Homeಅಂಕಣಗಳುವಿಕ್ರಮ ಉಡುಪಿ ಕಡೆಗೆ ಜಾರಿದನಂತಲ್ಲಾ

ವಿಕ್ರಮ ಉಡುಪಿ ಕಡೆಗೆ ಜಾರಿದನಂತಲ್ಲಾ

- Advertisement -
- Advertisement -

| ಥೂತ್ತೇರಿ ಯಾಹೂ |

“ವಿಕ್ರಮ ಚಂದ್ರನ ಮೇಲೆ ಕಾಲೂರಿದ ಆ ಕ್ಷಣಕ್ಕೆ ಜಗತ್ತು ಸಾಕ್ಷಿಯಾಯ್ತು” ಪ್ರಜಾವಾಣಿಯಲ್ಲಿ ಈ ತಲೆಬರಹ ಓದಿದ ಜನಕ್ಕೆ ದಿಗ್ಭ್ರಮೆಯಾಯ್ತಂತಲ್ಲಾ. ರಾತ್ರಿಯೆಲ್ಲಾ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಚಂದ್ರನ ಮೇಲೆ ವಿಕ್ರಮ ಇಳಿಯುವ ದೃಶ್ಯಕ್ಕಾಗಿ ಕಾದಿದ್ದ ಜನರು, ಅದು ಉಡುಪಿ ಕಡೆ ವಾಲುತ್ತ ಕಣ್ಮರೆಯಾದ ದೃಶ್ಯದಿಂದ ದುಗುಡಗೊಂಡ ಜನ ನಿರಾಶೆಯಿಂದ ನಿದ್ರೆಗೆ ಜಾರಿದರೆ, ಈ ಪ್ರಜಾವಾಣಿಯವರಿಗೆ ಏನಾಯ್ತು ಎಂದು ಪ್ರಜೆಗಳು ಶಾನೆ ಶಾಕ್‍ಗೆ ಒಳಗಾದರಂತಲ್ಲಾ. ಬಹುಶಃ ಹೀಗಾಗಿರಬೇಕು, ಇಸ್ರೋ ಅಧ್ಯಕ್ಷ ಕೆ. ಶಿವನ್ ಅಸಾಮಾನ್ಯ ವಿಜ್ಞಾನಿಗಳನ್ನು ಒಟ್ಟುಗೂಡಿಸಿ ಬಹುನಿಷ್ಠೆಯಿಂದ ವಿಕ್ರಮನನ್ನು ತಯಾರಿಸಿದ್ದಾರೆ. ಆದರೂ ಒಂದು ಸಣ್ಣ ಅಳುಕಿಗೆ ತುತ್ತಾಗಿ ಉಡುಪಿ ಮಠದ ಮಾಧ್ವ ಜಗತ್ತಿನ ಗುರುವರ್ಯರ ಆಶೀರ್ವಾದ ಪಡೆದರೆ ಹೇಗೆ ಅನ್ನಿಸಿದೆ. ಇದಕ್ಕೆ ಅವರ ಟೀಮು ಶಿರಸಾವಹಿಸಿ ಒಪ್ಪಿದೆ. ಅದರಂತೆ ಉಡುಪಿ ದಾರಿ ಹಿಡಿದ ವಿಜ್ಞಾನಿಗಳು ಅಷ್ಟಮಠದ ಅಧಿಪತಿಯ ಆಶೀರ್ವಾದ ಪಡೆದು ಕೈ ಸಡಿಲಬಿಟ್ಟು ಭೋಜನ ಭಾರಿಸಿ ವಾಪಸಾದದು, ಮುಂದೆ ಪ್ರಧಾನಿ ಬರಲು ಒಪ್ಪಿದ್ದು, ಇದೆಲ್ಲಾ ಆದ ಮೇಲೆ ವಿಕ್ರಮ ಚಂದ್ರನ ಮೇಲಿಳಿಯದೆ ಇನ್ನೆಲ್ಲಿ ಇಳಿಯಲು ಸಾಧ್ಯ ಎಂದು ಪ್ರಜಾವಾಣಿ ಶಿಖಾಮಣಿಗಳು ಭಾವಿಸಿದ್ದೇ ಅನಾಹುತಕ್ಕೆ ಕಾರಣವಂತಲ್ಲಾ ಥೂತ್ತೇರಿ.

ವಿಕ್ರಮ ಸೌರವ್ಯೂಹ ಭೇದಿಸಿ ಚಂದ್ರನ ಸುತ್ತ ಗಿರಕಿ ಹೊಡೆದಿರಬೇಕು. ಆದ್ದರಿಂದ ಮುಂದಿನ ಕೆಲವೇ ಕ್ಷಣಗಳಲ್ಲಿ ಚಂದ್ರನ ಮೇಲೆ ವಿಕ್ರಮ ಕಾಲೂರಿ ನಿಲ್ಲುವುದು ಮೋದಿ ಮಹಾತ್ಮನಾಣೆ ನಿಜ ಎಂದುಕೊಂಡ ಸಿಬ್ಬಂದಿ ಆ ಕ್ಷಣಕ್ಕೆ ಜಗತ್ತು ಸಾಕ್ಷಿಯಾಯ್ತು ಎಂದು ತಲೆಬರಹಗಳನ್ನು ಕೊಟ್ಟು ಅವನ್ನ ಮಾತ್ರ ಪುನಃ ಪುನಃ ಓದಿಕೊಂಡು ಹೊರಟವಂತಲ್ಲಾ. ಆದರೇನು ವಿಕ್ರಮ ಚಂದ್ರನ ಮೇಲೆ ಕಾಲೂರುವುದು ಬಿಟ್ಟು ಅಷ್ಟಮಠಗಳ ದಿಕ್ಕಿಗೆ ಜಾರಿ ಕಣ್ಮರೆಯಾದಾಗ ವಿಕ್ರಮನ ವಿಜ್ಞಾನಿಗಳ ಕಣ್ಣಂಚಿನಲ್ಲಿ ನೀರಾಡಿತು. ಆಗ ಮಾರಣಹೋಮ ದುರಂತವನ್ನೂ ನಾಯಿಮರಿ ಸಾವಿನಂತೆ ಭಾವಿಸುವ ಮೋದಿಯವರು ಕ್ಯಾಮೆರಾಗಳ ಮುಂದೆ ಶಿವನ್ ಭುಜ ಸವರಿ ಸವರಿ ಕಾವೇರುವಂತೆ ಮಾಡಿ ಸಾಂತ್ವಾನಗೊಳಿಸಿದರಂತಲ್ಲಾ, ಥೂತ್ತೇರಿ.

ವಿಕ್ರಮ ಆ ಕ್ಷಣಕ್ಕೆ ಯಶಸ್ವಿಯಾಗಿ ಚಂದ್ರನ ಮೇಲಿಳಿದಿದ್ದರೆ ಏನಾಗುತ್ತಿತ್ತು ಎಂದರೆ, ಮಾತಿನ ಮಲ್ಲನ ವರಸೆ ಬದಲಾಗುತ್ತಿತ್ತು. ಆರ್ಥಿಕವಾಗಿ ದಿವಾಳಿ ಏಳುತ್ತಿರುವ ಭಾರತವನ್ನು ವಿಕ್ರಮನ ಸಾಧನೆಯಿಂದ ತುಂಬಿಕೊಳ್ಳುತ್ತಿದ್ದರು. ಅತ್ತ ವಿಜ್ಞಾನಿಗಳ ದಂಡು ಉಡುಪಿ ಕಡೆಗೆ ಬಂದು ಒಂದು ಪುಟಾಣಿ ಚಿನ್ನದ ವಿಕ್ರಮನನ್ನು ಪೇಜಾವರನ ಪದತಳದಲ್ಲಿಟ್ಟು ಎಲ್ಲ ತಮ್ಮ ಕೃಪೆ ಎನ್ನುತ್ತಿದ್ದರು. ಆಗ ಪೇಜಾವರನ ದಿಕ್ಕಿನಿಂದ ರೇಡಿಯೋ ಶಬ್ದದ ದನಿಯೊಂದು ಹೊರಬಿದ್ದು “ಎಲ್ಲ ಕೃಷ್ಣನ ಮಹಿಮೆ, ಗೋವರ್ಧನ ಗಿರಿಎತ್ತಿ ನಿಲ್ಲಿಸಿದ ಆತನ ಸಂಕಲ್ಪ ಶಕ್ತಿಯೇ ವಿಕ್ರಮನಲ್ಲಿ ಸೇರಿಕೊಂಡು ಚಂದ್ರನ ಮೇಲೆ ನೆಲೆಗೊಳ್ಳುವಂತೆ ಮಾಡಿತು. ವಿಜ್ಞಾನ ಮತ್ತು ಆಧ್ಯಾತ್ಮ ಜೊತೆಜೊತೆಯಾಗೇ ಹೋಗಬೇಕು. ಯಾವತ್ತೂ ಅವು ಒಂದನ್ನೊಂದು ಅಗಲುವಂತೆ ಮಾಡಬಾರದು” ಎಂದು ಬುದ್ದಿಜೀವಿಗಳ ಬಗ್ಗೆ ಕಟಕಿಯಾಡುತ್ತಿದ್ದರು. ಅದೆಲ್ಲಾ ಇರಲಿ ಕರ್ನಾಟಕದ ಸಂತ್ರಸ್ತರ ವಿಷಯದಲ್ಲಿ ಮೋದಿ ಬರುತ್ತಾರೆಂದು ತಮಟೆಯ ಜೊತೆಗೇ ಕೂಗಾಡಿದ್ದ ಬಿಜೆಪಿಗಳು ಮೋದಿ ಮಾಡಿದ ಕೆಲಸದಿಂದ ತಲೆ ತಗ್ಗಿಸಿಕೊಂಡು ಓಡಾಡುತ್ತಿವೆಯಂತಲ್ಲಾ, ಥೂತ್ತೇರಿ.

ಚಂದ್ರನ ಮೇಲೆ ಮುಖ ಮುಂದಾಗಿಯೇ ಬಿದ್ದು, ಓರೆಯಾಗಿ ನಿಂತಿರುವ ವಿಕ್ರಮ ಗೊರಗೊರ ಸದ್ದಿನೊಂದಿಗೆ ತಾನಿಲ್ಲಿರುವುದಾಗಿ ಕಳಿಸಿದವರಿಗೆ ಮಾಹಿತಿಕೊಟ್ಟ ಕೂಡಲೇ ಅದರ ಯೋಗಕ್ಷೇಮದ ವಿಚಾರಣೆಗೆ ಪರಿಶೀಲನಾ ಸಮಿತಿಯೊಂದು ನಿರ್ಮಾಣವಾಗುತ್ತಿರುವಾಗಲೇ, ಇತ್ತ ಕರ್ನಾಟಕದ ಪ್ರವಾಹ ಪೀಡಿತ ಸಂತ್ರಸ್ತರ ಶೆಡ್ಡುಗಳಲ್ಲಿನ ಜನರ ಕಣ್ಣುಗಳು ಮರಣದ ದಿಕ್ಕನ್ನ ದಿಟ್ಟಿಸುತ್ತಿವೆಯಂತಲ್ಲಾ. ಇವರ ಗೋಳು ಕೇಳಲು ನೋಡಲು ಇಷ್ಟಪಡದ ಬಿಜೆಪಿಗಳು ಅತ್ತ ತಲೆ ಹಾಕುವುದನ್ನೇ ಮರೆತು ಹೊಸದಾಗಿ ರಚನೆಗೊಂಡ ಸಂಘಟಿತ ಮಂತ್ರಿಗಳು ತಮಗೆ ಸೂಕ್ತವಾದ ಹೊಸ ಬಂಗಲೆಯೇ ಬೇಕು ಎಂದು ಹಟದಲ್ಲಿ ಹುಡುಕುತ್ತಿವೆಯಂತಲ್ಲಾ. ಜೊತೆಗೆ ಉಸ್ತುವಾರಿಗೆ ಸಿಗುವ ಜಿಲ್ಲೆಗಳ ಬಗ್ಗೆಯೂ ತಲೆಕೆಡಿಸಿಕೊಂಡಿವೆಯಂತಲ್ಲಾ. ಇಂತಹ ಸಮಯದಲ್ಲಿ ಅತ್ತ ಮೋದಿ ಮಹಾತ್ಮನೂ ಸಂತ್ರಸ್ತರ ವಿಷಯದಲ್ಲಿ ಮಾತನಾಡಲಿಲ್ಲ. ಕೇಂದ್ರದಿಂದ ಕಾಸೂ ಬರಲಿಲ್ಲ. ಸಂತ್ರಸ್ತರ ಶೆಡ್ಡಿನಿಂದ ಸಾವು ನೋವಿನ ಆಕ್ರಂದನ ಕೇಳುತ್ತಿದೆ. ಜೊತೆಗೆ ಸರಕಾರ ರಚನೆಯಾಗುವಂತೆ ಮಾಡಿದ ಹದಿನೇಳು ಜನ ಶಾಸಕರ ಗೋಳು ನೋಡಲಾಗುತ್ತಿಲ್ಲ. ಇಂತಹ ದುಃಖ ತುಂಬಿಕೊಂಡ ಎಡೂರಪ್ಪನನ್ನ ನೋಡಿದರೆ ಸದಾ ಆಸ್ಪತ್ರೆಕಡೆಗೆ ನಡೆಯುತ್ತಿರುವ ಶ್ರೀಮಂತ ರೋಗಿಯಂತೆ ಕಾಣುತ್ತಾರಂತಲ್ಲಾ ಥೂತ್ತೇರಿ.

ಕಬೀರ್ ಎಂಬ ಪಂಜುರ್ಲಿಯನ್ನ ಕರ್ನಾಟಕದ ಭಾರತೀಯ ಜನತಾಪಾರ್ಟಿ ಅಧ್ಯಕ್ಷನನ್ನಾಗಿ ಮಾಡಿದಾಗಲೇ ಇದರಿಂದ ಆಗುವ ಅನಾಹುತವನ್ನ ಜನ ಊಹಿಸಿದ್ದರು. ಅದರಂತೆ ಇದರ ಬಾಯಲ್ಲಿ ಬರುತ್ತಿರುವ ಮಾತುಗಳು ಬಿಜೆಪಿ ಎಂಬ ಪಾರ್ಟಿಯ ಅಧ್ಯಕ್ಷನ ಬಾಯಿಂದ ಹೊರಡುವ ತಕ್ಕ ಮಾತುಗಳಂತಿವೆಯಂತಲ್ಲಾ. ತಮ್ಮ ಸ್ಥಾನಕ್ಕೆ ರಾಜಿನಾಮೆಯಿತ್ತ ಸೆಂಥಿಲ್ ಎಂಬ ದಕ್ಷ ಅಧಿಕಾರಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ” ಎಂದು ರಾಜೀನಾಮೆ ಕೊಟ್ಟರೆ, ಹಾಗಾದರೆ ನೀನು ಪಾಕಿಸ್ತಾನಕ್ಕೆ ಹೋಗು ಎನ್ನುವ ಬಿಜೆಪಿಗಳ ತಲೆಯಲ್ಲಿ ಏನಿದೆ ಎಂಬುದು ಎಲ್ಲರಿಗೂ ಮನವರಿಕೆಯಾಗುತ್ತಿದೆಯಲ್ಲಾ. ಅದೇನದರಾಗಲಿ ಸುಸಂಸ್ಕøತರ ನಾಡಾದ ಕರ್ನಾಟಕದಲ್ಲಿ ದಕ್ಷ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸದಂತಾಗಿದೆ. ಈ ಹಿಂದೆ ಮುದುಕರ ಶೆಟ್ಟರು ನೋವು ನುಂಗಿಕೊಂಡೇ ನಿಧನರಾದರು. ಅಣ್ಣಾಮಲೈ ಯಾರನ್ನ ದೂರದೆ ಹೊರಟುಹೋದರು. ಈಗ ಸಂಧಿಲ್ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ಕಾರಣ ನೀಡಿ ಹೊರಟು ಹೋಗುತ್ತಿದ್ದಾರೆ. ಇದು ದಕ್ಷಿಣ ಕನ್ನಡ ಏನಾಗಿರಬಹುದು ಎಂಬ ಸೂಚನೆಯಂತಿದೆ. ಕರ್ನಾಟಕದ ಜನ ಈ ನಾಡು ದ.ಕ ಆಗದಂತೆ ನೋಡಿಕೊಳ್ಳುವ ತುರ್ತು ಈಗ ಬಂದಿದೆಯಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೇಪಾಳದಲ್ಲಿ ದಿಢೀರ್ ಪ್ರವಾಹ : 105 ಭಾರತೀಯರು ಸೇರಿದಂತೆ 384 ಮಂದಿ ನಾಪತ್ತೆ

ನೇಪಾಳ ಪ್ರವಾಸೋದ್ಯಮ ಮಂಡಳಿಯ ಮಾಹಿತಿ ಪ್ರಕಾರ, ಬುಧವಾರ (ಆ.26) ಬೆಳಿಗ್ಗೆ ನೇಪಾಳದ ರಸುವಾ ಜಿಲ್ಲೆಯ ಭೋಟೆ ಕೋಶಿ ನದಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ನಂತರ 105 ಭಾರತೀಯ ಪ್ರಜೆಗಳು ಸೇರಿದಂತೆ ಕನಿಷ್ಠ 384...

ರಾಜ್ಯದಲ್ಲಿ 102 ತಾಲೂಕುಗಳಲ್ಲಿ ಬರ: ಡಿಸಿಎಂ ಪರಮೇಶ್ವರ್

ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದ್ದು, 102 ತಾಲೂಕುಗಳ ಗ್ರೌಂಡ್ ಟ್ರೂಥಿಂಗ್ ವರದಿ ಬಂದಿದೆ. ಕೇಂದ್ರ ಸರ್ಕಾರದ ಮಾನದಂಡಗಳನ್ವಯ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಧಿಕೃತವಾಗಿ ಬರ ಘೋಷಿಸಲಾಗುವುದು ಹಾಗೂ ಪ್ರತಿ ವಾರವೂ...

ಪ. ಬಂಗಾಳ SIR : ನ್ಯಾಯಮಂಡಳಿಗಳಿಂದ ಇದುವರೆಗೆ ಕೇವಲ 2.17% ಮೇಲ್ಮನವಿಗಳ ಇತ್ಯರ್ಥ; ಇನ್ನು 37 ಲಕ್ಷಕ್ಕೂ ಹೆಚ್ಚು ಬಾಕಿ!

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಭಗವಾಂಗೋಲಾದ ನಿವಾಸಿಯಾದ ಮೊಹಮ್ಮದ್ ದುವಾಲ್ ಅಲಿ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ಕರ್ತವ್ಯದ ಅವಧಿಯಲ್ಲಿ ಗುಂಡೇಟಿಗೆ ಒಳಗಾಗಿದ್ದರು. ಪ್ರಾಣಾಪಾಯದಿಂದ ಬದುಕುಳಿದ ಅವರು ನಂತರ ಭಾರತೀಯ ರೈಲ್ವೆಯಲ್ಲಿ ಕೆಲಸ...

ಬಂಡಾಯ ಸಂಸದರಿಗೆ ಸಂಕಷ್ಟ: 7 ದಿನಗಳಲ್ಲಿ ಉತ್ತರಿಸಲು ಲೋಕಸಭೆ ಸಚಿವಾಲಯ ತಾಕೀತು

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ 20 ಬಂಡಾಯ ಸಂಸದರಿಗೆ ಲೋಕಸಭಾ ಸಚಿವಾಲಯವು ನೋಟಿಸ್ ಜಾರಿ ಮಾಡಿದ್ದು, ಏಳು ದಿನಗಳ ಒಳಗಾಗಿ ಸೂಕ್ತ ಉತ್ತರ ನೀಡುವಂತೆ ಸೂಚಿಸಿದೆ. ಪಕ್ಷಾಂತರ ಕಾಯ್ದೆಯಡಿ ಸಂಸದರ ಅನರ್ಹತೆ ಪ್ರಕ್ರಿಯೆಗಳನ್ನು...

ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ನ್ಯೂಯಾರ್ಕ್ ಮೇಯರ್ ವಿರೋಧ: ಸಂಘದ ‘ಹೊರಗಿಡುವ ದೃಷ್ಟಿಕೋನ’ ಖಂಡಿಸಿದ ಮಮ್ದಾನಿ

ಅಮೆರಿಕದ ನ್ಯೂಯಾರ್ಕ್ ನಗರದ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿರುವ ಬೃಹತ್ ಭಾರತೀಯ ಮೂಲದವರ ಸಮಾವೇಶವು...

ಕರ್ನಾಟಕದಲ್ಲಿ ವಂದೇ ಮಾತರಂನ ಎರಡು ಚರಣ ಮಾತ್ರ ಬಳಕೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಕರ್ನಾಟಕದಲ್ಲಿ ಇನ್ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಇಂಡಿಯಾ ಟುಡೇ ರೌಂಡ್‌ಟೇಬಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ...

ಬೀದಿ ಬದಿ ವ್ಯಾಪಾರಿಗಳ ತೆರವು ಅಕ್ರಮ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ

ಮಂಗಳೂರಿನ ಟೌನ್ ಹಾಲ್ ಸಮೀಪ ನಡೆಯುವ ಸಂಡೇ ಬಜಾರ್‌ನಲ್ಲಿ ಪಾದಚಾರಿ ಮಾರ್ಗದ ಬಳಿ ಇದ್ದ ಬೀದಿ ವ್ಯಾಪಾರಿಗಳನ್ನು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಲು ಮುಂದಾಗಿದ್ದರು. ಇದನ್ನು ದಕ್ಷಿಣ ಕನ್ನಡ ಜಿಲ್ಲಾ...

ತೆಲಂಗಾಂಣ | ಹೈದರಾಬಾದ್‌-ವಿಜಯವಾಡ ಹೆದ್ದಾರಿಯಲ್ಲಿ ಭೀಕರ ಅಪಘಾತ: 6 ಮಂದಿ ಸಾವು; ಹಲವರಿಗೆ ಗಾಯ

ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯಲ್ಲಿ ಬುಧವಾರ (ಆ.26) ಮುಂಜಾನೆ ಖಾಸಗಿ ಎಲೆಕ್ಟ್ರಿಕ್ ಬಸ್‌ವೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 12 ಜನರು ಗಾಯಗೊಂಡಿದ್ದಾರೆ...

ಬಿಡದಿ ಟೌನ್‌ಶಿಪ್: ಸರ್ಕಾರಕ್ಕೆ ನಾಲ್ಕು ಪ್ರಮುಖ ಹಕ್ಕೊತ್ತಾಯ, ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ.

ಬಿಡದಿ ಸ್ಮಾರ್ಟ್ ಸಿಟಿ ಅಥವಾ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಬಿಡದಿ ರೈತರು ಹಾಗೂ ಸಂಯುಕ್ತ ಹೋರಾಟದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಮತ್ತು ವಿಧಾನಸೌಧ ಚಲೋ ಹೋರಾಟ...

ತಮಿಳುನಾಡು| ಮರ್ಯಾದೆಗೇಡು ಹತ್ಯೆ ಶಂಕೆ; 25 ವರ್ಷದ ದಲಿತ ಯುವಕನ ಭೀಕರ ಕೊಲೆ

ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ 23 ವರ್ಷದ ದಲಿತ ಯುವಕನೊಬ್ಬನನ್ನು ಕೊಚ್ಚಿ ಕೊಲೆ ಮಾಡಲಾಗಿದ್ದು, ಮರ್ಯಾದೆಗೇಡು ಕೊಲೆಯ ಶಂಕೆ ವ್ಯಕ್ತವಾಗಿದೆ. ಆಗಸ್ಟ್ 16 ರಂದು ರಾತ್ರಿ ಚೆಂಗಲ್ಪಟ್ಟುವಿನ ಕೇಳಂಬಾಕ್ಕಂ ನಿವಾಸಿ ಪ್ರವೀಣ್ ಅವರ ಮೇಲೆ ದಾಳಿಕೋರರಾದ...