Homeಅಂಕಣಗಳುಸನ್ಯಾಸಿಗಳೆಂದರೆ ನಿಮಗೇನು ಗೊತ್ತಯ್ಯಾ

ಸನ್ಯಾಸಿಗಳೆಂದರೆ ನಿಮಗೇನು ಗೊತ್ತಯ್ಯಾ

- Advertisement -
- Advertisement -

ಅಧಿಕಾರಕ್ಕೆ ಆಸೆಪಡುವ ವಿಷಯದಲ್ಲಿ ನಮ್ಮ ರಾಜಕಾರಣಿಗಳು ’ನಾನೇನು ಸನ್ಯಾಸಿಯಲ್ಲ’ ಎಂಬ ಜನಪ್ರಿಯ ಮಾತನ್ನು ಸಲೀಸಾಗಿ ಬಳಸಿ ತಮ್ಮ ಅಜ್ಞಾನ ಪ್ರದರ್ಶಿಸುತ್ತಲೇ ಬಂದಿದ್ದಾರಲ್ಲಾ. ಸದರಿ ಮಾತನ್ನು ಮಾಧ್ಯಮದ ಕೆಲ ಮಂದಮತಿಗಳು ಬಿತ್ತರಿಸುತ್ತಿರುವಾಗ ಅವರ ಕಣ್ಣು ತೆರೆಸುವುದು ನಮ್ಮ ಜವಾಬ್ದಾರಿ ಅಲ್ಲವೆ.

ಸನ್ಯಾಸಿಯೆಂದರೆ ಸರ್ವಸಂಗ ಪರಿತ್ಯಾಗಿ, ಸಂಸಾರಕ್ಕೆ ಹೆದರಿದವನು, ಮೈಗಳ್ಳ, ದುಡಿದು ಬದುಕಲಾರದವನು, ಇತರರಿಗೆ ಅನ್ನ ಇಕ್ಕದವನು. ಸಂಸಾರಕ್ಕೆ ಹೆದರಿ ಸನ್ಯಾಸಿಯಾದವನನ್ನು ಪಾಪ ಸಂಸಾರಿಗಳೇ ಸಾಕಬೇಕು. ಹಾಗೆಂದು ಈತ ಲೈಂಗಿಕ ತೃಷೆಯಿಂದ ಮುಕ್ತನಾದವನೆಂದು ಹೇಳಲು ಬರುವುದಿಲ್ಲ. ಅವನ ಖಾಸಗಿ ವಿಷಯ ಅವನಿಗೆ ಗೊತ್ತು. ನಮ್ಮ ಪುರಾಣಗಳಲ್ಲಿ ಋಷಿಮುನಿಗಳಿಗೆ ಪತ್ನಿಯರಿದ್ದರು. ಅವರು ಋಷಿಗಳ ಯಜ್ಞಯಾಗದ ಪರಿಕರಗಳನ್ನ ಒದಗಿಸುತ್ತಾ, ಮುನಿಗಳಿಗೆ ನೀರು ತರುತ್ತ, ಗೆಡ್ಡೆಗೆಣಸು ಬೇಯಿಸಿಕೂಡುತ್ತ ಇದ್ದರು. ಗರ್ಮಿ ಪದಾರ್ಥ ತಿಂದ ಸನ್ಯಾಸಿ ಅರ್ಧರಾತ್ರಿಯಲ್ಲಿ ಹಠಾತ್ತನೆ ಎದ್ದುಬಂದು ಎರಗಿದರೆ ಯಾವ ಆಕ್ಷೇಪವನ್ನೂ ವ್ಯಕ್ತಪಡಿಸದೆ ಅರ್ಪಿಸಿಕೊಂಡು ಸೇವೆ ಮಾಡುತ್ತಿದ್ದರಂತಲ್ಲಾ, ಥೂತ್ತೇರಿ.

*****

ಈ ಪುರಾಣದ ಸನ್ಯಾಸಿಗಳ ಕತೆಯ ಮುಂದುವರಿಕೆ ನೋಡುವುದಾದರೆ: ಪುರಾಣದವರು ಆತ್ಮವಂಚಕರಾಗಿರಲಿಲ್ಲ. ನಯವಂಚಕರೂ ಆಗಿರಲಿಲ್ಲ. ಗಂಟುಗಳ್ಳರಾಗಿರಲಿಲ್ಲ. ತಾವು ಕಟ್ಟಿಕೊಂಡ ಕುಟೀರ ತಮ್ಮ ನಂತರ ನಾಶವಾಗುವಂತೆ ಮಾಡಿ ಸರಳವಾಗಿ ಬದುಕುತ್ತಿದ್ದರು. ಇಂತ ಸನ್ಯಾಸಿಗಳಿಗೆ ಇಂದಿನ ಸನ್ಯಾಸಿಗಳನ್ನ ಹೋಲಿಸುವುದಾದರೆ ಇವರಿಗೆ ಪತ್ನಿಯರಿಲ್ಲ ನಿಜ. ಆದರೆ ಪ್ರೇಯಸಿಯರಿದ್ದಾರೆ. ಆಕಸ್ಮಾತ್ ಮಗುವಾದರೆ ಅದನ್ನ ಫಾರಿನ್ನಿಗೆ ಕಳಿಸುವ ಪ್ರಭಾವಿಗಳು ಇವರು. ಲೈಂಗಿಕ ಹಗರಣದಲ್ಲಿ ಸಿಕ್ಕಿಬಿದ್ದರೆ ಒತ್ತಾಯದ ಸಂಭೋಗವನ್ನ ಒಪ್ಪಿತ ಸಂಭೋಗವೆಂದು ಬದಲಾಯಿಸಿ ತೀರ್ಪು ಪಡೆಯಬಲ್ಲರು. ಇವರು ಹಚ್ಚಿಕೊಳ್ಳುವ ಸೆಂಟುಗಳು ಮತ್ತು ಬರಿಸುವಂತಿರುತ್ತದೆ. ಕೆಲವು ಸನ್ಯಾಸಿಗಳು ಫೇರ್ ಅಂಡ್ ಲವ್ಲಿ ಹಚ್ಚದೆ ಸಭೆಗಳಿಗೆ ಬರುವುದಿಲ್ಲ. ಇನ್ನ ಕೈಯ್ಯ ಉಂಗರಗಳು ಕೊರಳ ಚೈನು ನೋಡಿದರೆ ಹೋರಿಯ ಶೃಂಗಾರ ನೋಡಿದಂತಾಗುತ್ತದೆ. ಇನ್ನ ನಾನೇ ದೇವರೆಂದು ಹೇಳಿಕೊಂಡು ಕಾಯಿಲೆಯಿಂದ ನರಳುತ್ತಿದ್ದ ದೇವಮಾನವನೊಬ್ಬ ತನ್ನ ಖಾಸಗಿ ಕೋಣೆಯಲ್ಲಿ ಚಿನ್ನದ ಕಮೋಡ್ ಹೊಂದಿದ್ದ. ಆದರೇನು ಪಾಯಿಖಾನೆ ವಾಸನೆ ಬದಲಿಸಲಾಗಲಿಲ್ಲವಂತಲ್ಲಾ, ಥೂತ್ತೇರಿ.

*****

’ನಾನು ಸನ್ಯಾಸಿಯಲ್ಲ’ ಎಂದು ಹೇಳುವ ರಾಜಕಾರಣಿಗಳಾಗಲಿ, ಅವರ ಮಾತನ್ನು ಕೊಂಡಾಡುತ್ತ ಪ್ರಕಟಿಸುವ ಕೆಲ ಮಾಧ್ಯಮದ ಮಂದಮತಿಗಳಾಗಲು, ಇನ್ನು ಮುಂದೆ ಆ ಮಾತುಗಳನ್ನು ಬಳಸುವ ಮುನ್ನ ಯೋಚಿಸಬೇಕಾಗುತ್ತದಲ್ಲ. ಸನ್ಯಾಸಿ ಎಂದು ಹೇಳಿಕೊಂಡು ಗದ್ದುಗೆ ಏರಿದವರು ಮಠದ ಸಂವಿಧಾನದಂತೆ ನಿವೃತ್ತಿ ಪಡೆಯದೆ ಹಠದಿಂದ ಮುಂದುವರೆಯುತ್ತಾರೆ. ಮಠದ ಆಸ್ತಿಯನ್ನ ಟ್ರಸ್ಟು ಮಾಡಿ ತಾವೇ ಅಧ್ಯಕ್ಷರಾಗುತ್ತಾರೆ. ಇದನ್ನ ದಕ್ಕಿಸಿಕೊಳ್ಳಲು ಗೂಂಡಾ ಪಡೆ ನಿರ್ಮಿಸುತ್ತಾರೆ. ಇವರ ನಿರ್ವಹಣೆಗೆ ತಾವೇ ತಾತ್ವಿಕವಾಗಿ ವಿರೋಧಿಸಿದ್ದ ಮದ್ಯವನ್ನ ಸರಬರಾಜು ಮಾಡುವಂತೆ ಆಜ್ಞಾಪಿಸುತ್ತಾರೆ. ತಮ್ಮ ಕಾಲಾನಂತರ ಭವ್ಯ ಸಮಾಧಿ ನಿರ್ಮಾಣದ ಬಗ್ಗೆ ಗಂಭೀರವಾಗಿ ಯೋಚಿಸುತ್ತಾರೆ. ಕಂಡುಕೇಳರಿಯದ ಇಂತಹ ಸವಲತ್ತು ನೋಡಿದ ರಾಜಕಾರಣಿಗಳು ಈ ಹಾಳು ರಾಜಕಾರಣಕ್ಕಿಂತ ಸನ್ಯಾಸಿಯಾಗಿದ್ದರೆ ಬದುಕು ಬಂಗಾರವಾಗುತಿತ್ತು ಎಂದು ಯೋಚಿಸಿ, ರಾಜಕಾರಣ ಬಿಟ್ಟು ಸನ್ಯಾಸಿಯಾದ ಉದಾಹರಣೆಯೂ ನಮ್ಮ ಮುಂದಿದೆ. ಇನ್ನ ಮದುವೆಯಾಗಿ ಮಕ್ಕಳು ಪಡೆದು ಸಂಸಾರ ಸಾಕಲಾರದೆ ರುಷಿಕುಮಾರರಾದ ಉದಾಹರಣೆಯೂ ನಮ್ಮ ಕಣ್ಣ ಮುಂದಿದೆ. ಬದುಕಲು ಚಿಕನ್ ಶಾಪ್ ಕೂಡ ತೆರೆಯಬಲ್ಲೆ ಎಂದು ಕೋಳಿ ಕಟ್ ಮಾಡಿದ ಅಹಿಂಸಾವಾದಿ ಸನ್ಯಾಸಿಯು ಇಲ್ಲೇ ಬದುಕಿದ್ದಾನಂತಲ್ಲಾ, ಥೂತ್ತೇರಿ.

*****

ಈ ಜಾಗತೀಕರಣದ ಬಂಡವಾಳಶಾಹಿ ಹೂಡೆತಕ್ಕೆ ಸಿಕ್ಕಿ ಭಾರತ ಅಲ್ಲೋಲಕಲ್ಲೋಲವಾಗುತ್ತ ಅದರಲ್ಲಿ ಸಂಸಾರಿಗಳು ಸನ್ಯಾಸಿಗಳಾಗುತ್ತ ಹೂರಟಿದ್ದಾರಂತಲ್ಲಾ. ಅದಕ್ಕಿಂತ ಮುಖ್ಯವಾಗಿ ಸ್ಥಾಪಿತ ಮೌಲ್ಯಗಳು ಪತನಗೊಂಡು ಜಾತಿ ಗಡಿರೇಖೆಗಳು ಅಳಿಸಿಹೋಗುತ್ತ ದುಡ್ಡಿದ್ದವರದೊಂದು ಜಾತಿ ಇಲ್ಲದವರದೊಂದು ಜಾತಿಯಾಗಿ ಬೇರ್ಪಡುತ್ತಿರುವಾಗ ಸನ್ಯಾಸಿ ಎಂಬ ಪದ ಸಮೃದ್ಧ ಪದವಾಗಿ ಕಾಣುತ್ತಿದೆಯಲ್ಲಾ. ಈ ಸಮೃದ್ಧತೆಯ ಬದುಕಿನ ಎಲ್ಲ ಐಭೋಗಗಳು ತುಂಬಿಕೊಂಡು ಅದು ಜನಸಾಮಾನ್ಯರಿಗೂ ಅರಿವಾಗಿ ಅವರ ಭಕ್ತಿಭಾವಗಳು ಮೊದಲಿಗಿಂತಲೂ ಇಮ್ಮಡಿಗೂಂಡಿವೆಯಂತಲ್ಲಾ. ಇದು ನಮ್ಮ ಪುರೋಹಿತಶಾಹಿಗಳಿಗೆ ಬಹು ಸಂತೋಷಕರ ಸಂಗತಿಯಾಗಿ ತಮ್ಮ ಅಜೆಂಡಾಗಳನ್ನೆಲ್ಲಾ ನಮ್ಮ ಬಹು ಸಂಸ್ಕೃತಿಯೊಳಕ್ಕೆ ತುರುಕುತ್ತ, ಮುಖ್ಯವಾಗಿ ಮಕ್ಕಳ ಮನಸ್ಸಿನ ಮೇಲೆ ಲಗ್ಗೆಯಿಟ್ಟಿದ್ದಾರಂತಲ್ಲಾ. ಈ ಪೈಕಿ ಗರ್ಭಗುಡಿಯಲ್ಲಿ ಕಸಹೊಡೆದು ಕ್ಲೀನ್ ಮಾಡಿ ಗಂಧದಕಡ್ಡಿ ಜೋಡಿಸಿ ಕರ್ಪೂರ ಹಚ್ಚಿ, ಹೂಗಳನ್ನ ವಿಂಗಡಿಸಿ ಕಟ್ಟಿ ಪ್ರಧಾನ ಅರ್ಚಕರು ಬರುವವರೆಗೆ ಕಾಯುತ್ತಿದ್ದಂತವನೊಬ್ಬ ಮಕ್ಕಳ ಶಿಕ್ಷಣ ಸಂಸ್ಥೆಯಲ್ಲಿ ಮಂಚೂಣಿಯಲ್ಲಿದ್ದಾನಂತಲ್ಲಾ, ಥೂತ್ತೇರಿ.

******

ನಮ್ಮ ಶಿಕ್ಷಣ ಸಂಸ್ಥೆಯೊಳಕ್ಕೆ ವಿಪ್ರೋತ್ತಮರು ಸೇರಿಕೂಂಡು ಮಾಡುತ್ತಿರುವ ಅನಾಹುತಕ್ಕೆ ಇಡೀ ಕರ್ನಾಟಕವೇ ಕೋಲಾಹಲಗೊಂಡಿರುವಾಗ ನಮ್ಮ ಮುಖ್ಯಮಂತ್ರಿ ಶಿಕ್ಷಣ ಇಲಾಖೆಯ ಪರಂಪರೆಯನ್ನ ಗ್ರಹಿಸಬೇಕಿತ್ತಲ್ಲಾ. ಅಲ್ಲಿ ಶಿಕ್ಷಣ ಸಚಿವರಾಗಿದ್ದ ಶಂಕರೇಗೌಡರ ಹೆಸರು ಚಿರಸ್ಥಾಯಿಯಾಗಿದೆ. ಗೋವಿಂದೇಗೌಡರ ಹೆಸರು ಅಜರಾಮರವಾಗಿದೆ. ಇನ್ನು ಕಳೆದ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಪ್ರಾಮಾಣಿಕತೆಯಲ್ಲಿ ಗೋವಿಂದೇಗೌಡರನ್ನ ಸರಿಗಟ್ಟಿದ್ದಲ್ಲದೆ, ಅವರ ಬಳಿಹೋದ ಶಿಕ್ಷಕರಿಗೆ ಅವರ ಸಬ್ಜೆಕ್ಟ್‌ನ ಬಗ್ಗೆ ಪ್ರಶ್ನೆ ಕೇಳಿ ತಬ್ಬಿಬ್ಬುಗೇಳಿಸುತ್ತಿದ್ದು ಈಗ ಇತಿಹಾಸ. ಆದರೆ ಈಗಿನ ಶಿಕ್ಷಣ ಸಚಿವರ ತಲೆ ತುಂಬಾ ಪುರೋಹಿತಶಾಹಿ ಪ್ರಶ್ನೆಗಳೇ ತುಂಬಿಕೊಂಡು ಅವನ್ನೆಲ್ಲಾ ಜಾರಿಮಾಡಲು ಹೊರಟಿದ್ದಾರಲ್ಲಾ. ಇದಕ್ಕೆಲ್ಲಾ ಅಂತವರಿಗೆ ಶಿಕ್ಷಣ ಖಾತೆ ಕೂಟ್ಟ ಮುಖ್ಯಮಂತ್ರಿಗಳೆ ಹೊಣೆಗಾರರಾಗಬೇಕಾಗುತ್ತದೆ. ಆದರೇನು ಅವರ ಎಡ ಮಂಡಿ ನೋವಿನ ಮುಂದೆ ಇನ್ಯಾವ ಸಮಸ್ಯೆಗಳೂ ಇಲ್ಲ. ಅದಕ್ಕಿಂತ ಮುಖ್ಯವಾಗಿ ತಿಪಟೂರು ಶಾಲಾಮೈದಾನದಲ್ಲಿ ಅವುಡುಗಚ್ಚಿ ಲಾಠಿ ಬೀಸುತ್ತಿದ್ದ ಆಸಾಮಿಗೆ ಶಿಕ್ಷಣ ಖಾತೆ ಕೂಟ್ಟವರು ಮುಖ್ಯಮಂತ್ರಿಗಳಲ್ಲ. ಕೇಶವಕೃಪದಿಂದ ಬಂದ ಪಟ್ಟಿಯನ್ನು ಜಾರಿಮಾಡಿದರಂತಲ್ಲಾ, ಥೂತ್ತೇರಿ…


ಇದನ್ನೂ ಓದಿ: ದಶಕದ ನಂತರ ಗೆದ್ದ ಅಗ್ರಹಾರದ ಜಟ್ಟಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...