HomeಮುಖಪುಟNPR ಕುರಿತು ಗೃಹ ಸಚಿವ ಅಮಿತ್ ಷಾ ಹೇಳಿಕೆಗೆ ಖ್ಯಾತ ಚಿಂತಕ ಶಿವಸುಂದರ್ ಏನು ಹೇಳುತ್ತಾರೆ??

NPR ಕುರಿತು ಗೃಹ ಸಚಿವ ಅಮಿತ್ ಷಾ ಹೇಳಿಕೆಗೆ ಖ್ಯಾತ ಚಿಂತಕ ಶಿವಸುಂದರ್ ಏನು ಹೇಳುತ್ತಾರೆ??

"ಜನರು ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರಿಸಬೇಕಿಲ್ಲ" ಎಂಬ ಗೃಹಮಂತ್ರಿಗಳ ಹೇಳಿಕೆ ಹೇಗಾದರೂ ಮಾಡಿ ಜನರನ್ನು NPRಗೆ ಒಪ್ಪಿಸಿ "ಪೌರತ್ವ ಪರಿಶೀಲನೆಯ" ಉರುಳಿಗೆ ತಾವೇ ಸಿಕ್ಕಿಹಾಕಿಕೊಳ್ಳುವಂತೆ ಮಾಡುವ ದುರುದ್ದೇಶವನ್ನು ಹೊಂದಿದೆ..

- Advertisement -
- Advertisement -

ನಿನ್ನೆ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್‌ ಶಾರವರು NPRಗೆ ದಾಖಲೆ ತೋರಿಸಬೇಕಿಲ್ಲ. ನಿಮಗೆ ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರಿಸಬೇಕಿಲ್ಲ. ನಿಮ್ಮನ್ನು ಡೌಟ್‌ಫುಲ್‌ ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಈ ಹೇಳಿಕೆಗೆ ಹಲವು ವಯಲಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಖ್ಯಾತ ಚಿಂತಕ ಮತ್ತು ಹೋರಾಟಗಾರ ಶಿವಸುಂದರ್‌ ಪ್ರತಿಕ್ರಿಯೆ ನೀಡಿದ್ದಾರೆ. ಅದರ ಪೂರ್ಣಪಾಠ ಕೆಳಗಿನಂತಿದೆ.

ಪೌರತ್ವ ನೊಂದಣಿ ಹಾಗು ಎನ್ ಪಿ ಆರ್ ಬಗ್ಗೆ ಗೃಹಮಂತ್ರಿ ಅಮಿತ್ ಷಾ ರಾಜ್ಯ ಸಭೆಯಲ್ಲಿ ಗಳಹಿದ ಸುಳ್ಳುಗಳ ಕುರಿತು :

NPR-NRC- CAAಗಳ ವಿರುದ್ಧ ದೇಶಾದ್ಯಂತ ಜನರು ರಾಜಿಯಿಲ್ಲದ ಹೋರಾಟ ನಡೆಸುತ್ತಿರುವುದರಿದ ಕಂಗೆಟ್ಟಿರುವ ಮೊ-ಷಾ ಸರ್ಕಾರ ಸುಳ್ಳುಗಳನ್ನು ಹೇಳುವ ಮೂಲಕ ಹೋರಾಟವನ್ನು ದಾರಿ ತಪ್ಪಿಸುವ ಹುನ್ನಾರ ನಡೆಸಿದೆ. ನಿನ್ನೆ ರಾಜ್ಯಸಭೆಯಲ್ಲಿ ಗೃಹಮಂತ್ರಿ ಅಮಿತ್ ಶಾ ನೀಡಿರುವ ಹೇಳಿಕೆಗಳು ಅದಕ್ಕೆ ತಾಜಾ ಉದಾಹರಣೆ. ಆದ್ದರಿಂದ ದೇಶದ ಜನತೆ ಗೃಹಮಂತ್ರಿಯವರ ಹೇಳಿಕೆಯಲ್ಲಿರುವ ಈ ಕೆಳಗಿನ ಸುಳ್ಳುಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

ಸುಳ್ಳು-1- NPR ಮಾಹಿತಿ ಸಂಗ್ರಹಣೆ ಹಂತದಲ್ಲಿ ಜನರು ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರ ನೀಡಬೇಕಿಲ್ಲ.

ವಾಸ್ತವ : NPR ಮಾಡುತ್ತಿರುವುದೇ ದೇಶದ ಎಲ್ಲಾ ಜನರ ಪೌರತ್ವವನ್ನು ಪರೀಕ್ಷಿಸಲು. ಅದ್ಕಕೆಂದೇ ಪ್ರತಿಯೊಬ್ಬ ಪೌರನ ತಂದೆ ಮತ್ತು ತಾಯಿಯರ ಹುಟ್ಟಿದ ದಿನ ಹಾಗು ಸ್ಥಳದ ಮಾಹಿತಿಯನ್ನು ನಿರ್ದಿಷ್ಟವಾಗಿ ಕೇಳಲಾಗುತ್ತದೆ. ಅದಕ್ಕೆ ಕೊಟ್ಟ ಉತ್ತರವನ್ನು ಆಧರಿಸಿಯೇ ದೇಶದ ಜನರ ಪೌರತ್ವವು ಪರೀಕ್ಷೆಗೆ ಒಳಪಡುತ್ತದೆ.

NPR ಮತ್ತು NRC ಗಳ ಹುಟ್ಟಿಗೆ ಕಾರಣವಾದ Citizenship (Registration Of Citizens and Issue Of National Identity Cards) Rules 2003ದ ಉಪನಿಯಮ 4 (1)ರ ಪ್ರಕಾರ – ಕೇಂದ್ರ ಸರ್ಕಾರವು ಒಂದು ರಾಷ್ಟ್ರೀಯ ಪೌರತ್ವ ನೊಂದಣಿ ಪಟ್ಟಿಯನ್ನು ತಯಾರಿಸುವ ಸಲುವಾಗಿ ದೇಶದಲ್ಲಿ ವಾಸಿಸುತ್ತಿರುವ ಎಲ್ಲಾ ವ್ಯಕ್ತಿಗಳ ಮತ್ತು ಕುಟುಂಬಗಳ ಪೌರತ್ವ ವಿವರಗಳನ್ನೂ ಒಳಗೊಂಡಂತೆ ಅಗತ್ಯವಿರುವ ಎಲ್ಲಾ ವಿವರಗಳನ್ನು ದೇಶಾದ್ಯಂತ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸಬಹುದು .

ಉಪನಿಯಮ 4 (3) ರ ಪ್ರಕಾರ – ಸ್ಥಳೀಯ ಮಟ್ಟದ ರಾಷ್ಟ್ರೀಯ ನಾಗರಿಕರ ಪಟ್ಟಿಯನ್ನು ತಯಾರಿಸುವ ಸಲುವಾಗಿ NPR ನಲ್ಲಿ ಸಂಗ್ರಹಿಸಲಾದ ವ್ಯಕ್ತಿಗಳ ಮತ್ತು ಕುಟುಂಬಗಳ ವಿವರಗಳನ್ನು ಸ್ಥಳೀಯ ನಾಗರಿಕ ನೊಂದಣಿ ರಿಜಿಸ್ಟ್ರಾರ್ (ಅಂದರೆ ಸ್ಥಳೀಯ ತಹಸೀಲ್ದಾರರು) VERIFY AND SCRUTINIZE ಅಂದರೆ ಪರೀಕ್ಷಿಸಿ ಪರಿಶೀಲಿಸುತ್ತಾರೆ.

ಉಪನಿಯಮ 4 (4) ರ ಪ್ರಕಾರ – ಈ ಪರಿಶೀಲನಾ ಹಂತದಲ್ಲಿ ಯಾವುದಾದರೂ ವ್ಯಕ್ತಿಯ ಪೌರತ್ವ ಸಂಬಂಧಿ ವಿವರಗಳು ಸಂಶಯಾಸ್ಪದವಾಗಿ ಕಂಡುಬಂದಲ್ಲಿ ಮತ್ತಷ್ಟು ಪರಿಶೀಲನೆ ಮಾಡಲು NPR ಪಟ್ಟಿಯಲ್ಲಿರುವ ಆ ವ್ಯಕ್ತಿಯ ಹೆಸರಿನ ಮುಂದೆ ಸ್ಥಳೀಯ ರಿಜಿಸ್ಟ್ರಾರ್ ಅವರು ಸೂಕ್ತ ಟಿಪ್ಪಣಿಗಳನ್ನು ದಾಖಲಿಸುತ್ತಾರೆ ಮತ್ತು ಪರಿಶೀಲನೆ ಪೂರ್ಣಗೊಂಡ ನಂತರ ಅನುಮಾನಾಸ್ಪದವಾದ ಪೌರತ್ವವೆಂದು ಕಂಡುಬಂದಲ್ಲಿ ಸೂಕ್ತವಾದ ನಮೂನೆಯಲ್ಲಿ ಆ ವ್ಯಕ್ತಿಗಳಿಗೆ ಅಥವಾ ಕುಟುಂಬಗಳಿಗೆ ತಿಳಿಸುತ್ತಾರೆ.

ಉಪನಿಯಮ 7 ((2) ರ ಪ್ರಕಾರ- ತನ್ನ ಕುಟುಂಬಕ್ಕೆ ಸಂಬಂಧಪಟ್ಟ NPR ಪ್ರಶ್ನಾವಳಿಗಳಿಗೆ ಸರಿಯಾದ ಉತ್ತರ ಕೊಡುವುದು ಕುಟುಂಬದ ಮುಖ್ಯಸ್ಥನ ಜವಾಬ್ದಾರಿಯಾಗಿದೆ.

ಇದು ಹಾಲಿ ಇರುವ ನಿಯಮಾವಳಿಗಳು. ಇದಕ್ಕೆ ಈವರೆಗೆ ಸರ್ಕಾರ ಯಾವುದೇ ತಿದ್ದುಪಡಿ ಮಾಡಿಲ್ಲ.

ಹಾಗೂ NPR ಪ್ರಕ್ರಿಯೆಯಲ್ಲಿ ಉತ್ತರ ಇಲ್ಲದಿರುವುದು ಮತ್ತು ಕೊಡದಿರುವುದು ನಮ್ಮ ಪೌರತ್ವವನ್ನೇ ಪ್ರಶ್ನೆಗೊಳಪಡಿಸುತ್ತದೆ.

ಆದ್ದರಿಂದ “ಜನರು ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರಿಸಬೇಕಿಲ್ಲ” ಎಂಬ ಗೃಹಮಂತ್ರಿಗಳ ಹೇಳಿಕೆ ಹೇಗಾದರೂ ಮಾಡಿ ಜನರನ್ನು NPRಗೆ ಒಪ್ಪಿಸಿ “ಪೌರತ್ವ ಪರಿಶೀಲನೆಯ” ಉರುಳಿಗೆ ತಾವೇ ಸಿಕ್ಕಿಹಾಕಿಕೊಳ್ಳುವಂತೆ ಮಾಡುವ ದುರುದ್ದೇಶವನ್ನು ಹೊಂದಿದೆ.

ಎಲ್ಲಿಯತನಕ Citizenship (Registration Of Citizens and Issue Of National Identity Cards) Rules 2003 ನಿಮಯದ ಮೇಲಿನ ಉಪನಿಯಮಾವಳಿಗಳನ್ನು ರದ್ದುಮಾಡುವುದಿಲ್ಲವೋ / ತಿದ್ದುಪಡಿ ಮಾಡುವುದಿಲ್ಲವೋ ಅಲ್ಲಿಯವರೆಗೆ ಗೃಹಮಂತ್ರಿಯವರ ಹೇಳಿಕೆ ಕೇವಲ ದಾರಿ ತಪ್ಪಿಸುವ ಹೇಳಿಕೆಯಷ್ಟೇ ಆಗಿರುತ್ತದೆ.

ಹಾಗೊಂದು ವೇಳೆ ಈ ನಿಯಮಗಳನ್ನು ರದ್ದು ಮಾಡಿಬಿಟ್ಟರೆ ಅಥವಾ ತಿದ್ದುಪಡಿಯಾದರೆ ನಿರ್ದಿಷ್ಟ ಜನಸಮುದಾಯಗಳ ಪೌರತ್ವ ಪರಿಶೀಲನೆ ಮಾಡಬೇಕೆಂಬ ಬಿಜೆಪಿ ಸರ್ಕಾರದ ಉದ್ದೇಶವೇ ಈಡೇರುವುದಿಲ್ಲ.

ಆದ್ದರಿಂದಲೇ ಯಾವ ತಿದ್ದುಪಡಿಯನ್ನು ಮಾಡದೆ ಕೇವಲ ಹೇಳಿಕೆಯನ್ನು ನೀಡುತ್ತಾ ಜನರನ್ನು NPR ಗೆ ಒಪ್ಪಿಸುವ ಹಾಗು NPR-NRC- CAA ಗಳ ವಿರುದ್ಧದ ಹೋರಾಟವನ್ನು ಹಾದಿತಪ್ಪಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ.

ಆದ್ದರಿಂದ ಎಲ್ಲಿಯ ತನಕ ಸರ್ಕಾರವು ದೇಶದ ಜನರ ಪೌರತ್ವ ವನ್ನೇ ಅನುಮಾನಿಸುವ ಹಾಗು ಇಡೀ ಜನಕೋಟಿಯನ್ನು ಪೌರತ್ವ ಸಾಬೀತು ಪಡಿಸುವ ಅಸಾಧ್ಯ ಪರೀಕ್ಷೆಗೆ ಒಡ್ಡುವ

1. ಭಾರತದ ಪೌರತ್ವ ಕಾಯಿದೆ-1955ಕ್ಕೆ ವಾಜಪೇಯಿ ಸರ್ಕಾರ ತಂದ 14-A ತಿದ್ದುಪಡಿಯನ್ನು ಹಾಗು
2. Citizenship (Registration Of Citizens and Issue Of National Identity Cards) Rules 2003 ಗಳನ್ನುರದ್ದುಗೊಳಿಸುವುದಿಲ್ಲವೋ ಅಲ್ಲಿಯತನಕ ಜನರು ಹಾಗು ವಿರೋಧ ಪಕ್ಷಗಳು ಸರ್ಕಾರದ ಯಾವುದೇ ದುರುದ್ದೇಶದ ಮಾತುಗಳು ಮತ್ತು ಹೇಳಿಕೆಗಳಿಗೆ ಬಲಿಯಾಗಬಾರದು.

ಸುಳ್ಳು-2- NPR ಹಂತದಲ್ಲಿ ಯಾವುದೇ ದಾಖಲೆಗಳನ್ನು ಕೇಳುವುದಿಲ್ಲ.

ವಾಸ್ತವ- ಇದು ಅರ್ಧ ಸತ್ಯ . ಕೇಂದ್ರ ಸರ್ಕಾರ ಈ ವರ್ಷದ ಜನವರಿಯಲ್ಲಿ ಬಿಡುಗಡೆ ಮಾಡಿರುವ NPR Training Manual ಪ್ರಕಾರ NPR ಮಾಹಿತಿ ಸಂಗ್ರಹ ಮಾಡಲು ಬರುವ ಅಧಿಕಾರಿಗಳಿಗೆ ಆಧಾರ್, ಡ್ರೈವಿಂಗ್ ಲೈಸೆನ್ಸ್ , ಮೊಬೈಲ್ ನಂಬರ್, ವೋಟರ್ ಕಾರ್ಡ್ ಮತ್ತು ಪಾಸ್ ಪೋರ್ಟ್ ದಾಖಲೆಗಳನ್ನು ತೋರಿಸಬೇಕು.
– ಈ ನಿಯಮವನ್ನು ಸರ್ಕಾರ ಈ ಕ್ಷಣದವರೆಗೂ ಹಿಂತೆಗೆದುಕೊಂಡಿಲ್ಲ.

ಸುಳ್ಳು – 3- CAA ಪೌರತ್ವ ಕೊಡುವ ಕಾಯಿದೆಯೇ ಹೊರತು ಪೌರತ್ವವನ್ನು ಕಿತ್ತುಕೊಳ್ಳುವ ಕಾಯಿದೆಯಲ್ಲ

ವಾಸ್ತವ: ಇದು ಸುಳ್ಳು ಮತ್ತು ಅರ್ಧಸತ್ಯದಿಂದ ಕೂಡಿರುವ ಹೇಳಿಕೆಯಾಗಿದೆ.
CAA ಕಾಯಿದೆ ಬಾಂಗ್ಲಾದೇಶ, ಪಾಕಿಸ್ತಾನ ಹಾಗು ಅಫ್ಘಾಅನಿಸ್ತಾನ ಗಳಿಂದ ಧಾರ್ಮಿಕ ದೌರ್ಜನ್ಯಕ್ಕೆ ತುತ್ತಾಗಿ ಅಥವಾ ದೌರ್ಜನ್ಯಗಳ ಭಯದಿಂದ ಭಾರತಕ್ಕೆ ಅಕ್ರಮವಾಗಿ ವಲಸೆ ಬರುವ ಹಿಂದು,ಸಿಖ್ಖ, ಜೈನ, ಬೌದ್ಧ, ಕ್ರಿಶ್ಚಿಯನ್ ಮತ್ತು ಪಾರ್ಸಿಗಳಿಗೆ ಆಶ್ರಯ ಮತ್ತು ಪೌರತ್ವವನ್ನು ಕೊಡುವ ಕಾಯಿದೆಯಾಗಿದೆ.

ಅಷ್ಟರಮಟ್ಟಿಗೆ ಅದು ಪೌರತ್ವವನ್ನು ಕೊಡುವ ಕಾಯಿದೆ. ಆದರೆ ಅದೇ ದೇಶಗಳಲ್ಲಿ ಅಹ್ಮದೀಯರು, ಹಜಾರಗಳು ಹಾಗು ಶಿಯಾಗಳು ಸಹ ಧಾರ್ಮಿಕ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾರೆಂದು ಮೋದಿ ಸರ್ಕಾರವೇ 2018ರ ಸೆಪ್ಟೆಂಬರ್ ನಲ್ಲಿ ವಿಶ್ವಸಂಸ್ಥೆಗೆ ದೂರಿತ್ತಿದೆ. ಆದರೆ CAA ಕಾಯಿದೆ ಅದೇ ದೇಶಗಳಿದ ಅದೇ ಬಗೆಯ ಧಾರ್ಮಿಕ ದೌರ್ಜನ್ಯಗಳಿಗೆ ತುತ್ತಾಗಿ ವಲಸೆ ಬರುವ ಈ ಸಮುದಾಯಗಳಿಗೆ ಬಾಗಿಲನ್ನು ಮುಚ್ಚುತ್ತದೆ.

ಆ ಅರ್ಥದಲ್ಲಿ CAA ಕಾಯಿದೆ ಉಳಿದ ಧರ್ಮಿಯರಿಗೆ ಪೌರತ್ವವನ್ನು ನಿರಾಕರಿಸುವ ಕಾಯಿದೆಯೇ ಆಗಿದೆ.

ಅಲ್ಲದೆ CAA ಕಾಯಿದೆಯ ನಿಮಿತ್ತವಿಲ್ಲದೆ ಈವರೆಗೆ ಯಾವುದೇ ದೇಶದಿಂದ ಯಾವುದೇ ಬಗೆಯ ದೌರ್ಜನ್ಯಗಳಿಗೆ ತುತ್ತಾಗಿ ಆಶ್ರಯ ಕೋರಿ ಬರುತ್ತಿದ್ದವರಿಗೆ ಭಾರತ ಆಶ್ರಯ ಕೊಡುವಂತಹ ಮತ್ತು ಅವರು ಕೋರಿದಲ್ಲಿ 7-11 ವರ್ಶಗಳ ನಂತರ ಪೌರತ್ವ ಕೊಡುವಂತ ಅವಕಾಶ 1955ರಲ್ಲಿ ರಚಿಸಲಾದ ಕಾಯಿದೆಯಲ್ಲೇ ಅಂತರ್ಗತವಾಗಿದೆ.

ಅಲ್ಲದೆ, CAA ಮೂಲಕ NRC ಪ್ರಕ್ರಿಯೆಯಲ್ಲಿ ದಾಖಲೆಗಳನ್ನು ತೋರಿಸಲಾಗದೆ ಅನುಮಾನಾಸ್ಪದರೆಂದು ಘೋಷಿತರಾಗುವ ಹಿಂದುಗಳಿಗೆ ಪೌರತ್ವ ಕೊಡಲಾಗುವುದೆಂಬ ಸರ್ಕಾರದ ಮತ್ತು ಬಿಜೆಪಿಯ ಗುಪ್ತ ಪ್ರಚಾರವು ಸಹ ಹಸಿಸುಳ್ಳಿನದಾಗಿದೆ.

ಏಕೆಂದರೆ CAA ಮೂಲಕ ಪೌರತ್ವ ಪಡೆಯಲು NRC ಯಿಂದ ಹೊರಬೀಳುವ ಭಾರತೀಯ ಹಿಂದುಗಳು ಮೊದಲು ತಾವು ಬಾಂಗ್ಲಾದೇಶೀಯರೊ ಅಥವಾ ಪಾಕಿಸ್ತಾನಿಯರೋ ಎಂದು ಸಾಬೀತು ಮಾಡಿಕೊಳ್ಳಬೇಕಾಗುತ್ತದೆ.

ಏಕೆಂದರೆ CAA ಸೌಲಭ್ಯ ಸಿಗುವುದು ಬಾಂಗ್ಲಾದೇಶ ಅಥವಾ ಪಾಕಿಸ್ತಾನಗಳಿಂದ ವಲಸೆ ಬಂದ ಹಿಂದುಗಳಿಗೆ ಹೊರತು ದಾಖಲೆಗಳಿಲ್ಲವೆಂಬ ಕಾರಣಕ್ಕೆ ಪೌರತ್ವ ಕಳೆದುಕೊಳ್ಳುವ ಭಾರತೀಯ ಹಿಂದುಗಳಿಗಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...