Homeಮುಖಪುಟನಾವೆಲ್ಲರೂ ಒಂದೇ ತಾಯಿಗೆ ಮಕ್ಕಳು: ವಿದ್ಯಾರ್ಥಿಗಳು ಕಲಿಯಲು ಬಿಡಿ

ನಾವೆಲ್ಲರೂ ಒಂದೇ ತಾಯಿಗೆ ಮಕ್ಕಳು: ವಿದ್ಯಾರ್ಥಿಗಳು ಕಲಿಯಲು ಬಿಡಿ

ಮಕ್ಕಳಿಗೆ ಸಭ್ಯತೆ, ಘನತೆ, ಗಾಂಭೀರ್ಯತೆಯೊಂದಿಗೆ ಶಿಕ್ಷಣವನ್ನು ಮುಗಿಸಲು ಅನುವು ಮಾಡಿಕೊಡಿ. ಪರಸ್ಪರರನ್ನು ಕಚ್ಚಾಡಿಸುವವರನ್ನು ಯಾವ ಧರ್ಮದಲ್ಲಿ ಇದ್ದರೂ ಖಂಡಿಸಿ, ದೂರವಿಡಿ.

- Advertisement -
- Advertisement -

ಭಾರತ ಬಹುಸಂಸ್ಕೃತಿಯ ರಾಷ್ಟ್ರ. ಸರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಎಂದು ರಾಷ್ಟ್ರಕವಿ ಕುವೆಂಪು ಹಾಡಿಹೊಗಳಿದ ವಿವಿಧ ಧರ್ಮ, ಜನಾಂಗ, ಜಾತಿ -ಪಂಥಗಳ, ಭಾಷೆ, ಉಡುಗೆ- ತೊಡುಗೆ, ಆಹಾರ ಪದ್ಧತಿಗಳನ್ನು ತಲೆತಲಾಂತರದಿಂದ ಗೌರವಿಸಿಕೊಂಡು ಸಹಬಾಳ್ವೆ ಮತ್ತು ಸೌಹಾರ್ದತೆಗೆ ಜಗತ್ತಿಗೆ ಮಾದರಿಯಾದ ದೇಶ. ಮಾದರಿಯಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ ದೇಶ. ನಾನು ಯಾವುದೇ ಧರ್ಮವನ್ನು ಅನುಸರಿಸುತ್ತಿದ್ದರು ನನಗೆ ಭಾರತೀಯಳು ಎನ್ನುವುದಕ್ಕೆ ಹೆಮ್ಮೆ .ಏಕೆಂದರೆ ಈ ನೆಲದ ಸಂಸ್ಕೃತಿ ಎಲ್ಲವನ್ನೂ ಒಳಗೊಂಡು ಜೀವಿಸುವ ವಿಶಾಲ ಹೃದಯವನ್ನು ನೀಡಿದೆ.

ಈ ಹೊಗಳಿಕೆ ಅತಿಯಾಯಿತು ಎಂದು ಅನಿಸುವ ವಿಭಾಗಕ್ಕೆ ನೀವು ಸೇರಿದ್ದರೆ ಅದು ನಿಮ್ಮ ದೃಷ್ಟಿಕೋನ. ಈ ಬಹುಸಂಸ್ಕೃತಿ, ಬಹುಧರ್ಮೀಯತಿಯನ್ನು ಒಪ್ಪಿಕೊಂಡು ಬಾಳುವುದನ್ನು ಕಲಿಸುವ ಪ್ರಥಮ ಮೆಟ್ಟಿಲು ಶಿಕ್ಷಣ ಸಂಸ್ಥೆಗಳು. ಅದರಲ್ಲೂ ಸರಕಾರಿ ಶಿಕ್ಷಣ ಸಂಸ್ಥೆಗಳು. ಇಂದಿನಂತೆ ಮಧ್ಯಮ, ಮೇಲುವರ್ಗದ ಜನರೆಲ್ಲರೂ ತಮ್ಮ ಮಕ್ಕಳನ್ನು ಆಂಗ್ಲ ಶಾಲೆಗೆ ಸೇರಿಸುವ ವ್ಯವಸ್ಥೆ ಅಂದಿರಲಿಲ್ಲ. ಹೆಚ್ಚಿನ ಎಲ್ಲರೂ ಸರಕಾರಿ ಶಾಲೆಗಳಿಗೆ ಹೋಗುತ್ತಿದ್ದರು ಮತ್ತು ಅದು ನಮಗೆ ಕೀಳರಿಮೆಯ ವಿಚಾರವಾಗಿರಲಿಲ್ಲ. ನನ್ನ ಸರಕಾರಿ ಶಾಲೆ ಹಾಗಿತ್ತು. ಮಾನವೀಯತೆಯನ್ನು, ವಿಶ್ವ ಭ್ರಾತೃತ್ವವನ್ನು ಕಲಿಸುವ, ಹಿರಿಯರನ್ನು ಹೇಗೆ ಗೌರವಿಸಬೇಕು? ಒಡನಾಡಿಗಳನ್ನು ಹೇಗೆ ಸ್ನೇಹದೊಂದಿಗೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು? ಕಿರಿಯರನ್ನು ಯಾವ ರೀತಿ ಪ್ರೀತಿಸಬೇಕು? ಎಂಬುದನ್ನು ಕಲಿಸಿಕೊಟ್ಟ ಶಾಲೆಗಳು ನಮ್ಮವು. ಅಂದಿನ ಬಾಲ್ಯದ ಗೆಳತಿ ರಶ್ಮಿ ಇಂದು ಸಿಕ್ಕರು ಅದೇ ಪ್ರೀತಿಯಿಂದ ಬಾಲ್ಯದ ಮುಗ್ಧತೆಯೊಂದಿಗೆ ಮಾತನಾಡಿಸುತ್ತಾಳೆ. ಸಹಪಾಠಿಗಳಾಗಿದ್ದ ಜೋಕಿಮ್, ರಮೇಶ್ ಈಗ ಎಲ್ಲಿರಬಹುದು ಅವರ ಸಂಸಾರ ಹೇಗಿರಬಹುದು? ಎಂಬ ಕುತೂಹಲ ಈಗಲೂ ನನಗಿದೆ  ಹೈಸ್ಕೂಲು ಕಾಲೇಜು ಗೆಳತಿಯರಾದ ದೀಪ ಕಲಾ, ರೂಪ, ಪ್ರಫುಲ್ಲ, ಚೇತನ, ಮಮತಾ, ಸುನೀತಾ, ಪ್ರೆಸಿಲ್ಲಾ, ಪ್ರಿಯಾ, ಮೀನಾ, ತಾವ್ರೋ ಹೀಗೆ ಪಟ್ಟಿ ಬೆಳೆಯುತ್ತದೆ. ನಮಗ್ಯಾರಿಗೂ ನಾವು ಒಂದೇ ತಂದೆ ತಾಯಿಯ ಮಕ್ಕಳಲ್ಲ ಎಂದು ಎಂದಿಗೂ ಅನಿಸಿದ್ದೇ ಇಲ್ಲ. ಅನೇಕ ಬಾರಿ ಅವರ ಮನೆಗೆ ಹೋಗಿದ್ದೆ, ಉಂಡಿದ್ದೆ. ಅವರ ಅಕ್ಕರೆಯಲ್ಲಿ ಮಿಂದು ಎದ್ದಿದ್ದೆ. ನನ್ನ ಧರ್ಮ ಅದ್ಯಾವುದಕ್ಕೂ ನನಗೆ ತಡೆಯಾಗಲಿಲ್ಲ. ನಾನು ಧರಿಸಿದ್ದ ಹಿಜಾಬ್ ಅವರಿಗೆ ಸಮಸ್ಯೆಯಾಗಿರಲಿಲ್ಲ.

ಇಂದು ಹಿಜಾಬ್ ಕಟಕಟೆಯಲ್ಲಿ ನಿಂತಿರುವುದಕ್ಕೆ, ಬೀದಿ ವಿಷಯವಾಗಿ ಮಾರ್ಪಟ್ಟಿರುವುದಕ್ಕೆ ವಿಷಾದವಿದೆ. ಒಂದೇ ಬೆಂಚಿನಲ್ಲಿ ಒಟ್ಟಿಗೆ ಕುಳಿತು ತರಲೆ ಮಾತುಗಳನ್ನಾಡುತ್ತಿದ್ದ, ವಿಮರ್ಶಿಸುತ್ತ, ಟೀಕಿಸುತ್ತಿದ್ದ ಅದರಾಚೆಗೆ ಅಷ್ಟೇ ಪ್ರೀತಿ ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದ ಸಹಪಾಠಿಗಳು ದಿನಬೆಳಗಾದರೆ ಅನ್ಯ ಧರ್ಮದವರಾಗಿ ಹೇಗೆ ಮಾರ್ಪಟ್ಟರು?

ನಿಜ ಹಿಜಾಬ್ ಒಂದು ಧರ್ಮದ ಸಹೋದರಿಯರು ಅನುಸರಿಸುತ್ತಿರುವ ವಸ್ತ್ರ ಪದ್ಧತಿ. ಅದನ್ನು ಬೇರೆ ಯಾವುದೋ ವಸ್ತ್ರದೊಂದಿಗೆ ಪ್ರತಿಸ್ಪರ್ಧಿಯಾಗಿಸಿದ್ದು ಯಾರು? ನಾವು ಇಂದಿಗೂ ಹಿಂದೂ-ಮುಸ್ಲಿಂ ಸಹೋದರಿಯರು ಪರಸ್ಪರ ಪ್ರೀತಿ ಗೌರವಗಳಿಂದ ನಡೆಸಿಕೊಳ್ಳುತ್ತಿದ್ದೇವೆ. ಹಬ್ಬಗಳಲ್ಲಿ, ಸಂತೋಷ ಮತ್ತು ದುಃಖದ ಸಂದರ್ಭಗಳಲ್ಲಿ ಪರಸ್ಪರ ಜೊತೆಗಿದ್ದೇವೆ. ಈ ರೀತಿ ಹಿಜಾಬ್ ಅನ್ನು ಚರ್ಚಾ ವಿಷಯವಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವವರ ದಾಳಕ್ಕೆ ನಾವೆಂದೂ ಬಲಿ ಬೀಳಬಾರದು.

ನಮಗೆ ಶಿಕ್ಷಣ ಮುಖ್ಯ. ಅದಕ್ಕಿಂತಲೂ ಮುಖ್ಯವಾಗಿ ಈ ದೇಶದ ಅಖಂಡತೆ ಸಾಮರಸ್ಯದ ಜೀವನ ಬಹಳ ಮುಖ್ಯ. ಅಲ್ಪಸಂಖ್ಯಾತರ ಎಲ್ಲ ಗುರುತುಗಳನ್ನು ಒಂದೊಂದಾಗಿ ಅಳಿಸಿ ಬಯಸುವ ಸಂವೇದನ ಶೂನ್ಯತೆ ಯುವಜನತೆಯನ್ನು ಯಾವ ದಿಕ್ಕಿನೆಡೆಗೆ ಕೊಂಡೊಯ್ಯುತ್ತದೆ, ಎಂಬುದರ ಬಗ್ಗೆ ದಿಗಿಲು ಆಗುತ್ತಿದೆ.

ಸಿಖ್ ಧರ್ಮೀಯ ಸಹೋದರರ ಶಿರವಸ್ತ್ರಕ್ಕಿಲ್ಲದ, ಕ್ರೈಸ್ತ ಸನ್ಯಾಸಿ ಭಗಿನಿಯರ ವಸ್ತ್ರಧಾರಣೆಗೆ ಇಲ್ಲದ ವಿರೋಧ ಹಿಜಾಬಿಗೆ ಯಾಕೆ? ತಲೆಯಮೇಲೆ ಹಾಕಿಕೊಳ್ಳುವ ಒಂದು ತುಂಡು ಬಟ್ಟೆಯ ಬಗ್ಗೆ ಇಷ್ಟು ಗೊಂದಲವೇಕೆ?

ಮಕ್ಕಳಿಗೆ ಸಭ್ಯತೆ, ಘನತೆ, ಗಾಂಭೀರ್ಯತೆಯೊಂದಿಗೆ ಶಿಕ್ಷಣವನ್ನು ಮುಗಿಸಲು ಅನುವು ಮಾಡಿಕೊಡಿ. ನಾಲಾಯಕ್ ಆದವರು, ಪರಸ್ಪರರನ್ನು ಕಚ್ಚಾಡಿಸುವವರನ್ನು ಯಾವ ಧರ್ಮದಲ್ಲಿ ಇದ್ದರೂ ಖಂಡಿಸಿ, ದೂರವಿಡಿ. ನಮ್ಮ ಮಕ್ಕಳು ವಿವಿಧ ಸಂಸ್ಕೃತಿಯನ್ನು ಪರಿಚಯಿಸಿಕೊಂಡು ಜೀವಿಸುವ ಹಕ್ಕನ್ನು ಅವರಿಂದ ಕಿತ್ತುಕೊಳ್ಳಬೇಡಿ. ರಾಜಕೀಯದವರ ಹಿತಾಸಕ್ತಿಗೆ ನೀವು ಬಲಿಯಾಗಬೇಡಿ. ಚೆನ್ನಾಗಿ ಕಲಿತು, ಬೆಳೆದು ನಮ್ಮ ಸಾಮರ್ಥ್ಯವನ್ನು ಅವರಿಗೆ ಗೊತ್ತುಪಡಿಸುವ. ಹೆಣ್ಣು ಮಕ್ಕಳ ಉಡುಪು ಅವರ ಹಕ್ಕು. ಹಾಗಾಗಿ ಹಿಜಾಬ್ ಸೇರಿದಂತೆ ಎಲ್ಲರ ವಸ್ತ್ರಗಳ ಪರವಾಗಿ ನಿಲ್ಲೋಣ. ನನ್ನ ವಸ್ತ್ರಧಾರಣೆ ನನ್ನ ಮೂಲಭೂತ ಹಕ್ಕು. ಅದು ನಿಮಗೆ ತೊಂದರೆಯನ್ನುಂಟು ಮಾಡುವುದಾದರೆ ಅದು ನನ್ನ ಅಥವಾ ಹಿಜಾಬಿನ ತಪ್ಪಲ್ಲ. ನಿಮ್ಮ ಮಾನಸಿಕತೆ, ಅದನ್ನು ಸ್ವಲ್ಪ ಶುದ್ಧವಾಗಿಟ್ಟುಕೊಳ್ಳಿ. ಸಮಸ್ಯೆಗೆ ಪರಿಹಾರ ನಿಮ್ಮಲ್ಲೇ ಇದೆ.

  • ಸಬೀಹ ಫಾತಿಮ

ಇದನ್ನೂ ಓದಿ: ಹೆಣ್ಣುಮಕ್ಕಳ ಬದುಕು, ಉಡುಪು ಮತ್ತು ಆಯ್ಕೆಯ ಹಕ್ಕುಗಳು ಮತ್ತು ಪುರುಷಾಧಿಪತ್ಯದ ಆಯ್ಕೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...