Homeಮುಖಪುಟನವದೆಹಲಿಯಿಂದ ಜನಸಂಕಲ್ಪ ಸಮಾವೇಶಕ್ಕೆ ಬಂದ ಯುವದನಿ ಉಮರ್ ಖಾಲಿದ್ ಭಾಷಣ ಕನ್ನಡ ಅನುವಾದ

ನವದೆಹಲಿಯಿಂದ ಜನಸಂಕಲ್ಪ ಸಮಾವೇಶಕ್ಕೆ ಬಂದ ಯುವದನಿ ಉಮರ್ ಖಾಲಿದ್ ಭಾಷಣ ಕನ್ನಡ ಅನುವಾದ

- Advertisement -
- Advertisement -

ನಾನು ಹಿಂದಿಯಲ್ಲಿ ಮಾತನಾಡಲು ಅನುಮತಿ ಕೇಳುತ್ತಿದ್ದೇನೆ.

ನಾವೆಲ್ಲರೂ 2019ರ ಚುನಾವಣೆಯ ಮಿಷನ್ ಬಗ್ಗೆ ಬಹಳ ಮಾತಾಡುತ್ತಿದ್ದೇವೆ. ಆದರೆ, 2019ರ ಚುನಾವಣೆಯಲ್ಲಿ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸುವಷ್ಟಕ್ಕೆ ನಮ್ಮ ಮಿಷನ್ ಕೊನೆಯಾಗುವುದಿಲ್ಲ. ಇಂದು ಬಿಡುಗಡೆಯಾದ ರಿಕ್ಲೈಮಿಂಗ್ ರಿಪಬ್ಲಿಕ್ ಅನ್ನು ಜಾರಿಗೊಳಿಸುವುದು ಬಹಳ ಮುಖ್ಯ. ಯಾರೇ ಅಧಿಕಾರಕ್ಕೆ ಬಂದರೂ. ಇವೇ ಇಂದಿನ ಚುನಾವಣೆಯಲ್ಲಿ ಪ್ರಮುಖ ಚರ್ಚೆಯಾಗಬೇಕಿತ್ತು. ಆದರೆ ಚರ್ಚೆ ಯಾವುದು ನಡೆಯುತ್ತಿದೆ?

ಮೋದಿ ಎದುರು ಯಾರು ಎಂಬುದು ಇಲ್ಲಿನ ಮುಖ್ಯ ಚರ್ಚೆಯಾಗಿಬಿಟ್ಟಿದೆ. ಹೇಗೋ ಮಾಡಿ ಈ ಚುನಾವಣೆಯನ್ನು ಮೋದಿ ವರ್ಸಸ್ ರಾಹುಲ್ ಗಾಂಧೀ ಮಾಡುತ್ತಿದ್ದಾರೆ. ಇದು ಇಬ್ಬರ ನಡುವಿನ ಪರ್ಸನಾಲಿಟಿ ಕಂಟೆಸ್ಟ್ ಮಾಡುವಂತಹ ಫ್ಯಾಶನ್ ಶೋ ಅಲ್ಲ. ಇದು ಭಗತ್ ಸಿಂಗ್ ಮತ್ತು ಸಾವರ್ಕರ್ ನಡುವಿನ, ಅಂಬೇಡ್ಕರ್ ಮತ್ತು ಗೋಲ್ವಾಳ್ಕರ್ ನಡುವಿನ ಸಂಘರ್ಷ.

ಮೋದಿಯಿದ್ದರೆ ಸಾಧ್ಯ ಎಂಬ ಒಂದು ಘೋಷಣೆಯಡಿ ಪ್ರಚಾರ ನಡೆಯುತ್ತಿದೆ. ಹೌದು, ಈ 5 ವರ್ಷಗಳಲ್ಲಿ ನಮ್ಮ ದೇಶದಲ್ಲಿ ಏನೇನಾಗಿದೆಯೋ ಅದು ಎಂದೂ ಹಿಂದೆ ಆಗಿರಲಿಲ್ಲ. ಬಾಬಾಸಾಹೇಬರು ನಮಗೆ ಕೊಟ್ಟ ಸಂವಿಧಾನವನ್ನು ಸಮಾನ ಗಣತಂತ್ರವಾಗಿ ಈ ದೇಶ ಇರಬೇಕೆಂದು ಹೇಳುವ ಸಂವಿಧಾನವನ್ನು ಸಂಸತ್ತಿನಿಂಧ ಕೇವಲ 2 ಕಿಮೀ ದೂರದ ಜಾಗದಲ್ಲಿ 9 ಆಗಸ್ಟ್ 2018ರಂದು ಸುಟ್ಟು ಹಾಕಲಾಯಿತು. ಅವರುಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ, ಅವರ ಬಗ್ಗೆ ಯಾವುದೇ ಟಿವಿ ಚರ್ಚೆ ಮಾಡಲಿಲ್ಲ. ಏಕೆ? ಏಕೆಂದರೆ ದೇಶವನ್ನು ಆಳುವವರಿಗೆ ಬೇಕಾಗಿದ್ದನ್ನೇ ಅವರು ಮಾಡಿದ್ದರು.

ಆಸಿಫಾ ಎಂಬ 9 ವರ್ಷದ ಬಾಲಕಿಯ ಮೇಲೆ ಭೀಕರ ಅತ್ಯಾಚಾರ-ಕೊಲೆ ನಡೆದಾಗ ಆ ಪ್ರಕರಣದ ಆರೋಪಿಗಳ ಪರವಾಗಿ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ಮಾಡಲಾಯಿತು. ಮುಸ್ಲಿಮರನ್ನು ಬೀದಿಗಳಲ್ಲಿ ಸಿಗಿದು ಕೊಂದ ಆರೋಪಿಗಳು ಜೈಲಿನಿಂದ ಬಿಡುಗಡೆಯಾದ ನಂತರ ಹಾರ ಹಾಕಿ ಅಭಿನಂದಿಸಲು ಒಬ್ಬ ಯೂನಿಯನ್ ಮಿನಿಸ್ಟರ್ ಹೋಗಿದ್ದರು.

ಇದೆಲ್ಲ ಈ ಹಿಂದೆ ಎಂದೂ ನಡೆದಿರಲಿಲ್ಲ. ಮಧ್ಯರಾತ್ರಿ ನೋಟು ರದ್ಧತಿ ಘೋಷಣೆಯಾಗಿ, ಜನರ ಬದುಕನ್ನು ಹಿಂಡಿ ಹಿಪ್ಪೆ ಮಾಡಿದ್ದು. ಹೌದು ನಾವೂ ಹೇಳುತ್ತೇವೆ ಇದು ಮೋದಿ ಇಲ್ಲದಿದ್ದರೆ ನಡೆಯುತ್ತಿರಲಿಲ್ಲ.

ನೀರವ್ ಮೋದಿ, ಮಲ್ಯ ಮೊದಲಾದ ಎಲ್ಲರೂ ಕದ್ದ ದುಡ್ಡು ಹೊತ್ತು ದೇಶ ಬಿಟ್ಟು ಓಡಿಹೋಗಲು ಅವಕಾಶವಾಗುವಂತಹ ಪರಿಸ್ಥಿತಿ ಸೃಷ್ಟಿಸಲಾಯಿತು. ನೀರವ್ ಮೋದಿ ಕೊನೆಯ ಸಲ ಬಹಿರಂಗವಾಗಿ ಕಾಣಿಸಿಕೊಂಡಿದ್ದು ನರೇಂದ್ರ ಮೋದಿಯವರ ಜೊತೆ ದಾವೂಸ್‍ನಲ್ಲಿ. ಮೋದಿಯವರು ಚೌಕಿದಾರರಲ್ಲ, ಅಂಬಾನಿಯ ನಂಬಿಕಸ್ಥ ಮತ್ತು ದೇಶವನ್ನು ಮಾರುವ ಗುತ್ತಿಗೆದಾರ.

ಈ ದೇಶದಲ್ಲಿ 12000 ರೈತರು ಪ್ರತಿವರ್ಷ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪ್ರಧಾನಮಂತ್ರಿ, ಮೀಡಿಯಾ ಯಾರೂ ಮಾತಾಡದಿದ್ದಾಗ ನಾವು ಅದರ ಬಗ್ಗೆ ಮಾತಾಡಬೇಕು. ಆಹಾರದ ಹಕ್ಕಿನ ಬಗ್ಗೆ ಮಾತಾಡುವುದೂ ಬಹಳ ಮುಖ್ಯ. ಅದನ್ನು ಮಾಡುತ್ತಿದ್ದ ದೊಡ್ಡ ಅರ್ಥಶಾಸ್ತ್ರಜ್ಞ ಜಾನ್ ಡ್ರೀಜ್óರನ್ನು ಜಾರ್ಖಂಡ್‍ನಲ್ಲಿ ಮೊನ್ನೆ ಬಂಧಿಸಲಾಯಿತು, ಪ್ರತಿವರ್ಷ 3000 ಮಕ್ಕಳು ಹಸಿವಿನಿಂದ ಸಾಯುವ ಈ ದೇಶದಲ್ಲಿ ಅದು ಚುನಾವಣೆಯ ಇಶ್ಯೂ ಅಲ್ಲದಿದ್ದರೆ ಇನ್ನು ಯವುದು?

ಪ್ರತಿ ವರ್ಷ ಮ್ಯಾನ್‍ಹೋಲ್‍ನಲ್ಲಿ ಸಾಯುವ ದಲಿತರಿಗಾಗಿ ಒಂದೇ ಒಂದು ರೂಪಾಯಿ ಸಮಾಜ ಕಲ್ಯಾಣ ಇಲಾಖೆ ಖರ್ಚು ಮಾಡಿಲ್ಲ. ಇದು ಇಶ್ಯೂ ಅಲ್ಲದಿದ್ದರೆ ಇನ್ಯಾವುದು?

ನೀವು ಚುನಾವಣಾ ಬಾಂಡ್ ಮತ್ತು ನೋಟುರದ್ದತಿ ಜಿಎಸ್‍ಟಿಯನ್ನು ಜೊತೆಗೆ ಸೇರಿಸಿ ನೋಡಿ. ದೊಡ್ಡ ಬಂಡವಾಳಿಗರಾದ ಅಂಬಾನಿಯಂತಹವರ ಲಾಭದಲ್ಲಿ ಭಾರಿ ಹೆಚ್ಚಳವಾಗಿದೆ. ಅಂದರೆ ಇದು ಸಣ್ಣ ಮೀನುಗಳನ್ನು ದೊಡ್ಡ ಮೀನುಗಳು ನುಂಗಲು ಮಾಡಿರುವ ಅವಕಾಶ.

ಸಾವಿರಾರು ಕೋಟಿಯಷ್ಟು ಹಣ ಚುನಾವಣೆಗೆ ಖರ್ಚಾಗುತ್ತದೆಂದರೆ, ಯಾರ ಬಳಿ ತೋಳ್ಬಲ, ಹಣಬಲ ಇಲ್ಲವೋ ಅವರು ಚುನಾವಣೆಯಲ್ಲಿ ಲೆಕ್ಕಕ್ಕಿಲ್ಲ. ಇದರಿಂದ ನಮ್ಮ ಪ್ರಜಾತಂತ್ರ ನಾಶವಾಗುತ್ತದೆ.

ಅಮಿತ್ ಶಾ ನಾಮಪತ್ರ ಹಾಕಿದಾಗ ಅವರ ಆಸ್ತಿಯ ಪ್ರಮಾಣ ಎಷ್ಟು ಹೆಚ್ಚಳವಾಗಿದೆ ಎಂಬುದು ಗೊತ್ತಾಗಿದೆ. ಅವರ ಮಗನ ಆದಾಯ ಸಾವಿರಾರು ಪಟ್ಟು ಹೆಚ್ಚಾಗಿದೆ. ಆದರೆ, ಕಳೆದ 45 ವರ್ಷಗಳಲ್ಲಿ ಎಂದೂ ಇಲ್ಲದಷ್ಟು ನಿರುದ್ಯೋಗ ಸೃಷ್ಟಿಯಾಗಿದೆ. 24 ಲಕ್ಷ ಖಾಲಿ ಹುದ್ದೆಗಳ್ನು ಕೇಂದ್ರ ಸರ್ಕಾರ ತುಂಬದೆ ಖಾಲಿ ಬಿಟ್ಟಿದೆ. 2014ರಲ್ಲಿ ಇಂಡಿಯಾ ಫಸ್ಟ್ ಎಂಬ ಚುನಾವಣಾ ಘೋಷಣೆ ನೀಡಲಾಗಿತ್ತು. ಈಗ ಸ್ವಲ್ಪ ಸತ್ಯ ಹೇಳಿ, ಅಂಬಾನಿ ಮತ್ತು ಅದಾನಿ ಫಸ್ಟ್, ಇಂಡಿಯಾ ಲಾಸ್ಟ್ ಎಂದು.

ಹರಿಯಾಣಾದ ಗುರ್‍ಗಾಂವ್‍ನಲ್ಲಿ ಒಂದು ಕುಟುಂಬದ ಮನೆಗೆ ನುಗ್ಗಿ ಭಯಂಕರವಾಗಿ ಥಳಿಸಿದರು. ಅವರನ್ನು ಭೇಟಿಯಾದಾಗ ನಾನು ನೋಡಿದೆ. ಅವರಿಗೆ ಹಲವೆಡೆ ಮೂಳೆಮುರಿತಗಳಾಗಿವೆ. ಭಯ ಆತಂಕ ಹುಟ್ಟಿದೆ. ಆದರೆ ಅವರ ಮೇಲೆಯೇ ಕೊಲೆಯತ್ನ ಕೇಸ್ ಹಾಕಲಾಗಿದೆ. ಅಖ್ಲಾಕ್, ಪಹ್ಲೂಖಾನ್ ಎಲ್ಲರ ಪೆಕರಣದಲ್ಲೂ ಸತ್ತವರ ಕುಟುಂಬದವರ ಮೇಲೆಯೇ ಪ್ರಕರಣ ದಾಖಲಾಗಿದೆ.

ಇದು ಒಂದಿಡೀ ಸಮುದಾಯದಲ್ಲಿ ಭೀತಿ ಹುಟ್ಟಿಸಿ ಹಿಂದೆ ತಳ್ಳುವ ಆರೆಸ್ಸೆಸ್‍ನ ಹಳೆಯ ಕುತಂತ್ರ. ಸಾಚಾರ್ ಸಮಿತಿ ವರದಿ ಹೇಳುತ್ತದೆ. ಶಿಕ್ಷಣದಲ್ಲಿ, ಉದ್ಯೋಗದಲ್ಲಿ, ರೈಲ್ವೇಸ್‍ಲ್ಲಿ, ಸೈನ್ಯದಲ್ಲಿ ಎಲ್ಲೂ ಮುಸ್ಲಿಮರಿಲ್ಲ. ಒಂದೇ ಸ್ಥಳದಲ್ಲಿ ಅವರು ತಮ್ಮ ಜನಸಂಖ್ಯೆಗಿಂತ ಹೆಚ್ಚು ಸರಾಸರಿಯಲ್ಲಿದ್ದಾರೆ, ಅದು ಭಾರತದ ಜೈಲುಗಳಲ್ಲಿ! ಈ ಸಮುದಾಯವು ಇಂದು ಇವೇನನ್ನೂ ಕೇಳುವ ಹಾಗಿಲ್ಲ. ನಮ್ಮ ವಿರುದ್ಧ ಗಲಭೆ ಮಾಡಬೇಡಿ, ರಕ್ಷಣೆ ಕೊಡಿ ಎಂದು ಕೇಳಿಕೊಳ್ಳಬೇಕಾಗಿದೆ.

ಯಾವ ಸಂಘಟನೆ ಬ್ರಿಟಿಷರ ಜೊತೆ ರಾಜಿ ಮಾಡಿಕೊಂಡು ಅವರಿಗೆ ಕ್ಷಮಾಪಣೆ ಪತ್ರ ಬರೆದು ಕಾಲಕಳೆಯಿತೋ ಅವರ ಇಂದು ದೇಶಪ್ರೇಮದ ಗುತ್ತಿಗೆ ಹಿಡಿದಿದ್ದಾರೆ. ಹೀಗೆ ಹೇಗೆ ಆಯಿತು? ಹೇಗೆಂದರೆ 2014ರಿಗಿಂತ ಹಿಂದೆಯೇ ಪ್ರಜಾತಂತ್ರ ದುರ್ಬಲಗೊಳ್ಳುತ್ತಿತ್ತು. ಇಂದು ಮೋದಿ ವಿರೋಧಿಗಳೆನ್ನುವವರದ್ದೂ ಅದರಲ್ಲಿ ಪಾತ್ರವಿದೆ. 1984ರ ದಂಗೆಯ ಬಗ್ಗೆ ಸರಿಯಾದ ತನಿಖೆ ಆಗಲೇ ಇಲ್ಲ. ಸಾರ್ವಜನಿಕ ಉದ್ದಿಮೆಗಳನು ದುರ್ಬಲಗೊಳಿಸುವುದರಲ್ಲಿ ಅವರ ಪಾತ್ರವಿದೆ. ಶ್ರೀಕೃಷ್ಣ ಆಯೋಗದ ವರದಿಯ ಶಿಫಾರಸ್ಸುಗಳನ್ನು ಜಾರಿ ಮಾಡಿಲ್ಲ. ಜಾಗತೀಕರಣ ನೀತಿಗಳನ್ನು ಜಾರಿಗೆ ತಂದಿದ್ದಾರೆ.

ದೇಶದ ಜನರು ಇವೆಲ್ಲವನ್ನೂ ಅರ್ಥ ಮಾಡಿಕೊಂಡರೆ, 2019ರ ಚುನಾವಣೆಯಲ್ಲಿ ನಾವು ಅವರನ್ನು ಗುಜರಾತ್‍ಗೆ ಘರ್ ವಾಪಸಿ ಮಾಡಿಸುತ್ತೇವೆಂಬ ನಂಬಿಕೆ ನನಗಿದೆ. ಆದರೆ, ಇವರನ್ನು ಚುನಾವಣೆಯಲ್ಲಿ ಸೋಲಿಸುವುದಷ್ಠೆ ನಮ್ಮ ಕೆಲಸವಲ್ಲ. ಆರೆಸ್ಸೆಸ್ಸನ್ನು ಸೈದ್ಧಾಂತಿಕವಾಗಿ ಸೋಲಿಸುವುದು ಮತ್ತು ನಮ್ಮ ಸಂವಿಧಾನದ ಆಶಯವಾದ ಜೀವಪರ ದೇಶವನ್ನು ಕಟ್ಟುವುದು ನಮ್ಮ ಕೆಲಸವಾಗಬೇಕು ಈಗ.

 

ಇಷ್ಟು ಹೇಳಿ ನನ್ನ ಮಾತು ಮುಗಿಸುತ್ತೇನೆ. ಧನ್ಯವಾದಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಸ್ರೇಲ್ ಸಂಸತ್ತಿನಲ್ಲಿ ಭಾಷಣದ ವೇಳೆ ಪ್ರಧಾನಿ ಮೋದಿ ಗಾಝಾ ನರಮೇಧ ಉಲ್ಲೇಖಿಸಲಿ : ಪ್ರಿಯಾಂಕಾ ಗಾಂಧಿ ಆಗ್ರಹ

ಇಸ್ರೇಲ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಸಂಸತ್ತಾದ ನೆಸೆಟ್ ಅನ್ನು ಉದ್ದೇಶಿಸಿ ಮಾತನಾಡುವಾಗ ಗಾಝಾ ನರಮೇಧವನ್ನು ಉಲ್ಲೇಖಿಸಿ ನ್ಯಾಯಕ್ಕಾಗಿ ಆಗ್ರಹಿಸಬೇಕು ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ...

ಕೇಂದ್ರ ಸಚಿವರ ಸಮ್ಮುಖದಲ್ಲಿ ‘ಮುಸ್ಲಿಂ ವಿರೋಧಿ ಹೇಳಿಕೆ’ ನೀಡಿದ ಹಿಂದುತ್ವವಾದಿ ವ್ಯಕ್ತಿ

ಉತ್ತರಾಖಂಡದಲ್ಲಿ ನಡೆದ ಸಾರ್ವಜನಿಕ ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ, ಕೇಂದ್ರ ಸಚಿವರ ಸಮ್ಮುಖದಲ್ಲಿಯೇ ಹಿಂದುತ್ವವಾದಿ ಮುಖಂಡನೊಬ್ಬ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದು ರಾಜಕೀಯ ಮತ್ತು ಸಾಮಾಜಿಕ ವಿವಾದಕ್ಕೆ ಕಾರಣವಾಗಿದೆ. ಇದು ಪೊಲೀಸ್ ಕ್ರಮ...

ಎನ್‌ಸಿಇಆರ್‌ಟಿ ಪಠ್ಯಪುಸ್ತಕದ ‘ನ್ಯಾಯಾಂಗದಲ್ಲಿನ ಭ್ರಷ್ಟಾಚಾರ’ ವಿಷಯಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪ್ರಕಟಿಸಿದ 8ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ "ನ್ಯಾಯಾಂಗದಲ್ಲಿನ ಭ್ರಷ್ಟಾಚಾರ" ಎಂಬ ವಿಷಯ ಉಲ್ಲೇಖಿಸಿರುವುದಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಫೆ.25) ತೀವ್ರ...

ಮಧ್ಯಪ್ರದೇಶ: ಡಾ. ಹರಿಸಿಂಗ್ ಗೌರ್ ವಿವಿಯಲ್ಲಿ ಎಬಿವಿಪಿ-ಆರ್‌ಎಸ್‌ಎಸ್‌ ದುಷ್ಕರ್ಮಿಗಳಿಂದ ವಿದ್ಯಾರ್ಥಿಗಳ ಮೇಲೆ ದಾಳಿ, ಜೀವಬೆದರಿಕೆ;  ಎಫ್‌ಐಆರ್ ದಾಖಲು

ಮಧ್ಯಪ್ರದೇಶದ ಸಾಗರ್‌ನಲ್ಲಿರುವ ಡಾ. ಹರಿ ಸಿಂಗ್ ಗೌರ್ ವಿಶ್ವವಿದ್ಯಾಲಯದಲ್ಲಿ ನಡೆದ ಸರಣಿ ಹಿಂಸಾತ್ಮಕ ಘಟನೆಗಳು ಕ್ಯಾಂಪಸ್ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಉಂಟುಮಾಡಿವೆ. ಐದು ದಿನಗಳಲ್ಲಿ ಎಬಿವಿಪಿ-ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ವ್ಯಕ್ತಿಗಳಿಂದ ಎರಡು ಜೀವ...

ಅಜೀಂ ಪ್ರೇಮ್‌ ಜಿ ವಿವಿಯಲ್ಲಿ ದಾಂಧಲೆ : ಎಬಿವಿಪಿ ಸದಸ್ಯರ ವಿರುದ್ಧ ಕಠಿಣ ಕ್ರಮಕ್ಕೆ ಕೆವಿಎಸ್‌ ಆಗ್ರಹ

ಅಜೀಂ ಪ್ರೇಮ್‌ ಜಿ ವಿಶ್ವವಿದ್ಯಾಲಯಕ್ಕೆ ನುಗ್ಗಿ ದಾಂಧಲೆ ನಡೆಸಿದ ಎಬಿವಿಪಿ ಸದಸ್ಯರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್‌) ಆಗ್ರಹಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ರಾಜ್ಯ...

ಗೋಣಿ ತುಮಕೂರು ಅಸ್ಪೃಶ್ಯತೆ ಆಚರಣೆ ಪ್ರಕರಣ: ತಹಶೀಲ್ದಾರ್ ಸಮ್ಮುಖದಲ್ಲಿ ದೇಗುಲ ಪ್ರವೇಶಿಸಿದ ನವ ದಂಪತಿ

ಕಳೆದ ವಾರ ಭಾರಿ ಚರ್ಚೆಗೆ ಗ್ರಾಸವಾಗಿದ್ದ ದಲಿತ ನವ ದಂಪತಿ ದೇಗುಲ  ಪ್ರವೇಶ ಹಾಗೂ ದಲಿತ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತುರುವೇಕೆರೆ ತಾಲೂಕು ಗೋಣಿ ತುಮಕೂರು ಗ್ರಾಮದಲ್ಲಿರುವ ಸವರ್ಣೀಯ ಮತ್ತು ದಲಿತ ಜನಾಂಗದ ನಡುವೆ...

ದ್ವೇಷ ಭಾಷಣ ಆರೋಪ: ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಎಫ್ಐಆರ್ 

ಯಾದಗಿರಿ ಜಿಲ್ಲೆಯಲ್ಲಿ ನಡೆದ ಶಿವಾಜಿ ಜಯಂತಿ ಆಚರಣೆಯ ಸಂದರ್ಭದಲ್ಲಿ ದ್ವೇಷಪೂರಿತ ಭಾಷಣ ಮಾಡಿದ ಆರೋಪದ ಮೇಲೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಜಿಲ್ಲೆಯ ಗುರ್ಮಿತ್ಕಲ್ ಪಟ್ಟಣದಲ್ಲಿ ಈ...

ಅಜೀಂ ಪ್ರೇಮ್‌ ಜಿ ವಿವಿಯಲ್ಲಿ ದಾಂಧಲೆ : ಎಬಿವಿಪಿ ಸದಸ್ಯರ ಬಂಧನ, ವಿವಿ ವಿದ್ಯಾರ್ಥಿಗಳಿಂದ ಕೌಂಟರ್ ಪ್ರೊಟೆಸ್ಟ್

ಬೆಂಗಳೂರಿನ ಸರ್ಜಾಪುರದಲ್ಲಿರುವ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಸದಸ್ಯರು ಮಂಗಳವಾರ (ಫೆ.24) ಸಂಜೆ ದಾಂಧಲೆ ನಡೆಸಿರುವ ಕುರಿತು ವರದಿಯಾಗಿದೆ. ಆಲ್ ಇಂಡಿಯಾ ಸ್ಟೂಡೆಂಟ್ ಅಸೋಸಿಯೇಷನ್ (ಎಐಎಸ್‌ಎ) ಜೊತೆ ಸಂಯೋಜಿತವಾಗಿರುವ ವಿವಿಯ ವಿದ್ಯಾರ್ಥಿ ಸಂಘಟನೆ...

ಹೈಕೋರ್ಟ್ ನ್ಯಾಯಾಧೀಶರಿಗೆ ಸಿನಿಮಾ ತೋರಿಸಲು ಹಿಂದೇಟು ಹಾಕಿದ ‘ಕೇರಳ ಸ್ಟೋರಿ-2’ ತಂಡ

'ದಿ ಕೇರಳ ಸ್ಟೋರಿ-2 ಗೋಸ್ ಬಿಯಾಂಡ್' ತಂಡ ಕೇರಳ ಹೈಕೋರ್ಟ್ ನ್ಯಾಯಾಧೀಶರಿಗೆ ಸಿನಿಮಾ ತೋರಿಸಲು ಹಿಂದೇಟು ಹಾಕಿದೆ. ಮಂಗಳವಾರ (ಫೆ.24) ಬೆಳಗ್ಗಿನ ಅವಧಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿ ಬಿಚು ಕುರಿಯನ್ ಥಾಮಸ್ ಅವರು, "ಸಿನಿಮಾದ...

ಸ್ಥಳಾಂತರಗೊಂಡ ಅಕ್ಬರ್ ನಗರ ನಿವಾಸಿಗಳನ್ನು SIR ನಿಂದ ಹೊರಗಿಟ್ಟಿರುವ ಬಗ್ಗೆ ಪರಿಶೀಲಿಸಲು ಲಕ್ನೋ ಚುನಾವಣಾ ಅಧಿಕಾರಿಗೆ ಸುಪ್ರೀಂ ಸೂಚನೆ

ಉತ್ತರ ಪ್ರದೇಶದಲ್ಲಿ ತಮ್ಮ ಮನೆಗಳನ್ನು ನೆಲಸಮಗೊಳಿಸಿ, ಸ್ಥಳಾಂತರದ ನಂತರ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಿಂದ ತಮ್ಮನ್ನು ಹೊರಗಿಡಲಾಗಿದೆ ಎಂದು ಆರೋಪಿಸಿ ಅಕ್ಬರ್ ನಗರದ ಮಾಜಿ ನಿವಾಸಿಗಳು ಎತ್ತಿರುವ ದೂರುಗಳನ್ನು...