Homeಕರ್ನಾಟಕಮುಗಿಲಿನಿಂದ ಯಾರೂ ಉಚಿಗೊಂಡು ಬಿದ್ದಿಲ್ಲ ! ದಲಿತರ ಮೇಲಿನ ಕ್ರೌರ್ಯಕ್ಕೆ ನಾಗರಿಕ ಸಮಾಜವೇ ತಲೆ ತಗ್ಗಿಸಬೇಕು

ಮುಗಿಲಿನಿಂದ ಯಾರೂ ಉಚಿಗೊಂಡು ಬಿದ್ದಿಲ್ಲ ! ದಲಿತರ ಮೇಲಿನ ಕ್ರೌರ್ಯಕ್ಕೆ ನಾಗರಿಕ ಸಮಾಜವೇ ತಲೆ ತಗ್ಗಿಸಬೇಕು

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ನಮ್ಮೆಲ್ಲರ ಮನಸ್ಸಿಗೆ ಅಂಟಿದ ಏಡ್ಸ್, ಕಾನ್ಸರ್‍ಗಿಂತಲೂ ಭೀಕರವಾದ ಜಾತಿಯತೆಯ ಭ್ರಮೆ ತೊಲಗುವ ಯಾವ ಲಕ್ಷಣಗಳು ನಮ್ಮ ನಾಗರಿಕ ಸಮಾಜದಲ್ಲಿ ಕಾಣುತ್ತಿಲ್ಲ. ವ್ಯಕ್ತಿಯ ಹುಟ್ಟಿನ ಮೂಲಕವೆ ಆತನ ಜಾತಿಯನ್ನು ನಿರ್ಧರಿಸುವ ಸಮಾಜವನ್ನು ಸ್ವಾಸ್ಥ್ಯ ಸಮಾಜವೆಂದು ಹೇಗೆ ಕರೆಯಬೇಕು? ವ್ಯಕ್ತಿಯ ಕೆಲಸಗಳಿಂದ ಆರಂಭವಾದ ಈ ಜಾತಿ ಪದ್ಧತಿ ಇಂದಿಗೂ ಮುಂದುವರೆದಿರುವುದು ದುರಂತವೆಂದೇ ಹೇಳಬೇಕಾಗಿದೆ. ಯಾವ ವ್ಯಕ್ತಿಯೂ ಹುಟ್ಟುವಾಗಲೆ ಕುರುಪಿ, ಕುಡಗೋಲು, ಸಲಿಕೆ, ಪುಟ್ಟಿಗಳನ್ನು ಜೊತೆಗೆ ತೆಗೆದುಕೊಂಡು ಹುಟ್ಟಿ ಬಂದಿಲ್ಲ. ಹಾಗೆಯೆ ಜನಿವಾರ, ನಾಮ, ವಿಭೂತಿ, ಇಷ್ಟಲಿಂಗ ಮುಂತಾದ ಲಾಂಛನಗಳನ್ನೂ ಹೊತ್ತು ಬಂದಿಲ್ಲ. ಆದರೂ ಜನ ಮಾನಸದಲ್ಲಿ ಜಾತಿಯ ಬೇರುಗಳು ಆಳಕ್ಕೆ ಇಳಿದು ಅವರೊಳಗಿನ ಮನುಷ್ಯತ್ವವನ್ನೆ ಕತ್ತರಿಸಿ ಹಾಕಿವೆ.

ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ
ಜಲಬಿಂದುವಿನ ವ್ಯವಹಾರ ಒಂದೇ
ಆಶೆಯಾಮಿಷ ರೋಹ ಹರುಷ ವಿಷಯಾದಿಗಳೆಲ್ಲಾ ಒಂದೇ
ಏನನೋದಿ ಏನ ಕೇಳಿ ಏನು ಫಲ ?
ಕುಲಜನೆಂಬುದಕ್ಕೆ ಆವುದು ದೃಷ್ಟ ?
ಕಾಶಿ ಕಮ್ಮಾರನಾದ ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ?
ಇದು ಕಾಣರ ಕೂಡಲಸಂಗಮದೇವಾ
ಲಿಂಗಸ್ಥಲವನರಿದವನೆ ಕುಲಜನು

ಜಾತಿಗಳಿಲ್ಲಿಯೇ ಶ್ರೇಷ್ಠ ಜಾತಿ ಎಂದು ಬೊಗಳೆ ಬಿಡುವ ಅಳಲೆಕಾಯಿ ಪಂಡಿತರು ಹುಟ್ಟಿದ್ದು ತಾಯಿಯ ಗರ್ಭದಲ್ಲಿಯೆ. ತಂದೆ ಮತ್ತು ತಾಯಿಗಳ ಮಿಲನದಿಂದ ಗರ್ಭಕಟ್ಟಿ ಮಗುವಾಗಿ ತಾಯಿಯ ಯೋನಿಯ ಮೂಲಕ ಹೊರಬಂದದ್ದು. ಈ ಸತ್ಯವನ್ನು ಅರಿತೂ ಅರಿಯದಂತೆ ನಡೆಸುವ ಮನುಷ್ಯ ತನ್ನೊಳಗೆ ದುಷ್ಟತನವನ್ನು ಸಾಕಿ ಸಲಹಿದ್ದಾನೆ. ಶುಕ್ಲ ಶೋಣಿತದ ಎಲ್ಲರ ಹುಟ್ಟು ಇದೆ. ವೇದ ಆಗಮ ಶಾಸ್ತ್ರ ಪುರಾಣ ಪುಣ್ಯ ಕತೆಗಳನ್ನು ಓದಿದ್ದೇವೆ ಎಂದು ಒಂದೆ ಸಮ ಅರಚುವ ಪಂಡಿತೋತ್ತಮರೂ ಸಹ ಜಾತಿಯ ಹೊಲಸಿನಲ್ಲಿ ಸಿಕ್ಕಿ ಬಿದಿದ್ದಾರೆ. ಜನತೆಯ ಮನಸ್ಸನ್ನು ಸರಿಯಾಗಿ ಗ್ರಹಿಸಿದ ಬಸವಣ್ಣನವರು ಆಶೆಯಾಮಿಷ ರೋಷ ಹರುಷಗಳು ಸಹ ಮನುಷ್ಯರಲ್ಲಿ ಒಂದೆ ಬಗೆಯಾಗಿರುತ್ತವೆ. ಜಾತಿ ಭಿನ್ನವಾದ ಮಾತ್ರಕ್ಕೆ ಅವರವರ ಮನಸ್ಥಿತಿಗಳು ಬದಲಾಗಲಾರವು ಎಂದಿದ್ದಾರೆ.

ಇದನ್ನು ಓದಿ: ಗುಂಡ್ಲುಪೇಟೆ ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣ ಖಂಡಿಸಿ ಪ್ರತಿಭಟನೆ

ಮಾಡುವ ಕಾಯಕಗಳು ಹೇಗೆ ಜಾತಿಯಾದವು ? ಎಂಬುದನ್ನು ಮನಂಬುಗುವಂತೆ ವಚನದಲ್ಲಿ ವಿವರಿಸಿದ್ದಾರೆ. ಯಾರೂ ಕಿವಿಯಲ್ಲಿ ಹುಟ್ಟಲು ಸಾಧ್ಯವೆ ಇಲ್ಲ. ಲಿಂಗಸ್ಥಲದ ಅರಿವು ಅಂದರೆ ಅದು ವಾಸ್ತವದ ಅರಿವು. ಸತ್ಯದ ಅರಿವು. ವಿಜ್ಞಾನದ ಅರಿವು ಎಂದರ್ಥ. ಯಾರು ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾನೊ ಆತನೆ ಶ್ರೇಷ್ಠ ಕುಲದವನು ಎಂಬ ವಾದ ಬಸವಣ್ಣನವರದು. ಕುಲಗಳು ಶ್ರೇಷ್ಠ ಕನಿಷ್ಠ ಎಂದು ವಿಂಗಡಿಸುವಿರಾದರೆ ಹಿಂದೆ ಇದ್ದ ಮನು ಮುನಿಗಳು ಯಾರಿದ್ದರು ? ಎಂಬ ಇತಿಹಾಸದ ಪುಟವನ್ನು ಹೆಕ್ಕಿ ನೋಡಿದರೆ ಸತ್ಯ ಕಾಣುತ್ತದೆ.

ವ್ಯಾಸ ಬೋವಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ
ಮಂಡೋದರಿ ಕಪ್ಪೆಯ ಮಗಳು, ಕುಲವನರಸದಿರಿಂ ಭೋ
ಕುಲದಿಂದ ಮುನ್ನೆನಾದಿರಿಂ ಭೋ !
ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮಚ್ಚಿಗ
ಕಶ್ಯಪ್ಪ ಕಮ್ಮಾರ, ಕೌಂಡಿನ್ಯನೆಂಬ ಖುಷಿ
ಮೂರು ಭುವನರಿಯದೆ ನಾವಿದ ಕಾಣಿ ಭೋ !
ನಮ್ಮ ಕೂಡಲ ಸಂಗನ ವಚನವಿಂತೆಂದುದು
ಶ್ವಪಚೋಪಿಯಾದಡೇನು , ಭಕ್ತನೆ ಕುಲಜಂ ಭೋ !

ರಾಮಾಯಣ ಮಹಾಕಾವ್ಯವನ್ನು ರಚಿಸಿ ಮಹಾಋಷಿ ಎನಿಸಿಕೊಂಡ ವ್ಯಾಸ ಬೋವಿತಿಯ ಮಗ. ಮಾರ್ಕಂಡೇಯ ಮಹರ್ಷಿ ಮಾತಂಗಿಯ ಮಗ. ಅಗಸ್ತ್ಯ ಮಹರ್ಷಿ ಕಬ್ಬಲಿಗ, ದುರ್ವಾಸ ಮುನಿ ಮಚ್ಚಿಗ, ಕೌಂಡಿನ್ಯ ಎಂಬ ಋಷಿ ನಾವಿದ. ಆದ್ದರಿಂದ ಯಾರೂ ಜಾತಿಯ ಮೂಲಕ ಶ್ರೇಷ್ಠ ಕನಿಷ್ಠರಾಗಲು ಸಾಧ್ಯವಿಲ್ಲ ಎಂಬುದು ಬಸವಣ್ಣನವರ ಖಚಿತವಾದ ನಿಲುವು. ಯಾರು ಕಾಯಕ ಜೀವಿಯಾಗಿರುತ್ತಾನೋ, ತನ್ನ ಪರಿಶ್ರಮದ ದುಡಿಮೆಯ ಮೂಲಕ ಬಂದ ಫಲದಲ್ಲಿ ಸತ್ಪಾತ್ರರಿಗೆ ದಾಸೋಹ ನಡೆಸುತ್ತಾನೋ ಆ ಭಕ್ತನೆ ಕುಲಜನು ಎಂಬುದು ಶರಣರ ಇಂಗಿತವಾಗಿದೆ.

ಅಂಬಿಗರಚೌಡಯ್ಯನೆಂಬ ಶರಣನಂತೂ ಜಾತಿಯನ್ನು ನೋಡಿ ವ್ಯವಹರಿಸುವವರ ಕಂಡರೆ ಕೆಂಡಾಮಂಡಲವಾಗುತ್ತಾನೆ.

ಜಾತಿ ಭ್ರಮೆ, ನೀತಿ ಭ್ರಮೆ ಎಂಬ ಕರ್ಮಂಗಳನು
ಘಾತಿಸಿ ಕಳೆಯಬಲ್ಲಡಾತ ಯೋಗಿ
ಯೋಗಿ ಅಂದರೆ ನಾಡು ಬಿಟ್ಟು ಕಾಡು ಸೇರುವವನಲ್ಲ. ಗಡ್ಡ ಬಿಟ್ಟು, ಹೆಂಡತಿ ಮಕ್ಕಳ ತೊರೆದು ಹೋಗುವಾತನಲ್ಲ. ಜಾತಿ ಭ್ರಮೆಂiÀiನ್ನು ಕಳೆಯುವವನೆ ಯೋಗಿ ಎಂದಿದ್ದಾರೆ. ಆನು ಹಾರುವನೆಂದರೆ ಕೂಡಲ ಸಂಗಮ ನಗುವನಯ್ಯಾ ಎನ್ನುತ್ತಲೆ ಬಸವಣ್ಣನವರು ತಮ್ಮ ಮೇಲಿರಿಮೆಯ ಭ್ರಮೆಯನ್ನು ಕಳಚಿಕೊಂಡು ಮಾದಾರ ಚೆನ್ನಯ್ಯನ ಮನೆಯ ಮಗ ನಾನು ಎಂದು ಹೇಳುವ ಮೂಲಕ ತಮ್ಮ ಮನಸ್ಸಿಗೆ ಅಂಟಿದ ಕೊಳೆಯನ್ನು ತೊಳಕೊಂಡರು. ಅಷ್ಟಕ್ಕೂ ಅವರಿಗೆ ಸಮಾಧಾನವಾಗಲಿಲ್ಲ. ಆಗ

ಚೆನ್ನಯ್ಯನ ಮನೆಯ ದಾಸಿನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇಬ್ಬರಿಗೂ ಹೊದಲು ಬೆರಣಿಗೆ ಹೋಗಿ
ಸಂಗವ ಮಾಡಿದರು ಇವರಿಬ್ಬರಿಗೆ ಹುಟ್ಟಿದ ಮಗ ನಾನು
ಕೂಡಲಸಂಗವದೇವ ಸಾಕ್ಷಿಯಾಗಿ

ಎನ್ನುವ ಮೂಲಕ ತಮ್ಮನ್ನು ಕೇವಲ ತಳವರ್ಗದ ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳಲಿಲ್ಲ. ಚೆನ್ನಯ್ಯ ಮತ್ತು ಕಕ್ಕಯ್ಯನೆಂದರೆ ಕೀಳು ಎಂದು ತಿಳಿದ ಆ ದಿನಗಳಲ್ಲಿ ಅವರ ಮನೆಯ ಆಳುಗಳು ಬೆರಣಿಯ ಆಯಲು ಹೋದಾಗ ಸಮಾಜದ ಒಪ್ಪಿಗೆಯೂ ಪಡೆಯದೆ ಸಂಗವ ಮಾಡಿದರು. ಅಂದರೆ ಅಕ್ಷರಶಃ ಅವರು ಹಾದಕ್ಕೆ ಒಳಗಾದಾಗ ಹುಟ್ಟಿದ ಕೂಸು ನಾನು ಎನ್ನುವ ಮೂಲಕ ತಮ್ಮೊಳಗಿನ ಜಾತಿಯ ತಿಮಿರವನ್ನು ಕಳೆದುಕೊಳ್ಳುತ್ತಾರೆ.

ಅಮ್ಮುಗೆಯ ದೇವಯ್ಯ ಎಂಬ ಶರಣ ಕೂಡ
ಕಕ್ಕಯ್ಯನ ಪ್ರಸಾದ ಕೊಂಡೆನ್ನ ಕುಲ ಸೂತಕ ಹೋಯಿತ್ತಯ್ಯಾ
ಚೆನ್ನಯ್ಯನ ಪ್ರಸಾದವ ಕೊಂಡೆನ್ನ ಛಲ ಸೂತಕ ಹೋಯಿತ್ತಯ್ಯಾ
ದಾಸಯ್ಯನ ಪ್ರಸಾದವ ಕೊಂಡೆನ್ನ ತನು ಸೂತಕ ಹೋಯಿತ್ತಯ್ಯಾ
ಚಂದಯ್ಯನ ಪ್ರಸಾದವ ಕೊಂಡೆನ್ನ ಮನ ಸೂತಕ ಹೋಯಿತ್ತಯ್ಯಾ

ಅನುಭಾವಿ ಶರಣರ, ಸಂತರ ಸಂಗದಿಂದ ಮಾತ್ರ ನಮ್ಮ ಮನದಲ್ಲಿಯ ಜಾತಿ ಭ್ರಮೆ ಹೋಗಲು ಸಾಧ್ಯವಿದೆ. ಇಲ್ಲದೆ ಹೋದರೆ ಈ ಜಾತಿ ಚಕ್ರವ್ಯೂಹದಲ್ಲಿ ಸಿಲುಕಿದ ಮನುಷ್ಯ ಹೊರಬರುವುದು ತೀರಾ ಅಪರೂಪ.
ಮಂಡೆ ಮಾಸಿದೊಡೆ ಮಹಾಮಜ್ಜನವ ಮಾಡುವುದು
ವಸ್ತ್ರ ಮಾಸಿದಡೆ ಮಡಿವಾಳರಿಕ್ಕುವುದು
ಮನದ ಮೈಲಿಗೆ ತೊಳೆಯಬೇಕಾದಡೆ
ಕೂಡಲಚೆನ್ನಸಂಗಯ್ಯನ ಶರಣರ ಅನುಭಾವ ಮಾಡುವುದು
ಎಂದು ಹೇಳಿದ್ದಾರೆ ಚೆನ್ನಬಸವಣ್ಣನವರು .

ತಳ ಸಮೂಹದಲ್ಲಿ ಹುಟ್ಟಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಆ ಸಮೂಹವನ್ನು ಗುಡಿಯೊಳಗೆ ಬಿಟ್ಟುಕೊಳ್ಳದೆ ಇರುವುದು. ಅವರಿಂದ ಸಣ್ಣ ತಪ್ಪು ಘಟಿಸಿದರೂ ನೆಲ ಮುಗಿಲು ಒಂದಾಗುವಂತೆ ಮಾಡಿ ಮಾನವೀಯತೆ ಮರೆತು ಕ್ರೌರ್ಯದಿಂದ ವರ್ತಿಸುವುದು ನಾಗರಿಕ ಲಕ್ಷಣವಲ್ಲ. ಪಶು ಪಕ್ಷಿಗಳು ಸಹ ಹಿಂಡು ಹಿಂಡಾಗಿ ಸೌಹಾರ್ದತೆಯಿಂದ ವಾಸಿಸುತ್ತಿರುವಾಗ ಮನುಷ್ಯ ಮಾತ್ರ ಜಾತಿಯ ಕಾರಣಕ್ಕಾಗಿ ಒಬ್ಬರು ಮತ್ತೊಬ್ಬರ ಮೇಲೆ ಏರಿ ಹೋಗಿ ಹಲ್ಲೆ ಮಾಡುವುದು ಯಾರೂ ಒಪ್ಪಲು ಸಾಧ್ಯವಿಲ್ಲ.

ಇಷ್ಟಕ್ಕೂ ಯಾವುದೆ ವ್ಯಕ್ತಿ ತಳ ಸಮುದಾಯದಲ್ಲಿ ಹುಟ್ಟಬೇಕೆಂದು ಮೊದಲೆ ಅಪ್ಲಿಕೇಷನ್ ಹಾಕಿಕೊಂಡಿಲ್ಲ. ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯ ವೀರನಪುರದಲ್ಲಿ ಇತ್ತೀಚೆಗೆ ನಡೆದ ದಲಿತ ದೌರ್ಜನ್ಯ ಘಟನೆ ಮನುಷ್ಯ ಕುಲ ತಲೆ ತಗ್ಗಿಸುವಂತೆ ಮಾಡಿದೆ. ಪ್ರಜ್ಞಾವಂತ ಮನುಷ್ಯ ಸಮಾಜ ಇದನ್ನು ಬಲವಾಗಿ ಖಂಡಿಸಬೇಕಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...