Homeಅಂತರಾಷ್ಟ್ರೀಯಇರಾನ್- ಅಮೆರಿಕ ಯುದ್ಧದಲ್ಲಿ ಅಮೆರಿಕದ ಕಾಲಾಳು ಆಗಲು ಹೊರಟ ಭಾರತ

ಇರಾನ್- ಅಮೆರಿಕ ಯುದ್ಧದಲ್ಲಿ ಅಮೆರಿಕದ ಕಾಲಾಳು ಆಗಲು ಹೊರಟ ಭಾರತ

ಭಾರತವು ಜೂನ್ 21ರಂದು ತನ್ನ ಯುದ್ಧ ನೌಕೆಗಳಾದ ಚೆನ್ನೈ ಮತ್ತು ಸುನೈನಾವನ್ನು ಪರ್ಶಿಯನ್ ಕೊಲ್ಲಿಗೆ ಕಳುಹಿಸಲು ನಿರ್ಧರಿಸಿದೆ. ಈ ಕಾರ್ಯಾಚರಣೆಗೆ ‘ಆಪರೇಶನ್ ಸಂಕಲ್ಪ್’ ಎಂದು ಹೆಸರಿಡಲಾಗಿದೆ

- Advertisement -
- Advertisement -

| ಭರತ್ ಹೆಬ್ಬಾಳ್ |

ದಶಕಗಳಿಂದ ಒಂದಲ್ಲಾ ಒಂದು ರೀತಿಯ ನಿರಂತರ ಯುದ್ಧಗಳಿಂದ ತತ್ತರಿಸುತ್ತಿರುವ ಮಧ್ಯಪ್ರಾಚ್ಯ ಏಶಿಯಾದಲ್ಲಿ ಮತ್ತೊಮ್ಮೆ ಯುದ್ದದ ಕಾರ್ಮೋಡಗಳು ಆವರಿಸುತ್ತಿವೆ. 2015ರ ಜುಲೈ ತಿಂಗಳಲ್ಲಿ ಆರು ರಾಷ್ಟ್ರಗಳ ಸಂಧಾನ ಮಾತುಕತೆಗಳ ನಂತರ ಅಸ್ತಿತ್ವಕ್ಕೆ ಬಂದಿದ್ದ Joint Comprehensive Plan of Action (JCPOA) ಒಪ್ಪಂದವನ್ನು ಮೇ 2018ರಲ್ಲಿ ಟ್ರಂಪ್ ಆಡಳಿತ ಏಕಪಕ್ಷೀಯವಾಗಿ ಮುರಿದು ಹಾಕಿತ್ತು. ಇದರ ನಂತರದ ಮಾತುಕತೆಗಳಲ್ಲಿ ಇರಾನಿನ ಸಂಪೂರ್ಣ ಶರಣಾಗತಿಯನ್ನು ಬಯಸುತ್ತಿರುವ ಅಮೆರಿಕ, ಕಳೆದೆರಡು ತಿಂಗಳುಗಳಿಂದ ಪರ್ಶಿಯನ್ ಕೊಲ್ಲಿಯಲ್ಲಿ ನಡೆಯುತ್ತಿರುವ ಪಾಶ್ಚಾತ್ಯ ಕಚ್ಚಾ ತೈಲ ಟ್ಯಾಂಕರ್‍ಗಳ ಹಡಗುಗಳ ಮೇಲಿನ ಅಜ್ಞಾತ ದಾಳಿಗಳನ್ನು ಇರಾನಿನ ಮೇಲೆ ಕಟ್ಟಿತ್ತು.

ಅಮೆರಿಕ ಈ ರೀತಿಯ ತಂತ್ರಗಳನ್ನು ಇತಿಹಾಸದಲ್ಲಿ ಬಹಳಷ್ಟು ಮಾಡಿದೆ. ಉದಾಹರಣೆಗೆ ವಿಯೆಟ್ನಾಮ್ ಯುದ್ಧಕ್ಕೆ ನೆಪ ಮಾಡಿಕೊಂಡಿದ್ದು, ಇದೇ ರೀತಿಯ ತನ್ನ ಹಡಗುಗಳ ಮೇಲೆ ನಡೆದಿದೆ ಎನ್ನಲಾದ ಅಜ್ಞಾತ ದಾಳಿ (ಟೊಂಕಿನ್ ಕೊಲ್ಲಿಯ ಘಟನೆ). ಈ ದಾಳಿಗಳನ್ನು ಇರಾನ್ ನಿರಾಕರಿಸುತ್ತಲೇ ಬಂದಿದೆ ಮತ್ತು ಇದು ಯುದ್ಧಕ್ಕಾಗಿ ಅಮೆರಿಕ ಮಾಡುತ್ತಿರುವ ಷಡ್ಯಂತ್ರ ಎಂದು ಆರೋಪಿಸಿತ್ತು. ಇದರ ಮುಂದುವರೆದ ಭಾಗವಾಗಿಯೇ ಇರಾನ್, ಜೂನ್ 20ರಂದು ಅಮೆರಿಕಾದ ಮಾನವರಹಿತ ಗೂಢಚಾರಿ ವಿಮಾನವನ್ನು (RQ-4A Global Hawk Drone) ತನ್ನ ಸಯ್ಯದ್-2ಸಿ ಕ್ಷಿಪಣಿ ಉಪಯೋಗಿಸಿ ಹೊಡೆದುರುಳಿಸಿದೆ. ಈಗಾಗಲೇ ಅಮೆರಿಕಾದ ‘ಗರಿಷ್ಠ ಒತ್ತಡ’ ತಂತ್ರಗಾರಿಕೆಯ ಭಾಗವಾದ ತೀವ್ರ ಆರ್ಥಿಕ ನಿಬರ್ಂಧಗಳನ್ನು (ಭಯೋತ್ಪಾದನೆ) ಎದುರಿಸುತ್ತಿರುವ ಇರಾನ್ ಈಗ ‘ಗರಿಷ್ಠ ಪ್ರತಿ-ಒತ್ತಡ’ ಪ್ರದರ್ಶಿಸಲು ಸಜ್ಜಾಗುತ್ತಿದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

ತನ್ನ ವಾಯುಪ್ರದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಡ್ರೋನ್ ಹೊಡೆದು ಉರುಳಿಸಲಾಯಿತು ಎಂದು ಇರಾನ್ ಹೇಳಿಕೆ ಕೊಟ್ಟಿದೆ. ಅಮೆರಿಕ ಇದು ಅಂತರ್ರಾಷ್ಟ್ರೀಯ ನೀರಿಗೆ (International Waters) ಸೇರಿದ ಜಾಗ ಎಂದು ಹೇಳಿಕೆ ಕೊಟ್ಟಿದೆ. ವಾಸ್ತವದಲ್ಲಿ ಆ ಪ್ರದೇಶದಲ್ಲಿ ಅಂತರ್ರಾಷ್ಟ್ರೀಯ ನೀರಿನ ಜಾಗ ಆಗಿರುವುದು ಸಾಧ್ಯವೇ ಇಲ್ಲ. ಪರ್ಶಿಯನ್ ಕೊಲ್ಲಿಯಲ್ಲಿ ಹಾದುಹೋಗಬೇಕಾದರೆ ಅಲ್ಲಿರುವ ಕೊಲ್ಲಿಯ ಅತಿ ಸಣ್ಣ ಜಾಗ ಇರುವುದೇ 39 ಕಿಲೋಮೀಟರ್‍ಗಳ ಉದ್ದಗಲ. ಅದರ ಒಂದು ಭಾಗ ಇರಾನಿನದ್ದು, ಇನ್ನೊಂದು ಭಾಗ ಒಮಾನ್ ರಾಷ್ಟ್ರದ್ದು! ವಿಶ್ವದ 33% ಕಚ್ಚಾ ತೈಲ ಪರ್ಶಿಯನ್ ಕೊಲ್ಲಿಯಿಂದಲೇ ಹಾದುಹೋಗಬೇಕು.

ಈಗಾಗಲೇ ಇರಾನ್ ರಾಷ್ಟ್ರದಿಂದ ಕಚ್ಚಾ ತೈಲ ಆಮದು ನಿಲ್ಲಿಸುವಂತೆ ಎಲ್ಲಾ ದೇಶಗಳಿಗೂ ಅಮೆರಿಕ ಆದೇಶಿಸಿದೆ. ಆದೇಶ ಮೀರಿದರೆ ಆರ್ಥಿಕ ನಿಬರ್ಂಧಗಳನ್ನು ವಿಧಿಸುವುದಾಗಿ ಎಚ್ಚರಿಕೆಯನ್ನು ನೀಡಿದೆ. ತನ್ನನ್ನು ಕಚ್ಚಾ ತೈಲದ ಮಾರುಕಟ್ಟೆಯಿಂದ ನಿಬರ್ಂಧಿಸಿದರೆ ಪರ್ಶಿಯನ್ ಕೊಲ್ಲಿಯಲ್ಲಿ ಬೇರೆಯವರ ಕಚ್ಚಾ ತೈಲ ಹಾದುಹೋಗುವದಕ್ಕೆ ನಾವು ಬಿಡುವುದಿಲ್ಲ ಎಂದು ಇರಾನ್ ಕೂಡ ಎಚ್ಚರಿಸುತ್ತಲೇ ಬಂದಿದೆ. ಘಟನೆಯ ನಂತರ ಇರಾನಿನ ಮೇಜರ್ ಜನರಲ್ ಮೊಹಮ್ಮದ್ ಬಕೇರಿ ‘ಇರಾನ್ ಯಾವುದೇ ದೇಶದೊಂದಿಗೆ ಯುದ್ಧವನ್ನು ಬಯಸುತ್ತಿಲ್ಲ, ಆದರೆ ಇರಾನ್ ಅನ್ನು ರಕ್ಷಿಸಿಕೊಳ್ಳಲು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ, ಇರಾನ್ ಕೊಲ್ಲಿಯಿಂದ ತೈಲ ರಫ್ತು ಮಾಡುವುದನ್ನು ತಡೆಯಲು ನಿರ್ಧರಿಸಿದರೆ, ಆ ನಿರ್ಣಯವನ್ನು ದೇಶ ಹಾಗೂ ಸಶಸ್ತ್ರ ಪಡೆಗಳು ಪೂರ್ಣವಾಗಿ ಸಾಕಾರಗೊಳಿಸಿ ಸಾರ್ವಜನಿಕವಾಗಿ ಘೋಷಿಸಲಾಗುವುದು’ ಎಂಬ ಹೇಳಿಕೆ ಕೊಟ್ಟಿದ್ದಾರೆ.

ಈ ಘಟನೆಯ ನಂತರ ದೊಡ್ಡಣ್ಣ ಟ್ರಂಪ್ ‘ಇರಾನ್ ಬಹಳ ದೊಡ್ಡ ತಪ್ಪು’ ಮಾಡಿದೆ ಎಂದು ಟ್ವೀಟ್ ಮಾಡಿದ್ದರು. ನಂತರ ಇರಾನಿನ ಮೇಲೆ ದಾಳಿ ಮಾಡಲು ಆದೇಶಿಸಿ, ಆ ಆದೇಶವನ್ನು ಹಿಂಪಡೆದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಆದೇಶ ಹಿಂಪಡೆಯುವುದರ ಹಿಂದೆ ಅಮೆರಿಕಾದ ಚುನಾವಣೆ ಕಾರಣ ಎಂದು ಹೇಳಲಾಗುತ್ತಿದ್ದರೂ, ಪರ್ಶಿಯನ್ ಕೊಲ್ಲಿಯನ್ನು ಇರಾನ್ ಮುಚ್ಚಿದರೆ ಅಮೆರಿಕಾದ ಆರ್ಥಿಕತೆ ಮತ್ತು ವಿಶ್ವದ ಆರ್ಥಿಕತೆ ಕುಸಿಯುವ ಭಯ ಇದರ ಹಿಂದಿರುವ ನಿಜವಾದ ಕಾರಣ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಈ ಕೊಲ್ಲಿಯ ಮಾರ್ಗ ಮುಚ್ಚಿದರೆ ಪ್ರಪಂಚದ 1.2 ದಶಲಕ್ಷ ಕೋಟಿ ಡರ್ರೈವೇಟಿವ್ಸ್ ಮಾರುಕಟ್ಟೆಯ ವಹಿವಾಟು ಅಂತಃಸ್ಫೋಟಗೊಂಡು ಪ್ರಪಂಚದ ಬ್ಯಾಂಕಿಂಗ್ ವ್ಯವಸ್ಥೆಯೇ ಕುಸಿದು ಬೀಳುತ್ತದೆ ಮತ್ತು ಪ್ರಪಂಚದ 80 ಟ್ರಿಲಿಯನ್ ಜಿಡಿಪಿ ಪ್ರಪಾತಕ್ಕೆ ಕುಸಿದು, ಕಂಡು ಕೇಳರಿಯದ ಆರ್ಥಿಕ ಹಿನ್ನಡೆ ಆಗುತ್ತದೆ ಎಂಬ ಸುಳಿವು ಸಿಕ್ಕ ನಂತರ ದಾಳಿ ನಡೆಸಲುದ್ದೇಶಿಸಿದ್ದ 10 ನಿಮಿಷದ ಮುಂಚೆ ಟ್ರಂಪ್ ತನ್ನ ಆದೇಶವನ್ನು ಹಿಂಪಡೆದುಕೊಂಡಿದ್ದಾರೆ. ಈ ಕೊಲ್ಲಿಯನ್ನು ಮುಚ್ಚಲು ಇರಾನ್ ತನ್ನ ಪಾಶ್ಚಾತ್ಯ ಗಡಿಯ ಉದ್ದಗಲಕ್ಕೂ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸಿದ್ಧಪಡಿಸಿಕೊಂಡಿದೆ ಮತ್ತು ಸಮಯ ಬಂದರೆ ಕೊಲ್ಲಿಯನ್ನು ಮುಚ್ಚುವುದಾಗಿಯೂ ಎಚ್ಚರಿಕೆ ನೀಡಿದೆ.

ಈ ಪರಿಸ್ಥಿತಿಯಲ್ಲಿ ಅನಾವರಣಗೊಳ್ಳುತ್ತಿರುವ ಬಿಕ್ಕಟ್ಟಿನ ಒಂದು ಅತ್ಯಂತ ಕಳವಳಕಾರಿ ಬೆಳೆವಣಿಗೆಯೆಂದರೆ ಭಾರತದ ನಿಗೂಢ ನಡೆ. ಭಾರತವು ಜೂನ್ 21ರಂದು ತನ್ನ ಯುದ್ಧ ನೌಕೆಗಳಾದ ಚೆನ್ನೈ ಮತ್ತು ಸುನೈನಾವನ್ನು ಪರ್ಶಿಯನ್ ಕೊಲ್ಲಿಗೆ ಕಳುಹಿಸಲು ನಿರ್ಧರಿಸಿದೆ. ಈ ಕಾರ್ಯಾಚರಣೆಗೆ ‘ಆಪರೇಶನ್ ಸಂಕಲ್ಪ್’ ಎಂದು ಹೆಸರಿಡಲಾಗಿದೆ ಹಾಗೂ ಯುದ್ಧ ನೌಕೆಗಳು ಓಮೆನ್ ಭಾಗದ ನೀರಿನಲ್ಲಿ ನಿಯೋಜಿಸಲ್ಪಟ್ಟಿರುತ್ತದೆ ಎಂದು ವಿವರಿಸಲಾಗಿದೆ. ತೀಕ್ಷ್ಣಗೊಳ್ಳುತ್ತಿರುವ ಜಾಗತಿಕ ರಾಜಕೀಯದಲ್ಲಿ ರಶಿಯ, ಸಿರಿಯ, ಚೀನಾ, ಇರಾನ್ ಒಂದು ಕಡೆಯಾದರೆ, ಅಮೆರಿಕ, ಯುರೋಪಿಯನ್ ಯೂನಿಯನ್‍ನ ಕೆಲವು ಮುಖ್ಯ ರಾಷ್ಟ್ರಗಳು, ಬ್ರಿಟನ್, ಇಸ್ರೇಲ್ ಸೌದಿ ಮತ್ತದರ ಹಿಂಬಾಲಕ ಅರಬ್ ರಾಷ್ಟ್ರಗಳು ಇನ್ನೊಂದು ಕಡೆ.

ಪಾಕಿಸ್ತಾನ ರಶಿಯ ಮತ್ತು ಚೀನಾಗೆ ಹತ್ತಿರವಾಗುತ್ತಿದ್ದರೆ, ಭಾರತ ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಒಂದು ವಿಚಿತ್ರ ಡಬಲ್ ಗೇಮ್ ಆಟದಲ್ಲಿ ತೊಡಗಿದೆ. ಹಿಂದಿನಿಂದಲೂ ಉತ್ತಮ ಬಾಂಧವ್ಯ ಹೊಂದಿದ್ದ ಈ ದೇಶಗಳ ಮಧ್ಯೆ ಆರ್ಥಿಕ ನಿರ್ಬಂಧಗಳಾಚೆಗೂ ವ್ಯಾಪಾರ ವಹಿವಾಟು ವಿವಿಧ ವಿನಿಮಯಗಳನ್ನು ಬಳಸಿ ನಡೆಸಲಾಗುತ್ತಿತ್ತು. ಆದರೆ ಕಳೆದ ಮೇ ತಿಂಗಳಿನಿಂದ ಇರಾನ್‍ನಿಂದ ಕಚ್ಚಾ ತೈಲ ಖರೀದಿಸುವುದನ್ನು ನಿಲ್ಲಿಸಿರುವ ಭಾರತವು ಇರಾನಿನ ಕಟು ವೈರಿಗಳಾದ ಇಸ್ರೇಲ್ ಮತ್ತು ಯುದ್ಧಕೋರ ಅಮೆರಿಕ ಜೊತೆಗೂಡಿ ಅಮೆರಿಕ ಕೇಂದ್ರಿತ ಏಕ ಧ್ರುವಿ ಪ್ರಪಂಚದ ದೃಷ್ಟಿಕೋನದಲ್ಲಿ ಏಶಿಯಾ ಖಂಡದ ಪಾಳೆಗಾರನಾಗಲು ಹೊರಟಿದೆ. ಸ್ವಾತಂತ್ರ್ಯದ ನಂತರದ ಶೀತಲ ಸಮರದಲ್ಲಿ ಆಲಿಪ್ತ ಚಳುವಳಿಯನ್ನು ಸೃಷ್ಟಿಸುವಲ್ಲಿ ಮುಖ್ಯ ಪಾತ್ರ ವಹಿಸಿ ಚಳವಳಿಯನ್ನು ಮುನ್ನಡೆಸುತ್ತಿದ್ದ ಭಾರತ ಈಗ ಅಮೆರಿಕದ ಕಾಲಾಳು ಆಗಲು ಹೊರಟಿದೆ.

ಮೋದಿ ಅಧಿಕಾರಕ್ಕೆ ಬಂದ ನಂತರ ಅಮೆರಿಕ ಜೊತೆ ಮಾಡಿಕೊಂಡಿರುವ ಎರಡು ಒಪ್ಪಂದಗಳು (LEMOA and COMCASA) ಇದಕ್ಕೆ ಸಾಕ್ಷಿ. LEMOA ಒಪ್ಪಂದ ಅಮೆರಿಕಾಗೆ ಭಾರತದ ಸೇನಾ ಸೌಕರ್ಯಗಳನ್ನು ಉಪಯೋಗಿಸಿಕೊಳ್ಳುವ ಹಕ್ಕು ನೀಡುತ್ತದೆ ಮತ್ತು COMCASA ಅತಿ ಸೂಕ್ಷ್ಮ ಮಿಲಿಟರಿ ಗುಪ್ತಚರ ವಿವರಗಳನ್ನು ಹಂಚಿಕೊಳ್ಳುವ ಒಪ್ಪಂದವಾಗಿದೆ. ಬಹುಮುಖ್ಯವಾಗಿ ಇದು ಮೋದಿ ಮತ್ತೆ ಅಧಿಕಾರಕ್ಕೆ ಬಂದ ನಂತರ ಭಾರತ ಎಸಗುತ್ತಿರುವ ಚಾರಿತ್ರಿಕ ದ್ರೋಹ ಎಂದು ದಾಖಲಾಗುತ್ತದೆ. ಏಕೆಂದರೆ ಇನ್ನು ಮುಂದೆ ನಮ್ಮ ವಿದೇಶಾಂಗ ನೀತಿಯು ಅಮೆರಿಕದ ವ್ಯೂಹದ ಭಾಗವಾಗಿರುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...