Homeಪುಸ್ತಕ ವಿಮರ್ಶೆವೋಲ್ಗಾ ಗಂಗಾ ರಾಹುಲ ಸಾಂಕೃತ್ಯಾಯನ

ವೋಲ್ಗಾ ಗಂಗಾ ರಾಹುಲ ಸಾಂಕೃತ್ಯಾಯನ

- Advertisement -
- Advertisement -

“ಮಾನವ ಸಮಾಜ ಒಮ್ಮೆಲೇ ಇಂದಿನ ಪರಿಸ್ಥಿತಿಗೆ ತಲುಪಲಿಲ್ಲ. ಈ ಸ್ಥಿತಿಗೆ ತಲುಪಬೇಕಾದರೆ ಅದು ಅನೇಕಾನೇಕ ಸಂಘರ್ಷಗಳನ್ನು ಎದುರಿಸಬೇಕಾಯಿತು” ಎಂದೇ ಪ್ರಾರಂಭವಾಗುವ ಈ ಕೃತಿ ಕತೆಗಳೆಂದು ಕರೆಯಿಸಿಕೊಳ್ಳುವ ಮಾನವ ಸಮಾಜದ ಇತಿಹಾಸದ ಭಿತ್ತಿ ಚಿತ್ರಗಳು.

ಇಪ್ಪತ್ತು ಕತೆಗಳ ಸಂಕಲನ.
ಇಂದು ನಾವು ಕಾಣುತ್ತಿರುವಂತೆ ಸಮಾಜವಿರಲಿ, ಕುಟುಂಬವೂ ಇರಲಿಲ್ಲ ಮತ್ತು ಕುಟುಂಬದ ಸದಸ್ಯರ ಸಂಬಂಧವೂ ಇರಲಿಲ್ಲ. ತಾಯಿ, ಮಗು, ಸೋದರ, ಸೋದರಿಯರ ಇಂದಿನ ಶಿಷ್ಟ ಸಂಬಂಧದ ಕನ್ನಡಕದಿಂದ ಅಂದಿನ ನಮ್ಮ ಪೂರ್ವಜರ ನೈಸರ್ಗಿಕ ವರ್ತನೆಗಳನ್ನು ನೋಡಿದರೆ, ಅಶ್ಲೀಲವೆಂದೋ, ಅಕ್ರಮವೆಂದೋ, ಅಸಭ್ಯವೆಂದೋ ತುಚ್ಛೀಕರಿಸಬಹುದು. ಆದರೆ ಸಮಾಜದ ವ್ಯವಸ್ಥೆಯು ವಿಕಸಿತವಾದಂತೆ, ಕುಟುಂಬವೂ, ಅದರ ಸದಸ್ಯರ ಸಂಬಂಧಗಳ ರೂಪುರೇಷೆಗಳೂ ವಿಕಸಿತಗೊಳ್ಳುತ್ತಾ ಬಂತು ಎಂಬುದನ್ನು ನಿರಾಕರಿಸಲಾಗದು. ಮಾನವನ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸಗಳ ಸಿಕ್ಕ ತುಣುಕುಗಳನ್ನು ಕತೆಗಳ ರೂಪದಲ್ಲಿ ಕಟ್ಟಿಕೊಡುವ ಸಾಂಕೃತ್ಯಾಯನ ಬಹುದೊಡ್ಡ ಪಂಡಿತರು.

ತುಂಡುತುಂಡಾಗಿ ಸಿಕ್ಕಿರುವ ಇತಿಹಾಸದ ದಾಖಲೆಗಳನ್ನು ಜೋಡಿಸುವ ಕೊಂಡಿಗಳನ್ನು ಕಲ್ಪಿಸಿರುವ ಕತೆಗಾರನ ಕಲ್ಪನಾಶಕ್ತಿಗಿಂತ ಕಾಣದಿರುವ ಇತಿಹಾಸದ ಗ್ರಹಿಕೆ ತೋರುತ್ತದೆ.

ನಿಶಾ, ಮೊದಲ ಕತೆ. ವೋಲ್ಗಾ ನದಿಯ ತಟದಲ್ಲಿ ಕ್ರಿ.ಪೂ.600ರ ಜೀವನವನ್ನು ತೆರೆದಿಡುತ್ತದೆ.

ಹಾಗೆಯೇ ವೇದ, ಬ್ರಾಹ್ಮಣ, ಉಪನಿಷತ್ತುಗಳನ್ನೆಲ್ಲಾ ಜಾಲಾಡುವ ಸಾಂಕೃತ್ಯಾಯನ ವಿವಿಧ ಭೂಭಾಗಗಳಲ್ಲಿ ಮಾನವನ ವಿವಿಧ ಜನಾಂಗಗಳು ಬಾಳಿರುವ ರೀತಿಗಳನ್ನು, ಎದುರಿಸಿರುವ ಸಂಘರ್ಷಗಳನ್ನು ಮತ್ತು ಅಳವಡಿಸಿಕೊಂಡಿರುವ ವ್ಯವಸ್ಥೆಗಳನ್ನು ಕಥಿಸುತ್ತಾರೆ.
1942ರಲ್ಲಿ ಸಾಂಕೃತ್ಯಾಯನ ಬರೆದ ಈ ಕೃತಿಗೆ ಸನಾತನಿಗಳು ಕೆಂಡಕಾರಿದ್ದರು. ಬಹುವಾಗಿ ನಿಂದಿಸಿದ್ದರು. ಆದರೆ ಈ ಕೃತಿಯನ್ನು ಸಮರ್ಥಿಸಲು ಅಥವಾ ಖಂಡಿಸಲು ಯಾರಿಗಾದರೂ ಆಳವಾದ ಅಧ್ಯಯನವಿರಬೇಕು. ಏಕೆಂದರೆ ಇವರ ಅಗಾಧ ಓದಿನ ಹಿನ್ನೆಲೆ ಮತ್ತು ಅಧ್ಯಯನ ವ್ಯಾಪ್ತಿಯನ್ನು ನಗ್ನವಾದಿ ವೇದನಿಂದಕ ಎಂದು ದೂಷಿಸಿದರೆ ಅದೊಂದು ಪೂರ್ವಾಗ್ರಹ ಪೀಡಿತ ಮನಸ್ಕರ ಅಸಹನೆಯ ಪ್ರದರ್ಶನವಷ್ಟೇ ಆಗುತ್ತದೆ.

ಬರಿಯ ಗ್ರಂಥಾಧ್ಯಯನ ಮಾತ್ರವಲ್ಲದೇ ತಾವೇ ಅಲೆದಾಟದಲ್ಲಿ ತೊಡಗಿದ್ದರ ಪರಿಣಾಮ ಜೀವನವಿಧಾನ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗಳು ವೋಲ್ಗಾ ಗಂಗಾದಲ್ಲಿ ಹರಳುಗಟ್ಟಿದೆ. ಇತಿಹಾಸ, ತತ್ವಶಾಸ್ತ್ರ, ವಿಜ್ಞಾನ, ರಾಜನೀತಿ, ಸಂಸ್ಕೃತಿ, ಸಮಾಜ ವಿಜ್ಞಾನ ಎಲ್ಲವೂ ಕತೆಗಳ ತಳಪಾಯಗಳೇ. ಹಾಗಾಗಿ ತಿಳಿವಳಿಕೆಯ ಕೊರತೆಗಳು ಕತೆಗಳನ್ನು ಕ್ಲಿಷ್ಟಗೊಳಿಸುತ್ತವೆ. ತಲೆಬಾಲ ಅರ್ಥವಾಗದೇ ಹೋಗಬಹುದು. ಏಕೆಂದರೆ ಇಂದಿನ ಸಮಾಜದ ಕನ್ನಡಕದಿಂದ ನೋಡಲಾಗುವುದಿಲ್ಲವಲ್ಲ!

ಈ ಲೇಖನದ ಉದ್ದೇಶ ಅವರ ಕತೆಗಳಲ್ಲಿರುವ ಅಂಶಗಳನ್ನು ಚರ್ಚಿಸುವುದಾಗಲಿ, ವಿಷಯಗಳನ್ನು ಮುಂದಿಡುವುದಾಗಲಿ ಅಲ್ಲ. ಬರಿದೇ ಪ್ರವೇಶಿಕೆಯನ್ನು ಒದಗಿಸುವುದಕ್ಕೆ. ಕತೆಗಳ ನಾಟಕೀಯತೆಯನ್ನು ಊಹಿತಸತ್ಯ (ಹೈಪೋತಿಸೀಸ್) ರೀತಿಯಲ್ಲಿ ಗ್ರಹಿಸಬೇಕಾಗಿರುವ ಮುನ್ನೆಚ್ಚರಿಕೆಯನ್ನು ಹೊಂದುವುದಕ್ಕೆ.

ವಿಶ್ವದ 7500 ವರ್ಷಗಳ ಇತಿಹಾಸದಲ್ಲಿ ಮಾನವನ ತುಳಿದಿಟ್ಟ ಭಾವನೆಗಳ ಹಾಗೂ ಕಲ್ಪನೆಗಳ ಸುಂದರ ಕತೆಗಳ ರೂಪದ ಈ ಪುಸ್ತಕ ನವಕರ್ನಾಟಕದಲ್ಲಿ ಸಿಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್ ಬಳಿಕ 9 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮತದಾರರ ಸಂಖ್ಯೆ 1.70 ಕೋಟಿ ಇಳಿಕೆ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ 9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಒಟ್ಟು ಸಂಖ್ಯೆಯಲ್ಲಿ 1.70 ಕೋಟಿ ಇಳಿಕೆ ಕಂಡಿದೆ. ಗುಜರಾತ್, ಪುದುಚೇರಿ, ಲಕ್ಷದ್ವೀಪ, ರಾಜಸ್ಥಾನ, ಛತ್ತೀಸ್‌ಗಢ, ಅಂಡಮಾನ್...

ಅಫ್ಘಾನ್ ಗಡಿಯಲ್ಲಿ ಪಾಕಿಸ್ತಾನ ವೈಮಾನಿಕ ದಾಳಿ : 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಶಂಕೆ

ಅಫ್ಘಾನಿಸ್ತಾನದ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನ ಭಾನುವಾರ (ಫೆ.22) ಭಾರೀ ವೈಮಾನಿಕ ದಾಳಿ ನಡೆಸಿರುವುದಾಗಿ ವರದಿಯಾಗಿದೆ. ಪಾಕಿಸ್ತಾನದ ವಾಯುಪಡೆಯು ಅಫ್ಘಾನಿಸ್ತಾನದ ಪಕ್ತಿಕಾ ಮತ್ತು ನಂಗರ್ಹಾರ್ ಪ್ರಾಂತ್ಯಗಳಲ್ಲಿರುವ ಏಳು ಸಶಸ್ತ್ರ ಗುಂಪುಗಳ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ...

ಹೊಸ ಜಾಗತಿಕ ಸುಂಕವನ್ನು ಶೇ.15ಕ್ಕೆ ಏರಿಸಿದ ಟ್ರಂಪ್

ಪ್ರತಿ ಸುಂಕ ನೀತಿಯನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್ ಆದೇಶಕ್ಕೆ ಸೆಡ್ಡು ಹೊಡೆದು, ಎಲ್ಲಾ ದೇಶಗಳ ಆಮದಿನ ಮೇಲೆ ಹೊಸದಾಗಿ 10 ಶೇಕಡ ಜಾಗತಿಕ ಸುಂಕ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶನಿವಾರ...

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...