ರಾಜ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅನುಮತಿ ನಿರಾಕರಿಸಿರುವ ವಿರುದ್ಧದ ಆಕ್ರೋಶದ ನಡುವೆ, ವಿವಾದಿತ ಬಿಜೆಪಿ ಸಂಸದೆ, ಮಾಲೆಗಾಂವ್ ಸ್ಫೋಟ ಭಯೋತ್ಪಾದನಾ ಪ್ರಕರಣದ ಪ್ರಮುಖ ಆರೋಪಿ ಪ್ರಜ್ಞಾ ಠಾಕೂರ್ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ.
ಸಾರ್ವಜನಿಕವಾಗಿ ಹಿಜಾಬ್ ಧರಿಸುವುದನ್ನು ಸಹಿಸಲಾಗದು ಎಂದಿರುವ ಅವರು ಮನೆಯಿಂದ ಹೊರ ಬರುವಾಗ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸದಂತೆ ಎಚ್ಚರಿಕೆ ನೀಡಿದ್ದಾರೆ. ಮಾಲೆಗಾಂವ್ ಸ್ಫೋಟ ಭಯೋತ್ಪಾದನಾ ಪ್ರಕರಣದ ಪ್ರಮುಖ ಆರೋಪಿ ಪ್ರಜ್ಞಾ ಠಾಕೂರ್ ಜಾಮೀನಿನ ಮೇಲೆ ಹೊರಬಂದಿದ್ದಾರೆ.
ಯಾವಾಗಲೂ ವಿವಾದಿತ ಹೇಳಿಕೆಗಳಿಮದಲೇ ಸುದ್ದಿಯಾಗುವ ಪ್ರಜ್ಞಾ ಠಾಕೂರ್, “ಇದು ಹಿಂದೂಗಳ ದೇಶವಾಗಿದ್ದು, ಹಿಂದೂಗಳು ಮಹಿಳೆಯರನ್ನು ಪೂಜಿಸುತ್ತಾರೆ. ಹೀಗಾಗಿ ದೇಶದಲ್ಲಿ ಹಿಜಾಬ್ ಧರಿಸುವ ಅಗತ್ಯವಿಲ್ಲ. ತಾವು ಸುರಕ್ಷಿತರಲ್ಲ ಎಂದು ಭಾವಿಸುವವರು ಮನೆಗಳಲ್ಲಿ ಹಿಜಾಬ್ ಧರಿಸಬೇಕು” ಎಂದು ಮಧ್ಯಪ್ರದೇಶದ ಭೋಪಾಲ್ನ ದೇವಸ್ಥಾನವೊಂದರಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ -2022: ಬಿಜೆಪಿ ಸೋಲಿನ ಭವಿಷ್ಯ ನುಡಿದ ನಾಯಕರು
बतौर सांसद आप किसकी नुमाइंदगी करते हैं? ये ऐसे शब्द कहती हैं जिन्हें लिखना भी ठीक नहीं लगता, सुनिये एक सांसद के #हिजाब पर विचार! pic.twitter.com/sigz7QCrNi
— Anurag Dwary (@Anurag_Dwary) February 17, 2022
“ಎಲ್ಲಿಯೂ ಹಿಜಾಬ್ ಧರಿಸುವ ಅಗತ್ಯವಿಲ್ಲ, ಅವರ ಮನೆಯಲ್ಲಿ ಸುರಕ್ಷಿತವಾಗಿಲ್ಲದ ಮಹಿಳೆಯರು ಹಿಜಾಬ್ ಧರಿಸುತ್ತಾರೆ, ನಿಮಗೆ ಮದರಸಾ ಇದೆ, ಅಲ್ಲಿ ನೀವು ಹಿಜಾಬ್ ಧರಿಸಿದರೆ ನಮಗೆ ಏನೂ ತೊಂದರೆಯಿಲ್ಲ. ಆದರೆ, ಸಾರ್ವಜನಿಕವಾಗಿ ಎಲ್ಲಿ ‘ಹಿಂದೂ ಸಮಾಜ’ ಇದೆಯೋ ಅಲ್ಲಿ ಹಿಜಾಬ್ ಅಗತ್ಯವಿಲ್ಲ. ಅದನ್ನು ನಾವು ಸಹಿಸುವುದಿಲ್ಲ” ಎಂದಿದ್ದಾರೆ.
“ಹಿಜಾಬ್ ಎಂದರೆ ಪರ್ದಾ. ಅದನ್ನು ನಿಮ್ಮನ್ನು ಕೆಟ್ಟ ಕಣ್ಣುಗಳಿಂದ ನೋಡುವವರ ವಿರುದ್ಧ ಬಳಸಬೇಕು. ಆದರೆ ಹಿಂದೂಗಳು ಮಹಿಳೆಯರನ್ನು ಪೂಜಿಸುವುದರಿಂದ ಅವರನ್ನು (ಮಹಿಳೆಯರನ್ನು) ಕೆಟ್ಟ ದೃಷ್ಟಿಯಿಂದ ನೋಡುವುದಿಲ್ಲ. ನೀವು ನಿಮ್ಮ ಮನೆಗಳಲ್ಲಿ ಹಿಜಾಬ್ ಧರಿಸಬೇಕು” ಎಂದು ಹೇಳಿದ್ದಾರೆ.
ಪತ್ರಕರ್ತೆ ರಾಣಾ ಆಯೂಬ್ ಸೇರಿದಂತೆ ಹಲವು ಮಂದಿ ಪ್ರಜ್ಞಾ ಠಾಕೂರ್ ಹೇಳಿಕೆಯನ್ನು ಖಂಡಿಸಿದ್ದಾರೆ.
A Right wing Hindu terror accused in the Malegaon blasts who according to ATS investigations was responsible for conspiring, identifying and carrying out the Malegaon blasts that killed more than 10 muslims will now sermonise Muslim girls on #hijab. This is the NEW INDIA pic.twitter.com/1tUcb61hK3
— Rana Ayyub (@RanaAyyub) February 17, 2022
“ಮಾಲೆಗಾಂವ್ ಸ್ಫೋಟದ ಆರೋಪಿ ಬಲಪಂಥೀಯ ಹಿಂದೂ ಭಯೋತ್ಪಾದಕಿ, ಎಟಿಎಸ್ ತನಿಖೆಯ ಪ್ರಕಾರ 10 ಕ್ಕೂ ಹೆಚ್ಚು ಮುಸ್ಲಿಮರನ್ನು ಹತ್ಯೆಗೈದ ಮಾಲೆಗಾಂವ್ ಸ್ಫೋಟದ ಸಂಚು ಮತ್ತು ಜವಾಬ್ದಾರಿಯನ್ನು ಹೊತ್ತಿರುವವರು ಈಗ ಮುಸ್ಲಿಂ ಹುಡುಗಿಯರಿಗೆ ಹಿಜಾಬ್ ಕುರಿತು ಉಪದೇಶ ನೀಡುತ್ತಾರೆ. ಇದು ನವ ಭಾರತ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಡಿಸೆಂಬರ್ನಲ್ಲಿ ಉಡುಪಿಯಲ್ಲಿ ಹಿಜಾಬ್ ಧರಿಸಿ ಬಂದಿದ್ದ ಆರು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಇದನ್ನು ವಿರೋಧಿಸಿ ವಿದ್ಯಾರ್ಥಿನಿಯರು ಎರಡು ವಾರಕ್ಕೂ ಹೆಚ್ಚು ದಿನ ಪ್ರತಿಭಟನೆ ನಡೆಸುತ್ತಿದ್ದರು. ಬಳಿಕ ಇದು ಹಿಜಾಬ್- ಕೇಸರಿ ಶಾಲು ವಿವಾದವಾಗಿ ಕುಂದಾಪುರದ ಕಾಲೇಜಿಗೆ ಹಬ್ಬಿತು. ಅಲ್ಲಿಂದ ರಾಜ್ಯದ ಇತರ ಕಾಲೇಜುಗಳಿಗೆ ಹರಡಿ ದೊಡ್ಡ ವಿವಾದವಾಗಿದೆ.
ಇದನ್ನೂ ಓದಿ: ಪೇಟ ಧರಿಸಿದವರು ಸೇನೆಯಲ್ಲಿರಬಹುದಾದರೆ, ಶಾಲೆಯಲ್ಲಿ ಹಿಜಾಬ್ ಯಾಕಿರಬಾರದು: ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್