Homeಮುಖಪುಟನವದೆಹಲಿಯಿಂದ ಜನಸಂಕಲ್ಪ ಸಮಾವೇಶಕ್ಕೆ ಬಂದ ಯುವದನಿ ಉಮರ್ ಖಾಲಿದ್ ಭಾಷಣ ಕನ್ನಡ ಅನುವಾದ

ನವದೆಹಲಿಯಿಂದ ಜನಸಂಕಲ್ಪ ಸಮಾವೇಶಕ್ಕೆ ಬಂದ ಯುವದನಿ ಉಮರ್ ಖಾಲಿದ್ ಭಾಷಣ ಕನ್ನಡ ಅನುವಾದ

- Advertisement -
- Advertisement -

ನಾನು ಹಿಂದಿಯಲ್ಲಿ ಮಾತನಾಡಲು ಅನುಮತಿ ಕೇಳುತ್ತಿದ್ದೇನೆ.

ನಾವೆಲ್ಲರೂ 2019ರ ಚುನಾವಣೆಯ ಮಿಷನ್ ಬಗ್ಗೆ ಬಹಳ ಮಾತಾಡುತ್ತಿದ್ದೇವೆ. ಆದರೆ, 2019ರ ಚುನಾವಣೆಯಲ್ಲಿ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸುವಷ್ಟಕ್ಕೆ ನಮ್ಮ ಮಿಷನ್ ಕೊನೆಯಾಗುವುದಿಲ್ಲ. ಇಂದು ಬಿಡುಗಡೆಯಾದ ರಿಕ್ಲೈಮಿಂಗ್ ರಿಪಬ್ಲಿಕ್ ಅನ್ನು ಜಾರಿಗೊಳಿಸುವುದು ಬಹಳ ಮುಖ್ಯ. ಯಾರೇ ಅಧಿಕಾರಕ್ಕೆ ಬಂದರೂ. ಇವೇ ಇಂದಿನ ಚುನಾವಣೆಯಲ್ಲಿ ಪ್ರಮುಖ ಚರ್ಚೆಯಾಗಬೇಕಿತ್ತು. ಆದರೆ ಚರ್ಚೆ ಯಾವುದು ನಡೆಯುತ್ತಿದೆ?

ಮೋದಿ ಎದುರು ಯಾರು ಎಂಬುದು ಇಲ್ಲಿನ ಮುಖ್ಯ ಚರ್ಚೆಯಾಗಿಬಿಟ್ಟಿದೆ. ಹೇಗೋ ಮಾಡಿ ಈ ಚುನಾವಣೆಯನ್ನು ಮೋದಿ ವರ್ಸಸ್ ರಾಹುಲ್ ಗಾಂಧೀ ಮಾಡುತ್ತಿದ್ದಾರೆ. ಇದು ಇಬ್ಬರ ನಡುವಿನ ಪರ್ಸನಾಲಿಟಿ ಕಂಟೆಸ್ಟ್ ಮಾಡುವಂತಹ ಫ್ಯಾಶನ್ ಶೋ ಅಲ್ಲ. ಇದು ಭಗತ್ ಸಿಂಗ್ ಮತ್ತು ಸಾವರ್ಕರ್ ನಡುವಿನ, ಅಂಬೇಡ್ಕರ್ ಮತ್ತು ಗೋಲ್ವಾಳ್ಕರ್ ನಡುವಿನ ಸಂಘರ್ಷ.

ಮೋದಿಯಿದ್ದರೆ ಸಾಧ್ಯ ಎಂಬ ಒಂದು ಘೋಷಣೆಯಡಿ ಪ್ರಚಾರ ನಡೆಯುತ್ತಿದೆ. ಹೌದು, ಈ 5 ವರ್ಷಗಳಲ್ಲಿ ನಮ್ಮ ದೇಶದಲ್ಲಿ ಏನೇನಾಗಿದೆಯೋ ಅದು ಎಂದೂ ಹಿಂದೆ ಆಗಿರಲಿಲ್ಲ. ಬಾಬಾಸಾಹೇಬರು ನಮಗೆ ಕೊಟ್ಟ ಸಂವಿಧಾನವನ್ನು ಸಮಾನ ಗಣತಂತ್ರವಾಗಿ ಈ ದೇಶ ಇರಬೇಕೆಂದು ಹೇಳುವ ಸಂವಿಧಾನವನ್ನು ಸಂಸತ್ತಿನಿಂಧ ಕೇವಲ 2 ಕಿಮೀ ದೂರದ ಜಾಗದಲ್ಲಿ 9 ಆಗಸ್ಟ್ 2018ರಂದು ಸುಟ್ಟು ಹಾಕಲಾಯಿತು. ಅವರುಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ, ಅವರ ಬಗ್ಗೆ ಯಾವುದೇ ಟಿವಿ ಚರ್ಚೆ ಮಾಡಲಿಲ್ಲ. ಏಕೆ? ಏಕೆಂದರೆ ದೇಶವನ್ನು ಆಳುವವರಿಗೆ ಬೇಕಾಗಿದ್ದನ್ನೇ ಅವರು ಮಾಡಿದ್ದರು.

ಆಸಿಫಾ ಎಂಬ 9 ವರ್ಷದ ಬಾಲಕಿಯ ಮೇಲೆ ಭೀಕರ ಅತ್ಯಾಚಾರ-ಕೊಲೆ ನಡೆದಾಗ ಆ ಪ್ರಕರಣದ ಆರೋಪಿಗಳ ಪರವಾಗಿ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ಮಾಡಲಾಯಿತು. ಮುಸ್ಲಿಮರನ್ನು ಬೀದಿಗಳಲ್ಲಿ ಸಿಗಿದು ಕೊಂದ ಆರೋಪಿಗಳು ಜೈಲಿನಿಂದ ಬಿಡುಗಡೆಯಾದ ನಂತರ ಹಾರ ಹಾಕಿ ಅಭಿನಂದಿಸಲು ಒಬ್ಬ ಯೂನಿಯನ್ ಮಿನಿಸ್ಟರ್ ಹೋಗಿದ್ದರು.

ಇದೆಲ್ಲ ಈ ಹಿಂದೆ ಎಂದೂ ನಡೆದಿರಲಿಲ್ಲ. ಮಧ್ಯರಾತ್ರಿ ನೋಟು ರದ್ಧತಿ ಘೋಷಣೆಯಾಗಿ, ಜನರ ಬದುಕನ್ನು ಹಿಂಡಿ ಹಿಪ್ಪೆ ಮಾಡಿದ್ದು. ಹೌದು ನಾವೂ ಹೇಳುತ್ತೇವೆ ಇದು ಮೋದಿ ಇಲ್ಲದಿದ್ದರೆ ನಡೆಯುತ್ತಿರಲಿಲ್ಲ.

ನೀರವ್ ಮೋದಿ, ಮಲ್ಯ ಮೊದಲಾದ ಎಲ್ಲರೂ ಕದ್ದ ದುಡ್ಡು ಹೊತ್ತು ದೇಶ ಬಿಟ್ಟು ಓಡಿಹೋಗಲು ಅವಕಾಶವಾಗುವಂತಹ ಪರಿಸ್ಥಿತಿ ಸೃಷ್ಟಿಸಲಾಯಿತು. ನೀರವ್ ಮೋದಿ ಕೊನೆಯ ಸಲ ಬಹಿರಂಗವಾಗಿ ಕಾಣಿಸಿಕೊಂಡಿದ್ದು ನರೇಂದ್ರ ಮೋದಿಯವರ ಜೊತೆ ದಾವೂಸ್‍ನಲ್ಲಿ. ಮೋದಿಯವರು ಚೌಕಿದಾರರಲ್ಲ, ಅಂಬಾನಿಯ ನಂಬಿಕಸ್ಥ ಮತ್ತು ದೇಶವನ್ನು ಮಾರುವ ಗುತ್ತಿಗೆದಾರ.

ಈ ದೇಶದಲ್ಲಿ 12000 ರೈತರು ಪ್ರತಿವರ್ಷ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪ್ರಧಾನಮಂತ್ರಿ, ಮೀಡಿಯಾ ಯಾರೂ ಮಾತಾಡದಿದ್ದಾಗ ನಾವು ಅದರ ಬಗ್ಗೆ ಮಾತಾಡಬೇಕು. ಆಹಾರದ ಹಕ್ಕಿನ ಬಗ್ಗೆ ಮಾತಾಡುವುದೂ ಬಹಳ ಮುಖ್ಯ. ಅದನ್ನು ಮಾಡುತ್ತಿದ್ದ ದೊಡ್ಡ ಅರ್ಥಶಾಸ್ತ್ರಜ್ಞ ಜಾನ್ ಡ್ರೀಜ್óರನ್ನು ಜಾರ್ಖಂಡ್‍ನಲ್ಲಿ ಮೊನ್ನೆ ಬಂಧಿಸಲಾಯಿತು, ಪ್ರತಿವರ್ಷ 3000 ಮಕ್ಕಳು ಹಸಿವಿನಿಂದ ಸಾಯುವ ಈ ದೇಶದಲ್ಲಿ ಅದು ಚುನಾವಣೆಯ ಇಶ್ಯೂ ಅಲ್ಲದಿದ್ದರೆ ಇನ್ನು ಯವುದು?

ಪ್ರತಿ ವರ್ಷ ಮ್ಯಾನ್‍ಹೋಲ್‍ನಲ್ಲಿ ಸಾಯುವ ದಲಿತರಿಗಾಗಿ ಒಂದೇ ಒಂದು ರೂಪಾಯಿ ಸಮಾಜ ಕಲ್ಯಾಣ ಇಲಾಖೆ ಖರ್ಚು ಮಾಡಿಲ್ಲ. ಇದು ಇಶ್ಯೂ ಅಲ್ಲದಿದ್ದರೆ ಇನ್ಯಾವುದು?

ನೀವು ಚುನಾವಣಾ ಬಾಂಡ್ ಮತ್ತು ನೋಟುರದ್ದತಿ ಜಿಎಸ್‍ಟಿಯನ್ನು ಜೊತೆಗೆ ಸೇರಿಸಿ ನೋಡಿ. ದೊಡ್ಡ ಬಂಡವಾಳಿಗರಾದ ಅಂಬಾನಿಯಂತಹವರ ಲಾಭದಲ್ಲಿ ಭಾರಿ ಹೆಚ್ಚಳವಾಗಿದೆ. ಅಂದರೆ ಇದು ಸಣ್ಣ ಮೀನುಗಳನ್ನು ದೊಡ್ಡ ಮೀನುಗಳು ನುಂಗಲು ಮಾಡಿರುವ ಅವಕಾಶ.

ಸಾವಿರಾರು ಕೋಟಿಯಷ್ಟು ಹಣ ಚುನಾವಣೆಗೆ ಖರ್ಚಾಗುತ್ತದೆಂದರೆ, ಯಾರ ಬಳಿ ತೋಳ್ಬಲ, ಹಣಬಲ ಇಲ್ಲವೋ ಅವರು ಚುನಾವಣೆಯಲ್ಲಿ ಲೆಕ್ಕಕ್ಕಿಲ್ಲ. ಇದರಿಂದ ನಮ್ಮ ಪ್ರಜಾತಂತ್ರ ನಾಶವಾಗುತ್ತದೆ.

ಅಮಿತ್ ಶಾ ನಾಮಪತ್ರ ಹಾಕಿದಾಗ ಅವರ ಆಸ್ತಿಯ ಪ್ರಮಾಣ ಎಷ್ಟು ಹೆಚ್ಚಳವಾಗಿದೆ ಎಂಬುದು ಗೊತ್ತಾಗಿದೆ. ಅವರ ಮಗನ ಆದಾಯ ಸಾವಿರಾರು ಪಟ್ಟು ಹೆಚ್ಚಾಗಿದೆ. ಆದರೆ, ಕಳೆದ 45 ವರ್ಷಗಳಲ್ಲಿ ಎಂದೂ ಇಲ್ಲದಷ್ಟು ನಿರುದ್ಯೋಗ ಸೃಷ್ಟಿಯಾಗಿದೆ. 24 ಲಕ್ಷ ಖಾಲಿ ಹುದ್ದೆಗಳ್ನು ಕೇಂದ್ರ ಸರ್ಕಾರ ತುಂಬದೆ ಖಾಲಿ ಬಿಟ್ಟಿದೆ. 2014ರಲ್ಲಿ ಇಂಡಿಯಾ ಫಸ್ಟ್ ಎಂಬ ಚುನಾವಣಾ ಘೋಷಣೆ ನೀಡಲಾಗಿತ್ತು. ಈಗ ಸ್ವಲ್ಪ ಸತ್ಯ ಹೇಳಿ, ಅಂಬಾನಿ ಮತ್ತು ಅದಾನಿ ಫಸ್ಟ್, ಇಂಡಿಯಾ ಲಾಸ್ಟ್ ಎಂದು.

ಹರಿಯಾಣಾದ ಗುರ್‍ಗಾಂವ್‍ನಲ್ಲಿ ಒಂದು ಕುಟುಂಬದ ಮನೆಗೆ ನುಗ್ಗಿ ಭಯಂಕರವಾಗಿ ಥಳಿಸಿದರು. ಅವರನ್ನು ಭೇಟಿಯಾದಾಗ ನಾನು ನೋಡಿದೆ. ಅವರಿಗೆ ಹಲವೆಡೆ ಮೂಳೆಮುರಿತಗಳಾಗಿವೆ. ಭಯ ಆತಂಕ ಹುಟ್ಟಿದೆ. ಆದರೆ ಅವರ ಮೇಲೆಯೇ ಕೊಲೆಯತ್ನ ಕೇಸ್ ಹಾಕಲಾಗಿದೆ. ಅಖ್ಲಾಕ್, ಪಹ್ಲೂಖಾನ್ ಎಲ್ಲರ ಪೆಕರಣದಲ್ಲೂ ಸತ್ತವರ ಕುಟುಂಬದವರ ಮೇಲೆಯೇ ಪ್ರಕರಣ ದಾಖಲಾಗಿದೆ.

ಇದು ಒಂದಿಡೀ ಸಮುದಾಯದಲ್ಲಿ ಭೀತಿ ಹುಟ್ಟಿಸಿ ಹಿಂದೆ ತಳ್ಳುವ ಆರೆಸ್ಸೆಸ್‍ನ ಹಳೆಯ ಕುತಂತ್ರ. ಸಾಚಾರ್ ಸಮಿತಿ ವರದಿ ಹೇಳುತ್ತದೆ. ಶಿಕ್ಷಣದಲ್ಲಿ, ಉದ್ಯೋಗದಲ್ಲಿ, ರೈಲ್ವೇಸ್‍ಲ್ಲಿ, ಸೈನ್ಯದಲ್ಲಿ ಎಲ್ಲೂ ಮುಸ್ಲಿಮರಿಲ್ಲ. ಒಂದೇ ಸ್ಥಳದಲ್ಲಿ ಅವರು ತಮ್ಮ ಜನಸಂಖ್ಯೆಗಿಂತ ಹೆಚ್ಚು ಸರಾಸರಿಯಲ್ಲಿದ್ದಾರೆ, ಅದು ಭಾರತದ ಜೈಲುಗಳಲ್ಲಿ! ಈ ಸಮುದಾಯವು ಇಂದು ಇವೇನನ್ನೂ ಕೇಳುವ ಹಾಗಿಲ್ಲ. ನಮ್ಮ ವಿರುದ್ಧ ಗಲಭೆ ಮಾಡಬೇಡಿ, ರಕ್ಷಣೆ ಕೊಡಿ ಎಂದು ಕೇಳಿಕೊಳ್ಳಬೇಕಾಗಿದೆ.

ಯಾವ ಸಂಘಟನೆ ಬ್ರಿಟಿಷರ ಜೊತೆ ರಾಜಿ ಮಾಡಿಕೊಂಡು ಅವರಿಗೆ ಕ್ಷಮಾಪಣೆ ಪತ್ರ ಬರೆದು ಕಾಲಕಳೆಯಿತೋ ಅವರ ಇಂದು ದೇಶಪ್ರೇಮದ ಗುತ್ತಿಗೆ ಹಿಡಿದಿದ್ದಾರೆ. ಹೀಗೆ ಹೇಗೆ ಆಯಿತು? ಹೇಗೆಂದರೆ 2014ರಿಗಿಂತ ಹಿಂದೆಯೇ ಪ್ರಜಾತಂತ್ರ ದುರ್ಬಲಗೊಳ್ಳುತ್ತಿತ್ತು. ಇಂದು ಮೋದಿ ವಿರೋಧಿಗಳೆನ್ನುವವರದ್ದೂ ಅದರಲ್ಲಿ ಪಾತ್ರವಿದೆ. 1984ರ ದಂಗೆಯ ಬಗ್ಗೆ ಸರಿಯಾದ ತನಿಖೆ ಆಗಲೇ ಇಲ್ಲ. ಸಾರ್ವಜನಿಕ ಉದ್ದಿಮೆಗಳನು ದುರ್ಬಲಗೊಳಿಸುವುದರಲ್ಲಿ ಅವರ ಪಾತ್ರವಿದೆ. ಶ್ರೀಕೃಷ್ಣ ಆಯೋಗದ ವರದಿಯ ಶಿಫಾರಸ್ಸುಗಳನ್ನು ಜಾರಿ ಮಾಡಿಲ್ಲ. ಜಾಗತೀಕರಣ ನೀತಿಗಳನ್ನು ಜಾರಿಗೆ ತಂದಿದ್ದಾರೆ.

ದೇಶದ ಜನರು ಇವೆಲ್ಲವನ್ನೂ ಅರ್ಥ ಮಾಡಿಕೊಂಡರೆ, 2019ರ ಚುನಾವಣೆಯಲ್ಲಿ ನಾವು ಅವರನ್ನು ಗುಜರಾತ್‍ಗೆ ಘರ್ ವಾಪಸಿ ಮಾಡಿಸುತ್ತೇವೆಂಬ ನಂಬಿಕೆ ನನಗಿದೆ. ಆದರೆ, ಇವರನ್ನು ಚುನಾವಣೆಯಲ್ಲಿ ಸೋಲಿಸುವುದಷ್ಠೆ ನಮ್ಮ ಕೆಲಸವಲ್ಲ. ಆರೆಸ್ಸೆಸ್ಸನ್ನು ಸೈದ್ಧಾಂತಿಕವಾಗಿ ಸೋಲಿಸುವುದು ಮತ್ತು ನಮ್ಮ ಸಂವಿಧಾನದ ಆಶಯವಾದ ಜೀವಪರ ದೇಶವನ್ನು ಕಟ್ಟುವುದು ನಮ್ಮ ಕೆಲಸವಾಗಬೇಕು ಈಗ.

 

ಇಷ್ಟು ಹೇಳಿ ನನ್ನ ಮಾತು ಮುಗಿಸುತ್ತೇನೆ. ಧನ್ಯವಾದಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...