Homeಕರ್ನಾಟಕಮುಗಿಲಿನಿಂದ ಯಾರೂ ಉಚಿಗೊಂಡು ಬಿದ್ದಿಲ್ಲ ! ದಲಿತರ ಮೇಲಿನ ಕ್ರೌರ್ಯಕ್ಕೆ ನಾಗರಿಕ ಸಮಾಜವೇ ತಲೆ ತಗ್ಗಿಸಬೇಕು

ಮುಗಿಲಿನಿಂದ ಯಾರೂ ಉಚಿಗೊಂಡು ಬಿದ್ದಿಲ್ಲ ! ದಲಿತರ ಮೇಲಿನ ಕ್ರೌರ್ಯಕ್ಕೆ ನಾಗರಿಕ ಸಮಾಜವೇ ತಲೆ ತಗ್ಗಿಸಬೇಕು

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ನಮ್ಮೆಲ್ಲರ ಮನಸ್ಸಿಗೆ ಅಂಟಿದ ಏಡ್ಸ್, ಕಾನ್ಸರ್‍ಗಿಂತಲೂ ಭೀಕರವಾದ ಜಾತಿಯತೆಯ ಭ್ರಮೆ ತೊಲಗುವ ಯಾವ ಲಕ್ಷಣಗಳು ನಮ್ಮ ನಾಗರಿಕ ಸಮಾಜದಲ್ಲಿ ಕಾಣುತ್ತಿಲ್ಲ. ವ್ಯಕ್ತಿಯ ಹುಟ್ಟಿನ ಮೂಲಕವೆ ಆತನ ಜಾತಿಯನ್ನು ನಿರ್ಧರಿಸುವ ಸಮಾಜವನ್ನು ಸ್ವಾಸ್ಥ್ಯ ಸಮಾಜವೆಂದು ಹೇಗೆ ಕರೆಯಬೇಕು? ವ್ಯಕ್ತಿಯ ಕೆಲಸಗಳಿಂದ ಆರಂಭವಾದ ಈ ಜಾತಿ ಪದ್ಧತಿ ಇಂದಿಗೂ ಮುಂದುವರೆದಿರುವುದು ದುರಂತವೆಂದೇ ಹೇಳಬೇಕಾಗಿದೆ. ಯಾವ ವ್ಯಕ್ತಿಯೂ ಹುಟ್ಟುವಾಗಲೆ ಕುರುಪಿ, ಕುಡಗೋಲು, ಸಲಿಕೆ, ಪುಟ್ಟಿಗಳನ್ನು ಜೊತೆಗೆ ತೆಗೆದುಕೊಂಡು ಹುಟ್ಟಿ ಬಂದಿಲ್ಲ. ಹಾಗೆಯೆ ಜನಿವಾರ, ನಾಮ, ವಿಭೂತಿ, ಇಷ್ಟಲಿಂಗ ಮುಂತಾದ ಲಾಂಛನಗಳನ್ನೂ ಹೊತ್ತು ಬಂದಿಲ್ಲ. ಆದರೂ ಜನ ಮಾನಸದಲ್ಲಿ ಜಾತಿಯ ಬೇರುಗಳು ಆಳಕ್ಕೆ ಇಳಿದು ಅವರೊಳಗಿನ ಮನುಷ್ಯತ್ವವನ್ನೆ ಕತ್ತರಿಸಿ ಹಾಕಿವೆ.

ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ
ಜಲಬಿಂದುವಿನ ವ್ಯವಹಾರ ಒಂದೇ
ಆಶೆಯಾಮಿಷ ರೋಹ ಹರುಷ ವಿಷಯಾದಿಗಳೆಲ್ಲಾ ಒಂದೇ
ಏನನೋದಿ ಏನ ಕೇಳಿ ಏನು ಫಲ ?
ಕುಲಜನೆಂಬುದಕ್ಕೆ ಆವುದು ದೃಷ್ಟ ?
ಕಾಶಿ ಕಮ್ಮಾರನಾದ ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ?
ಇದು ಕಾಣರ ಕೂಡಲಸಂಗಮದೇವಾ
ಲಿಂಗಸ್ಥಲವನರಿದವನೆ ಕುಲಜನು

ಜಾತಿಗಳಿಲ್ಲಿಯೇ ಶ್ರೇಷ್ಠ ಜಾತಿ ಎಂದು ಬೊಗಳೆ ಬಿಡುವ ಅಳಲೆಕಾಯಿ ಪಂಡಿತರು ಹುಟ್ಟಿದ್ದು ತಾಯಿಯ ಗರ್ಭದಲ್ಲಿಯೆ. ತಂದೆ ಮತ್ತು ತಾಯಿಗಳ ಮಿಲನದಿಂದ ಗರ್ಭಕಟ್ಟಿ ಮಗುವಾಗಿ ತಾಯಿಯ ಯೋನಿಯ ಮೂಲಕ ಹೊರಬಂದದ್ದು. ಈ ಸತ್ಯವನ್ನು ಅರಿತೂ ಅರಿಯದಂತೆ ನಡೆಸುವ ಮನುಷ್ಯ ತನ್ನೊಳಗೆ ದುಷ್ಟತನವನ್ನು ಸಾಕಿ ಸಲಹಿದ್ದಾನೆ. ಶುಕ್ಲ ಶೋಣಿತದ ಎಲ್ಲರ ಹುಟ್ಟು ಇದೆ. ವೇದ ಆಗಮ ಶಾಸ್ತ್ರ ಪುರಾಣ ಪುಣ್ಯ ಕತೆಗಳನ್ನು ಓದಿದ್ದೇವೆ ಎಂದು ಒಂದೆ ಸಮ ಅರಚುವ ಪಂಡಿತೋತ್ತಮರೂ ಸಹ ಜಾತಿಯ ಹೊಲಸಿನಲ್ಲಿ ಸಿಕ್ಕಿ ಬಿದಿದ್ದಾರೆ. ಜನತೆಯ ಮನಸ್ಸನ್ನು ಸರಿಯಾಗಿ ಗ್ರಹಿಸಿದ ಬಸವಣ್ಣನವರು ಆಶೆಯಾಮಿಷ ರೋಷ ಹರುಷಗಳು ಸಹ ಮನುಷ್ಯರಲ್ಲಿ ಒಂದೆ ಬಗೆಯಾಗಿರುತ್ತವೆ. ಜಾತಿ ಭಿನ್ನವಾದ ಮಾತ್ರಕ್ಕೆ ಅವರವರ ಮನಸ್ಥಿತಿಗಳು ಬದಲಾಗಲಾರವು ಎಂದಿದ್ದಾರೆ.

ಇದನ್ನು ಓದಿ: ಗುಂಡ್ಲುಪೇಟೆ ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣ ಖಂಡಿಸಿ ಪ್ರತಿಭಟನೆ

ಮಾಡುವ ಕಾಯಕಗಳು ಹೇಗೆ ಜಾತಿಯಾದವು ? ಎಂಬುದನ್ನು ಮನಂಬುಗುವಂತೆ ವಚನದಲ್ಲಿ ವಿವರಿಸಿದ್ದಾರೆ. ಯಾರೂ ಕಿವಿಯಲ್ಲಿ ಹುಟ್ಟಲು ಸಾಧ್ಯವೆ ಇಲ್ಲ. ಲಿಂಗಸ್ಥಲದ ಅರಿವು ಅಂದರೆ ಅದು ವಾಸ್ತವದ ಅರಿವು. ಸತ್ಯದ ಅರಿವು. ವಿಜ್ಞಾನದ ಅರಿವು ಎಂದರ್ಥ. ಯಾರು ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾನೊ ಆತನೆ ಶ್ರೇಷ್ಠ ಕುಲದವನು ಎಂಬ ವಾದ ಬಸವಣ್ಣನವರದು. ಕುಲಗಳು ಶ್ರೇಷ್ಠ ಕನಿಷ್ಠ ಎಂದು ವಿಂಗಡಿಸುವಿರಾದರೆ ಹಿಂದೆ ಇದ್ದ ಮನು ಮುನಿಗಳು ಯಾರಿದ್ದರು ? ಎಂಬ ಇತಿಹಾಸದ ಪುಟವನ್ನು ಹೆಕ್ಕಿ ನೋಡಿದರೆ ಸತ್ಯ ಕಾಣುತ್ತದೆ.

ವ್ಯಾಸ ಬೋವಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ
ಮಂಡೋದರಿ ಕಪ್ಪೆಯ ಮಗಳು, ಕುಲವನರಸದಿರಿಂ ಭೋ
ಕುಲದಿಂದ ಮುನ್ನೆನಾದಿರಿಂ ಭೋ !
ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮಚ್ಚಿಗ
ಕಶ್ಯಪ್ಪ ಕಮ್ಮಾರ, ಕೌಂಡಿನ್ಯನೆಂಬ ಖುಷಿ
ಮೂರು ಭುವನರಿಯದೆ ನಾವಿದ ಕಾಣಿ ಭೋ !
ನಮ್ಮ ಕೂಡಲ ಸಂಗನ ವಚನವಿಂತೆಂದುದು
ಶ್ವಪಚೋಪಿಯಾದಡೇನು , ಭಕ್ತನೆ ಕುಲಜಂ ಭೋ !

ರಾಮಾಯಣ ಮಹಾಕಾವ್ಯವನ್ನು ರಚಿಸಿ ಮಹಾಋಷಿ ಎನಿಸಿಕೊಂಡ ವ್ಯಾಸ ಬೋವಿತಿಯ ಮಗ. ಮಾರ್ಕಂಡೇಯ ಮಹರ್ಷಿ ಮಾತಂಗಿಯ ಮಗ. ಅಗಸ್ತ್ಯ ಮಹರ್ಷಿ ಕಬ್ಬಲಿಗ, ದುರ್ವಾಸ ಮುನಿ ಮಚ್ಚಿಗ, ಕೌಂಡಿನ್ಯ ಎಂಬ ಋಷಿ ನಾವಿದ. ಆದ್ದರಿಂದ ಯಾರೂ ಜಾತಿಯ ಮೂಲಕ ಶ್ರೇಷ್ಠ ಕನಿಷ್ಠರಾಗಲು ಸಾಧ್ಯವಿಲ್ಲ ಎಂಬುದು ಬಸವಣ್ಣನವರ ಖಚಿತವಾದ ನಿಲುವು. ಯಾರು ಕಾಯಕ ಜೀವಿಯಾಗಿರುತ್ತಾನೋ, ತನ್ನ ಪರಿಶ್ರಮದ ದುಡಿಮೆಯ ಮೂಲಕ ಬಂದ ಫಲದಲ್ಲಿ ಸತ್ಪಾತ್ರರಿಗೆ ದಾಸೋಹ ನಡೆಸುತ್ತಾನೋ ಆ ಭಕ್ತನೆ ಕುಲಜನು ಎಂಬುದು ಶರಣರ ಇಂಗಿತವಾಗಿದೆ.

ಅಂಬಿಗರಚೌಡಯ್ಯನೆಂಬ ಶರಣನಂತೂ ಜಾತಿಯನ್ನು ನೋಡಿ ವ್ಯವಹರಿಸುವವರ ಕಂಡರೆ ಕೆಂಡಾಮಂಡಲವಾಗುತ್ತಾನೆ.

ಜಾತಿ ಭ್ರಮೆ, ನೀತಿ ಭ್ರಮೆ ಎಂಬ ಕರ್ಮಂಗಳನು
ಘಾತಿಸಿ ಕಳೆಯಬಲ್ಲಡಾತ ಯೋಗಿ
ಯೋಗಿ ಅಂದರೆ ನಾಡು ಬಿಟ್ಟು ಕಾಡು ಸೇರುವವನಲ್ಲ. ಗಡ್ಡ ಬಿಟ್ಟು, ಹೆಂಡತಿ ಮಕ್ಕಳ ತೊರೆದು ಹೋಗುವಾತನಲ್ಲ. ಜಾತಿ ಭ್ರಮೆಂiÀiನ್ನು ಕಳೆಯುವವನೆ ಯೋಗಿ ಎಂದಿದ್ದಾರೆ. ಆನು ಹಾರುವನೆಂದರೆ ಕೂಡಲ ಸಂಗಮ ನಗುವನಯ್ಯಾ ಎನ್ನುತ್ತಲೆ ಬಸವಣ್ಣನವರು ತಮ್ಮ ಮೇಲಿರಿಮೆಯ ಭ್ರಮೆಯನ್ನು ಕಳಚಿಕೊಂಡು ಮಾದಾರ ಚೆನ್ನಯ್ಯನ ಮನೆಯ ಮಗ ನಾನು ಎಂದು ಹೇಳುವ ಮೂಲಕ ತಮ್ಮ ಮನಸ್ಸಿಗೆ ಅಂಟಿದ ಕೊಳೆಯನ್ನು ತೊಳಕೊಂಡರು. ಅಷ್ಟಕ್ಕೂ ಅವರಿಗೆ ಸಮಾಧಾನವಾಗಲಿಲ್ಲ. ಆಗ

ಚೆನ್ನಯ್ಯನ ಮನೆಯ ದಾಸಿನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇಬ್ಬರಿಗೂ ಹೊದಲು ಬೆರಣಿಗೆ ಹೋಗಿ
ಸಂಗವ ಮಾಡಿದರು ಇವರಿಬ್ಬರಿಗೆ ಹುಟ್ಟಿದ ಮಗ ನಾನು
ಕೂಡಲಸಂಗವದೇವ ಸಾಕ್ಷಿಯಾಗಿ

ಎನ್ನುವ ಮೂಲಕ ತಮ್ಮನ್ನು ಕೇವಲ ತಳವರ್ಗದ ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳಲಿಲ್ಲ. ಚೆನ್ನಯ್ಯ ಮತ್ತು ಕಕ್ಕಯ್ಯನೆಂದರೆ ಕೀಳು ಎಂದು ತಿಳಿದ ಆ ದಿನಗಳಲ್ಲಿ ಅವರ ಮನೆಯ ಆಳುಗಳು ಬೆರಣಿಯ ಆಯಲು ಹೋದಾಗ ಸಮಾಜದ ಒಪ್ಪಿಗೆಯೂ ಪಡೆಯದೆ ಸಂಗವ ಮಾಡಿದರು. ಅಂದರೆ ಅಕ್ಷರಶಃ ಅವರು ಹಾದಕ್ಕೆ ಒಳಗಾದಾಗ ಹುಟ್ಟಿದ ಕೂಸು ನಾನು ಎನ್ನುವ ಮೂಲಕ ತಮ್ಮೊಳಗಿನ ಜಾತಿಯ ತಿಮಿರವನ್ನು ಕಳೆದುಕೊಳ್ಳುತ್ತಾರೆ.

ಅಮ್ಮುಗೆಯ ದೇವಯ್ಯ ಎಂಬ ಶರಣ ಕೂಡ
ಕಕ್ಕಯ್ಯನ ಪ್ರಸಾದ ಕೊಂಡೆನ್ನ ಕುಲ ಸೂತಕ ಹೋಯಿತ್ತಯ್ಯಾ
ಚೆನ್ನಯ್ಯನ ಪ್ರಸಾದವ ಕೊಂಡೆನ್ನ ಛಲ ಸೂತಕ ಹೋಯಿತ್ತಯ್ಯಾ
ದಾಸಯ್ಯನ ಪ್ರಸಾದವ ಕೊಂಡೆನ್ನ ತನು ಸೂತಕ ಹೋಯಿತ್ತಯ್ಯಾ
ಚಂದಯ್ಯನ ಪ್ರಸಾದವ ಕೊಂಡೆನ್ನ ಮನ ಸೂತಕ ಹೋಯಿತ್ತಯ್ಯಾ

ಅನುಭಾವಿ ಶರಣರ, ಸಂತರ ಸಂಗದಿಂದ ಮಾತ್ರ ನಮ್ಮ ಮನದಲ್ಲಿಯ ಜಾತಿ ಭ್ರಮೆ ಹೋಗಲು ಸಾಧ್ಯವಿದೆ. ಇಲ್ಲದೆ ಹೋದರೆ ಈ ಜಾತಿ ಚಕ್ರವ್ಯೂಹದಲ್ಲಿ ಸಿಲುಕಿದ ಮನುಷ್ಯ ಹೊರಬರುವುದು ತೀರಾ ಅಪರೂಪ.
ಮಂಡೆ ಮಾಸಿದೊಡೆ ಮಹಾಮಜ್ಜನವ ಮಾಡುವುದು
ವಸ್ತ್ರ ಮಾಸಿದಡೆ ಮಡಿವಾಳರಿಕ್ಕುವುದು
ಮನದ ಮೈಲಿಗೆ ತೊಳೆಯಬೇಕಾದಡೆ
ಕೂಡಲಚೆನ್ನಸಂಗಯ್ಯನ ಶರಣರ ಅನುಭಾವ ಮಾಡುವುದು
ಎಂದು ಹೇಳಿದ್ದಾರೆ ಚೆನ್ನಬಸವಣ್ಣನವರು .

ತಳ ಸಮೂಹದಲ್ಲಿ ಹುಟ್ಟಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಆ ಸಮೂಹವನ್ನು ಗುಡಿಯೊಳಗೆ ಬಿಟ್ಟುಕೊಳ್ಳದೆ ಇರುವುದು. ಅವರಿಂದ ಸಣ್ಣ ತಪ್ಪು ಘಟಿಸಿದರೂ ನೆಲ ಮುಗಿಲು ಒಂದಾಗುವಂತೆ ಮಾಡಿ ಮಾನವೀಯತೆ ಮರೆತು ಕ್ರೌರ್ಯದಿಂದ ವರ್ತಿಸುವುದು ನಾಗರಿಕ ಲಕ್ಷಣವಲ್ಲ. ಪಶು ಪಕ್ಷಿಗಳು ಸಹ ಹಿಂಡು ಹಿಂಡಾಗಿ ಸೌಹಾರ್ದತೆಯಿಂದ ವಾಸಿಸುತ್ತಿರುವಾಗ ಮನುಷ್ಯ ಮಾತ್ರ ಜಾತಿಯ ಕಾರಣಕ್ಕಾಗಿ ಒಬ್ಬರು ಮತ್ತೊಬ್ಬರ ಮೇಲೆ ಏರಿ ಹೋಗಿ ಹಲ್ಲೆ ಮಾಡುವುದು ಯಾರೂ ಒಪ್ಪಲು ಸಾಧ್ಯವಿಲ್ಲ.

ಇಷ್ಟಕ್ಕೂ ಯಾವುದೆ ವ್ಯಕ್ತಿ ತಳ ಸಮುದಾಯದಲ್ಲಿ ಹುಟ್ಟಬೇಕೆಂದು ಮೊದಲೆ ಅಪ್ಲಿಕೇಷನ್ ಹಾಕಿಕೊಂಡಿಲ್ಲ. ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯ ವೀರನಪುರದಲ್ಲಿ ಇತ್ತೀಚೆಗೆ ನಡೆದ ದಲಿತ ದೌರ್ಜನ್ಯ ಘಟನೆ ಮನುಷ್ಯ ಕುಲ ತಲೆ ತಗ್ಗಿಸುವಂತೆ ಮಾಡಿದೆ. ಪ್ರಜ್ಞಾವಂತ ಮನುಷ್ಯ ಸಮಾಜ ಇದನ್ನು ಬಲವಾಗಿ ಖಂಡಿಸಬೇಕಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...