Homeಕರ್ನಾಟಕಉತ್ತರ ಕನ್ನಡ : ಬಿಜೆಪಿ ಹಣೆಬರಹ ದೇಶಪಾಂಡೆ `ಕೈ'ಯಲ್ಲಿ

ಉತ್ತರ ಕನ್ನಡ : ಬಿಜೆಪಿ ಹಣೆಬರಹ ದೇಶಪಾಂಡೆ `ಕೈ’ಯಲ್ಲಿ

- Advertisement -
- Advertisement -

| ಶುದ್ಧೋದನ |
ಉತ್ತರ ಕನ್ನಡದಲ್ಲಿ ವಿಪರೀತ ಬಿಸಿಲಿನ ಉರಿ ಮತ್ತು ಅಷ್ಟೇ ಪ್ರಮಾಣದ ಲೋಕಸಭಾ ಚುನಾವಣೆ ಕಾವು. ಜನರ ತಾತ್ಸಾರಕ್ಕೆ ತುತ್ತಾಗಿರುವ ಬಿಜೆಪಿಯ ಅನಂತಮಾಣಿ ಮೇಲೆ ಆಸ್ನೋಟಿಕರ್ ಏಕಾಂಗಿ ವೀರನಂತೆ ಮುಗಿಬೀಳುತ್ತಿದ್ದಾನೆ.
ಬರೋಬ್ಬರಿ 22 ವರ್ಷದ ಸಂಸದಗಿರಿಯಲ್ಲಿ ಅನಂತ್ಮಾಣಿ ಯೋಜನಾಬದ್ಧವಾಗಿ ಜಿಲ್ಲೆಗೆ ದ್ರೋಹ ಬಗೆದಿದ್ದಾನೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಎಂದು ತಲೆ ಕೆಡಿಸಿಕೊಳ್ಳದ ಮಾಣಿ ಹೇಳೋದೊಂದು ಮಾಡೋದೊಂದು ಎಂಬುದು ಅರ್ಥವಾಗಿರುವ ಜನರಿಗೆ ಆತನ ಸಹವಾಸ ಸಾಕಾಗಿದೆ. ಇದರ ಅರ್ಥ ಇಷ್ಟೇ, ಮೈತ್ರಿಕೂಟದ ಕಿಂಗ್‍ಪಿನ್ ಆರ್.ವಿ.ದೇಶಪಾಂಡೆ ಮನಸಿಟ್ಟು ಕೆಲಸ ಮಾಡಿದರೆ ಜಿಲ್ಲೆಯ ರಾಜಕಾರಣದ ದಿಕ್ಕು ಬದಲಿಸುವುದು ಕಷ್ಟವಿಲ್ಲ.

ತನಗೆ ರಾಜಕೀಯ ದೀಕ್ಷೆ ಕೊಟ್ಟಿದ್ದ ಗುರು ಚಿತ್ತರಂಜನ್‍ರ ನಿಗೂಢ ಹತ್ಯೆಯ ಸೂತಕದ ಅಡಿಯಲ್ಲಿ ಮೊದಲ ಬಾರಿ ಸಂಸದನಾದ ಅನಂತ್ಮಾಣಿಯ ಆನಂತರದ 3 ಗೆಲುವುಗಳು ದೇಶಪಾಂಡೆ ಕೊಟ್ಟ ಉಡುಗೊರೆಗಳಂತಿದ್ದವು. ಆರನೇ ಬಾರಿ ಅನಂತ ಮಾಣಿ ಸ್ಪರ್ಧಿಸಿದಾಗ ದೇಶಪಾಂಡೆ ಕಾಂಗ್ರೆಸನ್ನು ತನಗರಿವಿಲ್ಲದಂತೆ ನಿರ್ನಾಮ ಮಾಡಿ ಆಗಿತ್ತು. ಹಾಗಾಗಿ ತನ್ನ ಮಗ ಪ್ರಶಾಂತ್ ಕಾಂಗ್ರೆಸ್ ಕ್ಯಾಂಡಿಡೇಟ್ ಆದರೂ ದೇಶಪಾಂಡೆಗೆ ಗೆಲ್ಲಿಸಿಕೊಳ್ಳಲಾಗಲಿಲ್ಲ. ದಿಲ್ಲಿ ಡಿಟೇಲ್ ರಾಜಕಾರಣಿ ಮಾರ್ಗರೇಟ್ ಆಳ್ವಾ ಜಿಲ್ಲಾ ಕಾಂಗ್ರೆಸ್‍ನ ಅಧಿನಾಯಕಿಯಾಗಿದ್ದ ಕಾಲದಲ್ಲಿ ಆಕೆಯ ಸೀರೆಯ ಚುಂಗು ಹಿಡಿದು ಕಾಂಗ್ರೆಸ್‍ಗೆ ನುಸುಳಿದ್ದ ಪಾಂಡೇಜಿ ಆಮೇಲೆ ಆಕೆಯ ವಿರುದ್ಧವೇ ತಿರುಗಿನಿಂತು ಕಾಂಗ್ರೆಸ್‍ನ ನಿರ್ನಾಮ ಮಾಡಿದ್ದು ಈಗ ಇತಿಹಾಸ.

ಒನ್ಸ್ ಎಗೇನ್, ಈಗ ಮೈತ್ರಿಕೂಟದ ಸೋಲು ಗೆಲುವು ದೇಶಪಾಂಡೆ ಕೈಲಿರುವುದಂತೂ ಖರೆ!!.
ಮೈತ್ರಿಕೂಟದ ಕ್ಯಾಂಡಿಡೇಟ್ ಆನಂದ ಅಸ್ನೋಟಿಕರ್ ಕಂಡರೆ ದೇಶಪಾಂಡೆಗೆ ಲಾಗಾಯ್ತಿನಿಂದಲೂ ಅಷ್ಟಕಷ್ಟೇ. ಆಸ್ನೋಟಿಕರ್ ತಂದೆ ವಸಂತ ಅಸ್ನೋಟಿಕರ್ ಎಂಬ ದಿವಂಗತ ರಾಬಿನ್‍ಹುಡ್, ಮ್ಯಾಗಿ ಕ್ಯಾಂಪಿನಲ್ಲಿದ್ದ ಕಾರವಾರದ ಅಂದಿನ ಶಾಸಕ. ಈತ ಭೂಗತ ಲೋಕದ ಜಿದ್ದಿಗೆ ಬಲಿಯಾದ. ಆತನ ಹೆಂಡತಿಯನ್ನು ಎಮ್ಮೆಲ್ಸಿ ಮಾಡಲು ಮ್ಯಾಗಿ ಪ್ರಯತ್ನಿಸಿದಾಗ ಇದೇ ದೇಶಪಾಂಡೆ ಅಡ್ಡಗಾಲು ಹಾಕಿದ್ದ. ಆದರೂ ಮ್ಯಾಗಿ ಶುಭಲತಾ ಅಸ್ನೋಟಿಕರ್‍ರನ್ನು ವಿಧಾನ ಪರಿಷತ್‍ಗೆ ಕಳಿಸಿದ್ದರು.

ಆನಂದ್ ಪ್ರಾಯಕ್ಕೆ ಬಂದ ನಂತರ ಮ್ಯಾಗಿ ಅಜ್ಜಿಯ ವಿರುದ್ಧವೇ ತಿರುಗಿಬಿದ್ದ. 2004ರ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಮ್ಯಾಗಿ ತನ್ನ ಚೇಲಾ ಅಶೋಕ್ ನಾಯ್ಕನನ್ನು ಕಾಂಗ್ರೆಸ್‍ನಿಂದ ಕಣಕ್ಕೆ ಇಳಿಸಿದ್ದು ಇದಕ್ಕೆ ಕಾರಣ. ಯಾಕೆಂದರೆ ಈ ಅಶೋಕ ಕಾರವಾರ ರಾಜಕಾರಣದಲ್ಲಿ ಆನಂದ್‍ಗೆ ವಿರೋಧಿಯಾಗಿದ್ದ. ಹೀಗಾಗಿ ಆನಂದ ಹಠಕ್ಕೆ ಬಿದ್ದು ಅಂದು ಬಿಜೆಪಿಯ ಅನಾಮಧೇಯ ಗಂಗಾಧರ ಭಟ್ಟ ಎಂಬುವನ ಪರ ಪ್ರಚಾರ ನಡೆಸಿ ಗೆಲ್ಲಿಸಿದ್ದಲ್ಲದೆ ಪರೋಕ್ಷವಾಗಿ ತಾನೇ ಶಾಸಕಗಿರಿ ನಡೆಸಿದ್ದ.

ಯಾವಾಗ ಆನಂದ್, ಮ್ಯಾಗಿ ವಿರುದ್ಧ ತಿರುಗಿಬಿದ್ದರೋ ಆಗ ಆತನಿಗೆ ಗಾಡ್‍ಫಾದರ್ ಆಗಿ ನಿಂತದ್ದು ದೇಶಪಾಂಡೆ! ಮ್ಯಾಗಿಯ ಪ್ರಬಲ ವಿರೋಧದ ನಡುವೆಯೂ ಆತನನ್ನು 2005ರ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಕಾರವಾರದ ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಿದ್ದರು. ಗೆದ್ದ ಆನಂದ ಮೂರೇ ತಿಂಗಳಿಗೆ ಆಪರೇಷನ್ ಕಮಲಕ್ಕೆ ಬಲಿಯಾಗಿ ರಾಜಕೀಯ ಬದುಕನ್ನೇ ಹಾಳು ಮಾಡಿಕೊಂಡಿದ್ದ. ಆ ಕಾರಣಕ್ಕೆ ದೇಶಪಾಂಡೆಗೆ ಈಗಲೂ ಆನಂದನ ಮೇಲಿನ ಸಿಟ್ಟು ಕಡಿಮೆಯಾಗಿಲ್ಲ. ಆನಂದ್ ಮೈತ್ರಿಕೂಟದ ಕ್ಯಾಂಡಿಡೇಟ್ ಎಂದು ಘೋಷಣೆ ಆದಾಗ ಎದುರಾಳಿ ಅನಂತ್ಮಾಣಿಗಿಂತಲೂ ಹೆಚ್ಚು ಡಿಸ್ಟರ್ಬ್ ಆದದ್ದು ಇದೇ ದೇಶಪಾಂಡೆ!


ಪಕ್ಕದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರಮೋದ್ ಮಧ್ವರಾಜ್‍ರನ್ನು ಜೆಡಿಎಸ್‍ಗೆ ಕಾಂಗ್ರೆಸ್ ಎರವಲು ಕೊಟ್ಟಂತೆ ಉತ್ತರಕನ್ನಡದಲ್ಲೂ ಡಿಸಿಸಿ ಅಧ್ಯಕ್ಷನೂ ತನ್ನ ಆಜ್ಞಾನುಧಾರಿಯೂ ಆದ ಭೀಮಣ್ಣ ನಾಯಕನಿಗೆ ಜೆಡಿಎಸ್ ಬಣ್ಣ ಬಳಿಯುವುದು ದೇಶಪಾಂಡೆ ಇರಾದೆಯಾಗಿತ್ತು. ಆದರೆ ಗೌಡರು, ಆಸ್ನೋಟಿಕರ್ ಬೇಡವೆಂದಾದರೆ ರಾಮಕೃಷ್ಣ ಹೆಗಡೆಯ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆಯನ್ನು ಒಪ್ಪಿಕೊಳ್ಳುವಿರಾ ಎಂದು ಕೇಳಿದಾಗ ದೇಶಪಾಂಡೆ ದಂಗಾಗಿಹೋದರು. ಗುರು ಹೆಗಡೆ ಫ್ಯಾಮಿಲಿಗೂ ದೇಶಪಾಂಡೆಗೂ ಪುರಾತನ ಹಗೆ ಹೊಗೆಯಾಡುತ್ತಲೇ ಇದೆ. ಹಾಗಾಗಿ ದೇಶಪಾಂಡೆ ಆಸ್ನೋಟಿಕರ್ ಕ್ಯಾಂಡಿಡೇಚರ್ ಒಪ್ಪಿಕೊಳ್ಳಬೇಕಾಯ್ತು.


ಮೈತ್ರಿಕೂಟದ ಹುರಿಯಾಳಿನ ಹೆಸರು ಬಹಿರಂಗವಾಗಿ ವಾರವೇ ಕಳೆದರೂ ದೇಶಪಾಂಡೆ ಮೊಗಮ್ಮಾಗೆ ಹೆಜ್ಜೆ ಹಾಕುತ್ತಿದ್ದಾರೆ. ಆನಂದ ಆಸ್ನೋಟಿಕರ್, ದೇಶಪಾಂಡೆ ಮನೆಗೆ ಹೋಗಿ ಅಡ್ಡಬಿದ್ದು ಬಂದರೂ ದೇಶಪಾಂಡೆ ಮಾತ್ರ ಜಿಲ್ಲೆಯತ್ತ ತಲೆಹಾಕಿಲ್ಲ. ಎಲ್ಲಿಯೂ ಆನಂದ್‍ಗೆ ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ಹೇಳಿಲ್ಲ. ಕಾಂಗ್ರೆಸ್-ಜೆಡಿಎಸ್ ಜಿಲ್ಲಾ ಲೀಡರ್‍ಗಳ ಜಂಟಿ ಪತ್ರಿಕಾಗೋಷ್ಠಿ ಹೊತ್ತಲ್ಲೂ ದೇಶಪಾಂಡೆಯ ಶಿಷ್ಯ ಭೀಮಣ್ಣ ನಾಯ್ಕ, ಆನಂದ ಅಂತರ ಕಾಯ್ದುಕೊಂಡಿದ್ದರು. ಈ ಭೀಮಣ್ಣ ಬಿಜೆಪಿಯ ಅನಂತ್ಮಾಣಿಯ ಅಂತರಂಗದ ಗೆಣೆಕಾರ. ಅನಂತ್ಮಾಣಿ ಶಿರಸಿಯ ವೈದ್ಯರಿಗೆ ಒಡೆದು ರಕ್ತ ಹರಿಸಿದಾಗ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಸಾಂಕೇತಿಕವಾಗಿ ಕುಳಿತೆದ್ದು “ನಂಗೆ ಥಂಡಿ, ಕೆಮ್ಮು” ಎಂದು ಹೇಳಿ ಮಾತನಾಡದೆ ಮನೆಗೆ ಹೋಗಿದ್ದು ಅವರಿಬ್ಬರ ಗೆಳೆತನಕ್ಕೆ ಸಾಕ್ಷಿ.

ಸದ್ಯಕ್ಕೆ ಆಂಟಿಇನ್‍ಕಂಬೆನ್ಸಿಯಲ್ಲಿ ತೊಳಲಾಡುತ್ತಿರುವ ಬಿಜೆಪಿಯ ಅನಂತ್ಮಾಣಿ ವಿರುದ್ಧ ಮೈತ್ರಿಕೂಟ ಒಟ್ಟಾಗಿ ಅಖಾಡಕ್ಕಿಳಿದರೆ ಜಿಲ್ಲೆಯಲ್ಲಿ ಮತ್ತೆ ಸೆಕ್ಯುಲರ್ ರಾಜಕಾರಣ ಪ್ರತಿಷ್ಠಾಪಿಸುವುದು ಕಷ್ಟವೇನಲ್ಲ. ಇದು ಭವಿಷ್ಯದಲ್ಲಿ ದೇಶಪಾಂಡೆ ಮಗನ ರಾಜಕಾರಣಕ್ಕೂ ನೆರವಾಗುತ್ತದೆ. ಆದರೆ ದೇಶಪಾಂಡೆ ಇಷ್ಟು ವಿಶಾಲವಾಗಿ ಯೋಚಿಸಬಲ್ಲರೇ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...