Homeರಾಜಕೀಯ`ನೋಡ್ರಿ ನಂಗೆ ಮಂತ್ರಿ ಸ್ಥಾನುದ ಮ್ಯಾಲೆ ಯಾವ್ ಸೀಮೆ ಮಮುಕಾರುವೂ ಇಲ್ಲ.

`ನೋಡ್ರಿ ನಂಗೆ ಮಂತ್ರಿ ಸ್ಥಾನುದ ಮ್ಯಾಲೆ ಯಾವ್ ಸೀಮೆ ಮಮುಕಾರುವೂ ಇಲ್ಲ.

- Advertisement -
- Advertisement -

`ನಾನು ಎಜ್ಜಾಟ್ಲಿ ಇಸಕಂಠ ಪರಂಪರೆಯವ್ನು. ಮಾಧ್ಯಮುದವ್ರು ನನ್ನನ್ನು ಉಗುದು ಉಪ್ಪಿನ್ಕಾಯಿ ಹಾಕಿದ್ರು ಐ ಡೋಂಟ್ ಕೇರ್. ಅವ್ರಿಗೆ ಹ್ಯೆದ್ರಿಕ್ಯೆಂಡು ನಾನಾಡೊ ಮಾತು ನಿಲ್ಸೋಕೆ ನಾನೇನು ರಣಹ್ಯೇಡಿ ಅಪ್ಪ ಅಮ್ಮುಗೆ ಹುಟ್ಟಿದೋನಲ್ಲ. ಬೈ-ದು-ಬೈ ಮುಠ್ಠಾಳತನುವ ಬಂಡ್ವಾಳ ಮಾಡ್ಕ್ಯಂಡಿರೋ ಈ ಬುದ್ದಿಜ್ಯೀವಿಗಳು ನಂ ಹಿಂದೂತ್ವಕ್ಕೆ ಮಸಿ ಬಳೀತಾ ಕುಂತವ್ರೆ ಕಣ್ರಿ. ಅವ್ರಿಗೆ ಕಡಿವಾಣ ಹಾಕ್ಲೇಬೇಕು’

– ಅನಂತ್ ಕುಮಾರ್ ಹೆಗಡೆ, ಕಾಮನ್‍ಸೆನ್ಸ್ ಕಳ್ಕೊಂಡಿರೋ ಕೇಂದ್ರ ಮಂತ್ರಿ

* * * *

`ನೋಡ್ರಿ ನಂಗೆ ಮಂತ್ರಿ ಸ್ಥಾನುದ ಮ್ಯಾಲೆ ಯಾವ್ ಸೀಮೆ ಮಮುಕಾರುವೂ ಇಲ್ಲ. ನಂ ಜಿಲ್ಲಾ ಕಾರ್ಯಕರ್ತುರು ನನ್ನನ್ನ ಮಂತ್ರಿ ಮಾಡ್ದಿದ್ದಕ್ಕೆ ಬೆಂಗ್ಳೂರಿಗೆ ಹ್ವೋಗಿ ಪಕ್ಸುದ ಸದಸ್ಯತ್ವುಕ್ಕೆ ರಾಜೀನಾಮೆ ಬಿಸಾಕಿ ಬಂದಿದಾರೆ ಅಂತ ಪೇಪರ್ರು, ಟೀವಿಲಿ ನೋಡಿ ತಿಳ್ಕಂಡಿದಿನೆ ವರ್ತು ಹೆಚ್ಚೇನು ಗೊತ್ತಿಲ್ಲ. ನನ್ ಮ್ಯೇಲಿನ ಅಭಿಮಾನುಕ್ಕೆ ಹಂಗೆ ಮಾಡ್ಯವ್ರೆ ಆಟೆಯಾ. ಅಲ್ಲಾ ಕಣ್ರೀ ಜನಸೇವೆಗಿಂತ ಮಂತ್ರಿ ಪದುವಿ ದೊಡ್ಡದಾ. ತೆಗ್‍ತೆಗೀರಿ, ಶಾಸಕನಾಗೆ ಜನಸೇವೆ ಮಾಡ್ತೀನಿ ನೋಡ್ತಾ ಇರಿ. ಐ ಪ್ರಾಮಿಸ್ ಯೂ…’

– ಶಾಮನೂರು ಶಿವಶಂಕರಪ್ಪ, ಇಳಿವಯಸ್ಸಿನ ನವಚೈತನ್ಯದ ವೈರಾಗಿ ರಾಜಕಾರಣಿ

* * * *

`ಲುಕ್ ಮೈ ಡಿಯರ್ ಹಿಂದೂ ಭಾಯಿಜಾನ್ಸ್. ನಂ ರಾಜ್ಯುದಾಗೆ ಕ್ವೊಲೆಗುಳಾದ್ರೆ ಮೋದಿ ಮಹಾತ್ಮುರನ್ನ ಕೆಲವ್ರು ಪ್ರಸ್ನೆ ಮಾಡ್ತಾರೆ. ನಾನು ಏನ್ ಹೇಳ್ತೀನಿ ಅಂದ್ರೆ, ಗೌರಿ ಮಲ್ಡರ್‍ಗೂ ಮ್ವೋದಿಗೂ ಏನ್ ಸಮಂಧ ಉಂಟು ನೀವೇ ಹೇಳ್ರಿ. ನಂ ರಾಜ್ಯುದಲ್ಲಿ ನಾಯಿ ಸತ್ರೆ, ಆ ಮಹಾತ್ಮುರು ಯಾಕೆ ಉತ್ರ ಕೊಡ್ಬೇಕು ಅಂತೀನಿ’

-ಪ್ರಮೋದ್ ಮುತಾಲಿಕ್, ತನಿಖೆಗೆ ಬೆಚ್ಚಿ ಬಿದ್ದಿರೋ ಆರೆಸ್ಸೆಸ್‍ನ ಸಾಪ್ಟ್‍ಶತ್ರು.

* * * *

`ಹಡೆಯೋ ಶಕ್ತಿ ಇದ್ದಾಗ್ಲೆ ಲಗ್ನಾ ಮಾಡ್ಬೇಕ್ರಿ..! ಹೊತ್ತಿಗೆ ಸರ್ಯಾಗಿ ಲಗ್ನಾ ಮಾಡ್ಲಿಲ್ಲ ಅಂದ್ರೆ, ಏನೂ ಪ್ರಯೋಜುನ ಇರಲ್ಲ. ಅಟಲ್ ಬಿಯಾರಿ ವಾಜ್ಪೇಯಿ ಹತ್ತಾರು ವರ್ಸ ಮೊದ್ಲೇ ಈ ದ್ಯೇಸುಕ್ಕೆ ಪರ್ದಾನಿ ಆಗ್ಬುಟ್ಟಿದ್ದ್ರೆ, ನಂ ದ್ಯೇಸುದ ಚಿತ್ರಾನೆ ಬ್ಯಾರೆ ಆಗ್ತಿತ್ತು ಕಣ್ರೀ’

– ಶಿವಾನಂದ ಎಸ್. ಪಾಟೀಲ್, ಆರೋಗ್ಯ ಮಂತ್ರಿಯಾದ ಹಡೆಯೋ ಡಿಪಾರ್ಟ್‍ಮೆಂಟ್ ಸ್ಪೆಷಲಿಸ್ಟು

* * * *

ದೇವ್ರತ್ರ ಹ್ವೋಗೊ ವಯಸ್ಸಾಗಿರೋ ಶ್ರೀರಾಮಸೇನೆಯ ಹೆಡ್ಡಾಪೀಸು ಮುತಾಲಿಕ್ಕು ಈಗ್ಲಾದ್ರು ಸಮಾಜುಕ್ಕೆ ಉಳಿ ಹಿಂಡೋದು ಬಿಟ್ಟ್‍ಬಿಟ್ಟಿ, ಸನ್ನಡುತೆ ಹಾದೀಲಿ ಬದುಕ್ಲಿ. ದೇವ್ರತ್ರ ಹ್ವೋಗಕ್ಕೆ ಟಿಕೇಟ್ ತಕೊಂಡು ಏರ್‍ಪೋರ್ಟ್‍ನಲ್ಲಿ ಕಾಯ್ತಾ ಕೂತಿರೋ ಆಯಪ್ಪನ ಬಗ್ಗೆ ನಂಗೆ ಭಾರೀ ನೋವಿದೆ ಕಣ್ರೀ. ಫಸ್ಟು ಎಸ್ಸೈಟಿನೋರು ಆವಯ್ಯುನ ಹಿಡ್ಕಂಡು ತನುಖೆ ಮಾಡ್ಬೇಕು ನೋಡ್ರಿ’

– ಸೀಎಂ ಇಬ್ರಾಹಿಂ, ರಸವತ್ತಾಗಿ ಕನ್ನಡ
ಮಾತಾಡೋ ಖಾದಿ ಸಾಬಣ್ಣ.

* * * *

`ನಾನು ಮಂತ್ರಿಗಿರಿ ಮ್ಯಾಕೆ ಶ್ಯಾನೆ ಆಸೆ ಮಡಿಕ್ಕ್ಯಂಡಿದ್ದೆ. ಆದ್ರೆ ಕೆಲವ್ರ ಹಿಕಮತ್ತಿನಿಂದ ಕೈ ತ್ಯೆಪ್ಪಿ ಹೋಗೈತಿ. ಪರ್ವಾಗಿಲ್ಲ ಶಾಸಕಿಯಾಗೆ ಜನ್ರ ಸೇವೆ ಮಾಡ್ತೀನಿ. ಬೈ-ದು-ಬೈ ನಂ ಪಕ್ಸುದ ವರಿಸ್ಟ್ರು ಅದ್ಯಾವ ಮಾನದಂಡ ನೋಡಿ ಜೈಮಾಲಾಗೆ ಸಚಿವೆ ಮಾಡಿದ್ರೋ ನಾ ಕಾಣೆ. ಮೋಸ್ಟ್ಲೀ, ಆಯಮ್ಮನ `ಸೇವೆ’ ಕಂಡು ತಥಾಸ್ತು ಅಂದಿರ್ಬೈದು. ಅಯ್ಯೋ, ಕಂಡೋರ ಇಚಾರ ನಮಿಗ್ಯಾಕೆ ಬಿಡ್ರೀ…’

– ಲಕ್ಷ್ಮಿ ಹೆಬ್ಬಾಳ್ಕರ್, ಮಿನಿಸ್ಟ್ರು ಕುರ್ಚಿಗೆ ಹಾಕಿದ್ದ ಕರ್ಚೀಪಿನಲ್ಲೇ ಕಣ್ಣೊರೆಸಿಕೊಳ್ತಿರೋ ಡೀಕೇಶಿ ಅನುಯಾಯಿ.

* * * *

`ನೋಡಿ… ಮೂವತ್ತೆಂಟು ಸೀಟು ಗ್ಯೆದ್ದ ಪಕ್ಸುಕ್ಕೆ ಎಪ್ಪತ್ತೆಂಟು ಗ್ಯೆದ್ದ ನ್ಯಾಷುನಲ್ ಪಾರ್ಟಿ ಬೆಂಬಲ ನೀಡುತ್ತೆ ಅಂದ್ರೆ, ಅದರ ಹಿಂದೆ ದ್ಯೇವ್ರ ಅನುಗ್ರಹ ಇದೆ ಅಂತ್ಲೇ ಅರ್ತ. ಕುಮಾರಸ್ವಾಮಿಯೋರಿಗೆ ಬಹುಮತ ಸಿಕ್ಕಿಲ್ಲ ಅನ್ನೋ ನೋವು ನನಿಗೆ ಇರೋದು ನಿಜಾ… ಅಧಿಕಾರ ಕೊಟ್ರೂ ದೇವ್ರು ಅವ್ರನ್ನ ಪರೀಕ್ಸ ಮಾಡ್ತಾ ಕುಂತವ್ನೆ. ಒಂದು ವರ್ಸ ಯಾವ ಚ್ಯಿಂತೇನೂ ಇಲ್ಲ. ಆಮ್ಯಾಲೆ ಹೆಂಗೋ ಗೊತ್ತಿಲ್ಲ’

– ದೇವೇಗೌಡ್ರು, ಜನತಾದಳದ ಜಾತ್ಯತೀತ ಮುತ್ಸದ್ದಿ

* * * *

`ಈ ವಿಮರ್ಶಕರು ಏನು ಅದಾರಲ್ರೀ, ಅವುರೇ ದೊಡ್ಡ ಕ್ವೊಲೆಗಡುಕರು. ಮಹಾನ್ ಪಕ್ಷಪಾತಿಗಳು. ನನ್ನ ಹೆಸುರಲ್ಲೇ `ಗೌಡ’ ಇದೆ ಅನ್ನೋ ಕಾರುಣಕ್ಕೇ ಇವುನನ್ನು ಮಟ್ಟ ಹಾಕ್ಬೇಕು ಅನ್ನೋ ಹಂತಕ್ಕೆ ವಿಮರ್ಶೆ ಇಳುದೋಗ್ಯದೆ. ಇಂಥೋರು ಗ್ವೋಡೆ, ಕಬ್ಬುಣದ ಸರಳುಗಳ್ನ ನಿರ್ಮಿಸ್ತಾ ಕುಂತವ್ರೆ. ಥೂತ್ತೇರಿ…’

– ದೊಡ್ಡರಂಗೇಗೌಡ್ರು,
ಮೋದಿ ಸ್ತುತಿಯ ಕಂಡಕಾವ್ಯ ಬರೆದು ಪದ್ಮಶ್ರೀ
ಋಣ ತೀರಿಸಿದ ಗ್ರಾಮ್ಯ ಸೊಗಡಿನ ಸಾಹಿತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಮತಾ ಬ್ಯಾನರ್ಜಿ ವಿರುದ್ಧ ಇಡಿ ಅರ್ಜಿ: ಮಾರ್ಚ್ 18ಕ್ಕೆ ವಿಚಾರಣೆ ಮುಂದೂಡಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರರ ವಿರುದ್ಧದ ಐ-ಪ್ಯಾಕ್ ಕಚೇರಿ ಶೋಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಜಾರಿ ನಿರ್ದೇಶನಾಲಯದ (ಇಡಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ...

ಚೆನ್ನೈನಲ್ಲಿ ಮಾಸಿಕ ಸಹಾಯಧನ ಹೆಚ್ಚಿಸುವಂತೆ ಹೋರಾಟ ನಡೆಸುತ್ತಿದ್ದ ಅಂಗವಿಕಲರ ಮೇಲೆ ಪೊಲೀಸ್ ದೌರ್ಜನ್ಯದ ಆರೋಪ

ಚೆನ್ನೈ: ರಾಜ್ಯ ಸರ್ಕಾರದಿಂದ ನೀಡುತ್ತಿರುವ ಮಾಸಿಕ ಸಹಾಯಧನ ಹೆಚ್ಚಿಸುವಂತೆ ಒತ್ತಾಯಿಸಿ ಚೆನ್ನೈನಲ್ಲಿ ಅಂಗವಿಕಲರು ನಡೆಸುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ.  ಅಂಗವಿಕಲರು ನಡೆಸುತ್ತಿದ್ದ ಈ ಪ್ರತಿಭಟನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಹಲವಾರು ಪ್ರತಿಭಟನಾಕಾರರನ್ನು...

ರಾಜ್ಯಸಭೆ 37 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ; ವೇಳಾಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ

10 ರಾಜ್ಯಗಳಿಂದ ಖಾಲಿ ಇರುವ 37 ಸ್ಥಾನಗಳನ್ನು ಭರ್ತಿ ಮಾಡಲು ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಬುಧವಾರ ವೇಳಾಪಟ್ಟಿ ಪ್ರಕಟಿಸಿದೆ. ಆಯೋಗದ ಪ್ರಕಾರ, ಮಾರ್ಚ್ 16 ರಂದು ಬೆಳಿಗ್ಗೆ 9:00...

ಹಿಂದೂ ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಹಿಂದೂ ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಮಂಗಳವಾರ ಲಕ್ನೋದ ಸರಸ್ವತಿ ಶಿಶು ಮಂದಿರದಲ್ಲಿ ನಡೆದ ಸಾಮಾಜಿಕ ಸಾಮರಸ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ಹಿಂದೂ...

5% ಮುಸ್ಲಿಂ ಮೀಸಲಾತಿ ಪ್ರಕ್ರಿಯೆ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರ

ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿಗಾಗಿ ಜಾತಿ ಪರಿಶೀಲನೆ ಮತ್ತು ಪ್ರಮಾಣೀಕರಣ ಪತ್ರಗಳನ್ನು ನೀಡುವ ಪ್ರಕ್ರಿಯೆಯನ್ನು ಮಹಾರಾಷ್ಟ್ರ ಸರ್ಕಾರ ಮಂಗಳವಾರ (ಫೆ.17) ರದ್ದುಗೊಳಿಸಿ ಆದೇಶ ಹೊರಡಿಸಿದೆ. ಇದು ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ತಕ್ಷಣದ ಬದಲಾವಣೆಯನ್ನು ತರದಿದ್ದರೂ,...

‘ಆರ್‌ಎಸ್‌ಎಸ್ ನೋಂದಣಿಗೆ ಕಾಂಗ್ರೆಸ್ ಕಾನೂನು ತರಲಿದೆ’: ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕುರಿತ ತಮ್ಮ ಹೇಳಿಕೆಗಳನ್ನು ಮತ್ತು ಕರಾವಳಿ ಕರ್ನಾಟಕದ ಹೂಡಿಕೆಗಳ ಮೇಲೆ ಕೋಮು ಉದ್ವಿಗ್ನತೆ ಪರಿಣಾಮ...

ವಿನೋದ್ ಅದಾನಿ ಸಹಚರರ ವಿರುದ್ಧ ತನಿಖೆ ನಡೆಸಿದ ಇಟಾಲಿಯನ್ ಬ್ಯಾಂಕ್; ಅನುಮಾನಾಸ್ಪದ ‘ಹೆಡ್ಜ್ ಫಂಡ್’ ಹೂಡಿಕೆ ಪತ್ತೆ

ಜನವರಿ 2023 ರಲ್ಲಿ ಹಿಂಡೆನ್‌ಬರ್ಗ್‌ ರಿಸರ್ಚ್ ವರದಿಯ ಬೆನ್ನಲ್ಲೇ, ಇಟಲಿಯ ಅತಿದೊಡ್ಡ ಬ್ಯಾಂಕ್ 'ಇಂಟೆಸಾ ಸ್ಯಾನ್ಪೋಲೊ' ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಅವರ ಇಬ್ಬರು ಸಹಚರರನ್ನು...

‘ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರ ಯತ್ನವಲ್ಲ’ ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

"ಹೆಣ್ಣು ಮಕ್ಕಳ ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು, ಅವರನ್ನು ಚರಂಡಿ ಕಡೆಗೆ ಅಥವಾ ಮೋರಿಯ ಅಡಿಗೆ ಎಳೆಯುವುದು 'ಅತ್ಯಾಚಾರ ಅಥವಾ ಅತ್ಯಾಚಾರ ಯತ್ನವಲ್ಲ" ಎಂಬ ಅಲಹಾಬಾದ್‌ ಹೈಕೋರ್ಟ್‌ನ ವಿವಾದಾತ್ಮಕ ತೀರ್ಪಿನ್ನು ಸುಪ್ರೀಂ...

‘ದೇವರಿಗೆ ಧನ್ಯವಾದಗಳು, ದಕ್ಷಿಣ ಇನ್ನೂ ಸ್ವತಂತ್ರವಾಗಿದೆ, ನಾವು ನಿಮ್ಮಿಂದ ಶಕ್ತಿ ಪಡೆಯುತ್ತೇವೆ’: ಕೇರಳ ಸಮ್ಮೇಳನದಲ್ಲಿ ಫಾರೂಕ್ ಅಬ್ದುಲ್ಲಾ ಭಾವುಕ ಮಾತು

"ದೇವರಿಗೆ ಧನ್ಯವಾದಗಳು, ದಕ್ಷಿಣ ಇನ್ನೂ ಸ್ವತಂತ್ರವಾಗಿದೆ, ಮತ್ತು ಅದು ಸ್ವತಂತ್ರವಾಗಿಯೇ ಉಳಿದಿದೆ ಮತ್ತು ಅಭಿವೃದ್ಧಿ ಹೊಂದುತ್ತದೆ ಮತ್ತು ಬಲಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ನಿಮ್ಮಿಂದ ಶಕ್ತಿಯನ್ನು ಪಡೆಯುತ್ತೇವೆ. ನಾವು ನಿಮ್ಮನ್ನು ನೋಡುತ್ತೇವೆ...

ದತ್ತಾಂಶ ಸಂರಕ್ಷಣಾ ಕಾನೂನಿನಡಿಯಲ್ಲಿ ಆರ್‌ಟಿಐ ತಿದ್ದುಪಡಿಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆಯ ಮೂಲಕ ಪರಿಚಯಿಸಲಾದ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿಯನ್ನು ತಡೆಹಿಡಿಯಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ ಎಂದು 'ಬಾರ್ ಮತ್ತು ಬೆಂಚ್' ವರದಿ ಮಾಡಿದೆ. ಸಾರ್ವಜನಿಕ ಹಿತಾಸಕ್ತಿಯ ಆಧಾರದ...