Homeಅಂಕಣಗಳುಬಹುಜನ ಭಾರತ; ಮನುವಾದ ಸುಣ್ಣವಾದರೆ ತಾಲಿಬಾನ್ ಬೆಣ್ಣೆ ಹೇಗಾದೀತು?

ಬಹುಜನ ಭಾರತ; ಮನುವಾದ ಸುಣ್ಣವಾದರೆ ತಾಲಿಬಾನ್ ಬೆಣ್ಣೆ ಹೇಗಾದೀತು?

- Advertisement -
- Advertisement -

ನಿರಂತರ ಬಾಹ್ಯ ಮತ್ತು ಆಂತರಿಕ ದಾಳಿಗಳಿಗೆ ಗುರಿಯಾಗುತ್ತಲೇ ಬಂದಿರುವ ಪುಟ್ಟ ದೇಶ ಅಫ್ಘಾನಿಸ್ತಾನ. ಯಾರೂ ಗೆಲ್ಲಲಾಗದ ನೆಲವೆಂಬ ಪ್ರತೀತಿ. ’ಸಾಮ್ರಾಜ್ಯಗಳ ಸಮಾಧಿ’ ಎಂದೇ ಇತಿಹಾಸ ಪ್ರಸಿದ್ಧ ದಾಳಿಕೋರರ, ಧರ್ಮಾಂಧರ, ಭಯೋತ್ಪಾದಕರ, ಅತೀವ ಬಡತನ, ಭ್ರಷ್ಟಾಚಾರದ ತಿರುಗಣಿಗೆ ಸಿಲುಕಿ ನಲುಗಿರುವ ನತದೃಷ್ಟ ನಾಡು.

ಮೂರೂಕಾಲು ಕೋಟಿಯ ಪೈಕಿ ಶೇ.99.7ರಷ್ಟು ಜನ ಇಸ್ಲಾಮ್ ಅನುಯಾಯಿಗಳು. ಇಸ್ಲಾಮ್ ಕಾಲಿಟ್ಟ ಹೊತ್ತಿನಲ್ಲಿ ಈ ದೇಶದ ಬಹುಸಂಖ್ಯಾತರು ಬೌದ್ಧರು ಮತ್ತು ಜರತುಷ್ಟ್ರರು.

ಎರಡನೆಯ ವಿಶ್ವಯುದ್ಧದ ನಂತರ ಸೂಪರ್ ಪವರ್‌ಗಳ ನಡುವಣ ಶೀತಲಯುದ್ಧಕ್ಕೆ ಬಲಿಯಾಯಿತು ಈ ದೇಶ. ರಷ್ಯಾ ಅಮೆರಿಕೆಯ ನಡುವಣ ಮೇಲಾಟದ ವಸಾಹತು ಆಯಿತು. ಪರಿಣಾಮವಾಗಿ ಧರ್ಮಾಂಧರು-ಭಯೋತ್ಪಾದಕರು ತಲೆಯೆತ್ತಿದರು. ಎಲ್ಲೆಡೆ ಪುರುಷಾಧಿಪತ್ಯದ ಕ್ರೌರ್ಯಕ್ಕೆ ಸಿಲುಕಿರುವ ಮಹಿಳೆಯ ಸ್ಥಿತಿ ಈ ನೆಲದಲ್ಲಿ ದುಸ್ಥಿತಿಯ ತಳಾತಳವನ್ನು ಮುಟ್ಟಿತು.

ಸೋವಿಯತ್ ಆಕ್ರಮಣದ ವಿರುದ್ಧ ಮುಜಾಹಿದೀನ್ ಧರ್ಮಾಂಧ ಶಕ್ತಿಗಳನ್ನು ಅಮೆರಿಕ ಮತ್ತು ಪಾಕಿಸ್ತಾನ ಎತ್ತಿಕಟ್ಟಿ ಬೆಳೆಸಿದವು. ಅಮೆರಿಕನ್ ಆಕ್ರಮಣದ ವಿರುದ್ಧ ಪಾಕಿಸ್ತಾನದ ಗುಪ್ತ ಕುಮ್ಮಕ್ಕಿನೊಂದಿಗೆ ತಲೆಯೆತ್ತಿದ್ದು ತಾಲಿಬಾನ್. ತಾಲಿಬಾನ್ ಎಂದರೆ ಪಶ್ತೋ ಭಾಷೆಯಲ್ಲಿ ವಿದ್ಯಾರ್ಥಿಗಳು ಎಂದರ್ಥ. 1990ರ ದಶಕದಲ್ಲಿ ಉತ್ತರ ಪಾಕಿಸ್ತಾನದಲ್ಲಿ ಹೊಮ್ಮಿದ ಧಾರ್ಮಿಕ ಆಂದೋಲನವಿದು. ಸೌದಿ ಅರೇಬಿಯಾದ ಹಣದ ನೆರವಿನಿಂದ ನಡೆದ ಸುನ್ನಿ ಇಸ್ಲಾಮ್ ಕಟ್ಟರ್‌ವಾದವನ್ನು ಬೋಧಿಸುವ ಮಠ. ತನ್ನ ಮೂಲ ಅರ್ಥವನ್ನು ಕಳೆದುಕೊಂಡ ತಾಲಿಬಾನ್ ಪದ ಕಾಲಕ್ರಮೇಣ ಗಳಿಸಿಕೊಂಡ ಕುಖ್ಯಾತ ಅರ್ಥವ್ಯಾಪ್ತಿಯೇ ಬೇರೆ.

1996-2001ರ ಅವಧಿಯತಾಲಿಬಾನ್ ಆಡಳಿತ ಮತ್ತು ಆನಂತರ ಪದಚ್ಯುತಿಯ 20 ವರ್ಷಗಳ ಕಾಲ ನಡೆಸಿದ ಬರ್ಬರ ದಾಳಿಗಳ ದುಃಸ್ವಪ್ನಗಳಿಂದ ಆಪ್ಘನ್ ಜನತೆ ಭಯಭೀತಗೊಂಡಿದೆ. ಶಿಕ್ಷಣ, ಉದ್ಯೋಗ, ರಾಜಕಾರಣ ಮುಂತಾದ ಸಾರ್ವಜನಿಕ ಬದುಕಿನಿಂದ ಅದೃಶ್ಯರಾಗಿ ನಾಲ್ಕು ಗೋಡೆಗಳ ನಡುವೆ ಬದುಕಬೇಕಿರುವ ಮಹಿಳೆಯರ ಸ್ಥಿತಿ ದಾರುಣ.

ಶರಿಯಾ ಕಾನೂನುಗಳ ಪ್ರಕಾರ ಸಾರ್ವಜನಿಕ ಮರಣದಂಡನೆ ನೀಡುವ, ಅಂಗಾಂಗಗಳನ್ನು
ಕತ್ತರಿಸುವ ಶಿಕ್ಷೆಗಳು, ಗಂಡಸರು ಗಡ್ಡ ಬೆಳೆಸಬೇಕೆಂಬ ನಿರ್ಬಂಧ ಹೇರಲಾಯಿತು. ಸಿನೆಮಾ, ಟೀವಿ, ಸಂಗೀತವನ್ನು ನಿಷೇಧಿಸಲಾಯಿತು. ಉಡುಗೆತೊಡುಗೆಗಳ ವಿಧಿ ನಿಷೇಧಗಳೂ ಜಾರಿಗೆ ಬಂದವು. ಅಡಿಯಿಂದ ಮುಡಿತನಕ ಬಲವಂತದ ಬುರ್ಖಾ ಧಾರಣೆ, ಗಂಡಸು ಜೊತೆಗಿಲ್ಲದೆ ಹೊಸ್ತಿಲು ದಾಟಕೂಡದು ಮುಂತಾದ ಹತ್ತು ಹಲವು ಅಮಾನವೀಯ ನಿರ್ಬಂಧಗಳನ್ನು ಹೆಣ್ಣುಮಕ್ಕಳ ಮೇಲೆ ವಿಧಿಸಲಾಯಿತು. ಹತ್ತು ವರ್ಷ ದಾಟಿದ ಹೆಣ್ಣುಮಕ್ಕಳು ಶಾಲೆಗೆ ಹೋಗುವುದು ನಿಷಿದ್ಧವೆಂದು ಸಾರಲಾಯಿತು. ಮಾನವೀಯ ಹಕ್ಕುಗಳನ್ನು ತುಳಿಯಲಾಯಿತು. ಸಾಂಸ್ಕೃತಿಕ ಬರ್ಬರತೆ ಮೆರೆಯಿತು. ಅಂತಾರಾಷ್ಟ್ರೀಯ ಆಕ್ರೋಶವನ್ನೂ ಲೆಕ್ಕಿಸದೆ ಬಾಮಿಯಾ ಕಣಿವೆಯಲ್ಲಿ ಕೊರೆಯಲಾಗಿದ್ದ ಆರನೆಯ ಶತಮಾನದ ಬೃಹತ್ ಬುದ್ಧ ಪ್ರತಿಮೆಗಳನ್ನು ಫಿರಂಗಿಗಳಿಂದ ಸಿಡಿಸಿ ನಾಶಮಾಡಲಾಯಿತು. ಧಾರ್ಮಿಕ ಅಲ್ಪಸಂಖ್ಯಾತರಾದ ಶಿಯಾ ಮುಸಲ್ಮಾನರು ನಿರಂತರ ಹತ್ಯೆಗೆ ಈಡಾದರು. ಧಾರ್ಮಿಕ ಅಲ್ಪಸಂಖ್ಯಾತರಾದ ಹಿಂದೂಗಳು ಮತ್ತು ಸಿಖ್ಖರ ಮೇಲಿನ ದಾಳಿಗಳು ನಿರಂತರವಾದವು. ಅವರ ಪ್ರಮಾಣ ನಶಿಸುತ್ತಲೇ ಹೋಯಿತು.

ಇದೀಗ ಪುನಃ ಆಡಳಿತ ಸೂತ್ರ ಹಿಡಿದಿರುವ ತಾಲೀಬಾನ್ ಇಸ್ಲಾಮಿಕ್ ಕಾನೂನುಗಳ ಚೌಕಟ್ಟಿನಲ್ಲೇ ಆಡಳಿತ ನಡೆಸುವುದಾಗಿ ಸಾರಿದೆ. ಆದರೆ ಹಳೆಯ ಅನುಭವಗಳ ಮೇರೆಗೆ ಮೆದು ಬದಲಾವಣೆಗಳನ್ನು ಕಾಣಬಹುದಾಗಿದೆ ಎಂದಿದೆ. ವರ್ಚಸ್ಸು ಸುಧಾರಿಸಿಕೊಳ್ಳುವ ಕಸರತ್ತಿನಲ್ಲಿ ತೊಡಗಿದೆ. ಕ್ಷಮಾದಾನ, ಮೀಡಿಯಾ ಸ್ವಾತಂತ್ರ್ಯ, ಮಹಿಳೆಯರ ಹಕ್ಕುಗಳ ಬಗ್ಗೆ ಮಾತಾಡತೊಡಗಿದೆ. ಆದರೆ ಬಾಯಲ್ಲಿನ ಬೆಣ್ಣೆಗಿಂತ ಬಗಲಲ್ಲಿನ ದೊಣ್ಣೆಯೇ ಸತ್ಯವೆಂಬುದು ಹಳೆಯ ಅನುಭವ.

ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳಲು ಅಪ್ಘಾನಿಸ್ತಾನವನ್ನು ಧರ್ಮಾಂಧತೆಯ ಸಂಕೋಲೆಗಳಲ್ಲಿ ಮತ್ತಷ್ಟು ಬಿಗಿಯಾಗಿ ಬಂಧಿಸಿದ್ದು ಅಮೆರಿಕ ಮತ್ತು ಪಾಕಿಸ್ತಾನ. ವಿಶೇಷವಾಗಿ ಪಾಕಿಸ್ತಾನದ ಬೆಂಬಲವಿಲ್ಲದೆ ಹೋಗಿದ್ದರೆ ತಾಲಿಬಾನ್‌ಗಳ ಈಗಿನ ಗೆಲುವು ಇಷ್ಟು ಸಲೀಸಾಗಿರುತ್ತಿರಲಿಲ್ಲ. ಆಫ್ಘನ್‌ತಾಲಿಬಾನ್ ಮುಖವಾಡ ತೊಟ್ಟ ಪಾಕಿಸ್ತಾನಿ ಆಕ್ರಮಣವಿದು ಎಂಬ ಸತ್ಯ ದಿನದಿಂದ ದಿನಕ್ಕೆ ಹೆಚ್ಚು ನಿಚ್ಚಳವಾಗತೊಡಗಿದೆ. ತಾಲೀಬಾನನ್ನು ಅದು ಹುಟ್ಟಿದಾಗಿನಿಂದ ಸತತ ಪೊರೆಯುತ್ತ ಬಂದಿರುವ ದೇಶವಿದು.

ವಿಶ್ವದ ಶೇ.90ರಷ್ಟು ಅಫೀಮು- ಹೆರಾಯಿನ್ ಮಾದಕ ವಸ್ತುಗಳ ತವರು ಅಫ್ಘಾನಿಸ್ತಾನ. ಈ ಅಫೀಮು ದೈತ್ಯನ ಮೀರಿಸುವ ಮತ್ತೊಬ್ಬ ಮಾದಕದ್ರವ್ಯ ಎದುರಾಳಿ ಅಫ್ಘಾನಿಸ್ತಾನದಲ್ಲೇ ಮೈ ತಳೆಯುತ್ತಿದ್ದಾನೆ. ಅವನ ಹೆಸರು ಮೆಥಾಂಫೆಟಾಮೈನ್ (Methamphetamine). ನೇರವಾಗಿ ಮನುಷ್ಯ ದೇಹದ ನರಮಂಡಲ ವ್ಯವಸ್ಥೆಯ ಕೇಂದ್ರಕ್ಕೇ ಲಗ್ಗೆ ಹಾಕಿ ಮರಗಟ್ಟಿಸುವ ಮಾದಕದ್ರವ್ಯ. ಪರಮ ಅಂಟಿನ ನಂಟು. ಚಟ ಅಂಟಿದರೆ ಮರಣವೇ ಬಿಡುಗಡೆಯ ಬಾಗಿಲು. ಮೆಥ್, ಬ್ಲೂ, ಐಸ್, ಕ್ರಿಸ್ಟಲ್-ಗ್ಲ್ಯಾಸ್ ಎಂದೂ ವ್ಯಸನಲೋಕದಲ್ಲಿ ಜನಜನಿತ.
ಅಫ್ಘಾನ್ ಅಫೀಮು ಉದ್ಯಮದ ಸೊಂಟ ಮುರಿಯುವ ಅಮೆರಿಕೆಯ ಪಣ ಈಡೇರಲಿಲ್ಲ. ಬದಲಾಗಿ 2001-2018ರ ನಡುವಣ ಅವಧಿಯಲ್ಲಿ ಈ ಉದ್ಯಮ ನಾಲ್ಕು ಪಟ್ಟು ಹೆಚ್ಚಿತು. ಇದೀಗ ಭಯಾನಕ ಮೆಥ್ ಆಯಾಮವೂ ಸೇರಿಕೊಂಡಿದೆ. ಹಲವು ಪ್ರತಿಕೂಲಗಳ ಕಾರಣ ಈ ವಲಯದ ಮೆಥ್ ಉತ್ಪಾದನಾ ಕೇಂದ್ರ ಇರಾನಿನಿಂದ ಅಫ್ಘಾನ್‌ಗೆ ವರ್ಗವಾಯಿತು.

2018ರಲ್ಲಿ ವಿಪರೀತ ಉತ್ಪಾದನೆಯ ಕಾರಣ ಅಫೀಮು ದರ ಭಾರೀ ಕುಸಿತಎದುರಿಸಿತು. ಪರ್ಯಾಯ ಆದಾಯದ ದಾರಿಯಾಗಿ ತೆರೆದುಕೊಂಡದ್ದು ಮೆಥ್ ಉತ್ಪಾದನೆ. ಈ ಉತ್ಪಾದನೆಗೆ ಬೇಕಿರುವ ಮುಖ್ಯ ರಾಸಾಯನಿಕ ಎಫಿಡ್ರೈನ್. ಅಫ್ಘಾನಿಸ್ತಾನದಲ್ಲಿ ತಂತಾನೇ ಕಳೆಯಾಗಿ ಬೆಳೆಯುವ ಸಸ್ಯ ಎಫಿಡ್ರಾದಿಂದ ಹೇರಳ ಪ್ರಮಾಣದ ಎಫಿಡ್ರೈನ್ ಉತ್ಪಾದಿಸಬಹುದು. ಎಫಿಡ್ರೈನ್ ರಾಸಾಯನಿಕವನ್ನು ಆಮದು ಮಾಡಿಕೊಳ್ಳುವ ಗೊಡವೆಯೇ ಇಲ್ಲ. ಈ ಕಾರಣದಿಂದಾಗಿ ಆಫ್ಘನ್ ಮೆಥ್ ಮಾರಾಟ ದರಗಳು ಅತಿ ಅಗ್ಗವೆನಿಸಿದವು. ಶತಕೋಟಿ ಡಾಲರುಗಳ ಮೌಲ್ಯದ ಮೆಥ್ ತಯಾರಿಸುವ ಪ್ರಯೋಗಶಾಲೆಗಳು ಸಾವಿರಾರು ಸಂಖ್ಯೆಯಲ್ಲಿ ತಲೆಯೆತ್ತಿದವು. ಅಫೀಮು ಹೆರಾಯಿನ್ ಜೊತೆಗೆ ಮೆಥ್ ಎಂಬ ಈ ಘೋರ ದ್ರವ್ಯ ಅಫ್ಘಾನಿಸ್ತಾನದಿಂದ ಹೊರಬಿದ್ದು ವಿಶ್ವದ ನಾನಾ ದೇಶಗಳಿಗೆ ಕಳ್ಳಸಾಗಣೆಯಾಗುತ್ತಿದೆ. ಅಮೆರಿಕನ್ ಪಡೆಗಳ ನಿರ್ಗಮನ ಈ ’ಉದ್ಯಮ’ಕ್ಕೆ ರೆಕ್ಕೆಗಳನ್ನು ಹಚ್ಚುವುದು ನಿಶ್ಚಿತ.

ಅಫೀಮಿನ ಜೊತೆಜೊತೆಗೆ ಎಫಿಡ್ರಾ ಮತ್ತು ಮೆಥ್ ಮೇಲಿನ ತೆರಿಗೆಯ ಮೂಲಕ ತಾಲೀಬಾನ್ ಅಪಾರ ಆದಾಯವನ್ನು ಸಂಗ್ರಹಿಸುತ್ತಿದೆ. ಪೆಟ್ರೋಲಿಯಂ ಇಂಧನಗಳು, ಸರಕು ಸಾಗಾಣಿಕೆಯ ಮೇಲೆ ತೆರಿಗೆ
ಹೇರಿಕೆ ಹಾಗೂ ಅಮೂಲ್ಯ ಖನಿಜಗಳ ಗಣಿಗಾರಿಕೆ ಕೂಡತಾಲಿಬಾನ್‌ಗೆ ಭಾರೀ ಆದಾಯ ಮೂಲಗಳಾಗಿವೆ. ಇದೆಲ್ಲ ಆದಾಯದ ಗುರಿ ಶಸ್ತ್ರಾಸ್ತ್ರ ಖರೀದಿ ಮತ್ತು ಶರಿಯಾ ಆಡಳಿತ ಜಾರಿ.

ಖುರಾನಿನ ಪ್ರಕಾರ ಅಮಲು ಅಥವಾ ನಶೆಯ ಪದಾರ್ಥಗಳ ಸೇವನೆ ನಿಷಿದ್ಧ. ಆದರೆ ಶರಿಯಾ ಕಾನೂನಿನ ಮಾತಾಡುವತಾಲಿಬಾನ್‌ಗೆ ಅದರ ಪರಿವೆಯಿಲ್ಲ. ಗುರಿ ಸಾಧನೆಗಾಗಿ ಅಡ್ಡದಾರಿ ಹಿಡಿಯಲು ಹೇಸಿಗೆಯಿಲ್ಲ.

ಮಹಿಳೆಯರು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಪೀಡಿಸುವ ಮನುವಾದಿಗಳು ಮತ್ತು ಧರ್ಮಾಂಧ ತಾಲಿಬಾನಿಗಳಿಗೂ ಹೆಚ್ಚು ವ್ಯತ್ಯಾಸವಿಲ್ಲ. ಅಮೆರಿಕನ್ ಸಾಮ್ರಾಜ್ಯಶಾಹಿಯ ವಿರೋಧಕ್ಕಾಗಿಯೋ, ಇಸ್ಲಾಮಿನ
ಸಮರ್ಥನೆಗಾಗಿಯೋ ಇಂತಹ ಮತಾಂಧ ಶಕ್ತಿಗಳನ್ನು ಸಮರ್ಥಿಸಿಕೊಳ್ಳುವುದು ತರವಲ್ಲ.


ಇದನ್ನೂ ಓದಿ: ಬಹುಜನ ಭಾರತ; ದಲಿತ ದ್ವೇಷವನ್ನು ಪ್ರತಿಭೆಯಿಂದ ಗೆದ್ದವರು ಪಲ್ವಂಕರ್ ಸೋದರರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಿವಮೊಗ್ಗ| ಅಂಗನವಾಡಿ ಸಹಾಯಕಿಯಾಗಿ ದಲಿತ ಮಹಿಳೆಯ ನೇಮಕ; ಗ್ರಾಮಸ್ಥರ ವಿರೋಧ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಗುಡ್ತಿ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರನ್ನು ಅಂಗನವಾಡಿ ಸಹಾಯಕಿಯಾಗಿ ನೇಮಕ ಮಾಡಿರುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿರುವ ಸುದ್ದಿ ಬೆಳಕಿಗೆ ಬಂದಿದ್ದು,...

ಉಮರ್ ಖಾಲಿದ್- ಶಾರ್ಜೀಲ್ ದೀರ್ಘಕಾಲದ ಬಂಧನದ ಬಗ್ಗೆ ಕಳವಳ; 100 ಕ್ಕೂ ಹೆಚ್ಚು ಪ್ರಮುಖರಿಂದ ಸಿಜೆಐಗೆ ಬಹಿರಂಗ ಪತ್ರ

2020 ರ ದೆಹಲಿ ಗಲಭೆ ಪಿತೂರಿ ಪ್ರಕರಣದಲ್ಲಿ ವಿದ್ಯಾರ್ಥಿ ಕಾರ್ಯಕರ್ತರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ದೀರ್ಘಕಾಲದ ಬಂಧನದ ಬಗ್ಗೆ ಕಳವಳ ವ್ಯಕ್ತಪಡಿಸಿ 100 ಕ್ಕೂ ಹೆಚ್ಚು ಬರಹಗಾರರು, ನಟರು,...

ಗೋಡ್ಸೆ ಆರ್‌ಎಸ್‌ಎಸ್‌ ಕಾರ್ಯಕರ್ತನಾಗಿದ್ದ ಎಂದು ಸಾವರ್ಕರ್ ಅವರ ಸೋದರಳಿಯ ಕೋರ್ಟ್‌ನಲ್ಲಿ ಹೇಳಿಕೆ: ಸಂಘದಿಂದ ಸ್ಪಷ್ಟನೆ ಕೇಳಿದ ಕಾಂಗ್ರೆಸ್

ಮುಂಬೈ: ಮಹಾತ್ಮ ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆ ಆರ್‌ಎಸ್‌ಎಸ್‌ನ ಸಕ್ರಿಯ ಸದಸ್ಯರಾಗಿದ್ದರು ಎಂದು ವಿನಾಯಕ್ ದಾಮೋದರ್ ಸಾವರ್ಕರ್ ಅವರ ಸೋದರಳಿಯ ಸತ್ಯಕಿ ಸಾವರ್ಕರ್ ನ್ಯಾಯಾಲಯದ ವಿಚಾರಣೆ ವೇಳೆ ನೀಡಿರುವ ಹೇಳಿಕೆ ಈಗ ದೇಶಾದ್ಯಂತ...

SIR ಅವಾಂತರ : ಆ.20ರಂದು ಮತ ಕಾವಲು ಸಮಿತಿಯಿಂದ ‘ಸಾಂಸ್ಕೃತಿಕ ಪ್ರತಿರೋಧ’

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ರಾಜ್ಯದಲ್ಲಿ ಸೃಷ್ಟಿಸಿರುವ ಅವಾಂತರಗಳ ವಿರುದ್ಧ ಗುರುವಾರ (ಆ.20) ಬೆಂಗಳೂರಿನ ಗಾಂಧಿ ಭವನದಲ್ಲಿ 'ಸಾಂಸ್ಕೃತಿಕ ಪ್ರತಿರೋಧ' ಹಮ್ಮಿಕೊಳ್ಳಲಾಗಿದೆ. ನಾಗರಿಕ ಮತ ಕಾವಲು ಸಮಿತಿ ಆಯೋಜಿಸಿರುವ ಕಾರ್ಯಕ್ರಮವನ್ನು ನಟ...

ಕರ್ನಾಟಕ ಎಸ್ಐಆರ್: ಬೆಂಗಳೂರಿನ ಮತದಾರರಲ್ಲಿ ಬಹಿಷ್ಕಾರ ಬೆದರಿಕೆ ಎದುರಿಸುತ್ತಿರುವವರಲ್ಲಿ ಶೇ. 59 ರಷ್ಟು ಜನ ಬಿಜೆಪಿ ಹಿಡಿತದಲ್ಲಿರುವ ಕ್ಷೇತ್ರಗಳವರು: ವರದಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಹಾಗೂ ಶುದ್ಧೀಕರಣದ ಹೆಸರಿನಲ್ಲಿ ನಡೆಯುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯು ಭಾರೀ ಚರ್ಚೆಗೆ ಕಾರಣವಾಗಿದೆ. ಚುನಾವಣಾ ಆಯೋಗವು ಪ್ರಕಟಿಸಿರುವ ಅಧಿಕೃತ ದತ್ತಾಂಶಗಳನ್ನು ಆಧರಿಸಿ...

ವಿದ್ಯಾರ್ಥಿ ಪ್ರತಿಭಟನೆ ತಡೆಯುವ ಆದೇಶ ವಾಪಸ್: ತೀವ್ರ ವಿರೋಧದ ಹಿನ್ನೆಲೆ ಹಿಂದೆ ಸರಿದ ತಮಿಳುನಾಡು ಸರ್ಕಾರ

ಎಡಪಕ್ಷಗಳು ಹಾಗೂ ತಮಿಳುನಾಡು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಘಟಿಸಿದ ಪ್ರತಿಭಟನೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದನ್ನು ತಡೆಯುವ ವಿವಾದಾತ್ಮಕ ಆದೇಶವನ್ನು ತೀವ್ರ ವಿರೋಧದ ಬೆನ್ನಲ್ಲೇ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರ ಹಿಂಪಡೆದಿದೆ. ಶಾಲಾ ಶಿಕ್ಷಣ...

“ದಲಿತ ಎಂಬ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ..’ ಬಿಜೆಪಿಯ ರಾಜೀನಾಮೆ ಬೇಡಿಕೆಗೆ ಸಚಿವ ಬಿ. ನಾಗೇಂದ್ರ ತಿರುಗೇಟು

"ನಾನು ದಲಿತ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರಿದವನು ಎಂಬ ಕಾರಣಕ್ಕಾಗಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ" ಎಂದು ಸಚಿವ ಬಿ. ನಾಗೇಂದ್ರ ಅವರು ತಮ್ಮ ರಾಜೀನಾಮೆ ಪಟ್ಟು ಹಿಡಿದಿರುವ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. "ಕೇಂದ್ರ ಸಚಿವರು...

ಉತ್ತರ ಪ್ರದೇಶ : ಮಾಜಿ ಸಚಿವ ಆಝಂ ಖಾನ್, ಮೊಹಮ್ಮದ್ ಅಲಿ ಜೌಹರ್ ವಿವಿಗೆ ಸೇರಿದ 10 ಸ್ಥಳಗಳಲ್ಲಿ ಇಡಿ ಶೋಧ

ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ (ಆ.19) ಉತ್ತರ ಪ್ರದೇಶದ ರಾಂಪುರ, ಸಹಾರನ್‌ಪುರ ಮತ್ತು ದೆಹಲಿಯಲ್ಲಿ ಶೋಧ ನಡೆಸಿದೆ. ವರದಿಗಳ ಪ್ರಕಾರ, ಹಣ ಅಕ್ರಮ...

KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು ರದ್ದು: ಹೈಕೋರ್ಟ್‌ನಿಂದ ಮರುನೇಮಕಕ್ಕೆ ಆದೇಶ

ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತದ ಆರೋಪದಡಿ ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಅಮಾನತು ಆದೇಶವನ್ನು ಪ್ರಶ್ನಿಸಿ ಶಿವಶಂಕರಪ್ಪ...

ಗೋಡ್ಸೆ ಹೊಗಳಿಕೆ, ದಲಿತದ್ವೇಷ, ಸ್ತ್ರೀದ್ವೇಷ ಮತ್ತು ಮುಸ್ಲಿಂ ದ್ವೇಷ: ತೀವ್ರ ಪರಿಶೀಲನೆಯಲ್ಲಿರುವ ಬಿಜೆಪಿಯ ಹೊಸ ಸಾಮಾಜಿಕ ಮಾಧ್ಯಮ ತಂಡದ ವಿರುದ್ಧ ಜನಾಕ್ರೋಶ

ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆಯನ್ನು ಹೊಗಳಿದ ಹಳೆಯ ಪೋಸ್ಟ್‌ಗಳು, ಇಸ್ಲಾಮೋಫೋಬಿಕ್ ಹಾಗೂ ಜನಾಂಗೀಯ ಹತ್ಯೆಯ ಹೇಳಿಕೆಗಳು, ದಲಿತ ಹಾಗೂ ಮೀಸಲಾತಿ ವಿರೋಧಿ ಮಾತುಗಳು ಮತ್ತು ಮಹಿಳೆಯರ ವಿರುದ್ಧ ಬಳಸಿರುವ ಸ್ತ್ರೀದ್ವೇಷದ ಭಾಷೆಯ ಕಾರಣಕ್ಕಾಗಿ...