಗ ಚನ್ನಬಸವಣ್ಣಾದಿ ಶರಣರು ವೈದಿಕಶಾಹಿಯ ಕ್ರೌರ್ಯ ತಾಳಲಾರದೆ ವಚನ ಸಾಹಿತ್ಯ ಸಂರಕ್ಷಣೆಗಾಗಿ ಈ ಕಾಡು-ಮೇಡಿನ ಉಳವಿಗೆ ಬಂದುಳಿದಿದ್ದರು. ಹಾಗಾಗಿ ಉಳವಿ ಎಂಬ ಹೆಸರು ಬಂತೆನ್ನಲಾದ ಈ ಊರಿಗೆ ಮೊದಲು ‘ವೃಶಾಪುರ’ ಎನ್ನಲಾಗುತ್ತಿತ್ತಂತೆ. ಪ್ರಪಂಚದಲ್ಲೇ ಮೊಟ್ಟಮೊದಲು ಸಮಾನತೆ, ಸ್ವಾತಂತ್ರ್ಯ ಮತ್ತು ಸೋದರತೆ ತತ್ವದರ್ಶನಗಳು ಹುಟ್ಟಿಕೊಂಡ ದಿನಮಾನವೆಂದರೆ ಅದು ಶರಣರ ಯುಗ! ಕಾಯಕ ವರ್ಗ ಸಮಾನತೆಯ ಬದುಕಿಗಾಗಿ ಒಂದೆಡೆ ಸೇರಿ ವೈಚಾರಿಕ-ವೈಜ್ಞಾನಿಕವಾಗಿ ಸತ್ಯ ಶೋಧಿಸುತ್ತಲೇ ಅಸಮಾನತೆಯ ವರ್ಣ ವ್ಯವಸ್ಥೆ, ಅಮಾನವೀಯ ಜಾತಿ ವ್ಯವಸ್ಥೆ, ಅಜ್ಞಾನದ ಲಿಂಗತಾರತಮ್ಯ ಹಾಗೂ ಅವಿವೇಕದ ಕಂದಾಚಾರಗಳಂಥ ವೈದಿಕ ಸ್ಥಾಪಿತ ಹೇಯ-ಬರ್ಬರ ವ್ಯವಸ್ಥೆಯ ವಿರುದ್ಧ ಬಂಡೆದ್ದು ಚಳುವಳಿ ರೂಪಿಸಿದ್ದ ಕ್ರಾಂತಿಕಾರಿ ಕಾಲವದು. ಇಂಥದೊಂದು ಕ್ರಾಂತಿ ವಿಶ್ವದಲ್ಲೇ ಮೊದಲು ನಡೆದದ್ದು ಕನ್ನಡ ನಾಡಲ್ಲಿ.

ಅಭಿವ್ಯಕ್ತಿ ಸ್ವಾತಂತ್ರ್ಯದ ಅನುಭವ ಮಂಟಪ ನಿರ್ಮಿಸಿ ಬಸವಣ್ಣ ಅದರ ನಾಯಕತ್ವವನ್ನು ತಳಸಮುದಾಯಗಳಿಗೆ ಕೊಡುತ್ತಾರೆ. 770 ಶರಣರ(ಪ್ರತಿನಿಧಿಗಳ) ಈ ಅನುಭವ ಪಂಟಪ ಪ್ರಪಂಚದ ಮೊದಲ ಪಾರ್ಲಿಮೆಂಟ್. ಈ ಪಾರ್ಲಿಮೆಂಟ್‍ನ ಮೊದಲ ಸ್ಪೀಕರ್(ಶೂನ್ಯ ಪೀಠಾಧ್ಯಕ್ಷ) ದಲಿತ ಅಲ್ಲಮಪ್ರಭು! ಅಲ್ಲಿ ಸಮಗಾರ ಹರಳಯ್ಯ, ಮಡಿವಾಳ ಮಾಚಯ್ಯ, ಮಾದಾರ ದೊಳಯ್ಯ, ಬ್ರಾಹ್ಮಣ ಮಧುವರಸ, ಚನ್ನಬಸವಣ್ಣ, ಕುರುಬರ ಬೊಮ್ಮಣ್ಣ, ಡೋಹರ ಕಕ್ಕಯ್ಯ…ಮುಂತಾದ ಶರಣರು ಮತ್ತು ಮಹಿಳಾ ಶರಣೆಯರಾದ ಅಕ್ಕಮಹಾದೇವಿ, ಗಂಗಾಂಬಿಕೆ, ನೀಲಾಂಬಿಕೆ, ಸೂಳೆಸಂಕವ್ವ, ಸತ್ಯಕ್ಕ ಹೀಗೆ ಹಲವು ಜಾತಿಯ ಶರಣ-ಶರಣೆಯರು ಸೇರಿ ಸಮಾಜದ ಗುಣಾವಗುಣ, ನಾಡಿನ ಸಮಸ್ಯೆ, ತಮ್ಮ ಕಾರ್ಯನಿರತ ಅನುಭವಗಳನ್ನೆಲ್ಲ ಗಂಭೀರವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು. ವಿಶ್ವದ ಯಾವ ದೇಶದಲ್ಲೂ ಸಂವಿಧಾನವೇ ರಚನೆಯಾಗದ ಸಂದರ್ಭದಲ್ಲಿ ದಲಿತರು, ಹಿಂದುಳಿದವರು ಮತ್ತು ಮಹಿಳೆಯರು ಸಮಾನತೆ, ಸ್ವಾತಂತ್ರ್ಯ, ಸೋದರತೆ, ಮೀಸಲಾತಿ, ಧಾರ್ಮಿಕ ಹಕ್ಕುಗಳ ಬಗೆಗೆ ಎಲ್ಲ ವೈಚಾರಿಕ-ವೈಜ್ಞಾನಿಕ ವಚನ ರಚಿಸಿದ್ದು ಅಚ್ಚಳಿಯದೆ ಐತಿಹಾಸಿಕ ದಾಖಲೆಯೇ ಸರಿ!

ವರ್ಣ ವ್ಯವಸ್ಥೆಯ ಕಟ್ಟಕಡೆಯ ಅಸ್ಪೃಶ್ಯ ದಲಿತ ಸಮುದಾಯದ ಸಮಗಾರ ಹರಳಯ್ಯ ಕೂಡ ಈ ವ್ಯವಸ್ಥೆಯಲ್ಲಿ ಲಿಂಗ ದೀಕ್ಷೆ ಪಡೆಯುತ್ತಾರೆ; ಬಿಜ್ಜಳನ ಆಸ್ಥಾನದ ಮಧುವರಸ ತನ್ನ ಪೂರ್ವಿಕರು ಮಾಡಿದ ಮೋಸ-ವಂಚನೆ ಗೊತ್ತಾಗಿ ಬಸವಣ್ಣನ ಬಳಿ ಬಂದು ಲಿಂಗವಂತನಾಗುತ್ತಾನೆ. ಇದು ಜಾತಿ ವಿನಾಶದ ನಾಂದಿಗೆ ಸುಸಂದರ್ಭವೆಂದು ಬಗೆದ ಬಸವಣ್ಣ ಮತ್ತು ಶರಣರು ಮಧುವರಸನ ಮಗಳು ಕಲ್ಯಾಣವತಿ ಮತ್ತು ಹರಳಯ್ಯನ ಮಗ ಶೀಲವಂತನಿಗೆ ಮದುವೆ ಮಾಡಿಸಲು ಮುಂದಾಗುತ್ತಾರೆ.

PC : ಬಸವ ಸೇನೆ, (ಚನ್ನಬಸವಣ್ಣ)

ಇದು ಕರ್ಮಠ ಮನುವಾದಿಗಳನ್ನು ಬೆಚ್ಚಿಬೀಳಿಸುತ್ತದೆ! ಕೆರಳಿದ ವೈದಿಕರು ಇದೊಂದು ಧರ್ಮಬಾಹಿರ, ರಾಜಧರ್ಮ ವಿರುದ್ಧದ ಮದುವೆಯೆಂದು ಗುಲ್ಲೆಬ್ಬಿಸಿ ಗಲಾಟೆ-ಹಿಂಸೆ-ರಕ್ತಪಾತಕ್ಕೆ ಪ್ರಚೋದಿಸುತ್ತಾರೆ! ರಾಜ ಬಿಜ್ಜಳ ಮತ್ತು ವೈದಿಕಶಾಹಿಯ ವಿರೋಧ, ಈ ಮಾನವಹಕ್ಕು ಮತ್ತು ಮಾನವೀಯತೆ ಪ್ರತಿಪಾದಿಸುವ ಈ ಅಂತರ್ಜಾತಿ ವಿವಾಹಕ್ಕಿದ್ದರೂ ಶರಣರು ಅಂಜದೆ-ಅಳುಕದೆ ಮದುವೆ ಮಾಡಿಮುಗಿಸುತ್ತಾರೆ. ತಮ್ಮ ಶೋಷಕ ವೃತ್ತಿಗಿದು ಗಂಡಾಂತರಕಾರಿ ಪರಿವರ್ತನೆಯೆಂದು ಭಾವಿಸಿದ ಸತಾತನವಾದಿಗಳು ಸಿಕ್ಕಸಿಕ್ಕ ಶರಣರ ಮಾರಣಹೋಮ ನಡೆಸುತ್ತಾರೆ; ವಿಭೂತಿ-ರುದ್ರಾಕ್ಷಿ-ವಚನಗಳನ್ನು ಕಂಡಲ್ಲಿ ಸುಟ್ಟುಹಾಕುತ್ತಾರೆ. ಶರಣ ಕಣ್ಣುಗಳನ್ನು ಕೀಳಿಸಿ, ಆನೆ ಕಾಲಿಗೆ ಕಟ್ಟಿ ಎಳೆಸುತ್ತಾರೆ. ಗಜ ಕಾಲುಗಳಿಂದ ನೂರಾರು ಶರಣರ ತಲೆ ತುಳಿಸಿ ಕೊಂದುಹಾಕುತ್ತಾರೆ. ಶರಣ ಸಿದ್ಧಾಂತದ ಸಂಪತ್ತಾಗಿದ್ದ ವಚನಗಳ ಉಳಿಸಲು ಶರಣರು ದೇಶಾಂತರ ಹೋಗಬೇಕಾಗಿ ಬರುತ್ತದೆ. ಇವೆಲ್ಲಾ ಶರಣರ ಬಗ್ಗೆ ಮೂಡಿರುವ ಪುರಾಣಗಳಲ್ಲಿ ದಾಖಲಾಗಿರುವ ಸಂಗತಿಗಳು.

ಕಲ್ಯಾಣ ಕ್ರಾಂತಿಯ ನಂತರ ನೆಲೆ ತಪ್ಪಿದ ಶರಣರು ಗುಂಪು ಗುಂಪಾಗಿ ಎಲ್ಲೆಲ್ಲೊ ಚದುರಿ ಹೋಗುತ್ತಾರೆ. ಬಸವಣ್ಣನ ಸೋದರಳಿಯ ಚನ್ನಬಸವಣ್ಣ ತನ್ನ ತಾಯಿ ನಾಗಲಾಂಬಿಕೆ ಮತ್ತು ಶರಣ ತಂಡವೊಂದರೊಂದಿಗೆ ಜೋಯಿಡಾದ ದಟ್ಟ ಅರಣ್ಯದ ಮಧ್ಯದ ಉಳವಿಗೆ ಬರುತ್ತಾರೆ. ಚನ್ನಬಸವಣ್ಣ ನೇತೃತ್ವದ ಶರಣರ ತಂಡ ಪಶ್ಚಿಮ ಘಟ್ಟಗಳ ದುರ್ಗಮ ಕಾಡಿನ ದಾರಿ ಹಿಡಿದ ಮೂಲ ಉದ್ದೇಶವೇ ವಿಧ್ವಂಸಕ ವೈದಿಕರಿಂದ ವಚನ ಸಾಹಿತ್ಯ ಕಾಪಾಡುವುದಾಗಿತ್ತು. ತನ್ನ 12ನೇ ವರ್ಷದಷ್ಟು ಸಣ್ಣ ವಯಸ್ಸಿನಲ್ಲೇ ಅನುಭವ ಮಂಟಪದ ಚರ್ಚಾವೇದಿಕೆಯಲ್ಲಿ ಭಾಗವಹಿಸಿದ್ದ ಹೆಗ್ಗಳಿಕೆಯ ಚನ್ನಬಸವಣ್ಣ ಅಪಾರ ವಿದ್ವತ್ತಿನ ಶರಣ. ಆಧ್ಯಾತ್ಮಿಕ ತರ್ಕ, ಸಮಾನತೆಯ ವಿಚಾರಧಾರೆ, ಪ್ರಬುದ್ಧ ವಚನ ರಚನೆಗಳ ಮೂಲಕ ಅಜ್ಞಾನ, ಅಸಮಾನತೆ, ಅಸ್ಪೃಶ್ಯತೆಯಂಥ ಸಾಮಾಜಿಕ ಅನಿಷ್ಠಗಳನ್ನು ತೊಲಗಿಸಲು ಪ್ರಯತ್ನಿಸಿದ್ದವನು. ಸಾಂಪ್ರದಾಯಿಕ ವಚನಗಳ ಪರಿಷ್ಕರಿಸಿ ಷಟ್‍ಸ್ಥಲ ವಚನ ಸಂಪ್ರದಾಯ ಶುರುಮಾಡಿದ್ದವನು. ತಮ್ಮ 24ನೇ ವಯಸ್ಸಿನಲ್ಲಿ ಚನ್ನಬಸವಣ್ಣ ಉಳವಿಯಲ್ಲೇ ಜೀವಂತ ಸಮಾಧಿಯಾದರೆಂಬ ಉಲ್ಲೇಖಗಳಿವೆ.

ಸಮಾಧಿ ಸ್ಥಳದಲ್ಲಿ ದೇವಸ್ಥಾನ ಕಟ್ಟಲಾಗಿದೆ. ಉಳವಿ ಧಾರ್ಮಿಕ ಕಾರಣಕ್ಕಾಗಷ್ಟೇ ಅಲ್ಲ, ನಿಸರ್ಗ ಸೊಬಗು, ಗುಹೆಗಳು ಮತ್ತು ನೀರ್ಗೋಲುಗಳಿಂದ ಆಕರ್ಷಣೀಯ ತಾಣವೂ ಆಗಿದೆ. ಉಳವಿ ಸುತ್ತಮುತ್ತ ಚನ್ನಬಸವ ಜಲಪಾತ, ವಚನಕಾರ ಹರಳಯ್ಯ ಚಿಲುಮೆ, ಶರಣೆ ಅಕ್ಕನಾಗಮ್ಮ ಗವಿ, ರುದ್ರಾಕ್ಷಿ ಮಂಟಪ, ವಿಭೂತಿ ಕಣಜ, ಆಕಳ ಗವಿ, ಬೊಮ್ಮಯ್ಯ ನದಿ, ಮಹಾಗವಿ ಮತ್ತು ಪಂಚಲಿಂಗೇಶ್ವರ ಗವಿಗಳಿವೆ. ಸಮಾನತೆಗಾಗಿ ಶ್ರಮಿಸಿದ ಶರಣಚಳವಳಿಯನ್ನು ಮುಗಿಸಿದ ವೈದಿಕರ ಪಾತಕ ಪುರಾಣ ಹೇಳುವ ರೂಪಕಗಳಾಗಿ ನಿಂತಿವೆ.


ಇದನ್ನೂ ಓದಿ: ವಚನ ಚಳವಳಿಯನ್ನು ಪ್ರತಿಫಲಿಸುವ ಲಿಂಗಾಯತ ರಾಜಕೀಯ ಹುಟ್ಟಬಲ್ಲದೇ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...