Homeಮುಖಪುಟನಾವೆಲ್ಲರೂ ಒಂದೇ ತಾಯಿಗೆ ಮಕ್ಕಳು: ವಿದ್ಯಾರ್ಥಿಗಳು ಕಲಿಯಲು ಬಿಡಿ

ನಾವೆಲ್ಲರೂ ಒಂದೇ ತಾಯಿಗೆ ಮಕ್ಕಳು: ವಿದ್ಯಾರ್ಥಿಗಳು ಕಲಿಯಲು ಬಿಡಿ

ಮಕ್ಕಳಿಗೆ ಸಭ್ಯತೆ, ಘನತೆ, ಗಾಂಭೀರ್ಯತೆಯೊಂದಿಗೆ ಶಿಕ್ಷಣವನ್ನು ಮುಗಿಸಲು ಅನುವು ಮಾಡಿಕೊಡಿ. ಪರಸ್ಪರರನ್ನು ಕಚ್ಚಾಡಿಸುವವರನ್ನು ಯಾವ ಧರ್ಮದಲ್ಲಿ ಇದ್ದರೂ ಖಂಡಿಸಿ, ದೂರವಿಡಿ.

- Advertisement -
- Advertisement -

ಭಾರತ ಬಹುಸಂಸ್ಕೃತಿಯ ರಾಷ್ಟ್ರ. ಸರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಎಂದು ರಾಷ್ಟ್ರಕವಿ ಕುವೆಂಪು ಹಾಡಿಹೊಗಳಿದ ವಿವಿಧ ಧರ್ಮ, ಜನಾಂಗ, ಜಾತಿ -ಪಂಥಗಳ, ಭಾಷೆ, ಉಡುಗೆ- ತೊಡುಗೆ, ಆಹಾರ ಪದ್ಧತಿಗಳನ್ನು ತಲೆತಲಾಂತರದಿಂದ ಗೌರವಿಸಿಕೊಂಡು ಸಹಬಾಳ್ವೆ ಮತ್ತು ಸೌಹಾರ್ದತೆಗೆ ಜಗತ್ತಿಗೆ ಮಾದರಿಯಾದ ದೇಶ. ಮಾದರಿಯಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ ದೇಶ. ನಾನು ಯಾವುದೇ ಧರ್ಮವನ್ನು ಅನುಸರಿಸುತ್ತಿದ್ದರು ನನಗೆ ಭಾರತೀಯಳು ಎನ್ನುವುದಕ್ಕೆ ಹೆಮ್ಮೆ .ಏಕೆಂದರೆ ಈ ನೆಲದ ಸಂಸ್ಕೃತಿ ಎಲ್ಲವನ್ನೂ ಒಳಗೊಂಡು ಜೀವಿಸುವ ವಿಶಾಲ ಹೃದಯವನ್ನು ನೀಡಿದೆ.

ಈ ಹೊಗಳಿಕೆ ಅತಿಯಾಯಿತು ಎಂದು ಅನಿಸುವ ವಿಭಾಗಕ್ಕೆ ನೀವು ಸೇರಿದ್ದರೆ ಅದು ನಿಮ್ಮ ದೃಷ್ಟಿಕೋನ. ಈ ಬಹುಸಂಸ್ಕೃತಿ, ಬಹುಧರ್ಮೀಯತಿಯನ್ನು ಒಪ್ಪಿಕೊಂಡು ಬಾಳುವುದನ್ನು ಕಲಿಸುವ ಪ್ರಥಮ ಮೆಟ್ಟಿಲು ಶಿಕ್ಷಣ ಸಂಸ್ಥೆಗಳು. ಅದರಲ್ಲೂ ಸರಕಾರಿ ಶಿಕ್ಷಣ ಸಂಸ್ಥೆಗಳು. ಇಂದಿನಂತೆ ಮಧ್ಯಮ, ಮೇಲುವರ್ಗದ ಜನರೆಲ್ಲರೂ ತಮ್ಮ ಮಕ್ಕಳನ್ನು ಆಂಗ್ಲ ಶಾಲೆಗೆ ಸೇರಿಸುವ ವ್ಯವಸ್ಥೆ ಅಂದಿರಲಿಲ್ಲ. ಹೆಚ್ಚಿನ ಎಲ್ಲರೂ ಸರಕಾರಿ ಶಾಲೆಗಳಿಗೆ ಹೋಗುತ್ತಿದ್ದರು ಮತ್ತು ಅದು ನಮಗೆ ಕೀಳರಿಮೆಯ ವಿಚಾರವಾಗಿರಲಿಲ್ಲ. ನನ್ನ ಸರಕಾರಿ ಶಾಲೆ ಹಾಗಿತ್ತು. ಮಾನವೀಯತೆಯನ್ನು, ವಿಶ್ವ ಭ್ರಾತೃತ್ವವನ್ನು ಕಲಿಸುವ, ಹಿರಿಯರನ್ನು ಹೇಗೆ ಗೌರವಿಸಬೇಕು? ಒಡನಾಡಿಗಳನ್ನು ಹೇಗೆ ಸ್ನೇಹದೊಂದಿಗೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು? ಕಿರಿಯರನ್ನು ಯಾವ ರೀತಿ ಪ್ರೀತಿಸಬೇಕು? ಎಂಬುದನ್ನು ಕಲಿಸಿಕೊಟ್ಟ ಶಾಲೆಗಳು ನಮ್ಮವು. ಅಂದಿನ ಬಾಲ್ಯದ ಗೆಳತಿ ರಶ್ಮಿ ಇಂದು ಸಿಕ್ಕರು ಅದೇ ಪ್ರೀತಿಯಿಂದ ಬಾಲ್ಯದ ಮುಗ್ಧತೆಯೊಂದಿಗೆ ಮಾತನಾಡಿಸುತ್ತಾಳೆ. ಸಹಪಾಠಿಗಳಾಗಿದ್ದ ಜೋಕಿಮ್, ರಮೇಶ್ ಈಗ ಎಲ್ಲಿರಬಹುದು ಅವರ ಸಂಸಾರ ಹೇಗಿರಬಹುದು? ಎಂಬ ಕುತೂಹಲ ಈಗಲೂ ನನಗಿದೆ  ಹೈಸ್ಕೂಲು ಕಾಲೇಜು ಗೆಳತಿಯರಾದ ದೀಪ ಕಲಾ, ರೂಪ, ಪ್ರಫುಲ್ಲ, ಚೇತನ, ಮಮತಾ, ಸುನೀತಾ, ಪ್ರೆಸಿಲ್ಲಾ, ಪ್ರಿಯಾ, ಮೀನಾ, ತಾವ್ರೋ ಹೀಗೆ ಪಟ್ಟಿ ಬೆಳೆಯುತ್ತದೆ. ನಮಗ್ಯಾರಿಗೂ ನಾವು ಒಂದೇ ತಂದೆ ತಾಯಿಯ ಮಕ್ಕಳಲ್ಲ ಎಂದು ಎಂದಿಗೂ ಅನಿಸಿದ್ದೇ ಇಲ್ಲ. ಅನೇಕ ಬಾರಿ ಅವರ ಮನೆಗೆ ಹೋಗಿದ್ದೆ, ಉಂಡಿದ್ದೆ. ಅವರ ಅಕ್ಕರೆಯಲ್ಲಿ ಮಿಂದು ಎದ್ದಿದ್ದೆ. ನನ್ನ ಧರ್ಮ ಅದ್ಯಾವುದಕ್ಕೂ ನನಗೆ ತಡೆಯಾಗಲಿಲ್ಲ. ನಾನು ಧರಿಸಿದ್ದ ಹಿಜಾಬ್ ಅವರಿಗೆ ಸಮಸ್ಯೆಯಾಗಿರಲಿಲ್ಲ.

ಇಂದು ಹಿಜಾಬ್ ಕಟಕಟೆಯಲ್ಲಿ ನಿಂತಿರುವುದಕ್ಕೆ, ಬೀದಿ ವಿಷಯವಾಗಿ ಮಾರ್ಪಟ್ಟಿರುವುದಕ್ಕೆ ವಿಷಾದವಿದೆ. ಒಂದೇ ಬೆಂಚಿನಲ್ಲಿ ಒಟ್ಟಿಗೆ ಕುಳಿತು ತರಲೆ ಮಾತುಗಳನ್ನಾಡುತ್ತಿದ್ದ, ವಿಮರ್ಶಿಸುತ್ತ, ಟೀಕಿಸುತ್ತಿದ್ದ ಅದರಾಚೆಗೆ ಅಷ್ಟೇ ಪ್ರೀತಿ ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದ ಸಹಪಾಠಿಗಳು ದಿನಬೆಳಗಾದರೆ ಅನ್ಯ ಧರ್ಮದವರಾಗಿ ಹೇಗೆ ಮಾರ್ಪಟ್ಟರು?

ನಿಜ ಹಿಜಾಬ್ ಒಂದು ಧರ್ಮದ ಸಹೋದರಿಯರು ಅನುಸರಿಸುತ್ತಿರುವ ವಸ್ತ್ರ ಪದ್ಧತಿ. ಅದನ್ನು ಬೇರೆ ಯಾವುದೋ ವಸ್ತ್ರದೊಂದಿಗೆ ಪ್ರತಿಸ್ಪರ್ಧಿಯಾಗಿಸಿದ್ದು ಯಾರು? ನಾವು ಇಂದಿಗೂ ಹಿಂದೂ-ಮುಸ್ಲಿಂ ಸಹೋದರಿಯರು ಪರಸ್ಪರ ಪ್ರೀತಿ ಗೌರವಗಳಿಂದ ನಡೆಸಿಕೊಳ್ಳುತ್ತಿದ್ದೇವೆ. ಹಬ್ಬಗಳಲ್ಲಿ, ಸಂತೋಷ ಮತ್ತು ದುಃಖದ ಸಂದರ್ಭಗಳಲ್ಲಿ ಪರಸ್ಪರ ಜೊತೆಗಿದ್ದೇವೆ. ಈ ರೀತಿ ಹಿಜಾಬ್ ಅನ್ನು ಚರ್ಚಾ ವಿಷಯವಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವವರ ದಾಳಕ್ಕೆ ನಾವೆಂದೂ ಬಲಿ ಬೀಳಬಾರದು.

ನಮಗೆ ಶಿಕ್ಷಣ ಮುಖ್ಯ. ಅದಕ್ಕಿಂತಲೂ ಮುಖ್ಯವಾಗಿ ಈ ದೇಶದ ಅಖಂಡತೆ ಸಾಮರಸ್ಯದ ಜೀವನ ಬಹಳ ಮುಖ್ಯ. ಅಲ್ಪಸಂಖ್ಯಾತರ ಎಲ್ಲ ಗುರುತುಗಳನ್ನು ಒಂದೊಂದಾಗಿ ಅಳಿಸಿ ಬಯಸುವ ಸಂವೇದನ ಶೂನ್ಯತೆ ಯುವಜನತೆಯನ್ನು ಯಾವ ದಿಕ್ಕಿನೆಡೆಗೆ ಕೊಂಡೊಯ್ಯುತ್ತದೆ, ಎಂಬುದರ ಬಗ್ಗೆ ದಿಗಿಲು ಆಗುತ್ತಿದೆ.

ಸಿಖ್ ಧರ್ಮೀಯ ಸಹೋದರರ ಶಿರವಸ್ತ್ರಕ್ಕಿಲ್ಲದ, ಕ್ರೈಸ್ತ ಸನ್ಯಾಸಿ ಭಗಿನಿಯರ ವಸ್ತ್ರಧಾರಣೆಗೆ ಇಲ್ಲದ ವಿರೋಧ ಹಿಜಾಬಿಗೆ ಯಾಕೆ? ತಲೆಯಮೇಲೆ ಹಾಕಿಕೊಳ್ಳುವ ಒಂದು ತುಂಡು ಬಟ್ಟೆಯ ಬಗ್ಗೆ ಇಷ್ಟು ಗೊಂದಲವೇಕೆ?

ಮಕ್ಕಳಿಗೆ ಸಭ್ಯತೆ, ಘನತೆ, ಗಾಂಭೀರ್ಯತೆಯೊಂದಿಗೆ ಶಿಕ್ಷಣವನ್ನು ಮುಗಿಸಲು ಅನುವು ಮಾಡಿಕೊಡಿ. ನಾಲಾಯಕ್ ಆದವರು, ಪರಸ್ಪರರನ್ನು ಕಚ್ಚಾಡಿಸುವವರನ್ನು ಯಾವ ಧರ್ಮದಲ್ಲಿ ಇದ್ದರೂ ಖಂಡಿಸಿ, ದೂರವಿಡಿ. ನಮ್ಮ ಮಕ್ಕಳು ವಿವಿಧ ಸಂಸ್ಕೃತಿಯನ್ನು ಪರಿಚಯಿಸಿಕೊಂಡು ಜೀವಿಸುವ ಹಕ್ಕನ್ನು ಅವರಿಂದ ಕಿತ್ತುಕೊಳ್ಳಬೇಡಿ. ರಾಜಕೀಯದವರ ಹಿತಾಸಕ್ತಿಗೆ ನೀವು ಬಲಿಯಾಗಬೇಡಿ. ಚೆನ್ನಾಗಿ ಕಲಿತು, ಬೆಳೆದು ನಮ್ಮ ಸಾಮರ್ಥ್ಯವನ್ನು ಅವರಿಗೆ ಗೊತ್ತುಪಡಿಸುವ. ಹೆಣ್ಣು ಮಕ್ಕಳ ಉಡುಪು ಅವರ ಹಕ್ಕು. ಹಾಗಾಗಿ ಹಿಜಾಬ್ ಸೇರಿದಂತೆ ಎಲ್ಲರ ವಸ್ತ್ರಗಳ ಪರವಾಗಿ ನಿಲ್ಲೋಣ. ನನ್ನ ವಸ್ತ್ರಧಾರಣೆ ನನ್ನ ಮೂಲಭೂತ ಹಕ್ಕು. ಅದು ನಿಮಗೆ ತೊಂದರೆಯನ್ನುಂಟು ಮಾಡುವುದಾದರೆ ಅದು ನನ್ನ ಅಥವಾ ಹಿಜಾಬಿನ ತಪ್ಪಲ್ಲ. ನಿಮ್ಮ ಮಾನಸಿಕತೆ, ಅದನ್ನು ಸ್ವಲ್ಪ ಶುದ್ಧವಾಗಿಟ್ಟುಕೊಳ್ಳಿ. ಸಮಸ್ಯೆಗೆ ಪರಿಹಾರ ನಿಮ್ಮಲ್ಲೇ ಇದೆ.

  • ಸಬೀಹ ಫಾತಿಮ

ಇದನ್ನೂ ಓದಿ: ಹೆಣ್ಣುಮಕ್ಕಳ ಬದುಕು, ಉಡುಪು ಮತ್ತು ಆಯ್ಕೆಯ ಹಕ್ಕುಗಳು ಮತ್ತು ಪುರುಷಾಧಿಪತ್ಯದ ಆಯ್ಕೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....