Homeಮುಖಪುಟಪ್ರಜಾಪ್ರಭುತ್ವದ ಇತಿಹಾಸದಲ್ಲಿ ಉಳಿದುಕೊಳ್ಳುವ ಹೆಸರು ರವೀಶ್ ಕುಮಾರ್..

ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಉಳಿದುಕೊಳ್ಳುವ ಹೆಸರು ರವೀಶ್ ಕುಮಾರ್..

- Advertisement -
- Advertisement -

ಗೌರಿ ಸ್ಮಾರಕ ಟ್ರಸ್ಟ್ ನೀಡುತ್ತಿರುವ ‘ಗೌರಿ ಲಂಕೇಶ್ ಸ್ಮಾರಕ ರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿ’ಗೆ ಈ ವರ್ಷದ ದೇಶದ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಅವರು ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ 22ರಂದು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜ್ ಆಡಿಟೋರಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅದನ್ನು ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಟ್ರಸ್ಟ್‍ನ ಗೌರವ ಕಾರ್ಯದರ್ಶಿಗಳೂ, ದೇಶದ ಬಹುದೊಡ್ಡ ಭಾಷಾ ವಿದ್ವಾಂಸರೂ ಆದ ಗಣೇಶ್ ಎನ್. ದೇವಿಯವರು ಈ ಲೇಖನ ಬರೆದಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ರವೀಶ್‍ಕುಮಾರ್ ದೇಶದ ಸಾಕ್ಷಿಪ್ರಜ್ಞೆಯಾಗಿ ಮೂಡಿದ್ದಾರೆ. ಸುಳ್ಳುಸುದ್ದಿಗಳನ್ನು ಎಲ್ಲೆಡೆ ಹಬ್ಬುತ್ತಾ, ನಿಜವಾದ ಮಾಧ್ಯಮಕ್ಕಿರುವ ಅವಕಾಶ ಕ್ಷೀಣಿಸುತ್ತಿರುವ ಕುರಿತು ಆತಂಕ ಹೊತ್ತಿರುವ ಲಕ್ಷಾಂತರ ಜನರು ಪ್ರತಿನಿತ್ಯ ಸಂಜೆ ಎನ್‍ಡಿಟಿವಿಯ ಮುಂದೆ ಕೂರುವಾಗ ಅವರ ನಿರೀಕ್ಷೆಯನ್ನು ಅವರು ಹುಸಿ ಮಾಡುವುದಿಲ್ಲ. ಅವರ ಮನದಲ್ಲಿನ ಆತಂಕ ಮತ್ತು ಚಿಂತನೆಗಳು ರವೀಶ್‍ರ ಮಾತಿನಲ್ಲಿ ಪ್ರತಿಬಿಂಬಿತವಾಗುತ್ತಿರುತ್ತವೆ. ಜಗತ್ತಿನ ಎಲ್ಲಾ ಖಂಡಗಳಲ್ಲೂ ಅವರಿಗೆ ವೀಕ್ಷಕರಿದ್ದಾರೆ. ಹಿಂದಿ ಬಲ್ಲ ಜನರು ಎಲ್ಲೆಲ್ಲಿದ್ದಾರೋ, ಅಲ್ಲೆಲ್ಲಾ ರವೀಶ್‍ಗೆ ಅಭಿಮಾನಿಗಳಿದ್ದಾರೆ. ಅವರು ಆತನ ನ್ಯೂಸ್‍ಶೋಗಳನ್ನು ನೋಡುತ್ತಾರೆ, ಅವರು ಬರೆದ ಬ್ಲಾಗ್‍ಗಳಿಗೆ ಎಡತಾಕುತ್ತಾರೆ, ಯೂಟ್ಯೂಬ್‍ನಿಂದ ಅವರ ಟಿವಿಶೋಗಳನ್ನು ಸಂಗ್ರಹಿಸಿ ನೋಡುತ್ತಾರೆ ಮತ್ತು ಅವರುಗಳ ಸ್ನೇಹಿತರ ಮಧ್ಯೆ ಅವೆಲ್ಲವನ್ನೂ ಹಂಚಿಕೊಳ್ಳುತ್ತಾರೆ. ಈ ರೀತಿಯಾಗಿ ರವೀಶ್ ಭಾರತದಲ್ಲಿ ಪ್ರತಿನಿತ್ಯದ ಸುದ್ದಿಯಾಗಿಬಿಟ್ಟಿದ್ದಾರೆ.

ಅವರ ಈ ಮಹತ್ವದ ಕೆಲಸವೇ ಅವರಿಗೆ ಹಲವಾರು ಗಣ್ಯಮಾನ್ಯ ಪ್ರಶಸ್ತಿಗಳನ್ನು ತಂದಿದೆ. ತೀರಾ ಇತ್ತೀಚಿನದ್ದೆಂದರೆ ಫಿಲಿಪೈನ್ಸ್ ನಲ್ಲಿನ ಮ್ಯಾಗಸೆಸೆ ಪ್ರತಿಷ್ಠಾನವು ನೀಡುವ ರಾಮನ್ ಮ್ಯಾಗಸೆಸೆ ಪ್ರಶಸ್ತಿ. 2016ರಲ್ಲಿ ಮುಂಬೈ ಪ್ರೆಸ್‍ಕ್ಲಬ್ ಅವರನ್ನು ಅತ್ಯುತ್ತಮ ಪತ್ರಕರ್ತರೆಂದು ಕರೆದು ಸನ್ಮಾನಿಸಿತು. 2013 ಮತ್ತು 2017ರಲ್ಲಿ ಪತ್ರಿಕೋದ್ಯಮದ ವಿಶೇಷ ಸಾಧನೆಗಾಗಿ ರಾಮನಾಥ್ ಗೋಯೆಂಕಾ ಪ್ರಶಸ್ತಿಯು ಲಭಿಸಿತು. ಅದೇ ವರ್ಷ – 2017- ಕುಲದೀಪ್ ನಯರ್ ಪ್ರತಿಷ್ಠಾನದ ಪತ್ರಿಕೋದ್ಯಮದ ಪ್ರಶಸ್ತಿಯನ್ನೂ ರವೀಶ್ ಸ್ವೀಕರಿಸಿದರು. ಇನ್ನೂ ಅದೆಷ್ಟೋ ಅಂತಹ ಪ್ರಶಸ್ತಿಗಳ ಸುರಿಮಳೆಯೇ ಅವರ ಮೇಲೆ ಸುರಿದಿದೆ. ಗೌರಿ ಸ್ಮಾರಕ ಟ್ರಸ್ಟ್ ಈ ವರ್ಷದಿಂದ ನೀಡಲುದ್ದೇಶಿಸಿರುವ ಗೌರಿ ಸ್ಮಾರಕ ಪ್ರಶಸ್ತಿಗೆ ಅರ್ಹವಾದ ವಿಶೇಷ ವ್ಯಕ್ತಿಯನ್ನು ಆರಿಸಲು ನಿಯೋಜಿತವಾದ ಸಮಿತಿಯು ಸರ್ವಾನುಮತದಿಂದ ಆರಿಸಿದ್ದು ಅವರನ್ನೇ. ತನಗೆ ಉದ್ಯೋಗ ಕೊಟ್ಟಿರುವ ಎನ್‍ಡಿಟಿವಿಯ ಸ್ಥಾಪಕ ಪ್ರಣಯ್‍ರಾಯ್‍ಗಿಂತ ಭಿನ್ನವಾಗಿ ಸಂಪೂರ್ಣವಾಗಿ ಭಾರತದಲ್ಲೇ ಶಿಕ್ಷಣ ಪಡೆದುಕೊಂಡು, ಇಂಗ್ಲಿಷಿನಲ್ಲಲ್ಲದೇ ಹಿಂದಿ ಪತ್ರಿಕೋದ್ಯಮದಲ್ಲಿರುವ ಶುದ್ಧ ಭೋಜಪುರಿ ಹಿನ್ನೆಲೆಯಿಂದ ಬಂದ, 43 ವರ್ಷಗಳ ಈ ಯುವಕನಲ್ಲಿ ಇಡೀ ದೇಶದ ಗಮನ ಸೆಳೆಯುವಂಥಾದ್ದು ಏನಿದೆ?

ರವೀಶ್ ಕಿರುಚಾಡುವ ಟಿವಿ ಆ್ಯಂಕರ್ ಅಲ್ಲ. ಆತ ಟಿವಿ ಚರ್ಚೆಯಲ್ಲಿ ನಿರತರಾಗಿರುವ ವ್ಯಕ್ತಿಗಳೊಂದಿಗೆ ಕೂಗಾಡಿದ್ದನ್ನು ಯಾರೂ ನೋಡಿಲ್ಲ. ಭಾರತದಲ್ಲಿ ಹೆಸರುವಾಸಿಯಾದ ಪತ್ರಕರ್ತರಲ್ಲಿ ಈತನೇ ಎಲ್ಲರಿಗಿಂತ ಹೆಚ್ಚು ತಿಳಿವಳಿಕೆಯಿರುವ ವ್ಯಕ್ತಿ ಎಂದೇನಲ್ಲ. ಇಂಡಿಯನ್ ಎಕ್ಸ್‍ಪ್ರೆಸ್ ದಿನಗಳ ಅರುಣ್ ಶೌರಿಯಂತೆ ಅಕ್ಯಾಡೆಮಿಕ್ ಸಾಧನೆಗಳ ಗರಿ ಹೊಂದಿದ ಎಷ್ಟೋ ಜನರಿದ್ದಾರೆ. ರವೀಶ್‍ಗಿರುವ ಸಾಮಥ್ರ್ಯವೆಂದರೆ, ಅವರು ಸಂವಾದಿಸಬಯಸುವವರ ಮಾತುಗಳನ್ನು ಗಮನ ಕೊಟ್ಟು ಕೇಳುತ್ತಾರೆ. ಒಂದು ವಿಚಿತ್ರ ಬಗೆಯ ಸಿನಿಕತನವನ್ನು ಹಿಂದಕ್ಕೆ ತಳ್ಳಿ, ತನ್ನದೇ ಸ್ವತಂತ್ರ ಆಲೋಚನೆಗಳನ್ನು ಹೊರಹೊಮ್ಮಿಸುತ್ತಾರೆ. ತನ್ನೊಂದಿಗೆ ಚರ್ಚೆಗೆ ಕೂತಿರುವವರ ಅಹಂ ಅನ್ನು ಉಬ್ಬಿಸುವ ಅಥವಾ ಅದನ್ನು ಹೀಗಳೆಯಲು ತನ್ನ ಸ್ಥಾನವನ್ನು ಅವರೆಂದಿಗೂ ಬಳಸುವುದಿಲ್ಲ. ಆತ ನಡೆಸಿಕೊಡುವ ಚರ್ಚಾಗೋಷ್ಠಿಗಳಲ್ಲಿ ಆತ ಏಕಕಾಲದಲ್ಲಿ ಜಾಗೃತನಾಗಿಯೂ, ಅಂಟಿಕೊಳ್ಳದಂತೆಯೂ ಇರುತ್ತಾರೆ ಮತ್ತು ಸಂವೇದನಾಶೀಲರಾಗಿಯೂ, ಅನುಮಾನವಿರುವ ವ್ಯಕ್ತಿಯಾಗಿಯೂ ಇರುತ್ತಾರೆ.

ಅವರಾಡುವ ಮಾತುಗಳ ಮಧ್ಯೆ ಈಗ ತನ್ನದೇ ವಿಶಿಷ್ಟ ಬ್ರಾಂಡ್ ಆಗಿಬಿಟ್ಟಿರುವ ಮುಗುಳ್ನಗೆಯನ್ನು ಹರಿಸುತ್ತಾರೆ. ಅದು ಭಾರತದ ಮಾಧ್ಯಮವು ಇಳಿದಿರುವ ಪಾತಾಳದ ಕುರಿತು ಅರಿವಿರುವ, ಅದು ಗದ್ದಲದಲ್ಲಿ ಮುಳುಗಿ, ಸತ್ವಹೀನ ಭಂಗಿಯನ್ನು ಪ್ರದರ್ಶಿಸುತ್ತಿರುವ ಅದರ ಸ್ಥಿತಿಯ ಬಗ್ಗೆ ವಿಷಾದ ಸೂಚಿಸುವ ಮುಗುಳ್ನಗೆ. ಅದು ಅಪಹಾಸ್ಯ, ಹತಾಶೆ, ವ್ಯಂಗ್ಯ ಮತ್ತು ತನ್ನ ಚಿಂತನೆಯ ಸ್ವಾತಂತ್ರ್ಯದ ಕುರಿತ ವಿಶ್ವಾಸ ಬೆರೆತ ಮುಗುಳ್ನಗೆ. ಅದು ‘ನಿಮ್ಮ ಮಟ್ಟದ ಕುರಿತು ನನಗೆ ಗೊತ್ತಿದೆ, ಆದರೆ ನೀವು ತಪ್ಪು ಎಂಬ ಬಗ್ಗೆ ನನಗೆ ಖಚಿತವಿದೆ’ ಎಂದು ಹೇಳುವಂತೆ ತೋರುತ್ತದೆ.

ರವೀಶ್ ತನ್ನ ಸ್ಟುಡಿಯೋಗೆ ಸಂಪೂರ್ಣ ತಯಾರಿಯೊಂದಿಗೆ ಬರುತ್ತಾರೆ. ಅವರು ಸಾಕಷ್ಟು ಅಧ್ಯಯನಶೀಲರು ಮತ್ತು ಏನನ್ನೇ ಓದಿದರೂ, ಅದನ್ನು ಎಚ್ಚರಿಕೆಯಿಂದ ಓದುವಂತೆ ಕಾಣುತ್ತದೆ. ಒಮ್ಮೆ ಅವರು ಭಾರತದ ಭಾಷಾ ವೈವಿಧ್ಯದ ಕುರಿತ ಚರ್ಚೆಗೆ ಅವರ ‘ಪ್ರೈಮ್‍ಟೈಂ’ ಷೋಗೆ ಕರೆದಿದ್ದರು. ಆ ದಿನ ಬೆಳಿಗ್ಗೆ ದೆಹಲಿಯ ಸಭಾಂಗಣವೊಂದರಲ್ಲಿ ನನ್ನ ಕೆಲವು ಪುಸ್ತಕಗಳು ಬಿಡುಗಡೆಯಾಗಲಿದ್ದವು. ಅವರು ಆ ಕಾರ್ಯಕ್ರಮದುದ್ದಕ್ಕೂ ಇದ್ದುದನ್ನು ನಾನು ಗಮನಿಸಿದ್ದೆ. ಕೊನೆಗೆ ಅವರು ಸದ್ದಿಲ್ಲದೇ ಅಲ್ಲಿಂದ ನಿರ್ಗಮಿಸುವಾಗ ಸ್ನೇಹಿತರೊಬ್ಬರ ಹತ್ತಿರ ನಂಬರ್ ಕೊಟ್ಟು ಕರೆ ಮಾಡಲು ತಿಳಿಸಿದ್ದರು. ನನ್ನ ಪುಸ್ತಕಗಳ ಬಿಡುಗಡೆ ಮುಗಿದನಂತರ ನಾನು ಕರೆ ಮಾಡಿದೆ. ಅವರು ಚರ್ಚೆಯ ರೆಕಾರ್ಡಿಂಗ್‍ಗೆ ಎನ್‍ಡಿಟಿವಿ ಸ್ಟುಡಿಯೋಗೆ ಬರಲು ಕೇಳಿದರು. ಅಂದು ಬೆಳಿಗ್ಗೆ ಅವರು ಕೇಳಿದ್ದ ಉಪನ್ಯಾಸಗಳ ಆಧಾರದ ಮೇಲೆ ಪ್ರಶ್ನೆಗಳಿರುತ್ತವೆ ಎಂದು ನಾನು ತಿಳಿದೆ. ಅಲ್ಲಿಗೆ ನಾನು ಹೋದಾಗ, ಅವರ ಕೈಯ್ಯಲ್ಲಿ ನನ್ನ ಎರಡು ಪುಸ್ತಕಗಳಿದ್ದುದನ್ನು ನೋಡಿ ಆಶ್ಚರ್ಯವಾಯಿತು. ಅಂದು ನಡೆದ ಚರ್ಚೆಯಲ್ಲಿ ಆತ ನನ್ನೆರಡೂ ಪುಸ್ತಕಗಳನ್ನು ಬಹಳ ಆಳವಾಗಿ ಅಧ್ಯಯನ ಮಾಡಿದ್ದುದು ಸ್ಪಷ್ಟವಾಯಿತು. ಅದು ಮೇಲುಮೇಲಿನ ಓದಲ್ಲ. ಅವುಗಳನ್ನು ಕನಿಷ್ಠ ಒಂದು ವಾರ ಕಾಲ ಆತ ಹಚ್ಚಿಕೊಂಡಿರಬೇಕು. ಅದು ನನಗೆ ಬಹಳ ಅಸಾಮಾನ್ಯವೆಂದು ತೋರಿತು. ಹಲವು ಪತ್ರಕರ್ತರು ನನ್ನನ್ನು ಸಂದರ್ಶಿಸಿದ್ದಾರೆ. ಅವರಲ್ಲಿ ಕೆಲವರು ಬಹಳ ಒಳ್ಳೆಯ ತಯಾರಿ ಮಾಡಿಕೊಂಡೇ ಬರುತ್ತಿದ್ದರು. ರವೀಶ್ ಅವರೆಲ್ಲರಲ್ಲಿ ಅತ್ಯುತ್ತಮವಾದವರು ಎಂಬುದರಲ್ಲಿ ಸಂದೇಹವೇ ಇಲ್ಲ.

ಆದರೆ, ಆತನ ಅಂದ-ಚೆಂದ, ಫೋಟೋಜೆನಿಕ್ ಮುಖ, ಮುಗುಳ್ನಗೆ, ಬೌದ್ಧಿಕ ಸಾಮಥ್ರ್ಯ ಅಥವಾ ಪ್ರಶ್ನೆ ಕೇಳುವ ರೀತಿ – ಇವುಗಳು ಇಂದು ಆತ ಏನಾಗಿದ್ದಾರೋ ಅದಕ್ಕೆ ಕಾರಣವಲ್ಲ. ಇವೆಲ್ಲದರೊಂದಿಗೆ, ಆತನಲ್ಲಿ ರಾಜಕೀಯ ಶಕ್ತಿಗಳು ಮತ್ತು ಇಂದು ಆಳುತ್ತಿರುವವರು ಸ್ವಾತಂತ್ರ್ಯವನ್ನು ಅಣಕ ಮಾಡುತ್ತಿದ್ದಾರೆ ಎಂದು ಹೇಳುವ ಧೈರ್ಯವಿದೆ. ಆತನ ಮೇಲೆ ಬೆದರಿಕೆ ಹಾಗೂ ಲೇವಡಿಯ ಮಳೆಯೇ ಪ್ರತಿದಿನ ಸುರಿಯುತ್ತಿದ್ದರೂ, ಒಂದೇ ಒಂದು ಹನಿ ಹೆದರಿಕೆಯೂ ಇಲ್ಲದಂತೆ ತನ್ನ ಗುರಿಸಾಧನೆಯ ಕಡೆಗೆ ನಡೆದಿದ್ದಾರೆ.

ಬಹುತೇಕ ಟಿವಿ ಆ್ಯಂಕರ್‍ಗಳು ವೀಕ್ಷಕರನ್ನು (ಟಿಆರ್‍ಪಿ) ಹೆಚ್ಚಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯಲು ಸಿದ್ಧರಾಗಿರುವಾಗ, ರವೀಶ್ ಸ್ಪಷ್ಟ ಮಾತುಗಳಲ್ಲಿ ಟಿವಿಯನ್ನು ಆಫ್ ಮಾಡಿ ಹೊರಗೆ ಹೋಗಿ ಎಂದು ವೀಕ್ಷಕರಿಗೆ ಹೇಳಬಲ್ಲರು. ಟಿವಿ ಸ್ಕ್ರೀನ್‍ಅನ್ನು ಸಂಪೂರ್ಣ ಕಪ್ಪಾಗಿಸಿ, ಇದು ಸತ್ಯವನ್ನು ಹೇಳುವ ಮಾಧ್ಯಮವಾಗಿ ಉಳಿದಿಲ್ಲ ಎಂದು ಹೇಳುವ ಎದೆಗಾರಿಕೆ ಆತನಿಗಿದೆ. ಇಂದು ಆ ವೃತ್ತಿಯಲ್ಲಿರುವ ಬಹುತೇಕರು ಮಾಧ್ಯಮಲೋಕವು ಇಳಿದಿರುವ ಸ್ಥಿತಿಯಿಂದ ಅದನ್ನು ಮೇಲೆತ್ತಲು ಸಾಧ್ಯವಿಲ್ಲವೆಂದು ಒಪ್ಪಿಕೊಂಡುಬಿಟ್ಟಿದ್ದಾರೆ. ಅಂತಹ ಹೊತ್ತಿನಲ್ಲಿ ತನ್ನಂಥವರು ಬಹಳ ಕಡಿಮೆಯಿದ್ದರೂ, ಆತ ಗಟ್ಟಿಯಾಗಿ ನಿಂತಿದ್ದಾನೆ ಮತ್ತು ಸುಳ್ಳು ಸುದ್ದಿಗಳು, ಸುಳ್ಳುಗಳು, ಬೆದರಿಕೆಗಳು, ಗುಂಪು ಹಿಂಸೆಯ ವಿರುದ್ಧ ಸಮರವನ್ನೇ ಸಾರಿದ್ದಾನೆ ಮತ್ತು ಸತ್ಯವನ್ನಲ್ಲದೇ ಬೇರೇನನ್ನೂ ಹೇಳುವುದಿಲ್ಲವೆಂಬ ದೃಢ ಸಂಕಲ್ಪ ಮಾಡಿದ್ದಾನೆ. ಆ ದೃಢ ಸಂಕಲ್ಪ, ಆ ಧೈರ್ಯ ಮತ್ತು ಪ್ರಾಮಾಣಿಕವಾದ ಆ ಜವಾಬ್ದಾರಿಯುತ ನಿಲುವು, ಆತನನ್ನು ನಮ್ಮ ಕಾಲದ ಒಬ್ಬ ಅತಿ ವಿಶಿಷ್ಟ ವ್ಯಕ್ತಿಯನ್ನಾಗಿಸಿದೆ. ಇಂದು ದೇಶವನ್ನಾಳುತ್ತಿರುವವರು ಮುಂದೊಂದು ದಿನ ಇತಿಹಾಸದ ಮರೆತುಹೋದ ಪುಟಗಳಲ್ಲಿ ಸೇರಿಹೋಗುತ್ತಾರೆ. ಆದರೆ ರವೀಶ್ ಪ್ರಜಾತಂತ್ರವು ಅಪಾಯದಲ್ಲಿದ್ದ ಕಾಲದಲ್ಲಿ ನಾಗರಿಕರ ಘನತೆ ಮತ್ತು ಸ್ವಾತಂತ್ರ್ಯದ ಹಕ್ಕುಗಳ ಕುರಿತಾಗಿ ರಾಜಿರಹಿತ ಬದ್ಧತೆಯನ್ನು ತೋರಿದ ಸ್ಫೂರ್ತಿದಾಯದ ಉದಾಹರಣೆಯಾಗಿ ನೆನಪಿನಲ್ಲಿರುತ್ತಾರೆ.

ಜಿ.ಎನ್.ದೇವಿ
ಸಂಸ್ಕೃತಿ ಚಿಂತಕರು ಮತ್ತು ಲೇಖಕರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...