Homeಕರ್ನಾಟಕಉತ್ತರ ಕನ್ನಡ : ಬಿಜೆಪಿ ಹಣೆಬರಹ ದೇಶಪಾಂಡೆ `ಕೈ'ಯಲ್ಲಿ

ಉತ್ತರ ಕನ್ನಡ : ಬಿಜೆಪಿ ಹಣೆಬರಹ ದೇಶಪಾಂಡೆ `ಕೈ’ಯಲ್ಲಿ

- Advertisement -
- Advertisement -

| ಶುದ್ಧೋದನ |
ಉತ್ತರ ಕನ್ನಡದಲ್ಲಿ ವಿಪರೀತ ಬಿಸಿಲಿನ ಉರಿ ಮತ್ತು ಅಷ್ಟೇ ಪ್ರಮಾಣದ ಲೋಕಸಭಾ ಚುನಾವಣೆ ಕಾವು. ಜನರ ತಾತ್ಸಾರಕ್ಕೆ ತುತ್ತಾಗಿರುವ ಬಿಜೆಪಿಯ ಅನಂತಮಾಣಿ ಮೇಲೆ ಆಸ್ನೋಟಿಕರ್ ಏಕಾಂಗಿ ವೀರನಂತೆ ಮುಗಿಬೀಳುತ್ತಿದ್ದಾನೆ.
ಬರೋಬ್ಬರಿ 22 ವರ್ಷದ ಸಂಸದಗಿರಿಯಲ್ಲಿ ಅನಂತ್ಮಾಣಿ ಯೋಜನಾಬದ್ಧವಾಗಿ ಜಿಲ್ಲೆಗೆ ದ್ರೋಹ ಬಗೆದಿದ್ದಾನೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಎಂದು ತಲೆ ಕೆಡಿಸಿಕೊಳ್ಳದ ಮಾಣಿ ಹೇಳೋದೊಂದು ಮಾಡೋದೊಂದು ಎಂಬುದು ಅರ್ಥವಾಗಿರುವ ಜನರಿಗೆ ಆತನ ಸಹವಾಸ ಸಾಕಾಗಿದೆ. ಇದರ ಅರ್ಥ ಇಷ್ಟೇ, ಮೈತ್ರಿಕೂಟದ ಕಿಂಗ್‍ಪಿನ್ ಆರ್.ವಿ.ದೇಶಪಾಂಡೆ ಮನಸಿಟ್ಟು ಕೆಲಸ ಮಾಡಿದರೆ ಜಿಲ್ಲೆಯ ರಾಜಕಾರಣದ ದಿಕ್ಕು ಬದಲಿಸುವುದು ಕಷ್ಟವಿಲ್ಲ.

ತನಗೆ ರಾಜಕೀಯ ದೀಕ್ಷೆ ಕೊಟ್ಟಿದ್ದ ಗುರು ಚಿತ್ತರಂಜನ್‍ರ ನಿಗೂಢ ಹತ್ಯೆಯ ಸೂತಕದ ಅಡಿಯಲ್ಲಿ ಮೊದಲ ಬಾರಿ ಸಂಸದನಾದ ಅನಂತ್ಮಾಣಿಯ ಆನಂತರದ 3 ಗೆಲುವುಗಳು ದೇಶಪಾಂಡೆ ಕೊಟ್ಟ ಉಡುಗೊರೆಗಳಂತಿದ್ದವು. ಆರನೇ ಬಾರಿ ಅನಂತ ಮಾಣಿ ಸ್ಪರ್ಧಿಸಿದಾಗ ದೇಶಪಾಂಡೆ ಕಾಂಗ್ರೆಸನ್ನು ತನಗರಿವಿಲ್ಲದಂತೆ ನಿರ್ನಾಮ ಮಾಡಿ ಆಗಿತ್ತು. ಹಾಗಾಗಿ ತನ್ನ ಮಗ ಪ್ರಶಾಂತ್ ಕಾಂಗ್ರೆಸ್ ಕ್ಯಾಂಡಿಡೇಟ್ ಆದರೂ ದೇಶಪಾಂಡೆಗೆ ಗೆಲ್ಲಿಸಿಕೊಳ್ಳಲಾಗಲಿಲ್ಲ. ದಿಲ್ಲಿ ಡಿಟೇಲ್ ರಾಜಕಾರಣಿ ಮಾರ್ಗರೇಟ್ ಆಳ್ವಾ ಜಿಲ್ಲಾ ಕಾಂಗ್ರೆಸ್‍ನ ಅಧಿನಾಯಕಿಯಾಗಿದ್ದ ಕಾಲದಲ್ಲಿ ಆಕೆಯ ಸೀರೆಯ ಚುಂಗು ಹಿಡಿದು ಕಾಂಗ್ರೆಸ್‍ಗೆ ನುಸುಳಿದ್ದ ಪಾಂಡೇಜಿ ಆಮೇಲೆ ಆಕೆಯ ವಿರುದ್ಧವೇ ತಿರುಗಿನಿಂತು ಕಾಂಗ್ರೆಸ್‍ನ ನಿರ್ನಾಮ ಮಾಡಿದ್ದು ಈಗ ಇತಿಹಾಸ.

ಒನ್ಸ್ ಎಗೇನ್, ಈಗ ಮೈತ್ರಿಕೂಟದ ಸೋಲು ಗೆಲುವು ದೇಶಪಾಂಡೆ ಕೈಲಿರುವುದಂತೂ ಖರೆ!!.
ಮೈತ್ರಿಕೂಟದ ಕ್ಯಾಂಡಿಡೇಟ್ ಆನಂದ ಅಸ್ನೋಟಿಕರ್ ಕಂಡರೆ ದೇಶಪಾಂಡೆಗೆ ಲಾಗಾಯ್ತಿನಿಂದಲೂ ಅಷ್ಟಕಷ್ಟೇ. ಆಸ್ನೋಟಿಕರ್ ತಂದೆ ವಸಂತ ಅಸ್ನೋಟಿಕರ್ ಎಂಬ ದಿವಂಗತ ರಾಬಿನ್‍ಹುಡ್, ಮ್ಯಾಗಿ ಕ್ಯಾಂಪಿನಲ್ಲಿದ್ದ ಕಾರವಾರದ ಅಂದಿನ ಶಾಸಕ. ಈತ ಭೂಗತ ಲೋಕದ ಜಿದ್ದಿಗೆ ಬಲಿಯಾದ. ಆತನ ಹೆಂಡತಿಯನ್ನು ಎಮ್ಮೆಲ್ಸಿ ಮಾಡಲು ಮ್ಯಾಗಿ ಪ್ರಯತ್ನಿಸಿದಾಗ ಇದೇ ದೇಶಪಾಂಡೆ ಅಡ್ಡಗಾಲು ಹಾಕಿದ್ದ. ಆದರೂ ಮ್ಯಾಗಿ ಶುಭಲತಾ ಅಸ್ನೋಟಿಕರ್‍ರನ್ನು ವಿಧಾನ ಪರಿಷತ್‍ಗೆ ಕಳಿಸಿದ್ದರು.

ಆನಂದ್ ಪ್ರಾಯಕ್ಕೆ ಬಂದ ನಂತರ ಮ್ಯಾಗಿ ಅಜ್ಜಿಯ ವಿರುದ್ಧವೇ ತಿರುಗಿಬಿದ್ದ. 2004ರ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಮ್ಯಾಗಿ ತನ್ನ ಚೇಲಾ ಅಶೋಕ್ ನಾಯ್ಕನನ್ನು ಕಾಂಗ್ರೆಸ್‍ನಿಂದ ಕಣಕ್ಕೆ ಇಳಿಸಿದ್ದು ಇದಕ್ಕೆ ಕಾರಣ. ಯಾಕೆಂದರೆ ಈ ಅಶೋಕ ಕಾರವಾರ ರಾಜಕಾರಣದಲ್ಲಿ ಆನಂದ್‍ಗೆ ವಿರೋಧಿಯಾಗಿದ್ದ. ಹೀಗಾಗಿ ಆನಂದ ಹಠಕ್ಕೆ ಬಿದ್ದು ಅಂದು ಬಿಜೆಪಿಯ ಅನಾಮಧೇಯ ಗಂಗಾಧರ ಭಟ್ಟ ಎಂಬುವನ ಪರ ಪ್ರಚಾರ ನಡೆಸಿ ಗೆಲ್ಲಿಸಿದ್ದಲ್ಲದೆ ಪರೋಕ್ಷವಾಗಿ ತಾನೇ ಶಾಸಕಗಿರಿ ನಡೆಸಿದ್ದ.

ಯಾವಾಗ ಆನಂದ್, ಮ್ಯಾಗಿ ವಿರುದ್ಧ ತಿರುಗಿಬಿದ್ದರೋ ಆಗ ಆತನಿಗೆ ಗಾಡ್‍ಫಾದರ್ ಆಗಿ ನಿಂತದ್ದು ದೇಶಪಾಂಡೆ! ಮ್ಯಾಗಿಯ ಪ್ರಬಲ ವಿರೋಧದ ನಡುವೆಯೂ ಆತನನ್ನು 2005ರ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಕಾರವಾರದ ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಿದ್ದರು. ಗೆದ್ದ ಆನಂದ ಮೂರೇ ತಿಂಗಳಿಗೆ ಆಪರೇಷನ್ ಕಮಲಕ್ಕೆ ಬಲಿಯಾಗಿ ರಾಜಕೀಯ ಬದುಕನ್ನೇ ಹಾಳು ಮಾಡಿಕೊಂಡಿದ್ದ. ಆ ಕಾರಣಕ್ಕೆ ದೇಶಪಾಂಡೆಗೆ ಈಗಲೂ ಆನಂದನ ಮೇಲಿನ ಸಿಟ್ಟು ಕಡಿಮೆಯಾಗಿಲ್ಲ. ಆನಂದ್ ಮೈತ್ರಿಕೂಟದ ಕ್ಯಾಂಡಿಡೇಟ್ ಎಂದು ಘೋಷಣೆ ಆದಾಗ ಎದುರಾಳಿ ಅನಂತ್ಮಾಣಿಗಿಂತಲೂ ಹೆಚ್ಚು ಡಿಸ್ಟರ್ಬ್ ಆದದ್ದು ಇದೇ ದೇಶಪಾಂಡೆ!


ಪಕ್ಕದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರಮೋದ್ ಮಧ್ವರಾಜ್‍ರನ್ನು ಜೆಡಿಎಸ್‍ಗೆ ಕಾಂಗ್ರೆಸ್ ಎರವಲು ಕೊಟ್ಟಂತೆ ಉತ್ತರಕನ್ನಡದಲ್ಲೂ ಡಿಸಿಸಿ ಅಧ್ಯಕ್ಷನೂ ತನ್ನ ಆಜ್ಞಾನುಧಾರಿಯೂ ಆದ ಭೀಮಣ್ಣ ನಾಯಕನಿಗೆ ಜೆಡಿಎಸ್ ಬಣ್ಣ ಬಳಿಯುವುದು ದೇಶಪಾಂಡೆ ಇರಾದೆಯಾಗಿತ್ತು. ಆದರೆ ಗೌಡರು, ಆಸ್ನೋಟಿಕರ್ ಬೇಡವೆಂದಾದರೆ ರಾಮಕೃಷ್ಣ ಹೆಗಡೆಯ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆಯನ್ನು ಒಪ್ಪಿಕೊಳ್ಳುವಿರಾ ಎಂದು ಕೇಳಿದಾಗ ದೇಶಪಾಂಡೆ ದಂಗಾಗಿಹೋದರು. ಗುರು ಹೆಗಡೆ ಫ್ಯಾಮಿಲಿಗೂ ದೇಶಪಾಂಡೆಗೂ ಪುರಾತನ ಹಗೆ ಹೊಗೆಯಾಡುತ್ತಲೇ ಇದೆ. ಹಾಗಾಗಿ ದೇಶಪಾಂಡೆ ಆಸ್ನೋಟಿಕರ್ ಕ್ಯಾಂಡಿಡೇಚರ್ ಒಪ್ಪಿಕೊಳ್ಳಬೇಕಾಯ್ತು.


ಮೈತ್ರಿಕೂಟದ ಹುರಿಯಾಳಿನ ಹೆಸರು ಬಹಿರಂಗವಾಗಿ ವಾರವೇ ಕಳೆದರೂ ದೇಶಪಾಂಡೆ ಮೊಗಮ್ಮಾಗೆ ಹೆಜ್ಜೆ ಹಾಕುತ್ತಿದ್ದಾರೆ. ಆನಂದ ಆಸ್ನೋಟಿಕರ್, ದೇಶಪಾಂಡೆ ಮನೆಗೆ ಹೋಗಿ ಅಡ್ಡಬಿದ್ದು ಬಂದರೂ ದೇಶಪಾಂಡೆ ಮಾತ್ರ ಜಿಲ್ಲೆಯತ್ತ ತಲೆಹಾಕಿಲ್ಲ. ಎಲ್ಲಿಯೂ ಆನಂದ್‍ಗೆ ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ಹೇಳಿಲ್ಲ. ಕಾಂಗ್ರೆಸ್-ಜೆಡಿಎಸ್ ಜಿಲ್ಲಾ ಲೀಡರ್‍ಗಳ ಜಂಟಿ ಪತ್ರಿಕಾಗೋಷ್ಠಿ ಹೊತ್ತಲ್ಲೂ ದೇಶಪಾಂಡೆಯ ಶಿಷ್ಯ ಭೀಮಣ್ಣ ನಾಯ್ಕ, ಆನಂದ ಅಂತರ ಕಾಯ್ದುಕೊಂಡಿದ್ದರು. ಈ ಭೀಮಣ್ಣ ಬಿಜೆಪಿಯ ಅನಂತ್ಮಾಣಿಯ ಅಂತರಂಗದ ಗೆಣೆಕಾರ. ಅನಂತ್ಮಾಣಿ ಶಿರಸಿಯ ವೈದ್ಯರಿಗೆ ಒಡೆದು ರಕ್ತ ಹರಿಸಿದಾಗ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಸಾಂಕೇತಿಕವಾಗಿ ಕುಳಿತೆದ್ದು “ನಂಗೆ ಥಂಡಿ, ಕೆಮ್ಮು” ಎಂದು ಹೇಳಿ ಮಾತನಾಡದೆ ಮನೆಗೆ ಹೋಗಿದ್ದು ಅವರಿಬ್ಬರ ಗೆಳೆತನಕ್ಕೆ ಸಾಕ್ಷಿ.

ಸದ್ಯಕ್ಕೆ ಆಂಟಿಇನ್‍ಕಂಬೆನ್ಸಿಯಲ್ಲಿ ತೊಳಲಾಡುತ್ತಿರುವ ಬಿಜೆಪಿಯ ಅನಂತ್ಮಾಣಿ ವಿರುದ್ಧ ಮೈತ್ರಿಕೂಟ ಒಟ್ಟಾಗಿ ಅಖಾಡಕ್ಕಿಳಿದರೆ ಜಿಲ್ಲೆಯಲ್ಲಿ ಮತ್ತೆ ಸೆಕ್ಯುಲರ್ ರಾಜಕಾರಣ ಪ್ರತಿಷ್ಠಾಪಿಸುವುದು ಕಷ್ಟವೇನಲ್ಲ. ಇದು ಭವಿಷ್ಯದಲ್ಲಿ ದೇಶಪಾಂಡೆ ಮಗನ ರಾಜಕಾರಣಕ್ಕೂ ನೆರವಾಗುತ್ತದೆ. ಆದರೆ ದೇಶಪಾಂಡೆ ಇಷ್ಟು ವಿಶಾಲವಾಗಿ ಯೋಚಿಸಬಲ್ಲರೇ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳ: ಕೊಲ್ಲಂ ಕಾರ್ಪೊರೇಷನ್‌ನಲ್ಲಿ 25 ವರ್ಷಗಳ ಎಲ್‌ಡಿಎಫ್‌ ಆಳ್ವಿಕೆ ಕೊನೆಗೊಳಿಸಿದ ಯುಡಿಎಫ್

2025 ರ ಕೇರಳ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶಗಳು ರಾಜ್ಯದಲ್ಲಿ ಅತ್ಯಂತ ಅಚ್ಚರಿಯ ರಾಜಕೀಯ ಫಲಿತಾಂಶಳನ್ನು ನೀಡಿವೆ. ಅದರಲ್ಲಿ, ಕೊಲ್ಲಂ ಕಾರ್ಪೊರೇಷನ್‌ನಲ್ಲಿ ಎಡಪಂಥೀಯ ಪ್ರಜಾಸತ್ತಾತ್ಮಕ ರಂಗದ ನಿರಂತರ 25 ವರ್ಷಗಳ ನಿಯಂತ್ರಣವನ್ನು ಯುನೈಟೆಡ್...

‘ಭಾರತೀಯ ಬಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ’: ಕಾಂಗ್ರೆಸ್‌ನ ‘ವೋಟ್ ಚೋರಿ’ ಅಭಿಯಾನದ ಬಗ್ಗೆ ಒಮರ್ ಅಬ್ದುಲ್ಲಾ

"ಕಾಂಗ್ರೆಸ್ 'ವೋಟ್ ಚೋರಿ' ಮತ್ತು ಎಸ್‌ಐಆರ್ ಅನ್ನು ತನ್ನ ಪ್ರಮುಖ ವಿಷಯಗಳನ್ನಾಗಿ ಮಾಡಿಕೊಂಡಿದೆ. ಇಲ್ಲದಿದ್ದರೆ ನಾವು ಅವರಿಗೆ ಯಾರು ಹೇಳಬೇಕು?" ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಹೇಳಿದರು. ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ...

ಇಂಡಿಗೋ ವಿಮಾನ ರದ್ದತಿಗೆ ಸಂಬಂಧಿಸಿದ ಪಿಐಎಲ್ ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್

ನೂರಾರು ಇಂಡಿಗೋ ವಿಮಾನಗಳ ರದ್ದತಿಗೆ ನ್ಯಾಯಾಂಗ ಹಸ್ತಕ್ಷೇಪ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸೋಮವಾರ ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಅರ್ಜಿದಾರರು ತಮ್ಮ ದೂರುಗಳೊಂದಿಗೆ ದೆಹಲಿ ಹೈಕೋರ್ಟ್ ಅನ್ನು...

ಹಣ ಅಕ್ರಮ ವರ್ಗಾವಣೆ ಪ್ರಕರಣ : ಪತ್ರಕರ್ತ ಮಹೇಶ್ ಲಾಂಗಾಗೆ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು

ವಂಚನೆ ಆರೋಪದ ಮೇಲೆ ದಾಖಲಾಗಿರುವ ಎರಡು ಎಫ್‌ಐಆರ್‌ಗಳಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪತ್ರಕರ್ತ ಮಹೇಶ್ ಲಾಂಗಾ ಅವರಿಗೆ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ (ಡಿ.15) ಮಧ್ಯಂತರ ಜಾಮೀನು ನೀಡಿದೆ. ಜಿಎಸ್‌ಟಿ ವಂಚನೆ...

‘ಮಹಿಳೆಯರು ಗಂಡಂದಿರ ಜೊತೆ ಮಲಗಲು ಮಾತ್ರ’: ಸಿಪಿಎಂ ನಾಯಕನ ಅಸೂಕ್ಷ್ಮ ಹೇಳಿಕೆಗೆ ವ್ಯಾಪಕ ಆಕ್ರೋಶ

ಮಲಪ್ಪುರಂ ಜಿಲ್ಲೆಯಲ್ಲಿ ಸಿಪಿಎಂ ಪ್ರಾದೇಶಿಕ ನಾಯಕ ಸಯೀದ್ ಅಲಿ ಮಜೀದ್ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವಾಗ ಸ್ತ್ರೀದ್ವೇಷದ ಹೇಳಿಕೆಗಳನ್ನು ನೀಡಿದ ನಂತರ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.  ಸಯೀದ್ ಅಲಿ ಮಜೀದ್, ತೆನ್ನೆಲಾ ಪಂಚಾಯತ್ ವಾರ್ಡ್ ಅನ್ನು...

ಅಖ್ಲಾಕ್ ಹತ್ಯೆ ಪ್ರಕರಣ ಹಿಂತೆಗೆದುಕೊಳ್ಳುವುದು ನ್ಯಾಯಾಂಗ ಪ್ರಕ್ರಿಯೆ ಹಳಿತಪ್ಪಿಸುವ ಪ್ರಯತ್ನ: ಬೃಂದಾ ಕಾರಟ್

ರಾಜ್ಯಪಾಲರ ಅನುಮತಿಯೊಂದಿಗೆ ಮೊಹಮ್ಮದ್ ಅಖ್ಲಾಕ್ ಅವರ ಕೊಲೆ ಮತ್ತು ಗುಂಪು ಹತ್ಯೆಗೆ ಸಂಬಂಧಿಸಿದ ಪ್ರಕರಣವನ್ನು ಹಿಂತೆಗೆದುಕೊಳ್ಳುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರ ಖಂಡಿಸಿ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಹಿರಿಯ ನಾಯಕಿ ಬೃಂದಾ ಕಾರಟ್...

ಮತ್ತೆ ಮುನ್ನೆಲೆಗೆ ಬಂದ ‘Avalkoppam’: ದಿಲೀಪ್ ಖುಲಾಸೆ ಬಳಿಕ ಕೇರಳದಾದ್ಯಂತ ಪ್ರತಿಭಟನೆ

ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಿರುವ ನ್ಯಾಯಾಲಯದ ತೀರ್ಪಿಗೆ ಕೇರಳದಾದ್ಯಂತ ದೊಡ್ಡ ಮಟ್ಟದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. 2017ರಲ್ಲಿ ನಟಿ ಮೇಲೆ ದೌರ್ಜನ್ಯ ನಡೆದಾಗ...

‘ಮನರೇಗಾ’ ಯೋಜನೆಯಿಂದ ಮಹಾತ್ಮಾ ಗಾಂಧಿ ಹೆಸರು ಕೈಬಿಡಲು ಮುಂದಾದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ

ಹೆಸರು ಬದಲಾವಣೆಗೆ ಹೆಸರುವಾಸಿಯಾಗಿರುವ ಮೋದಿ ಮೋದಿ ನೇತೃತ್ವದ ಆಡಳಿತ, ವಿಶ್ವದ ಅತಿದೊಡ್ಡ ಗ್ರಾಮೀಣ ಉದ್ಯೋಗ ಯೋಜನೆಯನ್ನು ಮರುನಾಮಕರಣ ಮಾಡಲು ಸಜ್ಜಾಗಿದೆ. ಮಹತ್ತರ ಯೋಜನೆಯಿಂದ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಲು ಮುಂದಾಗಿದೆ ಎಂದು 'ದಿ...

ನಟ ದಿಲೀಪ್ ಖುಲಾಸೆ: ತೀರ್ಪು ಹೊರಬಿದ್ದ ನಂತರ ಮೊದಲ ಪ್ರತಿಕ್ರಿಯೆ ನೀಡಿದ ಸಂತ್ರಸ್ತೆ: ನ್ಯಾಯಾಲದಲ್ಲಿ ನಂಬಿಕೆ ಕಳೆದುಕೊಂಡಿದ್ದೇನೆ ಎಂದ ನಟಿ

ಕೊಚ್ಚಿ: ಕೇರಳ ನಟಿಯ ಮೇಲೆ ಹಲ್ಲೆ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಿ, ಇತರ ಆರು ಮಂದಿಯನ್ನು ದೋಷಿಗಳು ಎಂದು ಘೋಷಿಸಿದ ತೀರ್ಪು ಹೊರಬಿದ್ದ ಸುಮಾರು ಒಂದು ವಾರದ ನಂತರ, ಸಂತ್ರಸ್ತ ನಟಿ ...

ಪಿತೂರಿ ಆರೋಪದಲ್ಲಿ ಜಿಮ್ಮಿ ಲೈ ದೋಷಿ ಎಂದು ತೀರ್ಪು ನೀಡಿದ ಹಾಂಗ್ ಕಾಂಗ್ ಹೈಕೋರ್ಟ್: ಇದು  “ನ್ಯಾಯದ ಗರ್ಭಪಾತ” ಎಂದ ಸಂಘಟನೆಗಳು

ಹಾಂಗ್ ಕಾಂಗ್ ಹೈಕೋರ್ಟ್ ಪ್ರಜಾಪ್ರಭುತ್ವ ಕಾರ್ಯಕರ್ತ, ಪತ್ರಕರ್ತ ಜಿಮ್ಮಿ ಲೈ ಅವರನ್ನು ಪಿತೂರಿ ಆರೋಪದ ಮೇಲೆ ದೋಷಿ ಎಂದು ತೀರ್ಪು ನೀಡಿದೆ.  ಚೀನಾದ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮೂರು ಆರೋಪಗಳಲ್ಲಿ ಪ್ರಜಾಪ್ರಭುತ್ವ ಕಾರ್ಯಕರ್ತ ಮತ್ತು...