Homeಅಂಕಣಗಳುಸನ್ಯಾಸಿಗಳೆಂದರೆ ನಿಮಗೇನು ಗೊತ್ತಯ್ಯಾ

ಸನ್ಯಾಸಿಗಳೆಂದರೆ ನಿಮಗೇನು ಗೊತ್ತಯ್ಯಾ

- Advertisement -
- Advertisement -

ಅಧಿಕಾರಕ್ಕೆ ಆಸೆಪಡುವ ವಿಷಯದಲ್ಲಿ ನಮ್ಮ ರಾಜಕಾರಣಿಗಳು ’ನಾನೇನು ಸನ್ಯಾಸಿಯಲ್ಲ’ ಎಂಬ ಜನಪ್ರಿಯ ಮಾತನ್ನು ಸಲೀಸಾಗಿ ಬಳಸಿ ತಮ್ಮ ಅಜ್ಞಾನ ಪ್ರದರ್ಶಿಸುತ್ತಲೇ ಬಂದಿದ್ದಾರಲ್ಲಾ. ಸದರಿ ಮಾತನ್ನು ಮಾಧ್ಯಮದ ಕೆಲ ಮಂದಮತಿಗಳು ಬಿತ್ತರಿಸುತ್ತಿರುವಾಗ ಅವರ ಕಣ್ಣು ತೆರೆಸುವುದು ನಮ್ಮ ಜವಾಬ್ದಾರಿ ಅಲ್ಲವೆ.

ಸನ್ಯಾಸಿಯೆಂದರೆ ಸರ್ವಸಂಗ ಪರಿತ್ಯಾಗಿ, ಸಂಸಾರಕ್ಕೆ ಹೆದರಿದವನು, ಮೈಗಳ್ಳ, ದುಡಿದು ಬದುಕಲಾರದವನು, ಇತರರಿಗೆ ಅನ್ನ ಇಕ್ಕದವನು. ಸಂಸಾರಕ್ಕೆ ಹೆದರಿ ಸನ್ಯಾಸಿಯಾದವನನ್ನು ಪಾಪ ಸಂಸಾರಿಗಳೇ ಸಾಕಬೇಕು. ಹಾಗೆಂದು ಈತ ಲೈಂಗಿಕ ತೃಷೆಯಿಂದ ಮುಕ್ತನಾದವನೆಂದು ಹೇಳಲು ಬರುವುದಿಲ್ಲ. ಅವನ ಖಾಸಗಿ ವಿಷಯ ಅವನಿಗೆ ಗೊತ್ತು. ನಮ್ಮ ಪುರಾಣಗಳಲ್ಲಿ ಋಷಿಮುನಿಗಳಿಗೆ ಪತ್ನಿಯರಿದ್ದರು. ಅವರು ಋಷಿಗಳ ಯಜ್ಞಯಾಗದ ಪರಿಕರಗಳನ್ನ ಒದಗಿಸುತ್ತಾ, ಮುನಿಗಳಿಗೆ ನೀರು ತರುತ್ತ, ಗೆಡ್ಡೆಗೆಣಸು ಬೇಯಿಸಿಕೂಡುತ್ತ ಇದ್ದರು. ಗರ್ಮಿ ಪದಾರ್ಥ ತಿಂದ ಸನ್ಯಾಸಿ ಅರ್ಧರಾತ್ರಿಯಲ್ಲಿ ಹಠಾತ್ತನೆ ಎದ್ದುಬಂದು ಎರಗಿದರೆ ಯಾವ ಆಕ್ಷೇಪವನ್ನೂ ವ್ಯಕ್ತಪಡಿಸದೆ ಅರ್ಪಿಸಿಕೊಂಡು ಸೇವೆ ಮಾಡುತ್ತಿದ್ದರಂತಲ್ಲಾ, ಥೂತ್ತೇರಿ.

*****

ಈ ಪುರಾಣದ ಸನ್ಯಾಸಿಗಳ ಕತೆಯ ಮುಂದುವರಿಕೆ ನೋಡುವುದಾದರೆ: ಪುರಾಣದವರು ಆತ್ಮವಂಚಕರಾಗಿರಲಿಲ್ಲ. ನಯವಂಚಕರೂ ಆಗಿರಲಿಲ್ಲ. ಗಂಟುಗಳ್ಳರಾಗಿರಲಿಲ್ಲ. ತಾವು ಕಟ್ಟಿಕೊಂಡ ಕುಟೀರ ತಮ್ಮ ನಂತರ ನಾಶವಾಗುವಂತೆ ಮಾಡಿ ಸರಳವಾಗಿ ಬದುಕುತ್ತಿದ್ದರು. ಇಂತ ಸನ್ಯಾಸಿಗಳಿಗೆ ಇಂದಿನ ಸನ್ಯಾಸಿಗಳನ್ನ ಹೋಲಿಸುವುದಾದರೆ ಇವರಿಗೆ ಪತ್ನಿಯರಿಲ್ಲ ನಿಜ. ಆದರೆ ಪ್ರೇಯಸಿಯರಿದ್ದಾರೆ. ಆಕಸ್ಮಾತ್ ಮಗುವಾದರೆ ಅದನ್ನ ಫಾರಿನ್ನಿಗೆ ಕಳಿಸುವ ಪ್ರಭಾವಿಗಳು ಇವರು. ಲೈಂಗಿಕ ಹಗರಣದಲ್ಲಿ ಸಿಕ್ಕಿಬಿದ್ದರೆ ಒತ್ತಾಯದ ಸಂಭೋಗವನ್ನ ಒಪ್ಪಿತ ಸಂಭೋಗವೆಂದು ಬದಲಾಯಿಸಿ ತೀರ್ಪು ಪಡೆಯಬಲ್ಲರು. ಇವರು ಹಚ್ಚಿಕೊಳ್ಳುವ ಸೆಂಟುಗಳು ಮತ್ತು ಬರಿಸುವಂತಿರುತ್ತದೆ. ಕೆಲವು ಸನ್ಯಾಸಿಗಳು ಫೇರ್ ಅಂಡ್ ಲವ್ಲಿ ಹಚ್ಚದೆ ಸಭೆಗಳಿಗೆ ಬರುವುದಿಲ್ಲ. ಇನ್ನ ಕೈಯ್ಯ ಉಂಗರಗಳು ಕೊರಳ ಚೈನು ನೋಡಿದರೆ ಹೋರಿಯ ಶೃಂಗಾರ ನೋಡಿದಂತಾಗುತ್ತದೆ. ಇನ್ನ ನಾನೇ ದೇವರೆಂದು ಹೇಳಿಕೊಂಡು ಕಾಯಿಲೆಯಿಂದ ನರಳುತ್ತಿದ್ದ ದೇವಮಾನವನೊಬ್ಬ ತನ್ನ ಖಾಸಗಿ ಕೋಣೆಯಲ್ಲಿ ಚಿನ್ನದ ಕಮೋಡ್ ಹೊಂದಿದ್ದ. ಆದರೇನು ಪಾಯಿಖಾನೆ ವಾಸನೆ ಬದಲಿಸಲಾಗಲಿಲ್ಲವಂತಲ್ಲಾ, ಥೂತ್ತೇರಿ.

*****

’ನಾನು ಸನ್ಯಾಸಿಯಲ್ಲ’ ಎಂದು ಹೇಳುವ ರಾಜಕಾರಣಿಗಳಾಗಲಿ, ಅವರ ಮಾತನ್ನು ಕೊಂಡಾಡುತ್ತ ಪ್ರಕಟಿಸುವ ಕೆಲ ಮಾಧ್ಯಮದ ಮಂದಮತಿಗಳಾಗಲು, ಇನ್ನು ಮುಂದೆ ಆ ಮಾತುಗಳನ್ನು ಬಳಸುವ ಮುನ್ನ ಯೋಚಿಸಬೇಕಾಗುತ್ತದಲ್ಲ. ಸನ್ಯಾಸಿ ಎಂದು ಹೇಳಿಕೊಂಡು ಗದ್ದುಗೆ ಏರಿದವರು ಮಠದ ಸಂವಿಧಾನದಂತೆ ನಿವೃತ್ತಿ ಪಡೆಯದೆ ಹಠದಿಂದ ಮುಂದುವರೆಯುತ್ತಾರೆ. ಮಠದ ಆಸ್ತಿಯನ್ನ ಟ್ರಸ್ಟು ಮಾಡಿ ತಾವೇ ಅಧ್ಯಕ್ಷರಾಗುತ್ತಾರೆ. ಇದನ್ನ ದಕ್ಕಿಸಿಕೊಳ್ಳಲು ಗೂಂಡಾ ಪಡೆ ನಿರ್ಮಿಸುತ್ತಾರೆ. ಇವರ ನಿರ್ವಹಣೆಗೆ ತಾವೇ ತಾತ್ವಿಕವಾಗಿ ವಿರೋಧಿಸಿದ್ದ ಮದ್ಯವನ್ನ ಸರಬರಾಜು ಮಾಡುವಂತೆ ಆಜ್ಞಾಪಿಸುತ್ತಾರೆ. ತಮ್ಮ ಕಾಲಾನಂತರ ಭವ್ಯ ಸಮಾಧಿ ನಿರ್ಮಾಣದ ಬಗ್ಗೆ ಗಂಭೀರವಾಗಿ ಯೋಚಿಸುತ್ತಾರೆ. ಕಂಡುಕೇಳರಿಯದ ಇಂತಹ ಸವಲತ್ತು ನೋಡಿದ ರಾಜಕಾರಣಿಗಳು ಈ ಹಾಳು ರಾಜಕಾರಣಕ್ಕಿಂತ ಸನ್ಯಾಸಿಯಾಗಿದ್ದರೆ ಬದುಕು ಬಂಗಾರವಾಗುತಿತ್ತು ಎಂದು ಯೋಚಿಸಿ, ರಾಜಕಾರಣ ಬಿಟ್ಟು ಸನ್ಯಾಸಿಯಾದ ಉದಾಹರಣೆಯೂ ನಮ್ಮ ಮುಂದಿದೆ. ಇನ್ನ ಮದುವೆಯಾಗಿ ಮಕ್ಕಳು ಪಡೆದು ಸಂಸಾರ ಸಾಕಲಾರದೆ ರುಷಿಕುಮಾರರಾದ ಉದಾಹರಣೆಯೂ ನಮ್ಮ ಕಣ್ಣ ಮುಂದಿದೆ. ಬದುಕಲು ಚಿಕನ್ ಶಾಪ್ ಕೂಡ ತೆರೆಯಬಲ್ಲೆ ಎಂದು ಕೋಳಿ ಕಟ್ ಮಾಡಿದ ಅಹಿಂಸಾವಾದಿ ಸನ್ಯಾಸಿಯು ಇಲ್ಲೇ ಬದುಕಿದ್ದಾನಂತಲ್ಲಾ, ಥೂತ್ತೇರಿ.

*****

ಈ ಜಾಗತೀಕರಣದ ಬಂಡವಾಳಶಾಹಿ ಹೂಡೆತಕ್ಕೆ ಸಿಕ್ಕಿ ಭಾರತ ಅಲ್ಲೋಲಕಲ್ಲೋಲವಾಗುತ್ತ ಅದರಲ್ಲಿ ಸಂಸಾರಿಗಳು ಸನ್ಯಾಸಿಗಳಾಗುತ್ತ ಹೂರಟಿದ್ದಾರಂತಲ್ಲಾ. ಅದಕ್ಕಿಂತ ಮುಖ್ಯವಾಗಿ ಸ್ಥಾಪಿತ ಮೌಲ್ಯಗಳು ಪತನಗೊಂಡು ಜಾತಿ ಗಡಿರೇಖೆಗಳು ಅಳಿಸಿಹೋಗುತ್ತ ದುಡ್ಡಿದ್ದವರದೊಂದು ಜಾತಿ ಇಲ್ಲದವರದೊಂದು ಜಾತಿಯಾಗಿ ಬೇರ್ಪಡುತ್ತಿರುವಾಗ ಸನ್ಯಾಸಿ ಎಂಬ ಪದ ಸಮೃದ್ಧ ಪದವಾಗಿ ಕಾಣುತ್ತಿದೆಯಲ್ಲಾ. ಈ ಸಮೃದ್ಧತೆಯ ಬದುಕಿನ ಎಲ್ಲ ಐಭೋಗಗಳು ತುಂಬಿಕೊಂಡು ಅದು ಜನಸಾಮಾನ್ಯರಿಗೂ ಅರಿವಾಗಿ ಅವರ ಭಕ್ತಿಭಾವಗಳು ಮೊದಲಿಗಿಂತಲೂ ಇಮ್ಮಡಿಗೂಂಡಿವೆಯಂತಲ್ಲಾ. ಇದು ನಮ್ಮ ಪುರೋಹಿತಶಾಹಿಗಳಿಗೆ ಬಹು ಸಂತೋಷಕರ ಸಂಗತಿಯಾಗಿ ತಮ್ಮ ಅಜೆಂಡಾಗಳನ್ನೆಲ್ಲಾ ನಮ್ಮ ಬಹು ಸಂಸ್ಕೃತಿಯೊಳಕ್ಕೆ ತುರುಕುತ್ತ, ಮುಖ್ಯವಾಗಿ ಮಕ್ಕಳ ಮನಸ್ಸಿನ ಮೇಲೆ ಲಗ್ಗೆಯಿಟ್ಟಿದ್ದಾರಂತಲ್ಲಾ. ಈ ಪೈಕಿ ಗರ್ಭಗುಡಿಯಲ್ಲಿ ಕಸಹೊಡೆದು ಕ್ಲೀನ್ ಮಾಡಿ ಗಂಧದಕಡ್ಡಿ ಜೋಡಿಸಿ ಕರ್ಪೂರ ಹಚ್ಚಿ, ಹೂಗಳನ್ನ ವಿಂಗಡಿಸಿ ಕಟ್ಟಿ ಪ್ರಧಾನ ಅರ್ಚಕರು ಬರುವವರೆಗೆ ಕಾಯುತ್ತಿದ್ದಂತವನೊಬ್ಬ ಮಕ್ಕಳ ಶಿಕ್ಷಣ ಸಂಸ್ಥೆಯಲ್ಲಿ ಮಂಚೂಣಿಯಲ್ಲಿದ್ದಾನಂತಲ್ಲಾ, ಥೂತ್ತೇರಿ.

******

ನಮ್ಮ ಶಿಕ್ಷಣ ಸಂಸ್ಥೆಯೊಳಕ್ಕೆ ವಿಪ್ರೋತ್ತಮರು ಸೇರಿಕೂಂಡು ಮಾಡುತ್ತಿರುವ ಅನಾಹುತಕ್ಕೆ ಇಡೀ ಕರ್ನಾಟಕವೇ ಕೋಲಾಹಲಗೊಂಡಿರುವಾಗ ನಮ್ಮ ಮುಖ್ಯಮಂತ್ರಿ ಶಿಕ್ಷಣ ಇಲಾಖೆಯ ಪರಂಪರೆಯನ್ನ ಗ್ರಹಿಸಬೇಕಿತ್ತಲ್ಲಾ. ಅಲ್ಲಿ ಶಿಕ್ಷಣ ಸಚಿವರಾಗಿದ್ದ ಶಂಕರೇಗೌಡರ ಹೆಸರು ಚಿರಸ್ಥಾಯಿಯಾಗಿದೆ. ಗೋವಿಂದೇಗೌಡರ ಹೆಸರು ಅಜರಾಮರವಾಗಿದೆ. ಇನ್ನು ಕಳೆದ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಪ್ರಾಮಾಣಿಕತೆಯಲ್ಲಿ ಗೋವಿಂದೇಗೌಡರನ್ನ ಸರಿಗಟ್ಟಿದ್ದಲ್ಲದೆ, ಅವರ ಬಳಿಹೋದ ಶಿಕ್ಷಕರಿಗೆ ಅವರ ಸಬ್ಜೆಕ್ಟ್‌ನ ಬಗ್ಗೆ ಪ್ರಶ್ನೆ ಕೇಳಿ ತಬ್ಬಿಬ್ಬುಗೇಳಿಸುತ್ತಿದ್ದು ಈಗ ಇತಿಹಾಸ. ಆದರೆ ಈಗಿನ ಶಿಕ್ಷಣ ಸಚಿವರ ತಲೆ ತುಂಬಾ ಪುರೋಹಿತಶಾಹಿ ಪ್ರಶ್ನೆಗಳೇ ತುಂಬಿಕೊಂಡು ಅವನ್ನೆಲ್ಲಾ ಜಾರಿಮಾಡಲು ಹೊರಟಿದ್ದಾರಲ್ಲಾ. ಇದಕ್ಕೆಲ್ಲಾ ಅಂತವರಿಗೆ ಶಿಕ್ಷಣ ಖಾತೆ ಕೂಟ್ಟ ಮುಖ್ಯಮಂತ್ರಿಗಳೆ ಹೊಣೆಗಾರರಾಗಬೇಕಾಗುತ್ತದೆ. ಆದರೇನು ಅವರ ಎಡ ಮಂಡಿ ನೋವಿನ ಮುಂದೆ ಇನ್ಯಾವ ಸಮಸ್ಯೆಗಳೂ ಇಲ್ಲ. ಅದಕ್ಕಿಂತ ಮುಖ್ಯವಾಗಿ ತಿಪಟೂರು ಶಾಲಾಮೈದಾನದಲ್ಲಿ ಅವುಡುಗಚ್ಚಿ ಲಾಠಿ ಬೀಸುತ್ತಿದ್ದ ಆಸಾಮಿಗೆ ಶಿಕ್ಷಣ ಖಾತೆ ಕೂಟ್ಟವರು ಮುಖ್ಯಮಂತ್ರಿಗಳಲ್ಲ. ಕೇಶವಕೃಪದಿಂದ ಬಂದ ಪಟ್ಟಿಯನ್ನು ಜಾರಿಮಾಡಿದರಂತಲ್ಲಾ, ಥೂತ್ತೇರಿ…


ಇದನ್ನೂ ಓದಿ: ದಶಕದ ನಂತರ ಗೆದ್ದ ಅಗ್ರಹಾರದ ಜಟ್ಟಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....