Homeಅಂಕಣಗಳುಬಹುಜನ ಭಾರತ; ಮನುವಾದ ಸುಣ್ಣವಾದರೆ ತಾಲಿಬಾನ್ ಬೆಣ್ಣೆ ಹೇಗಾದೀತು?

ಬಹುಜನ ಭಾರತ; ಮನುವಾದ ಸುಣ್ಣವಾದರೆ ತಾಲಿಬಾನ್ ಬೆಣ್ಣೆ ಹೇಗಾದೀತು?

- Advertisement -
- Advertisement -

ನಿರಂತರ ಬಾಹ್ಯ ಮತ್ತು ಆಂತರಿಕ ದಾಳಿಗಳಿಗೆ ಗುರಿಯಾಗುತ್ತಲೇ ಬಂದಿರುವ ಪುಟ್ಟ ದೇಶ ಅಫ್ಘಾನಿಸ್ತಾನ. ಯಾರೂ ಗೆಲ್ಲಲಾಗದ ನೆಲವೆಂಬ ಪ್ರತೀತಿ. ’ಸಾಮ್ರಾಜ್ಯಗಳ ಸಮಾಧಿ’ ಎಂದೇ ಇತಿಹಾಸ ಪ್ರಸಿದ್ಧ ದಾಳಿಕೋರರ, ಧರ್ಮಾಂಧರ, ಭಯೋತ್ಪಾದಕರ, ಅತೀವ ಬಡತನ, ಭ್ರಷ್ಟಾಚಾರದ ತಿರುಗಣಿಗೆ ಸಿಲುಕಿ ನಲುಗಿರುವ ನತದೃಷ್ಟ ನಾಡು.

ಮೂರೂಕಾಲು ಕೋಟಿಯ ಪೈಕಿ ಶೇ.99.7ರಷ್ಟು ಜನ ಇಸ್ಲಾಮ್ ಅನುಯಾಯಿಗಳು. ಇಸ್ಲಾಮ್ ಕಾಲಿಟ್ಟ ಹೊತ್ತಿನಲ್ಲಿ ಈ ದೇಶದ ಬಹುಸಂಖ್ಯಾತರು ಬೌದ್ಧರು ಮತ್ತು ಜರತುಷ್ಟ್ರರು.

ಎರಡನೆಯ ವಿಶ್ವಯುದ್ಧದ ನಂತರ ಸೂಪರ್ ಪವರ್‌ಗಳ ನಡುವಣ ಶೀತಲಯುದ್ಧಕ್ಕೆ ಬಲಿಯಾಯಿತು ಈ ದೇಶ. ರಷ್ಯಾ ಅಮೆರಿಕೆಯ ನಡುವಣ ಮೇಲಾಟದ ವಸಾಹತು ಆಯಿತು. ಪರಿಣಾಮವಾಗಿ ಧರ್ಮಾಂಧರು-ಭಯೋತ್ಪಾದಕರು ತಲೆಯೆತ್ತಿದರು. ಎಲ್ಲೆಡೆ ಪುರುಷಾಧಿಪತ್ಯದ ಕ್ರೌರ್ಯಕ್ಕೆ ಸಿಲುಕಿರುವ ಮಹಿಳೆಯ ಸ್ಥಿತಿ ಈ ನೆಲದಲ್ಲಿ ದುಸ್ಥಿತಿಯ ತಳಾತಳವನ್ನು ಮುಟ್ಟಿತು.

ಸೋವಿಯತ್ ಆಕ್ರಮಣದ ವಿರುದ್ಧ ಮುಜಾಹಿದೀನ್ ಧರ್ಮಾಂಧ ಶಕ್ತಿಗಳನ್ನು ಅಮೆರಿಕ ಮತ್ತು ಪಾಕಿಸ್ತಾನ ಎತ್ತಿಕಟ್ಟಿ ಬೆಳೆಸಿದವು. ಅಮೆರಿಕನ್ ಆಕ್ರಮಣದ ವಿರುದ್ಧ ಪಾಕಿಸ್ತಾನದ ಗುಪ್ತ ಕುಮ್ಮಕ್ಕಿನೊಂದಿಗೆ ತಲೆಯೆತ್ತಿದ್ದು ತಾಲಿಬಾನ್. ತಾಲಿಬಾನ್ ಎಂದರೆ ಪಶ್ತೋ ಭಾಷೆಯಲ್ಲಿ ವಿದ್ಯಾರ್ಥಿಗಳು ಎಂದರ್ಥ. 1990ರ ದಶಕದಲ್ಲಿ ಉತ್ತರ ಪಾಕಿಸ್ತಾನದಲ್ಲಿ ಹೊಮ್ಮಿದ ಧಾರ್ಮಿಕ ಆಂದೋಲನವಿದು. ಸೌದಿ ಅರೇಬಿಯಾದ ಹಣದ ನೆರವಿನಿಂದ ನಡೆದ ಸುನ್ನಿ ಇಸ್ಲಾಮ್ ಕಟ್ಟರ್‌ವಾದವನ್ನು ಬೋಧಿಸುವ ಮಠ. ತನ್ನ ಮೂಲ ಅರ್ಥವನ್ನು ಕಳೆದುಕೊಂಡ ತಾಲಿಬಾನ್ ಪದ ಕಾಲಕ್ರಮೇಣ ಗಳಿಸಿಕೊಂಡ ಕುಖ್ಯಾತ ಅರ್ಥವ್ಯಾಪ್ತಿಯೇ ಬೇರೆ.

1996-2001ರ ಅವಧಿಯತಾಲಿಬಾನ್ ಆಡಳಿತ ಮತ್ತು ಆನಂತರ ಪದಚ್ಯುತಿಯ 20 ವರ್ಷಗಳ ಕಾಲ ನಡೆಸಿದ ಬರ್ಬರ ದಾಳಿಗಳ ದುಃಸ್ವಪ್ನಗಳಿಂದ ಆಪ್ಘನ್ ಜನತೆ ಭಯಭೀತಗೊಂಡಿದೆ. ಶಿಕ್ಷಣ, ಉದ್ಯೋಗ, ರಾಜಕಾರಣ ಮುಂತಾದ ಸಾರ್ವಜನಿಕ ಬದುಕಿನಿಂದ ಅದೃಶ್ಯರಾಗಿ ನಾಲ್ಕು ಗೋಡೆಗಳ ನಡುವೆ ಬದುಕಬೇಕಿರುವ ಮಹಿಳೆಯರ ಸ್ಥಿತಿ ದಾರುಣ.

ಶರಿಯಾ ಕಾನೂನುಗಳ ಪ್ರಕಾರ ಸಾರ್ವಜನಿಕ ಮರಣದಂಡನೆ ನೀಡುವ, ಅಂಗಾಂಗಗಳನ್ನು
ಕತ್ತರಿಸುವ ಶಿಕ್ಷೆಗಳು, ಗಂಡಸರು ಗಡ್ಡ ಬೆಳೆಸಬೇಕೆಂಬ ನಿರ್ಬಂಧ ಹೇರಲಾಯಿತು. ಸಿನೆಮಾ, ಟೀವಿ, ಸಂಗೀತವನ್ನು ನಿಷೇಧಿಸಲಾಯಿತು. ಉಡುಗೆತೊಡುಗೆಗಳ ವಿಧಿ ನಿಷೇಧಗಳೂ ಜಾರಿಗೆ ಬಂದವು. ಅಡಿಯಿಂದ ಮುಡಿತನಕ ಬಲವಂತದ ಬುರ್ಖಾ ಧಾರಣೆ, ಗಂಡಸು ಜೊತೆಗಿಲ್ಲದೆ ಹೊಸ್ತಿಲು ದಾಟಕೂಡದು ಮುಂತಾದ ಹತ್ತು ಹಲವು ಅಮಾನವೀಯ ನಿರ್ಬಂಧಗಳನ್ನು ಹೆಣ್ಣುಮಕ್ಕಳ ಮೇಲೆ ವಿಧಿಸಲಾಯಿತು. ಹತ್ತು ವರ್ಷ ದಾಟಿದ ಹೆಣ್ಣುಮಕ್ಕಳು ಶಾಲೆಗೆ ಹೋಗುವುದು ನಿಷಿದ್ಧವೆಂದು ಸಾರಲಾಯಿತು. ಮಾನವೀಯ ಹಕ್ಕುಗಳನ್ನು ತುಳಿಯಲಾಯಿತು. ಸಾಂಸ್ಕೃತಿಕ ಬರ್ಬರತೆ ಮೆರೆಯಿತು. ಅಂತಾರಾಷ್ಟ್ರೀಯ ಆಕ್ರೋಶವನ್ನೂ ಲೆಕ್ಕಿಸದೆ ಬಾಮಿಯಾ ಕಣಿವೆಯಲ್ಲಿ ಕೊರೆಯಲಾಗಿದ್ದ ಆರನೆಯ ಶತಮಾನದ ಬೃಹತ್ ಬುದ್ಧ ಪ್ರತಿಮೆಗಳನ್ನು ಫಿರಂಗಿಗಳಿಂದ ಸಿಡಿಸಿ ನಾಶಮಾಡಲಾಯಿತು. ಧಾರ್ಮಿಕ ಅಲ್ಪಸಂಖ್ಯಾತರಾದ ಶಿಯಾ ಮುಸಲ್ಮಾನರು ನಿರಂತರ ಹತ್ಯೆಗೆ ಈಡಾದರು. ಧಾರ್ಮಿಕ ಅಲ್ಪಸಂಖ್ಯಾತರಾದ ಹಿಂದೂಗಳು ಮತ್ತು ಸಿಖ್ಖರ ಮೇಲಿನ ದಾಳಿಗಳು ನಿರಂತರವಾದವು. ಅವರ ಪ್ರಮಾಣ ನಶಿಸುತ್ತಲೇ ಹೋಯಿತು.

ಇದೀಗ ಪುನಃ ಆಡಳಿತ ಸೂತ್ರ ಹಿಡಿದಿರುವ ತಾಲೀಬಾನ್ ಇಸ್ಲಾಮಿಕ್ ಕಾನೂನುಗಳ ಚೌಕಟ್ಟಿನಲ್ಲೇ ಆಡಳಿತ ನಡೆಸುವುದಾಗಿ ಸಾರಿದೆ. ಆದರೆ ಹಳೆಯ ಅನುಭವಗಳ ಮೇರೆಗೆ ಮೆದು ಬದಲಾವಣೆಗಳನ್ನು ಕಾಣಬಹುದಾಗಿದೆ ಎಂದಿದೆ. ವರ್ಚಸ್ಸು ಸುಧಾರಿಸಿಕೊಳ್ಳುವ ಕಸರತ್ತಿನಲ್ಲಿ ತೊಡಗಿದೆ. ಕ್ಷಮಾದಾನ, ಮೀಡಿಯಾ ಸ್ವಾತಂತ್ರ್ಯ, ಮಹಿಳೆಯರ ಹಕ್ಕುಗಳ ಬಗ್ಗೆ ಮಾತಾಡತೊಡಗಿದೆ. ಆದರೆ ಬಾಯಲ್ಲಿನ ಬೆಣ್ಣೆಗಿಂತ ಬಗಲಲ್ಲಿನ ದೊಣ್ಣೆಯೇ ಸತ್ಯವೆಂಬುದು ಹಳೆಯ ಅನುಭವ.

ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳಲು ಅಪ್ಘಾನಿಸ್ತಾನವನ್ನು ಧರ್ಮಾಂಧತೆಯ ಸಂಕೋಲೆಗಳಲ್ಲಿ ಮತ್ತಷ್ಟು ಬಿಗಿಯಾಗಿ ಬಂಧಿಸಿದ್ದು ಅಮೆರಿಕ ಮತ್ತು ಪಾಕಿಸ್ತಾನ. ವಿಶೇಷವಾಗಿ ಪಾಕಿಸ್ತಾನದ ಬೆಂಬಲವಿಲ್ಲದೆ ಹೋಗಿದ್ದರೆ ತಾಲಿಬಾನ್‌ಗಳ ಈಗಿನ ಗೆಲುವು ಇಷ್ಟು ಸಲೀಸಾಗಿರುತ್ತಿರಲಿಲ್ಲ. ಆಫ್ಘನ್‌ತಾಲಿಬಾನ್ ಮುಖವಾಡ ತೊಟ್ಟ ಪಾಕಿಸ್ತಾನಿ ಆಕ್ರಮಣವಿದು ಎಂಬ ಸತ್ಯ ದಿನದಿಂದ ದಿನಕ್ಕೆ ಹೆಚ್ಚು ನಿಚ್ಚಳವಾಗತೊಡಗಿದೆ. ತಾಲೀಬಾನನ್ನು ಅದು ಹುಟ್ಟಿದಾಗಿನಿಂದ ಸತತ ಪೊರೆಯುತ್ತ ಬಂದಿರುವ ದೇಶವಿದು.

ವಿಶ್ವದ ಶೇ.90ರಷ್ಟು ಅಫೀಮು- ಹೆರಾಯಿನ್ ಮಾದಕ ವಸ್ತುಗಳ ತವರು ಅಫ್ಘಾನಿಸ್ತಾನ. ಈ ಅಫೀಮು ದೈತ್ಯನ ಮೀರಿಸುವ ಮತ್ತೊಬ್ಬ ಮಾದಕದ್ರವ್ಯ ಎದುರಾಳಿ ಅಫ್ಘಾನಿಸ್ತಾನದಲ್ಲೇ ಮೈ ತಳೆಯುತ್ತಿದ್ದಾನೆ. ಅವನ ಹೆಸರು ಮೆಥಾಂಫೆಟಾಮೈನ್ (Methamphetamine). ನೇರವಾಗಿ ಮನುಷ್ಯ ದೇಹದ ನರಮಂಡಲ ವ್ಯವಸ್ಥೆಯ ಕೇಂದ್ರಕ್ಕೇ ಲಗ್ಗೆ ಹಾಕಿ ಮರಗಟ್ಟಿಸುವ ಮಾದಕದ್ರವ್ಯ. ಪರಮ ಅಂಟಿನ ನಂಟು. ಚಟ ಅಂಟಿದರೆ ಮರಣವೇ ಬಿಡುಗಡೆಯ ಬಾಗಿಲು. ಮೆಥ್, ಬ್ಲೂ, ಐಸ್, ಕ್ರಿಸ್ಟಲ್-ಗ್ಲ್ಯಾಸ್ ಎಂದೂ ವ್ಯಸನಲೋಕದಲ್ಲಿ ಜನಜನಿತ.
ಅಫ್ಘಾನ್ ಅಫೀಮು ಉದ್ಯಮದ ಸೊಂಟ ಮುರಿಯುವ ಅಮೆರಿಕೆಯ ಪಣ ಈಡೇರಲಿಲ್ಲ. ಬದಲಾಗಿ 2001-2018ರ ನಡುವಣ ಅವಧಿಯಲ್ಲಿ ಈ ಉದ್ಯಮ ನಾಲ್ಕು ಪಟ್ಟು ಹೆಚ್ಚಿತು. ಇದೀಗ ಭಯಾನಕ ಮೆಥ್ ಆಯಾಮವೂ ಸೇರಿಕೊಂಡಿದೆ. ಹಲವು ಪ್ರತಿಕೂಲಗಳ ಕಾರಣ ಈ ವಲಯದ ಮೆಥ್ ಉತ್ಪಾದನಾ ಕೇಂದ್ರ ಇರಾನಿನಿಂದ ಅಫ್ಘಾನ್‌ಗೆ ವರ್ಗವಾಯಿತು.

2018ರಲ್ಲಿ ವಿಪರೀತ ಉತ್ಪಾದನೆಯ ಕಾರಣ ಅಫೀಮು ದರ ಭಾರೀ ಕುಸಿತಎದುರಿಸಿತು. ಪರ್ಯಾಯ ಆದಾಯದ ದಾರಿಯಾಗಿ ತೆರೆದುಕೊಂಡದ್ದು ಮೆಥ್ ಉತ್ಪಾದನೆ. ಈ ಉತ್ಪಾದನೆಗೆ ಬೇಕಿರುವ ಮುಖ್ಯ ರಾಸಾಯನಿಕ ಎಫಿಡ್ರೈನ್. ಅಫ್ಘಾನಿಸ್ತಾನದಲ್ಲಿ ತಂತಾನೇ ಕಳೆಯಾಗಿ ಬೆಳೆಯುವ ಸಸ್ಯ ಎಫಿಡ್ರಾದಿಂದ ಹೇರಳ ಪ್ರಮಾಣದ ಎಫಿಡ್ರೈನ್ ಉತ್ಪಾದಿಸಬಹುದು. ಎಫಿಡ್ರೈನ್ ರಾಸಾಯನಿಕವನ್ನು ಆಮದು ಮಾಡಿಕೊಳ್ಳುವ ಗೊಡವೆಯೇ ಇಲ್ಲ. ಈ ಕಾರಣದಿಂದಾಗಿ ಆಫ್ಘನ್ ಮೆಥ್ ಮಾರಾಟ ದರಗಳು ಅತಿ ಅಗ್ಗವೆನಿಸಿದವು. ಶತಕೋಟಿ ಡಾಲರುಗಳ ಮೌಲ್ಯದ ಮೆಥ್ ತಯಾರಿಸುವ ಪ್ರಯೋಗಶಾಲೆಗಳು ಸಾವಿರಾರು ಸಂಖ್ಯೆಯಲ್ಲಿ ತಲೆಯೆತ್ತಿದವು. ಅಫೀಮು ಹೆರಾಯಿನ್ ಜೊತೆಗೆ ಮೆಥ್ ಎಂಬ ಈ ಘೋರ ದ್ರವ್ಯ ಅಫ್ಘಾನಿಸ್ತಾನದಿಂದ ಹೊರಬಿದ್ದು ವಿಶ್ವದ ನಾನಾ ದೇಶಗಳಿಗೆ ಕಳ್ಳಸಾಗಣೆಯಾಗುತ್ತಿದೆ. ಅಮೆರಿಕನ್ ಪಡೆಗಳ ನಿರ್ಗಮನ ಈ ’ಉದ್ಯಮ’ಕ್ಕೆ ರೆಕ್ಕೆಗಳನ್ನು ಹಚ್ಚುವುದು ನಿಶ್ಚಿತ.

ಅಫೀಮಿನ ಜೊತೆಜೊತೆಗೆ ಎಫಿಡ್ರಾ ಮತ್ತು ಮೆಥ್ ಮೇಲಿನ ತೆರಿಗೆಯ ಮೂಲಕ ತಾಲೀಬಾನ್ ಅಪಾರ ಆದಾಯವನ್ನು ಸಂಗ್ರಹಿಸುತ್ತಿದೆ. ಪೆಟ್ರೋಲಿಯಂ ಇಂಧನಗಳು, ಸರಕು ಸಾಗಾಣಿಕೆಯ ಮೇಲೆ ತೆರಿಗೆ
ಹೇರಿಕೆ ಹಾಗೂ ಅಮೂಲ್ಯ ಖನಿಜಗಳ ಗಣಿಗಾರಿಕೆ ಕೂಡತಾಲಿಬಾನ್‌ಗೆ ಭಾರೀ ಆದಾಯ ಮೂಲಗಳಾಗಿವೆ. ಇದೆಲ್ಲ ಆದಾಯದ ಗುರಿ ಶಸ್ತ್ರಾಸ್ತ್ರ ಖರೀದಿ ಮತ್ತು ಶರಿಯಾ ಆಡಳಿತ ಜಾರಿ.

ಖುರಾನಿನ ಪ್ರಕಾರ ಅಮಲು ಅಥವಾ ನಶೆಯ ಪದಾರ್ಥಗಳ ಸೇವನೆ ನಿಷಿದ್ಧ. ಆದರೆ ಶರಿಯಾ ಕಾನೂನಿನ ಮಾತಾಡುವತಾಲಿಬಾನ್‌ಗೆ ಅದರ ಪರಿವೆಯಿಲ್ಲ. ಗುರಿ ಸಾಧನೆಗಾಗಿ ಅಡ್ಡದಾರಿ ಹಿಡಿಯಲು ಹೇಸಿಗೆಯಿಲ್ಲ.

ಮಹಿಳೆಯರು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಪೀಡಿಸುವ ಮನುವಾದಿಗಳು ಮತ್ತು ಧರ್ಮಾಂಧ ತಾಲಿಬಾನಿಗಳಿಗೂ ಹೆಚ್ಚು ವ್ಯತ್ಯಾಸವಿಲ್ಲ. ಅಮೆರಿಕನ್ ಸಾಮ್ರಾಜ್ಯಶಾಹಿಯ ವಿರೋಧಕ್ಕಾಗಿಯೋ, ಇಸ್ಲಾಮಿನ
ಸಮರ್ಥನೆಗಾಗಿಯೋ ಇಂತಹ ಮತಾಂಧ ಶಕ್ತಿಗಳನ್ನು ಸಮರ್ಥಿಸಿಕೊಳ್ಳುವುದು ತರವಲ್ಲ.


ಇದನ್ನೂ ಓದಿ: ಬಹುಜನ ಭಾರತ; ದಲಿತ ದ್ವೇಷವನ್ನು ಪ್ರತಿಭೆಯಿಂದ ಗೆದ್ದವರು ಪಲ್ವಂಕರ್ ಸೋದರರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...