Homeಅಂತರಾಷ್ಟ್ರೀಯಬಿಳೇಮನಿಯ ಕರೀ ಒಪ್ಪಂದ : ಟ್ರಂಪ್‌ನಿಂದ ಭಾರತಕ್ಕಾಗುವ ಅಪಾಯಗಳೇನು?

ಬಿಳೇಮನಿಯ ಕರೀ ಒಪ್ಪಂದ : ಟ್ರಂಪ್‌ನಿಂದ ಭಾರತಕ್ಕಾಗುವ ಅಪಾಯಗಳೇನು?

- Advertisement -
- Advertisement -

ನಮ್ಮ ಬಿಳೇಮನಿ ಡೋನಾಲ್ಡಪ್ಪ ಟ್ರಂಪಣ್ಣನವರ್ ಅವರು ಮನ್ನೆ ಇಲ್ಲಿಗೆ ಬಂದು ಹೋಗ್ಯಾರ. ಅವರ ಜೊತಿಗೆ ’ಕಂಬದ ಮ್ಯಾಲಿನಾ ಗೊಂಬಿಯೇ ನಂಬಲೇನ ನಿನ್ನ ಮಾತನ್ನ’ ಅನಕೊತ ಅವರ ಮ್ಯಾಲಿನಾನೂ ಬಂದಿದ್ರು. ಅವರ ಅಳಿಯ ಮಗಳೂ ಬಂದಿದ್ರು, ಇಂಡಿಯಾದಾಗಿನ ಐದು ಟ್ರಂಪು ಹೊಟೆಲು ಹೆಂಗ ನಡದಾವು, ಅದರ ಮುನೀಮರು ಸಮಾ ಲೆಕ್ಕಾ ಇಟ್ಟಾರೋ ಇಲ್ಲೋ ಅಂತ ನೋಡಲಿಕ್ಕೆ, ಅವರು ಕೊಡೋ ಡಾಲರು ಕಾಸಿಗೆ ಇಲ್ಲಿ ಕೆಲಸ ಮಾಡೋ ಮೆದು ಸರಕು (ಸಾಫ್ಟವೇರ್) ಕೂಲಿಗಳು ಸಮಾ ದುಡಿಲಿಕ್ಕೆ ಹತ್ಯಾವೋ ಇಲ್ಲೋ ಅಂತ, ಒಮ್ಮೆ ತೆಕ್ಕಿಗೆ ಹಾಕಿಕೊಂಡ ಅಣ್ತಮ್ಮಾ ಅಂತ ಕರದ ಇಲ್ಲಿನ ರಾಜಕಾರಣಿಗಳು ತಮ್ಮ ಆಣತಿಗೆ ತಕ್ಕಂಗ ಕೆಲಸ ಮಾಡಲಿಕ್ಕೆ ಹತ್ಯಾರೋ ಇಲ್ಲೋ ಅಂತೆಲ್ಲಾ ನೋಡಲಿಕ್ಕೆ, ಅಲ್ಲಿಂದಾ ಅಧಿಕಾರಿಗಳೂ ಬಂದಿದ್ದರು.

ಆ ಮನಷ್ಯ, (ಅವರ ಬಗ್ಗೆ ಈ ಶಬ್ದ ಉಪಯೋಗಿಸೋದು ಕೆಲವರಿಗೆ ಸರಿ ಕಾಣಂಗಿಲ್ಲ, ಇರ್ಲಿ) ಇಲ್ಲಿ ಬಂದು, ನಮ್ಮ ಪ್ರಧಾನಿನ ಹಗ್ಗು ಮಾಡಿ, ಇದು ಬರೀ ನಮ್ಮಿಬ್ಬರ ಹಗ್ಗಲ್ಲಾ, ಇದು ವಿಶ್ವದ ಅತಿದೊಡ್ಡ ಹಾಗೂ ವಿಶ್ವದ ಹಳೆಯ ಪ್ರಜಾಪ್ರಭುತ್ವಗಳ ಸ್ನೇಹದ ಪ್ರತೀಕ. ಅಮೆರಿಕಾಗೆ ಪ್ರಿಯವಾದ ದೇಶ ಭಾರತ. ಅಮೆರಿಕಾ ಯಾವಾಗಲೂ ಭಾರತಕ್ಕೆ ನಂಬಿಕಸ್ತ ಸ್ನೇಹಿತನಾಗಿ, ನಿಷ್ಠಾವಂತನಾಗಿ ಇರುತ್ತದೆ.. ಅಂತೆಲ್ಲಾ ಭಾಷಣ ಮಾಡಿದರು.

ಬರೇ ಮೂವತ್ತಾರು ತಾಸು ಇಲ್ಲಿ ಇದ್ದು, ಸುಮಾರು ನೂರು ಕೋಟಿ ರೂಪಾಯಿ ಬಡವರ ರೊಕ್ಕ ಖರ್ಚು ಮಾಡಿ ವಾಪಸು ಹೋದರು. ಹೋದ ಕೆಲವೇ ದಿನಕ್ಕ ಅಫಘಾನಿಸ್ತಾನದ ತಾಲಿಬಾನಿನ ಜೊತೆಗೆ ಶಾಂತಿ ಒಪ್ಪಂದ ಮಾಡಿಕೊಂಡರು.

ಆ ಅಣುಕು ಯುದ್ಧದ ಹಿನ್ನೆಲೆ ಏನು?

ಕಳೆದ 20 ವರ್ಷದ ತಾಲಿಬಾನು ಜೊತೆ ಯುದ್ಧ ಸುಮಾರು 2,500 ಅಮೆರಿಕನ್ ಸೈನಿಕರನ್ನ ಬಲಿ ತೊಗೊಂಡದ. ಅಲ್ ಕೈದಾದವರು ಅಮೆರಿಕಾದ ಮ್ಯಾಲೆ 2001 ರಾಗ ಭಯೋತ್ಪಾದಕ ದಾಳಿ ಮಾಡಿದಾಗ ಮೂರು ಸಾವಿರಕ್ಕ ನಾಕು ಜನ ಕಮ್ಮಿ (2,996) ಅಮೆರಿಕಾ ಹಾಗೂ ಇತರ ದೇಶದ ಜನ ಬಲಿ ಆಗಿದ್ದರು. ಅವರಿಗೆ ತಾಲಿಬಾನಿನವರು ಬೆಂಬಲ ಕೊಟ್ಟಾರ ಅಂತ ಹೇಳಿ ಅಮೇರಿಕಾದವರು ಇವರ ಮ್ಯಾಲೆ ಮುಗಿಬಿದ್ದರು. ಅಮೆರಿಕದ ನಾಲ್ಕು ವಿಮಾನಗಳನ್ನು ಹೈಜಾಕು ಮಾಡಿದ 19 ಜನರೊಳಗ 15 ಜನ ಸೌದಿ ಅರೇಬಿಯಾದವರು ಇದ್ದರು. ಆದರ ಅಮೆರಿಕದವರ ತೈಲ ರಾಜಕಾರಣದಿಂದ ಸೌದಿ ಮ್ಯಾಲೆ ಯಾವ ವಿಚಾರಣೆನೂ ಆಗಲಿಲ್ಲ. ಅಫಘಾನಿಸ್ತಾನದಾಗ ಭಾರತವೂ ಸೇರಿದಂತೆ ಸುಮಾರು 15 ದೇಶಗಳ ಶಾಂತಿಸ್ಥಾಪನಾ ಪಡೆ ಹೋಗಿ ಮುಕ್ಕಾಂ ಹೂಡಿತು. ಅಲ್ಲಿ ಚುನಾವಣೆ ಆಗಿ ಹಾಮಿದ ಕರಝಾಯಿ ಅಧಿಕಾರಕ್ಕೆ ಬಂದರು. ಅವರು ತಮ್ಮ ದೇಶದ ಕಾನೂನು ಸುವ್ಯವಸ್ಥೆ ಕಾಪಾಡಲಿಕ್ಕೆ ಆಗಲಿಲ್ಲ ಅಂತ ಹೇಳಿ ಅವರನ್ನು ಸುಪರ್ ಪಾವರುಗಳು ಕೈಹಿಡೀಲಿಲ್ಲ. ಯುದ್ಧ ನಡೀತಲೇ ಇತ್ತು. ಅದರಾಗ ಅನೇಕ ನಾಗರಿಕರು ಸತ್ತು ಹೋದರು. ಇದು ಯಾರ ಅಂತರಾತ್ಮವನ್ನೂ ಕಲುಕಲಿಲ್ಲ.

ಕಡಿಕೆ ಅಮೆರಿಕಾದಾಗ ನಮ್ಮ ಹುಡುಗರು – ಹುಡುಗಿಯರು ಅಫಘಾನಿಸ್ತಾನದಾಗ ಸಾಯಲಿಕ್ಕೆ ಹತ್ಯಾರ. ಇದು ತಪ್ಪು ಅವರನ್ನು ವಾಪಸ ಕರಿಸಿಕೋರಿ ಅಂತ ಆಂದೋಲನ ಸುರು ಆತು. ಟ್ರಂಪಣ್ಣನವರು ಅದಕ್ಕೊಂದು ಅಧ್ಯಯನ ಸಮಿತಿ ರಚಿಸಿದರು. ಅವರ ಶಿಫಾರಸಿನ ಪ್ರಕಾರ ಈ ಒಪ್ಪಂದಕ್ಕ ಸಹಿ ಮಾಡಲಾಯಿತು.

ಆ ಶಾಂತಿ ಒಪ್ಪಂದದೊಳಗ ಏನದ?

ಈ ಒಪ್ಪಂದ ಜಾರಿಯಾದ ಒಂದು ವರ್ಷದೊಳಗ ಅಫಘಾನಿಸ್ತಾನದಾಗ ಭಯೋತ್ಪಾದನಾ ವಿರೋಧಿ ಪಡೆಯ ಎಲ್ಲಾ ಅಮೇರಿಕಾ ಸೈನಿಕರು ವಾಪಸು ಹೋಗಬೇಕು.

ಆ ಮ್ಯಾಲಿನ 14 ತಿಂಗಳೊಳಗ ಎಲ್ಲಾ ಸೈನಿಕರು ವಾಪಸು ಆಗಬೇಕು. ಅಫಘಾನಿಸ್ತಾನ ಹಾಗೂ ಸುತ್ತಲಿನ ದೇಶದೊಳಗ ಇರೋ ಅಮೆರಿಕಾ ಸೈನಿಕ ಶಿಬಿರಗಳನ್ನು ಮುಚ್ಚಬೇಕು.

ಒಂದು ವರ್ಷದೊಳಗ ಐದು ಸಾವಿರ ಅಮೆರಿಕಾ, ಅಫಘಾನಿಸ್ತಾನ ಹಾಗೂ ಇತರ ದೇಶದ ಜೈಲಿನೊಳಗ ಇರೋ ತಾಲಿಬಾನಿ ಸೈನಿಕರು, ಶಂಕಿತ ಭಯೋತ್ಪಾದಕರ ಬಿಡುಗಡೆ ಆಗಬೇಕು. ಮುಂದಿನ ವರ್ಷದೊಳಗ ಎಲ್ಲಾ ತಾಲಿಬಾನಿ ಕೈದಿಗಳ ಬಿಡುಗಡೆ ಆಗಬೇಕು ಇತ್ಯಾದಿ, ಇತ್ಯಾದಿ.

ಇವುಗಳ ಬದಲಾಗಿ ಆ ದೇಶ ಅಮೆರಿಕಾಗೆ ಏನು ಕೊಡತದ? ʻಅಫಘಾನಿಸ್ತಾನದ ನೆಲದಲ್ಲಿ ಅಮೆರಿಕಾದ ಸುರಕ್ಷೆಗೆ ಭಂಗ ಬರೋ ಯಾವುದೇ ಕೆಲಸಕ್ಕೆ ಆಸ್ಪದ ಕೊಡೋದಿಲ್ಲʼ ಅನ್ನೋ ಭರವಸೆ. ಈ ಭರವಸೆಯನ್ನು ಕಾನೂನುಪ್ರಕಾರ ಜಾರಿ ಮಾಡೋರು ಯಾರು? ಯಾರೂ ಇಲ್ಲ. ಯಾಕಂದರ ಅಫಘಾನಿಸ್ತಾನದ ಕೆಲವು ಪ್ರದೇಶಗಳಲ್ಲಿ ಇರೋ ತಾಲಿಬಾನಿನ ಸರಕಾರವನ್ನು ಅಮೆರಿಕಾ ಮಾನ್ಯ ಮಾಡೋದಿಲ್ಲ. ʻʻತಾಲಿಬಾನು ಸರಕಾರವನ್ನು ಅಮೆರಿಕಾ ಮಾನ್ಯ ಮಾಡುವುದಿಲ್ಲವಾದ್ದರಿಂದ ಅದನ್ನು ತಾಲಿಬಾನ ಸಂಘಟನೆ ಎಂದು ಪರಿಗಣಿಸುತ್ತದೆ. ಇದರ ಜೊತೆ ಅಮೆರಿಕಾ ಒಪ್ಪಂದ ಮಾಡಿಕೊಳ್ಳುತ್ತಿದೆʼʼ ಅಂತಲೇ ಆ ಒಪ್ಪಂದ ಸುರು ಆಗತದ.

ʻಜಾರಿ ಮಾಡಲಾಗದಂತ ಒಪ್ಪಂದವನ್ನು ಮಾಡಿಕೊಳ್ಳಬಾರದುʼ ಎನ್ನುವುದು ಕರಾರು ಕಾನೂನಿನ ಮೂಲ ಮಂತ್ರ. ವಿಶ್ವದ ಅತಿಹೆಚ್ಚು ಶಕ್ತಿಶಾಲಿ ರಾಷ್ಟ್ರ ಅಮೆರಿಕಾಕ್ಕೆ ಇದು ಗೊತ್ತಿರಲಿಕ್ಕಿಲ್ಲೇನು?

ಇದು ಯಾಕೆ ಹಾಸ್ಯಾಸ್ಪದ?

ಇದು ಹಾಸ್ಯಾಸ್ಪದ ಒಪ್ಪಂದ. ಇದು ಅಮೆರಿಕಾಕ್ಕೆ ಆದ ಅತಿದೊಡ್ಡ ಅವಮಾನ ಅಂತ ಅಮೆರಿಕಾದ ಪತ್ರಿಕೆಗಳು ಟೀಕೆ ಮಾಡ್ಯಾವು. ಟೈಮ್ ಮ್ಯಾಗಜೀನ್ ಅಂತೂ ಯುದ್ಧ ಸೋತು ಹೋದ ಟ್ರಂಪ್ ಅವರು ಮುಖ ಮುಚ್ಚಿಕೊಳ್ಳಲಾಗದೇ ಮಾಡಿದ ಒಪ್ಪಂದ. ಇದು ಅಮೆರಿಕಾದ ಸಾರ್ವಭೌಮತೆಗೆ ಮಾಡಿದ ಹಾನಿ ಅಂತ ಅಗ್ರಲೇಖನ ಬರೀತು. ವಿಯೆಟ್ನಾಂನ ಸೋಲಿನ ನಂತರ ಇದು ಅಮೆರಿಕಾದ ಅತಿದೊಡ್ಡ ಸೋಲು. ಇದು ಒಪ್ಪಂದ ಅಲ್ಲ. ಪಲಾಯನ. ದೇಶಕ್ಕಾಗಿ ಜೀವಕೊಟ್ಟ ಸೈನಿಕರ ಅವಮಾನ ಅಂತೆಲ್ಲಾ ಟೀಕಿಸಿತು.

ಇದು ಭಾರತಕ್ಕೆ ಯಾಕೆ ಅಪಾಯಕಾರಿ?

ಈಗ ಅಜಿತ ದೋವಾಲ ಅಂತ ಒಬ್ಬರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಂತ ಇದ್ದಾರ. ಅವರು ಅಟಲ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಗೃಹ ಇಲಾಖೆಯ ದೊಡ್ಡ ಹುದ್ದೆಯೊಳಗ ಇದ್ದರು. ಭಾರತೀಯ ವಿಮಾನವನ್ನು ಹರಕತ್ ಉಲ್ ಮುಜಾಹಿದೀನ್ ಭಯೋತ್ಪಾದಕರು 1999 ರಲ್ಲಿ ಅಪಹರಿಸಿರು. ಅದನ್ನ ತೊಗೊಂಡು ಹೋಗಿ ಅಫಘಾನಿಸ್ತಾನದಾಗ ಇಳಿಸಿದರು. ಅಲ್ಲೆ ಅವರಿಗೆ ಸಿರಿಯಾ ದೇಶದ ಭಯೋತ್ಪಾದಕರ ಬೆಂಬಲ ಇತ್ತು. ಅಪಹರಣಕಾರರು ಭಯೋತ್ಪಾದನೆ ಆರೋಪದ ಮ್ಯಾಲೆ ಬಂಧನದೊಳಗಿದ್ದ ಮಜೂರ ಅಸದ, ಸಯೀದ ಶೇಖ ಹಾಗೂ ಅಹಮದ ಜರಗರ ಅವರನ್ನ ಬಿಡುಗಡೆ ಮಾಡೋ ಶರತ್ತು ಹಾಕಿದರು. ನಮ್ಮ ಗೂಢಚಾರಿ ಅಜಿತ ದೋವಾಲ ಅವರು ಈ ಮೂರು ಜನರನ್ನ ನಾಜೂಕಾಗಿ ಕರಕೊಂಡು ಹೋಗಿ ಕಂದಹಾರದಾಗ ಬಿಟ್ಟು ಬಂದರು. ಆ ಮಜೂರ ಅಸದ ಅವರು ಈಗ ಪಾಕಿಸ್ತಾನದಾಗ ರಾಜಕೀಯ ಪಕ್ಷ ಹುಟ್ಟು ಹಾಕ್ಯಾರ. ಅವರನ್ನು ಹಳೆ ಅಪರಾಧಗಳ ಆಧಾರದ ಮ್ಯಾಲೆ ನಮಗ ಬಿಟ್ಟು ಕೊಡ್ರಿ ಅಂತ ಭಾರತದವರೇನೂ ಪಾಕಿಸ್ತಾನವನ್ನು ಕೇಳಿಲ್ಲ. ಕಳೆದ ಆರು ವರ್ಷದಾಗೂ ಕೇಳಿಲ್ಲ.

ನಾಳೆ ಟ್ರಂಪಣ್ಣನವರ ಹರಕತ್ತಿನಿಂದ ಬಿಡುಗಡೆ ಆಗಲಿರುವ ತಾಲಿಬಾನಿ ಕೈದಿಗಳ ಪೈಕಿ ಅಫಘಾನಿಸ್ತಾನ, ಸಿರಿಯಾದವರೂ ಸೇರಿದಂತೆ ಅನೇಕ ದೇಶದ ಭಯೋತ್ಪಾದಕರು ಇದ್ದಾರ. ಅವರನ್ನ ಹೊರಗ ಬಿಟ್ಟರ ಅವರು ಭಾರತವೂ ಸೇರಿದಂತೆ ಅನೇಕ ದೇಶಗಳಿಗೆ ಅಪಾಯ ಉಂಟುಮಾಡೋ ಸಾಧ್ಯತೆ ಅದ. ʻಅವರನ್ನು ಬಿಡಬ್ಯಾಡರಿ, ಅವರು ನಮಗೆ ಅಪಾಯಕಾರಿʼ ಅಂತ ಇವತ್ತಿನವರೆಗೂ ಟ್ರಂಪಿನವರ ಅತ್ಯಂತ ಜಿಗರಿ ದೋಸ್ತರಾದ ನಮ್ಮ ಪ್ರಧಾನಿಯಾಗಲಿ, ಅದೇ ಕೆಲಸ ಮಾಡಬೇಕಾಗಿರುವ ವಿದೇಶ ಮಂತ್ರಿ ಜಯಶಂಕರ ಅವರಾಗಲಿ, ರಕ್ಷಣಾ ಮಂತ್ರಿ, ಗೃಹ ಮಂತ್ರಿ ಅಥವಾ ಇನ್ನು ಯಾವುದೇ ಅಧಿಕಾರಿ ಒಂದು ಮಾತು ಹೇಳಿಲ್ಲ. ಅವರು ಖಾಸಗಿಯಾಗಿ ಹೇಳಿದ್ದರ ನಮಗ ಗೊತ್ತಿಲ್ಲ.

ಅದು ಬ್ಯಾರೆ ವಿಷಯ. ಆದರ ಇದರಾಗ ನಾವು ಕಲಿಯೋವಂಥಾ ಒಂದು ಪಾಠ ಅದ. ಭಾರತ ಉಪಖಂಡದ ಆಸುಪಾಸಿನ ದೇಶಗಳೆಲ್ಲರಿಗೂ ಯುದ್ಧ ಸಾಮಗ್ರಿ ಮಾರಾಟ ಮಾಡಿ ಮಜಾ ನೋಡುವ, ಭಾರತಕ್ಕೂ, ಅದರ ನೆರೆಹೊರೆಯ ಚೀನಾ- ಪಾಕಿಸ್ತಾನಕ್ಕೂ ಮದ್ದುಗುಂಡು- ವಿಮಾನ- ಹೆಲಿಕಾಪ್ಟರ್ ಮಾಡಿ, ಯುದ್ಧ ತಯಾರಿ ಮಾಡಿಸಿ, ಜಗಳ ಮಾಡಲಿಕ್ಕೆ ಅನುವು ಮಾಡಿಕೊಡೋ ಅಮೆರಿಕಾ ತಾನು ಮಾತ್ರ ತನ್ನ ಘನಘೋರ ವೈರಿ ಜೊತೆ ಶಾಂತಿಒಪ್ಪಂದ ಮಾಡಿಕೋತದ. ಇದನ್ನು, ನಮ್ಮ ನಾಯಕರು, ನಮ್ಮ ಅಧಿಕಾರಿಗಳು, ಚಿಂತಕರು, ಮಾಧ್ಯಮದವರು, ಎಲ್ಲಾದಕ್ಕೂ ಕಣ್ಣಮುಚಿಗಂಡು ಚಪ್ಪಾಳೆ ಹೊಡೆಯೋರು, ಹಾಗೂ ಈ ದೇಶದ ನಾಗರಿಕರು ತಿಳಕೋಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...