Homeಕರ್ನಾಟಕಉತ್ತರ ಕನ್ನಡ : ಬಿಜೆಪಿ ಹಣೆಬರಹ ದೇಶಪಾಂಡೆ `ಕೈ'ಯಲ್ಲಿ

ಉತ್ತರ ಕನ್ನಡ : ಬಿಜೆಪಿ ಹಣೆಬರಹ ದೇಶಪಾಂಡೆ `ಕೈ’ಯಲ್ಲಿ

- Advertisement -
- Advertisement -

| ಶುದ್ಧೋದನ |
ಉತ್ತರ ಕನ್ನಡದಲ್ಲಿ ವಿಪರೀತ ಬಿಸಿಲಿನ ಉರಿ ಮತ್ತು ಅಷ್ಟೇ ಪ್ರಮಾಣದ ಲೋಕಸಭಾ ಚುನಾವಣೆ ಕಾವು. ಜನರ ತಾತ್ಸಾರಕ್ಕೆ ತುತ್ತಾಗಿರುವ ಬಿಜೆಪಿಯ ಅನಂತಮಾಣಿ ಮೇಲೆ ಆಸ್ನೋಟಿಕರ್ ಏಕಾಂಗಿ ವೀರನಂತೆ ಮುಗಿಬೀಳುತ್ತಿದ್ದಾನೆ.
ಬರೋಬ್ಬರಿ 22 ವರ್ಷದ ಸಂಸದಗಿರಿಯಲ್ಲಿ ಅನಂತ್ಮಾಣಿ ಯೋಜನಾಬದ್ಧವಾಗಿ ಜಿಲ್ಲೆಗೆ ದ್ರೋಹ ಬಗೆದಿದ್ದಾನೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಎಂದು ತಲೆ ಕೆಡಿಸಿಕೊಳ್ಳದ ಮಾಣಿ ಹೇಳೋದೊಂದು ಮಾಡೋದೊಂದು ಎಂಬುದು ಅರ್ಥವಾಗಿರುವ ಜನರಿಗೆ ಆತನ ಸಹವಾಸ ಸಾಕಾಗಿದೆ. ಇದರ ಅರ್ಥ ಇಷ್ಟೇ, ಮೈತ್ರಿಕೂಟದ ಕಿಂಗ್‍ಪಿನ್ ಆರ್.ವಿ.ದೇಶಪಾಂಡೆ ಮನಸಿಟ್ಟು ಕೆಲಸ ಮಾಡಿದರೆ ಜಿಲ್ಲೆಯ ರಾಜಕಾರಣದ ದಿಕ್ಕು ಬದಲಿಸುವುದು ಕಷ್ಟವಿಲ್ಲ.

ತನಗೆ ರಾಜಕೀಯ ದೀಕ್ಷೆ ಕೊಟ್ಟಿದ್ದ ಗುರು ಚಿತ್ತರಂಜನ್‍ರ ನಿಗೂಢ ಹತ್ಯೆಯ ಸೂತಕದ ಅಡಿಯಲ್ಲಿ ಮೊದಲ ಬಾರಿ ಸಂಸದನಾದ ಅನಂತ್ಮಾಣಿಯ ಆನಂತರದ 3 ಗೆಲುವುಗಳು ದೇಶಪಾಂಡೆ ಕೊಟ್ಟ ಉಡುಗೊರೆಗಳಂತಿದ್ದವು. ಆರನೇ ಬಾರಿ ಅನಂತ ಮಾಣಿ ಸ್ಪರ್ಧಿಸಿದಾಗ ದೇಶಪಾಂಡೆ ಕಾಂಗ್ರೆಸನ್ನು ತನಗರಿವಿಲ್ಲದಂತೆ ನಿರ್ನಾಮ ಮಾಡಿ ಆಗಿತ್ತು. ಹಾಗಾಗಿ ತನ್ನ ಮಗ ಪ್ರಶಾಂತ್ ಕಾಂಗ್ರೆಸ್ ಕ್ಯಾಂಡಿಡೇಟ್ ಆದರೂ ದೇಶಪಾಂಡೆಗೆ ಗೆಲ್ಲಿಸಿಕೊಳ್ಳಲಾಗಲಿಲ್ಲ. ದಿಲ್ಲಿ ಡಿಟೇಲ್ ರಾಜಕಾರಣಿ ಮಾರ್ಗರೇಟ್ ಆಳ್ವಾ ಜಿಲ್ಲಾ ಕಾಂಗ್ರೆಸ್‍ನ ಅಧಿನಾಯಕಿಯಾಗಿದ್ದ ಕಾಲದಲ್ಲಿ ಆಕೆಯ ಸೀರೆಯ ಚುಂಗು ಹಿಡಿದು ಕಾಂಗ್ರೆಸ್‍ಗೆ ನುಸುಳಿದ್ದ ಪಾಂಡೇಜಿ ಆಮೇಲೆ ಆಕೆಯ ವಿರುದ್ಧವೇ ತಿರುಗಿನಿಂತು ಕಾಂಗ್ರೆಸ್‍ನ ನಿರ್ನಾಮ ಮಾಡಿದ್ದು ಈಗ ಇತಿಹಾಸ.

ಒನ್ಸ್ ಎಗೇನ್, ಈಗ ಮೈತ್ರಿಕೂಟದ ಸೋಲು ಗೆಲುವು ದೇಶಪಾಂಡೆ ಕೈಲಿರುವುದಂತೂ ಖರೆ!!.
ಮೈತ್ರಿಕೂಟದ ಕ್ಯಾಂಡಿಡೇಟ್ ಆನಂದ ಅಸ್ನೋಟಿಕರ್ ಕಂಡರೆ ದೇಶಪಾಂಡೆಗೆ ಲಾಗಾಯ್ತಿನಿಂದಲೂ ಅಷ್ಟಕಷ್ಟೇ. ಆಸ್ನೋಟಿಕರ್ ತಂದೆ ವಸಂತ ಅಸ್ನೋಟಿಕರ್ ಎಂಬ ದಿವಂಗತ ರಾಬಿನ್‍ಹುಡ್, ಮ್ಯಾಗಿ ಕ್ಯಾಂಪಿನಲ್ಲಿದ್ದ ಕಾರವಾರದ ಅಂದಿನ ಶಾಸಕ. ಈತ ಭೂಗತ ಲೋಕದ ಜಿದ್ದಿಗೆ ಬಲಿಯಾದ. ಆತನ ಹೆಂಡತಿಯನ್ನು ಎಮ್ಮೆಲ್ಸಿ ಮಾಡಲು ಮ್ಯಾಗಿ ಪ್ರಯತ್ನಿಸಿದಾಗ ಇದೇ ದೇಶಪಾಂಡೆ ಅಡ್ಡಗಾಲು ಹಾಕಿದ್ದ. ಆದರೂ ಮ್ಯಾಗಿ ಶುಭಲತಾ ಅಸ್ನೋಟಿಕರ್‍ರನ್ನು ವಿಧಾನ ಪರಿಷತ್‍ಗೆ ಕಳಿಸಿದ್ದರು.

ಆನಂದ್ ಪ್ರಾಯಕ್ಕೆ ಬಂದ ನಂತರ ಮ್ಯಾಗಿ ಅಜ್ಜಿಯ ವಿರುದ್ಧವೇ ತಿರುಗಿಬಿದ್ದ. 2004ರ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಮ್ಯಾಗಿ ತನ್ನ ಚೇಲಾ ಅಶೋಕ್ ನಾಯ್ಕನನ್ನು ಕಾಂಗ್ರೆಸ್‍ನಿಂದ ಕಣಕ್ಕೆ ಇಳಿಸಿದ್ದು ಇದಕ್ಕೆ ಕಾರಣ. ಯಾಕೆಂದರೆ ಈ ಅಶೋಕ ಕಾರವಾರ ರಾಜಕಾರಣದಲ್ಲಿ ಆನಂದ್‍ಗೆ ವಿರೋಧಿಯಾಗಿದ್ದ. ಹೀಗಾಗಿ ಆನಂದ ಹಠಕ್ಕೆ ಬಿದ್ದು ಅಂದು ಬಿಜೆಪಿಯ ಅನಾಮಧೇಯ ಗಂಗಾಧರ ಭಟ್ಟ ಎಂಬುವನ ಪರ ಪ್ರಚಾರ ನಡೆಸಿ ಗೆಲ್ಲಿಸಿದ್ದಲ್ಲದೆ ಪರೋಕ್ಷವಾಗಿ ತಾನೇ ಶಾಸಕಗಿರಿ ನಡೆಸಿದ್ದ.

ಯಾವಾಗ ಆನಂದ್, ಮ್ಯಾಗಿ ವಿರುದ್ಧ ತಿರುಗಿಬಿದ್ದರೋ ಆಗ ಆತನಿಗೆ ಗಾಡ್‍ಫಾದರ್ ಆಗಿ ನಿಂತದ್ದು ದೇಶಪಾಂಡೆ! ಮ್ಯಾಗಿಯ ಪ್ರಬಲ ವಿರೋಧದ ನಡುವೆಯೂ ಆತನನ್ನು 2005ರ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಕಾರವಾರದ ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಿದ್ದರು. ಗೆದ್ದ ಆನಂದ ಮೂರೇ ತಿಂಗಳಿಗೆ ಆಪರೇಷನ್ ಕಮಲಕ್ಕೆ ಬಲಿಯಾಗಿ ರಾಜಕೀಯ ಬದುಕನ್ನೇ ಹಾಳು ಮಾಡಿಕೊಂಡಿದ್ದ. ಆ ಕಾರಣಕ್ಕೆ ದೇಶಪಾಂಡೆಗೆ ಈಗಲೂ ಆನಂದನ ಮೇಲಿನ ಸಿಟ್ಟು ಕಡಿಮೆಯಾಗಿಲ್ಲ. ಆನಂದ್ ಮೈತ್ರಿಕೂಟದ ಕ್ಯಾಂಡಿಡೇಟ್ ಎಂದು ಘೋಷಣೆ ಆದಾಗ ಎದುರಾಳಿ ಅನಂತ್ಮಾಣಿಗಿಂತಲೂ ಹೆಚ್ಚು ಡಿಸ್ಟರ್ಬ್ ಆದದ್ದು ಇದೇ ದೇಶಪಾಂಡೆ!


ಪಕ್ಕದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರಮೋದ್ ಮಧ್ವರಾಜ್‍ರನ್ನು ಜೆಡಿಎಸ್‍ಗೆ ಕಾಂಗ್ರೆಸ್ ಎರವಲು ಕೊಟ್ಟಂತೆ ಉತ್ತರಕನ್ನಡದಲ್ಲೂ ಡಿಸಿಸಿ ಅಧ್ಯಕ್ಷನೂ ತನ್ನ ಆಜ್ಞಾನುಧಾರಿಯೂ ಆದ ಭೀಮಣ್ಣ ನಾಯಕನಿಗೆ ಜೆಡಿಎಸ್ ಬಣ್ಣ ಬಳಿಯುವುದು ದೇಶಪಾಂಡೆ ಇರಾದೆಯಾಗಿತ್ತು. ಆದರೆ ಗೌಡರು, ಆಸ್ನೋಟಿಕರ್ ಬೇಡವೆಂದಾದರೆ ರಾಮಕೃಷ್ಣ ಹೆಗಡೆಯ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆಯನ್ನು ಒಪ್ಪಿಕೊಳ್ಳುವಿರಾ ಎಂದು ಕೇಳಿದಾಗ ದೇಶಪಾಂಡೆ ದಂಗಾಗಿಹೋದರು. ಗುರು ಹೆಗಡೆ ಫ್ಯಾಮಿಲಿಗೂ ದೇಶಪಾಂಡೆಗೂ ಪುರಾತನ ಹಗೆ ಹೊಗೆಯಾಡುತ್ತಲೇ ಇದೆ. ಹಾಗಾಗಿ ದೇಶಪಾಂಡೆ ಆಸ್ನೋಟಿಕರ್ ಕ್ಯಾಂಡಿಡೇಚರ್ ಒಪ್ಪಿಕೊಳ್ಳಬೇಕಾಯ್ತು.


ಮೈತ್ರಿಕೂಟದ ಹುರಿಯಾಳಿನ ಹೆಸರು ಬಹಿರಂಗವಾಗಿ ವಾರವೇ ಕಳೆದರೂ ದೇಶಪಾಂಡೆ ಮೊಗಮ್ಮಾಗೆ ಹೆಜ್ಜೆ ಹಾಕುತ್ತಿದ್ದಾರೆ. ಆನಂದ ಆಸ್ನೋಟಿಕರ್, ದೇಶಪಾಂಡೆ ಮನೆಗೆ ಹೋಗಿ ಅಡ್ಡಬಿದ್ದು ಬಂದರೂ ದೇಶಪಾಂಡೆ ಮಾತ್ರ ಜಿಲ್ಲೆಯತ್ತ ತಲೆಹಾಕಿಲ್ಲ. ಎಲ್ಲಿಯೂ ಆನಂದ್‍ಗೆ ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ಹೇಳಿಲ್ಲ. ಕಾಂಗ್ರೆಸ್-ಜೆಡಿಎಸ್ ಜಿಲ್ಲಾ ಲೀಡರ್‍ಗಳ ಜಂಟಿ ಪತ್ರಿಕಾಗೋಷ್ಠಿ ಹೊತ್ತಲ್ಲೂ ದೇಶಪಾಂಡೆಯ ಶಿಷ್ಯ ಭೀಮಣ್ಣ ನಾಯ್ಕ, ಆನಂದ ಅಂತರ ಕಾಯ್ದುಕೊಂಡಿದ್ದರು. ಈ ಭೀಮಣ್ಣ ಬಿಜೆಪಿಯ ಅನಂತ್ಮಾಣಿಯ ಅಂತರಂಗದ ಗೆಣೆಕಾರ. ಅನಂತ್ಮಾಣಿ ಶಿರಸಿಯ ವೈದ್ಯರಿಗೆ ಒಡೆದು ರಕ್ತ ಹರಿಸಿದಾಗ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಸಾಂಕೇತಿಕವಾಗಿ ಕುಳಿತೆದ್ದು “ನಂಗೆ ಥಂಡಿ, ಕೆಮ್ಮು” ಎಂದು ಹೇಳಿ ಮಾತನಾಡದೆ ಮನೆಗೆ ಹೋಗಿದ್ದು ಅವರಿಬ್ಬರ ಗೆಳೆತನಕ್ಕೆ ಸಾಕ್ಷಿ.

ಸದ್ಯಕ್ಕೆ ಆಂಟಿಇನ್‍ಕಂಬೆನ್ಸಿಯಲ್ಲಿ ತೊಳಲಾಡುತ್ತಿರುವ ಬಿಜೆಪಿಯ ಅನಂತ್ಮಾಣಿ ವಿರುದ್ಧ ಮೈತ್ರಿಕೂಟ ಒಟ್ಟಾಗಿ ಅಖಾಡಕ್ಕಿಳಿದರೆ ಜಿಲ್ಲೆಯಲ್ಲಿ ಮತ್ತೆ ಸೆಕ್ಯುಲರ್ ರಾಜಕಾರಣ ಪ್ರತಿಷ್ಠಾಪಿಸುವುದು ಕಷ್ಟವೇನಲ್ಲ. ಇದು ಭವಿಷ್ಯದಲ್ಲಿ ದೇಶಪಾಂಡೆ ಮಗನ ರಾಜಕಾರಣಕ್ಕೂ ನೆರವಾಗುತ್ತದೆ. ಆದರೆ ದೇಶಪಾಂಡೆ ಇಷ್ಟು ವಿಶಾಲವಾಗಿ ಯೋಚಿಸಬಲ್ಲರೇ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...