Homeಕರೋನಾ ತಲ್ಲಣಲಸಿಕೆ ರಾಜಕೀಯ: ರಾಜ್ಯಗಳ ಪಾಲಿಗೆ ವಿಲನ್ ಆದ ಮೋದಿ ಸರ್ಕಾರ?

ಲಸಿಕೆ ರಾಜಕೀಯ: ರಾಜ್ಯಗಳ ಪಾಲಿಗೆ ವಿಲನ್ ಆದ ಮೋದಿ ಸರ್ಕಾರ?

- Advertisement -
- Advertisement -

ತನ್ನ ಜವಾಬ್ದಾರಿಯಲ್ಲಿ ಎಲ್ಲ ಆಯಾಮಗಳಲ್ಲೂ ವಿಫಲವಾಗಿರುವ ಕೇಂದ್ರದ ಮೋದಿ ಸರ್ಕಾರವು ಲಸಿಕೆಯ ಜವಾಬ್ದಾರಿಯಿಂದ ನುಣುಚಿಕೊಂಡು ರಾಜ್ಯ ಸರ್ಕಾರಗಳ ಮೇಲೆ ಜವಾಬ್ದಾರಿ ವರ್ಗಾಯಿಸಲು ನೋಡುತ್ತಿದೆ. ಹಾಗಾಗಿ ಅದು ಭರ್ಜರಿಯಾಗಿ ಘೋಷಿಸಿಕೊಂಡಿದ್ದ, ನಾಳೆ ಆರಂಭವಾಗಬೇಕಿದ್ದ 18-44 ವಯೋಮಾನದವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಬಹುತೇಕ ರಾಜ್ಯಗಳಲ್ಲಿ ಆರಂಭವಾಗುತ್ತಿಲ್ಲ.

ಇದಕ್ಕೆ ಕೇಂದ್ರದ ಲಸಿಕಾ ನೀತಿಯೇ ಕಾರಣ. ಲಸಿಕೆಗಳನ್ನು ಎಲ್ಲರಿಗೂ ಉಚಿತವಾಗಿ ನೀಡಬೇಕಿದ್ದ ಅದು, ಎರಡೂ ಲಸಿಕಾ ಕಂಪನಿಗಳ ಪರ ನಿಂತು, ರಾಜ್ಯಗಳು ಈಗ ದುಬಾರಿ ದರ ತೆತ್ತು ಲಸಿಕೆ ಖರೀದಿಸುವಂತೆ ಮಾಡಿದೆ. ಇದರಿಂದಾಗಿ ಬಹುಪಾಲು ರಾಜ್ಯಗಳು ತಮ್ಮ ನಾಗರೀಕರಿಗೆ ಉಚಿತ ಲಸಿಕೆ ನೀಡಲು ನಿರ್ಧರಿಸಿದ್ದು, ಕಂಪನಿಗಳಿಗೆ ಆರ್ಡರ್ ನೀಡಿವೆ. ಆದರೆ, ಕಂಪನಿಗಳ ಉತ್ಪಾದನಾ ಸಾಮಥ್ಯ ಈ ಅಗತ್ಯವನ್ನು ಪೂರೈಸುತ್ತಿಲ್ಲ. ಅಥವಾ ಅವು ಈ ಹಿಂದೆ ಮೋದಿಯವರ ಮೂಲಕ ವಿದೇಶಗಳಿಗೆ ಕಳಿಸಿದ 5 ಕೋಟಿ ಡೋಸ್ ರಫ್ತು ಈಗ ಕಾಡತೊಡಗಿದೆ. ಜೊತೆಗೆ ಅವು ಈಗ ಹೆಚ್ಚಿನ ದರ ಸಿಗುವ ಖಾಸಗಿ ಆಸ್ಪತ್ರೆಗಳು ಮತ್ತು ಕಾರ್ಪೋರೇಟ್ ಕಂನಿಗಳಿಗೆ ಲಸಿಕೆ ಪೂರೈಕೆಯಲ್ಲಿ ಆಸಕ್ತಿ ಹೊಂದಿದ್ದು ಅವುಗಳ ಅತಿಯಾಶೆಗೆ ತಕ್ಕಂತೆಯೇ ಇದೆ. ಇದಕ್ಕೆ ನೀರೆರಿದಿದ್ದು ಮೋದಿ ಸರ್ಕಾರ ಎನ್ನುವುದಕ್ಕಿಂತ ಮೋದಿ ಸಾಹೇಬರೇ ಅನ್ನುವುದು ಸೂಕ್ತ.

ಇವತ್ತು ಮುಂಜಾನೆ ರಾಜ್ಯ ಆರೋಗ್ಯ ಸಚಿವ ಡಾ,ಸುಧಾಕರ್, ‘ಲಸಿಕೆಗಳ ಕೊರತೆಯಿಂದ ನಾಳೆಯಿಂದ ನಡೆಯಬೇಕಿದ್ದ 18-44 ವಯೋಮಾನದವರಿಗೆ ಲಸಿಕೆ ನೀಡುವ ಅಭಿಯಾನ ಶುರು ಮಾಡುತ್ತಿಲ್ಲ. ಅಗತ್ಯ ಲಸಿಕೆ ದೊರೆತ ನಂತರ ಆರಂಭಿಸಲಾಗುವುದು’ ಎಂದಿದ್ದಾರೆ.
ಇದು ಕರ್ನಾಟಕದ ಸಮಸ್ಯೆ ಅಷ್ಟೇ ಅಲ್ಲ. ಇಲ್ಲಿಯಂತೆ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ಗುಜರಾತ್ ಸರ್ಕಾರಗಳು ಕೂಡ ಮೇ1 ರಿಂದ 18-44 ವಯೋಮಾನದವರಿಗೆ ಲಸಿಕೆ ಅಭಿಯಾನ ಶುರು ಮಾಡಲಾಗದು ಎಂದಿವೆ. ಬಿಜೆಪಿಯೇತರ ಸರ್ಕಾರಗಳಿರುವ ದೆಹಲಿ, ಮಹಾರಾಷ್ಟ್ರ ಕೇರಳ, ಪಂಜಾಬ್-ಇನ್ನೂ ಹಲವು ರಾಜ್ಯಗಳು ಇದೇ ರೀತಿ ಘೋಷಣೆ ಮಾಡಿವೆ.

ಮಹಾರಾಷ್ಟ್ರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ (ಭಾನುವಾರದವರೆಗೆ) 45 ಮೇಲ್ಪಟ್ಟವರಿಗೆ ನಡೆಸುತ್ತಿದ್ದ ಲಸಿಕಾ ಅಭಿಯಾನವನ್ನೂ ನಿಲ್ಲಿಸಲಾಗಿದೆ. ಏಕೆಂದರೆ ರಾಜ್ಯಗಳ ಬಳಿ ಲಸಿಕೆಗಳ ಸಂಗ್ರಹಣೆ ಅಗತ್ಯ ಪ್ರಮಾಣದಲ್ಲಿ ಇಲ್ಲ. ಹಾಗೆಯೇ ಅವು ಸೀರಂ ಮತ್ತು ಭಾರತ್ ಬಯೋಟೆಕ್ ಕಂಪನಿಗಳಿಗೆ ಆರ್ಡರ್ ಕಳಿಸಿ ಕಾಯುವ ಪರಿಸ್ಥಿತಿಯಿದೆ.
ಇದಕ್ಕೆ ಯಾರು ಕಾರಣ? ಮತ್ತೆ ಅದು ತಲುಪುವುದು ಮೋದಿ ಸರ್ಕಾರದ ಗೊಂದಲದ ನೀತಿಗಳಿಗೆ ಅಷ್ಟೇ ಅಲ್ಲ, ಅದರ ಕಾರ್ಪೋರೇಟ್ ಪರ ಒಲುವುಗಳಿಗೂ ಅದು ಸಾಕ್ಷಿಯಾಗಿದೆ.
ಲಸಿಕೆ ಅವ್ಯವಸ್ಥೆಗೆ ಕಾರಣಗಳೇನು? ಇಲ್ಲಿಯೂ ಕೆಲವರ ಹಿತಾಸಕ್ತಿ ಮುಖ್ಯವಾಗಿದೆಯೇ ಎಂಬುದನ್ನು ನೋಡೋಣ.

ಸಾಂಕ್ರಾಮಿಕ ಲಸಿಕೆ ಮಾರಾಟಕ್ಕೆ: ದೇಶದಲ್ಲೇ ಮೊದಲ ಸಲ…

ಮೊದಲನೆದಾಗಿ, ನಾಳೆ 18-45 ವಯೋಮಾನದವರಿಗೆ ಲಸಿಕಾ ಅಭಿಯಾನ ಚಾಲೂ ಮಾಡಲು ಆಗದ್ದಕ್ಕೆ ಮೋದಿ ಸರ್ಕಾರದ ನೀತಿಗಳೇ ಕಾರಣ. ಅದು ಭಾರತದಲ್ಲಿ ಲಸಿಕೆ ತಯಾರಿಕೆ ಆರಂಭವಾದಾಗಿನಿಂದ ತನ್ನ ಸಾಕು ಮೀಡಿಯಾಗಳನ್ನು ಬಳಸಿಕೊಂಡು, ಮೋದಿಯೇ ಲಸಿಕೆ ಕಂಡು ಹಿಡಿದರು ಎಂದು ಪರೋಕ್ಷವಾಗಿ ಅನಿಸುವಂತೆ ಪ್ರಸಾರ ಮಾಡಿಸುತ್ತ ಬಂದಿತು. ಅಲ್ಲದೇ ಉಚಿತ ಲಸಿಕೆ ನೀಡುವುದಾಗಿ ಚುನಾವಣಾ ಪ್ರಚಾರದಲ್ಲಿ, ಪ್ರಣಾಳಿಕೆಯಲ್ಲಿ ಘೋಷಿಸಲಾಯಿತು! ಕೋವಿಡ್ ಮೊದಲ ಅಲೆ ಸಂದರ್ಭದಲ್ಲೇ ಈ ಸರ್ಕಾರ ತರಾತುರಿಯಲ್ಲಿ ಆಗಸ್ಟ್ 15ರಂದು ಕೆಂಪುಕೋಟೆ ಮೇಲೆ ಮೋದಿಯವರ ಕಡೆಯಿಂದ ಲಸಿಕೆ ಉದ್ಘಾಟಿಸುವ ಹೀನಾತಿಹೀನ ಯೋಚನೆಯನ್ನೂ ಮಾಡಿತ್ತು.

ಟ್ರಯಲ್ಸ್‌ಗಳಿಲ್ಲದೇ ಹಾಗೆ ಮಾಡಿದರೆ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ ಎಂದು ಹೆದರಿದ ಕಂಪನಿಗಳು ಸಾಧ್ಯವಿಲ್ಲ ಎಂದವು.

ಎರಡನೆಯ ಸಮಸ್ಯೆ ಎಂದರೆ, ಭಾರತೀಯರೆಲ್ಲರಿಗೂ ಈ ಎರಡು ಕಂಪನಿಗಳೇ ತ್ವರಿತವಾಗಿ ಲಸಿಕೆ ಉತ್ಪಾದನೆ ಮಾಡುತ್ತವೆ ಎಂಬ ಹುಸಿ ನಂಬಿಕೆಯಲ್ಲಿ ಕಾಲ ಕಳೆದಿದ್ದು.

ಎರಡನೇ ಅಲೆ ಶುರುವಾಗುವ ಸಂದರ್ಭದಲ್ಲಿ ಚುನಾವಣೆಗಳತ್ತಲೇ ಎಲ್ಲ ಗಮನ ಕೇಂದ್ರಿಕರಿಸಿದ ಸರ್ಕಾರ 60 ದಾಟಿದವರಿಗೆ, 45 ದಾಟಿದವರಿಗೆ ಎಂದು ಎರಡು ಹಂತಗಳ ಲಸಿಕಾ ಅಭಿಯಾನ ಮಾಡಿತು. ಆದರೆ ಈಗ ಒಂದು ಡೋಸ್ ಲಸಿಕೆ ಪಡೆದವರಿಗೆ ಎರಡನೇ ಡೋಸ್ ಕೊಡುವುದು ಕಷ್ಟವಿದೆ. ಈಗ ಕೇಂದ್ರ ತನ್ನ ಸಾಂವಿಧಾನಿಕ ಜವಾಬ್ದಾರಿಯಿಂದ ನುಣುಚಿಕೊಂಡು, ರಾಜ್ಯಗಳಿಗೆ ಲಸಿಕೆ ಖರೀದಿಸಿಕೊಳ್ಳಿ ಎನ್ನುವ ಮೂಲಕ ಕಾರ್ಪೋರೇಟ್ ಔಷಧಿ ಕಂಪನಿಗಳ ಪರ ನಿಂತಿದೆ.

ಈಗ ಬಿಜೆಪಿ ಆಡಳಿತ ಇರುವ ರಾಜ್ಯಗಳೇ ನಾಳೆಯಿಂದ 3ನೆ ಹಂತದ ಲಸಿಕಾ ಅಭಿಯಾನ ಶುರು ಮಾಡಲಾಗುವುದಿಲ್ಲ ಎಂದು ಘೋಷಿಸಿವೆ. ಅಂದರೆ ನಿಗದಿತ ಅವಧಿಯಲ್ಲಿ ಹಣ ಪಾವತಿಸಿದರೂ ಲಸಿಕೆ ಲಭ್ಯವಾಗುತ್ತಿಲ್ಲ! ಮತ್ತೆ ಇದಕ್ಕೆಲ್ಲ ಯಾರು ಕಾರಣ, ಹೇಳಬೇಕೆ ಅದನ್ನೂ…. ಬೇಡ ಅಲ್ಲವೇ?

ತಜ್ಞರ ಮಾತಿಗೆ ಮನ್ನಣೆ ಇಲ್ಲ!

ಎಲ್ಲರಿಗೂ ಉಚಿತ ಲಸಿಕೆ ಒದಗಿಸುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ರಾಹುಲ್ ಗಾಂಧಿ ಹೇಳಿದ್ದು ಈ ಸರ್ಕಾರಕ್ಕೆ ಅಪಥ್ಯದ ವಿಷಯ. ಆದರೆ ತಜ್ಞರು ಹೇಳಿದ ಮಾತಿಗೂ ಕಿವಿಗೊಡದೇ ಲಸಿಕೆಗಳಿಗೆ ಮೂರು ಬಗೆಯ ದರಗಳನ್ನು ವಿಧಿಸಲು ಕಂಪನಿಗಳಿಗೆ ಮೋದಿ ಸರ್ಕಾರ ಅವಕಾಶ ನೀಡಿತು.

ಕೇಂದ್ರ ಆರೋಗ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿ ಕೆ. ಸುಜಾತಾರಾವ್‌ರಂತಹ ಆಡಳಿತಾತ್ಮಕ ಅನುಭವ ಇರುವವರು, ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರು-ಹೀಗೆ ಬಹುತೇಕರೆಲ್ಲ ಎಲ್ಲರಿಗೂ ಉಚಿತ ಲಸಿಕೆ ನೀಡಬೇಕು ಎಂದೇ ಆಗ್ರಹಿಸಿದ್ದಾರೆ.

ಈಗ ಲಸಿಕಾ ಅಭಿಯಾನ ಶುರುವಾಗಿ 100 ದಿನಗಳು ದಾಟಿವೆ. 14 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ, ಅವರಲ್ಲಿ ಕೇವಲ ಶೇ.10 ಮಾತ್ರ ಎರಡೂ ಡೋಸ್ ಪಡೆದಿದ್ದಾರೆ.
ಹೀಗಿರುವಾಗ, ಮೇ 1ರಿಂದ ಮೂರನೇ ಹಂತದ ಲಸಿಕಾ ಅಭಿಯಾನ ಘೋಷಿಸುವ ಅಗತ್ಯವಿತ್ತೇ? ನಿಜ, ಆದಷ್ಟೂ ಬೇಗ ಆಗಬೇಕು, ಆದರೆ ನಮ್ಮ ಲಸಿಕಾ ಕಂಪನಿಗಳಿಗೆ ಅಷ್ಟು ಉತ್ಪಾದನಾ ಸಾಮರ್ಥ್ಯವೇ ಇಲ್ಲದಿರುವಾಗ? ವಿದೇಶಿ ಲಸಿಕೆಗಳನ್ನು ತರಿಸುವ ನಿರ್ಧಾರವನ್ನೂ ಚುನಾವಣೆಯ ಅಂತ್ಯದಲ್ಲಿ ಬಿಡುವಾದಾಗ ತೆಗೆದುಕೊಳ್ಳಲಾಗಿತು.

ಕೇಂದ್ರ ಬಜೆಟ್ 2021-22 ರಲ್ಲಿ ಲಸಿಕಾ ಅಭಿಯಾನಕ್ಕೆಂದೇ 35,000 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಆದರೆ, ಕೇವಲ ಶೇ.10 ಜನಸಂಖ್ಯೆಗೆ ಲಸಿಕೆ ಹಾಕಿದ ನಂತರ, ಕೇಂದ್ರವು ಏಕೆ ಹಿಂದೆ ಸರಿಯಿತು, ರಾಜ್ಯಗಳ ಮೇಲೆ ಏಕೆ ಭಾರ ಹಾಕಿತು? ಬಜೆಟ್ ಅನುದಾನ ಮತ್ತು ಪಿಎಂ ಕೇರ್ಸ್ ಹಣ ಬಳಸಿ ವಿದೇಶಿ ಲಸಿಕೆಗಳನ್ನು ತುರ್ತಾಗಿ ತರಿಸಿಕೊಳ್ಳಲಿಲ್ಲವೇಕೆ? -ಹೀಗೆ ಕಾಂಗ್ರೆಸ್, ಆಮ್ ಆದ್ಮಿ, ಎಡಪಕ್ಷಗಳು, ತಜ್ಞರು ಮತ್ತು ಇತ್ತೀಚೆಗೆ ಪ್ರಜ್ಞಾವಂತ ಜನರು ಕೇಳುತ್ತಿರುವ ಪ್ರಶ್ನೆಗಳಿಗೆ ಮೋದಿ ಸರ್ಕಾರದ ಬಳಿ ಉತ್ತರವೇ ಇಲ್ಲ.

ಅದು ಒಕ್ಕೂಟ ವ್ಯವಸ್ಥೆಗೆ ಬಲವಾದ ಏಟು ಕೊಟ್ಟಿದೆ, ಬಂಡವಾಳಶಾಹಿಗಳ ಹಿಂಬಾಲಕನಂತೆ ವರ್ತಿಸುವ ಮೂಲಕ ಒಕ್ಕೂಟದ ಎಲ್ಲ ರಾಜ್ಯಗಳಿಗೂ, ಆ ಮೂಲಕ ಎಲ್ಲ ದೇಶವಾಸಿಗಳಿಗೂ ಮಹಾದ್ರೋಹ ಬಗೆದಿದೆ ಅಲ್ಲವೇ?

ದೇಶದಲ್ಲಿ ಮೊದಲ ಬಾರಿಗೆ ಸಾಂಕ್ರಾಮಿಕ ರೋಗದ ಲಸಿಕೆಯನ್ನು ಮಾರಾಟಕ್ಕಿಟ್ಟ, ಆ ಮೂಲಕ ಔಷಧಿ ಕಂಪನಿಗಳ ದಲ್ಲಾಳಿಯಂತೆ ವರ್ತಿಸುತ್ತ, ರಾಜ್ಯ ಸರ್ಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ ಏಕೈಕ ಪ್ರಧಾನಿ ಎಂದು ಇತಿಹಾಸದಲ್ಲಿ ಮೋದಿ ಹೆಸರು ಉಳಿಯಲಿದೆ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ನಾವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೆ ಆರೋಗ್ಯ ವ್ಯವಸ್ಥೆಯನ್ನು ರಾಷ್ಟ್ರೀಕರಣಗೊಳಿಸುತ್ತಿದ್ದೆವು: ಕೇರಳ ಆರೋಗ್ಯ ಸಚಿವೆ ಕೆ.ಕೆ ಶೈಲಜಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...