Homeಮುಖಪುಟಉತ್ತರಪ್ರದೇಶದಲ್ಲಿ ಕಡಿಮೆ ಮತದಾನ: ಬಿಜೆಪಿಗೆ ಕಾದಿದೆಯ ಆಘಾತ?

ಉತ್ತರಪ್ರದೇಶದಲ್ಲಿ ಕಡಿಮೆ ಮತದಾನ: ಬಿಜೆಪಿಗೆ ಕಾದಿದೆಯ ಆಘಾತ?

- Advertisement -
- Advertisement -

ಮೊದಲ ಹಂತದ ಮತದಾನ ಮುಗಿದಿದ್ದು, ದಹಲಿಯಲ್ಲಿ ಗದ್ದುಗೆ ಹಿಡಿಯಲು ‘ಹೆಬ್ಬಾಗಿಲು’ ಎನಿಸಿರುವ ಉತ್ತರಪ್ರದೇಶದ ಪಶ್ಚಿಮ ಭಾಗದ ಎಂಟು ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಗಿದಿದ್ದು, ಅಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿದೆ. ಇದು ಬಿಜೆಪಿ ಪಾಲಿಗೆ ಚಿಂತೆಯ ವಿಷಯವೇ ಆಗಿದೆ.

ಮತದಾನದ ಸಂಜೆ ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಆ ಎಂಟು ಕ್ಷೇತ್ರಗಳಲ್ಲಿ ಈ ಬಾರಿ ಶೇ. 63.9 ಮತದಾನವಾಗಿದ್ದರೆ, ಕಳೆದ ಸಲ ಶೇ. 66ರಷ್ಟು ಮತದಾನವಾಗಿತ್ತು. ಇಲ್ಲಿ ವ್ಯತ್ಯಾಸ ಕೇವಲ ಶೇ. 2.1 ಇರಬಹುದು. ಆದರೆ ಇದು ನಿರ್ಲಕ್ಷಿಸುವ ವಿಷಯವಲ್ಲ ಬಿಜೆಪಿ ಪಾಲಿಗೆ! ಚುನಾವಣಾ ತಜ್ಞರ ಪ್ರಕಾರ, ಬಿಜೆಪಿಯ ಬೆಂಬಲಿಗರು ಕಳೆದ ಸಲದಷ್ಟು ಉತ್ಸಾಹದಿಂದ ಈ ಸಲ ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ.

ಪರಂಪರಾಗತ ಬಿಜೆಪಿ ಬೆಂಬಲಿಗರು ತುಂಬ ಪ್ರಜ್ಞಾಪೂರ್ವಕವಾಗಿ ಮತದಾನ ಮಾಡುತ್ತಾರೆ. ಆದರೆ ಈ ಎಂಟು ಕ್ಷೇತ್ರಗಳಲ್ಲಿ 2014ರ ಉತ್ಸಾಹ ಕಂಡುಬಂದಿಲ್ಲ.
2014ರಲ್ಲಿ ಈ ಪಶ್ಚಿಮ ಯುಪಿಯಲ್ಲಿ ಎಲ್ಲ ಎಂಟೂ ಸ್ಥಾನಗಳನ್ನು ದೊಡ್ಡ ಲೀಡ್‍ನಿಂದ ಗೆದ್ದಿತ್ತು. ಆಗ ಮೋದಿಯ ಸೃಷ್ಟಿತ ಹವಾ ಅದರ ನೆರವಿಗೆ ಬಂದಿತ್ತು. ಅದಲ್ಲದೇ ವಿಪಕ್ಷಗಳಲ್ಲಿ ಯಾವುದೇ ಒಗ್ಗಟ್ಟಿರಲಿಲ್ಲ.

2014ರಲ್ಲಿ ಮೊದಲ ಹಂತದಲ್ಲಿ ಈ ಎಂಟು ಕ್ಷೇತ್ರಗಳಲ್ಲಿ –ಮೀರತ್, ಬಾಗಪಟ್, ಬಿಕ್ನೋರ್, ಘಾಜಿಯಾಬಾದ್, ಕೈರಾನ, ಗೌತಮ್ ಬುದ್ಧಿ ನಗರ, ಸಹ್ರಾನಪುರ್ ಮತ್ತು ಮುಜಾಫರ್ ನಗರ- ಬಿಜೆಪಿ ಶೇ. 49ರಷ್ಟು ಮತ ಪ್ರಮಾಣವನ್ನು ಪಡೆದಿತ್ತು. ಇಲ್ಲಿ ಮತದಾನಕ್ಕೆ ಕಂಡು ಬಂದ ಜೋಶ್ ಉಳಿದ ಹಂತಗಳಲ್ಲೂ ಮುಂದುವರೆದಿತ್ತು.

ಈಗ ಕುಸ್ತಿ ಅಖಾಡವೇ ಬೇರೆ!
2014ರ ಪರಿಸ್ಥಿತಿ ಈಗಿಲ್ಲ. ಮಾಯಾವತಿಯ ಬಿಎಸ್‍ಪಿ, ಅಖಲೇಶ ಯಾದವರ ಸಮಾಜವಾದಿ ಪಾರ್ಟಿ ಮತ್ತು ಅಜಿತ್‍ಸಿಂಗ್‍ರ ರಾಷ್ಟ್ರೀಯ ಲೋಕದಳ ಘಟಬಂಧನ ರಚಿಸಿಕೊಂಡಿವೆ. ಪಶ್ಚಿಮ ಉತ್ತರಪ್ರದೇಶದಲ್ಲಿ ಪ್ರಬಲ ಜಾಟರು ಎಂದಿಗೂ ಆರ್‍ಎಲ್‍ಡಿ ಪರವೇ ಇದ್ದಾರೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ದ್ವೇಷಪೂರಿತ ಆಡಳಿತದಿಂದ ತತ್ತರಿಸಿರುವ ದಲಿತರು ಮತ್ತೆ ಬಿಎಸ್ಪಿ ಕಡೆ ಮುಖ ಮಾಡಿದ್ದಾರೆ. ಎಂದಿನಂತೆ ಈ ಸಲ ಮುಸ್ಲಿಮರು ಎಸ್ಪಿಯ ಪರವಿದ್ದಾರೆ. ಹೀಗಾಗಿ ಈ ಭಾಗದಲ್ಲಿ ನಿರ್ಣಾಯಕ ಎನಿಸಿರುವ ದಲಿತರು ಮತ್ತು ಮುಸ್ಲಿಮರು ಈಗ ಒಂದಾಗಿದ್ದು, ಬಿಜೆಪಿಗೆ ತಲೆನೋವು ತಂದಿದ್ದಾರೆ. ಜಾಟರು, ದಲಿತರು ಮತ್ತು ಮುಸ್ಲಿಮರ ಈ ಘಟಬಂಧನ ಈ ಎಂಟು ಕ್ಷೇತ್ರಗಳಲ್ಲಿ ಫಲಿತಾಂಶ ನಿರ್ಧರಿಸಲಿದೆ.

ಆದರೆ, ಇಲ್ಲಿರುವ ಒಂದು ಸಣ್ಣ ತೊಡಕೆಂದರೆ, ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿರುವುದು ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಜಯಕ್ಕೆ ನೆರವಾಗಬಹುದು ಎನ್ನಲಾಗುತ್ತಿದೆ. ಕಾಂಗ್ರೆಸ್‍ನ ಸಹ್ರಾನಪುರ್ ಅಭ್ಯರ್ಥಿ ಇಮ್ರಾನ್ ಮಸೂದ್ ಮತ್ತು ಬಜ್ನೋರ್‍ನ ಅಭ್ಯರ್ಥಿ ನಾಸಿರುದ್ದೀನ್ ಸಿದ್ದಿಕಿ ಮುಸ್ಲಿಮರ ಮತಗಳನ್ನು ವಿಭಜಿಸುವ ಮೂಲಕ ಬಿಜೆಪಿಗೆ ನೆರವಾಗುವ ಸಾಧ್ಯತೆ ಇವೆ ಎನ್ನಲಾಗಿದೆ.

ಜಾಟರ ‘ಪವರ್‍ಪ್ಲೇ’!
ಈ ಸಲದ ಚುನಾವಣೆಯಲ್ಲಿ ಜಾಟರ ಶಕ್ತಿ ಒಂಥರಾ ‘ಎಕ್ಸ್’ ಫ್ಯಾಕ್ಟರ್ ತರಹ ಕೆಲಸ ಮಾಡಲಿದೆ. ಮೊದಲಿಂದಲೂ ಜಾಟರು ಆರ್‍ಎಲ್‍ಡಿ (ಈಗ ಘಟಬಂಧನದ ಭಾಗ) ಪಕ್ಷಕ್ಕೆ ನಿಷ್ಟೇ ವ್ಯಕ್ತಪಡಿಸುತ್ತ ಬಂದಿದ್ದರು. ಆದರೆ, 2013ರಲ್ಲಿ ನಡೆದ ಮುಜಾಫರ್‍ನಗರ ಕೋಮು ಗಲಭೆಯಯ ನಂತರ ಬಿಜೆಪಿ ಅವರನ್ನು ಹಿಂದೂತ್ವದ ಬ್ಯಾನರಿನಡಿ ಸೆಳೆದುಕೊಂಡು 2014ರ ಚುನಾವಣೆಯಲ್ಲಿ ಲಾಭ ಮಾಡಿಕೊಂಡಿತ್ತು. ಅಲ್ಲಿ ಮೊದಲಿಂದ ಇದ್ದ ಜಾಟರು-ಮುಸ್ಲಿಮರ ನಡುವಿನ ಸೌಹಾರ್ದ ಬದುಕನ್ನು ಜಾತಿ-ಧರ್ಮಗಳ ಹೆಸರಲ್ಲಿ ಬಿಜೆಪಿ ಒಡೆದಿತ್ತು. ಆದರೆ ಈಗ ಜಾಟರು ಮತ್ತು ,ಮುಸ್ಲಿಮರು ಎಚ್ಚೆತ್ತುಕೊಂಡಿದ್ದಾರೆ. ಗೋ ಮಾರಾಟ ನಿಷೇಧದ ಪರಿಣಾಮವಾಗಿ ಹೆಚ್ಚಿರುವ ಬಿಡಾಡಿ ದನಗಳು ಒಕ್ಕಲು ಮಕ್ಕಳು ಜಾಟರ ಬೆಳೆಗಳನ್ನು ನಾಶ ಮಾಡುತ್ತಿವೆ. ಕಬ್ಬಿಗೆ ನ್ಯಾಯಯುತ ಬೆಲೆ ಕೊಡುವಲ್ಲಿ ಉತ್ತರಪ್ರದೇಶ ಸರ್ಕಾರ ವಿಫಲವಾಗಿದೆ. ಹಾಗೆಯೇ ಅವರ ನಿಷ್ಟೇಯ ಪಕ್ಷ ಆರ್‍ಎಲ್‍ಡಿ ಈಗ ಘಟಬಂಧನದ ಮೂಲಕ ಜಾಟರನ್ನು ಮತ್ತೆ ತನ್ನಲ್ಲಿ ಉಳಿಸಿಕೊಂಡಿದೆ.

ಹೀಗಾಗಿ ಉತ್ತರ ಪ್ರದೇಶದಲ್ಲಿ ಈ ಸಲ ಮೋದಿ ಹೆಅಸರು, ರಾಷ್ಟ್ರೀಯ ಸುರಕ್ಷತೆ ಜಪ ಬಿಟ್ಟರೆ ಬಿಜೆಪಿಗೆ ಇಶ್ಯೂಗಳೇ ಇಲ್ಲ. 2014ರ ಮೋದಿ ಹವಾ ಠುಸ್ ಆಗಿದೆ. ಪುಲ್ವಾಮಾ ಘಟನೆ ಮತ್ತು ಬಾರಾಕೋಟ್ ವಾಯುದಾಳಿಯ ಮೇಲೆಯೇ ನಿಜೆಪಿ ಕ್ಯಾಂಪೇನ್ ಮಾಡುತ್ತಿದೆ.
ಮೊದಲ ಹಂತದಲ್ಲಿ ಇಷ್ಟೆಲ್ಲ ‘ದೇಶಭಕ್ತಿಯ’ ಪ್ರಚಾರದ ನಂತರವೂ ಎಂಟು ಕ್ಷೇತ್ರಗಳಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿದೆ. ಬಿಜೆಪಿ ಪಾಲಿಗೆ ಇದು ‘ಅವಲಕ್ಷಣ’ವೇ ಅಲ್ಲವೇ? ಅಂದರೆ ರಾಜಕೀಯ ಅವಲಕ್ಷಣ!

ಕೃಪೆ: ದಿ ಕ್ವಿಂಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...

ಚೀನಾ ನಿರ್ಮಿತ ರೋಬೋ ಡಾಗ್ ತಾವೇ ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದ ಗ್ಯಾಲ್ಗೋಟಿಯಾ ವಿವಿ AI ಸಮ್ಮಿಟ್ ಎಕ್ಸ್‌ಪೋದಿಂದ ತೆರವು

ನವದೆಹಲಿ: ಚೀನಾ ನಿರ್ಮಿತ ರೋಬೋ ಡಾಗ್ ತಮ್ಮದೇ ಎಂದು ಪ್ರದರ್ಶಿಸಿದ್ದಕ್ಕಾಗಿ ಟೀಕೆಗೆ ಗುರಿಯಾದ ನಂತರ ಮತ್ತು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾದ ನಂತರ ನೋಯ್ಡಾ ಮೂಲದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಬುಧವಾರ...

ಉತ್ತರ ಪ್ರದೇಶ| ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಟಿಟಿಇಯಿಂದ ಸೇನಾ ಆಕಾಂಕ್ಷಿಯ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಪರೀಕ್ಷಕನೊಬ್ಬ (ಟಿಟಿಇ) ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವತಿ ಆರೋಪಿಸಿದ್ದಾರೆ. ಇಂದಾರಾ ಮತ್ತು ಡಿಯೋರಿಯಾ ರೈಲು ನಿಲ್ದಾಣಗಳ ನಡುವೆ...

ನಾನು ಭಾರತಕ್ಕೆ ಯಾವಾಗ ಹಿಂತಿರುಗುತ್ತೇನೆಂದು ಹೇಳಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಲ್ಯ

ವಂಚನೆ ಮತ್ತು ಹಣ ವರ್ಗಾವಣೆಯ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ, ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಯುಕೆ ತೊರೆಯುವುದನ್ನು ನನಗೆ ಕಾನೂನುಬದ್ಧವಾಗಿ ನಿಷೇಧಿಸಲಾಗಿರುವುದರಿಂದ ಯಾವಾಗ ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು...

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿ ಆಗದಂತೆ ತಡೆದಿದ್ದು ರಾಹುಲ್ ಗಾಂಧಿ : ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿಯಾಗದಂತೆ ರಾಹುಲ್ ಗಾಂಧಿ ತಡೆದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ (ಫೆ.17) ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "2014 ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ...

ಮಮತಾ ಬ್ಯಾನರ್ಜಿ ವಿರುದ್ಧ ಇಡಿ ಅರ್ಜಿ: ಮಾರ್ಚ್ 18ಕ್ಕೆ ವಿಚಾರಣೆ ಮುಂದೂಡಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರರ ವಿರುದ್ಧದ ಐ-ಪ್ಯಾಕ್ ಕಚೇರಿ ಶೋಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಜಾರಿ ನಿರ್ದೇಶನಾಲಯದ (ಇಡಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ...