Homeಮುಖಪುಟನವದೆಹಲಿಯಿಂದ ಜನಸಂಕಲ್ಪ ಸಮಾವೇಶಕ್ಕೆ ಬಂದ ಯುವದನಿ ಉಮರ್ ಖಾಲಿದ್ ಭಾಷಣ ಕನ್ನಡ ಅನುವಾದ

ನವದೆಹಲಿಯಿಂದ ಜನಸಂಕಲ್ಪ ಸಮಾವೇಶಕ್ಕೆ ಬಂದ ಯುವದನಿ ಉಮರ್ ಖಾಲಿದ್ ಭಾಷಣ ಕನ್ನಡ ಅನುವಾದ

- Advertisement -
- Advertisement -

ನಾನು ಹಿಂದಿಯಲ್ಲಿ ಮಾತನಾಡಲು ಅನುಮತಿ ಕೇಳುತ್ತಿದ್ದೇನೆ.

ನಾವೆಲ್ಲರೂ 2019ರ ಚುನಾವಣೆಯ ಮಿಷನ್ ಬಗ್ಗೆ ಬಹಳ ಮಾತಾಡುತ್ತಿದ್ದೇವೆ. ಆದರೆ, 2019ರ ಚುನಾವಣೆಯಲ್ಲಿ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸುವಷ್ಟಕ್ಕೆ ನಮ್ಮ ಮಿಷನ್ ಕೊನೆಯಾಗುವುದಿಲ್ಲ. ಇಂದು ಬಿಡುಗಡೆಯಾದ ರಿಕ್ಲೈಮಿಂಗ್ ರಿಪಬ್ಲಿಕ್ ಅನ್ನು ಜಾರಿಗೊಳಿಸುವುದು ಬಹಳ ಮುಖ್ಯ. ಯಾರೇ ಅಧಿಕಾರಕ್ಕೆ ಬಂದರೂ. ಇವೇ ಇಂದಿನ ಚುನಾವಣೆಯಲ್ಲಿ ಪ್ರಮುಖ ಚರ್ಚೆಯಾಗಬೇಕಿತ್ತು. ಆದರೆ ಚರ್ಚೆ ಯಾವುದು ನಡೆಯುತ್ತಿದೆ?

ಮೋದಿ ಎದುರು ಯಾರು ಎಂಬುದು ಇಲ್ಲಿನ ಮುಖ್ಯ ಚರ್ಚೆಯಾಗಿಬಿಟ್ಟಿದೆ. ಹೇಗೋ ಮಾಡಿ ಈ ಚುನಾವಣೆಯನ್ನು ಮೋದಿ ವರ್ಸಸ್ ರಾಹುಲ್ ಗಾಂಧೀ ಮಾಡುತ್ತಿದ್ದಾರೆ. ಇದು ಇಬ್ಬರ ನಡುವಿನ ಪರ್ಸನಾಲಿಟಿ ಕಂಟೆಸ್ಟ್ ಮಾಡುವಂತಹ ಫ್ಯಾಶನ್ ಶೋ ಅಲ್ಲ. ಇದು ಭಗತ್ ಸಿಂಗ್ ಮತ್ತು ಸಾವರ್ಕರ್ ನಡುವಿನ, ಅಂಬೇಡ್ಕರ್ ಮತ್ತು ಗೋಲ್ವಾಳ್ಕರ್ ನಡುವಿನ ಸಂಘರ್ಷ.

ಮೋದಿಯಿದ್ದರೆ ಸಾಧ್ಯ ಎಂಬ ಒಂದು ಘೋಷಣೆಯಡಿ ಪ್ರಚಾರ ನಡೆಯುತ್ತಿದೆ. ಹೌದು, ಈ 5 ವರ್ಷಗಳಲ್ಲಿ ನಮ್ಮ ದೇಶದಲ್ಲಿ ಏನೇನಾಗಿದೆಯೋ ಅದು ಎಂದೂ ಹಿಂದೆ ಆಗಿರಲಿಲ್ಲ. ಬಾಬಾಸಾಹೇಬರು ನಮಗೆ ಕೊಟ್ಟ ಸಂವಿಧಾನವನ್ನು ಸಮಾನ ಗಣತಂತ್ರವಾಗಿ ಈ ದೇಶ ಇರಬೇಕೆಂದು ಹೇಳುವ ಸಂವಿಧಾನವನ್ನು ಸಂಸತ್ತಿನಿಂಧ ಕೇವಲ 2 ಕಿಮೀ ದೂರದ ಜಾಗದಲ್ಲಿ 9 ಆಗಸ್ಟ್ 2018ರಂದು ಸುಟ್ಟು ಹಾಕಲಾಯಿತು. ಅವರುಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ, ಅವರ ಬಗ್ಗೆ ಯಾವುದೇ ಟಿವಿ ಚರ್ಚೆ ಮಾಡಲಿಲ್ಲ. ಏಕೆ? ಏಕೆಂದರೆ ದೇಶವನ್ನು ಆಳುವವರಿಗೆ ಬೇಕಾಗಿದ್ದನ್ನೇ ಅವರು ಮಾಡಿದ್ದರು.

ಆಸಿಫಾ ಎಂಬ 9 ವರ್ಷದ ಬಾಲಕಿಯ ಮೇಲೆ ಭೀಕರ ಅತ್ಯಾಚಾರ-ಕೊಲೆ ನಡೆದಾಗ ಆ ಪ್ರಕರಣದ ಆರೋಪಿಗಳ ಪರವಾಗಿ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ಮಾಡಲಾಯಿತು. ಮುಸ್ಲಿಮರನ್ನು ಬೀದಿಗಳಲ್ಲಿ ಸಿಗಿದು ಕೊಂದ ಆರೋಪಿಗಳು ಜೈಲಿನಿಂದ ಬಿಡುಗಡೆಯಾದ ನಂತರ ಹಾರ ಹಾಕಿ ಅಭಿನಂದಿಸಲು ಒಬ್ಬ ಯೂನಿಯನ್ ಮಿನಿಸ್ಟರ್ ಹೋಗಿದ್ದರು.

ಇದೆಲ್ಲ ಈ ಹಿಂದೆ ಎಂದೂ ನಡೆದಿರಲಿಲ್ಲ. ಮಧ್ಯರಾತ್ರಿ ನೋಟು ರದ್ಧತಿ ಘೋಷಣೆಯಾಗಿ, ಜನರ ಬದುಕನ್ನು ಹಿಂಡಿ ಹಿಪ್ಪೆ ಮಾಡಿದ್ದು. ಹೌದು ನಾವೂ ಹೇಳುತ್ತೇವೆ ಇದು ಮೋದಿ ಇಲ್ಲದಿದ್ದರೆ ನಡೆಯುತ್ತಿರಲಿಲ್ಲ.

ನೀರವ್ ಮೋದಿ, ಮಲ್ಯ ಮೊದಲಾದ ಎಲ್ಲರೂ ಕದ್ದ ದುಡ್ಡು ಹೊತ್ತು ದೇಶ ಬಿಟ್ಟು ಓಡಿಹೋಗಲು ಅವಕಾಶವಾಗುವಂತಹ ಪರಿಸ್ಥಿತಿ ಸೃಷ್ಟಿಸಲಾಯಿತು. ನೀರವ್ ಮೋದಿ ಕೊನೆಯ ಸಲ ಬಹಿರಂಗವಾಗಿ ಕಾಣಿಸಿಕೊಂಡಿದ್ದು ನರೇಂದ್ರ ಮೋದಿಯವರ ಜೊತೆ ದಾವೂಸ್‍ನಲ್ಲಿ. ಮೋದಿಯವರು ಚೌಕಿದಾರರಲ್ಲ, ಅಂಬಾನಿಯ ನಂಬಿಕಸ್ಥ ಮತ್ತು ದೇಶವನ್ನು ಮಾರುವ ಗುತ್ತಿಗೆದಾರ.

ಈ ದೇಶದಲ್ಲಿ 12000 ರೈತರು ಪ್ರತಿವರ್ಷ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪ್ರಧಾನಮಂತ್ರಿ, ಮೀಡಿಯಾ ಯಾರೂ ಮಾತಾಡದಿದ್ದಾಗ ನಾವು ಅದರ ಬಗ್ಗೆ ಮಾತಾಡಬೇಕು. ಆಹಾರದ ಹಕ್ಕಿನ ಬಗ್ಗೆ ಮಾತಾಡುವುದೂ ಬಹಳ ಮುಖ್ಯ. ಅದನ್ನು ಮಾಡುತ್ತಿದ್ದ ದೊಡ್ಡ ಅರ್ಥಶಾಸ್ತ್ರಜ್ಞ ಜಾನ್ ಡ್ರೀಜ್óರನ್ನು ಜಾರ್ಖಂಡ್‍ನಲ್ಲಿ ಮೊನ್ನೆ ಬಂಧಿಸಲಾಯಿತು, ಪ್ರತಿವರ್ಷ 3000 ಮಕ್ಕಳು ಹಸಿವಿನಿಂದ ಸಾಯುವ ಈ ದೇಶದಲ್ಲಿ ಅದು ಚುನಾವಣೆಯ ಇಶ್ಯೂ ಅಲ್ಲದಿದ್ದರೆ ಇನ್ನು ಯವುದು?

ಪ್ರತಿ ವರ್ಷ ಮ್ಯಾನ್‍ಹೋಲ್‍ನಲ್ಲಿ ಸಾಯುವ ದಲಿತರಿಗಾಗಿ ಒಂದೇ ಒಂದು ರೂಪಾಯಿ ಸಮಾಜ ಕಲ್ಯಾಣ ಇಲಾಖೆ ಖರ್ಚು ಮಾಡಿಲ್ಲ. ಇದು ಇಶ್ಯೂ ಅಲ್ಲದಿದ್ದರೆ ಇನ್ಯಾವುದು?

ನೀವು ಚುನಾವಣಾ ಬಾಂಡ್ ಮತ್ತು ನೋಟುರದ್ದತಿ ಜಿಎಸ್‍ಟಿಯನ್ನು ಜೊತೆಗೆ ಸೇರಿಸಿ ನೋಡಿ. ದೊಡ್ಡ ಬಂಡವಾಳಿಗರಾದ ಅಂಬಾನಿಯಂತಹವರ ಲಾಭದಲ್ಲಿ ಭಾರಿ ಹೆಚ್ಚಳವಾಗಿದೆ. ಅಂದರೆ ಇದು ಸಣ್ಣ ಮೀನುಗಳನ್ನು ದೊಡ್ಡ ಮೀನುಗಳು ನುಂಗಲು ಮಾಡಿರುವ ಅವಕಾಶ.

ಸಾವಿರಾರು ಕೋಟಿಯಷ್ಟು ಹಣ ಚುನಾವಣೆಗೆ ಖರ್ಚಾಗುತ್ತದೆಂದರೆ, ಯಾರ ಬಳಿ ತೋಳ್ಬಲ, ಹಣಬಲ ಇಲ್ಲವೋ ಅವರು ಚುನಾವಣೆಯಲ್ಲಿ ಲೆಕ್ಕಕ್ಕಿಲ್ಲ. ಇದರಿಂದ ನಮ್ಮ ಪ್ರಜಾತಂತ್ರ ನಾಶವಾಗುತ್ತದೆ.

ಅಮಿತ್ ಶಾ ನಾಮಪತ್ರ ಹಾಕಿದಾಗ ಅವರ ಆಸ್ತಿಯ ಪ್ರಮಾಣ ಎಷ್ಟು ಹೆಚ್ಚಳವಾಗಿದೆ ಎಂಬುದು ಗೊತ್ತಾಗಿದೆ. ಅವರ ಮಗನ ಆದಾಯ ಸಾವಿರಾರು ಪಟ್ಟು ಹೆಚ್ಚಾಗಿದೆ. ಆದರೆ, ಕಳೆದ 45 ವರ್ಷಗಳಲ್ಲಿ ಎಂದೂ ಇಲ್ಲದಷ್ಟು ನಿರುದ್ಯೋಗ ಸೃಷ್ಟಿಯಾಗಿದೆ. 24 ಲಕ್ಷ ಖಾಲಿ ಹುದ್ದೆಗಳ್ನು ಕೇಂದ್ರ ಸರ್ಕಾರ ತುಂಬದೆ ಖಾಲಿ ಬಿಟ್ಟಿದೆ. 2014ರಲ್ಲಿ ಇಂಡಿಯಾ ಫಸ್ಟ್ ಎಂಬ ಚುನಾವಣಾ ಘೋಷಣೆ ನೀಡಲಾಗಿತ್ತು. ಈಗ ಸ್ವಲ್ಪ ಸತ್ಯ ಹೇಳಿ, ಅಂಬಾನಿ ಮತ್ತು ಅದಾನಿ ಫಸ್ಟ್, ಇಂಡಿಯಾ ಲಾಸ್ಟ್ ಎಂದು.

ಹರಿಯಾಣಾದ ಗುರ್‍ಗಾಂವ್‍ನಲ್ಲಿ ಒಂದು ಕುಟುಂಬದ ಮನೆಗೆ ನುಗ್ಗಿ ಭಯಂಕರವಾಗಿ ಥಳಿಸಿದರು. ಅವರನ್ನು ಭೇಟಿಯಾದಾಗ ನಾನು ನೋಡಿದೆ. ಅವರಿಗೆ ಹಲವೆಡೆ ಮೂಳೆಮುರಿತಗಳಾಗಿವೆ. ಭಯ ಆತಂಕ ಹುಟ್ಟಿದೆ. ಆದರೆ ಅವರ ಮೇಲೆಯೇ ಕೊಲೆಯತ್ನ ಕೇಸ್ ಹಾಕಲಾಗಿದೆ. ಅಖ್ಲಾಕ್, ಪಹ್ಲೂಖಾನ್ ಎಲ್ಲರ ಪೆಕರಣದಲ್ಲೂ ಸತ್ತವರ ಕುಟುಂಬದವರ ಮೇಲೆಯೇ ಪ್ರಕರಣ ದಾಖಲಾಗಿದೆ.

ಇದು ಒಂದಿಡೀ ಸಮುದಾಯದಲ್ಲಿ ಭೀತಿ ಹುಟ್ಟಿಸಿ ಹಿಂದೆ ತಳ್ಳುವ ಆರೆಸ್ಸೆಸ್‍ನ ಹಳೆಯ ಕುತಂತ್ರ. ಸಾಚಾರ್ ಸಮಿತಿ ವರದಿ ಹೇಳುತ್ತದೆ. ಶಿಕ್ಷಣದಲ್ಲಿ, ಉದ್ಯೋಗದಲ್ಲಿ, ರೈಲ್ವೇಸ್‍ಲ್ಲಿ, ಸೈನ್ಯದಲ್ಲಿ ಎಲ್ಲೂ ಮುಸ್ಲಿಮರಿಲ್ಲ. ಒಂದೇ ಸ್ಥಳದಲ್ಲಿ ಅವರು ತಮ್ಮ ಜನಸಂಖ್ಯೆಗಿಂತ ಹೆಚ್ಚು ಸರಾಸರಿಯಲ್ಲಿದ್ದಾರೆ, ಅದು ಭಾರತದ ಜೈಲುಗಳಲ್ಲಿ! ಈ ಸಮುದಾಯವು ಇಂದು ಇವೇನನ್ನೂ ಕೇಳುವ ಹಾಗಿಲ್ಲ. ನಮ್ಮ ವಿರುದ್ಧ ಗಲಭೆ ಮಾಡಬೇಡಿ, ರಕ್ಷಣೆ ಕೊಡಿ ಎಂದು ಕೇಳಿಕೊಳ್ಳಬೇಕಾಗಿದೆ.

ಯಾವ ಸಂಘಟನೆ ಬ್ರಿಟಿಷರ ಜೊತೆ ರಾಜಿ ಮಾಡಿಕೊಂಡು ಅವರಿಗೆ ಕ್ಷಮಾಪಣೆ ಪತ್ರ ಬರೆದು ಕಾಲಕಳೆಯಿತೋ ಅವರ ಇಂದು ದೇಶಪ್ರೇಮದ ಗುತ್ತಿಗೆ ಹಿಡಿದಿದ್ದಾರೆ. ಹೀಗೆ ಹೇಗೆ ಆಯಿತು? ಹೇಗೆಂದರೆ 2014ರಿಗಿಂತ ಹಿಂದೆಯೇ ಪ್ರಜಾತಂತ್ರ ದುರ್ಬಲಗೊಳ್ಳುತ್ತಿತ್ತು. ಇಂದು ಮೋದಿ ವಿರೋಧಿಗಳೆನ್ನುವವರದ್ದೂ ಅದರಲ್ಲಿ ಪಾತ್ರವಿದೆ. 1984ರ ದಂಗೆಯ ಬಗ್ಗೆ ಸರಿಯಾದ ತನಿಖೆ ಆಗಲೇ ಇಲ್ಲ. ಸಾರ್ವಜನಿಕ ಉದ್ದಿಮೆಗಳನು ದುರ್ಬಲಗೊಳಿಸುವುದರಲ್ಲಿ ಅವರ ಪಾತ್ರವಿದೆ. ಶ್ರೀಕೃಷ್ಣ ಆಯೋಗದ ವರದಿಯ ಶಿಫಾರಸ್ಸುಗಳನ್ನು ಜಾರಿ ಮಾಡಿಲ್ಲ. ಜಾಗತೀಕರಣ ನೀತಿಗಳನ್ನು ಜಾರಿಗೆ ತಂದಿದ್ದಾರೆ.

ದೇಶದ ಜನರು ಇವೆಲ್ಲವನ್ನೂ ಅರ್ಥ ಮಾಡಿಕೊಂಡರೆ, 2019ರ ಚುನಾವಣೆಯಲ್ಲಿ ನಾವು ಅವರನ್ನು ಗುಜರಾತ್‍ಗೆ ಘರ್ ವಾಪಸಿ ಮಾಡಿಸುತ್ತೇವೆಂಬ ನಂಬಿಕೆ ನನಗಿದೆ. ಆದರೆ, ಇವರನ್ನು ಚುನಾವಣೆಯಲ್ಲಿ ಸೋಲಿಸುವುದಷ್ಠೆ ನಮ್ಮ ಕೆಲಸವಲ್ಲ. ಆರೆಸ್ಸೆಸ್ಸನ್ನು ಸೈದ್ಧಾಂತಿಕವಾಗಿ ಸೋಲಿಸುವುದು ಮತ್ತು ನಮ್ಮ ಸಂವಿಧಾನದ ಆಶಯವಾದ ಜೀವಪರ ದೇಶವನ್ನು ಕಟ್ಟುವುದು ನಮ್ಮ ಕೆಲಸವಾಗಬೇಕು ಈಗ.

 

ಇಷ್ಟು ಹೇಳಿ ನನ್ನ ಮಾತು ಮುಗಿಸುತ್ತೇನೆ. ಧನ್ಯವಾದಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...