Homeಅಂಕಣಗಳುಸನ್ಯಾಸಿಗಳೆಂದರೆ ನಿಮಗೇನು ಗೊತ್ತಯ್ಯಾ

ಸನ್ಯಾಸಿಗಳೆಂದರೆ ನಿಮಗೇನು ಗೊತ್ತಯ್ಯಾ

- Advertisement -
- Advertisement -

ಅಧಿಕಾರಕ್ಕೆ ಆಸೆಪಡುವ ವಿಷಯದಲ್ಲಿ ನಮ್ಮ ರಾಜಕಾರಣಿಗಳು ’ನಾನೇನು ಸನ್ಯಾಸಿಯಲ್ಲ’ ಎಂಬ ಜನಪ್ರಿಯ ಮಾತನ್ನು ಸಲೀಸಾಗಿ ಬಳಸಿ ತಮ್ಮ ಅಜ್ಞಾನ ಪ್ರದರ್ಶಿಸುತ್ತಲೇ ಬಂದಿದ್ದಾರಲ್ಲಾ. ಸದರಿ ಮಾತನ್ನು ಮಾಧ್ಯಮದ ಕೆಲ ಮಂದಮತಿಗಳು ಬಿತ್ತರಿಸುತ್ತಿರುವಾಗ ಅವರ ಕಣ್ಣು ತೆರೆಸುವುದು ನಮ್ಮ ಜವಾಬ್ದಾರಿ ಅಲ್ಲವೆ.

ಸನ್ಯಾಸಿಯೆಂದರೆ ಸರ್ವಸಂಗ ಪರಿತ್ಯಾಗಿ, ಸಂಸಾರಕ್ಕೆ ಹೆದರಿದವನು, ಮೈಗಳ್ಳ, ದುಡಿದು ಬದುಕಲಾರದವನು, ಇತರರಿಗೆ ಅನ್ನ ಇಕ್ಕದವನು. ಸಂಸಾರಕ್ಕೆ ಹೆದರಿ ಸನ್ಯಾಸಿಯಾದವನನ್ನು ಪಾಪ ಸಂಸಾರಿಗಳೇ ಸಾಕಬೇಕು. ಹಾಗೆಂದು ಈತ ಲೈಂಗಿಕ ತೃಷೆಯಿಂದ ಮುಕ್ತನಾದವನೆಂದು ಹೇಳಲು ಬರುವುದಿಲ್ಲ. ಅವನ ಖಾಸಗಿ ವಿಷಯ ಅವನಿಗೆ ಗೊತ್ತು. ನಮ್ಮ ಪುರಾಣಗಳಲ್ಲಿ ಋಷಿಮುನಿಗಳಿಗೆ ಪತ್ನಿಯರಿದ್ದರು. ಅವರು ಋಷಿಗಳ ಯಜ್ಞಯಾಗದ ಪರಿಕರಗಳನ್ನ ಒದಗಿಸುತ್ತಾ, ಮುನಿಗಳಿಗೆ ನೀರು ತರುತ್ತ, ಗೆಡ್ಡೆಗೆಣಸು ಬೇಯಿಸಿಕೂಡುತ್ತ ಇದ್ದರು. ಗರ್ಮಿ ಪದಾರ್ಥ ತಿಂದ ಸನ್ಯಾಸಿ ಅರ್ಧರಾತ್ರಿಯಲ್ಲಿ ಹಠಾತ್ತನೆ ಎದ್ದುಬಂದು ಎರಗಿದರೆ ಯಾವ ಆಕ್ಷೇಪವನ್ನೂ ವ್ಯಕ್ತಪಡಿಸದೆ ಅರ್ಪಿಸಿಕೊಂಡು ಸೇವೆ ಮಾಡುತ್ತಿದ್ದರಂತಲ್ಲಾ, ಥೂತ್ತೇರಿ.

*****

ಈ ಪುರಾಣದ ಸನ್ಯಾಸಿಗಳ ಕತೆಯ ಮುಂದುವರಿಕೆ ನೋಡುವುದಾದರೆ: ಪುರಾಣದವರು ಆತ್ಮವಂಚಕರಾಗಿರಲಿಲ್ಲ. ನಯವಂಚಕರೂ ಆಗಿರಲಿಲ್ಲ. ಗಂಟುಗಳ್ಳರಾಗಿರಲಿಲ್ಲ. ತಾವು ಕಟ್ಟಿಕೊಂಡ ಕುಟೀರ ತಮ್ಮ ನಂತರ ನಾಶವಾಗುವಂತೆ ಮಾಡಿ ಸರಳವಾಗಿ ಬದುಕುತ್ತಿದ್ದರು. ಇಂತ ಸನ್ಯಾಸಿಗಳಿಗೆ ಇಂದಿನ ಸನ್ಯಾಸಿಗಳನ್ನ ಹೋಲಿಸುವುದಾದರೆ ಇವರಿಗೆ ಪತ್ನಿಯರಿಲ್ಲ ನಿಜ. ಆದರೆ ಪ್ರೇಯಸಿಯರಿದ್ದಾರೆ. ಆಕಸ್ಮಾತ್ ಮಗುವಾದರೆ ಅದನ್ನ ಫಾರಿನ್ನಿಗೆ ಕಳಿಸುವ ಪ್ರಭಾವಿಗಳು ಇವರು. ಲೈಂಗಿಕ ಹಗರಣದಲ್ಲಿ ಸಿಕ್ಕಿಬಿದ್ದರೆ ಒತ್ತಾಯದ ಸಂಭೋಗವನ್ನ ಒಪ್ಪಿತ ಸಂಭೋಗವೆಂದು ಬದಲಾಯಿಸಿ ತೀರ್ಪು ಪಡೆಯಬಲ್ಲರು. ಇವರು ಹಚ್ಚಿಕೊಳ್ಳುವ ಸೆಂಟುಗಳು ಮತ್ತು ಬರಿಸುವಂತಿರುತ್ತದೆ. ಕೆಲವು ಸನ್ಯಾಸಿಗಳು ಫೇರ್ ಅಂಡ್ ಲವ್ಲಿ ಹಚ್ಚದೆ ಸಭೆಗಳಿಗೆ ಬರುವುದಿಲ್ಲ. ಇನ್ನ ಕೈಯ್ಯ ಉಂಗರಗಳು ಕೊರಳ ಚೈನು ನೋಡಿದರೆ ಹೋರಿಯ ಶೃಂಗಾರ ನೋಡಿದಂತಾಗುತ್ತದೆ. ಇನ್ನ ನಾನೇ ದೇವರೆಂದು ಹೇಳಿಕೊಂಡು ಕಾಯಿಲೆಯಿಂದ ನರಳುತ್ತಿದ್ದ ದೇವಮಾನವನೊಬ್ಬ ತನ್ನ ಖಾಸಗಿ ಕೋಣೆಯಲ್ಲಿ ಚಿನ್ನದ ಕಮೋಡ್ ಹೊಂದಿದ್ದ. ಆದರೇನು ಪಾಯಿಖಾನೆ ವಾಸನೆ ಬದಲಿಸಲಾಗಲಿಲ್ಲವಂತಲ್ಲಾ, ಥೂತ್ತೇರಿ.

*****

’ನಾನು ಸನ್ಯಾಸಿಯಲ್ಲ’ ಎಂದು ಹೇಳುವ ರಾಜಕಾರಣಿಗಳಾಗಲಿ, ಅವರ ಮಾತನ್ನು ಕೊಂಡಾಡುತ್ತ ಪ್ರಕಟಿಸುವ ಕೆಲ ಮಾಧ್ಯಮದ ಮಂದಮತಿಗಳಾಗಲು, ಇನ್ನು ಮುಂದೆ ಆ ಮಾತುಗಳನ್ನು ಬಳಸುವ ಮುನ್ನ ಯೋಚಿಸಬೇಕಾಗುತ್ತದಲ್ಲ. ಸನ್ಯಾಸಿ ಎಂದು ಹೇಳಿಕೊಂಡು ಗದ್ದುಗೆ ಏರಿದವರು ಮಠದ ಸಂವಿಧಾನದಂತೆ ನಿವೃತ್ತಿ ಪಡೆಯದೆ ಹಠದಿಂದ ಮುಂದುವರೆಯುತ್ತಾರೆ. ಮಠದ ಆಸ್ತಿಯನ್ನ ಟ್ರಸ್ಟು ಮಾಡಿ ತಾವೇ ಅಧ್ಯಕ್ಷರಾಗುತ್ತಾರೆ. ಇದನ್ನ ದಕ್ಕಿಸಿಕೊಳ್ಳಲು ಗೂಂಡಾ ಪಡೆ ನಿರ್ಮಿಸುತ್ತಾರೆ. ಇವರ ನಿರ್ವಹಣೆಗೆ ತಾವೇ ತಾತ್ವಿಕವಾಗಿ ವಿರೋಧಿಸಿದ್ದ ಮದ್ಯವನ್ನ ಸರಬರಾಜು ಮಾಡುವಂತೆ ಆಜ್ಞಾಪಿಸುತ್ತಾರೆ. ತಮ್ಮ ಕಾಲಾನಂತರ ಭವ್ಯ ಸಮಾಧಿ ನಿರ್ಮಾಣದ ಬಗ್ಗೆ ಗಂಭೀರವಾಗಿ ಯೋಚಿಸುತ್ತಾರೆ. ಕಂಡುಕೇಳರಿಯದ ಇಂತಹ ಸವಲತ್ತು ನೋಡಿದ ರಾಜಕಾರಣಿಗಳು ಈ ಹಾಳು ರಾಜಕಾರಣಕ್ಕಿಂತ ಸನ್ಯಾಸಿಯಾಗಿದ್ದರೆ ಬದುಕು ಬಂಗಾರವಾಗುತಿತ್ತು ಎಂದು ಯೋಚಿಸಿ, ರಾಜಕಾರಣ ಬಿಟ್ಟು ಸನ್ಯಾಸಿಯಾದ ಉದಾಹರಣೆಯೂ ನಮ್ಮ ಮುಂದಿದೆ. ಇನ್ನ ಮದುವೆಯಾಗಿ ಮಕ್ಕಳು ಪಡೆದು ಸಂಸಾರ ಸಾಕಲಾರದೆ ರುಷಿಕುಮಾರರಾದ ಉದಾಹರಣೆಯೂ ನಮ್ಮ ಕಣ್ಣ ಮುಂದಿದೆ. ಬದುಕಲು ಚಿಕನ್ ಶಾಪ್ ಕೂಡ ತೆರೆಯಬಲ್ಲೆ ಎಂದು ಕೋಳಿ ಕಟ್ ಮಾಡಿದ ಅಹಿಂಸಾವಾದಿ ಸನ್ಯಾಸಿಯು ಇಲ್ಲೇ ಬದುಕಿದ್ದಾನಂತಲ್ಲಾ, ಥೂತ್ತೇರಿ.

*****

ಈ ಜಾಗತೀಕರಣದ ಬಂಡವಾಳಶಾಹಿ ಹೂಡೆತಕ್ಕೆ ಸಿಕ್ಕಿ ಭಾರತ ಅಲ್ಲೋಲಕಲ್ಲೋಲವಾಗುತ್ತ ಅದರಲ್ಲಿ ಸಂಸಾರಿಗಳು ಸನ್ಯಾಸಿಗಳಾಗುತ್ತ ಹೂರಟಿದ್ದಾರಂತಲ್ಲಾ. ಅದಕ್ಕಿಂತ ಮುಖ್ಯವಾಗಿ ಸ್ಥಾಪಿತ ಮೌಲ್ಯಗಳು ಪತನಗೊಂಡು ಜಾತಿ ಗಡಿರೇಖೆಗಳು ಅಳಿಸಿಹೋಗುತ್ತ ದುಡ್ಡಿದ್ದವರದೊಂದು ಜಾತಿ ಇಲ್ಲದವರದೊಂದು ಜಾತಿಯಾಗಿ ಬೇರ್ಪಡುತ್ತಿರುವಾಗ ಸನ್ಯಾಸಿ ಎಂಬ ಪದ ಸಮೃದ್ಧ ಪದವಾಗಿ ಕಾಣುತ್ತಿದೆಯಲ್ಲಾ. ಈ ಸಮೃದ್ಧತೆಯ ಬದುಕಿನ ಎಲ್ಲ ಐಭೋಗಗಳು ತುಂಬಿಕೊಂಡು ಅದು ಜನಸಾಮಾನ್ಯರಿಗೂ ಅರಿವಾಗಿ ಅವರ ಭಕ್ತಿಭಾವಗಳು ಮೊದಲಿಗಿಂತಲೂ ಇಮ್ಮಡಿಗೂಂಡಿವೆಯಂತಲ್ಲಾ. ಇದು ನಮ್ಮ ಪುರೋಹಿತಶಾಹಿಗಳಿಗೆ ಬಹು ಸಂತೋಷಕರ ಸಂಗತಿಯಾಗಿ ತಮ್ಮ ಅಜೆಂಡಾಗಳನ್ನೆಲ್ಲಾ ನಮ್ಮ ಬಹು ಸಂಸ್ಕೃತಿಯೊಳಕ್ಕೆ ತುರುಕುತ್ತ, ಮುಖ್ಯವಾಗಿ ಮಕ್ಕಳ ಮನಸ್ಸಿನ ಮೇಲೆ ಲಗ್ಗೆಯಿಟ್ಟಿದ್ದಾರಂತಲ್ಲಾ. ಈ ಪೈಕಿ ಗರ್ಭಗುಡಿಯಲ್ಲಿ ಕಸಹೊಡೆದು ಕ್ಲೀನ್ ಮಾಡಿ ಗಂಧದಕಡ್ಡಿ ಜೋಡಿಸಿ ಕರ್ಪೂರ ಹಚ್ಚಿ, ಹೂಗಳನ್ನ ವಿಂಗಡಿಸಿ ಕಟ್ಟಿ ಪ್ರಧಾನ ಅರ್ಚಕರು ಬರುವವರೆಗೆ ಕಾಯುತ್ತಿದ್ದಂತವನೊಬ್ಬ ಮಕ್ಕಳ ಶಿಕ್ಷಣ ಸಂಸ್ಥೆಯಲ್ಲಿ ಮಂಚೂಣಿಯಲ್ಲಿದ್ದಾನಂತಲ್ಲಾ, ಥೂತ್ತೇರಿ.

******

ನಮ್ಮ ಶಿಕ್ಷಣ ಸಂಸ್ಥೆಯೊಳಕ್ಕೆ ವಿಪ್ರೋತ್ತಮರು ಸೇರಿಕೂಂಡು ಮಾಡುತ್ತಿರುವ ಅನಾಹುತಕ್ಕೆ ಇಡೀ ಕರ್ನಾಟಕವೇ ಕೋಲಾಹಲಗೊಂಡಿರುವಾಗ ನಮ್ಮ ಮುಖ್ಯಮಂತ್ರಿ ಶಿಕ್ಷಣ ಇಲಾಖೆಯ ಪರಂಪರೆಯನ್ನ ಗ್ರಹಿಸಬೇಕಿತ್ತಲ್ಲಾ. ಅಲ್ಲಿ ಶಿಕ್ಷಣ ಸಚಿವರಾಗಿದ್ದ ಶಂಕರೇಗೌಡರ ಹೆಸರು ಚಿರಸ್ಥಾಯಿಯಾಗಿದೆ. ಗೋವಿಂದೇಗೌಡರ ಹೆಸರು ಅಜರಾಮರವಾಗಿದೆ. ಇನ್ನು ಕಳೆದ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಪ್ರಾಮಾಣಿಕತೆಯಲ್ಲಿ ಗೋವಿಂದೇಗೌಡರನ್ನ ಸರಿಗಟ್ಟಿದ್ದಲ್ಲದೆ, ಅವರ ಬಳಿಹೋದ ಶಿಕ್ಷಕರಿಗೆ ಅವರ ಸಬ್ಜೆಕ್ಟ್‌ನ ಬಗ್ಗೆ ಪ್ರಶ್ನೆ ಕೇಳಿ ತಬ್ಬಿಬ್ಬುಗೇಳಿಸುತ್ತಿದ್ದು ಈಗ ಇತಿಹಾಸ. ಆದರೆ ಈಗಿನ ಶಿಕ್ಷಣ ಸಚಿವರ ತಲೆ ತುಂಬಾ ಪುರೋಹಿತಶಾಹಿ ಪ್ರಶ್ನೆಗಳೇ ತುಂಬಿಕೊಂಡು ಅವನ್ನೆಲ್ಲಾ ಜಾರಿಮಾಡಲು ಹೊರಟಿದ್ದಾರಲ್ಲಾ. ಇದಕ್ಕೆಲ್ಲಾ ಅಂತವರಿಗೆ ಶಿಕ್ಷಣ ಖಾತೆ ಕೂಟ್ಟ ಮುಖ್ಯಮಂತ್ರಿಗಳೆ ಹೊಣೆಗಾರರಾಗಬೇಕಾಗುತ್ತದೆ. ಆದರೇನು ಅವರ ಎಡ ಮಂಡಿ ನೋವಿನ ಮುಂದೆ ಇನ್ಯಾವ ಸಮಸ್ಯೆಗಳೂ ಇಲ್ಲ. ಅದಕ್ಕಿಂತ ಮುಖ್ಯವಾಗಿ ತಿಪಟೂರು ಶಾಲಾಮೈದಾನದಲ್ಲಿ ಅವುಡುಗಚ್ಚಿ ಲಾಠಿ ಬೀಸುತ್ತಿದ್ದ ಆಸಾಮಿಗೆ ಶಿಕ್ಷಣ ಖಾತೆ ಕೂಟ್ಟವರು ಮುಖ್ಯಮಂತ್ರಿಗಳಲ್ಲ. ಕೇಶವಕೃಪದಿಂದ ಬಂದ ಪಟ್ಟಿಯನ್ನು ಜಾರಿಮಾಡಿದರಂತಲ್ಲಾ, ಥೂತ್ತೇರಿ…


ಇದನ್ನೂ ಓದಿ: ದಶಕದ ನಂತರ ಗೆದ್ದ ಅಗ್ರಹಾರದ ಜಟ್ಟಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...