Homeಕರ್ನಾಟಕಉತ್ತರ ಕನ್ನಡ : ಬಿಜೆಪಿ ಹಣೆಬರಹ ದೇಶಪಾಂಡೆ `ಕೈ'ಯಲ್ಲಿ

ಉತ್ತರ ಕನ್ನಡ : ಬಿಜೆಪಿ ಹಣೆಬರಹ ದೇಶಪಾಂಡೆ `ಕೈ’ಯಲ್ಲಿ

- Advertisement -
- Advertisement -

| ಶುದ್ಧೋದನ |
ಉತ್ತರ ಕನ್ನಡದಲ್ಲಿ ವಿಪರೀತ ಬಿಸಿಲಿನ ಉರಿ ಮತ್ತು ಅಷ್ಟೇ ಪ್ರಮಾಣದ ಲೋಕಸಭಾ ಚುನಾವಣೆ ಕಾವು. ಜನರ ತಾತ್ಸಾರಕ್ಕೆ ತುತ್ತಾಗಿರುವ ಬಿಜೆಪಿಯ ಅನಂತಮಾಣಿ ಮೇಲೆ ಆಸ್ನೋಟಿಕರ್ ಏಕಾಂಗಿ ವೀರನಂತೆ ಮುಗಿಬೀಳುತ್ತಿದ್ದಾನೆ.
ಬರೋಬ್ಬರಿ 22 ವರ್ಷದ ಸಂಸದಗಿರಿಯಲ್ಲಿ ಅನಂತ್ಮಾಣಿ ಯೋಜನಾಬದ್ಧವಾಗಿ ಜಿಲ್ಲೆಗೆ ದ್ರೋಹ ಬಗೆದಿದ್ದಾನೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಎಂದು ತಲೆ ಕೆಡಿಸಿಕೊಳ್ಳದ ಮಾಣಿ ಹೇಳೋದೊಂದು ಮಾಡೋದೊಂದು ಎಂಬುದು ಅರ್ಥವಾಗಿರುವ ಜನರಿಗೆ ಆತನ ಸಹವಾಸ ಸಾಕಾಗಿದೆ. ಇದರ ಅರ್ಥ ಇಷ್ಟೇ, ಮೈತ್ರಿಕೂಟದ ಕಿಂಗ್‍ಪಿನ್ ಆರ್.ವಿ.ದೇಶಪಾಂಡೆ ಮನಸಿಟ್ಟು ಕೆಲಸ ಮಾಡಿದರೆ ಜಿಲ್ಲೆಯ ರಾಜಕಾರಣದ ದಿಕ್ಕು ಬದಲಿಸುವುದು ಕಷ್ಟವಿಲ್ಲ.

ತನಗೆ ರಾಜಕೀಯ ದೀಕ್ಷೆ ಕೊಟ್ಟಿದ್ದ ಗುರು ಚಿತ್ತರಂಜನ್‍ರ ನಿಗೂಢ ಹತ್ಯೆಯ ಸೂತಕದ ಅಡಿಯಲ್ಲಿ ಮೊದಲ ಬಾರಿ ಸಂಸದನಾದ ಅನಂತ್ಮಾಣಿಯ ಆನಂತರದ 3 ಗೆಲುವುಗಳು ದೇಶಪಾಂಡೆ ಕೊಟ್ಟ ಉಡುಗೊರೆಗಳಂತಿದ್ದವು. ಆರನೇ ಬಾರಿ ಅನಂತ ಮಾಣಿ ಸ್ಪರ್ಧಿಸಿದಾಗ ದೇಶಪಾಂಡೆ ಕಾಂಗ್ರೆಸನ್ನು ತನಗರಿವಿಲ್ಲದಂತೆ ನಿರ್ನಾಮ ಮಾಡಿ ಆಗಿತ್ತು. ಹಾಗಾಗಿ ತನ್ನ ಮಗ ಪ್ರಶಾಂತ್ ಕಾಂಗ್ರೆಸ್ ಕ್ಯಾಂಡಿಡೇಟ್ ಆದರೂ ದೇಶಪಾಂಡೆಗೆ ಗೆಲ್ಲಿಸಿಕೊಳ್ಳಲಾಗಲಿಲ್ಲ. ದಿಲ್ಲಿ ಡಿಟೇಲ್ ರಾಜಕಾರಣಿ ಮಾರ್ಗರೇಟ್ ಆಳ್ವಾ ಜಿಲ್ಲಾ ಕಾಂಗ್ರೆಸ್‍ನ ಅಧಿನಾಯಕಿಯಾಗಿದ್ದ ಕಾಲದಲ್ಲಿ ಆಕೆಯ ಸೀರೆಯ ಚುಂಗು ಹಿಡಿದು ಕಾಂಗ್ರೆಸ್‍ಗೆ ನುಸುಳಿದ್ದ ಪಾಂಡೇಜಿ ಆಮೇಲೆ ಆಕೆಯ ವಿರುದ್ಧವೇ ತಿರುಗಿನಿಂತು ಕಾಂಗ್ರೆಸ್‍ನ ನಿರ್ನಾಮ ಮಾಡಿದ್ದು ಈಗ ಇತಿಹಾಸ.

ಒನ್ಸ್ ಎಗೇನ್, ಈಗ ಮೈತ್ರಿಕೂಟದ ಸೋಲು ಗೆಲುವು ದೇಶಪಾಂಡೆ ಕೈಲಿರುವುದಂತೂ ಖರೆ!!.
ಮೈತ್ರಿಕೂಟದ ಕ್ಯಾಂಡಿಡೇಟ್ ಆನಂದ ಅಸ್ನೋಟಿಕರ್ ಕಂಡರೆ ದೇಶಪಾಂಡೆಗೆ ಲಾಗಾಯ್ತಿನಿಂದಲೂ ಅಷ್ಟಕಷ್ಟೇ. ಆಸ್ನೋಟಿಕರ್ ತಂದೆ ವಸಂತ ಅಸ್ನೋಟಿಕರ್ ಎಂಬ ದಿವಂಗತ ರಾಬಿನ್‍ಹುಡ್, ಮ್ಯಾಗಿ ಕ್ಯಾಂಪಿನಲ್ಲಿದ್ದ ಕಾರವಾರದ ಅಂದಿನ ಶಾಸಕ. ಈತ ಭೂಗತ ಲೋಕದ ಜಿದ್ದಿಗೆ ಬಲಿಯಾದ. ಆತನ ಹೆಂಡತಿಯನ್ನು ಎಮ್ಮೆಲ್ಸಿ ಮಾಡಲು ಮ್ಯಾಗಿ ಪ್ರಯತ್ನಿಸಿದಾಗ ಇದೇ ದೇಶಪಾಂಡೆ ಅಡ್ಡಗಾಲು ಹಾಕಿದ್ದ. ಆದರೂ ಮ್ಯಾಗಿ ಶುಭಲತಾ ಅಸ್ನೋಟಿಕರ್‍ರನ್ನು ವಿಧಾನ ಪರಿಷತ್‍ಗೆ ಕಳಿಸಿದ್ದರು.

ಆನಂದ್ ಪ್ರಾಯಕ್ಕೆ ಬಂದ ನಂತರ ಮ್ಯಾಗಿ ಅಜ್ಜಿಯ ವಿರುದ್ಧವೇ ತಿರುಗಿಬಿದ್ದ. 2004ರ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಮ್ಯಾಗಿ ತನ್ನ ಚೇಲಾ ಅಶೋಕ್ ನಾಯ್ಕನನ್ನು ಕಾಂಗ್ರೆಸ್‍ನಿಂದ ಕಣಕ್ಕೆ ಇಳಿಸಿದ್ದು ಇದಕ್ಕೆ ಕಾರಣ. ಯಾಕೆಂದರೆ ಈ ಅಶೋಕ ಕಾರವಾರ ರಾಜಕಾರಣದಲ್ಲಿ ಆನಂದ್‍ಗೆ ವಿರೋಧಿಯಾಗಿದ್ದ. ಹೀಗಾಗಿ ಆನಂದ ಹಠಕ್ಕೆ ಬಿದ್ದು ಅಂದು ಬಿಜೆಪಿಯ ಅನಾಮಧೇಯ ಗಂಗಾಧರ ಭಟ್ಟ ಎಂಬುವನ ಪರ ಪ್ರಚಾರ ನಡೆಸಿ ಗೆಲ್ಲಿಸಿದ್ದಲ್ಲದೆ ಪರೋಕ್ಷವಾಗಿ ತಾನೇ ಶಾಸಕಗಿರಿ ನಡೆಸಿದ್ದ.

ಯಾವಾಗ ಆನಂದ್, ಮ್ಯಾಗಿ ವಿರುದ್ಧ ತಿರುಗಿಬಿದ್ದರೋ ಆಗ ಆತನಿಗೆ ಗಾಡ್‍ಫಾದರ್ ಆಗಿ ನಿಂತದ್ದು ದೇಶಪಾಂಡೆ! ಮ್ಯಾಗಿಯ ಪ್ರಬಲ ವಿರೋಧದ ನಡುವೆಯೂ ಆತನನ್ನು 2005ರ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಕಾರವಾರದ ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಿದ್ದರು. ಗೆದ್ದ ಆನಂದ ಮೂರೇ ತಿಂಗಳಿಗೆ ಆಪರೇಷನ್ ಕಮಲಕ್ಕೆ ಬಲಿಯಾಗಿ ರಾಜಕೀಯ ಬದುಕನ್ನೇ ಹಾಳು ಮಾಡಿಕೊಂಡಿದ್ದ. ಆ ಕಾರಣಕ್ಕೆ ದೇಶಪಾಂಡೆಗೆ ಈಗಲೂ ಆನಂದನ ಮೇಲಿನ ಸಿಟ್ಟು ಕಡಿಮೆಯಾಗಿಲ್ಲ. ಆನಂದ್ ಮೈತ್ರಿಕೂಟದ ಕ್ಯಾಂಡಿಡೇಟ್ ಎಂದು ಘೋಷಣೆ ಆದಾಗ ಎದುರಾಳಿ ಅನಂತ್ಮಾಣಿಗಿಂತಲೂ ಹೆಚ್ಚು ಡಿಸ್ಟರ್ಬ್ ಆದದ್ದು ಇದೇ ದೇಶಪಾಂಡೆ!


ಪಕ್ಕದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರಮೋದ್ ಮಧ್ವರಾಜ್‍ರನ್ನು ಜೆಡಿಎಸ್‍ಗೆ ಕಾಂಗ್ರೆಸ್ ಎರವಲು ಕೊಟ್ಟಂತೆ ಉತ್ತರಕನ್ನಡದಲ್ಲೂ ಡಿಸಿಸಿ ಅಧ್ಯಕ್ಷನೂ ತನ್ನ ಆಜ್ಞಾನುಧಾರಿಯೂ ಆದ ಭೀಮಣ್ಣ ನಾಯಕನಿಗೆ ಜೆಡಿಎಸ್ ಬಣ್ಣ ಬಳಿಯುವುದು ದೇಶಪಾಂಡೆ ಇರಾದೆಯಾಗಿತ್ತು. ಆದರೆ ಗೌಡರು, ಆಸ್ನೋಟಿಕರ್ ಬೇಡವೆಂದಾದರೆ ರಾಮಕೃಷ್ಣ ಹೆಗಡೆಯ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆಯನ್ನು ಒಪ್ಪಿಕೊಳ್ಳುವಿರಾ ಎಂದು ಕೇಳಿದಾಗ ದೇಶಪಾಂಡೆ ದಂಗಾಗಿಹೋದರು. ಗುರು ಹೆಗಡೆ ಫ್ಯಾಮಿಲಿಗೂ ದೇಶಪಾಂಡೆಗೂ ಪುರಾತನ ಹಗೆ ಹೊಗೆಯಾಡುತ್ತಲೇ ಇದೆ. ಹಾಗಾಗಿ ದೇಶಪಾಂಡೆ ಆಸ್ನೋಟಿಕರ್ ಕ್ಯಾಂಡಿಡೇಚರ್ ಒಪ್ಪಿಕೊಳ್ಳಬೇಕಾಯ್ತು.


ಮೈತ್ರಿಕೂಟದ ಹುರಿಯಾಳಿನ ಹೆಸರು ಬಹಿರಂಗವಾಗಿ ವಾರವೇ ಕಳೆದರೂ ದೇಶಪಾಂಡೆ ಮೊಗಮ್ಮಾಗೆ ಹೆಜ್ಜೆ ಹಾಕುತ್ತಿದ್ದಾರೆ. ಆನಂದ ಆಸ್ನೋಟಿಕರ್, ದೇಶಪಾಂಡೆ ಮನೆಗೆ ಹೋಗಿ ಅಡ್ಡಬಿದ್ದು ಬಂದರೂ ದೇಶಪಾಂಡೆ ಮಾತ್ರ ಜಿಲ್ಲೆಯತ್ತ ತಲೆಹಾಕಿಲ್ಲ. ಎಲ್ಲಿಯೂ ಆನಂದ್‍ಗೆ ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ಹೇಳಿಲ್ಲ. ಕಾಂಗ್ರೆಸ್-ಜೆಡಿಎಸ್ ಜಿಲ್ಲಾ ಲೀಡರ್‍ಗಳ ಜಂಟಿ ಪತ್ರಿಕಾಗೋಷ್ಠಿ ಹೊತ್ತಲ್ಲೂ ದೇಶಪಾಂಡೆಯ ಶಿಷ್ಯ ಭೀಮಣ್ಣ ನಾಯ್ಕ, ಆನಂದ ಅಂತರ ಕಾಯ್ದುಕೊಂಡಿದ್ದರು. ಈ ಭೀಮಣ್ಣ ಬಿಜೆಪಿಯ ಅನಂತ್ಮಾಣಿಯ ಅಂತರಂಗದ ಗೆಣೆಕಾರ. ಅನಂತ್ಮಾಣಿ ಶಿರಸಿಯ ವೈದ್ಯರಿಗೆ ಒಡೆದು ರಕ್ತ ಹರಿಸಿದಾಗ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಸಾಂಕೇತಿಕವಾಗಿ ಕುಳಿತೆದ್ದು “ನಂಗೆ ಥಂಡಿ, ಕೆಮ್ಮು” ಎಂದು ಹೇಳಿ ಮಾತನಾಡದೆ ಮನೆಗೆ ಹೋಗಿದ್ದು ಅವರಿಬ್ಬರ ಗೆಳೆತನಕ್ಕೆ ಸಾಕ್ಷಿ.

ಸದ್ಯಕ್ಕೆ ಆಂಟಿಇನ್‍ಕಂಬೆನ್ಸಿಯಲ್ಲಿ ತೊಳಲಾಡುತ್ತಿರುವ ಬಿಜೆಪಿಯ ಅನಂತ್ಮಾಣಿ ವಿರುದ್ಧ ಮೈತ್ರಿಕೂಟ ಒಟ್ಟಾಗಿ ಅಖಾಡಕ್ಕಿಳಿದರೆ ಜಿಲ್ಲೆಯಲ್ಲಿ ಮತ್ತೆ ಸೆಕ್ಯುಲರ್ ರಾಜಕಾರಣ ಪ್ರತಿಷ್ಠಾಪಿಸುವುದು ಕಷ್ಟವೇನಲ್ಲ. ಇದು ಭವಿಷ್ಯದಲ್ಲಿ ದೇಶಪಾಂಡೆ ಮಗನ ರಾಜಕಾರಣಕ್ಕೂ ನೆರವಾಗುತ್ತದೆ. ಆದರೆ ದೇಶಪಾಂಡೆ ಇಷ್ಟು ವಿಶಾಲವಾಗಿ ಯೋಚಿಸಬಲ್ಲರೇ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ನೂತನ ಸಚಿವರ ಪಟ್ಟಿಗೆ ವರಿಷ್ಠರ ಅನುಮೋದನೆ: ಇಂದು ಸಂಜೆ 4:05 ಕ್ಕೆ ಪ್ರಮಾಣ ವಚನ

ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಗೆ ಅಧಿಕೃತ ಅನುಮೋದನೆ ನೀಡಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ...

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ : WFI ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್‌ ಸಿಂಗ್‌ ಖುಲಾಸೆ

ದೆಹಲಿ ನ್ಯಾಯಾಲಯವು ಸೋಮವಾರ (ಆ.3) ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಿಂದ...

ಪ್ರಶ್ನೆ ಪತ್ರಿಕೆ ಸೋರಿಕೆ : ಫಾಸ್ಟ್‌ ಟ್ರ್ಯಾಕ್ ಕೋರ್ಟ್ ನ್ಯಾಯಾಧೀಶೆ ಒಂದೇ ವಾರದಲ್ಲಿ ವರ್ಗಾವಣೆ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ತ್ವರಿತಗತಿ (ಫಾಸ್ಟ್‌ ಟ್ರ್ಯಾಕ್) ನ್ಯಾಯಾಲಯದ ನೇತೃತ್ವ ವಹಿಸಲು ನೇಮಕಗೊಂಡ ಕೇವಲ ಒಂದು ವಾರದ ನಂತರ, ದೆಹಲಿ ಹೈಕೋರ್ಟ್ ಶನಿವಾರ (ಆಗಸ್ಟ್ 1) ವಿಶೇಷ ನ್ಯಾಯಾಧೀಶರಾದ...

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...