Homeಅಂಕಣಗಳುಪುಟಕ್ಕಿಟ್ಟ ಪುಟಗಳುಪುಟಕ್ಕಿಟ್ಟ ಪುಟಗಳು: ಲಿಯೋ ಟಾಲ್ಸ್‌ಟಾಯ್‌ರವರ ಯುದ್ಧ ಮತ್ತು ಶಾಂತಿ

ಪುಟಕ್ಕಿಟ್ಟ ಪುಟಗಳು: ಲಿಯೋ ಟಾಲ್ಸ್‌ಟಾಯ್‌ರವರ ಯುದ್ಧ ಮತ್ತು ಶಾಂತಿ

ಯುದ್ಧಾಸ್ತ್ರಗಳು ಹೇರಳವಾಗಿ ವ್ಯಾಪಾರದ ಸರಕಾದ ಮೇಲೆ, ಹೂಡಿದ ಬಂಡವಾಳಕ್ಕೆ ಲಾಭ ತರಲು ಯುದ್ಧಗಳನ್ನು ಒಲ್ಲೆ ಒಲ್ಲೆ ಎನ್ನುತ್ತಲೇ ಕಾರಣಗಳನ್ನು ಸೃಷ್ಟಿಸುತ್ತಾರೆ ಬಲಿಷ್ಟ ರಾಷ್ಟ್ರದ ಬಂಡವಾಳದ ಕೈಗಳು.

- Advertisement -
- Advertisement -

ಲಿಯೋ ಟಾಲ್ಸ್‌ಟಾಯ್ ಅವರ ಕಾದಂಬರಿ ‘ವಾರ್ ಅಂಡ್ ಪೀಸ್’ ನಾನಾ ಕಾರಣಗಳಿಂದ ಬಹು ಪ್ರಖ್ಯಾತವಾದದ್ದು. ಆದರೆ ಟಾಲ್ಸ್‌ಟಾಯ್ ಅದನ್ನು ಕಾದಂಬರಿ ಎನ್ನದೇ ‘ಹೇಳಬೇಕೆಂದರೆ ಅದೊಂದು ಕಾವ್ಯ, ಇನ್ನೂ ಹೇಳಬೇಕೆಂದರೆ ಅದು ಚರಿತ್ರೆಯ ಕಾಲಾನುಕ್ರಮಣಿಕೆ’ ಎನ್ನುತ್ತಾರೆ. ಕಾದಂಬರಿಯಲ್ಲಿ ಬಹುಪಾಲು ತಾತ್ವಿಕ ಚರ್ಚೆಗಳು ಮತ್ತು ಸಂವಾದಗಳಿದ್ದು ಕಾದಂಬರಿಯ ವ್ಯಾಪ್ತಿಗೆ ಸೇರುವಂತಹ ವಿವರ ಪ್ರವರಗಳಿಂದ ಹೊರತಾಗಿದೆ.

ಸ್ಥೂಲವಾಗಿ ‘ಯುದ್ಧ ಮತ್ತು ಶಾಂತಿ’ಯ ಭೂಮಿಕೆಯನ್ನು ಗುರುತಿಸುವುದಾದರೆ ನೆಪೋಲಿಯನ್ ರಶಿಯಾದ ಮೇಲೆ 1812ರಲ್ಲಿ ಮಾಡಿದ ದಾಳಿಯ ಕಥನವದು. ಆದರೆ ಆ ಸನ್ನಿವೇಶದಲ್ಲಿ ಜಮೀನುದಾರನೊಬ್ಬನ ಅಕ್ರಮ ಸಂತಾನದ ಫಲವಾದ ಪಿಯರೆ ಬೆಜುಕೋವ್ ತನ್ನ ಸ್ವಾಮಿತ್ವಕ್ಕಾಗಿ ಹೋರಾಡುತ್ತಾ ತನ್ನ ತಾತ್ವಿಕ ಸಾರ್ಥಕತೆಗಾಗಿ ಹೆಣಗಾಡುವ ಕಥೆ ಇದಾಗಿದೆ. ಹಾಗಂತ ಒಂದು ವ್ಯಕ್ತಿಯ ಸುತ್ತಲಿನ ಕತೆಯಲ್ಲವಿದು. ನೂರಾರು ಪಾತ್ರಗಳನ್ನು ಹೊಂದಿರುವ ಈ ಕಥನದಲ್ಲಿ ಯುದ್ಧ, ಶಾಂತಿ, ಮುದಿತನ, ಯೌವನ, ಸಾವು, ಮದುವೆ, ಭಿನ್ನಸ್ತರಗಳ ಬದುಕುಗಳನ್ನೆಲ್ಲಾ ಚರ್ಚಿಸುತ್ತಾ ಹೋಗುವುದರಿಂದ, ರಶಿಯಾದ ಸಾಮಾಜಿಕ ಪ್ರಭಾವಗಳು ವಿವಿಧ ವರ್ಗ ಮತ್ತು ಕ್ಷೇತ್ರಗಳ ವ್ಯಕ್ತಿಗಳ ಮೇಲೆ ಎಂತೆಂತಹ ಪ್ರಭಾವಗಳನ್ನು ಬೀರಿದ್ದವು ಎಂಬುದರ ಅನಾವರಣವಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ವಿಷಯಗಳನ್ನು ನಿಷ್ಟುರವಾಗಿ, ಪ್ರಾಮಾಣಿಕವಾಗಿ ಮತ್ತು ಪಕ್ಷಪಾತರಹಿತವಾಗಿ ನೋಡುವುದು.

ಈ ಕಾದಂಬರಿಯ ಸೌಂದರ್ಯವೇ ಅದು. ವಸ್ತುವಿಷಯಗಳನ್ನು ಯಥಾಸ್ಥಿತಿಯಲ್ಲಿ ಸಾಕ್ಷೀಕರಿಸುವುದು. ಆದರೆ ಯಥಾಸ್ಥಿತಿವಾದವನ್ನು ಖಂಡಿಸುವುದು. ಅಥವಾ ಪುರೋಗಾಮಿತನವನ್ನು ಬಯಸುವುದು. ರಾಜಕುಮಾರ ಆಂಡ್ರೀ ಬೊಲ್ಕೊನ್ಸ್ಕಿ ತನ್ನ ಕುಟುಂಬವನ್ನು ಬಿಟ್ಟು ನೆಪೋಲಿಯನ್ ವಿರುದ್ಧವಾಗಿ ಯುದ್ಧಕ್ಕಾಗಿ ತೆರಳುವನು. ಅವನ ಮತ್ತು ನಟಾಶ ರೊಸ್ತೋವ್, ಕುಲೀನ ಮನೆತನದ ಸುಂದರವಾದ ಹುಡುಗಿಯ ನಡುವಿನ ಪ್ರಸಂಗಗಳು, ವ್ಯಕ್ತಿಗತವಾದ ಸೆಳೆತಗಳು, ಕುಟುಂಬದ ಘನತೆ ಮತ್ತು ಸಾಂದರ್ಭಿಕ ಅನಿವಾರ್ಯತೆಗಳ ತಾಕಲಾಟಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಅವಳಿಗೆ ಪ್ರೇಮ, ಕಾಮ, ವ್ಯಾಮೋಹ ಎಲ್ಲವೂ ಒಂದೇ ಆಗಿದ್ದು ಎಲ್ಲದರಿಂದ ಹೊರತಾಗುವಂತಹ ಸ್ಥಿತಿಯೂ ಕೂಡಾ ಒಂದು ಪ್ರತಿಮಾ ಸಂದೇಶವೇ ಆಗಿದೆ.

ರಾಜಕೀಯ ಸಂಘರ್ಷದ ಕಾರಣಕ್ಕೆ ಯುದ್ಧವೆಂಬುದು ನಡೆದರೂ ಅದು ಅಷ್ಟಕ್ಕೇ ಸೀಮಿತಗೊಳ್ಳುವುದಿಲ್ಲ. ರೈತರು, ಕುಲೀನರು, ನಾಗರಿಕರು, ಸೈನಿಕರು ಎಲ್ಲರೂ ಸಮಸ್ಯೆಗಳನ್ನು ಅನುಭವಿಸುವತ್ತಾರೆ. ಅವರ ಕಾಲಘಟ್ಟದಲ್ಲಿ ಮತ್ತು ಗತಿಸಿದ ಚರಿತ್ರೆಯಲ್ಲಿಯೇ ಎದುರಿಸದಂತಹ ಸಂಕಟಗಳಿಂದ ಬಳಲಬೇಕು. ಅದೇ ಯುದ್ಧ ಮತ್ತು ಶಾಂತಿಯಲ್ಲಿಯೂ ಆಗುವುದು. ಟಾಲ್ಸ್ಟಾಯ್ ಈ ಹಿನ್ನೆಲೆಗಳ ಎಲ್ಲಾ ಪ್ರತಿನಿಧಿಗಳನ್ನು ಪಾತ್ರಗಳನ್ನಾಗಿಸಿ ಮಾನುಷವಾಗಿ ಚಿತ್ರಿಸುತ್ತಾಹೋಗುತ್ತಾರೆ. ಮನುಷ್ಯ ಹೃದಯದ ಸಂವೇದನೆಯುಳ್ಳವರಿಗೆಲ್ಲಾ ಸ್ಪಂದಿಸುವ ದುಃಖ ದುಮ್ಮಾನಗಳು – ಭಾವುಕತೆಗೂ ಮತ್ತು ತಾತ್ವಿಕತೆಗೂ ಭಿನ್ನಬೇಧಗಳನ್ನು ಕಾಣಲಾಗದು.

ಟಾಲ್ಸ್‌ಟಾಯ್ ಅವರ ಕಾಲಘಟ್ಟಕ್ಕೆ 60 ವರ್ಷಗಳ ಮುನ್ನದ ಕತೆಯ ಭೂಮಿಕೆಯಾದರೂ ಅವರಲ್ಲಿ ಫ್ರಾನ್ಸ್ ಮಾಡಿದ ಯುದ್ಧದ ಛಾಯೆ ಪೂರ್ತಿ ಕರಗಿಹೋಗಿರಲಿಲ್ಲ. ಯುದ್ಧವೇ ಹಾಗೆ. ಯಾವುದೇ ಕಾರಣದಿಂದ ಅದು ನಡೆದರೂ ಸಾಮಾಜಿಕ ಮತ್ತು ರಾಜತಾಂತ್ರಿಕ ವ್ಯವಸ್ಥೆ ಹದಗೆಡುತ್ತದೆ. ಜನತೆಗಾಗಿಯೇ ಆ ವ್ಯವಸ್ಥೆ ಇರುವುದಾದರೂ, ಅದಕ್ಕೆ ಬೀಳುವ ಏಟಿನಿಂದ ಉಂಟಾಗುವ ಅವ್ಯವಸ್ಥೆಯಿಂದ ಯಾವುದೇ ತಪ್ಪನ್ನು ಮಾಡಿರದ ಜನರು ಶಿಕ್ಷೆ ಅನುಭವಿಸುತ್ತಾರೆ. ತಮ್ಮ ಹಿತರಕ್ಷಣೆಗಾಗಿ ವ್ಯವಸ್ಥೆ ಎಂದು ನಂಬಿರುವ ಜನರು ಎದುರುನೋಡದ ತೊಂದರೆಗಳಿಗೆ ಎದೆಯೊಡ್ಡಬೇಕಾಗುತ್ತದೆ. ಶಿಕ್ಷಣದ ಸಮಸ್ಯೆ, ಉದ್ಯೋಗದಿಂದಲೇ ಅನ್ನವನ್ನು ಗಳಿಸಿಕೊಳ್ಳುವರ ಸಮಸ್ಯೆ, ವೈದ್ಯಕೀಯ ಸೌಲಭ್ಯಗಳಲ್ಲಿ ವ್ಯತ್ಯಯವುಂಟಾಗುವ ಸಮಸ್ಯೆ, ಗಮನವು ಯುದ್ಧದ ಕಡೆ ಹರಿಯುವುದರಿಂದ ಆಂತರಿಕವಾಗಿ ಸಡಿಲವಾಗುವ ಭದ್ರತಾ ವ್ಯವಸ್ಥೆ; ಹೀಗೆ ಅನೇಕಾನೇಕ ಸಮಸ್ಯೆಗಳು ಯುದ್ಧದ ಕಾರಣಗಳಿಂದಾಗುತ್ತವೆ.

ಯುದ್ಧವೆಂಬುದು ರೋಮಾಂಚನ. ಅದೊಂದು ಉನ್ಮತ್ತವಾದ ಭ್ರಾಮಕವಾದ ಆನಂದ. ಅದು ಕುಲೀನರ, ರಾಜಕಾರಣದ ಮತ್ತು ಆರ್ಥಿಕತೆಯ ಉತ್ತುಂಗದಲ್ಲಿರುವವರು ಬಲಿಪಶುಗಳನ್ನಾಗಿಸುವವರಿಗೆ ಮಾತ್ರವೇ ಬೇಕು. ದುಡಿಯುವವರಿಗಲ್ಲ, ಶ್ರಮಿಕರಿಗಲ್ಲ, ಮನೆಯಲ್ಲಿ ಮಕ್ಕಳನ್ನು ಸಲಹುವ ಮತ್ತು ಕುಟುಂಬವನ್ನು ನಿರ್ವಹಣೆ ಮಾಡುವ ಮಹಿಳೆಯರಿಗಲ್ಲ. ಆದರೆ ಇವರೆಲ್ಲರ ಸಮೂಹದ ಪ್ರತಿನಿಧಿಯಂತಿರುವ ರಾಜಕಾರಣ ವ್ಯವಸ್ಥೆಯನ್ನು ಯುದ್ಧಕ್ಕೆಳೆಯುವುದು ಮತ್ತು ಯುದ್ಧವನ್ನು ಎದುರಿಸುವಂತೆ ಮಾಡುವುದು, ಏನೇ ಆದರೂ ಯುದ್ಧದ ರೋಮಾಂಚನ ಒಲ್ಲದ, ಬದುಕಿನ ಉಸುರಿಗೆ ಹಾತೊರೆಯುವವರ ನರಳಾಟಕ್ಕೆ ಕಾರಣವಾಗುತ್ತದೆ.

‘ಯುದ್ಧ ಮತ್ತು ಶಾಂತಿಯ’ಲ್ಲಿ ಅನೇಕ ಕತೆಗಳಿವೆ, ಅನೇಕ ಬದುಕುಗಳಿವೆ. ನಾಯಕ ಎಂದೋ, ನಾಯಕಿ ಎಂದೋ ಯಾರೂ ಇಲ್ಲ. ಸಿದ್ಧಸೂತ್ರದ ನಾಯಕ ಮತ್ತು ನಾಯಕಿಯ ಪಾತ್ರವನ್ನು ನಿರೀಕ್ಷಿಸುವವರಿಗೆ ಯಾರೂ ಸಿಗುವುದಿಲ್ಲ. ಹಾಗೆಂದು ಇದು ಐತಿಹಾಸಿಕ ಕಾದಂಬರಿಯೂ ಅಲ್ಲ. ಕಲಾವಿದನಾಗಿ ಟಾಲ್ಸ್‌ಟಾಯ್ ಒಮ್ಮೆ ಕಂಡರೆ, ಮತ್ತೊಮ್ಮೆ ಬೋಧನೆಗಳನ್ನು ಮಾಡುವ ಋಷಿಯಾಗಿ ಬದಲಾಗುತ್ತಾರೆ. ಮತ್ತೊಮ್ಮೆ ಕ್ರಾಂತಿಕಾರಿಯಾಗಿ ವ್ಯವಸ್ಥೆಯೊಳಗಿನ ತಿದಿಗಳಿಗೆ ಕೆರಳುತ್ತಾರೆ.

ಮನುಷ್ಯನ ತಿಕ್ಕಲುತನದ ಉನ್ಮತ್ತತೆಗೆ ಶಾಂತಿಯ ಅವಧಿಯೂ ಕೂಡಾ ಯುದ್ಧದ ಸಿದ್ಧತೆಯೇ ಆಗಿರುತ್ತದೆ. ಯುದ್ಧಾಸ್ತ್ರಗಳು ಹೇರಳವಾಗಿ ವ್ಯಾಪಾರದ ಸರಕಾದ ಮೇಲೆ, ಹೂಡಿದ ಬಂಡವಾಳಕ್ಕೆ ಲಾಭ ತರಲು ಯುದ್ಧಗಳನ್ನು ಒಲ್ಲೆ ಒಲ್ಲೆ ಎನ್ನುತ್ತಲೇ ಕಾರಣಗಳನ್ನು ಸೃಷ್ಟಿಸುತ್ತಾರೆ ಬಲಿಷ್ಟ ರಾಷ್ಟ್ರದ ಬಂಡವಾಳದ ಕೈಗಳು.

ಸುಮಾರು 1225 ಪುಟಗಳನ್ನು ಹೊಂದಿರುವ ‘ಯುದ್ಧ ಮತ್ತು ಶಾಂತಿ’ಯ ಕಾದಂಬರಿಯನ್ನು ಪರಿಚಯಿಸಲು ಸಾಧ್ಯವಾಗದ ಈ ಲೇಖನ ಅದು ಯುದ್ಧದ ಬಗ್ಗೆ ಹೊಂದಿರುವ ಧೋರಣೆಯ ಒಂದು ಮುಖವನ್ನು ಮಾತ್ರ ಧ್ವನಿಸುತ್ತದೆ. ಆದರೆ ಅದನ್ನು ಓದುವಾಗ ಯುದ್ಧದ ನೆರಳಿನಲ್ಲಿರುವ ಎಲ್ಲಾ ದೇಶಗಳೂ ನಮ್ಮ ಕಣ್ಪಟಲದ ಮುಂದೆ ಹಾದುಹೋಗುವಂತೆ ಮಾಡುವುದು ಈ ಕಾದಂಬರಿಯ ಶಕ್ತಿ.


ಇದನ್ನು ಓದಿ: ವಿಶೇಷ ಲೇಖನ: ಹೊಸ ತಲೆಮಾರಿಗೆ ಗೊತ್ತಿಲ್ಲದ ಡಾ.ಎಚ್ಚೆನ್ ಅವರ ‘ಹೋರಾಟದ ಹಾದಿ’ಯ ಕುರಿತು ಡಾ.ಸಿಎನ್ಆರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...