Homeರಾಜಕೀಯ`ನೋಡ್ರಿ ನಂಗೆ ಮಂತ್ರಿ ಸ್ಥಾನುದ ಮ್ಯಾಲೆ ಯಾವ್ ಸೀಮೆ ಮಮುಕಾರುವೂ ಇಲ್ಲ.

`ನೋಡ್ರಿ ನಂಗೆ ಮಂತ್ರಿ ಸ್ಥಾನುದ ಮ್ಯಾಲೆ ಯಾವ್ ಸೀಮೆ ಮಮುಕಾರುವೂ ಇಲ್ಲ.

- Advertisement -
- Advertisement -

`ನಾನು ಎಜ್ಜಾಟ್ಲಿ ಇಸಕಂಠ ಪರಂಪರೆಯವ್ನು. ಮಾಧ್ಯಮುದವ್ರು ನನ್ನನ್ನು ಉಗುದು ಉಪ್ಪಿನ್ಕಾಯಿ ಹಾಕಿದ್ರು ಐ ಡೋಂಟ್ ಕೇರ್. ಅವ್ರಿಗೆ ಹ್ಯೆದ್ರಿಕ್ಯೆಂಡು ನಾನಾಡೊ ಮಾತು ನಿಲ್ಸೋಕೆ ನಾನೇನು ರಣಹ್ಯೇಡಿ ಅಪ್ಪ ಅಮ್ಮುಗೆ ಹುಟ್ಟಿದೋನಲ್ಲ. ಬೈ-ದು-ಬೈ ಮುಠ್ಠಾಳತನುವ ಬಂಡ್ವಾಳ ಮಾಡ್ಕ್ಯಂಡಿರೋ ಈ ಬುದ್ದಿಜ್ಯೀವಿಗಳು ನಂ ಹಿಂದೂತ್ವಕ್ಕೆ ಮಸಿ ಬಳೀತಾ ಕುಂತವ್ರೆ ಕಣ್ರಿ. ಅವ್ರಿಗೆ ಕಡಿವಾಣ ಹಾಕ್ಲೇಬೇಕು’

– ಅನಂತ್ ಕುಮಾರ್ ಹೆಗಡೆ, ಕಾಮನ್‍ಸೆನ್ಸ್ ಕಳ್ಕೊಂಡಿರೋ ಕೇಂದ್ರ ಮಂತ್ರಿ

* * * *

`ನೋಡ್ರಿ ನಂಗೆ ಮಂತ್ರಿ ಸ್ಥಾನುದ ಮ್ಯಾಲೆ ಯಾವ್ ಸೀಮೆ ಮಮುಕಾರುವೂ ಇಲ್ಲ. ನಂ ಜಿಲ್ಲಾ ಕಾರ್ಯಕರ್ತುರು ನನ್ನನ್ನ ಮಂತ್ರಿ ಮಾಡ್ದಿದ್ದಕ್ಕೆ ಬೆಂಗ್ಳೂರಿಗೆ ಹ್ವೋಗಿ ಪಕ್ಸುದ ಸದಸ್ಯತ್ವುಕ್ಕೆ ರಾಜೀನಾಮೆ ಬಿಸಾಕಿ ಬಂದಿದಾರೆ ಅಂತ ಪೇಪರ್ರು, ಟೀವಿಲಿ ನೋಡಿ ತಿಳ್ಕಂಡಿದಿನೆ ವರ್ತು ಹೆಚ್ಚೇನು ಗೊತ್ತಿಲ್ಲ. ನನ್ ಮ್ಯೇಲಿನ ಅಭಿಮಾನುಕ್ಕೆ ಹಂಗೆ ಮಾಡ್ಯವ್ರೆ ಆಟೆಯಾ. ಅಲ್ಲಾ ಕಣ್ರೀ ಜನಸೇವೆಗಿಂತ ಮಂತ್ರಿ ಪದುವಿ ದೊಡ್ಡದಾ. ತೆಗ್‍ತೆಗೀರಿ, ಶಾಸಕನಾಗೆ ಜನಸೇವೆ ಮಾಡ್ತೀನಿ ನೋಡ್ತಾ ಇರಿ. ಐ ಪ್ರಾಮಿಸ್ ಯೂ…’

– ಶಾಮನೂರು ಶಿವಶಂಕರಪ್ಪ, ಇಳಿವಯಸ್ಸಿನ ನವಚೈತನ್ಯದ ವೈರಾಗಿ ರಾಜಕಾರಣಿ

* * * *

`ಲುಕ್ ಮೈ ಡಿಯರ್ ಹಿಂದೂ ಭಾಯಿಜಾನ್ಸ್. ನಂ ರಾಜ್ಯುದಾಗೆ ಕ್ವೊಲೆಗುಳಾದ್ರೆ ಮೋದಿ ಮಹಾತ್ಮುರನ್ನ ಕೆಲವ್ರು ಪ್ರಸ್ನೆ ಮಾಡ್ತಾರೆ. ನಾನು ಏನ್ ಹೇಳ್ತೀನಿ ಅಂದ್ರೆ, ಗೌರಿ ಮಲ್ಡರ್‍ಗೂ ಮ್ವೋದಿಗೂ ಏನ್ ಸಮಂಧ ಉಂಟು ನೀವೇ ಹೇಳ್ರಿ. ನಂ ರಾಜ್ಯುದಲ್ಲಿ ನಾಯಿ ಸತ್ರೆ, ಆ ಮಹಾತ್ಮುರು ಯಾಕೆ ಉತ್ರ ಕೊಡ್ಬೇಕು ಅಂತೀನಿ’

-ಪ್ರಮೋದ್ ಮುತಾಲಿಕ್, ತನಿಖೆಗೆ ಬೆಚ್ಚಿ ಬಿದ್ದಿರೋ ಆರೆಸ್ಸೆಸ್‍ನ ಸಾಪ್ಟ್‍ಶತ್ರು.

* * * *

`ಹಡೆಯೋ ಶಕ್ತಿ ಇದ್ದಾಗ್ಲೆ ಲಗ್ನಾ ಮಾಡ್ಬೇಕ್ರಿ..! ಹೊತ್ತಿಗೆ ಸರ್ಯಾಗಿ ಲಗ್ನಾ ಮಾಡ್ಲಿಲ್ಲ ಅಂದ್ರೆ, ಏನೂ ಪ್ರಯೋಜುನ ಇರಲ್ಲ. ಅಟಲ್ ಬಿಯಾರಿ ವಾಜ್ಪೇಯಿ ಹತ್ತಾರು ವರ್ಸ ಮೊದ್ಲೇ ಈ ದ್ಯೇಸುಕ್ಕೆ ಪರ್ದಾನಿ ಆಗ್ಬುಟ್ಟಿದ್ದ್ರೆ, ನಂ ದ್ಯೇಸುದ ಚಿತ್ರಾನೆ ಬ್ಯಾರೆ ಆಗ್ತಿತ್ತು ಕಣ್ರೀ’

– ಶಿವಾನಂದ ಎಸ್. ಪಾಟೀಲ್, ಆರೋಗ್ಯ ಮಂತ್ರಿಯಾದ ಹಡೆಯೋ ಡಿಪಾರ್ಟ್‍ಮೆಂಟ್ ಸ್ಪೆಷಲಿಸ್ಟು

* * * *

ದೇವ್ರತ್ರ ಹ್ವೋಗೊ ವಯಸ್ಸಾಗಿರೋ ಶ್ರೀರಾಮಸೇನೆಯ ಹೆಡ್ಡಾಪೀಸು ಮುತಾಲಿಕ್ಕು ಈಗ್ಲಾದ್ರು ಸಮಾಜುಕ್ಕೆ ಉಳಿ ಹಿಂಡೋದು ಬಿಟ್ಟ್‍ಬಿಟ್ಟಿ, ಸನ್ನಡುತೆ ಹಾದೀಲಿ ಬದುಕ್ಲಿ. ದೇವ್ರತ್ರ ಹ್ವೋಗಕ್ಕೆ ಟಿಕೇಟ್ ತಕೊಂಡು ಏರ್‍ಪೋರ್ಟ್‍ನಲ್ಲಿ ಕಾಯ್ತಾ ಕೂತಿರೋ ಆಯಪ್ಪನ ಬಗ್ಗೆ ನಂಗೆ ಭಾರೀ ನೋವಿದೆ ಕಣ್ರೀ. ಫಸ್ಟು ಎಸ್ಸೈಟಿನೋರು ಆವಯ್ಯುನ ಹಿಡ್ಕಂಡು ತನುಖೆ ಮಾಡ್ಬೇಕು ನೋಡ್ರಿ’

– ಸೀಎಂ ಇಬ್ರಾಹಿಂ, ರಸವತ್ತಾಗಿ ಕನ್ನಡ
ಮಾತಾಡೋ ಖಾದಿ ಸಾಬಣ್ಣ.

* * * *

`ನಾನು ಮಂತ್ರಿಗಿರಿ ಮ್ಯಾಕೆ ಶ್ಯಾನೆ ಆಸೆ ಮಡಿಕ್ಕ್ಯಂಡಿದ್ದೆ. ಆದ್ರೆ ಕೆಲವ್ರ ಹಿಕಮತ್ತಿನಿಂದ ಕೈ ತ್ಯೆಪ್ಪಿ ಹೋಗೈತಿ. ಪರ್ವಾಗಿಲ್ಲ ಶಾಸಕಿಯಾಗೆ ಜನ್ರ ಸೇವೆ ಮಾಡ್ತೀನಿ. ಬೈ-ದು-ಬೈ ನಂ ಪಕ್ಸುದ ವರಿಸ್ಟ್ರು ಅದ್ಯಾವ ಮಾನದಂಡ ನೋಡಿ ಜೈಮಾಲಾಗೆ ಸಚಿವೆ ಮಾಡಿದ್ರೋ ನಾ ಕಾಣೆ. ಮೋಸ್ಟ್ಲೀ, ಆಯಮ್ಮನ `ಸೇವೆ’ ಕಂಡು ತಥಾಸ್ತು ಅಂದಿರ್ಬೈದು. ಅಯ್ಯೋ, ಕಂಡೋರ ಇಚಾರ ನಮಿಗ್ಯಾಕೆ ಬಿಡ್ರೀ…’

– ಲಕ್ಷ್ಮಿ ಹೆಬ್ಬಾಳ್ಕರ್, ಮಿನಿಸ್ಟ್ರು ಕುರ್ಚಿಗೆ ಹಾಕಿದ್ದ ಕರ್ಚೀಪಿನಲ್ಲೇ ಕಣ್ಣೊರೆಸಿಕೊಳ್ತಿರೋ ಡೀಕೇಶಿ ಅನುಯಾಯಿ.

* * * *

`ನೋಡಿ… ಮೂವತ್ತೆಂಟು ಸೀಟು ಗ್ಯೆದ್ದ ಪಕ್ಸುಕ್ಕೆ ಎಪ್ಪತ್ತೆಂಟು ಗ್ಯೆದ್ದ ನ್ಯಾಷುನಲ್ ಪಾರ್ಟಿ ಬೆಂಬಲ ನೀಡುತ್ತೆ ಅಂದ್ರೆ, ಅದರ ಹಿಂದೆ ದ್ಯೇವ್ರ ಅನುಗ್ರಹ ಇದೆ ಅಂತ್ಲೇ ಅರ್ತ. ಕುಮಾರಸ್ವಾಮಿಯೋರಿಗೆ ಬಹುಮತ ಸಿಕ್ಕಿಲ್ಲ ಅನ್ನೋ ನೋವು ನನಿಗೆ ಇರೋದು ನಿಜಾ… ಅಧಿಕಾರ ಕೊಟ್ರೂ ದೇವ್ರು ಅವ್ರನ್ನ ಪರೀಕ್ಸ ಮಾಡ್ತಾ ಕುಂತವ್ನೆ. ಒಂದು ವರ್ಸ ಯಾವ ಚ್ಯಿಂತೇನೂ ಇಲ್ಲ. ಆಮ್ಯಾಲೆ ಹೆಂಗೋ ಗೊತ್ತಿಲ್ಲ’

– ದೇವೇಗೌಡ್ರು, ಜನತಾದಳದ ಜಾತ್ಯತೀತ ಮುತ್ಸದ್ದಿ

* * * *

`ಈ ವಿಮರ್ಶಕರು ಏನು ಅದಾರಲ್ರೀ, ಅವುರೇ ದೊಡ್ಡ ಕ್ವೊಲೆಗಡುಕರು. ಮಹಾನ್ ಪಕ್ಷಪಾತಿಗಳು. ನನ್ನ ಹೆಸುರಲ್ಲೇ `ಗೌಡ’ ಇದೆ ಅನ್ನೋ ಕಾರುಣಕ್ಕೇ ಇವುನನ್ನು ಮಟ್ಟ ಹಾಕ್ಬೇಕು ಅನ್ನೋ ಹಂತಕ್ಕೆ ವಿಮರ್ಶೆ ಇಳುದೋಗ್ಯದೆ. ಇಂಥೋರು ಗ್ವೋಡೆ, ಕಬ್ಬುಣದ ಸರಳುಗಳ್ನ ನಿರ್ಮಿಸ್ತಾ ಕುಂತವ್ರೆ. ಥೂತ್ತೇರಿ…’

– ದೊಡ್ಡರಂಗೇಗೌಡ್ರು,
ಮೋದಿ ಸ್ತುತಿಯ ಕಂಡಕಾವ್ಯ ಬರೆದು ಪದ್ಮಶ್ರೀ
ಋಣ ತೀರಿಸಿದ ಗ್ರಾಮ್ಯ ಸೊಗಡಿನ ಸಾಹಿತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...