Homeಅಂಕಣಗಳುಬಹುಜನ ಭಾರತ; ಮನುವಾದ ಸುಣ್ಣವಾದರೆ ತಾಲಿಬಾನ್ ಬೆಣ್ಣೆ ಹೇಗಾದೀತು?

ಬಹುಜನ ಭಾರತ; ಮನುವಾದ ಸುಣ್ಣವಾದರೆ ತಾಲಿಬಾನ್ ಬೆಣ್ಣೆ ಹೇಗಾದೀತು?

- Advertisement -
- Advertisement -

ನಿರಂತರ ಬಾಹ್ಯ ಮತ್ತು ಆಂತರಿಕ ದಾಳಿಗಳಿಗೆ ಗುರಿಯಾಗುತ್ತಲೇ ಬಂದಿರುವ ಪುಟ್ಟ ದೇಶ ಅಫ್ಘಾನಿಸ್ತಾನ. ಯಾರೂ ಗೆಲ್ಲಲಾಗದ ನೆಲವೆಂಬ ಪ್ರತೀತಿ. ’ಸಾಮ್ರಾಜ್ಯಗಳ ಸಮಾಧಿ’ ಎಂದೇ ಇತಿಹಾಸ ಪ್ರಸಿದ್ಧ ದಾಳಿಕೋರರ, ಧರ್ಮಾಂಧರ, ಭಯೋತ್ಪಾದಕರ, ಅತೀವ ಬಡತನ, ಭ್ರಷ್ಟಾಚಾರದ ತಿರುಗಣಿಗೆ ಸಿಲುಕಿ ನಲುಗಿರುವ ನತದೃಷ್ಟ ನಾಡು.

ಮೂರೂಕಾಲು ಕೋಟಿಯ ಪೈಕಿ ಶೇ.99.7ರಷ್ಟು ಜನ ಇಸ್ಲಾಮ್ ಅನುಯಾಯಿಗಳು. ಇಸ್ಲಾಮ್ ಕಾಲಿಟ್ಟ ಹೊತ್ತಿನಲ್ಲಿ ಈ ದೇಶದ ಬಹುಸಂಖ್ಯಾತರು ಬೌದ್ಧರು ಮತ್ತು ಜರತುಷ್ಟ್ರರು.

ಎರಡನೆಯ ವಿಶ್ವಯುದ್ಧದ ನಂತರ ಸೂಪರ್ ಪವರ್‌ಗಳ ನಡುವಣ ಶೀತಲಯುದ್ಧಕ್ಕೆ ಬಲಿಯಾಯಿತು ಈ ದೇಶ. ರಷ್ಯಾ ಅಮೆರಿಕೆಯ ನಡುವಣ ಮೇಲಾಟದ ವಸಾಹತು ಆಯಿತು. ಪರಿಣಾಮವಾಗಿ ಧರ್ಮಾಂಧರು-ಭಯೋತ್ಪಾದಕರು ತಲೆಯೆತ್ತಿದರು. ಎಲ್ಲೆಡೆ ಪುರುಷಾಧಿಪತ್ಯದ ಕ್ರೌರ್ಯಕ್ಕೆ ಸಿಲುಕಿರುವ ಮಹಿಳೆಯ ಸ್ಥಿತಿ ಈ ನೆಲದಲ್ಲಿ ದುಸ್ಥಿತಿಯ ತಳಾತಳವನ್ನು ಮುಟ್ಟಿತು.

ಸೋವಿಯತ್ ಆಕ್ರಮಣದ ವಿರುದ್ಧ ಮುಜಾಹಿದೀನ್ ಧರ್ಮಾಂಧ ಶಕ್ತಿಗಳನ್ನು ಅಮೆರಿಕ ಮತ್ತು ಪಾಕಿಸ್ತಾನ ಎತ್ತಿಕಟ್ಟಿ ಬೆಳೆಸಿದವು. ಅಮೆರಿಕನ್ ಆಕ್ರಮಣದ ವಿರುದ್ಧ ಪಾಕಿಸ್ತಾನದ ಗುಪ್ತ ಕುಮ್ಮಕ್ಕಿನೊಂದಿಗೆ ತಲೆಯೆತ್ತಿದ್ದು ತಾಲಿಬಾನ್. ತಾಲಿಬಾನ್ ಎಂದರೆ ಪಶ್ತೋ ಭಾಷೆಯಲ್ಲಿ ವಿದ್ಯಾರ್ಥಿಗಳು ಎಂದರ್ಥ. 1990ರ ದಶಕದಲ್ಲಿ ಉತ್ತರ ಪಾಕಿಸ್ತಾನದಲ್ಲಿ ಹೊಮ್ಮಿದ ಧಾರ್ಮಿಕ ಆಂದೋಲನವಿದು. ಸೌದಿ ಅರೇಬಿಯಾದ ಹಣದ ನೆರವಿನಿಂದ ನಡೆದ ಸುನ್ನಿ ಇಸ್ಲಾಮ್ ಕಟ್ಟರ್‌ವಾದವನ್ನು ಬೋಧಿಸುವ ಮಠ. ತನ್ನ ಮೂಲ ಅರ್ಥವನ್ನು ಕಳೆದುಕೊಂಡ ತಾಲಿಬಾನ್ ಪದ ಕಾಲಕ್ರಮೇಣ ಗಳಿಸಿಕೊಂಡ ಕುಖ್ಯಾತ ಅರ್ಥವ್ಯಾಪ್ತಿಯೇ ಬೇರೆ.

1996-2001ರ ಅವಧಿಯತಾಲಿಬಾನ್ ಆಡಳಿತ ಮತ್ತು ಆನಂತರ ಪದಚ್ಯುತಿಯ 20 ವರ್ಷಗಳ ಕಾಲ ನಡೆಸಿದ ಬರ್ಬರ ದಾಳಿಗಳ ದುಃಸ್ವಪ್ನಗಳಿಂದ ಆಪ್ಘನ್ ಜನತೆ ಭಯಭೀತಗೊಂಡಿದೆ. ಶಿಕ್ಷಣ, ಉದ್ಯೋಗ, ರಾಜಕಾರಣ ಮುಂತಾದ ಸಾರ್ವಜನಿಕ ಬದುಕಿನಿಂದ ಅದೃಶ್ಯರಾಗಿ ನಾಲ್ಕು ಗೋಡೆಗಳ ನಡುವೆ ಬದುಕಬೇಕಿರುವ ಮಹಿಳೆಯರ ಸ್ಥಿತಿ ದಾರುಣ.

ಶರಿಯಾ ಕಾನೂನುಗಳ ಪ್ರಕಾರ ಸಾರ್ವಜನಿಕ ಮರಣದಂಡನೆ ನೀಡುವ, ಅಂಗಾಂಗಗಳನ್ನು
ಕತ್ತರಿಸುವ ಶಿಕ್ಷೆಗಳು, ಗಂಡಸರು ಗಡ್ಡ ಬೆಳೆಸಬೇಕೆಂಬ ನಿರ್ಬಂಧ ಹೇರಲಾಯಿತು. ಸಿನೆಮಾ, ಟೀವಿ, ಸಂಗೀತವನ್ನು ನಿಷೇಧಿಸಲಾಯಿತು. ಉಡುಗೆತೊಡುಗೆಗಳ ವಿಧಿ ನಿಷೇಧಗಳೂ ಜಾರಿಗೆ ಬಂದವು. ಅಡಿಯಿಂದ ಮುಡಿತನಕ ಬಲವಂತದ ಬುರ್ಖಾ ಧಾರಣೆ, ಗಂಡಸು ಜೊತೆಗಿಲ್ಲದೆ ಹೊಸ್ತಿಲು ದಾಟಕೂಡದು ಮುಂತಾದ ಹತ್ತು ಹಲವು ಅಮಾನವೀಯ ನಿರ್ಬಂಧಗಳನ್ನು ಹೆಣ್ಣುಮಕ್ಕಳ ಮೇಲೆ ವಿಧಿಸಲಾಯಿತು. ಹತ್ತು ವರ್ಷ ದಾಟಿದ ಹೆಣ್ಣುಮಕ್ಕಳು ಶಾಲೆಗೆ ಹೋಗುವುದು ನಿಷಿದ್ಧವೆಂದು ಸಾರಲಾಯಿತು. ಮಾನವೀಯ ಹಕ್ಕುಗಳನ್ನು ತುಳಿಯಲಾಯಿತು. ಸಾಂಸ್ಕೃತಿಕ ಬರ್ಬರತೆ ಮೆರೆಯಿತು. ಅಂತಾರಾಷ್ಟ್ರೀಯ ಆಕ್ರೋಶವನ್ನೂ ಲೆಕ್ಕಿಸದೆ ಬಾಮಿಯಾ ಕಣಿವೆಯಲ್ಲಿ ಕೊರೆಯಲಾಗಿದ್ದ ಆರನೆಯ ಶತಮಾನದ ಬೃಹತ್ ಬುದ್ಧ ಪ್ರತಿಮೆಗಳನ್ನು ಫಿರಂಗಿಗಳಿಂದ ಸಿಡಿಸಿ ನಾಶಮಾಡಲಾಯಿತು. ಧಾರ್ಮಿಕ ಅಲ್ಪಸಂಖ್ಯಾತರಾದ ಶಿಯಾ ಮುಸಲ್ಮಾನರು ನಿರಂತರ ಹತ್ಯೆಗೆ ಈಡಾದರು. ಧಾರ್ಮಿಕ ಅಲ್ಪಸಂಖ್ಯಾತರಾದ ಹಿಂದೂಗಳು ಮತ್ತು ಸಿಖ್ಖರ ಮೇಲಿನ ದಾಳಿಗಳು ನಿರಂತರವಾದವು. ಅವರ ಪ್ರಮಾಣ ನಶಿಸುತ್ತಲೇ ಹೋಯಿತು.

ಇದೀಗ ಪುನಃ ಆಡಳಿತ ಸೂತ್ರ ಹಿಡಿದಿರುವ ತಾಲೀಬಾನ್ ಇಸ್ಲಾಮಿಕ್ ಕಾನೂನುಗಳ ಚೌಕಟ್ಟಿನಲ್ಲೇ ಆಡಳಿತ ನಡೆಸುವುದಾಗಿ ಸಾರಿದೆ. ಆದರೆ ಹಳೆಯ ಅನುಭವಗಳ ಮೇರೆಗೆ ಮೆದು ಬದಲಾವಣೆಗಳನ್ನು ಕಾಣಬಹುದಾಗಿದೆ ಎಂದಿದೆ. ವರ್ಚಸ್ಸು ಸುಧಾರಿಸಿಕೊಳ್ಳುವ ಕಸರತ್ತಿನಲ್ಲಿ ತೊಡಗಿದೆ. ಕ್ಷಮಾದಾನ, ಮೀಡಿಯಾ ಸ್ವಾತಂತ್ರ್ಯ, ಮಹಿಳೆಯರ ಹಕ್ಕುಗಳ ಬಗ್ಗೆ ಮಾತಾಡತೊಡಗಿದೆ. ಆದರೆ ಬಾಯಲ್ಲಿನ ಬೆಣ್ಣೆಗಿಂತ ಬಗಲಲ್ಲಿನ ದೊಣ್ಣೆಯೇ ಸತ್ಯವೆಂಬುದು ಹಳೆಯ ಅನುಭವ.

ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳಲು ಅಪ್ಘಾನಿಸ್ತಾನವನ್ನು ಧರ್ಮಾಂಧತೆಯ ಸಂಕೋಲೆಗಳಲ್ಲಿ ಮತ್ತಷ್ಟು ಬಿಗಿಯಾಗಿ ಬಂಧಿಸಿದ್ದು ಅಮೆರಿಕ ಮತ್ತು ಪಾಕಿಸ್ತಾನ. ವಿಶೇಷವಾಗಿ ಪಾಕಿಸ್ತಾನದ ಬೆಂಬಲವಿಲ್ಲದೆ ಹೋಗಿದ್ದರೆ ತಾಲಿಬಾನ್‌ಗಳ ಈಗಿನ ಗೆಲುವು ಇಷ್ಟು ಸಲೀಸಾಗಿರುತ್ತಿರಲಿಲ್ಲ. ಆಫ್ಘನ್‌ತಾಲಿಬಾನ್ ಮುಖವಾಡ ತೊಟ್ಟ ಪಾಕಿಸ್ತಾನಿ ಆಕ್ರಮಣವಿದು ಎಂಬ ಸತ್ಯ ದಿನದಿಂದ ದಿನಕ್ಕೆ ಹೆಚ್ಚು ನಿಚ್ಚಳವಾಗತೊಡಗಿದೆ. ತಾಲೀಬಾನನ್ನು ಅದು ಹುಟ್ಟಿದಾಗಿನಿಂದ ಸತತ ಪೊರೆಯುತ್ತ ಬಂದಿರುವ ದೇಶವಿದು.

ವಿಶ್ವದ ಶೇ.90ರಷ್ಟು ಅಫೀಮು- ಹೆರಾಯಿನ್ ಮಾದಕ ವಸ್ತುಗಳ ತವರು ಅಫ್ಘಾನಿಸ್ತಾನ. ಈ ಅಫೀಮು ದೈತ್ಯನ ಮೀರಿಸುವ ಮತ್ತೊಬ್ಬ ಮಾದಕದ್ರವ್ಯ ಎದುರಾಳಿ ಅಫ್ಘಾನಿಸ್ತಾನದಲ್ಲೇ ಮೈ ತಳೆಯುತ್ತಿದ್ದಾನೆ. ಅವನ ಹೆಸರು ಮೆಥಾಂಫೆಟಾಮೈನ್ (Methamphetamine). ನೇರವಾಗಿ ಮನುಷ್ಯ ದೇಹದ ನರಮಂಡಲ ವ್ಯವಸ್ಥೆಯ ಕೇಂದ್ರಕ್ಕೇ ಲಗ್ಗೆ ಹಾಕಿ ಮರಗಟ್ಟಿಸುವ ಮಾದಕದ್ರವ್ಯ. ಪರಮ ಅಂಟಿನ ನಂಟು. ಚಟ ಅಂಟಿದರೆ ಮರಣವೇ ಬಿಡುಗಡೆಯ ಬಾಗಿಲು. ಮೆಥ್, ಬ್ಲೂ, ಐಸ್, ಕ್ರಿಸ್ಟಲ್-ಗ್ಲ್ಯಾಸ್ ಎಂದೂ ವ್ಯಸನಲೋಕದಲ್ಲಿ ಜನಜನಿತ.
ಅಫ್ಘಾನ್ ಅಫೀಮು ಉದ್ಯಮದ ಸೊಂಟ ಮುರಿಯುವ ಅಮೆರಿಕೆಯ ಪಣ ಈಡೇರಲಿಲ್ಲ. ಬದಲಾಗಿ 2001-2018ರ ನಡುವಣ ಅವಧಿಯಲ್ಲಿ ಈ ಉದ್ಯಮ ನಾಲ್ಕು ಪಟ್ಟು ಹೆಚ್ಚಿತು. ಇದೀಗ ಭಯಾನಕ ಮೆಥ್ ಆಯಾಮವೂ ಸೇರಿಕೊಂಡಿದೆ. ಹಲವು ಪ್ರತಿಕೂಲಗಳ ಕಾರಣ ಈ ವಲಯದ ಮೆಥ್ ಉತ್ಪಾದನಾ ಕೇಂದ್ರ ಇರಾನಿನಿಂದ ಅಫ್ಘಾನ್‌ಗೆ ವರ್ಗವಾಯಿತು.

2018ರಲ್ಲಿ ವಿಪರೀತ ಉತ್ಪಾದನೆಯ ಕಾರಣ ಅಫೀಮು ದರ ಭಾರೀ ಕುಸಿತಎದುರಿಸಿತು. ಪರ್ಯಾಯ ಆದಾಯದ ದಾರಿಯಾಗಿ ತೆರೆದುಕೊಂಡದ್ದು ಮೆಥ್ ಉತ್ಪಾದನೆ. ಈ ಉತ್ಪಾದನೆಗೆ ಬೇಕಿರುವ ಮುಖ್ಯ ರಾಸಾಯನಿಕ ಎಫಿಡ್ರೈನ್. ಅಫ್ಘಾನಿಸ್ತಾನದಲ್ಲಿ ತಂತಾನೇ ಕಳೆಯಾಗಿ ಬೆಳೆಯುವ ಸಸ್ಯ ಎಫಿಡ್ರಾದಿಂದ ಹೇರಳ ಪ್ರಮಾಣದ ಎಫಿಡ್ರೈನ್ ಉತ್ಪಾದಿಸಬಹುದು. ಎಫಿಡ್ರೈನ್ ರಾಸಾಯನಿಕವನ್ನು ಆಮದು ಮಾಡಿಕೊಳ್ಳುವ ಗೊಡವೆಯೇ ಇಲ್ಲ. ಈ ಕಾರಣದಿಂದಾಗಿ ಆಫ್ಘನ್ ಮೆಥ್ ಮಾರಾಟ ದರಗಳು ಅತಿ ಅಗ್ಗವೆನಿಸಿದವು. ಶತಕೋಟಿ ಡಾಲರುಗಳ ಮೌಲ್ಯದ ಮೆಥ್ ತಯಾರಿಸುವ ಪ್ರಯೋಗಶಾಲೆಗಳು ಸಾವಿರಾರು ಸಂಖ್ಯೆಯಲ್ಲಿ ತಲೆಯೆತ್ತಿದವು. ಅಫೀಮು ಹೆರಾಯಿನ್ ಜೊತೆಗೆ ಮೆಥ್ ಎಂಬ ಈ ಘೋರ ದ್ರವ್ಯ ಅಫ್ಘಾನಿಸ್ತಾನದಿಂದ ಹೊರಬಿದ್ದು ವಿಶ್ವದ ನಾನಾ ದೇಶಗಳಿಗೆ ಕಳ್ಳಸಾಗಣೆಯಾಗುತ್ತಿದೆ. ಅಮೆರಿಕನ್ ಪಡೆಗಳ ನಿರ್ಗಮನ ಈ ’ಉದ್ಯಮ’ಕ್ಕೆ ರೆಕ್ಕೆಗಳನ್ನು ಹಚ್ಚುವುದು ನಿಶ್ಚಿತ.

ಅಫೀಮಿನ ಜೊತೆಜೊತೆಗೆ ಎಫಿಡ್ರಾ ಮತ್ತು ಮೆಥ್ ಮೇಲಿನ ತೆರಿಗೆಯ ಮೂಲಕ ತಾಲೀಬಾನ್ ಅಪಾರ ಆದಾಯವನ್ನು ಸಂಗ್ರಹಿಸುತ್ತಿದೆ. ಪೆಟ್ರೋಲಿಯಂ ಇಂಧನಗಳು, ಸರಕು ಸಾಗಾಣಿಕೆಯ ಮೇಲೆ ತೆರಿಗೆ
ಹೇರಿಕೆ ಹಾಗೂ ಅಮೂಲ್ಯ ಖನಿಜಗಳ ಗಣಿಗಾರಿಕೆ ಕೂಡತಾಲಿಬಾನ್‌ಗೆ ಭಾರೀ ಆದಾಯ ಮೂಲಗಳಾಗಿವೆ. ಇದೆಲ್ಲ ಆದಾಯದ ಗುರಿ ಶಸ್ತ್ರಾಸ್ತ್ರ ಖರೀದಿ ಮತ್ತು ಶರಿಯಾ ಆಡಳಿತ ಜಾರಿ.

ಖುರಾನಿನ ಪ್ರಕಾರ ಅಮಲು ಅಥವಾ ನಶೆಯ ಪದಾರ್ಥಗಳ ಸೇವನೆ ನಿಷಿದ್ಧ. ಆದರೆ ಶರಿಯಾ ಕಾನೂನಿನ ಮಾತಾಡುವತಾಲಿಬಾನ್‌ಗೆ ಅದರ ಪರಿವೆಯಿಲ್ಲ. ಗುರಿ ಸಾಧನೆಗಾಗಿ ಅಡ್ಡದಾರಿ ಹಿಡಿಯಲು ಹೇಸಿಗೆಯಿಲ್ಲ.

ಮಹಿಳೆಯರು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಪೀಡಿಸುವ ಮನುವಾದಿಗಳು ಮತ್ತು ಧರ್ಮಾಂಧ ತಾಲಿಬಾನಿಗಳಿಗೂ ಹೆಚ್ಚು ವ್ಯತ್ಯಾಸವಿಲ್ಲ. ಅಮೆರಿಕನ್ ಸಾಮ್ರಾಜ್ಯಶಾಹಿಯ ವಿರೋಧಕ್ಕಾಗಿಯೋ, ಇಸ್ಲಾಮಿನ
ಸಮರ್ಥನೆಗಾಗಿಯೋ ಇಂತಹ ಮತಾಂಧ ಶಕ್ತಿಗಳನ್ನು ಸಮರ್ಥಿಸಿಕೊಳ್ಳುವುದು ತರವಲ್ಲ.


ಇದನ್ನೂ ಓದಿ: ಬಹುಜನ ಭಾರತ; ದಲಿತ ದ್ವೇಷವನ್ನು ಪ್ರತಿಭೆಯಿಂದ ಗೆದ್ದವರು ಪಲ್ವಂಕರ್ ಸೋದರರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...