HomeUncategorized"ವಿಷಯಾಂತರ" ಸಣ್ಣ ಕತೆ...

“ವಿಷಯಾಂತರ” ಸಣ್ಣ ಕತೆ…

- Advertisement -
- Advertisement -

ತುಮಕೂರಿನ ಒಂದು ರಸ್ತೆ. ರಸ್ತೆ ಬದಿಯಲ್ಲಿ ದೊಂಬರಾಟ ನಡೆಯುತ್ತಿತ್ತು. ಒಬ್ಬ ವ್ಯಕ್ತಿ ಒಂದು ಉದ್ದದ ಕಟ್ಟಿಗೆಯ ಕಂಬವೊಂದನ್ನು ತನ್ನ ಬಾಯಲ್ಲಿ ಎತ್ತಿಹಿಡಿದಿದ್ದ. ಆ ಕೋಲಿನ ತುದಿಯಲ್ಲಿ ಒಂದು ಪುಟ್ಟ ಮಗು, ಒಂದು ವರ್ಷದ್ದಿರಬಹುದು. ಆ ಮಗುವನ್ನು ಕೋಲಿನ ತುದಿಯಲ್ಲಿ ಇರಿಸಿ ಬ್ಯಾಲೆನ್ಸ್ ಮಾಡಿದ. ಸುತ್ತ ಒಂದು ಹದಿನೈದು ಜನರು ನೋಡುತ್ತಿದ್ದರು. ಆ ಕೋಲನ್ನು ಸಾವಕಾಶವಾಗಿ ಕೆಳಗಿಳಿಸಿ ಮಗುವನ್ನು ಹಿಡಿದುಕೊಂಡ. ಪುಟ್ಟ ಬಾಲಕಿಯೊಬ್ಬಳು ತಂತಿಯ ಮೇಲೆ ನಡೆದು ತನ್ನ ಬ್ಯಾಲೆನ್ಸ್ ಪ್ರದರ್ಶಿಸಿದಳು. ಆ ವ್ಯಕ್ತಿ ಅವಳು ನಡೆದಾಡುತ್ತಿದ್ದಂತೆ ಕೆಳಗಿನಿಂದ ಹಿಂಬಾಲಿಸುತ್ತಿದ್ದ. ತನ್ನ ನಡೆದಾಟವನ್ನು ಯಶಸ್ವಿಯಾಗಿ ಮುಗಿಸಿ ಕೆಳಗಿಳಿದಳು. ಅಷ್ಟರಲ್ಲಿ ಒಬ್ಬ ಮಧ್ಯವಯಸ್ಕ ವ್ಯಕ್ತಿಯೂ ನೋಡುಗರಲ್ಲಿ ಬಂದು ಸೇರಿದ್ದ. ಅವನು ನೋಡುಗರ ಕಡೆ ಒಂದು ಸಲ ಕಣ್ಣಾಡಿಸಿದ. ನೋಡುಗರಲ್ಲಿ ಅಷ್ಟೇನೂ ಉತ್ಸಾಹ ಕಂಡುಬರುತ್ತಿರಲಿಲ್ಲ. ಒಂದೆರಡು ಚಪ್ಪಾಳೆ ಕೇಳಿತೇನೋ ಎನ್ನುವಷ್ಟು ಕಡಿಮೆಯಾಗಿತ್ತು ನೋಡುಗರ ಉತ್ಸಾಹ. ದೊಂಬರಾಟ ಮಾಡುವ ಜನರಿಗೂ ಉತ್ಸಾಹದ ಕೊರತೆ ಕಾಣಿಸಿತ್ತೋ ಇಲ್ಲವೋ, ಅವರು ತಮ್ಮ ಆಟವನ್ನು ಮುಂದುವರೆಸಿದರು. ಇತ್ತ ರಸ್ತೆಯಲ್ಲಿ ಹೆಚ್ಚಿನ ಜನರು ತಮ್ಮ ಸಂಚಾರವನ್ನು ಮುಂದುವರೆಸಿದ್ದರು. ನಡೆದುಕೊಂಡು ಹೋಗುವವರು ಒಂದು ಸಲ ಕಣ್ಣು ಹಾಯಿಸಿ ಮುಂದುಹೋದರೆ, ವಾಹನದಲ್ಲಿರುವವರಿಗೆ ಈ ಆಟ ಕಾಣಲೇ ಇಲ್ಲ.

ಬಾಲಕಿ ಕೆಳಗಿಳಿದ ಮೇಲೆ, ದೊಂಬರಾಟದ ಆ ವ್ಯಕ್ತಿ ಹಣ ಸಂಗ್ರಹಿಸಲು ಆರಂಭಿಸಿದ. ನೋಡುಗರಾರೂ ಸ್ಥಿತಿವಂತರಂತೆ ಕಾಣುತ್ತಿರಲಿಲ್ಲ. ಆದರೂ ಕೆಲವರು ಐದು, ಹತ್ತು ರೂಪಾಯಿಗಳನ್ನು ಆ ವ್ಯಕ್ತಿಯ ಕೈಗಿಟ್ಟರು. ಒಂದು ಬ್ಯಾಗ್ ಅನ್ನು ಹೆಗಲಿಗೆ ಹಾಕಿ ನಿಂತಿದ್ದ ಮಧ್ಯ ವಯಸ್ಕ ವ್ಯಕ್ತಿಯ ಹತ್ತಿರ ದೊಂಬರಾಟದವನು ಬಂದ. ಆಗ ಆ ಮಧ್ಯವಯಸ್ಕ ವ್ಯಕ್ತಿ ನೂರರ ಒಂದು ನೋಟನ್ನು ಇತರರಿಗೆ ಕಾಣದಂತೆ ಕೈಗಿತ್ತ. ದೊಂಬರಾಟದವನು ಒಂದುಕ್ಷಣ ಅನುಮಾನದಿಂದ ನೋಡಿದ. ಈವಯ್ಯ ನೂರರ ನೋಟನ್ನು ಕೊಟ್ಟು ತೊಂಬತ್ತು ರೂಪಾಯಿ ಕೇಳುವನೋ ಎನ್ನುವಂತಿತ್ತು ಅವನ ನೋಟ. ಮಧ್ಯವಯಸ್ಕ ವ್ಯಕ್ತಿ ಒಂದುಕ್ಷಣ ತಡವರಿಸಿ ದೊಂಬರಾಟದವನ ಹತ್ತಿರಕ್ಕೆ ಬಂದು ಅವನನ್ನು ಅಪ್ಪಿಕೊಂಡ. ಅಪ್ಪಿಕೊಳ್ಳಲು ಹೊರಟಾಗ ಕಂಡ ಹಿಂಜರಿಕೆ ಅಪ್ಪಿಕೊಂಡಾಗ ಇರಲಿಲ್ಲ. ದೊಂಬರಾಟದವನೂ ಈ ಅಪರಿಚಿತ ವ್ಯಕ್ತಿಯ ಅಪ್ಪುಗೆಯನ್ನು ಸಹಜವೆಂಬಂತೆ ಸ್ವೀಕರಿಸಿದ.

ದೊಂಬರಾಟದವನ ಹೆಂಗಸು, ಅಪರಿಚಿತ ವ್ಯಕ್ತಿಯ ಕಣ್ಣಲ್ಲಿ ನೀರು ಜಿನುಗಿದ್ದು ಕಂಡಳು. ಇವನು ತಾನು ಭಾವುಕನಾದದ್ದು ಗೊತ್ತಾದೊಡನೇ ಸಾವರಿಸಿಕೊಂಡು ಮುಗುಳ್ನಕ್ಕ. ಹನಿ ಜಿನುಗತೊಡಗಿ ಅಲ್ಲಿಯ ಜನರು ಕಾಲ್ಕೀಳಲು ಶುರು ಮಾಡಿದರು. ಮಧ್ಯವಯಸ್ಕ ವ್ಯಕ್ತಿಯೂ ಹೊರಡಲು ಅಣಿಯಾದ. ‘ಒಂದೀಟು ಚಾ ಕುಡುದು ಹೋಗಣ್ಣ’ ಹೆಣ್ಣಿನ ಧ್ವನಿ ಕೇಳಿತು; ದೊಂಬರಾಟದ ಹೆಂಗಸು. ಹೊರಡಲು ಅಣಿಯಾದ ಮಧ್ಯವಯಸ್ಕ ವ್ಯಕ್ತಿ ನಿಂತ. ಪಕ್ಕದಲ್ಲಿಯ ಚಾದಂಗಡಿಯಲ್ಲಿ ಎಲ್ಲರೂ ಸೇರಿದರು. ‘ಎಲ್ಲರಿಗೂ ಚಾ ಕೊಡು’ ಎಂದು ಆದೇಶಿಸಿದ ಮಧ್ಯವಯಸ್ಕ ವ್ಯಕ್ತಿ. ಅಲ್ಲಿಯೇ ಇದ್ದ ಒಂದು ಕಟ್ಟಿಗೆಯ ಬೆಂಚಿನ ಮೇಲೆ ಕುಳಿತುಕೊಂಡ. ದೊಂಬರಾಟದವನೂ ಆ ಬೆಂಚಿನ ಇನ್ನೊಂದು ತುದಿಯಲ್ಲಿ ಕುಳಿತ. ಹೆಂಗಸು, ಮಗುವನ್ನು ತೊಡೆಯ ಮೇಲಿರಿಸಿ ನೆಲದ ಮೇಲೆ ಕುಳಿತು ಚಾ ಕುಡಿಯತೊಡಗಿದಳು. ಬಾಲಕಿ ಚಾ ಕುಡಿಯುತ್ತ ಈ ಅಪರಿಚಿತ ವ್ಯಕ್ತಿಯನ್ನು ನೋಡುತ್ತಿದ್ದಳು.

ದೊಂಬರಾಟದವ ಮತ್ತು ಮಧ್ಯವಯಸ್ಕ ಇಬ್ಬರೂ ಪರಸ್ಪರ ನೋಡಿದರು. ದೊಂಬರಾಟದವನು ಒಂದು ಮಾಸಿದ ಬನಿಯನ್ನು, ಒಂದು ಹಳೆಯ ಪ್ಯಾಂಟ್ ಹಾಕಿಕೊಂಡಿದ್ದ. ಸುಮಾರು ಮೂವತ್ತು ವಯಸ್ಸಾಗಿರಬಹುದು ಆದರೆ ನಲವತ್ತರ ಅಂಚಿನಲ್ಲಿದ್ದಂತೆ ಕಾಣುತ್ತಿದ್ದ. ಜೀವನವಿಡೀ ದೈಹಿಕ ಶ್ರಮ ಮಾಡಿದ್ದು ಒಂದು ಸಲ ನೋಡಿದರೇ ಗೊತ್ತಾಗುತ್ತಿತ್ತು. ಶುಭ್ರವಾದ ಅಂಗಿ, ಕರಿ ಶೂಸ್, ಕರಿ ಪ್ಯಾಂಟ್ ಹಾಕಿಕೊಂಡಿದ್ದ ಈ ಮಧ್ಯವಯಸ್ಕ ವ್ಯಕ್ತಿ ಚಾ ಬಿಸಿಯಾಗಿದ್ದರೂ ಬೇಗ ಬೇಗ ಕುಡಿಯುತ್ತಿದ್ದ. ಒಂದು ರೀತಿಯ ಮುಜುಗರ ಎದ್ದು ಕಾಣುತ್ತಿತ್ತು. ಈಗತಾನೆ ತಂತಿಯ ಮೇಲೆ ನಡೆದ ಬಾಲಕಿ ತನ್ನ ಕಡೆ ನೋಡುತ್ತಿದ್ದನ್ನು ಗಮನಿಸಿ ಮುಗುಳ್ನಕ್ಕ. ‘ಯಾವೂರು ನಿಮ್ದು?’ ಕೇಳಿದ ದೊಂಬರಾಟದವ. ‘ಮೈಸೂರು’ ಎಂದು ತಡವರಿಸಿ ಉತ್ತರ ಬಂತು. ಚಾ ಗ್ಲಾಸು ಖಾಲಿಯಾದೊಡನೇ ಐವತ್ತು ರೂಪಾಯಿಗಳನ್ನು ಚಾದಂಗಡಿಯವನ ಕೈಗಿತ್ತು, ‘ಬರ್ತೀನಿ’ ಎಂದು ಎದ್ದು ಹೊರಟ. ಮಳೆ ನಿಂತಿತ್ತು. ಚಾ ಕುಡಿದು ದೊಂಬರಾಟದವರೂ ಎದ್ದರು. ಚಾದಂಗಡಿಯನ್ನು ಕಾರಣವಿಲ್ಲದೇ ನಕ್ಕ.

ತನ್ನ ಹುಚ್ಚುತನಕ್ಕೆ ಖುಷಿಪಟ್ಟುಕೊಂಡು ಬಿರಬಿರನೇ ಹೆಜ್ಜೆ ಹಾಕುತ್ತಿದ್ದ ಆ ಮಧ್ಯವಯಸ್ಕ. ಇತ್ತ ದೊಂಬರಾಟದವರು ತಮ್ಮ ಸಾಮಾನುಗಳನ್ನು ಒಂದೆಡೆ ಕಲೆಹಾಕುವಲ್ಲಿ ತೊಡಗಿಸಿಕೊಂಡರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...