Homeಅಂತರಾಷ್ಟ್ರೀಯಭಾರತ ವಿಭಜನೆ ಆಗಿರದಿದ್ದರೆ ಮೋದಿ-ಶಾ ಪರಿಸ್ಥಿತಿ ಹೇಗಿರುತ್ತಿತ್ತು? ಭಕ್ತರಿಗೊಂದು ಉತ್ತರ

ಭಾರತ ವಿಭಜನೆ ಆಗಿರದಿದ್ದರೆ ಮೋದಿ-ಶಾ ಪರಿಸ್ಥಿತಿ ಹೇಗಿರುತ್ತಿತ್ತು? ಭಕ್ತರಿಗೊಂದು ಉತ್ತರ

- Advertisement -
- Advertisement -

| ಪ್ರವೀಣ್ ಎಸ್ ಶೆಟ್ಟಿ |

ಯಾವುದೇ ಆರೆಸ್ಸೆಸ್ ಕಾರ್ಯಕರ್ತನಿಗೆ ಕೇಳಿ ನೋಡಿ- ಗೋಡ್ಸೆ ಗಾಂಧೀಜಿಯನ್ನು ಕೊಲ್ಲಲು ಕಾರಣವೇನು ಎಂದು.  ಪ್ರತಿಯೊಬ್ಬ ಆರೆಸ್ಸೆಸ್ಸ್ ಕಾರ್ಯಕರ್ತನೂ ಒಂದೇ ತರದ ಉತ್ತರ ಕೊಡುತ್ತಾನೆ – ಗಾಂಧೀಜಿ ಭಾರತದ ವಿಭಜನೆ ಆಗಲು ಕಾರಣ, ಅದಕ್ಕಾಗಿ ಗೋಡ್ಸೆ ದೇಶದ ಮೇಲಿನ ಪ್ರೇಮದಿಂದ ಗಾಂಧೀಜಿಯನ್ನು ಕೊಂದಿದ್ದು ಎಂದು.  ಆರೆಸ್ಸೆಸ್ಸಿನವರು ಕೊಡುವ ಈ ಕಾರಣ ನಿಜವಲ್ಲವಾದರೂ ಒಂದು ಕ್ಷಣ ಈ ಕಾರಣವನ್ನು ಹಿಮ್ಮುಖವಾಗಿ ಸಾಗಿ ವಿಶ್ಲೇಶಿಸುವುದು ಒಳಿತು.  ಒಂದು ವೇಳೆ 1947 ರಲ್ಲಿ ಭಾರತದ ವಿಭಜನೆ ಆಗಿರದಿದ್ದರೆ ಇಂದಿನ ಅಖಂಡ ಭಾರತದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ಥಿತಿ ಹೇಗಿರುತ್ತಿತ್ತು ಎಂದು ಸ್ವಲ್ಪ ಕಲ್ಪಿಸಿಕೊಳ್ಳಿ.

ಭಾರತದ 130 ಕೋಟಿ, ಬಾಂಗ್ಲಾದೇಶದ 16 ಕೋಟಿ ಮತ್ತು ಪಾಕಿಸ್ತಾನದ 14 ಕೋಟಿ ಜನಸಂಖ್ಯೆ ಕೂಡಿ ಒಟ್ಟು ಜನ ಸಂಖ್ಯೆ ಒಟ್ಟು 160 ಕೋಟಿ ಆಗುತ್ತಿತ್ತು. ಭೌಗೋಳಿಕ ವಿಸ್ತಾರದಲ್ಲಿ ಚೀನಾ ನಮಗಿಂತ ಎರಡು ಪಟ್ಟು ದೊಡ್ಡದಿದ್ದರೂ ಜನಸಂಖ್ಯೆಯಲ್ಲಿ ನಾವು ವಿಶ್ವಗುರು ಆಗಿರುತ್ತಿದ್ದೆವು. ಇನ್ನು ಧರ್ಮವಾರು ಜನಸಂಖ್ಯೆ ನೋಡಿದರೆ, 160 ಕೋಟಿ ಜನಸಂಖ್ಯೆಯಲ್ಲಿ ಮುಸ್ಲಿಮರ ಸಂಖ್ಯೆ 50 ಕೋಟಿಗೂ ಹೆಚ್ಚಿರುತ್ತಿತ್ತು. ಇಂತಹಾ ಸನ್ನಿವೇಶದಲ್ಲಿ ಒಂದು ವೇಳೆ ಅಡ್ವಾಣಿ ರಾಮ ಜನ್ಮಭೂಮಿ ರಥಯಾತ್ರಾ ಹೊರಡಿಸುತ್ತಿದ್ದರೆ ಅವರ ಗತಿ ಎನಾಗುತ್ತಿತ್ತು ಊಹಿಸಿ.

2002 ರಲ್ಲಿ ಮೋದಿ ಗೋಧ್ರಾದಲ್ಲಿ ತನ್ನವರಿಂದಲೇ ಕರಸೇವಕರ ರೈಲಿಗೆ ಬೆಂಕಿ ಹಾಕಿಸಿ ನಂತರ ಭೀಕರ ಕೋಮು ಗಲಭೆ ಹಬ್ಬಿಸಿದ್ದರೆ ಮೋದಿ ಸಹಿತ ಎಲ್ಲಾ ಬನಿಯಾ ಮತ್ತು ಜೈನರು ಗುಜರಾತ್ ಬಿಟ್ಟು ಓಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಜನಾಂಗೀಯ ಯುದ್ಧ ನಡೆಯುತ್ತಿತ್ತು, ಬ್ರಿಟಿಷರು ಮುಸ್ಲಿಮರನ್ನು “ಮಾರ್ಷಿಯಲ್ ರೇಸ್” ಎಂದು ವರ್ಗೀಕರಿಸಿದ್ದು ಸುಮ್ಮನೆ ಅಲ್ಲ. ಗುಜರಾತಿಗಳು ಬಾಲ ಬಿಚ್ಚಿದ್ದರೆ ಬಲೂಚಿಸ್ತಾನದ ಪಠಾಣರು ಗುಜರಾತಿಗೆ ನುಗ್ಗಿ ಬುದ್ದಿ ಕಲಿಸಿ ಮೋದಿ ಅಮಿತ್ ಶಾ ಇಬ್ಬರನ್ನೂ ಗುಜರಾತಿನಿಂದ ಓಡಿಸುತ್ತಿದ್ದರು. ಅಖ್ಲಾಕ್ ಮುಂತಾದವರನ್ನು ಗೋಮಾಂಸದ ಹೆಸರಲ್ಲಿ ಬಜರಂಗಿಗಳು ಚಚ್ಚಿ ಕೊಂದಾಗ ಅದಕ್ಕೆ ಪ್ರತಿಕಾರವನ್ನು ಉತ್ತರ ಪ್ರದೇಶದ ಮುಸ್ಲಿಮರೇ ತೀರಿಸಿಕೊಳ್ಳುತ್ತಿದ್ದರು. ಬೀಫ್-ಗೋಮೂತ್ರದ ಹೆಸರಲ್ಲಿ ಮುಸ್ಲಿಮರ ರಕ್ತಪಾತ ಮಾಡಿದ್ದರೆ ಅವರೂ ತಿರುಗಿ ಸೇಡು ತೀರಿಸಿಕೊಳ್ಳುತ್ತಿದ್ದರು. ಯೋಗಿಯಂತವರು ಎಂದೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಲು ಸಾಧ್ಯವಾಗುತ್ತಿರಲಿಲ್ಲ. ಮೋದಿಗಂತೂ ಆರು ತಿಂಗಳೂ ಗುಜರಾತ್ ಮುಖ್ಯಮಂತ್ರಿ ಆಗಿರಲು ಕೇಂದ್ರ ಸರಕಾರ ಬಿಡುತ್ತಿರಲಿಲ್ಲ. ಆರೆಸ್ಸೆಸ್ಸಿನ ನಾಗಪುರ ಹೆಡ್ ಆಫೀಸ್ ಪಕೋಡಾ ಮಾರುವ ಕೇಂದ್ರವಾಗಿರುತ್ತಿತ್ತು. ಮುಸ್ಲಿಮರ ಹೆಸರಲ್ಲಿ ದ್ವೇಷ ಸಾಧಿಸಿ ಬಿ‌ಜೆ‌ಪಿ ಅಧಿಕಾರಕ್ಕೆ ಬರಲು ಸಾಧ್ಯವೇ ಆಗುತ್ತಿರಲಿಲ್ಲ. ಅಷ್ಟೇ ಅಲ್ಲ ಮೋದಿಯಂತಹಾ ಗುಜರಾತಿ ವ್ಯಾಪಾರಿ ಭಾರತದ ಜನತೆಗೆ ಅತ್ತ ಪಾಕಿಸ್ತಾನ ತೋರಿಸಿ ಇತ್ತ ದೇಶದ ಖನಿಜ ಸಂಪತ್ತನ್ನು ಹಾಗೂ ಸಾರ್ವಜನಿಕ  ಉದ್ಯಮಗಳನ್ನು ಕವಡೆ ಕಾಸಿಗೆ ತನ್ನ ಬನಿಯಾ ಉದ್ಯಮಿಗಳಿಗೆ ಮಾರಲು ಸಾಧ್ಯ ಆಗುತ್ತಲೇ ಇರಲಿಲ್ಲ.

ಪಾಕಿಸ್ತಾನವೇ ಇರದಿದ್ದರೆ ತನ್ನ ವಿಫಲತೆಗೆ ಮೋದಿ ಯಾರನ್ನು ಹೊಣೆ ಮಾಡಿ ಬಯ್ಯುತ್ತಿದ್ದರು? “ಘರ್ ಮೆ ಗುಸ್ ಕೆ ಮಾರೇಂಗೆ” ಎಂದು ಯಾರ ಮುಂದೆ ಮೋದಿ ಬಡಾಯಿ ಕೊಚ್ಚಲು ಸಾಧ್ಯವಾಗುತ್ತಿತ್ತು? ಭಾರತದ ಸೇನೆಯಲ್ಲಿ ಅರ್ಧಕರ್ಧ ಮುಸ್ಲಿಮರೇ ಇರುತ್ತಿದ್ದರು. ಕಾರಣ ಉತ್ತಮ ದೇಹ ಧಾರ್ಢ್ಯ ಹೊಂದಿರುವ ಮ್ಜುಸ್ಲಿಮರೇ ಮಿಲಿಟರಿಯಲ್ಲಿ  ಹೆಚ್ಚಿರುತ್ತಿದ್ದರು. 1947 ರಲ್ಲಿ ಭಾರತ ವಿಭಜನೆ ಆಗಿರದಿದ್ದರೆ ಯಾರ ವಿರುದ್ಧ ದ್ವೇಷ ಭೋಧಿಸಿ ಬಿ‌ಜೆ‌ಪಿ ಅಧಿಕಾರಕ್ಕೆ ಬರಲು ಸಾಧ್ಯವಿತ್ತು? ಭಾರತದಲ್ಲಿ ಯಾವುದೇ ಹಿಂದುತ್ವವಾದಿ ಸರಕಾರ ಎಂದೂ ಅಧಿಕಾರಕ್ಕೆ ಬರುತ್ತಿರಲಿಲ್ಲ.

1857ರಲ್ಲಿ ಝಾನ್ಸಿ ಲಕ್ಷ್ಮೀಬಾಯಿ ಮತ್ತು ಮೋಘಲರ ಕೊನೆಯ ದೊರೆ ಬಹದೂರ್ ಶಾ ಜಫರ್ ಬ್ರಿಟಿಷರ ವಿರುದ್ಧ ಎದ್ದ ಬಂಡಾಯ ಹಾಗೂ ಸಿಪಾಯಿ ದಂಗೆಯನ್ನು “ಮೊದಲನೇ ಸ್ವಾತಂತ್ರ್ಯ ಯುದ್ಧ” ಎಂದು ಕರೆಯಲಾಗುತ್ತದೆ. ಒಂದು ವೇಳೆ ಅಂದು ಝಾನ್ಸಿ ಲಕ್ಷ್ಮೀಬಾಯಿ, ಮೋಘಲರು ಮತ್ತು ಇತರ ರಾಜರ-ನವಾಬರ ಒಕ್ಕೂಟ ಬ್ರಿಟಿಷರ ವಿರುದ್ಧ ಗೆದ್ದು ಬ್ರಿಟಿಷರನ್ನು ಭಾರತದಿಂದ ತೊಲಗಿಸಿದ್ದರೆ ಎನಾಗುತ್ತಿತ್ತು ಊಹಿಸಿ. ಝಾನ್ಸಿ ಲಕ್ಷ್ಮಿ ಅಥವಾ ಮೋಘಲರು ಅಂದು ಬ್ರಿಟಿಷರ ವಿರುದ್ಧ ಬಂಡಾಯ ಎದ್ದಿದ್ದು ಭಾರತ ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಿ ಪ್ರಜಾಪ್ರಭುತ್ವ ಸ್ಥಾಪಿಸಲು ಅಲ್ಲವೇ ಅಲ್ಲ. ಅವರು ಬಂಡಾಯ ಎದ್ದಿದ್ದು ತಮ್ಮ ತಮ್ಮ ರಾಜ್ಯಗಳನ್ನು ಬ್ರಿಟಿಷರಿಂದ ಉಳಿಸಿಕೊಳ್ಳಲು. ಅಂದು ಈ ರಾಜರು-ನವಾಬರು ಗೆದ್ದಿದ್ದರೆ, ನಂತರ ಅವರು ತಮ್ಮ ತಮ್ಮ ರಾಜಗಳನ್ನು ಪ್ರತ್ಯೇಕವಾಗಿಯೇ ಉಳಿಸಿ ಕೊಳ್ಳುತ್ತಿದ್ದರು. ಆಗ ಭಾರತದಲ್ಲಿ ಸುಮಾರು 550 ಸಂಸ್ಥಾನಗಳು ಹಾಗೂ ನವಾಬರು ಇರುತ್ತಿದ್ದರು. ಒಂದೊಂದು ಸಂಸ್ಥಾನಕ್ಕೆ ಒಂದೊಂದು ಕರೆನ್ಸಿ ಇರುತ್ತಿತ್ತು, ಬೆಂಗಳೂರಿನಿಂದ ಮುಂಬೈ ಗೆ ಹೋಗಲು ಪಾಸ್ಪೋರ್ಟಿನ ಅಗತ್ಯ ಬೀಳುತ್ತಿತ್ತು. ಕಾಶ್ಮೀರ ಎಂದೋ ಪ್ರತ್ಯಕವಾಗಿ ಹೋಗಿರುತ್ತಿತ್ತು. ಪ್ರತಿಯೊಂದು ಸಂಸ್ಥಾನವೂ ತಮ್ಮದೇ ಆದ ಪ್ರತ್ಯೇಕ ಮಿಲಿಟರಿ ಹೊಂದಿರುತ್ತಿದ್ದವು, ಜತೆಗೆ ಗಡಿ ಕಲಹದಿಂದಾಗಿ ಯಾವಾಗಲೂ ಸಂಸ್ಥಾನಗಳ ನಡುವೆ ಯುದ್ಧ ನಡೆಯುತ್ತಲೇ ಇರುತ್ತಿತ್ತು. ಸಮಸ್ತ ಭಾರತ ಸೊಮಾಲಿಯಾಕ್ಕಿಂತ ಕಡೆಯಾಗಿರುತ್ತಿತ್ತು. ಮುಕ್ಕಾಲು ಪಾಲು ಜನತೆ ಹಸಿವಿನಿಂದ ಬಳಲುತ್ತಿತ್ತು. “ಘರ್ ಮೆ ಗುಸ್ ಕೆ ಮಾರೆಂಗೆ” ಅನ್ನುವ ಪುಕ್ಕಲು ಬನಿಯಾ ಎಲ್ಲಿಯೋ ಒಂದು ಸಣ್ಣ ನಗರದಲ್ಲಿ ಪಕೋಡಾ ಅಂಗಡಿ ನಡೆಸುತ್ತಾ ಜನರನ್ನು ಯಾಮಾರಿಸುತ್ತಾ ಜೀವನ ನಡೆಸುತ್ತಿದ್ದ ಅಷ್ಟೇ. 550 ರಾಜ ಸಂಸ್ಥಾನಗಳಿದ್ದ ಇಷ್ಟು ದೊಡ್ಡ ಭಾರತ ದೇಶ ವಿಛಿದ್ರವಾಗದೇ ಇಂದು ಒಂದಾಗಿ ಇದ್ದರೆ ಅದಕ್ಕೆ ನಾವು ಬ್ರಿಟಿಷರಿಗೆ ಹಾಗೂ ಗಾಂಧೀಜಿಗೆ ಋಣಿಯಾಗಿರಬೇಕು. ಗೋಡ್ಸೆ ಭಕ್ತ ಆರೆಸ್ಸೆಸ್ಸಿನವರಿಗೆ ಮತ್ತು ವಾಟ್ಸಪ್ ಯೂನಿವರ್ಸಿಟಿಯ ವಿದ್ಯಾರ್ಥಿಗಳಿಗೆ ಇಷ್ಟೆಲ್ಲಾ ದೂರಗಾಮಿ ವಿಶ್ಲೇಷಣೆ ಸಾಧ್ಯವಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸರ್ ತುಂಬಾ ಉಪಯುಕ್ತ ವಿಚಾರಗಳನ್ನು
    ತಿಳಿಸಿದ್ದೀರಿ ಧನ್ಯವಾದಗಳು

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...