Homeಕರ್ನಾಟಕಮುಗಿಲಿನಿಂದ ಯಾರೂ ಉಚಿಗೊಂಡು ಬಿದ್ದಿಲ್ಲ ! ದಲಿತರ ಮೇಲಿನ ಕ್ರೌರ್ಯಕ್ಕೆ ನಾಗರಿಕ ಸಮಾಜವೇ ತಲೆ ತಗ್ಗಿಸಬೇಕು

ಮುಗಿಲಿನಿಂದ ಯಾರೂ ಉಚಿಗೊಂಡು ಬಿದ್ದಿಲ್ಲ ! ದಲಿತರ ಮೇಲಿನ ಕ್ರೌರ್ಯಕ್ಕೆ ನಾಗರಿಕ ಸಮಾಜವೇ ತಲೆ ತಗ್ಗಿಸಬೇಕು

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ನಮ್ಮೆಲ್ಲರ ಮನಸ್ಸಿಗೆ ಅಂಟಿದ ಏಡ್ಸ್, ಕಾನ್ಸರ್‍ಗಿಂತಲೂ ಭೀಕರವಾದ ಜಾತಿಯತೆಯ ಭ್ರಮೆ ತೊಲಗುವ ಯಾವ ಲಕ್ಷಣಗಳು ನಮ್ಮ ನಾಗರಿಕ ಸಮಾಜದಲ್ಲಿ ಕಾಣುತ್ತಿಲ್ಲ. ವ್ಯಕ್ತಿಯ ಹುಟ್ಟಿನ ಮೂಲಕವೆ ಆತನ ಜಾತಿಯನ್ನು ನಿರ್ಧರಿಸುವ ಸಮಾಜವನ್ನು ಸ್ವಾಸ್ಥ್ಯ ಸಮಾಜವೆಂದು ಹೇಗೆ ಕರೆಯಬೇಕು? ವ್ಯಕ್ತಿಯ ಕೆಲಸಗಳಿಂದ ಆರಂಭವಾದ ಈ ಜಾತಿ ಪದ್ಧತಿ ಇಂದಿಗೂ ಮುಂದುವರೆದಿರುವುದು ದುರಂತವೆಂದೇ ಹೇಳಬೇಕಾಗಿದೆ. ಯಾವ ವ್ಯಕ್ತಿಯೂ ಹುಟ್ಟುವಾಗಲೆ ಕುರುಪಿ, ಕುಡಗೋಲು, ಸಲಿಕೆ, ಪುಟ್ಟಿಗಳನ್ನು ಜೊತೆಗೆ ತೆಗೆದುಕೊಂಡು ಹುಟ್ಟಿ ಬಂದಿಲ್ಲ. ಹಾಗೆಯೆ ಜನಿವಾರ, ನಾಮ, ವಿಭೂತಿ, ಇಷ್ಟಲಿಂಗ ಮುಂತಾದ ಲಾಂಛನಗಳನ್ನೂ ಹೊತ್ತು ಬಂದಿಲ್ಲ. ಆದರೂ ಜನ ಮಾನಸದಲ್ಲಿ ಜಾತಿಯ ಬೇರುಗಳು ಆಳಕ್ಕೆ ಇಳಿದು ಅವರೊಳಗಿನ ಮನುಷ್ಯತ್ವವನ್ನೆ ಕತ್ತರಿಸಿ ಹಾಕಿವೆ.

ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ
ಜಲಬಿಂದುವಿನ ವ್ಯವಹಾರ ಒಂದೇ
ಆಶೆಯಾಮಿಷ ರೋಹ ಹರುಷ ವಿಷಯಾದಿಗಳೆಲ್ಲಾ ಒಂದೇ
ಏನನೋದಿ ಏನ ಕೇಳಿ ಏನು ಫಲ ?
ಕುಲಜನೆಂಬುದಕ್ಕೆ ಆವುದು ದೃಷ್ಟ ?
ಕಾಶಿ ಕಮ್ಮಾರನಾದ ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ?
ಇದು ಕಾಣರ ಕೂಡಲಸಂಗಮದೇವಾ
ಲಿಂಗಸ್ಥಲವನರಿದವನೆ ಕುಲಜನು

ಜಾತಿಗಳಿಲ್ಲಿಯೇ ಶ್ರೇಷ್ಠ ಜಾತಿ ಎಂದು ಬೊಗಳೆ ಬಿಡುವ ಅಳಲೆಕಾಯಿ ಪಂಡಿತರು ಹುಟ್ಟಿದ್ದು ತಾಯಿಯ ಗರ್ಭದಲ್ಲಿಯೆ. ತಂದೆ ಮತ್ತು ತಾಯಿಗಳ ಮಿಲನದಿಂದ ಗರ್ಭಕಟ್ಟಿ ಮಗುವಾಗಿ ತಾಯಿಯ ಯೋನಿಯ ಮೂಲಕ ಹೊರಬಂದದ್ದು. ಈ ಸತ್ಯವನ್ನು ಅರಿತೂ ಅರಿಯದಂತೆ ನಡೆಸುವ ಮನುಷ್ಯ ತನ್ನೊಳಗೆ ದುಷ್ಟತನವನ್ನು ಸಾಕಿ ಸಲಹಿದ್ದಾನೆ. ಶುಕ್ಲ ಶೋಣಿತದ ಎಲ್ಲರ ಹುಟ್ಟು ಇದೆ. ವೇದ ಆಗಮ ಶಾಸ್ತ್ರ ಪುರಾಣ ಪುಣ್ಯ ಕತೆಗಳನ್ನು ಓದಿದ್ದೇವೆ ಎಂದು ಒಂದೆ ಸಮ ಅರಚುವ ಪಂಡಿತೋತ್ತಮರೂ ಸಹ ಜಾತಿಯ ಹೊಲಸಿನಲ್ಲಿ ಸಿಕ್ಕಿ ಬಿದಿದ್ದಾರೆ. ಜನತೆಯ ಮನಸ್ಸನ್ನು ಸರಿಯಾಗಿ ಗ್ರಹಿಸಿದ ಬಸವಣ್ಣನವರು ಆಶೆಯಾಮಿಷ ರೋಷ ಹರುಷಗಳು ಸಹ ಮನುಷ್ಯರಲ್ಲಿ ಒಂದೆ ಬಗೆಯಾಗಿರುತ್ತವೆ. ಜಾತಿ ಭಿನ್ನವಾದ ಮಾತ್ರಕ್ಕೆ ಅವರವರ ಮನಸ್ಥಿತಿಗಳು ಬದಲಾಗಲಾರವು ಎಂದಿದ್ದಾರೆ.

ಇದನ್ನು ಓದಿ: ಗುಂಡ್ಲುಪೇಟೆ ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣ ಖಂಡಿಸಿ ಪ್ರತಿಭಟನೆ

ಮಾಡುವ ಕಾಯಕಗಳು ಹೇಗೆ ಜಾತಿಯಾದವು ? ಎಂಬುದನ್ನು ಮನಂಬುಗುವಂತೆ ವಚನದಲ್ಲಿ ವಿವರಿಸಿದ್ದಾರೆ. ಯಾರೂ ಕಿವಿಯಲ್ಲಿ ಹುಟ್ಟಲು ಸಾಧ್ಯವೆ ಇಲ್ಲ. ಲಿಂಗಸ್ಥಲದ ಅರಿವು ಅಂದರೆ ಅದು ವಾಸ್ತವದ ಅರಿವು. ಸತ್ಯದ ಅರಿವು. ವಿಜ್ಞಾನದ ಅರಿವು ಎಂದರ್ಥ. ಯಾರು ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾನೊ ಆತನೆ ಶ್ರೇಷ್ಠ ಕುಲದವನು ಎಂಬ ವಾದ ಬಸವಣ್ಣನವರದು. ಕುಲಗಳು ಶ್ರೇಷ್ಠ ಕನಿಷ್ಠ ಎಂದು ವಿಂಗಡಿಸುವಿರಾದರೆ ಹಿಂದೆ ಇದ್ದ ಮನು ಮುನಿಗಳು ಯಾರಿದ್ದರು ? ಎಂಬ ಇತಿಹಾಸದ ಪುಟವನ್ನು ಹೆಕ್ಕಿ ನೋಡಿದರೆ ಸತ್ಯ ಕಾಣುತ್ತದೆ.

ವ್ಯಾಸ ಬೋವಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ
ಮಂಡೋದರಿ ಕಪ್ಪೆಯ ಮಗಳು, ಕುಲವನರಸದಿರಿಂ ಭೋ
ಕುಲದಿಂದ ಮುನ್ನೆನಾದಿರಿಂ ಭೋ !
ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮಚ್ಚಿಗ
ಕಶ್ಯಪ್ಪ ಕಮ್ಮಾರ, ಕೌಂಡಿನ್ಯನೆಂಬ ಖುಷಿ
ಮೂರು ಭುವನರಿಯದೆ ನಾವಿದ ಕಾಣಿ ಭೋ !
ನಮ್ಮ ಕೂಡಲ ಸಂಗನ ವಚನವಿಂತೆಂದುದು
ಶ್ವಪಚೋಪಿಯಾದಡೇನು , ಭಕ್ತನೆ ಕುಲಜಂ ಭೋ !

ರಾಮಾಯಣ ಮಹಾಕಾವ್ಯವನ್ನು ರಚಿಸಿ ಮಹಾಋಷಿ ಎನಿಸಿಕೊಂಡ ವ್ಯಾಸ ಬೋವಿತಿಯ ಮಗ. ಮಾರ್ಕಂಡೇಯ ಮಹರ್ಷಿ ಮಾತಂಗಿಯ ಮಗ. ಅಗಸ್ತ್ಯ ಮಹರ್ಷಿ ಕಬ್ಬಲಿಗ, ದುರ್ವಾಸ ಮುನಿ ಮಚ್ಚಿಗ, ಕೌಂಡಿನ್ಯ ಎಂಬ ಋಷಿ ನಾವಿದ. ಆದ್ದರಿಂದ ಯಾರೂ ಜಾತಿಯ ಮೂಲಕ ಶ್ರೇಷ್ಠ ಕನಿಷ್ಠರಾಗಲು ಸಾಧ್ಯವಿಲ್ಲ ಎಂಬುದು ಬಸವಣ್ಣನವರ ಖಚಿತವಾದ ನಿಲುವು. ಯಾರು ಕಾಯಕ ಜೀವಿಯಾಗಿರುತ್ತಾನೋ, ತನ್ನ ಪರಿಶ್ರಮದ ದುಡಿಮೆಯ ಮೂಲಕ ಬಂದ ಫಲದಲ್ಲಿ ಸತ್ಪಾತ್ರರಿಗೆ ದಾಸೋಹ ನಡೆಸುತ್ತಾನೋ ಆ ಭಕ್ತನೆ ಕುಲಜನು ಎಂಬುದು ಶರಣರ ಇಂಗಿತವಾಗಿದೆ.

ಅಂಬಿಗರಚೌಡಯ್ಯನೆಂಬ ಶರಣನಂತೂ ಜಾತಿಯನ್ನು ನೋಡಿ ವ್ಯವಹರಿಸುವವರ ಕಂಡರೆ ಕೆಂಡಾಮಂಡಲವಾಗುತ್ತಾನೆ.

ಜಾತಿ ಭ್ರಮೆ, ನೀತಿ ಭ್ರಮೆ ಎಂಬ ಕರ್ಮಂಗಳನು
ಘಾತಿಸಿ ಕಳೆಯಬಲ್ಲಡಾತ ಯೋಗಿ
ಯೋಗಿ ಅಂದರೆ ನಾಡು ಬಿಟ್ಟು ಕಾಡು ಸೇರುವವನಲ್ಲ. ಗಡ್ಡ ಬಿಟ್ಟು, ಹೆಂಡತಿ ಮಕ್ಕಳ ತೊರೆದು ಹೋಗುವಾತನಲ್ಲ. ಜಾತಿ ಭ್ರಮೆಂiÀiನ್ನು ಕಳೆಯುವವನೆ ಯೋಗಿ ಎಂದಿದ್ದಾರೆ. ಆನು ಹಾರುವನೆಂದರೆ ಕೂಡಲ ಸಂಗಮ ನಗುವನಯ್ಯಾ ಎನ್ನುತ್ತಲೆ ಬಸವಣ್ಣನವರು ತಮ್ಮ ಮೇಲಿರಿಮೆಯ ಭ್ರಮೆಯನ್ನು ಕಳಚಿಕೊಂಡು ಮಾದಾರ ಚೆನ್ನಯ್ಯನ ಮನೆಯ ಮಗ ನಾನು ಎಂದು ಹೇಳುವ ಮೂಲಕ ತಮ್ಮ ಮನಸ್ಸಿಗೆ ಅಂಟಿದ ಕೊಳೆಯನ್ನು ತೊಳಕೊಂಡರು. ಅಷ್ಟಕ್ಕೂ ಅವರಿಗೆ ಸಮಾಧಾನವಾಗಲಿಲ್ಲ. ಆಗ

ಚೆನ್ನಯ್ಯನ ಮನೆಯ ದಾಸಿನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇಬ್ಬರಿಗೂ ಹೊದಲು ಬೆರಣಿಗೆ ಹೋಗಿ
ಸಂಗವ ಮಾಡಿದರು ಇವರಿಬ್ಬರಿಗೆ ಹುಟ್ಟಿದ ಮಗ ನಾನು
ಕೂಡಲಸಂಗವದೇವ ಸಾಕ್ಷಿಯಾಗಿ

ಎನ್ನುವ ಮೂಲಕ ತಮ್ಮನ್ನು ಕೇವಲ ತಳವರ್ಗದ ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳಲಿಲ್ಲ. ಚೆನ್ನಯ್ಯ ಮತ್ತು ಕಕ್ಕಯ್ಯನೆಂದರೆ ಕೀಳು ಎಂದು ತಿಳಿದ ಆ ದಿನಗಳಲ್ಲಿ ಅವರ ಮನೆಯ ಆಳುಗಳು ಬೆರಣಿಯ ಆಯಲು ಹೋದಾಗ ಸಮಾಜದ ಒಪ್ಪಿಗೆಯೂ ಪಡೆಯದೆ ಸಂಗವ ಮಾಡಿದರು. ಅಂದರೆ ಅಕ್ಷರಶಃ ಅವರು ಹಾದಕ್ಕೆ ಒಳಗಾದಾಗ ಹುಟ್ಟಿದ ಕೂಸು ನಾನು ಎನ್ನುವ ಮೂಲಕ ತಮ್ಮೊಳಗಿನ ಜಾತಿಯ ತಿಮಿರವನ್ನು ಕಳೆದುಕೊಳ್ಳುತ್ತಾರೆ.

ಅಮ್ಮುಗೆಯ ದೇವಯ್ಯ ಎಂಬ ಶರಣ ಕೂಡ
ಕಕ್ಕಯ್ಯನ ಪ್ರಸಾದ ಕೊಂಡೆನ್ನ ಕುಲ ಸೂತಕ ಹೋಯಿತ್ತಯ್ಯಾ
ಚೆನ್ನಯ್ಯನ ಪ್ರಸಾದವ ಕೊಂಡೆನ್ನ ಛಲ ಸೂತಕ ಹೋಯಿತ್ತಯ್ಯಾ
ದಾಸಯ್ಯನ ಪ್ರಸಾದವ ಕೊಂಡೆನ್ನ ತನು ಸೂತಕ ಹೋಯಿತ್ತಯ್ಯಾ
ಚಂದಯ್ಯನ ಪ್ರಸಾದವ ಕೊಂಡೆನ್ನ ಮನ ಸೂತಕ ಹೋಯಿತ್ತಯ್ಯಾ

ಅನುಭಾವಿ ಶರಣರ, ಸಂತರ ಸಂಗದಿಂದ ಮಾತ್ರ ನಮ್ಮ ಮನದಲ್ಲಿಯ ಜಾತಿ ಭ್ರಮೆ ಹೋಗಲು ಸಾಧ್ಯವಿದೆ. ಇಲ್ಲದೆ ಹೋದರೆ ಈ ಜಾತಿ ಚಕ್ರವ್ಯೂಹದಲ್ಲಿ ಸಿಲುಕಿದ ಮನುಷ್ಯ ಹೊರಬರುವುದು ತೀರಾ ಅಪರೂಪ.
ಮಂಡೆ ಮಾಸಿದೊಡೆ ಮಹಾಮಜ್ಜನವ ಮಾಡುವುದು
ವಸ್ತ್ರ ಮಾಸಿದಡೆ ಮಡಿವಾಳರಿಕ್ಕುವುದು
ಮನದ ಮೈಲಿಗೆ ತೊಳೆಯಬೇಕಾದಡೆ
ಕೂಡಲಚೆನ್ನಸಂಗಯ್ಯನ ಶರಣರ ಅನುಭಾವ ಮಾಡುವುದು
ಎಂದು ಹೇಳಿದ್ದಾರೆ ಚೆನ್ನಬಸವಣ್ಣನವರು .

ತಳ ಸಮೂಹದಲ್ಲಿ ಹುಟ್ಟಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಆ ಸಮೂಹವನ್ನು ಗುಡಿಯೊಳಗೆ ಬಿಟ್ಟುಕೊಳ್ಳದೆ ಇರುವುದು. ಅವರಿಂದ ಸಣ್ಣ ತಪ್ಪು ಘಟಿಸಿದರೂ ನೆಲ ಮುಗಿಲು ಒಂದಾಗುವಂತೆ ಮಾಡಿ ಮಾನವೀಯತೆ ಮರೆತು ಕ್ರೌರ್ಯದಿಂದ ವರ್ತಿಸುವುದು ನಾಗರಿಕ ಲಕ್ಷಣವಲ್ಲ. ಪಶು ಪಕ್ಷಿಗಳು ಸಹ ಹಿಂಡು ಹಿಂಡಾಗಿ ಸೌಹಾರ್ದತೆಯಿಂದ ವಾಸಿಸುತ್ತಿರುವಾಗ ಮನುಷ್ಯ ಮಾತ್ರ ಜಾತಿಯ ಕಾರಣಕ್ಕಾಗಿ ಒಬ್ಬರು ಮತ್ತೊಬ್ಬರ ಮೇಲೆ ಏರಿ ಹೋಗಿ ಹಲ್ಲೆ ಮಾಡುವುದು ಯಾರೂ ಒಪ್ಪಲು ಸಾಧ್ಯವಿಲ್ಲ.

ಇಷ್ಟಕ್ಕೂ ಯಾವುದೆ ವ್ಯಕ್ತಿ ತಳ ಸಮುದಾಯದಲ್ಲಿ ಹುಟ್ಟಬೇಕೆಂದು ಮೊದಲೆ ಅಪ್ಲಿಕೇಷನ್ ಹಾಕಿಕೊಂಡಿಲ್ಲ. ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯ ವೀರನಪುರದಲ್ಲಿ ಇತ್ತೀಚೆಗೆ ನಡೆದ ದಲಿತ ದೌರ್ಜನ್ಯ ಘಟನೆ ಮನುಷ್ಯ ಕುಲ ತಲೆ ತಗ್ಗಿಸುವಂತೆ ಮಾಡಿದೆ. ಪ್ರಜ್ಞಾವಂತ ಮನುಷ್ಯ ಸಮಾಜ ಇದನ್ನು ಬಲವಾಗಿ ಖಂಡಿಸಬೇಕಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...