Homeಮುಖಪುಟಗೆಲ್ಲುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ: ಸಿಂಘು ಗಡಿಯಲ್ಲಿ ಗುರ್ತೇಜ್ ಸಿಂಗ್ ಗುಡುಗು

ಗೆಲ್ಲುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ: ಸಿಂಘು ಗಡಿಯಲ್ಲಿ ಗುರ್ತೇಜ್ ಸಿಂಗ್ ಗುಡುಗು

ಸರ್ಕಾರ ಮಾಡಿದ ಕುತಂತ್ರಗಳಿಂದಾಗಿ ಈಗ ನಮ್ಮ ಹೋರಾಟ ಸಾವು ಅಥವಾ ಗೆಲುವಿನ ಹೋರಾಟವಾಗಿದೆ. ಗೆಲ್ಲುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ.

- Advertisement -
- Advertisement -

ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದು, ಮಗಳನ್ನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಕಳಿಸಿರುವ 57 ವರ್ಷದ ರೈತರಾದ ಗುರ್ತೇಜ್ ಸಿಂಗ್ ಕಳೆದ ಐದು ತಿಂಗಳಿನಿಂದ ರೈತ ಹೋರಾಟದ ಪ್ರತಿನಿಧಿಯಾಗಿದ್ದಾರೆ. ಪಂಜಾಬ್ ರಾಜ್ಯದ ಮೊಗ್ಗಾ ಜಿಲ್ಲೆಯ ರತಿನ್ಯಾ ಗ್ರಾಮದ ಇವರ ಕುಟುಂಬದ ಮೂಲ ಕೆಲಸವೇ ಕೃಷಿಯಾಗಿದೆ.

ರೈತ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿರುವ ಗುರ್ತೇಜ್ ಸಿಂಗ್ ಅವರ ಕುಟುಂಬದ ಸದಸ್ಯರು 5 ಮಂದಿ. ತಂದೆ, ಹೆಂಡತಿ, ಒಬ್ಬ ಮಗ ಮತ್ತು ಮಗಳೊಡನೆ ತಮ್ಮ ಗ್ರಾಮದಲ್ಲಿ ಗೋದಿ, ಭತ್ತ ಬೆಳೆಯುತ್ತಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದವರು, ಇಂದು ಸಿಂಘು ಗಡಿಯಲ್ಲಿ ಚಳಿ, ಮಳೆ, ಧೂಳಿನಲ್ಲಿ ಟ್ರ್ಯಾಲಿಯಲ್ಲಿ ವಾಸಿಸುತ್ತಿದ್ದಾರೆ.

“ಮನೆಯಲ್ಲಿ ಎಲ್ಲರೂ ವಿದ್ಯಾವಂತರಿದ್ದೇವೆ. ನಮಗೂ ಕಾನೂನುಗಳ ಅರಿವಿದೆ. ಮನೆಗೆ ಹೋಗಬೇಕು ಎಂದು ಅನ್ನಿಸುತ್ತದೆ. ಆದರೆ, ಹೋರಾಟಕ್ಕಿಂತ ಮನೆ ದೊಡ್ಡದಲ್ಲ. ಮೊದಲು ಈ ಮೂರು ಕರಾಳ ಕಾನೂನುಗಳ ವಿರುದ್ಧ ಹೋರಾಡಿ ಗೆಲ್ಲುತ್ತೇವೆ. ಇಷ್ಟು ದಿನಗಳ ಹೋರಾಟ ಬೇರೆ. ಈಗೀನ ಹೋರಾಟವೇ ಬೇರೆ. ಸರ್ಕಾರ ಮಾಡಿದ ಕುತಂತ್ರಗಳಿಂದಾಗಿ ಈಗ ನಮ್ಮ ಹೋರಾಟ ಸಾವು ಅಥವಾ ಗೆಲುವಿನ ಹೋರಾಟವಾಗಿದೆ. ಗೆಲ್ಲುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ. ಕಾನೂನುಗಳನ್ನು ವಾಪಸ್ ತೆಗೆದುಕೊಳ್ಳುವವರೆಗೂ ನಾವ್ಯಾರೂ ಹೋಗುವುದಿಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುರ್ತೇಜ್ ಸಿಂಗ್ ಮಗ ಪದವಿ ಪಡೆದು ಚಂಢಿಗಡದಲ್ಲಿ ಸೋಲಾರ್ ಪ್ಲಾಂಟ್ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಮಗಳು ಪಂಜಾಬಿನಲ್ಲಿಯೇ ದ್ವೀತಿಯ ಪಿಯುಸಿ ಮುಗಿಸಿ ಕೆನಡಾದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದಾರೆ. ಗುರ್ತೇಜ್ ಸಿಂಗ್ ಅವರ ತಮ್ಮ ಕೆನಡಾದಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದು ಅಲ್ಲಿಯೇ ತಮ್ಮ ಉದ್ಯಮ ಶುರು ಮಾಡಿದ್ದಾರೆ.

ಕುಟಂಬದ ಮೂಲ ಕಾರ್ಯ ಕೃಷಿಯಾಗಿರುವುದರಿಂದ ಮನೆಯಲ್ಲಿ ಮೂರು ಎಮ್ಮೆ ಸೇರಿದಂತೆ ಒಂದು ಹಸುವನ್ನು ಗುರ್ತೇಜ್ ಸಿಂಗ್ ಸಾಕಿಕೊಂಡಿದ್ದಾರೆ. ಗೋದಿ, ಭತ್ತದ ಜೊತೆಗೆ ಎಮ್ಮೆಗೆ ಬೇಕಾದ ಹಸಿರು ಹುಲ್ಲು ಬೆಳೆಯುತ್ತಾರೆ. ಆದರೆ ಈ ಎಮ್ಮೆ ಹಾಲನ್ನು ಇವರು ಮಾರುವುದಿಲ್ಲ. ಮನೆಯವರ ಬಳಕೆಗೆ ಬಳಸಿಕೊಳ್ಳಲಾಗುತ್ತದೆ. ಅಕ್ಕ ಪಕ್ಕದಲ್ಲಿ ಎಮ್ಮೆ ಇಲ್ಲದವರಿಗೆ ಹಾಲು ನೀಡಲಾಗುತ್ತದೆ ಎಂದು ವಿವರಿಸುತ್ತಾರೆ.

ಮನೆಯ ಹಿರಿಯ ಸದಸ್ಯರಾಗಿರುವ ಗುರ್ತೇಜ್ ಸಿಂಗ್ ಅವರ ತಂದೆ 85 ವರ್ಷದವರಾಗಿದ್ದು, ಈಗಲೂ ಚಟುವಟಿಕೆಯಿಂದ ಹೊಲದ ಕೆಲಸ ನಿರ್ವಹಿಸುತ್ತಾರೆ. ಗುರ್ತೇಜ್ ಸಿಂಗ್ ಪ್ರತಿಭಟನೆಗೆ ಬಂದಾಗಿನಿಂದ ಮನೆಯ ಎಲ್ಲ ಕೆಲಸಗಳನ್ನೂ ಅವರೆ ನೋಡಿಕೊಳ್ಳುತ್ತಿದ್ದಾರೆ. ತಮ್ಮ ತಂದೆಗೆ ಪ್ರತಿದಿನ ಕನಿಷ್ಠ ಎರಡು ಲೀಟರ್ ಹಾಲು ಬೇಕಾಗುತ್ತದೆ. ಹಾಲಿನ ಉತ್ಪನ್ನಗಳಿಲ್ಲದೆ ಇವರಿಗೆ ಊಟ ಸೇರುವುದಿಲ್ಲ ಎಂದು ಗುರ್ತೇಜ್ ಸಿಂಗ್ ನಸುನಗುತ್ತಾರೆ. ಇದು ಅವರ ಆರೋಗ್ಯದ ಗುಟ್ಟು ಕೂಡ ಎನ್ನುತ್ತಾರೆ.

ಹೋರಾಟಕ್ಕೆ ಬಂದ ಗುರ್ತೇಜ್ ಸಿಂಗ್ ಅವರಿಗೆ ತಂದೆಯ ಬೆಂಬಲ ಹೆಚ್ಚಾಗಿದೆಯಂತೆ. ಈ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ನಂತರ ಮನೆಗೆ ಬರಲು ತಿಳಿಸಿದ್ದಾರೆ. ನನ್ನ ಮಗ ಕೂಡ ಹಲವು ಬಾರಿ ರಜೆ ತೆಗೆದುಕೊಂಡು ಇಲ್ಲಿಗೆ ಬಂದು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ ಎಂದು ರೈತ ಗುರ್ತೇಜ್ ಸಿಂಗ್ ತಿಳಿಸುತ್ತಾರೆ.

ಇನ್ನೊಂದು ಆಶ್ಚರ್ಯದ ವಿಷಯವೆಂದರೆ ಮೊಗ್ಗಾ ಜಿಲ್ಲೆಯ ರತಿನ್ಯಾ ಗ್ರಾಮದ ಸುಮಾರು 3 ಕಿಲೋ ಮೀಟರ್ ದೂರದಲ್ಲಿ ಅದಾನಿ ಕಂಪನಿಯ DAGURU ಸೈಲೋಸ್ (ಸಂಗ್ರಹಾಲಯ) ಐದು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು, ಇದೆ ರೈತರು ಅಲ್ಲಿಗೆ ತಮ್ಮ ಗೋದಿಯನ್ನು ಮಾರಾಟ ಮಾಡಿದ್ದಾರೆ.

ಗುರ್ತೇಜ್ ಸಿಂಗ್ ಹೇಳುವಂತೆ “ನಮಗೆ ಅದು ಅದಾನಿ ಕಂಪನಿ ಎಂದು ಗೊತ್ತಿರಲಿಲ್ಲ. ನಮ್ಮ ಗೋದಿಗೆ ಮೊದ ಮೊದಲು ಒಳ್ಳೆಯ ಬೆಲೆ ನೀಡಲಾಗುತ್ತಿತ್ತು. ಇತರ ರೈತರನ್ನು ಅಲ್ಲಿಗೆ ಕರೆತಂದವರಿಗೆ ಕಮಿಷನ್ ಕೂಡ ನೀಡಲಾಗುತ್ತಿತ್ತು. ಆದರೆ ಕೆಲ ತಿಂಗಳುಗಳ ನಂತರ ಸ್ಯಾಂಪಲ್ ನೋಡಿ ತೆಗೆದುಕೊಳ್ಳಲು ಶುರು ಮಾಡಿದರು. ಕೆಲವರನ್ನು ಗೋದಿ ಉತ್ತಮ ಕ್ವಾಲಿಟಿ ಹೊಂದಿಲ್ಲ ಎಂದು ವಾಪಸ್ ಕಳುಹಿಸುತ್ತಿದ್ದರು. ನಂತರ ಅದನ್ನು ಸರ್ಕಾರಿ ಮಂಡಿಯಲ್ಲಿ ಮಾರುತ್ತಿದ್ದೆವು” ಎಂದಿದ್ದಾರೆ.

“ದಾಸ್ತಾನಿನ ಒಳಗೆ ಸ್ಪೆಷಲ್ ಟ್ರೈನ್ ನಲ್ಲಿ ಗೋದಿಯನ್ನು ರಫ್ತು ಮಾಡುತ್ತಿದ್ದರು . ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ಜಾರಿಗೆ ತಂದ ಮೇಲೆ ಅದು ಅದಾನಿ ಕಂಪನಿ ಎಂಬುದು ನಮಗೂ ತಿಳಿಯಿತು. 5 ತಿಂಗಳಿನಿಂದ DAGURU ಕಂಪನಿಯನ್ನು ರೈತರು ಬಂದ್ ಮಾಡಿದ್ದಾರೆ. ಇದರ ಪಕ್ಕದಲ್ಲಿಯೇ ಅದಾನಿಯವರ ರೈಸ್ ಕಂಪನಿಯ ತುಂಬಾ ದೊಡ್ಡ ಘಟಕ ಇದೆ. ಕಳೆದ ಐದು ತಿಂಗಳಿನಿಂದ ಈ ಕಂಪನಿಗಳನ್ನು ರೈತರು ಬಂದ್ ಮಾಡಿಸಿದ್ದಾರೆ” ಎಂದು ಗುರ್ತೇಜ್ ಸಿಂಗ್ ಮಾಹಿತಿ ನೀಡಿದ್ದಾರೆ.

“ಸದ್ಯ ಊರಿನಲ್ಲಿ ಗೋದಿ ಹಾಕಿದ್ದೇವೆ. ಎಲ್ಲವನ್ನು ತಂದೆ ನೋಡಿಕೊಳ್ಳುತ್ತಿದ್ದಾರೆ. ಏಪ್ರಿಲ್ ತಿಂಗಳವರೆಗೆ ಏನು ಕೆಲಸವಿಲ್ಲ. ಏನಾದರೂ ಬೇರೆ ಇದ್ದರೆ ಅಕ್ಕಪಕ್ಕದವರು ನೋಡಿಕೊಳ್ಳುತ್ತಾರೆ. ಒಂದೆರೆಡು ಸಲಿ ಆದರೂ ಮನೆಗೆ ಬಂದು ಹೋಗಿ ಎಂದು ಹೆಂಡತಿ, ಮಗ ಕರೆಯುತ್ತಾರೆ. ನನ್ನ ಹೆಂಡತಿಯ ಸಂಬಂಧಿಯ ಎಂಗೇಜ್ಮೆಂಟ್ ಇತ್ತು. ನಾನು ಹೋಗಲಿಲ್ಲ, ಮದುವೆಗೂ ಹೋಗಲಿಲ್ಲ, ಕಾಲಿನ ಗಾಯದ ಸಬೂಬು ಹೇಳಿ ತಪ್ಪಿಸಿಕೊಂಡೆ. ಆದರೆ ತಂದೆ ಮಾತ್ರ ಇಲ್ಲಿಯೇ ಇದ್ದು ಗೆದ್ದು ಬರಲು ಹೇಳುತ್ತಾರೆ” ಎಂದು ತಿಳಿಸಿದ್ದಾರೆ.

“ನನ್ನ ತಮ್ಮ ಕೆನಡಾದಲ್ಲಿ ಕೆಲಸ ಮಾಡುತ್ತಾರೆ. ಹೋರಾಟದಲ್ಲಿ ತೊಡಗಿಸಿಕೊಂಡು ಚಳಿಯಲ್ಲಿ ಕುಳಿತಿರುವ ರೈತರಿಗಾಗ ಬೆಚ್ಚಗಿನ ಶಾಲುಗಳನ್ನು ಹಂಚಲು ಕಳಿಸಿದ್ದರು. ಇನ್ನೂ ನಮ್ಮ ಊರಿನಿಂದ ಪ್ರತಿಭಟನೆ ಬೆಂಬಲಿಸಲು ಬರುವವರಿಗೆ ಅವರ ಬೈಕ್, ಟ್ರ್ಯಾಕ್ಟರ್‌ಗಳಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಹಣ ನೀಡುತ್ತಿದ್ದಾರೆ. ಊರಿನಿಂದ ಎಲ್ಲರೂ ಸಿಂಘುಗೆ ಬರಲು ಪ್ರೋತ್ಸಾಹ ನೀಡುತ್ತಿದ್ದಾರೆ” ಎಂದು ಗುರ್ತೇಜ್ ಸಿಂಗ್ ಹೇಳಿದ್ದಾರೆ.

ದೆಹಲಿಯ ಸಿಂಘು ಗಡಿಯಲ್ಲಿ ನವೆಂಬರ್ 26 ರಿಂದ ಟ್ರ್ಯಾಲಿಯಲ್ಲಿ ವಾಸ ಮಾಡುತ್ತಾ, ರೈತ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಗುರ್ತೇಜ್ ಸಿಂಗ್, ಹೊರ ರಾಜ್ಯಗಳಿಂದ ಬರುವ ಜನರಿಗೆ ತಮ್ಮ ಟ್ರ್ಯಾಲಿಗಳಲ್ಲಿ ಉಳಿಯಲು ವ್ಯವಸ್ಥೆ ಮಾಡುತ್ತಾರೆ. ಟೆಂಟ್‌ಗಳಿಲ್ಲದಿದ್ದರೇ ಅವರಿಗೆ ಟೆಂಟ್, ವಿದ್ಯುತ್ ವ್ಯವಸ್ಥೆ ಮಾಡುತ್ತಾರೆ. ಕರ್ನಾಟಕದಿಂದ ಟ್ರ್ಯಾಕ್ಟರ್ ಪೆರೇಡ್‌ಗಾಗಿ ಬಂದಿದ್ದ 20ಕ್ಕೂ ಹೆಚ್ಚು ಜನರಿಗೆ ಸ್ನಾನದ ವ್ಯವಸ್ಥೆ, ಉಳಿಯಲು ವ್ಯವಸ್ಥೆಯನ್ನು ಗುರ್ತೇಜ್ ಸಿಂಗ್ ನೋಡಿಕೊಂಡಿದ್ದರು.

– ಮಮತ ಎಂ


ಇದನ್ನೂ ಓದಿ: ಮಥುರಾ, ಬಾಗ್‌ಪತ್‌ನಲ್ಲಿ ಬೃಹತ್ ಮಹಾಪಂಚಾಯತ್‌: ಬಿಜೆಪಿಗೆ ಸಾಮಾಜಿಕ ಬಹಿಷ್ಕಾರ ನಿರ್ಣಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...

ಬೆಂಗಳೂರು ಚಲೋ: ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಚಿವ ಮಹದೇವಪ್ಪ: ಸಿಎಂ ಜೊತೆ ಚರ್ಚಿಸುವ ಭರವಸೆ 

ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ‘ಬೆಂಗಳೂರು ಚಲೋ’...

ಛತ್ತೀಸ್‌ಗಢ : ಬಿಜಾಪುರದಲ್ಲಿ 41 ಮಾವೋವಾದಿಗಳು ಶರಣಾಗತಿ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಬುಧವಾರ (ನವೆಂಬರ್ 26) 41 ಮಂದಿ ನಕ್ಸಲರು ಶರಣಾಗಿದ್ದು, ಈ ಪೈಕಿ 32 ಮಂದಿಯ ತಲೆಗೆ ಒಟ್ಟು 1.19 ಕೋಟಿ ರೂಪಾಯಿ ಬಹುಮಾನ ಘೋಷಣೆಯಾಗಿತ್ತು ಎಂದು ವರದಿಯಾಗಿದೆ. ಸರ್ಕಾರದ ಹೊಸ...