Homeಸಿನಿಮಾಸಿನಿ ಸುದ್ದಿಸಾಮಾಜಿಕ ದುರಂತದ ವಿಡಂಬನೆಯಸಿನಿಕಾರ ಪೀಟರ್ ಬಾಷೋ.

ಸಾಮಾಜಿಕ ದುರಂತದ ವಿಡಂಬನೆಯಸಿನಿಕಾರ ಪೀಟರ್ ಬಾಷೋ.

- Advertisement -
- Advertisement -

ರಾಜಶೇಖರ್ ಅಕ್ಕಿ |

ರಷಿಯಾದ ಒಂದು ಗ್ರಾಮ, ಆಗತಾನೆ ಕ್ರಾಂತಿಯಾಗಿದೆ. ಮಹಾಯುದ್ಧದ ಪರಿಣಾಮಗಳು ಇನ್ನೂ ಕಾಣಿಸಿಕೊಳ್ಳುತ್ತಿವೆ. ಅಂತಹದ್ದರಲ್ಲಿ ಒಂದು ಗೂಡ್ಸ್ ರೈಲಿನಿಂದ ಪರಾನ್ಯಾ ಎನ್ನುವ ಹೆಣ್ಣುಮಗಳು ಬಂದಿಳಿಯುತ್ತಾಳೆ. ಗೋಣಿಚೀಲವನ್ನೇ ಉಡುಪಾಗಿ ಧರಿಸಿದ ಅವಳು ಮಾನಸಿಕವಾಗಿ ಅಸ್ವಸ್ಥ ಎನ್ನುವುದು ಅವಳ ವರ್ತನೆಗಳಿಂದ ಸ್ಪಷ್ಟವಾಗುತ್ತದೆ. ಜೋಕ್ರ್ಯಾ ಎನ್ನುವ ವ್ಯಕ್ತಿ ತನ್ನ ಕುದುರೆಯನ್ನು ಕಳೆದುಕೊಂಡು, ಹೊಸ ಸೋಷಲಿಸ್ಟ್ ಆಳ್ವಕೆಗೆ ಹೊಂದಿಕೊಳ್ಳದೇ ಸ್ಥಳೀಯ ಕೆಫೆಯಲ್ಲಿ ಕಾಲಹರಣ ಮಾಡುತ್ತಿರುತ್ತಾನೆ. ಪರಾನ್ಯಾ ಹೇಗೋ ಆ ಹಳ್ಳಿಯವಳಾಗುತ್ತಾಳೆ. ಅಲ್ಲಿಯ ಪಡ್ಡೆ ಹುಡುಗರಿಗೆ ಅವಳನ್ನು ಪೀಡಿಸುವುದೇ ಒಂದು ಕೆಲಸ. ಒಂದು ದಿನ ಕಿರುಕುಳದಿಂದ ಪಾರಾಗಲು ಓಡುತ್ತ ಹೋಗಿ ಸ್ಟ್ಯಾಲಿನ್‍ನ ಪ್ರತಿಮೆಯೊಂದರ ಪಕ್ಕಕ್ಕೆ ನಿಂತುಕೊಳ್ಳುತ್ತಾಳೆ. ಜನರ ಒಂದು ಗುಂಪೇ ಬಂದು ತಮಾಷೆ ನೋಡುತ್ತಿದೆ. ಅಷ್ಟರಲ್ಲಿ ಪುಟ್ಟಹುಡುಗಿಯೊಬ್ಬಳು ಅವಳನ್ನು ‘ಸ್ಟಾಲಿನ್‍ನ ಹೆಂಡತಿ’ ಎಂದು ಕರೆದುಬಿಡುತ್ತಾಳೆ. ಅಲ್ಲಿಂದ ಪ್ರಾರಂಭವಾಗುವುದು ಅವಳ ನರಕಯಾತನೆ. ಅಧಿಕಾರಿಗಳು ಅವಳೊಬ್ಬ ಗೂಢಚಾರಿ ಎನ್ನುವ ಸಂಶಯದ ಮೇಲೆ ಬಂಧಿಸಿ ಚಿತ್ರಹಿಂಸೆ ನೀಡುತ್ತಾರೆ. ಆದರೆ ಅವಳಿಂದ ಯಾವ ಮಾಹಿತಿಯೂ ಹೊರಬರುವುದಿಲ್ಲ ಆಗ ಅವಳನ್ನು ಬಿಡುಗಡೆ ಮಾಡಿ, ಅವಳ ಚಲನವಲನಗಳಿಂದ ಮಾಹಿತಿ ಸಿಗಬಹುದು ಎನ್ನುವ ಲೆಕ್ಕಾಚಾರದ ಮೇಲೆ ಅವಳ ಮೇಲೆ ಕಣ್ಣಿಟ್ಟಿರುತ್ತಾರೆ. ಹಿತ್ರಹಿಂಸೆಯನ್ನು ಅನುಭವಿಸಿದ ಪರಾನ್ಯಾಳ ಮಾನಸಿಕ ಸ್ಥಿಮಿತ ಇನ್ನಷ್ಟು ಹದಗೆಟ್ಟಿ, ತನಗೆ ಚಿತ್ರಹಿಂಸೆ ನೀಡಿದಾಗ ಪದೇ ಪದೇ ಕೇಳಿದ ಪದಗಳಾದ ‘ಗೂಢಚಾರ’ ‘ದೇಶದ್ರೋಹಿ’ ಎಂದು ಕಂಡಕಂಡವರನ್ನು ನೋಡಿ ಕರೆಯತೊಡಗುತ್ತಾಳೆ. ಅವಳು ಹೆಸರಿಸಿದ ವ್ಯಕ್ತಿಗಳನ್ನು ಪೊಲೀಸರು ಬಂಧಿಸತೊಡಗಿದಾಗ ಇಡೀ ಊರೇ ಪ್ರಕ್ಷುಬ್ದಗೊಳ್ಳುತ್ತದೆ. ಆಗ ಏನಾದರೂ ಮಾಡಲೇಬೇಕು ಎನ್ನುವ ಸ್ಥಿತಿಗೆ ಬಂದುನಿಂತ ಊರಲ್ಲಿ ಜೋಕ್ರ್ಯಾ ಮಾತ್ರ ಈ ಸಮಸ್ಯೆಯನ್ನು ಪರಿಹರಿಸಬಲ್ಲ.

ಇದು ಹಂಗೇರಿಯದ ಚಿತ್ರನಿರ್ದೇಶಕ ಪೀಟರ್ ಬಾಷೋ 1990 ರಲ್ಲಿ ನಿರ್ದೇಶಿಸಿದ ‘ಸ್ಟ್ಯಾಲಿನ್’ಸ್ ಬ್ರೈಡ್’ ಎನ್ನುವ ಚಿತ್ರದ ಸಾರಾಂಶ.

ಒಂದು ಕಛೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬಳ ನರ್ವಸ್ ಬ್ರೆಕ್‍ಡೌನ್ ಆಗಿ, ತನ್ನೆಲ್ಲ ಬಟ್ಟೆಗಳನ್ನು ಕಳಚಿ ಬೆತ್ತಲೆಯಾಗಿ ರಸ್ತೆಯಲ್ಲಿ ನಡೆಯತೊಡುತ್ತಾಳೆ. ತನ್ನಪಾಡಿಗೆ ತಾನು ಆಸ್ಪತ್ರೆಗೆ ಹೋಗುತ್ತಿದ್ದ ಯುವವೈದ್ಯನೊಬ್ಬ ಇವಳನ್ನು ನೋಡಿ ತನ್ನ ಓವರ್‍ಕೋಟನ್ನು ಅವಳಿಗೆ ಧರಿಸುತ್ತಾನೆ. ತಾನು ಮಾಡಿದ ಈ ಪುಟ್ಟ ಕ್ರಿಯೆಯಿಂದ ಆಗುವ ಪರಿಣಾಮಗಳ ಯಾವುದೇ ಅರಿವಿಲ್ಲದೇ ಆ ವೈದ್ಯ ಮುಂದೆ ಸಾಗುತ್ತಾನೆ. ಆದರೆ ಅವನು ತನ್ನ ಓವರ್‍ಕೋಟನ್ನು ಆ ಬಡಪಾಯಿ ಹೆಣ್ಣುಮಗಳಿಗೆ ಕೊಟ್ಟ ಸ್ಥಳ ಆ ದೇಶದ ಆಳ್ವಿಕೆಯ ವಿರುದ್ಧ ಪ್ರತಿಭಟನೆ ಮಾಡುವವರ ತಾಣ. ಯುವವೈದ್ಯನ ಈ ಒಂದು ಪುಟ್ಟ ಕ್ರಿಯೆಯನ್ನೂ ಪ್ರತಿಭಟನೆಯ ಸಂಕೇತವೆಂದೇ ಅರ್ಥೈಸಿಕೊಳ್ಳುವ ಅಲ್ಲಿಯ ಅಧಿಕಾರಿಗಳು ಆ ವೈದ್ಯನನ್ನು ಬಂಧಿಸಿ, ತನಿಖೆಗೆ ಒಳಪಡಿಸುತ್ತಾರೆ. ಅಲ್ಲಿಂದ ಆ ವೈದ್ಯ ತನ್ನ ಜೀವನವನ್ನು ಹೊಸದಾಗಿ ಕಂಡಿಕೊಳ್ಳಬೇಕಾಗುತ್ತದೆ.

ಇದು ಪೀಟರ್ ಬಾಷೋ ಅವರ ‘ಬನಾನಾ ಸ್ಕಿನ್ ವಾಲ್ಟ್ಜ್’ (1987) ಚಿತ್ರದ ಸಾರಾಂಶ.

1928ರಲ್ಲಿ ಆಗಿನ ಚೆಕೊಸ್ಲೋವೇಕಿಯಾದಲ್ಲಿ ಹುಟ್ಟಿದ ಪೀಟರ್ ಬಾಷೋ, ಹಂಗರಿಯಾದ ಸಿನೆಮಾ ಮತ್ತು ನಾಟಕದ ಶಾಲೆಯಲ್ಲಿ ಪದವಿ ಪಡೆದುಕೊಂಡರು. ಎರಡನೇ ಮಹಾಯುದ್ಧದಲ್ಲಿ ಆದ ಸಾವು ನೋವುಗಳು, ಮಹಾಯುದ್ಧದ ನಂತರ ಹಂಗರಿ ದೇಶ ರಷಿಯಾದ ಸೆಟಲೈಟ್ ಸ್ಟೇಟ್ ಆಗಿ ಮುಂದುವರೆದದ್ದು, ಹೊಸ ಸಮಾಜವಾದಿ ವ್ಯವಸ್ಥೆಯ ಕಟ್ಟುನಿಟ್ಟುಗಳಿಗೆ ಸಾಕ್ಷಿಯಾಗಿದ್ದ ಪೀಟರ್ ಬಾಷೊ ಜೀವನದುದ್ದಕ್ಕೂ ಹೆಚ್ಚಾಗಿ ರಾಜಕೀಯ ಸಿನೆಮಾಗಳನ್ನೇ ಮಾಡಿದರು. 1969 ರಲ್ಲಿ ಅವರು ಮಾಡಿದ ಚಿತ್ರ ‘ದಿ ವಿಟ್ನೆಸ್’ನಲ್ಲಿ ಹಂಗರಿಯ ಕಮ್ಯುನಿಸ್ಟ್ ಕ್ರಾಂತಿಯಲ್ಲಿ ಭಾಗವಹಿಸಿದ್ದ ಒಬ್ಬ ವ್ಯಕ್ತಿ ತನ್ನ ಊರಿನ ಚರಂಡಿ, ನೀರಿನ ಹರಿವುಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾನೆ. ಅವನು ತನ್ನ ಮನೆಯಲ್ಲಿ ಅಡುಗೆಗಾಗಿ ಹಂದಿಯೊಂದನ್ನು ಕೊಯ್ಯುತ್ತಾನೆ. ಹಂಗರಿಯಲ್ಲಿ ಆಗ ಅದು ನಿಷಿದ್ಧ. ಯಾರಿಗೂ ಗೊತ್ತಾಗಬಾರದು ಎಂದು ಎಷ್ಟೇ ಲಕ್ಷ ವಹಿಸಿದ್ದರೂ ಅಧಿಕಾರಿಗಳ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಅವನನ್ನು ಬಂಧಿಸಿದ ನಂತರ ಶಿಕ್ಷೆಯಾಗುವ ಬದಲು ಬೇರೊಂದು ಊರಲ್ಲಿ ಉನ್ನತ ಕೆಲಸಕ್ಕೆ ನೇಮಿಸಲಾಗುತ್ತದೆ. ಏಕೆ ಎಂದು ಅವನಿಗೆ ತಿಳಿಯದು, ಒಂದು ಸಲ ನ್ಯಾಯಧೀಶನ ಮುಂದೆ ಬಂದು ನಿಲ್ಲಬೇಕಾದಲ್ಲಿ ತನ್ನ ಎಲ್ಲ ಸತ್ಯಗಳನ್ನು ಹೇಳಿಬಿಡುತ್ತಾನೆ. ಅದರಿಂದ ಅವನಿಗೆ ಮರಣದಂಡನೆ

ವಿಧಿಸಬೇಕೆಂದು ತೀರ್ಪು ಬರುತ್ತದೆ ಆದರೆ ಮರಣೆದಂಡನೆ ಜಾರಿಗೊಳ್ಳಬೇಕಾದ ಸಮಯದಲ್ಲಿಯೇ ರಾಜಕೀಯ ಪರಿಸ್ಥಿತಿ ಬದಲಾಯಿಸುತ್ತವೆ. ‘ದಿ ವಿಟ್ನೆಸ್’ ಎನ್ನುವ ಈ ಚಿತ್ರವನ್ನು ಆ ದೇಶದ ಸರಕಾರವೇ ನಿರ್ಮಿಸಿತ್ತು ಆದರೆ ಬಿಡುಗಡೆಯ ಮುಂಚೆಯೇ ಚಿತ್ರವನ್ನು ನಿಷೇಧಿಸಿತು. ಈ ಚಿತ್ರ ವಿದೇಶಗಳಲ್ಲಿ ಬಿಡುಗಡೆಯಾಗಿ ಪ್ರಸಿದ್ಧಿ ಮಾಡಿದ ನಂತರವೇ ಹಂಗೇರಿಯ ಕಮ್ಯನಿಸ್ಟ್ ಸರಕಾರ ನಿಷೇಧವನ್ನು ವಾಪಸ್ ತೆಗೆದುಕೊಂಡಿತು. ಬಾಷೋ ಅವರ ಚಿತ್ರಗಳಲ್ಲಿ ಕಮ್ಯನಿಸ್ಟ್ ಆಡಳಿತದ ಕೊರತೆಗಳನ್ನು ಪ್ರಶ್ನಿಸುತ್ತಾರೆಯೇ ಹೊರತು ಕಮ್ಯೂನಿಸಂ ಅನ್ನು ಅಲ್ಲ. ಹಾಗೂ ಅವರೆಲ್ಲ ಚಿತ್ರಗಳು ಎಷ್ಟೇ ಗಂಭೀರ ವಿಷಯಗಳನ್ನೆತ್ತಿಕೊಂಡರೂ ಚಿತ್ರದುದ್ದಕ್ಕೂ ಹಾಸ್ಯ, ದುರಂತದ ವಿಡಂಬನೆಯೇ ಎದ್ದುಕಾಣುತ್ತವೆ. ಕಮ್ಯನಿಸಂ ಬಗ್ಗೆ, ಅದರ ಇತಿಹಾಸದ ಬಗ್ಗೆ ಅನೇಕ ಅಧ್ಯಯನಗಳು ನಮಗೆ ಲಭ್ಯವಿವೆ ಆದರೆ ಕ್ರಾಂತಿಯ ನಂತರ ಅಲ್ಲಿಯ ಸಬ್‍ಆಲ್ಟರ್ನ್ ಇತಿಹಾಸದ ಬಗ್ಗೆ ತಿಳಿಯಬೇಕಾದರೆ ನಾವು ಸಾಹಿತ್ಯ, ಸಿನೆಮಾಗಳನ್ನೇ ನೆಚ್ಚಬೇಕಾಗುತ್ತದೆ. ಆ ನಿಟ್ಟಿನಲ್ಲಿ ಪೀಟರ್ ಬಾಷೋ ಮಹತ್ವದ ಚಿತ್ರ ಬರಹಗಾರ ಮತ್ತು ನಿರ್ದೇಶಕ.

ಸಿನೆಮಾ ನಿರ್ದೇಶನದ ಕೌಶಲ್ಯದ ಪ್ರಶ್ನೆ ಬಂದಾಗಲೂ ಪೀಟರ್ ಬಾಷೋ ನಂತಹ ನಿರ್ದೇಶಕರು ಗೆಲ್ಲುತ್ತಾರೆ ಎಂದು ನನಗನಿಸುತ್ತದೆ. ಏಕೆಂದರೆ ಅವರ ಚಿತ್ರಗಳಲ್ಲಿ ನಮಗೆ ಕಾಣಿಸುವುದು, ಮನಕ್ಕೆ ತಟ್ಟುವುದು ಆಯಾ ಕಥೆಗಳು, ಪಾತ್ರಗಳು, ಪಾತ್ರಗಳು ನೋವು ನಲಿವು ಅದರೊಂದಿಗೆ ಆಯಾ ಸಾಮಾಜಿಕ ಪರಿಸರದ ಚಿತ್ರಣ ಮತ್ತು ಅವರು ಕೇಳುವ ಪ್ರಶ್ನೆಗಳೇ ಹೊರತು ಎಲ್ಲಿಯೂ ನಮಗೆ ನಿರ್ದೇಶಕÀ ಅಥವಾ ಛಾಯಗ್ರಹಕÀ ಕಾಣಿಸಿಕೊಳ್ಳುವುದಿಲ್ಲ. ಒಂದು ಉತ್ತಮ ಚಿತ್ರದ ಕರುಹು ಇದೇ ತಾನೇ?

ವಿಶ್ವದ ಅಂಡರ್‍ರೇಟೆಡ್ ನಿರ್ದೇಶಕರಲ್ಲಿ ಒಬ್ಬರು ಎನ್ನಲಾಗುವ ಪೀಟರ್ ಬಾಷೋ ತಮ್ಮ ಚಲನಚಿತ್ರ ನಿರ್ದೇಶನದ ಸುಧೀರ್ಘ ಜೀವನವನ್ನು ಮುಗಿಸಿ 2009ರಲ್ಲಿ ತಮ್ಮ 81ನೇ ವಯಸ್ಸಿನಲ್ಲಿ ತೀರಿಕೊಂಡರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...