Homeಅಂತರಾಷ್ಟ್ರೀಯಬಿಳೇಮನಿಯ ಕರೀ ಒಪ್ಪಂದ : ಟ್ರಂಪ್‌ನಿಂದ ಭಾರತಕ್ಕಾಗುವ ಅಪಾಯಗಳೇನು?

ಬಿಳೇಮನಿಯ ಕರೀ ಒಪ್ಪಂದ : ಟ್ರಂಪ್‌ನಿಂದ ಭಾರತಕ್ಕಾಗುವ ಅಪಾಯಗಳೇನು?

- Advertisement -
- Advertisement -

ನಮ್ಮ ಬಿಳೇಮನಿ ಡೋನಾಲ್ಡಪ್ಪ ಟ್ರಂಪಣ್ಣನವರ್ ಅವರು ಮನ್ನೆ ಇಲ್ಲಿಗೆ ಬಂದು ಹೋಗ್ಯಾರ. ಅವರ ಜೊತಿಗೆ ’ಕಂಬದ ಮ್ಯಾಲಿನಾ ಗೊಂಬಿಯೇ ನಂಬಲೇನ ನಿನ್ನ ಮಾತನ್ನ’ ಅನಕೊತ ಅವರ ಮ್ಯಾಲಿನಾನೂ ಬಂದಿದ್ರು. ಅವರ ಅಳಿಯ ಮಗಳೂ ಬಂದಿದ್ರು, ಇಂಡಿಯಾದಾಗಿನ ಐದು ಟ್ರಂಪು ಹೊಟೆಲು ಹೆಂಗ ನಡದಾವು, ಅದರ ಮುನೀಮರು ಸಮಾ ಲೆಕ್ಕಾ ಇಟ್ಟಾರೋ ಇಲ್ಲೋ ಅಂತ ನೋಡಲಿಕ್ಕೆ, ಅವರು ಕೊಡೋ ಡಾಲರು ಕಾಸಿಗೆ ಇಲ್ಲಿ ಕೆಲಸ ಮಾಡೋ ಮೆದು ಸರಕು (ಸಾಫ್ಟವೇರ್) ಕೂಲಿಗಳು ಸಮಾ ದುಡಿಲಿಕ್ಕೆ ಹತ್ಯಾವೋ ಇಲ್ಲೋ ಅಂತ, ಒಮ್ಮೆ ತೆಕ್ಕಿಗೆ ಹಾಕಿಕೊಂಡ ಅಣ್ತಮ್ಮಾ ಅಂತ ಕರದ ಇಲ್ಲಿನ ರಾಜಕಾರಣಿಗಳು ತಮ್ಮ ಆಣತಿಗೆ ತಕ್ಕಂಗ ಕೆಲಸ ಮಾಡಲಿಕ್ಕೆ ಹತ್ಯಾರೋ ಇಲ್ಲೋ ಅಂತೆಲ್ಲಾ ನೋಡಲಿಕ್ಕೆ, ಅಲ್ಲಿಂದಾ ಅಧಿಕಾರಿಗಳೂ ಬಂದಿದ್ದರು.

ಆ ಮನಷ್ಯ, (ಅವರ ಬಗ್ಗೆ ಈ ಶಬ್ದ ಉಪಯೋಗಿಸೋದು ಕೆಲವರಿಗೆ ಸರಿ ಕಾಣಂಗಿಲ್ಲ, ಇರ್ಲಿ) ಇಲ್ಲಿ ಬಂದು, ನಮ್ಮ ಪ್ರಧಾನಿನ ಹಗ್ಗು ಮಾಡಿ, ಇದು ಬರೀ ನಮ್ಮಿಬ್ಬರ ಹಗ್ಗಲ್ಲಾ, ಇದು ವಿಶ್ವದ ಅತಿದೊಡ್ಡ ಹಾಗೂ ವಿಶ್ವದ ಹಳೆಯ ಪ್ರಜಾಪ್ರಭುತ್ವಗಳ ಸ್ನೇಹದ ಪ್ರತೀಕ. ಅಮೆರಿಕಾಗೆ ಪ್ರಿಯವಾದ ದೇಶ ಭಾರತ. ಅಮೆರಿಕಾ ಯಾವಾಗಲೂ ಭಾರತಕ್ಕೆ ನಂಬಿಕಸ್ತ ಸ್ನೇಹಿತನಾಗಿ, ನಿಷ್ಠಾವಂತನಾಗಿ ಇರುತ್ತದೆ.. ಅಂತೆಲ್ಲಾ ಭಾಷಣ ಮಾಡಿದರು.

ಬರೇ ಮೂವತ್ತಾರು ತಾಸು ಇಲ್ಲಿ ಇದ್ದು, ಸುಮಾರು ನೂರು ಕೋಟಿ ರೂಪಾಯಿ ಬಡವರ ರೊಕ್ಕ ಖರ್ಚು ಮಾಡಿ ವಾಪಸು ಹೋದರು. ಹೋದ ಕೆಲವೇ ದಿನಕ್ಕ ಅಫಘಾನಿಸ್ತಾನದ ತಾಲಿಬಾನಿನ ಜೊತೆಗೆ ಶಾಂತಿ ಒಪ್ಪಂದ ಮಾಡಿಕೊಂಡರು.

ಆ ಅಣುಕು ಯುದ್ಧದ ಹಿನ್ನೆಲೆ ಏನು?

ಕಳೆದ 20 ವರ್ಷದ ತಾಲಿಬಾನು ಜೊತೆ ಯುದ್ಧ ಸುಮಾರು 2,500 ಅಮೆರಿಕನ್ ಸೈನಿಕರನ್ನ ಬಲಿ ತೊಗೊಂಡದ. ಅಲ್ ಕೈದಾದವರು ಅಮೆರಿಕಾದ ಮ್ಯಾಲೆ 2001 ರಾಗ ಭಯೋತ್ಪಾದಕ ದಾಳಿ ಮಾಡಿದಾಗ ಮೂರು ಸಾವಿರಕ್ಕ ನಾಕು ಜನ ಕಮ್ಮಿ (2,996) ಅಮೆರಿಕಾ ಹಾಗೂ ಇತರ ದೇಶದ ಜನ ಬಲಿ ಆಗಿದ್ದರು. ಅವರಿಗೆ ತಾಲಿಬಾನಿನವರು ಬೆಂಬಲ ಕೊಟ್ಟಾರ ಅಂತ ಹೇಳಿ ಅಮೇರಿಕಾದವರು ಇವರ ಮ್ಯಾಲೆ ಮುಗಿಬಿದ್ದರು. ಅಮೆರಿಕದ ನಾಲ್ಕು ವಿಮಾನಗಳನ್ನು ಹೈಜಾಕು ಮಾಡಿದ 19 ಜನರೊಳಗ 15 ಜನ ಸೌದಿ ಅರೇಬಿಯಾದವರು ಇದ್ದರು. ಆದರ ಅಮೆರಿಕದವರ ತೈಲ ರಾಜಕಾರಣದಿಂದ ಸೌದಿ ಮ್ಯಾಲೆ ಯಾವ ವಿಚಾರಣೆನೂ ಆಗಲಿಲ್ಲ. ಅಫಘಾನಿಸ್ತಾನದಾಗ ಭಾರತವೂ ಸೇರಿದಂತೆ ಸುಮಾರು 15 ದೇಶಗಳ ಶಾಂತಿಸ್ಥಾಪನಾ ಪಡೆ ಹೋಗಿ ಮುಕ್ಕಾಂ ಹೂಡಿತು. ಅಲ್ಲಿ ಚುನಾವಣೆ ಆಗಿ ಹಾಮಿದ ಕರಝಾಯಿ ಅಧಿಕಾರಕ್ಕೆ ಬಂದರು. ಅವರು ತಮ್ಮ ದೇಶದ ಕಾನೂನು ಸುವ್ಯವಸ್ಥೆ ಕಾಪಾಡಲಿಕ್ಕೆ ಆಗಲಿಲ್ಲ ಅಂತ ಹೇಳಿ ಅವರನ್ನು ಸುಪರ್ ಪಾವರುಗಳು ಕೈಹಿಡೀಲಿಲ್ಲ. ಯುದ್ಧ ನಡೀತಲೇ ಇತ್ತು. ಅದರಾಗ ಅನೇಕ ನಾಗರಿಕರು ಸತ್ತು ಹೋದರು. ಇದು ಯಾರ ಅಂತರಾತ್ಮವನ್ನೂ ಕಲುಕಲಿಲ್ಲ.

ಕಡಿಕೆ ಅಮೆರಿಕಾದಾಗ ನಮ್ಮ ಹುಡುಗರು – ಹುಡುಗಿಯರು ಅಫಘಾನಿಸ್ತಾನದಾಗ ಸಾಯಲಿಕ್ಕೆ ಹತ್ಯಾರ. ಇದು ತಪ್ಪು ಅವರನ್ನು ವಾಪಸ ಕರಿಸಿಕೋರಿ ಅಂತ ಆಂದೋಲನ ಸುರು ಆತು. ಟ್ರಂಪಣ್ಣನವರು ಅದಕ್ಕೊಂದು ಅಧ್ಯಯನ ಸಮಿತಿ ರಚಿಸಿದರು. ಅವರ ಶಿಫಾರಸಿನ ಪ್ರಕಾರ ಈ ಒಪ್ಪಂದಕ್ಕ ಸಹಿ ಮಾಡಲಾಯಿತು.

ಆ ಶಾಂತಿ ಒಪ್ಪಂದದೊಳಗ ಏನದ?

ಈ ಒಪ್ಪಂದ ಜಾರಿಯಾದ ಒಂದು ವರ್ಷದೊಳಗ ಅಫಘಾನಿಸ್ತಾನದಾಗ ಭಯೋತ್ಪಾದನಾ ವಿರೋಧಿ ಪಡೆಯ ಎಲ್ಲಾ ಅಮೇರಿಕಾ ಸೈನಿಕರು ವಾಪಸು ಹೋಗಬೇಕು.

ಆ ಮ್ಯಾಲಿನ 14 ತಿಂಗಳೊಳಗ ಎಲ್ಲಾ ಸೈನಿಕರು ವಾಪಸು ಆಗಬೇಕು. ಅಫಘಾನಿಸ್ತಾನ ಹಾಗೂ ಸುತ್ತಲಿನ ದೇಶದೊಳಗ ಇರೋ ಅಮೆರಿಕಾ ಸೈನಿಕ ಶಿಬಿರಗಳನ್ನು ಮುಚ್ಚಬೇಕು.

ಒಂದು ವರ್ಷದೊಳಗ ಐದು ಸಾವಿರ ಅಮೆರಿಕಾ, ಅಫಘಾನಿಸ್ತಾನ ಹಾಗೂ ಇತರ ದೇಶದ ಜೈಲಿನೊಳಗ ಇರೋ ತಾಲಿಬಾನಿ ಸೈನಿಕರು, ಶಂಕಿತ ಭಯೋತ್ಪಾದಕರ ಬಿಡುಗಡೆ ಆಗಬೇಕು. ಮುಂದಿನ ವರ್ಷದೊಳಗ ಎಲ್ಲಾ ತಾಲಿಬಾನಿ ಕೈದಿಗಳ ಬಿಡುಗಡೆ ಆಗಬೇಕು ಇತ್ಯಾದಿ, ಇತ್ಯಾದಿ.

ಇವುಗಳ ಬದಲಾಗಿ ಆ ದೇಶ ಅಮೆರಿಕಾಗೆ ಏನು ಕೊಡತದ? ʻಅಫಘಾನಿಸ್ತಾನದ ನೆಲದಲ್ಲಿ ಅಮೆರಿಕಾದ ಸುರಕ್ಷೆಗೆ ಭಂಗ ಬರೋ ಯಾವುದೇ ಕೆಲಸಕ್ಕೆ ಆಸ್ಪದ ಕೊಡೋದಿಲ್ಲʼ ಅನ್ನೋ ಭರವಸೆ. ಈ ಭರವಸೆಯನ್ನು ಕಾನೂನುಪ್ರಕಾರ ಜಾರಿ ಮಾಡೋರು ಯಾರು? ಯಾರೂ ಇಲ್ಲ. ಯಾಕಂದರ ಅಫಘಾನಿಸ್ತಾನದ ಕೆಲವು ಪ್ರದೇಶಗಳಲ್ಲಿ ಇರೋ ತಾಲಿಬಾನಿನ ಸರಕಾರವನ್ನು ಅಮೆರಿಕಾ ಮಾನ್ಯ ಮಾಡೋದಿಲ್ಲ. ʻʻತಾಲಿಬಾನು ಸರಕಾರವನ್ನು ಅಮೆರಿಕಾ ಮಾನ್ಯ ಮಾಡುವುದಿಲ್ಲವಾದ್ದರಿಂದ ಅದನ್ನು ತಾಲಿಬಾನ ಸಂಘಟನೆ ಎಂದು ಪರಿಗಣಿಸುತ್ತದೆ. ಇದರ ಜೊತೆ ಅಮೆರಿಕಾ ಒಪ್ಪಂದ ಮಾಡಿಕೊಳ್ಳುತ್ತಿದೆʼʼ ಅಂತಲೇ ಆ ಒಪ್ಪಂದ ಸುರು ಆಗತದ.

ʻಜಾರಿ ಮಾಡಲಾಗದಂತ ಒಪ್ಪಂದವನ್ನು ಮಾಡಿಕೊಳ್ಳಬಾರದುʼ ಎನ್ನುವುದು ಕರಾರು ಕಾನೂನಿನ ಮೂಲ ಮಂತ್ರ. ವಿಶ್ವದ ಅತಿಹೆಚ್ಚು ಶಕ್ತಿಶಾಲಿ ರಾಷ್ಟ್ರ ಅಮೆರಿಕಾಕ್ಕೆ ಇದು ಗೊತ್ತಿರಲಿಕ್ಕಿಲ್ಲೇನು?

ಇದು ಯಾಕೆ ಹಾಸ್ಯಾಸ್ಪದ?

ಇದು ಹಾಸ್ಯಾಸ್ಪದ ಒಪ್ಪಂದ. ಇದು ಅಮೆರಿಕಾಕ್ಕೆ ಆದ ಅತಿದೊಡ್ಡ ಅವಮಾನ ಅಂತ ಅಮೆರಿಕಾದ ಪತ್ರಿಕೆಗಳು ಟೀಕೆ ಮಾಡ್ಯಾವು. ಟೈಮ್ ಮ್ಯಾಗಜೀನ್ ಅಂತೂ ಯುದ್ಧ ಸೋತು ಹೋದ ಟ್ರಂಪ್ ಅವರು ಮುಖ ಮುಚ್ಚಿಕೊಳ್ಳಲಾಗದೇ ಮಾಡಿದ ಒಪ್ಪಂದ. ಇದು ಅಮೆರಿಕಾದ ಸಾರ್ವಭೌಮತೆಗೆ ಮಾಡಿದ ಹಾನಿ ಅಂತ ಅಗ್ರಲೇಖನ ಬರೀತು. ವಿಯೆಟ್ನಾಂನ ಸೋಲಿನ ನಂತರ ಇದು ಅಮೆರಿಕಾದ ಅತಿದೊಡ್ಡ ಸೋಲು. ಇದು ಒಪ್ಪಂದ ಅಲ್ಲ. ಪಲಾಯನ. ದೇಶಕ್ಕಾಗಿ ಜೀವಕೊಟ್ಟ ಸೈನಿಕರ ಅವಮಾನ ಅಂತೆಲ್ಲಾ ಟೀಕಿಸಿತು.

ಇದು ಭಾರತಕ್ಕೆ ಯಾಕೆ ಅಪಾಯಕಾರಿ?

ಈಗ ಅಜಿತ ದೋವಾಲ ಅಂತ ಒಬ್ಬರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಂತ ಇದ್ದಾರ. ಅವರು ಅಟಲ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಗೃಹ ಇಲಾಖೆಯ ದೊಡ್ಡ ಹುದ್ದೆಯೊಳಗ ಇದ್ದರು. ಭಾರತೀಯ ವಿಮಾನವನ್ನು ಹರಕತ್ ಉಲ್ ಮುಜಾಹಿದೀನ್ ಭಯೋತ್ಪಾದಕರು 1999 ರಲ್ಲಿ ಅಪಹರಿಸಿರು. ಅದನ್ನ ತೊಗೊಂಡು ಹೋಗಿ ಅಫಘಾನಿಸ್ತಾನದಾಗ ಇಳಿಸಿದರು. ಅಲ್ಲೆ ಅವರಿಗೆ ಸಿರಿಯಾ ದೇಶದ ಭಯೋತ್ಪಾದಕರ ಬೆಂಬಲ ಇತ್ತು. ಅಪಹರಣಕಾರರು ಭಯೋತ್ಪಾದನೆ ಆರೋಪದ ಮ್ಯಾಲೆ ಬಂಧನದೊಳಗಿದ್ದ ಮಜೂರ ಅಸದ, ಸಯೀದ ಶೇಖ ಹಾಗೂ ಅಹಮದ ಜರಗರ ಅವರನ್ನ ಬಿಡುಗಡೆ ಮಾಡೋ ಶರತ್ತು ಹಾಕಿದರು. ನಮ್ಮ ಗೂಢಚಾರಿ ಅಜಿತ ದೋವಾಲ ಅವರು ಈ ಮೂರು ಜನರನ್ನ ನಾಜೂಕಾಗಿ ಕರಕೊಂಡು ಹೋಗಿ ಕಂದಹಾರದಾಗ ಬಿಟ್ಟು ಬಂದರು. ಆ ಮಜೂರ ಅಸದ ಅವರು ಈಗ ಪಾಕಿಸ್ತಾನದಾಗ ರಾಜಕೀಯ ಪಕ್ಷ ಹುಟ್ಟು ಹಾಕ್ಯಾರ. ಅವರನ್ನು ಹಳೆ ಅಪರಾಧಗಳ ಆಧಾರದ ಮ್ಯಾಲೆ ನಮಗ ಬಿಟ್ಟು ಕೊಡ್ರಿ ಅಂತ ಭಾರತದವರೇನೂ ಪಾಕಿಸ್ತಾನವನ್ನು ಕೇಳಿಲ್ಲ. ಕಳೆದ ಆರು ವರ್ಷದಾಗೂ ಕೇಳಿಲ್ಲ.

ನಾಳೆ ಟ್ರಂಪಣ್ಣನವರ ಹರಕತ್ತಿನಿಂದ ಬಿಡುಗಡೆ ಆಗಲಿರುವ ತಾಲಿಬಾನಿ ಕೈದಿಗಳ ಪೈಕಿ ಅಫಘಾನಿಸ್ತಾನ, ಸಿರಿಯಾದವರೂ ಸೇರಿದಂತೆ ಅನೇಕ ದೇಶದ ಭಯೋತ್ಪಾದಕರು ಇದ್ದಾರ. ಅವರನ್ನ ಹೊರಗ ಬಿಟ್ಟರ ಅವರು ಭಾರತವೂ ಸೇರಿದಂತೆ ಅನೇಕ ದೇಶಗಳಿಗೆ ಅಪಾಯ ಉಂಟುಮಾಡೋ ಸಾಧ್ಯತೆ ಅದ. ʻಅವರನ್ನು ಬಿಡಬ್ಯಾಡರಿ, ಅವರು ನಮಗೆ ಅಪಾಯಕಾರಿʼ ಅಂತ ಇವತ್ತಿನವರೆಗೂ ಟ್ರಂಪಿನವರ ಅತ್ಯಂತ ಜಿಗರಿ ದೋಸ್ತರಾದ ನಮ್ಮ ಪ್ರಧಾನಿಯಾಗಲಿ, ಅದೇ ಕೆಲಸ ಮಾಡಬೇಕಾಗಿರುವ ವಿದೇಶ ಮಂತ್ರಿ ಜಯಶಂಕರ ಅವರಾಗಲಿ, ರಕ್ಷಣಾ ಮಂತ್ರಿ, ಗೃಹ ಮಂತ್ರಿ ಅಥವಾ ಇನ್ನು ಯಾವುದೇ ಅಧಿಕಾರಿ ಒಂದು ಮಾತು ಹೇಳಿಲ್ಲ. ಅವರು ಖಾಸಗಿಯಾಗಿ ಹೇಳಿದ್ದರ ನಮಗ ಗೊತ್ತಿಲ್ಲ.

ಅದು ಬ್ಯಾರೆ ವಿಷಯ. ಆದರ ಇದರಾಗ ನಾವು ಕಲಿಯೋವಂಥಾ ಒಂದು ಪಾಠ ಅದ. ಭಾರತ ಉಪಖಂಡದ ಆಸುಪಾಸಿನ ದೇಶಗಳೆಲ್ಲರಿಗೂ ಯುದ್ಧ ಸಾಮಗ್ರಿ ಮಾರಾಟ ಮಾಡಿ ಮಜಾ ನೋಡುವ, ಭಾರತಕ್ಕೂ, ಅದರ ನೆರೆಹೊರೆಯ ಚೀನಾ- ಪಾಕಿಸ್ತಾನಕ್ಕೂ ಮದ್ದುಗುಂಡು- ವಿಮಾನ- ಹೆಲಿಕಾಪ್ಟರ್ ಮಾಡಿ, ಯುದ್ಧ ತಯಾರಿ ಮಾಡಿಸಿ, ಜಗಳ ಮಾಡಲಿಕ್ಕೆ ಅನುವು ಮಾಡಿಕೊಡೋ ಅಮೆರಿಕಾ ತಾನು ಮಾತ್ರ ತನ್ನ ಘನಘೋರ ವೈರಿ ಜೊತೆ ಶಾಂತಿಒಪ್ಪಂದ ಮಾಡಿಕೋತದ. ಇದನ್ನು, ನಮ್ಮ ನಾಯಕರು, ನಮ್ಮ ಅಧಿಕಾರಿಗಳು, ಚಿಂತಕರು, ಮಾಧ್ಯಮದವರು, ಎಲ್ಲಾದಕ್ಕೂ ಕಣ್ಣಮುಚಿಗಂಡು ಚಪ್ಪಾಳೆ ಹೊಡೆಯೋರು, ಹಾಗೂ ಈ ದೇಶದ ನಾಗರಿಕರು ತಿಳಕೋಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...